HomeUncategorizedದಕ್ಷಿಣ ಕನ್ನಡ: ಕೈ ಭಜರಂಗಿ ಅಬ್ಬರಕ್ಕೆ ಕಮಲಿಗ ತತ್ತರ!!

ದಕ್ಷಿಣ ಕನ್ನಡ: ಕೈ ಭಜರಂಗಿ ಅಬ್ಬರಕ್ಕೆ ಕಮಲಿಗ ತತ್ತರ!!

- Advertisement -
- Advertisement -

| ಶುದ್ಧೋದನ |

ಹಿಂದೂತ್ವದ ಒಣ ನಖರಾದಲ್ಲೇ ಹತ್ತು ವರ್ಷದ ಎಂಪಿಗಿರಿ ವ್ಯರ್ಥವಾಗಿ ಕಳೆದ ನಳಿನ್‍ಕುಮಾರ್ ಕಟೀಲ್‍ಗೆ ಮತ ಕೇಳುವ ಮುಖವೂ ಇಲ್ಲವಾಗಿದೆ. ಆತ ಮೋದಿ ಮುಖವಾಡ ಹಾಕಿಕೊಂಡು ಓಡಾಡುತ್ತಿದ್ದಾನೆ. ಮಜಾನ ಎಂದರೆ, ಆರೆಸೆಸ್‍ನ ಕಟ್ಟಾಳುಗಳಿಗೂ ಮೋದಿ ಮಾನ ಪಣಕ್ಕಿಟ್ಟು ನಳಿನ್ ಗೆಲ್ಲಿಸಿಕೊಳ್ಳಬೇಕಾದ ಫಜೀತಿ! ಹಿಂದೂತ್ವದ ಪ್ರಯೋಗ ಶಾಲೆ ದಕ್ಷಿಣ ಕನ್ನಡವೆಂಬ ಒಂದೇ ಒಂದು “ಆಶಾಕಿರಣ” ಬಿಟ್ಟರೆ ಗೆಲ್ಲಲು ಬೇಕಾದ ಬೇರಾವ ಬಲವೂ ಬಿಜೆಪಿಗೆ ಇಲ್ಲವಾಗಿದೆ. ಕಾಂಗ್ರೆಸ್‍ನ ಮಿಥುನ್ ರೈ ಎಂಬ ಬಂಟರ ಖಾನ್‍ದನ್‍ನ ತುಂಟ ತನ್ನ ಭಜರಂಗಿ ಪಡೆಯೊಂದಿಗೆ ಯುದ್ಧ ಭೂಮಿಗೆ ನುಗ್ಗಿದ ಅಬ್ಬರಕ್ಕೇ ಬಿಜೆಪಿಯ ನಳಿನ್ ಥರಗುಟ್ಟಿ ಹೋಗಿದ್ದಾನೆ!!

ವಿಚಿತ್ರವಾದರೂ ಸತ್ಯವೆಂದರೆ, ಕಾಲೆಳೆದಾಟದ ಕಾಂಗ್ರೆಸ್‍ನಲ್ಲಿ ಅಪರೂಪದ ಒಕ್ಕಟ್ಟು ಈ ಬಾರಿ ಮೂಡಿದೆ! ರಮಾನಾಥ ರೈ, ಶಕುಂತಲಾ ಶೆಟ್ಟಿ, ಸೊರಕೆ, ವಸಂತ ಬಾಗೇರಾ, ಜನಾರ್ಧನ ಪೂಜಾರಿ, ಮೋಯ್ಲಿಯಂಥ ಹಿರಿತಲೆಗಳು ಒಂದಾಗಿ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಅಭ್ಯರ್ಥಿ ಮಿಥುನ್‍ನ ರಾಜಗುರು, ಡಿ.ಕೆ.ಶಿವಕುಮಾರ್ ಶಿಷ್ಯನ ಗೆಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಡಿಕೇಶಿಯಿಂದಾಗಿ ಸುಳ್ಯ, ಪುತ್ತೂರು, ಬೆಳ್ತಂಗಡಿ ಕಡೆಯ ಅರೆಭಾಷೆಗೌಡರ ಮತ ಕಾಂಗ್ರೆಸ್ ಕಡೆ. ಮುಖ ಮಾಡುವ ಸಾಧ್ಯತೆಯಿದೆ. ಏಕ ಗಂಟಿಂದ ಬಿಜೆಪಿ ಪಾಲಾಗುತ್ತಿದ್ದ ಬಂಟರ ಮತದಲ್ಲಿ ಈ ಬಾರಿ ಕಾಂಗ್ರೆಸ್‍ಗೆ ಹೆಚ್ಚು ಬರುವುದು ಗ್ಯಾರಂಟಿ ಕಾಂಗ್ರೆಸ್ ಮತ್ತು ಬಿಜೆಪಿಯ ಹುರಿಯಾಳುಗಳು ಇಬ್ಬರೂ ಬಂಟರಾದರೂ ಬಂಟರಿಗೆ ಹೊಸ ಹುಡುಗ ಮಿಥುನ್ ಎಂದರೇ ಇಷ್ಟ.

ಮಿಥುನ್ ಹಿಂದೆ ದೊಡ್ಡದೆಂದು ಭಜರಂಗಿ ಪಡೆಯೋ ಇದೆ. ಆಟ ಹೋದಲ್ಲಿ-ಬಂದಲ್ಲಿ ಬಿಜೆಪಿಗಳ ಮಾಮೂಲಿ ಹಿಂದೂತ್ವದ ಗಿಮಿಕ್ ಮಾಲಕವೇ ಜನರನ್ನು ಸೆಳೆಯುತ್ತಿದ್ದಾನೆ. ಗೋ ಪೂಜೆ ಮಾಡುತ್ತಿದ್ದಾನೆ; ಹನುಮಾನ್ ಚಾಲೀಸ್ ಪಡಿಸುತ್ತಿದ್ದಾನೆ. ಇದು ಕಟ್ಟರ್ ಬಿಜೆಪಿಗಳಿಗೆ ನಡುಕ ಮೂಡಿಸಿದೆ. ಆರೆಸೆಸ್‍ನ ಕರಾವಳಿ ಡಾನ್ ಆಗಿದ್ದ ಕಲ್ಲಡ್ಕ ಭಟ್ಟರ ಬೆಂಬಲವೂ ಮಿಥುನ್ ತಂಡಕ್ಕೆ ಸಿಕ್ಕಿದೆ. ರೇಪಿಸ್ಟ್ ರಾಘುಸ್ವಾಮಿಯ ಬೆಂಬಲಿಸಿದ ಕಾರಣಕ್ಕೆ ಆರೆಸೆಸ್‍ನಲ್ಲಿ ಮೂಲೆ ಗುಂಪಾಗಿರುವ ಕಲ್ಲಡ್ಕ ಭಟ್ಟರ ಅಭಿಮಾನಿ ಬ್ರಾಹ್ಮಣರ ಒಂದು ಪಾಲುಮತ ಕಾಂಗ್ರೆಸ್‍ಗೆ ದಕ್ಕುವ ಸೂಚನೆ ಗೋಚರಿಸುತ್ತಿದೆ. ಡಿಸಿಪಿ ಬ್ಯಾಂಕ್ ಚುನಾವಣೆ ಹೊತ್ತಲ್ಲಿ ಸುಳ್ಯದ “ಸಹಕಾರ ಭಾರತಿ” ಎಂಬ ಚೆಡ್ಡಿ ತಂಡದಲ್ಲಾದ ವಿಪ್ಲವವೂ ಬಿಜೆಪಿಗೆ ಮಾರಕದಾಗಿದೆ. ಈ ಕಿತಾಪತಿ ಹಿಂದೆ ಕಲ್ಲಡ್ಕ ಭಟ್ಟದ ನೆರಳಿದೆ. ತನಗೆ ತಿರುಗಿ ನಿಂತಿರುವ ಶಿಷ್ಯ ನಳಿನ್ ಆಪೋಷನ ಪಡೆಯಲು ಭಟ್ರು ಹಠತೊಟ್ಟಿದ್ದಾರೆ.

ಹದಿನಾರು ಸಾವಿರ ಕೋಟಿ ಅನುದಾನ ತಂದಿರುವ ತಾನು ನಂಟರ್ ಒನ್ ಎಂಪಿಯೆಂದು ಭೋಂಗು ಬಿಡುತ್ತಿರುವ ನಳಿನ್ ಖೋಟಾ ಕಾಮಗಾರಿಯಿಂದ ಆಡಿ ಪರ್ಸೆಂಟೇಜ್ ಸಿಕ್ಕಿದೆಯೇ ಹೊರತು ಕ್ಷೇತ್ರ ಉದ್ಧರವಾಗಿಲ್ಲ. ಪಂಪ್‍ವೆಲ್, ಲೊಕ್ಕೊಟ್ಟು ಮೇಲ್ಸೇತುವೆ ಮಾಡಲಾದೇ ಜನರ ಗೋಳುಹೋಯ್ದುಕೊಂಡ ನಳಿನ್‍ನಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯೂ ಸರಿಯಾಗಿ ಮಾಡಿಸಲಾಗಿಲ್ಲ. ಇದೆಲ್ಲಾ ಜನರ ತೊಂದರೆಗೆ ಸಿಲುಕಿಸಿ ನಳಿನ್ ಎಂದರೆ ಕ್ಯಾಕರಿಸಿ ಉಗಿವಂತೆ ಮೂಡಿದೆ. ಬಿಜೆಪಿಯ ಕಾರ್ಯಕರ್ತರು, ಗೋಮುಖದ, ಅನೈತಿಕ ಪೋಲೀಸ್‍ಗಿರಿ ಕಾದಾಟದಲ್ಲಿ ಸಿಕ್ಕಿಬಿದ್ದು ಜೈಲು, ಆಸ್ಪತ್ರೆ ಪಾಲಾದರೂ ನಳಿನ್ ಕಣ್ಣೆತ್ತಿಯೂ ನೋಡಲಿಲ್ಲ. ದಕ್ಷಿಣ ಕನ್ನಡ ಹೆಮ್ಮೆಯ ವಿಜಯಾ ಬ್ಯಾಂಕ್ ಗುಜರಾತಿಗಳ ಹಾನಿಕೋರ ಬರೋಡ ಬ್ಯಾಂಕ್‍ನಲ್ಲಿ ವಿಲೀನವಾದರೂ ಈ ಬಂಟರ ಕುಲ ಘಾತುಕನಿಂದ ಏನೂ ಮಾಡಲಾಗಲಿಲ್ಲ. ಮಂಗಳೂರಿನ ರಸ್ತೆಯೊಂದಕ್ಕೆ ಇದೇ ವಿಜಯಾ ಬ್ಯಾಂಕ್ ಸಂಸ್ಥಾಪಕ ಸುಂದರರಾಮ ಶೆಟ್ಟಿ ಹೆಸರಿಡಲು ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ ಎಂದು ಬೊಬ್ಬೆ ಎಬ್ಬಿಸಿ ಕಳೆದ ಅಸೆಂಬ್ಲಿ ಇಲೆಕ್ಷನ್‍ನಲ್ಲಿ ಲಾಭ ಮಾಡಿಕೊಂಡಿದ್ದ ನಳಿನ್ ಗ್ಯಾಂಗ್‍ಗೆ ಈ ವಿಜಯಾ ಬ್ಯಾಂಕ್ ವಿಲೀನ ತಿರುಗು ಬಾಣವಾಗಿದೆ.

ಜಾತಿ ಲೆಕ್ಕಚಾರದಲ್ಲಿ ಬಹುಸಂಖ್ಯಾತ ಬಿಲ್ಲವರೇ ನಿರ್ಣಾಯಕರು ಈ ಸಮುದಾಯದ 40 ವರ್ಷದೊಳಗಿನ ಯುವ ಮತದಾರರು ಹಿಂದೂತ್ವದ ಕರಿನೀಂದ ತಲೆ ತೊಳಸಿಕೊಂಡವರು. ಹಾಗಾಗಿ 40 ವರ್ಷ ಮೇಲ್ಪಟ್ಟ ಬಿಲ್ಲವರ ಪರಿವರ್ತನೆಯಲ್ಲ ಮಿಥುನ್, ರಮಾನಾಥರೈ, ಇವಾನ್, ಬಂಗೇರಾ ಬಳಗ ಯಶಸ್ವಿಯಾದರೆ ನಳಿನ್‍ಗೆ ಟಕ್ಕರ್ ಖಂಡಿತ! ಬಿಲ್ಲವರ ಪ್ರಶ್ನಾತೀತ ಹಿರಿಯ ನಾಯಕ ಜನಾರ್ಧನ ಪೂಜಾರಿ “ಮಿಥುನ್ ಗೆಲ್ಲದಿದ್ರೆ ನನ್ನ ಆರಾಧ್ಯ ದೈವ ಕುದ್ರೋಳಿ ಗೋಕರ್ಣನಾಥ ದೇವಾಲಯಕ್ಕೆ ಕಾಲಿಡಲಾರೆ” ಎಂದು ಶಪಥ ಮಾಡಿರುವುದು ಬಿಲ್ಲವರಲ್ಲಿ ಪರಿಣಾಮ ಬೀರುವ ಲಕ್ಷಣ ಕಾಣಿಸುತ್ತಿದೆ. ಬಿಲ್ಲವರ ಹಿರಿಯರಿಗೂ ಬಿಜೆಪಿ ತಮ್ಮ ಕುಲದ ಹುಂಬ ಹುಡುಗರ ರಕ್ತಪಾತಕ್ಕೆ ಬಳಸಿ ಬಲಿಹಾಕಿದ “ವಾಸ್ತವ” ಅರಿವಾದಂತೆದೆ. ಇದೆಲ್ಲ ಒಳ ಜಗಳದಿಂದ ತತ್ತರಿಸುತ್ತಿರುವ ಬಿಜೆಪಿಗೆ ಮೈನಸ್!!

ಎಸ್‍ಡಿಪಿಐ ಅಸ್ತಿತ್ವ ತೋರಿಸಲು ಗವಣಿಸುತ್ತಿದೆ. ಕಳೆದ ಬಾರಿ ಇಪ್ಪತ್ತೇಳು ಸಾವಿರ ಬಿಲ್ಲವರ ಮತ ಪಡೆದ ಎಸ್‍ಡಿಪಿಐ ಈ ಬಾರಿಯೂ ಕಾಂಗ್ರೆಸ್‍ನ ಹಣೆಬರಹ ನಿರ್ಧರಿಸುವ ಪಾತ್ರವಾಡಲಿದೆ. ಎಸ್‍ಡಿಪಿಐ ಮತ ಕಸಿದಂತೆ ಕಾಂಗ್ರೆಸ್ ಬಡವಾಗುತ್ತದೆ. ದಕ್ಷಿಣ ಕನ್ನಡದ ನಟ್ಟ ನಡುವೆ ನಿಂತು ಸುತ್ತಲೂ ಕಣ್ಣು ಹಾಯಿಸಿದರೆ ಬಿಜೆಪಿಯ ಭದ್ರ ಕೋಟೆಗೆ ಕಾಂಗ್ರೆಸ್ ಲಗ್ಗೆ ಹಾಕಿರುವುದು ಸ್ಪಷ್ಟವಾಗುತ್ತದೆ. ಕಾಂಗ್ರೆಸ್‍ನ ಮಿಥುನ್ ಮತ್ತು ಬಿಜೆಪಿಯ ನಳಿನ್ ಪೈಕಿ ಯಾರೂ ಬೇಕಿದ್ದರೂ ಸಣ್ಣ ಅಂತರದಲ್ಲಿ ಗೆಲ್ಲಬಹುದೆಂಬ ಜಿದ್ದಾಜಿದ್ದಿ ನಡೆಯುತ್ತಿದೆ!!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...