Homeಅಂಕಣಗಳುಕುಮಾರಣ್ಣ ಮಾಡಿದ್ದು ಅವುನಿಗೇ ಅಟಗಾಯಿಸಿಗತ್ತು?

ಕುಮಾರಣ್ಣ ಮಾಡಿದ್ದು ಅವುನಿಗೇ ಅಟಗಾಯಿಸಿಗತ್ತು?

- Advertisement -
- Advertisement -

ಕರ್ನಾಟಕದಲ್ಲಿ ಈಗ ಆಗಿಹೋದ ಮತದಾನದ ವೈಖರಿ ಗಮನಿಸಿದರೆ, ಮೈತ್ರಿಗಳ ಮುಸುಡಿಗೆ ಸರಿಯಾದ ಹೊಡೆತ ಬೀಳುವಂತೆ ಕಾಣುತ್ತಿದೆಯಲ್ಲಾ. ಯಾಕೆಂದರೆ, ಈ ಮೈತ್ರಿ ಸರಕಾರದ ಮುಖ್ಯಮಂತ್ರಿ ನಾನು ಪರಿಸ್ಥಿತಿಯ ಕೂಸು ಎಂದಿತು. ಆದರೆ ಆ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣ ಸೋತು ಹೋಗಿದೆ. ಬಿಜೆಪಿಯನ್ನು ಟೀಕಿಸುವುದರ ಜೊತೆಗೆ ಅವಕಾಶ ಸಿಕ್ಕಾಗಲೆಲ್ಲಾ ಕಾಂಗ್ರೆಸ್ಸನ್ನೂ ಟೀಕಿಸಿದೆ. ಇದರಿಂದ ಸಿಟ್ಟಾದ ಕಾಂಗೈಗಳು, ಕೂಸಿನ ಎಳಸು ಮಾತನ್ನು ಗಂಭೀರವಾಗಿಯೇ ಪರಿಗಣಿಸಿ, ಇಂತಹ ಎಳಸಿನ ಮುಖಂಡತ್ವದಲ್ಲಿ ನಾವು ರಾಜಕಾರಣ ಮಾಡಲು ಸಾಧ್ಯವೇ ಇಲ್ಲ ಎಂದು ಒಂದು ರಾಜಕೀಯ ಕ್ಷೋಭೆಯನ್ನು ಉಂಟುಮಾಡಿದರಲ್ಲಾ. ಈ ಕ್ಷೋಭೆ ಸತತವಾಗಿ ಒಂದು ವರ್ಷ ನಡೆದುದರ ಫಲವಾಗಿ ಸರಕಾರ ದಿಕ್ಕು ದೆಸೆಯಿಲ್ಲದೆ ನಡೆಯುತ್ತಿರುವಾಗಲೇ, ಅತ್ತ ದೇವೇಗೌಡರ ಕುಟುಂಬದ ಅಧಿಕಾರ ದಾಹದ ಫಲವಾಗಿ ಒಕ್ಕಲಿಗರಲ್ಲೇ ಅಸಮಾಧಾನ ಭುಗಿಲೆದ್ದು, ಅದು ಇಡೀ ಕರ್ನಾಟಕಕ್ಕೇ ಹಬ್ಬಿದಾಗ, ಚುನಾವಣೆ ಎದುರಾಗಿ, ಜನಸಮೂಹ “ಬನ್ನಿ ನಿಮ್ಮ ಬುರುಡೆಗೆ ಬಿಸಿನೀರು ಕಾಯಿಸಲು ಇದು ಸರಿಯಾದ ಸಮಯ” ಎಂದು ಕಾಯುತ್ತಿರುವಾಗ, ಮೈತ್ರಿಗಳು ಅದ್ಯಾವ ಬಾಯಿಂದ ನಾವು ಇಪ್ಪತ್ತೆರಡು ಬಾರಿಸುತ್ತೇವೆ ಎಂದು ಹೇಳುತ್ತಿರುವುದೇ ಹಾಸ್ಯಾಸ್ಪದವಾಗಿದೆಯಲ್ಲಾ, ಥೂತ್ತೇರಿ.

ಮೂರು ದಶಕದ ಹಿಂದೆ ಇದೇ ಕಾಂಗೈಗಳು ತಮ್ಮ ಹೆಸರಿಗೆ ಬದಲಾಗಿ, ಇಂದಿರಾಗಾಂಧಿಗೆ ಓಟು ಕೇಳುತ್ತಿದ್ದವು. ದೇವಸ್ಥಾನಕ್ಕೆ ನಿಧಿ ಎತ್ತುವವರು ತಮ್ಮ ಹೆಸರೇಳದೆ ದೇವಿ ಹೆಸರು ಹೇಳಿ ವಂತಿಕೆ ವಸೂಲು ಮಾಡುತ್ತವಲ್ಲ. ಹಾಗೆ ಅಂತದೇ ಒಂದು ಸ್ಥಿತಿಗೆ ಈ ಬಿಜೆಪಿಗಳು ಬಂದು ಕೂತಿವೆಯಲ್ಲಾ. ಇಂದಿರಾಗಾಂಧಿ ಹೆಸರೇ ಬಡಬಗ್ಗರು, ದುರ್ಬಲರು, ಅಲ್ಪಸಂಖ್ಯಾತರಿಗೆ ರೋಮಾಂಚನವುಂಟು ಮಾಡುತ್ತಿತ್ತು. ಆದರೆ ಈ ಮೋದಿ ಹೆಸರು ಚೆಡ್ಡಿಗಳಿಗೆ ಮತ್ತವರ ಮನೆಹಾಳ ಪರಿವಾರಕ್ಕೆ ಮಾತ್ರ ಕೋಸಂಬರಿ ತಿಂದು ಪಾನಕ ಕುಡಿದಷ್ಟು ಆಪ್ಯಾಯಮಾನವಾಗಿದೆಯಲ್ಲಾ. ಮೋದಿ ಮಹಾತ್ಮ ಕಡಿದು ಕಟ್ಟೆಹಾಕಿದ ಯಾವ ಕೆಲಸವೂ ಇಲ್ಲದ ಕಾರಣ ಬಾಯಿಗೆ ಬಂದ ಸುಳ್ಳನ್ನೇ ಒದರುತ್ತಿದ್ದಾನೆ. ಸುಳ್ಳಿಗಿರುವ ಶಕ್ತಿಯನ್ನು ಸರಿಯಾಗಿಯೇ ಗುರುತಿಸಿರುವ ಬಿಜೆಪಿಗಳು ಅದನ್ನೇ ಬೊಗಳುತ್ತಿರುವಾಗ ಅವುಗಳ ಸುಳ್ಳಿಗೆ ಬದಲು ಸತ್ಯ ಸಂಗತಿಯನ್ನು ಸಾರಲು ಈ ಕಾಂಗೈಗಳಿಗೆ ಏನಾಗಿದೆ ಎಂದು ಜನರು ಕೇಳುತ್ತಿರುವಾಗಲೆ, ಸಿದ್ದರಾಮಯ್ಯ ತನ್ನ ಐದು ವರ್ಷದ ಸಾಧನೆಯನ್ನ ಹೇಳುತ್ತಾ ಇಂತಹ ಸಾಧನೆ ಮೋದಿಯಿಂದ ಆಗಿದೆಯೇ ನೀವೇ ಹೇಳಿ ಎಂದಾಗ, ಸಿದ್ದರಾಮಯ್ಯ ಕೊಟ್ಟ ಅಕ್ಕಿ ತಿಂದ ಜನ ಅದನ್ನ ಮರೆತು ಏನೂ ಮಾಡದ ಮೋದಿ ಪರವಾಗಿಲ್ಲ ಎನ್ನುತ್ತಿವೆಯಲ್ಲಾ, ಥೂತ್ತೇರಿ.

ಮಂಡ್ಯ ಚುನಾವಣೆ ಇನ್ನೊಂದು ಚಾಮುಂಡೇಶ್ವರಿ ಚುನಾವಣೆಯಂತಾಗಿ ಅಂತ್ಯಗೊಂಡಿರುವಾಗ, ಆ ಬಗ್ಗೆ ವಾಟಿಸ್ಸೆ ಕೇಳಬೇಕೆನಿಸಿತಲ್ಲಾ. ಕೂಡಲೇ ಫೋನ್ ಮಾಡಲಾಗಿ ರಿಂಗಾಯ್ತು, ರಿಂಗ್ ಠೋನ್ `ಟರ್ರ್ ಟರ್ರ್’ “ಹಲೋ ಹೇಳಿ ಸಾ”.

“ವಾಟಿಸ್ಸೆ ಚುನಾವಣೆ ಯಂಗಾಯ್ತು.”

“ಡಲ್ಲಾಗಿತ್ತು ಸಾ.”

“ಯಾಕೆ?”

“ಯಾಕಂದ್ರೆ ನನ್ನ ಕಣ್ಣೆದುರಿಗೆ ಡ್ರಿಂಕ್ ಅಂಗಡಿಗೆ ಬಾಗಲಾಕಿಸಿಬುಟ್ರು ಸಾ. ಮೊದ್ಲೆ ಗೊತ್ತಿದ್ರೆ ಯಲಕ್ಷನ್ ಮುಗಿಯುವರಿಗೂ ಮೇಂಟೇನಾಗೋವಷ್ಟು ಡ್ರಿಂಕ್ಸ್ ತಗಂಡು ಸ್ಟಾಕ್ ಮಡಿಕಬವುದಿತ್ತು.”

“ಅಂಗಡಿ ಬಾಗಲಾಕಿ ಸೀಲಾಕಿದ್ರು. ಹಿಂದಲ ಬಾಗಲಲ್ಲಿ ಸಿಗತದೆ.”

“ಈ ಸತಿ ಬಾಳ ಸ್ಟಿಕ್ಟು ಸಾರ್, ಆದ್ರು ಓಟು ಮಾಡೋ ಹಿಂದಿನ ದಿನ ನಿಖಿಲ್ ಕಡೆಯೋರಿಂದ ಒಂದೇ ಒಂದು ರಾಜಾ ವಿಸ್ಕಿ ಪ್ಯಾಕೆಟ್ ಸಿಕ್ತು ಸಾ.”

“ಅವುರತ್ರಲೂ ಈಸಗಂಡ್ಯಾ.”

“ಒಂದು ಷರತ್ತ ಮ್ಯಾಲೆ ಕೊಟ್ರು ಸಾರ್.”

“ಏನು ಷರತ್ತು.”

“ನಿಖಿಲ್ ಕುಮಾರ್‌ಸ್ವಾಮಿಗೇ ಓಟಾಕ್ತಿನಿ ಅಂತ ಹೇಳಿದ ಮ್ಯಾಲೆ ಕೊಟ್ರು ಸಾ.”

“ಅಂಗರೆ ನಿನ್ನೋಟು ನಿಖಿಲ್‌ಗೋಯ್ತು.”

“ಏಲ್ಯಾರವುಂಟೆ ಸಾರ್, ಐನೂರ‍್ರುಪಾಯಿ ಈಸಿಗಂಡೋರೆ ಕೈ ಕೊಟ್ರು, ಇನ್ನ ನನ್ನಂಥೋರು ಹಾಕಕ್ಕಾದತೆ.”

“ಐನೂರು ಕೊಟ್ಟೋರು ಧರ್ಮಸ್ಥಳದ ಆಣೆ ಮಾಡಿಸಿದರಂತೆ.”

“ಅದೂ ನ್ಯಡಿತು, ಕ್ಯಾರ್‌ಪೇಟೆ ಪಾಂಡುಪುರ ಇಲ್ಯಲ್ಲ ನ್ಯಡೀತು. ಅದ್ಕೆ ಅಲ್ಲಿ ಸಲುಪ ಸುಮಲತನಿಗೆ ಹಿನ್ನೆಡೆ.”

“ಮದ್ದೂರು ಮಳವಳ್ಳಿ ಯಂಗೆ.”

“ಅಲ್ಲಿ ತಮ್ಮಣ್ಣ ಭಾರಿ ದುಡ್ಡು ಬಡದ ಸಾ. ಆ ನನಮಗನಿಗೆ ಎಲ್ಲಿ ಕುಮಾರಣ್ಣ ಎಗರೋಗಿ ಮಂತ್ರಿಗಿರಿ ಹೋಯ್ತದೋ ಅಂತ ಹೆದ್ರಿಕಂಡು ದುಡ್ಡ ಸುರುದುಬುಟ್ಟ.”

“ಪ್ರಾಪರ್ ಮಂಡ್ಯ ಯಂಗೆ.”

“ಅದ್ಯಂಗೊ ಗೊತ್ತಿಲ್ಲ. ನಮ್ಮ ನಾಗಮಂಗಲದ ಬಗ್ಗೆ ಯಲ್ಲ ಡವುಟು ಮಾಡತಿದ್ರು. ಆದ್ರು ನಾವು ನಂಬಿಕಸ್ಥರು ಅಂತ ತೋರಿದೊ ಸಾ.”

“ಇದು ನಿನ್ನಭಿಪ್ರಾಯನ.”

“ನಾನು, ಜನಗಳ ಜೊತೆ ಇದ್ದಿನಿ ಸಾ.”

“ಕುಡುಕರ ಜೊತೇಲೆ?”

“ನನ್ನಂಥ ಕುಡುಕ್ರು ಕುಡುಕರ ಕೂಡೆ ಇರದಿಲ್ಲ ಸಾರ್, ಅವುರಿಗೆ ಮಾತ ಕೇಳೋ ಜನಗಳು ಬೇಕು, ಅದ್ಕೆ ನಾನು ಜನಗಳ ಜೊತೆ ಇರತಿನಿ, ಈ ಕುಮಾರಸ್ವಾಮಿ ಮಾಡಿದ ಕ್ಯಲಸ ಅವುನಿಗೇ ಅಟಗಾಯಿಸಿಗತ್ತಾ ಅದೆ ಸಾ.”

“ಯಂಗೇ?”

“ಅವುನು ಅವುಳ್ಯಾರೊ ಡಿ.ಸಿ ಹಿಡಕಂಡು ತನ್ನ ಮಗನೆಸರು ಮದಲೇಟಿಗೆ ಪಸ್ಟ್ಬರಂಗೆ ಮಾಡಿದ, ಇದರಿಂದ ಸುಮಲತ 20ನೇ ಕ್ಯಾಂಡೇಟಾದ್ರು. ಜೊತೆಗೆ ಮೇಲೆ ಕ್ಯೆಳಗೆ ಯರಡು ಮೂರು ಸುಮಲತ ಬಿದ್ರು.”

“ನಾನು ನೋಡಿದೆ ಅದ.”

“ಇಪ್ಪತ್ಯೆರುಡು ಜನ ಕ್ಯಾಂಡೇಟಾದ್ರಿಂದ ಯರಡು ಲೈನಾಯ್ತು ಸಾ. ಸುಮಲತ ಲೈನಲ್ಲಿ ಮೊದಲಿದ್ದೋನಿಗೆ ಅದ್ಯಂತದೋ ಸಿತಾರ್ ವಾದ್ಯ ಕೊಟ್ಟಿದ್ರು. ಅದು ಒಂಥರ ಜ್ವಾಳದ ಕಡ್ಡಿವರೆ ಮಡಗಿದಂಗಿತ್ತು. ಅಷ್ಟೇ ಸಾಕು ಈ ಯಬ್ಬೆಟ್ಟಿನವ್ಯಲ್ಲ ಆ ಸಿತಾರ್‌ನ ಹುಲ್ಲೊರೆ ಅಂತ ತಿಳಕಂಡು ಒತ್ತಿ ಮಡಿಗ್ಯವೆ.”

“ಅರರೆ, ಅದ್ಯಂಗೆ.”

“ಸುಮಲತನ ಲೈನಲ್ಲಿ ಮೊದಲನೆಯವನು ಅವುನೆ ಅಲ್ಲವ ಸಾ. ಅದು ಯಬ್ಬೆಟ್ಟಿಗಳಿಗ್ಯಂಗೆ ಗೊತ್ತಾಗಬೇಕು. ಅಂತೂ ನಿಖಿಲ್‌ನ ಕಡೆ ಐವತ್ತೋಟು ದಿಕ್ಕು ತಪ್ಯವೆ, ನಮ್ಮದೊಂದು ಬೂತಲ್ಲೇ ಅಂಗಾದ್ರೆ ಉಳಿದ ಕಡೆ.”

“ಅಂಗರೆ ಸಿತಾರಿನೋನು ತಗದ ಅನ್ನು.”

“ಕುಮಾರಣ್ಣ ಮಾಡಿದ್ದು ಅವನೇ ಅನುಭವುಸಂಗಾಯ್ತು ಸಾ.”

“ಥೂತ್ತೇರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...