Homeಅಂಕಣಗಳುಕುಮಾರಣ್ಣ ಮಾಡಿದ್ದು ಅವುನಿಗೇ ಅಟಗಾಯಿಸಿಗತ್ತು?

ಕುಮಾರಣ್ಣ ಮಾಡಿದ್ದು ಅವುನಿಗೇ ಅಟಗಾಯಿಸಿಗತ್ತು?

- Advertisement -
- Advertisement -

ಕರ್ನಾಟಕದಲ್ಲಿ ಈಗ ಆಗಿಹೋದ ಮತದಾನದ ವೈಖರಿ ಗಮನಿಸಿದರೆ, ಮೈತ್ರಿಗಳ ಮುಸುಡಿಗೆ ಸರಿಯಾದ ಹೊಡೆತ ಬೀಳುವಂತೆ ಕಾಣುತ್ತಿದೆಯಲ್ಲಾ. ಯಾಕೆಂದರೆ, ಈ ಮೈತ್ರಿ ಸರಕಾರದ ಮುಖ್ಯಮಂತ್ರಿ ನಾನು ಪರಿಸ್ಥಿತಿಯ ಕೂಸು ಎಂದಿತು. ಆದರೆ ಆ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣ ಸೋತು ಹೋಗಿದೆ. ಬಿಜೆಪಿಯನ್ನು ಟೀಕಿಸುವುದರ ಜೊತೆಗೆ ಅವಕಾಶ ಸಿಕ್ಕಾಗಲೆಲ್ಲಾ ಕಾಂಗ್ರೆಸ್ಸನ್ನೂ ಟೀಕಿಸಿದೆ. ಇದರಿಂದ ಸಿಟ್ಟಾದ ಕಾಂಗೈಗಳು, ಕೂಸಿನ ಎಳಸು ಮಾತನ್ನು ಗಂಭೀರವಾಗಿಯೇ ಪರಿಗಣಿಸಿ, ಇಂತಹ ಎಳಸಿನ ಮುಖಂಡತ್ವದಲ್ಲಿ ನಾವು ರಾಜಕಾರಣ ಮಾಡಲು ಸಾಧ್ಯವೇ ಇಲ್ಲ ಎಂದು ಒಂದು ರಾಜಕೀಯ ಕ್ಷೋಭೆಯನ್ನು ಉಂಟುಮಾಡಿದರಲ್ಲಾ. ಈ ಕ್ಷೋಭೆ ಸತತವಾಗಿ ಒಂದು ವರ್ಷ ನಡೆದುದರ ಫಲವಾಗಿ ಸರಕಾರ ದಿಕ್ಕು ದೆಸೆಯಿಲ್ಲದೆ ನಡೆಯುತ್ತಿರುವಾಗಲೇ, ಅತ್ತ ದೇವೇಗೌಡರ ಕುಟುಂಬದ ಅಧಿಕಾರ ದಾಹದ ಫಲವಾಗಿ ಒಕ್ಕಲಿಗರಲ್ಲೇ ಅಸಮಾಧಾನ ಭುಗಿಲೆದ್ದು, ಅದು ಇಡೀ ಕರ್ನಾಟಕಕ್ಕೇ ಹಬ್ಬಿದಾಗ, ಚುನಾವಣೆ ಎದುರಾಗಿ, ಜನಸಮೂಹ “ಬನ್ನಿ ನಿಮ್ಮ ಬುರುಡೆಗೆ ಬಿಸಿನೀರು ಕಾಯಿಸಲು ಇದು ಸರಿಯಾದ ಸಮಯ” ಎಂದು ಕಾಯುತ್ತಿರುವಾಗ, ಮೈತ್ರಿಗಳು ಅದ್ಯಾವ ಬಾಯಿಂದ ನಾವು ಇಪ್ಪತ್ತೆರಡು ಬಾರಿಸುತ್ತೇವೆ ಎಂದು ಹೇಳುತ್ತಿರುವುದೇ ಹಾಸ್ಯಾಸ್ಪದವಾಗಿದೆಯಲ್ಲಾ, ಥೂತ್ತೇರಿ.

ಮೂರು ದಶಕದ ಹಿಂದೆ ಇದೇ ಕಾಂಗೈಗಳು ತಮ್ಮ ಹೆಸರಿಗೆ ಬದಲಾಗಿ, ಇಂದಿರಾಗಾಂಧಿಗೆ ಓಟು ಕೇಳುತ್ತಿದ್ದವು. ದೇವಸ್ಥಾನಕ್ಕೆ ನಿಧಿ ಎತ್ತುವವರು ತಮ್ಮ ಹೆಸರೇಳದೆ ದೇವಿ ಹೆಸರು ಹೇಳಿ ವಂತಿಕೆ ವಸೂಲು ಮಾಡುತ್ತವಲ್ಲ. ಹಾಗೆ ಅಂತದೇ ಒಂದು ಸ್ಥಿತಿಗೆ ಈ ಬಿಜೆಪಿಗಳು ಬಂದು ಕೂತಿವೆಯಲ್ಲಾ. ಇಂದಿರಾಗಾಂಧಿ ಹೆಸರೇ ಬಡಬಗ್ಗರು, ದುರ್ಬಲರು, ಅಲ್ಪಸಂಖ್ಯಾತರಿಗೆ ರೋಮಾಂಚನವುಂಟು ಮಾಡುತ್ತಿತ್ತು. ಆದರೆ ಈ ಮೋದಿ ಹೆಸರು ಚೆಡ್ಡಿಗಳಿಗೆ ಮತ್ತವರ ಮನೆಹಾಳ ಪರಿವಾರಕ್ಕೆ ಮಾತ್ರ ಕೋಸಂಬರಿ ತಿಂದು ಪಾನಕ ಕುಡಿದಷ್ಟು ಆಪ್ಯಾಯಮಾನವಾಗಿದೆಯಲ್ಲಾ. ಮೋದಿ ಮಹಾತ್ಮ ಕಡಿದು ಕಟ್ಟೆಹಾಕಿದ ಯಾವ ಕೆಲಸವೂ ಇಲ್ಲದ ಕಾರಣ ಬಾಯಿಗೆ ಬಂದ ಸುಳ್ಳನ್ನೇ ಒದರುತ್ತಿದ್ದಾನೆ. ಸುಳ್ಳಿಗಿರುವ ಶಕ್ತಿಯನ್ನು ಸರಿಯಾಗಿಯೇ ಗುರುತಿಸಿರುವ ಬಿಜೆಪಿಗಳು ಅದನ್ನೇ ಬೊಗಳುತ್ತಿರುವಾಗ ಅವುಗಳ ಸುಳ್ಳಿಗೆ ಬದಲು ಸತ್ಯ ಸಂಗತಿಯನ್ನು ಸಾರಲು ಈ ಕಾಂಗೈಗಳಿಗೆ ಏನಾಗಿದೆ ಎಂದು ಜನರು ಕೇಳುತ್ತಿರುವಾಗಲೆ, ಸಿದ್ದರಾಮಯ್ಯ ತನ್ನ ಐದು ವರ್ಷದ ಸಾಧನೆಯನ್ನ ಹೇಳುತ್ತಾ ಇಂತಹ ಸಾಧನೆ ಮೋದಿಯಿಂದ ಆಗಿದೆಯೇ ನೀವೇ ಹೇಳಿ ಎಂದಾಗ, ಸಿದ್ದರಾಮಯ್ಯ ಕೊಟ್ಟ ಅಕ್ಕಿ ತಿಂದ ಜನ ಅದನ್ನ ಮರೆತು ಏನೂ ಮಾಡದ ಮೋದಿ ಪರವಾಗಿಲ್ಲ ಎನ್ನುತ್ತಿವೆಯಲ್ಲಾ, ಥೂತ್ತೇರಿ.

ಮಂಡ್ಯ ಚುನಾವಣೆ ಇನ್ನೊಂದು ಚಾಮುಂಡೇಶ್ವರಿ ಚುನಾವಣೆಯಂತಾಗಿ ಅಂತ್ಯಗೊಂಡಿರುವಾಗ, ಆ ಬಗ್ಗೆ ವಾಟಿಸ್ಸೆ ಕೇಳಬೇಕೆನಿಸಿತಲ್ಲಾ. ಕೂಡಲೇ ಫೋನ್ ಮಾಡಲಾಗಿ ರಿಂಗಾಯ್ತು, ರಿಂಗ್ ಠೋನ್ `ಟರ್ರ್ ಟರ್ರ್’ “ಹಲೋ ಹೇಳಿ ಸಾ”.

“ವಾಟಿಸ್ಸೆ ಚುನಾವಣೆ ಯಂಗಾಯ್ತು.”

“ಡಲ್ಲಾಗಿತ್ತು ಸಾ.”

“ಯಾಕೆ?”

“ಯಾಕಂದ್ರೆ ನನ್ನ ಕಣ್ಣೆದುರಿಗೆ ಡ್ರಿಂಕ್ ಅಂಗಡಿಗೆ ಬಾಗಲಾಕಿಸಿಬುಟ್ರು ಸಾ. ಮೊದ್ಲೆ ಗೊತ್ತಿದ್ರೆ ಯಲಕ್ಷನ್ ಮುಗಿಯುವರಿಗೂ ಮೇಂಟೇನಾಗೋವಷ್ಟು ಡ್ರಿಂಕ್ಸ್ ತಗಂಡು ಸ್ಟಾಕ್ ಮಡಿಕಬವುದಿತ್ತು.”

“ಅಂಗಡಿ ಬಾಗಲಾಕಿ ಸೀಲಾಕಿದ್ರು. ಹಿಂದಲ ಬಾಗಲಲ್ಲಿ ಸಿಗತದೆ.”

“ಈ ಸತಿ ಬಾಳ ಸ್ಟಿಕ್ಟು ಸಾರ್, ಆದ್ರು ಓಟು ಮಾಡೋ ಹಿಂದಿನ ದಿನ ನಿಖಿಲ್ ಕಡೆಯೋರಿಂದ ಒಂದೇ ಒಂದು ರಾಜಾ ವಿಸ್ಕಿ ಪ್ಯಾಕೆಟ್ ಸಿಕ್ತು ಸಾ.”

“ಅವುರತ್ರಲೂ ಈಸಗಂಡ್ಯಾ.”

“ಒಂದು ಷರತ್ತ ಮ್ಯಾಲೆ ಕೊಟ್ರು ಸಾರ್.”

“ಏನು ಷರತ್ತು.”

“ನಿಖಿಲ್ ಕುಮಾರ್‌ಸ್ವಾಮಿಗೇ ಓಟಾಕ್ತಿನಿ ಅಂತ ಹೇಳಿದ ಮ್ಯಾಲೆ ಕೊಟ್ರು ಸಾ.”

“ಅಂಗರೆ ನಿನ್ನೋಟು ನಿಖಿಲ್‌ಗೋಯ್ತು.”

“ಏಲ್ಯಾರವುಂಟೆ ಸಾರ್, ಐನೂರ‍್ರುಪಾಯಿ ಈಸಿಗಂಡೋರೆ ಕೈ ಕೊಟ್ರು, ಇನ್ನ ನನ್ನಂಥೋರು ಹಾಕಕ್ಕಾದತೆ.”

“ಐನೂರು ಕೊಟ್ಟೋರು ಧರ್ಮಸ್ಥಳದ ಆಣೆ ಮಾಡಿಸಿದರಂತೆ.”

“ಅದೂ ನ್ಯಡಿತು, ಕ್ಯಾರ್‌ಪೇಟೆ ಪಾಂಡುಪುರ ಇಲ್ಯಲ್ಲ ನ್ಯಡೀತು. ಅದ್ಕೆ ಅಲ್ಲಿ ಸಲುಪ ಸುಮಲತನಿಗೆ ಹಿನ್ನೆಡೆ.”

“ಮದ್ದೂರು ಮಳವಳ್ಳಿ ಯಂಗೆ.”

“ಅಲ್ಲಿ ತಮ್ಮಣ್ಣ ಭಾರಿ ದುಡ್ಡು ಬಡದ ಸಾ. ಆ ನನಮಗನಿಗೆ ಎಲ್ಲಿ ಕುಮಾರಣ್ಣ ಎಗರೋಗಿ ಮಂತ್ರಿಗಿರಿ ಹೋಯ್ತದೋ ಅಂತ ಹೆದ್ರಿಕಂಡು ದುಡ್ಡ ಸುರುದುಬುಟ್ಟ.”

“ಪ್ರಾಪರ್ ಮಂಡ್ಯ ಯಂಗೆ.”

“ಅದ್ಯಂಗೊ ಗೊತ್ತಿಲ್ಲ. ನಮ್ಮ ನಾಗಮಂಗಲದ ಬಗ್ಗೆ ಯಲ್ಲ ಡವುಟು ಮಾಡತಿದ್ರು. ಆದ್ರು ನಾವು ನಂಬಿಕಸ್ಥರು ಅಂತ ತೋರಿದೊ ಸಾ.”

“ಇದು ನಿನ್ನಭಿಪ್ರಾಯನ.”

“ನಾನು, ಜನಗಳ ಜೊತೆ ಇದ್ದಿನಿ ಸಾ.”

“ಕುಡುಕರ ಜೊತೇಲೆ?”

“ನನ್ನಂಥ ಕುಡುಕ್ರು ಕುಡುಕರ ಕೂಡೆ ಇರದಿಲ್ಲ ಸಾರ್, ಅವುರಿಗೆ ಮಾತ ಕೇಳೋ ಜನಗಳು ಬೇಕು, ಅದ್ಕೆ ನಾನು ಜನಗಳ ಜೊತೆ ಇರತಿನಿ, ಈ ಕುಮಾರಸ್ವಾಮಿ ಮಾಡಿದ ಕ್ಯಲಸ ಅವುನಿಗೇ ಅಟಗಾಯಿಸಿಗತ್ತಾ ಅದೆ ಸಾ.”

“ಯಂಗೇ?”

“ಅವುನು ಅವುಳ್ಯಾರೊ ಡಿ.ಸಿ ಹಿಡಕಂಡು ತನ್ನ ಮಗನೆಸರು ಮದಲೇಟಿಗೆ ಪಸ್ಟ್ಬರಂಗೆ ಮಾಡಿದ, ಇದರಿಂದ ಸುಮಲತ 20ನೇ ಕ್ಯಾಂಡೇಟಾದ್ರು. ಜೊತೆಗೆ ಮೇಲೆ ಕ್ಯೆಳಗೆ ಯರಡು ಮೂರು ಸುಮಲತ ಬಿದ್ರು.”

“ನಾನು ನೋಡಿದೆ ಅದ.”

“ಇಪ್ಪತ್ಯೆರುಡು ಜನ ಕ್ಯಾಂಡೇಟಾದ್ರಿಂದ ಯರಡು ಲೈನಾಯ್ತು ಸಾ. ಸುಮಲತ ಲೈನಲ್ಲಿ ಮೊದಲಿದ್ದೋನಿಗೆ ಅದ್ಯಂತದೋ ಸಿತಾರ್ ವಾದ್ಯ ಕೊಟ್ಟಿದ್ರು. ಅದು ಒಂಥರ ಜ್ವಾಳದ ಕಡ್ಡಿವರೆ ಮಡಗಿದಂಗಿತ್ತು. ಅಷ್ಟೇ ಸಾಕು ಈ ಯಬ್ಬೆಟ್ಟಿನವ್ಯಲ್ಲ ಆ ಸಿತಾರ್‌ನ ಹುಲ್ಲೊರೆ ಅಂತ ತಿಳಕಂಡು ಒತ್ತಿ ಮಡಿಗ್ಯವೆ.”

“ಅರರೆ, ಅದ್ಯಂಗೆ.”

“ಸುಮಲತನ ಲೈನಲ್ಲಿ ಮೊದಲನೆಯವನು ಅವುನೆ ಅಲ್ಲವ ಸಾ. ಅದು ಯಬ್ಬೆಟ್ಟಿಗಳಿಗ್ಯಂಗೆ ಗೊತ್ತಾಗಬೇಕು. ಅಂತೂ ನಿಖಿಲ್‌ನ ಕಡೆ ಐವತ್ತೋಟು ದಿಕ್ಕು ತಪ್ಯವೆ, ನಮ್ಮದೊಂದು ಬೂತಲ್ಲೇ ಅಂಗಾದ್ರೆ ಉಳಿದ ಕಡೆ.”

“ಅಂಗರೆ ಸಿತಾರಿನೋನು ತಗದ ಅನ್ನು.”

“ಕುಮಾರಣ್ಣ ಮಾಡಿದ್ದು ಅವನೇ ಅನುಭವುಸಂಗಾಯ್ತು ಸಾ.”

“ಥೂತ್ತೇರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...