HomeUncategorizedದಕ್ಷಿಣ ಕನ್ನಡ: ಕೈ ಭಜರಂಗಿ ಅಬ್ಬರಕ್ಕೆ ಕಮಲಿಗ ತತ್ತರ!!

ದಕ್ಷಿಣ ಕನ್ನಡ: ಕೈ ಭಜರಂಗಿ ಅಬ್ಬರಕ್ಕೆ ಕಮಲಿಗ ತತ್ತರ!!

- Advertisement -
- Advertisement -

| ಶುದ್ಧೋದನ |

ಹಿಂದೂತ್ವದ ಒಣ ನಖರಾದಲ್ಲೇ ಹತ್ತು ವರ್ಷದ ಎಂಪಿಗಿರಿ ವ್ಯರ್ಥವಾಗಿ ಕಳೆದ ನಳಿನ್‍ಕುಮಾರ್ ಕಟೀಲ್‍ಗೆ ಮತ ಕೇಳುವ ಮುಖವೂ ಇಲ್ಲವಾಗಿದೆ. ಆತ ಮೋದಿ ಮುಖವಾಡ ಹಾಕಿಕೊಂಡು ಓಡಾಡುತ್ತಿದ್ದಾನೆ. ಮಜಾನ ಎಂದರೆ, ಆರೆಸೆಸ್‍ನ ಕಟ್ಟಾಳುಗಳಿಗೂ ಮೋದಿ ಮಾನ ಪಣಕ್ಕಿಟ್ಟು ನಳಿನ್ ಗೆಲ್ಲಿಸಿಕೊಳ್ಳಬೇಕಾದ ಫಜೀತಿ! ಹಿಂದೂತ್ವದ ಪ್ರಯೋಗ ಶಾಲೆ ದಕ್ಷಿಣ ಕನ್ನಡವೆಂಬ ಒಂದೇ ಒಂದು “ಆಶಾಕಿರಣ” ಬಿಟ್ಟರೆ ಗೆಲ್ಲಲು ಬೇಕಾದ ಬೇರಾವ ಬಲವೂ ಬಿಜೆಪಿಗೆ ಇಲ್ಲವಾಗಿದೆ. ಕಾಂಗ್ರೆಸ್‍ನ ಮಿಥುನ್ ರೈ ಎಂಬ ಬಂಟರ ಖಾನ್‍ದನ್‍ನ ತುಂಟ ತನ್ನ ಭಜರಂಗಿ ಪಡೆಯೊಂದಿಗೆ ಯುದ್ಧ ಭೂಮಿಗೆ ನುಗ್ಗಿದ ಅಬ್ಬರಕ್ಕೇ ಬಿಜೆಪಿಯ ನಳಿನ್ ಥರಗುಟ್ಟಿ ಹೋಗಿದ್ದಾನೆ!!

ವಿಚಿತ್ರವಾದರೂ ಸತ್ಯವೆಂದರೆ, ಕಾಲೆಳೆದಾಟದ ಕಾಂಗ್ರೆಸ್‍ನಲ್ಲಿ ಅಪರೂಪದ ಒಕ್ಕಟ್ಟು ಈ ಬಾರಿ ಮೂಡಿದೆ! ರಮಾನಾಥ ರೈ, ಶಕುಂತಲಾ ಶೆಟ್ಟಿ, ಸೊರಕೆ, ವಸಂತ ಬಾಗೇರಾ, ಜನಾರ್ಧನ ಪೂಜಾರಿ, ಮೋಯ್ಲಿಯಂಥ ಹಿರಿತಲೆಗಳು ಒಂದಾಗಿ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಅಭ್ಯರ್ಥಿ ಮಿಥುನ್‍ನ ರಾಜಗುರು, ಡಿ.ಕೆ.ಶಿವಕುಮಾರ್ ಶಿಷ್ಯನ ಗೆಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಡಿಕೇಶಿಯಿಂದಾಗಿ ಸುಳ್ಯ, ಪುತ್ತೂರು, ಬೆಳ್ತಂಗಡಿ ಕಡೆಯ ಅರೆಭಾಷೆಗೌಡರ ಮತ ಕಾಂಗ್ರೆಸ್ ಕಡೆ. ಮುಖ ಮಾಡುವ ಸಾಧ್ಯತೆಯಿದೆ. ಏಕ ಗಂಟಿಂದ ಬಿಜೆಪಿ ಪಾಲಾಗುತ್ತಿದ್ದ ಬಂಟರ ಮತದಲ್ಲಿ ಈ ಬಾರಿ ಕಾಂಗ್ರೆಸ್‍ಗೆ ಹೆಚ್ಚು ಬರುವುದು ಗ್ಯಾರಂಟಿ ಕಾಂಗ್ರೆಸ್ ಮತ್ತು ಬಿಜೆಪಿಯ ಹುರಿಯಾಳುಗಳು ಇಬ್ಬರೂ ಬಂಟರಾದರೂ ಬಂಟರಿಗೆ ಹೊಸ ಹುಡುಗ ಮಿಥುನ್ ಎಂದರೇ ಇಷ್ಟ.

ಮಿಥುನ್ ಹಿಂದೆ ದೊಡ್ಡದೆಂದು ಭಜರಂಗಿ ಪಡೆಯೋ ಇದೆ. ಆಟ ಹೋದಲ್ಲಿ-ಬಂದಲ್ಲಿ ಬಿಜೆಪಿಗಳ ಮಾಮೂಲಿ ಹಿಂದೂತ್ವದ ಗಿಮಿಕ್ ಮಾಲಕವೇ ಜನರನ್ನು ಸೆಳೆಯುತ್ತಿದ್ದಾನೆ. ಗೋ ಪೂಜೆ ಮಾಡುತ್ತಿದ್ದಾನೆ; ಹನುಮಾನ್ ಚಾಲೀಸ್ ಪಡಿಸುತ್ತಿದ್ದಾನೆ. ಇದು ಕಟ್ಟರ್ ಬಿಜೆಪಿಗಳಿಗೆ ನಡುಕ ಮೂಡಿಸಿದೆ. ಆರೆಸೆಸ್‍ನ ಕರಾವಳಿ ಡಾನ್ ಆಗಿದ್ದ ಕಲ್ಲಡ್ಕ ಭಟ್ಟರ ಬೆಂಬಲವೂ ಮಿಥುನ್ ತಂಡಕ್ಕೆ ಸಿಕ್ಕಿದೆ. ರೇಪಿಸ್ಟ್ ರಾಘುಸ್ವಾಮಿಯ ಬೆಂಬಲಿಸಿದ ಕಾರಣಕ್ಕೆ ಆರೆಸೆಸ್‍ನಲ್ಲಿ ಮೂಲೆ ಗುಂಪಾಗಿರುವ ಕಲ್ಲಡ್ಕ ಭಟ್ಟರ ಅಭಿಮಾನಿ ಬ್ರಾಹ್ಮಣರ ಒಂದು ಪಾಲುಮತ ಕಾಂಗ್ರೆಸ್‍ಗೆ ದಕ್ಕುವ ಸೂಚನೆ ಗೋಚರಿಸುತ್ತಿದೆ. ಡಿಸಿಪಿ ಬ್ಯಾಂಕ್ ಚುನಾವಣೆ ಹೊತ್ತಲ್ಲಿ ಸುಳ್ಯದ “ಸಹಕಾರ ಭಾರತಿ” ಎಂಬ ಚೆಡ್ಡಿ ತಂಡದಲ್ಲಾದ ವಿಪ್ಲವವೂ ಬಿಜೆಪಿಗೆ ಮಾರಕದಾಗಿದೆ. ಈ ಕಿತಾಪತಿ ಹಿಂದೆ ಕಲ್ಲಡ್ಕ ಭಟ್ಟದ ನೆರಳಿದೆ. ತನಗೆ ತಿರುಗಿ ನಿಂತಿರುವ ಶಿಷ್ಯ ನಳಿನ್ ಆಪೋಷನ ಪಡೆಯಲು ಭಟ್ರು ಹಠತೊಟ್ಟಿದ್ದಾರೆ.

ಹದಿನಾರು ಸಾವಿರ ಕೋಟಿ ಅನುದಾನ ತಂದಿರುವ ತಾನು ನಂಟರ್ ಒನ್ ಎಂಪಿಯೆಂದು ಭೋಂಗು ಬಿಡುತ್ತಿರುವ ನಳಿನ್ ಖೋಟಾ ಕಾಮಗಾರಿಯಿಂದ ಆಡಿ ಪರ್ಸೆಂಟೇಜ್ ಸಿಕ್ಕಿದೆಯೇ ಹೊರತು ಕ್ಷೇತ್ರ ಉದ್ಧರವಾಗಿಲ್ಲ. ಪಂಪ್‍ವೆಲ್, ಲೊಕ್ಕೊಟ್ಟು ಮೇಲ್ಸೇತುವೆ ಮಾಡಲಾದೇ ಜನರ ಗೋಳುಹೋಯ್ದುಕೊಂಡ ನಳಿನ್‍ನಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯೂ ಸರಿಯಾಗಿ ಮಾಡಿಸಲಾಗಿಲ್ಲ. ಇದೆಲ್ಲಾ ಜನರ ತೊಂದರೆಗೆ ಸಿಲುಕಿಸಿ ನಳಿನ್ ಎಂದರೆ ಕ್ಯಾಕರಿಸಿ ಉಗಿವಂತೆ ಮೂಡಿದೆ. ಬಿಜೆಪಿಯ ಕಾರ್ಯಕರ್ತರು, ಗೋಮುಖದ, ಅನೈತಿಕ ಪೋಲೀಸ್‍ಗಿರಿ ಕಾದಾಟದಲ್ಲಿ ಸಿಕ್ಕಿಬಿದ್ದು ಜೈಲು, ಆಸ್ಪತ್ರೆ ಪಾಲಾದರೂ ನಳಿನ್ ಕಣ್ಣೆತ್ತಿಯೂ ನೋಡಲಿಲ್ಲ. ದಕ್ಷಿಣ ಕನ್ನಡ ಹೆಮ್ಮೆಯ ವಿಜಯಾ ಬ್ಯಾಂಕ್ ಗುಜರಾತಿಗಳ ಹಾನಿಕೋರ ಬರೋಡ ಬ್ಯಾಂಕ್‍ನಲ್ಲಿ ವಿಲೀನವಾದರೂ ಈ ಬಂಟರ ಕುಲ ಘಾತುಕನಿಂದ ಏನೂ ಮಾಡಲಾಗಲಿಲ್ಲ. ಮಂಗಳೂರಿನ ರಸ್ತೆಯೊಂದಕ್ಕೆ ಇದೇ ವಿಜಯಾ ಬ್ಯಾಂಕ್ ಸಂಸ್ಥಾಪಕ ಸುಂದರರಾಮ ಶೆಟ್ಟಿ ಹೆಸರಿಡಲು ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ ಎಂದು ಬೊಬ್ಬೆ ಎಬ್ಬಿಸಿ ಕಳೆದ ಅಸೆಂಬ್ಲಿ ಇಲೆಕ್ಷನ್‍ನಲ್ಲಿ ಲಾಭ ಮಾಡಿಕೊಂಡಿದ್ದ ನಳಿನ್ ಗ್ಯಾಂಗ್‍ಗೆ ಈ ವಿಜಯಾ ಬ್ಯಾಂಕ್ ವಿಲೀನ ತಿರುಗು ಬಾಣವಾಗಿದೆ.

ಜಾತಿ ಲೆಕ್ಕಚಾರದಲ್ಲಿ ಬಹುಸಂಖ್ಯಾತ ಬಿಲ್ಲವರೇ ನಿರ್ಣಾಯಕರು ಈ ಸಮುದಾಯದ 40 ವರ್ಷದೊಳಗಿನ ಯುವ ಮತದಾರರು ಹಿಂದೂತ್ವದ ಕರಿನೀಂದ ತಲೆ ತೊಳಸಿಕೊಂಡವರು. ಹಾಗಾಗಿ 40 ವರ್ಷ ಮೇಲ್ಪಟ್ಟ ಬಿಲ್ಲವರ ಪರಿವರ್ತನೆಯಲ್ಲ ಮಿಥುನ್, ರಮಾನಾಥರೈ, ಇವಾನ್, ಬಂಗೇರಾ ಬಳಗ ಯಶಸ್ವಿಯಾದರೆ ನಳಿನ್‍ಗೆ ಟಕ್ಕರ್ ಖಂಡಿತ! ಬಿಲ್ಲವರ ಪ್ರಶ್ನಾತೀತ ಹಿರಿಯ ನಾಯಕ ಜನಾರ್ಧನ ಪೂಜಾರಿ “ಮಿಥುನ್ ಗೆಲ್ಲದಿದ್ರೆ ನನ್ನ ಆರಾಧ್ಯ ದೈವ ಕುದ್ರೋಳಿ ಗೋಕರ್ಣನಾಥ ದೇವಾಲಯಕ್ಕೆ ಕಾಲಿಡಲಾರೆ” ಎಂದು ಶಪಥ ಮಾಡಿರುವುದು ಬಿಲ್ಲವರಲ್ಲಿ ಪರಿಣಾಮ ಬೀರುವ ಲಕ್ಷಣ ಕಾಣಿಸುತ್ತಿದೆ. ಬಿಲ್ಲವರ ಹಿರಿಯರಿಗೂ ಬಿಜೆಪಿ ತಮ್ಮ ಕುಲದ ಹುಂಬ ಹುಡುಗರ ರಕ್ತಪಾತಕ್ಕೆ ಬಳಸಿ ಬಲಿಹಾಕಿದ “ವಾಸ್ತವ” ಅರಿವಾದಂತೆದೆ. ಇದೆಲ್ಲ ಒಳ ಜಗಳದಿಂದ ತತ್ತರಿಸುತ್ತಿರುವ ಬಿಜೆಪಿಗೆ ಮೈನಸ್!!

ಎಸ್‍ಡಿಪಿಐ ಅಸ್ತಿತ್ವ ತೋರಿಸಲು ಗವಣಿಸುತ್ತಿದೆ. ಕಳೆದ ಬಾರಿ ಇಪ್ಪತ್ತೇಳು ಸಾವಿರ ಬಿಲ್ಲವರ ಮತ ಪಡೆದ ಎಸ್‍ಡಿಪಿಐ ಈ ಬಾರಿಯೂ ಕಾಂಗ್ರೆಸ್‍ನ ಹಣೆಬರಹ ನಿರ್ಧರಿಸುವ ಪಾತ್ರವಾಡಲಿದೆ. ಎಸ್‍ಡಿಪಿಐ ಮತ ಕಸಿದಂತೆ ಕಾಂಗ್ರೆಸ್ ಬಡವಾಗುತ್ತದೆ. ದಕ್ಷಿಣ ಕನ್ನಡದ ನಟ್ಟ ನಡುವೆ ನಿಂತು ಸುತ್ತಲೂ ಕಣ್ಣು ಹಾಯಿಸಿದರೆ ಬಿಜೆಪಿಯ ಭದ್ರ ಕೋಟೆಗೆ ಕಾಂಗ್ರೆಸ್ ಲಗ್ಗೆ ಹಾಕಿರುವುದು ಸ್ಪಷ್ಟವಾಗುತ್ತದೆ. ಕಾಂಗ್ರೆಸ್‍ನ ಮಿಥುನ್ ಮತ್ತು ಬಿಜೆಪಿಯ ನಳಿನ್ ಪೈಕಿ ಯಾರೂ ಬೇಕಿದ್ದರೂ ಸಣ್ಣ ಅಂತರದಲ್ಲಿ ಗೆಲ್ಲಬಹುದೆಂಬ ಜಿದ್ದಾಜಿದ್ದಿ ನಡೆಯುತ್ತಿದೆ!!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...