Homeಅಂಕಣಗಳುಕುಮಾರಣ್ಣ ಮಾಡಿದ್ದು ಅವುನಿಗೇ ಅಟಗಾಯಿಸಿಗತ್ತು?

ಕುಮಾರಣ್ಣ ಮಾಡಿದ್ದು ಅವುನಿಗೇ ಅಟಗಾಯಿಸಿಗತ್ತು?

- Advertisement -
- Advertisement -

ಕರ್ನಾಟಕದಲ್ಲಿ ಈಗ ಆಗಿಹೋದ ಮತದಾನದ ವೈಖರಿ ಗಮನಿಸಿದರೆ, ಮೈತ್ರಿಗಳ ಮುಸುಡಿಗೆ ಸರಿಯಾದ ಹೊಡೆತ ಬೀಳುವಂತೆ ಕಾಣುತ್ತಿದೆಯಲ್ಲಾ. ಯಾಕೆಂದರೆ, ಈ ಮೈತ್ರಿ ಸರಕಾರದ ಮುಖ್ಯಮಂತ್ರಿ ನಾನು ಪರಿಸ್ಥಿತಿಯ ಕೂಸು ಎಂದಿತು. ಆದರೆ ಆ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣ ಸೋತು ಹೋಗಿದೆ. ಬಿಜೆಪಿಯನ್ನು ಟೀಕಿಸುವುದರ ಜೊತೆಗೆ ಅವಕಾಶ ಸಿಕ್ಕಾಗಲೆಲ್ಲಾ ಕಾಂಗ್ರೆಸ್ಸನ್ನೂ ಟೀಕಿಸಿದೆ. ಇದರಿಂದ ಸಿಟ್ಟಾದ ಕಾಂಗೈಗಳು, ಕೂಸಿನ ಎಳಸು ಮಾತನ್ನು ಗಂಭೀರವಾಗಿಯೇ ಪರಿಗಣಿಸಿ, ಇಂತಹ ಎಳಸಿನ ಮುಖಂಡತ್ವದಲ್ಲಿ ನಾವು ರಾಜಕಾರಣ ಮಾಡಲು ಸಾಧ್ಯವೇ ಇಲ್ಲ ಎಂದು ಒಂದು ರಾಜಕೀಯ ಕ್ಷೋಭೆಯನ್ನು ಉಂಟುಮಾಡಿದರಲ್ಲಾ. ಈ ಕ್ಷೋಭೆ ಸತತವಾಗಿ ಒಂದು ವರ್ಷ ನಡೆದುದರ ಫಲವಾಗಿ ಸರಕಾರ ದಿಕ್ಕು ದೆಸೆಯಿಲ್ಲದೆ ನಡೆಯುತ್ತಿರುವಾಗಲೇ, ಅತ್ತ ದೇವೇಗೌಡರ ಕುಟುಂಬದ ಅಧಿಕಾರ ದಾಹದ ಫಲವಾಗಿ ಒಕ್ಕಲಿಗರಲ್ಲೇ ಅಸಮಾಧಾನ ಭುಗಿಲೆದ್ದು, ಅದು ಇಡೀ ಕರ್ನಾಟಕಕ್ಕೇ ಹಬ್ಬಿದಾಗ, ಚುನಾವಣೆ ಎದುರಾಗಿ, ಜನಸಮೂಹ “ಬನ್ನಿ ನಿಮ್ಮ ಬುರುಡೆಗೆ ಬಿಸಿನೀರು ಕಾಯಿಸಲು ಇದು ಸರಿಯಾದ ಸಮಯ” ಎಂದು ಕಾಯುತ್ತಿರುವಾಗ, ಮೈತ್ರಿಗಳು ಅದ್ಯಾವ ಬಾಯಿಂದ ನಾವು ಇಪ್ಪತ್ತೆರಡು ಬಾರಿಸುತ್ತೇವೆ ಎಂದು ಹೇಳುತ್ತಿರುವುದೇ ಹಾಸ್ಯಾಸ್ಪದವಾಗಿದೆಯಲ್ಲಾ, ಥೂತ್ತೇರಿ.

ಮೂರು ದಶಕದ ಹಿಂದೆ ಇದೇ ಕಾಂಗೈಗಳು ತಮ್ಮ ಹೆಸರಿಗೆ ಬದಲಾಗಿ, ಇಂದಿರಾಗಾಂಧಿಗೆ ಓಟು ಕೇಳುತ್ತಿದ್ದವು. ದೇವಸ್ಥಾನಕ್ಕೆ ನಿಧಿ ಎತ್ತುವವರು ತಮ್ಮ ಹೆಸರೇಳದೆ ದೇವಿ ಹೆಸರು ಹೇಳಿ ವಂತಿಕೆ ವಸೂಲು ಮಾಡುತ್ತವಲ್ಲ. ಹಾಗೆ ಅಂತದೇ ಒಂದು ಸ್ಥಿತಿಗೆ ಈ ಬಿಜೆಪಿಗಳು ಬಂದು ಕೂತಿವೆಯಲ್ಲಾ. ಇಂದಿರಾಗಾಂಧಿ ಹೆಸರೇ ಬಡಬಗ್ಗರು, ದುರ್ಬಲರು, ಅಲ್ಪಸಂಖ್ಯಾತರಿಗೆ ರೋಮಾಂಚನವುಂಟು ಮಾಡುತ್ತಿತ್ತು. ಆದರೆ ಈ ಮೋದಿ ಹೆಸರು ಚೆಡ್ಡಿಗಳಿಗೆ ಮತ್ತವರ ಮನೆಹಾಳ ಪರಿವಾರಕ್ಕೆ ಮಾತ್ರ ಕೋಸಂಬರಿ ತಿಂದು ಪಾನಕ ಕುಡಿದಷ್ಟು ಆಪ್ಯಾಯಮಾನವಾಗಿದೆಯಲ್ಲಾ. ಮೋದಿ ಮಹಾತ್ಮ ಕಡಿದು ಕಟ್ಟೆಹಾಕಿದ ಯಾವ ಕೆಲಸವೂ ಇಲ್ಲದ ಕಾರಣ ಬಾಯಿಗೆ ಬಂದ ಸುಳ್ಳನ್ನೇ ಒದರುತ್ತಿದ್ದಾನೆ. ಸುಳ್ಳಿಗಿರುವ ಶಕ್ತಿಯನ್ನು ಸರಿಯಾಗಿಯೇ ಗುರುತಿಸಿರುವ ಬಿಜೆಪಿಗಳು ಅದನ್ನೇ ಬೊಗಳುತ್ತಿರುವಾಗ ಅವುಗಳ ಸುಳ್ಳಿಗೆ ಬದಲು ಸತ್ಯ ಸಂಗತಿಯನ್ನು ಸಾರಲು ಈ ಕಾಂಗೈಗಳಿಗೆ ಏನಾಗಿದೆ ಎಂದು ಜನರು ಕೇಳುತ್ತಿರುವಾಗಲೆ, ಸಿದ್ದರಾಮಯ್ಯ ತನ್ನ ಐದು ವರ್ಷದ ಸಾಧನೆಯನ್ನ ಹೇಳುತ್ತಾ ಇಂತಹ ಸಾಧನೆ ಮೋದಿಯಿಂದ ಆಗಿದೆಯೇ ನೀವೇ ಹೇಳಿ ಎಂದಾಗ, ಸಿದ್ದರಾಮಯ್ಯ ಕೊಟ್ಟ ಅಕ್ಕಿ ತಿಂದ ಜನ ಅದನ್ನ ಮರೆತು ಏನೂ ಮಾಡದ ಮೋದಿ ಪರವಾಗಿಲ್ಲ ಎನ್ನುತ್ತಿವೆಯಲ್ಲಾ, ಥೂತ್ತೇರಿ.

ಮಂಡ್ಯ ಚುನಾವಣೆ ಇನ್ನೊಂದು ಚಾಮುಂಡೇಶ್ವರಿ ಚುನಾವಣೆಯಂತಾಗಿ ಅಂತ್ಯಗೊಂಡಿರುವಾಗ, ಆ ಬಗ್ಗೆ ವಾಟಿಸ್ಸೆ ಕೇಳಬೇಕೆನಿಸಿತಲ್ಲಾ. ಕೂಡಲೇ ಫೋನ್ ಮಾಡಲಾಗಿ ರಿಂಗಾಯ್ತು, ರಿಂಗ್ ಠೋನ್ `ಟರ್ರ್ ಟರ್ರ್’ “ಹಲೋ ಹೇಳಿ ಸಾ”.

“ವಾಟಿಸ್ಸೆ ಚುನಾವಣೆ ಯಂಗಾಯ್ತು.”

“ಡಲ್ಲಾಗಿತ್ತು ಸಾ.”

“ಯಾಕೆ?”

“ಯಾಕಂದ್ರೆ ನನ್ನ ಕಣ್ಣೆದುರಿಗೆ ಡ್ರಿಂಕ್ ಅಂಗಡಿಗೆ ಬಾಗಲಾಕಿಸಿಬುಟ್ರು ಸಾ. ಮೊದ್ಲೆ ಗೊತ್ತಿದ್ರೆ ಯಲಕ್ಷನ್ ಮುಗಿಯುವರಿಗೂ ಮೇಂಟೇನಾಗೋವಷ್ಟು ಡ್ರಿಂಕ್ಸ್ ತಗಂಡು ಸ್ಟಾಕ್ ಮಡಿಕಬವುದಿತ್ತು.”

“ಅಂಗಡಿ ಬಾಗಲಾಕಿ ಸೀಲಾಕಿದ್ರು. ಹಿಂದಲ ಬಾಗಲಲ್ಲಿ ಸಿಗತದೆ.”

“ಈ ಸತಿ ಬಾಳ ಸ್ಟಿಕ್ಟು ಸಾರ್, ಆದ್ರು ಓಟು ಮಾಡೋ ಹಿಂದಿನ ದಿನ ನಿಖಿಲ್ ಕಡೆಯೋರಿಂದ ಒಂದೇ ಒಂದು ರಾಜಾ ವಿಸ್ಕಿ ಪ್ಯಾಕೆಟ್ ಸಿಕ್ತು ಸಾ.”

“ಅವುರತ್ರಲೂ ಈಸಗಂಡ್ಯಾ.”

“ಒಂದು ಷರತ್ತ ಮ್ಯಾಲೆ ಕೊಟ್ರು ಸಾರ್.”

“ಏನು ಷರತ್ತು.”

“ನಿಖಿಲ್ ಕುಮಾರ್‌ಸ್ವಾಮಿಗೇ ಓಟಾಕ್ತಿನಿ ಅಂತ ಹೇಳಿದ ಮ್ಯಾಲೆ ಕೊಟ್ರು ಸಾ.”

“ಅಂಗರೆ ನಿನ್ನೋಟು ನಿಖಿಲ್‌ಗೋಯ್ತು.”

“ಏಲ್ಯಾರವುಂಟೆ ಸಾರ್, ಐನೂರ‍್ರುಪಾಯಿ ಈಸಿಗಂಡೋರೆ ಕೈ ಕೊಟ್ರು, ಇನ್ನ ನನ್ನಂಥೋರು ಹಾಕಕ್ಕಾದತೆ.”

“ಐನೂರು ಕೊಟ್ಟೋರು ಧರ್ಮಸ್ಥಳದ ಆಣೆ ಮಾಡಿಸಿದರಂತೆ.”

“ಅದೂ ನ್ಯಡಿತು, ಕ್ಯಾರ್‌ಪೇಟೆ ಪಾಂಡುಪುರ ಇಲ್ಯಲ್ಲ ನ್ಯಡೀತು. ಅದ್ಕೆ ಅಲ್ಲಿ ಸಲುಪ ಸುಮಲತನಿಗೆ ಹಿನ್ನೆಡೆ.”

“ಮದ್ದೂರು ಮಳವಳ್ಳಿ ಯಂಗೆ.”

“ಅಲ್ಲಿ ತಮ್ಮಣ್ಣ ಭಾರಿ ದುಡ್ಡು ಬಡದ ಸಾ. ಆ ನನಮಗನಿಗೆ ಎಲ್ಲಿ ಕುಮಾರಣ್ಣ ಎಗರೋಗಿ ಮಂತ್ರಿಗಿರಿ ಹೋಯ್ತದೋ ಅಂತ ಹೆದ್ರಿಕಂಡು ದುಡ್ಡ ಸುರುದುಬುಟ್ಟ.”

“ಪ್ರಾಪರ್ ಮಂಡ್ಯ ಯಂಗೆ.”

“ಅದ್ಯಂಗೊ ಗೊತ್ತಿಲ್ಲ. ನಮ್ಮ ನಾಗಮಂಗಲದ ಬಗ್ಗೆ ಯಲ್ಲ ಡವುಟು ಮಾಡತಿದ್ರು. ಆದ್ರು ನಾವು ನಂಬಿಕಸ್ಥರು ಅಂತ ತೋರಿದೊ ಸಾ.”

“ಇದು ನಿನ್ನಭಿಪ್ರಾಯನ.”

“ನಾನು, ಜನಗಳ ಜೊತೆ ಇದ್ದಿನಿ ಸಾ.”

“ಕುಡುಕರ ಜೊತೇಲೆ?”

“ನನ್ನಂಥ ಕುಡುಕ್ರು ಕುಡುಕರ ಕೂಡೆ ಇರದಿಲ್ಲ ಸಾರ್, ಅವುರಿಗೆ ಮಾತ ಕೇಳೋ ಜನಗಳು ಬೇಕು, ಅದ್ಕೆ ನಾನು ಜನಗಳ ಜೊತೆ ಇರತಿನಿ, ಈ ಕುಮಾರಸ್ವಾಮಿ ಮಾಡಿದ ಕ್ಯಲಸ ಅವುನಿಗೇ ಅಟಗಾಯಿಸಿಗತ್ತಾ ಅದೆ ಸಾ.”

“ಯಂಗೇ?”

“ಅವುನು ಅವುಳ್ಯಾರೊ ಡಿ.ಸಿ ಹಿಡಕಂಡು ತನ್ನ ಮಗನೆಸರು ಮದಲೇಟಿಗೆ ಪಸ್ಟ್ಬರಂಗೆ ಮಾಡಿದ, ಇದರಿಂದ ಸುಮಲತ 20ನೇ ಕ್ಯಾಂಡೇಟಾದ್ರು. ಜೊತೆಗೆ ಮೇಲೆ ಕ್ಯೆಳಗೆ ಯರಡು ಮೂರು ಸುಮಲತ ಬಿದ್ರು.”

“ನಾನು ನೋಡಿದೆ ಅದ.”

“ಇಪ್ಪತ್ಯೆರುಡು ಜನ ಕ್ಯಾಂಡೇಟಾದ್ರಿಂದ ಯರಡು ಲೈನಾಯ್ತು ಸಾ. ಸುಮಲತ ಲೈನಲ್ಲಿ ಮೊದಲಿದ್ದೋನಿಗೆ ಅದ್ಯಂತದೋ ಸಿತಾರ್ ವಾದ್ಯ ಕೊಟ್ಟಿದ್ರು. ಅದು ಒಂಥರ ಜ್ವಾಳದ ಕಡ್ಡಿವರೆ ಮಡಗಿದಂಗಿತ್ತು. ಅಷ್ಟೇ ಸಾಕು ಈ ಯಬ್ಬೆಟ್ಟಿನವ್ಯಲ್ಲ ಆ ಸಿತಾರ್‌ನ ಹುಲ್ಲೊರೆ ಅಂತ ತಿಳಕಂಡು ಒತ್ತಿ ಮಡಿಗ್ಯವೆ.”

“ಅರರೆ, ಅದ್ಯಂಗೆ.”

“ಸುಮಲತನ ಲೈನಲ್ಲಿ ಮೊದಲನೆಯವನು ಅವುನೆ ಅಲ್ಲವ ಸಾ. ಅದು ಯಬ್ಬೆಟ್ಟಿಗಳಿಗ್ಯಂಗೆ ಗೊತ್ತಾಗಬೇಕು. ಅಂತೂ ನಿಖಿಲ್‌ನ ಕಡೆ ಐವತ್ತೋಟು ದಿಕ್ಕು ತಪ್ಯವೆ, ನಮ್ಮದೊಂದು ಬೂತಲ್ಲೇ ಅಂಗಾದ್ರೆ ಉಳಿದ ಕಡೆ.”

“ಅಂಗರೆ ಸಿತಾರಿನೋನು ತಗದ ಅನ್ನು.”

“ಕುಮಾರಣ್ಣ ಮಾಡಿದ್ದು ಅವನೇ ಅನುಭವುಸಂಗಾಯ್ತು ಸಾ.”

“ಥೂತ್ತೇರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...