Homeಮುಖಪುಟಮಹಿಷಾಸುರ ಐತಿಹಾಸಿಕ ವ್ಯಕ್ತಿಯೇ ಹೊರತು ಪುರಾಣವಲ್ಲ: ಡಾ.ಚಮರಂ

ಮಹಿಷಾಸುರ ಐತಿಹಾಸಿಕ ವ್ಯಕ್ತಿಯೇ ಹೊರತು ಪುರಾಣವಲ್ಲ: ಡಾ.ಚಮರಂ

ಮಹಿಷಾಸುರನ ಲಾಂಛನ ಎಮ್ಮೆಯಾಗಿರುವುದನ್ನು ಗಮನಿಸಬೇಕು. ಕೈಯಲ್ಲಿ ನಾಗರ ಹಾವು ಹಿಡಿದಿರುವುದು ಮಹಿಷನು ದ್ರಾವಿಡ ಪರಂಪರೆಯ ನಾಗಕುಲಕ್ಕೆ ಸೇರಿದವನೆಂಬುದಕ್ಕೆ ಸಾಕ್ಷಿಯಾಗಿದೆ.

- Advertisement -
- Advertisement -

ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಮತ್ತು ಕಳೆದ ಎಂಟು ವರ್ಷಗಳಿಂದಲೂ ನಡೆದುಕೊಂಡು ಬರುತ್ತಿರುವ ಮಹಿಷ ದಸರ ಕುರಿತು ಮನುವಾದಿಗಳಿಗಿಂತ ಬಹುಜನರೇ ಹೆಚ್ಚು ಆತಂಕಕ್ಕೊಳಗಾಗಿರುವಂತೆ ಕಂಡುಬಂದಿದೆ. ನಮ್ಮ ಅನೇಕ ಹೋರಾಟಗಾರ ಸ್ನೇಹಿತರು ಮತ್ತು ಬುದ್ದಿಜೀವಿ ಬಳಗ ಇದೊಂದು ಪುರಾಣದ ಕತೆ, ನಮ್ಮ ಜನರನ್ನು ದಿಕ್ಕುತಪ್ಪಿಸಲು ಕೆಲವರು ಮಹಿಷನನ್ನು ಐತಿಹಾಸಿಕ ಪುರುಷ ಎಂದು ನಂಬಿಸುತ್ತಿದ್ದಾರೆ. ನಾವು ಬೌದ್ದರಾದರೆ ಸಾಕು. ಅದು ಬಿಟ್ಟು ಈ ಮಹಿಷನ ಕತೆ ಕಟ್ಟಿಕೊಂಡು ಏನಾಗಬೇಕಿದೆ? ಎಂದು ಜಾಲತಾಣದಲ್ಲಿ ವಾದಿಸುತ್ತಿದ್ದಾರೆ. ದಯಮಾಡಿ ಯಾರೂ ಗೊಂದಲಕ್ಕೊಳಗಾಗಬೇಡಿ. ಮಹಿಷಾಸುರ ಖಂಡಿತವಾಗಿ ಐತಿಹಾಸಿಕ ವ್ಯಕ್ತಿಯೇ ಹೊರತು ಪುರಾಣವಲ್ಲ.

ಮಹಿಷನಾಡು, ಮಹಿಷೂರು ನಂತರ ಮೈಸೂರು ಆಗಿದೆ. ಮೈಸೂರಲ್ಲಿ ಮಹಿಷಾಸುರನ ಹಲವು ಪ್ರತಿಮೆಗಳಿವೆ. ಈಗಿನ ಚಾಮುಂಡಿ ಬೆಟ್ಟ ಹಿಂದೆ ಮಹಿಷಗಿರಿ ಎಂದು ಪ್ರಚಲಿತದಲ್ಲಿತ್ತು ಅದನ್ನು ಮಹಾಬಲ ಬೆಟ್ಟ ಎಂತಲೂ ಕರೆದಿದ್ದಾರೆ.

ಮಹಿಷ ಎಂದರೆ ಎಮ್ಮೆ. ಮೈಸೂರು ಪ್ರಾಂತ್ಯದಲ್ಲಿ ಎಲ್ಲಾ ತರದ ಕೃಷಿ ಚಟುವಟಿಕೆಗಳಿಗೂ ಎಮ್ಮೆಯನ್ನೇ ಬಳಸುತ್ತಿದ್ದರು… ಎಮ್ಮೆ ಈ ಜನರ ಹೆಮ್ಮೆ. ದನಗಳು ಆರ್ಯರ ಜಾನುವಾರುಗಳು.
ಆರ್ಯರು ಎಮ್ಮೆಗಳನ್ನು ಕೀಳು ಮಾಡಿ ತಮ್ಮ ದನಗಳನ್ನು ಶ್ರೇಷ್ಟಗೊಳಿಸಿದರು.

ಮಹಿಷ ಮಂಡಲ ಕೇರಳದ ವೈನಾಡು, ತಮಿಳುನಾಡಿನ ನೀಲಗಿರಿ ಪ್ರಾಂತ್ಯವನ್ನು ಒಳಗೊಂಡಿತ್ತು. ನೀಲಗಿರಿಯಲ್ಲಿ ಇಂದಿಗೂ ವಾಸವಾಗಿರುವ ತೋಡ ಎಂಬ ಗಿರಿಜನ ಮಹಿಷನ ವಂಶಸಂಸ್ಥರು ಎನ್ನಲಾಗಿದೆ. ಅವರು ಈಗಲೂ ಮಹಿಷನನ್ನು ಆರಾಧಿಸುತ್ತಾರೆ.
ನೀಲಗಿರಿ, ವೈನಾಡ್ ಜಿಲ್ಲೆಗಳಲ್ಲಿ ಇಂದಿಗೂ ಎಮ್ಮೆಗಳಿಂದಲೇ ಉಳುಮೆ ಮಾಡುತ್ತಾರೆ.

ಮಹಿಷಾಸುರನ ಲಾಂಛನ ಎಮ್ಮೆಯಾಗಿರುವುದನ್ನು ಗಮನಿಸಬೇಕು. ಕೈಯಲ್ಲಿ ನಾಗರ ಹಾವು ಹಿಡಿದಿರುವುದು ಮಹಿಷನು ದ್ರಾವಿಡ ಪರಂಪರೆಯ ನಾಗಕುಲಕ್ಕೆ ಸೇರಿದವನೆಂಬುದಕ್ಕೆ ಸಾಕ್ಷಿಯಾಗಿದೆ.

ಮಹಿಷ ಮಂಡಲವು ಮೈಸೂರು, ನೀಲಗಿರಿ, ವೈನಾಡು ಇಷ್ಟು ಭೂಪ್ರದೇಶವನ್ನು ಹೊಂದಿತ್ತು. ಇದನ್ನು “ಎರುಮೈನಾಡು” ಎಂದು ಕರೆದಿರುವುದು ಅನೇಕ ಇತಿಹಾಸದ ಸಂಶೋಧನೆಗಳಿಂದ ದೃಢಪಟ್ಟಿದೆ ಮತ್ತು ದಾಖಲಾಗಿದೆ. “ಎರುಮೈ” ಎಂದರೆ ಎಮ್ಮೆ ಎಂದರ್ಥ.

ಆದ್ದರಿಂದ ಮಹಿಷನ ಕುರಿತು ಯಾವುದೇ ಕೀಳರಿಮೆ, ಗೊಂದಲಗಳನ್ನು ನಮ್ಮ ಜನರು ಇಟ್ಟುಕೊಳ್ಳುವ ಅಗತ್ಯವಿಲ್ಲ. ಮಹಿಷ ನಿಶ್ಚಿತವಾಗಿ ದ್ರಾವಿಡ ದೊರೆ, ನಾಗವಂಶದ ರಾಜ ಮತ್ತು ಬೌದ್ದಾನುಯಾಯಿಯಾಗಿದ್ದ ಎಂಬುದಕ್ಕೆ ಅನೇಕ ದಾಖಲೆಗಳು ಲಭ್ಯವಿವೆ.

ಇತ್ತೀಚಗೆ ಗುಲ್ಬರ್ಗದ ಬಳಿ ನಡೆಸಿದ ಐತಿಹಾಸಿಕ ಉತ್ಖನನದಲ್ಲಿ ಮಹಿಷ ನಾಡಿನ ತೋಡರು ಬೌದ್ದವಿಹಾರಗಳಿಗೆ ಹಲವು ಕೊಡುಗೆಗಳನ್ನು ಕೊಟ್ಟಿರುವ ಬೌದ್ಧಶಾಸನಗಳು ದೊರೆತಿವೆ. ಈ ಕುರಿತು ಕಳೆದ ಭಾನುವಾರದ (೩.೧೦.೨೧) ಪ್ರಜಾವಾಣಿಯ ವಾರದ ಪುರವಣಿಯಲ್ಲಿ ಇತಿಹಾಸ ಸಂಶೋಧಕ ಷ.ಶಟರ್ ಅವರು ಬರೆದಿರುವ ಲೇಖನ ಹೆಚ್ಚು ಬೆಳಕು ಚಲ್ಲಿದೆ.

ಹಿಂದೆ ನಮ್ಮ ಸಮಾಜ ಪರಿವರ್ತನ ಪತ್ರಿಕೆಯಲ್ಲಿ ಸಹ ಈ ಕುರಿತು ಅನೇಕ ಲೇಖಕರು ಸರಣಿ ಬರಹಗಳನ್ನು ಬರೆದಿದ್ದಾರೆ. ಮೈಸೂರಿನ ನಮ್ಮ ಲೇಖಕ ಸ್ನೇಹಿತರಾದ ಸಿದ್ದಸ್ವಾಮಿಯವರು “ಮಹಿಷ ಮಂಡಲ” ಎಂಬ ತಮ್ಮ ಸಂಶೋಧಿತ ಕೃತಿಯಲ್ಲಿ ಐತಿಹಾಸಿಕ ವಿಚಾರಗಳೊಡನೆ ವರ್ತಮಾನದ ದಾಖಲೆಗಳನ್ನಿಟ್ಟು ಚರ್ಚಿಸಿದ್ದಾರೆ.

ಈ ಎಲ್ಲಾ ಹಿನ್ನೆಲೆಯಲ್ಲಿಯೇ ನಾವಿಂದು ಎಲ್ಲರೂ ಸೇರಿ ಮಹಿಷ ದಸರ ಆಚರಿಸಿಕೊಂಡು ಚಾರಿತ್ರಿಕ ಅನ್ಯಾಯವನ್ನು ಎತ್ತಿ ಹಿಡಿತುತ್ತಾ ನಮ್ಮ ಅಸ್ಮಿತೆಯನ್ನು ಉಳಿಸಲು ಕಾರ್ಯಕ್ರಮ ರೂಪಿಸಿಕೊಂಡು ಬರುತ್ತಿದ್ದೇವೆ. ಇದರ ಸತ್ಯವು ಗೊತ್ತಿದ್ದೇ ಮನುವಾದಿಗಳು ಬೆಚ್ಚಿದ್ದಾರೆ. ಅವರು ಬೆಚ್ಚಿದ್ದಾರೆ ಎಂದರೆ ವಿಷಯವು ಸ್ಪಷ್ಟವಿದೆ ಎಂದರ್ಥ. ಅವರು ಅದನ್ನು ತಮ್ಮ ಅಧಿಕಾರ ಬಳಸಿ ತಡೆಯಲು ಯತ್ನಿಸುತ್ತಲೇ ಇದ್ದಾರೆ ಎಂದರೆ ಅದು ಸ್ಪಷ್ಟವಾಗಿ ನಮ್ಮ ಸ್ವಾಭೀಮಾನದ ಇತಿಹಾಸ ಎಂಬುದು ಖಚಿತವಾಗುತ್ತದೆ.

ಆದ್ದರಿಂದ ನಮ್ಮೊಳಗೆ ಅವರು ಗೊಂದಲ ಸೃಷ್ಟಿಸಲು ಆರಂಭಿಸಿದ್ದಾರೆ. ನಮ್ಮ ಜನರು ಗೊಂದಲಕ್ಕೊಳಗಾಗಬೇಡಿ. ಸತ್ಯವನ್ನು ಅರಿಯೋಣ. ಸತ್ಯವನ್ನು ಸಾರೋಣ. ಸತ್ಯವನ್ನು ಉಳಿಸೋಣ.

ಬಾಬಾಸಾಹೇಬರ ಬರಹಗಳಲ್ಲೂ ಅಸುರರು, ದಾಸರು, ದಸ್ಯುಗಳ ಕುರಿತ ದಾಖಲೆಗಳಿವೆ. ಮನುವಾದಿಗಳ ಕುತಂತ್ರಕ್ಕೆ ಬಲಿಯಾದ ನಮ್ಮ ವೀರರು ಮತ್ತು ಶೂರರು ಇತಿಹಾಸದಲ್ಲಿ ಅಸುರರೆಂದು, ರಾಕ್ಷಸರೆಂದು ಬಿಂಬಿಸಲ್ಪಟ್ಟಿದ್ದಾರೆ.

ಈ ರೀತಿ ಮಾಡುವ ಮೂಲಕ ನಮ್ಮಿಂದ ನಮ್ಮ ಪೂರ್ವಿಕರನ್ನು ದೂರಮಾಡುವ ಹುನ್ನಾರವೇ ಮನುವಾದಿಗಳದ್ದಾಗಿದೆ. ಆದ್ದರಿಂದಲೇ ನಮ್ಮ ಜನರು ನಮ್ಮ ಪೂರ್ವಿಕರ ಶೌರ್ಯದ ಇತಿಹಾಸ ಮರೆತು ಇದೇ ಮನುವಾದಿಗಳು ಸೃಷ್ಟಿಸಿರುವ ಕಾಲ್ಪನಿಕ ದೇವರುಗಳನ್ನು ನಂಬಿ ಆರಾಧಿಸುತ್ತಾ ಮನುವಾದಿಗಳಿಗೆ ಲಾಭ ಮಾಡುತ್ತಾ ತಮ್ಮ ನೈಜ ಸಂಸ್ಕೃತಿಯನ್ನು ಮರೆತು ಮನುವಾದಿಗಳ ಗುಲಾಮರಾಗಿದ್ದಾರೆ.

ಬಲಿ ಚಕ್ರವರ್ತಿ ಮತ್ತು ನರಕಾಸುರ ಎಂಬ ನಮ್ಮ ಪೂರ್ವಿಕರನ್ನು ಮನುವಾದಿಗಳು ಮೋಸದಿಂದ ಕೊಂದು ರಾಜ್ಯ ಕಬಳಿಸಿ ಅವರನ್ನು ದುಷ್ಟರೆಂದು ಚಿತ್ರಿಸಿ ಪಟಾಕಿ ಸಿಡಿಸಿ ನಮ್ಮಿಂದಲೇ ನಮ್ಮವರ ಸಾವನ್ನು ಸಂಭ್ರಮಿಸುವಂತೆ ಮಾಡಿದ್ದಾರೆ. ಹೀಗೆ ಇತಿಹಾಸದ ಉದ್ದಕ್ಕೂ ನಮ್ಮ ಪರಂಪರೆಯನ್ನು ನಾಶಗೊಳಿಸಿ ನಮ್ಮನ್ನು ದಿಕ್ಕುತಪ್ಪಿಸಿರುವ ಮನುವಾದಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ನಾವು ಮಾನಸಿಕವಾಗಿ ಬಿಡುಗಡೆ ಹೊಂದಿದಾಗ ಮಾತ್ರವೇ ಕಳೆದುಕೊಂಡಿರು ಅಧಿಕಾರವನ್ನು ಮರಳಿ ಪಡೆಯಬೇಕಿದೆ. ಇದೇ ನಮ್ಮ ಪರಂಪರೆಯಾಗಿದೆ. ಒಂದು ಸಮುದಾಯವನ್ನು ನಾಶ ಪಡಿಸಬೇಕಿದ್ದರೆ ಅದರ ಪರಂಪರೆಯನ್ನು ನಾಶ ಪಡಿಸಬೇಕು ಎಂಬುದು ಮನುವಾದಿಗಳ ಕುತಂತ್ರವಾಗಿದೆ ಎಂದು ಬಾಬಾಸಾಹೇಬರು ಹೇಳುತ್ತಾರೆ. ನಮ್ಮ ಪರಂಪರೆಯನ್ನು ಹುಡುಕಿ ಮರಳಿ ಪಡೆದರೆ ಮಾತ್ರ ಮನುವಾದಿಗಳ ಪರಂಪರೆಯಿಂದ ಹೊರಬಂದರೆ ಮಾತ್ರ ನಮಗೆ ಅಧಿಕಾರವು ದಕ್ಕಲಿದೆ. ಅಧಿಕಾರದಿಂದ ಮಾತ್ರ ನಮ್ಮ ಹಕ್ಕುಗಳು ದೊರೆಯಲಿವೆ. ಇದೆಲ್ಲವೂ ಬೌದ್ದೀಯತೆಯೇ ಆಗಿದೆ ಎಂಬುದನ್ನು ನೆನಪಿಡಿ.

  • ಡಾ.ಕೃಷ್ಣಮೂರ್ತಿ ಚಮರಂ

(ಡಾ.ಕೃಷ್ಣಮೂರ್ತಿ ಚಮರಂರವರು ಸಾಮಾಜಿಕ ಕಾರ್ಯಕರ್ತರು ಮತ್ತು ಬರಹಗಾರರು. ಲೇಖನದಲ್ಲಿನ ಅಭಿಪ್ರಾಯಗಳು ವೈಯಕ್ತಿಕವಾದವು. ಈ ಕುರಿತು ಚರ್ಚೆಗೆ ಆಹ್ವಾನವಿದೆ. ಮಹಿಷಾಸುರ ಸಂಬಂಧಿತ ಲೇಖನಗಳನ್ನು [email protected] ಗೆ ಕಳಿಸಬಹುದು)


ಇದನ್ನೂ ಓದಿ: ಮಹಿಷ ದಸರಾ: ಅಂಬಾರಿಯಲ್ಲಿ ಗಾಂಧಿ, ಅಂಬೇಡ್ಕರ್, ನಾಲ್ವಡಿ ಫೋಟೊ ಇರಲಿ – ಮಹೇಶ್ ಚಂದ್ರ ಗುರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...