Homeಕರ್ನಾಟಕಮಂಗಳೂರು: ಮುಸ್ಲಿಮರ ವ್ಯಾಪಾರ ನಿಷೇಧಿಸಿದೆ ಎಂದು ಹಾಕಲಾಗಿದ್ದ ಬ್ಯಾನರ್‌ ತೆರವು

ಮಂಗಳೂರು: ಮುಸ್ಲಿಮರ ವ್ಯಾಪಾರ ನಿಷೇಧಿಸಿದೆ ಎಂದು ಹಾಕಲಾಗಿದ್ದ ಬ್ಯಾನರ್‌ ತೆರವು

‘ದೇವಾಲಯಗಳ ಬಳಿ ಮುಸ್ಲಿಮರು ವ್ಯಾಪಾರ ಮಾಡುವಂತಿಲ್ಲ ಎಂಬ ವಾದಕ್ಕೆ ಕಾನೂನು, ಸಂವಿಧಾನದಲ್ಲಿ ಅವಕಾಶವಿಲ್ಲ’

- Advertisement -
- Advertisement -

ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಜಾತ್ರೆಯಲ್ಲಿ ದೇವಸ್ಥಾನದ ಬಳಿ ಮುಸ್ಲಿಮರು ವ್ಯಾಪಾರ ಚಟುವಟಿಕೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಹಾಕಲಾಗಿದ್ದ ಬ್ಯಾನರ್‌ಗಳನ್ನು ಮಂಗಳೂರು ಪೊಲೀಸರು ತೆರವು ಮಾಡಿದ್ದಾರೆ. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದವರು ಬ್ಯಾನರ್‌ಗಳನ್ನು ಹಾಕಿದ್ದಾರೆ ಎಂದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಜಾತ್ರೆಯು ಜನವರಿ 15ರಂದು ಪ್ರಾರಂಭವಾಗಿ ಜನವರಿ 21ರಂದು ಕೊನೆಗೊಳ್ಳಲಿದೆ. ಬಲಪಂಥೀಯ ಸಂಘಟನೆಗಳು ಹಾಕಿರುವ ಬ್ಯಾನರ್‌ಗಳಲ್ಲಿ ನವೆಂಬರ್ 19ರಂದು ಮಂಗಳೂರಿನಲ್ಲಿ ನಡೆದ ಕುಕ್ಕರ್ ಸ್ಫೋಟದ ಬಗ್ಗೆ ಉಲ್ಲೇಖಿಸಲಾಗಿದೆ. ಪ್ರಕರಣದಲ್ಲಿ ಮೊಹಮ್ಮದ್ ಶಾರಿಕ್ ಎಂಬ ವ್ಯಕ್ತಿಯನ್ನು ಬಂಧಿಸಲಾಯಿತು. ಆತ ಕದ್ರಿ ಮಂಜುನಾಥ ದೇವಾಲಯವನ್ನು ಟಾರ್ಗೆಟ್ ಮಾಡಿದ್ದ ಎಂದು ಆರೋಪಿಸಲಾಗಿದೆ. ಇಂತಹ ‘ಮನಸ್ಸು’ ಹೊಂದಿರುವವರು ಮತ್ತು ಮೂರ್ತಿ ಪೂಜೆಯನ್ನು ವಿರೋಧಿಸುವವರು ಪೂಜಾ ಸ್ಥಳದ ಬಳಿ ಜಾತ್ರೆಯ ಸಮಯದಲ್ಲಿ ವ್ಯಾಪಾರ ಮತ್ತು ವ್ಯವಹಾರದಲ್ಲಿ ತೊಡಗುವಂತಿಲ್ಲ ಎಂದು ಬ್ಯಾನರ್‌ನಲ್ಲಿ ಹೇಳಲಾಗಿದೆ.

ಹಿಂದೂ ಧರ್ಮದ ಆಚರಣೆಗಳನ್ನು ನಂಬುವ ವ್ಯಾಪಾರಿಗಳಿಗೆ ಮಾತ್ರ ದೇವಾಲಯದ ಬಳಿ ವ್ಯಾಪಾರ ಮತ್ತು ವ್ಯವಹಾರವನ್ನು ಮುಂದುವರಿಸಲು ಅವಕಾಶವಿದೆ ಎಂದು ಬ್ಯಾನರ್‌ಗಳಲ್ಲಿ ತಿಳಿಸಲಾಗಿದೆ.

ಆದರೆ, ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇವಸ್ಥಾನದ ಆಡಳಿತ ಮಂಡಳಿಯು ದೇವಸ್ಥಾನದ ಜಾತ್ರೆಯ ಆಸುಪಾಸಿನಲ್ಲಿ ಹಾಕಲಾಗಿದ್ದ ಬ್ಯಾನರ್‌ಗೆ ಒಪ್ಪಿಗೆ ನೀಡಿಲ್ಲ. ಶಾಂತಿ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಪೊಲೀಸರು ಬ್ಯಾನರ್‌ಗಳನ್ನು ತೆಗೆಸಿದ್ದಾರೆ. ಈ ಸಂಬಂಧ ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಿಂದೂಯೇತರ ಸಮುದಾಯಗಳು ದೇವಸ್ಥಾನದ ಬಳಿ ವ್ಯಾಪಾರ ಮಾಡಬಾರದು ಎಂದು ಹಿಂದುತ್ವ ಮತೀಯ ಸಂಘಟನೆಗಳು ಆಗಾಗ್ಗೆ ವಿವಾದ ಸೃಷ್ಟಿಸುವುದು ಸಾಮಾನ್ಯವಾಗಿದೆ. 2022ರ ಮಾರ್ಚ್‌ನಲ್ಲಿ ಇಂತಹದ್ದೇ ನಿರ್ಬಂಧ ಉಡುಪಿಯ ಕಾಪುವಿನಲ್ಲಿ ವರದಿಯಾಗಿತ್ತು. ಕರ್ನಾಟಕ ವಿಧಾನಸಭೆಯಲ್ಲೂ ಈ ಕುರಿತು ಚರ್ಚೆಯಾಗಿತ್ತು. ಬಿಜೆಪಿ ಸರ್ಕಾರ ಪರೋಕ್ಷವಾಗಿ ಈ ನಡೆಯನ್ನು ಸಮರ್ಥಿಸಲು ಯತ್ನಿಸಿತ್ತು.

ಹಿಂದೂ ದೇವಾಲಯಗಳ ಬಳಿ ಮುಸ್ಲಿಮರ ವ್ಯಾಪಾರಕ್ಕೆ ನಿಷೇಧ; ಕಾನೂನು ಏನು ಹೇಳುತ್ತದೆ?

2022ರಂದು ಮಾರ್ಚ್ 23ರಂದು ಬುಧವಾರ ಕರ್ನಾಟಕ ವಿಧಾನಸಭೆಯಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡುತ್ತಾ ಮುಸ್ಲಿಂ ಮಾರಾಟಗಾರರಿಗೆ ನಿರ್ಬಂಧ ವಿಧಿಸುವ ಪೋಸ್ಟರ್‌ಗಳನ್ನು ಸಮರ್ಥಿಸಲು ಪ್ರಯತ್ನಿಸಿದ್ದರು.

2002ರಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಕಾಯಿದೆಗೆ ನಿಯಮಗಳನ್ನು ರೂಪಿಸುವಾಗ ನಿಯಮ 12ರ ಪ್ರಕಾರ ಸಂಸ್ಥೆಯ ಬಳಿ ಇರುವ ಜಮೀನು, ಕಟ್ಟಡ ಅಥವಾ ನಿವೇಶನ ಸೇರಿದಂತೆ ಯಾವುದೇ ಆಸ್ತಿಯನ್ನು ಹಿಂದೂಯೇತರರಿಗೆ ಭೋಗ್ಯಕ್ಕೆ ನೀಡಬಾರದು ಎಂದಿರುವುದನ್ನು ಉಲ್ಲೇಖಿಸಿದ್ದರು.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಕಾಯಿದೆಯನ್ನು ಮೂಲತಃ 1997ರಲ್ಲಿ ರಚಿಸಲಾಯಿತು. ಆದರೆ 2001ರಲ್ಲಿ ಜಾರಿಗೆ ಬಂದಿತು. ಕಾನೂನು ಶೀಘ್ರದಲ್ಲೇ ವಿವಾದವನ್ನು ಉಂಟುಮಾಡಿತು ಮತ್ತು ಕರ್ನಾಟಕ ಹೈಕೋರ್ಟ್ 2006ರಲ್ಲಿ ಕೆಲವು ಷರತ್ತುಗಳ ಕಾರಣದಿಂದ ಕಾಯ್ದೆಯ ಕಾರ್ಯಾಚರಣೆಯನ್ನು ತಡೆಹಿಡಿಯಿತು.

ಹಿಂದೂಯೇತರರು ಅಂಗಡಿಗಳನ್ನು ದೇವಸ್ಥಾನಗಳಲ್ಲಿ ಅಥವಾ ಸಮೀಪದಲ್ಲಿ ನಡೆಸುವುದನ್ನು ನಿಷೇಧಿಸುವ ಅಥವಾ ಅಂತಹ ನಿಷೇಧಗಳನ್ನು ಜಾರಿಗೆ ತರಲು ದೇವಾಲಯದ ಅಧಿಕಾರಿಗಳಿಗೆ ಅಧಿಕಾರ ನೀಡುವ ಯಾವುದೇ ಷರತ್ತು ಈ ಕಾಯ್ದೆಯಲ್ಲಿಯೇ ಇಲ್ಲ.

2012ರಲ್ಲಿ ಕಾಯ್ದೆಗೆ ಕೆಲವು ತಿದ್ದುಪಡಿಗಳನ್ನು ಸರ್ಕಾರ ತಂದಿತು. ಈ ನಿಯಮಗಳಿಂದಲೇ ಈ ವಿಷಯದ ಬಗ್ಗೆ ಸ್ವಲ್ಪ ಮಟ್ಟಿಗೆ ಗೊಂದಲಕ್ಕೆ ಅವಕಾಶವಿದೆ. ಕರ್ನಾಟಕ ಕಾನೂನು ಸಚಿವರು ಹೇಳಿರುವುದಕ್ಕೆ ವ್ಯತಿರಿಕ್ತವಾಗಿ, ಹಿಂದೂಯೇತರರಿಗೆ ವ್ಯಾಪಾರ ಮಾಡಲು ಅವಕಾಶ ನೀಡುವ ಬಗ್ಗೆ ನಿಯಮ 12 ಏನನ್ನೂ ಹೇಳುವುದಿಲ್ಲ. ದೇವಾಲಯದ ಸೇವಕರು ಮತ್ತು ಅರ್ಚಕರ ನೇಮಕಾತಿಗೆ ಸಂಬಂಧಿಸಿದಂತೆ ನಿಯಮ 12 ಹೇಳುತ್ತದೆ.

ಆದಾಗ್ಯೂ, ನಿಯಮ 31, ಉಪ-ಕಲಂ 12, “ಸಂಸ್ಥೆಯ ಸಮೀಪದಲ್ಲಿರುವ ಭೂಮಿ, ಕಟ್ಟಡ ಅಥವಾ ಸೈಟ್‌ಗಳನ್ನು ಒಳಗೊಂಡಂತೆ ಯಾವುದೇ ಆಸ್ತಿಯನ್ನು ಹಿಂದೂಯೇತರರಿಗೆ ಗುತ್ತಿಗೆ ನೀಡಲಾಗುವುದಿಲ್ಲ” ಎಂದು ಹೇಳುತ್ತದೆ. ನಿಯಮ 31 ಕಾಯ್ದೆಯ ಅಡಿಯಲ್ಲಿ ಅಧಿಸೂಚಿಸಲಾದ ಹಿಂದೂ ಧಾರ್ಮಿಕ ಸಂಸ್ಥೆಯ ಒಡೆತನದ ಸ್ಥಿರ ಆಸ್ತಿಯ ಗುತ್ತಿಗೆಗೆ ಸಂಬಂಧಿಸಿದಂತೆ ಹೇಳುತ್ತದೆ.

ಆದರೆ ಇದರರ್ಥ ಹಿಂದೂ ಹಬ್ಬಗಳಲ್ಲಿ ಮುಸ್ಲಿಂ ಮಾರಾಟಗಾರರಿಗೆ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗುವುದಿಲ್ಲವೇ?

ಹಿರಿಯ ವಕೀಲ ಚಂದರ್ ಉದಯ್ ಸಿಂಗ್ ಅವರು ಇಲ್ಲ ಎಂದು ಹೇಳುತ್ತಾರೆ. ಏಕೆಂದರೆ ನಿಯಮ 31 ದೇವಸ್ಥಾನದ ಒಡೆತನದ ಸ್ಥಿರ ಆಸ್ತಿಯ ದೀರ್ಘಾವಧಿಯ ಗುತ್ತಿಗೆಗೆ ಮಾತ್ರ ಅನ್ವಯಿಸುತ್ತದೆ (ಭೂಮಿ ಗುತ್ತಿಗೆ 30 ವರ್ಷಗಳವರೆಗೆ ಮತ್ತು ಅಂಗಡಿಗಳು, ಕಟ್ಟಡಗಳ ಗುತ್ತಿಗೆ ಐದು ವರ್ಷಗಳವರೆಗೆ).

ಹಬ್ಬದ ಸಮಯದಲ್ಲಿ ವರ್ತಕರು ಮಳಿಗೆ ಅಥವಾ ಸ್ಥಳಗಳನ್ನು ಅಲ್ಪಾವಧಿಗೆ ಬಳಸುವ ಪರವಾನಗಿಗೆ ಇದು ಅನ್ವಯಿಸುವುದಿಲ್ಲ.

ವಾಸ್ತವವಾಗಿ, ಈ ‘ಜಾತ್ರೆಗಳ’ ನಡವಳಿಕೆಗೆ ಸಂಬಂಧಿಸಿದಂತೆ ಒಂದು ನಿರ್ದಿಷ್ಟ ನಿಯಮವಿದೆ. ನಿಯಮಗಳು 40-ಡಿ ದೇವಸ್ಥಾನದ ಜಾತ್ರೆಗಳಿಗೆ ಸಂಬಂಧಿಸಿದೆ. ಇದು ಹಿಂದೂಗಳಲ್ಲದವರ ಬಗ್ಗೆ ಏನನ್ನೂ ಹೇಳುವುದಿಲ್ಲ. 40-ಡಿ ನಿಯಮವು ಈ ಉತ್ಸವಗಳಲ್ಲಿ ಶುಲ್ಕವನ್ನು ಸಂಗ್ರಹಿಸುವ ಹಕ್ಕಿನ ಕುರಿತು, ಹರಾಜು ಅಥವಾ ಟೆಂಡರ್ ಮೂಲಕ ಹೆಚ್ಚಿನ ಬಿಡ್ದಾರರಿಗೆ ಹಂಚುವ ವಿಧಾನದ ಕುರಿತು ಹೇಳುತ್ತದೆ.

ಈ ನಿಯಮವನ್ನು 2012ರಲ್ಲಿ ಸೇರಿಸಲಾಗಿದೆ. ಕಳೆದ 10 ವರ್ಷಗಳಿಂದಲೂ ಮುಸ್ಲಿಂ ವ್ಯಾಪಾರಿಗಳು ಹಬ್ಬಗಳಲ್ಲಿ ಮಳಿಗೆಗಳನ್ನು ಹಾಕುವಲ್ಲಿ ಯಾವುದೇ ತೊಂದರೆಯನ್ನು ಎದುರಿಸಿಲ್ಲ. 2002 ರಿಂದ ಜಾರಿಯಲ್ಲಿರುವ ನಿಯಮ 31, ಹಿಂದೂ ಹಬ್ಬಗಳಲ್ಲಿ ಮುಸ್ಲಿಮರು ಮಳಿಗೆಗಳನ್ನು ಹಾಕುವುದನ್ನು ನಿಷೇಧಿಸುವುಕ್ಕೆ ಈ 20 ವರ್ಷಗಳಲ್ಲಿ ಎಂದಿಗೂ ಬಳಕೆಯಾಗಿಲ್ಲ.

ದೇವಾಲಯದ ಅಧಿಕಾರಿಗಳು ಸಂವಿಧಾನದ ಆರ್ಟಿಕಲ್ 15(2) ಅನ್ನು ಉಲ್ಲಂಘಿಸುತ್ತಿದ್ದಾರೆಯೇ?

ಮುಸ್ಲಿಂ ಮಾರಾಟಗಾರರನ್ನು ಜಾತ್ರೆಗಳಿಂದ ನಿಷೇಧಿಸುವ ಕ್ರಮಗಳನ್ನು ದೇವಸ್ಥಾನದ ಅಧಿಕಾರಿಗಳು ಕಾಯಿದೆ ಅಥವಾ ನಿಯಮಗಳ ಆಧಾರದ ಮೇಲೆ ಸಮರ್ಥಿಸಲು ಸಾಧ್ಯವಿಲ್ಲ.ಅವರು ಅಗತ್ಯವಾಗಿ ಕಾನೂನುಬಾಹಿರವಾಗಿ ಏನಾದರೂ ಮಾಡುತ್ತಿದ್ದಾರೆ ಎಂದು ಅರ್ಥವಲ್ಲ.

ಅವರು ಸರ್ಕಾರಿ ಅಧಿಕಾರಿಗಳಲ್ಲದ ಕಾರಣ, ಸಂವಿಧಾನದ 15 (1) ವಿಧಿಯಲ್ಲಿನ ತಾರತಮ್ಯ ವಿರೋಧಿ ಅವರು ಷರತ್ತಿಗೆ ಒಳಪಡುವುದಿಲ್ಲ. “ಸರ್ಕಾರವು ಯಾವುದೇ ನಾಗರಿಕರ ವಿರುದ್ಧ ಕೇವಲ ಧರ್ಮ, ಜನಾಂಗ, ಜಾತಿ, ಹುಟ್ಟಿದ ಸ್ಥಳ, ಲಿಂಗ ಅಥವಾ ಅವುಗಳಲ್ಲಿ ಯಾವುದಾದರೂ ಆಧಾರದ ಮೇಲೆ ತಾರತಮ್ಯ ಮಾಡಬಾರದು” ಎಂದು ಸಂವಿಧಾನ 15 (1) ವಿಧಿ ಹೇಳುತ್ತದೆ.

ಆದರೆ 15ನೇ ವಿಧಿಯ ಉಪ-ಕಲಂ 2 ರಲ್ಲಿ, ನಾಗರಿಕರ ನಡುವಿನ ತಾರತಮ್ಯವನ್ನೂ ನಿಷೇಧಿಸಲಾಗಿದೆ. “ಯಾವುದೇ ನಾಗರಿಕನು ಕೇವಲ ಧರ್ಮ, ಜನಾಂಗ, ಜಾತಿ, ಲಿಂಗ, ಜನ್ಮಸ್ಥಳ ಅಥವಾ ಅವುಗಳಲ್ಲಿ ಯಾವುದಾದರೂ ಆಧಾರದ ಮೇಲೆ ಯಾವುದೇ ಅಂಗವೈಕಲ್ಯ, ಹೊಣೆಗಾರಿಕೆ, ನಿರ್ಬಂಧ ಅಥವಾ ಷರತ್ತುಗಳಿಗೆ ಒಳಪಟ್ಟಿರುವುದಿಲ್ಲ: (ಎ) ಅಂಗಡಿಗಳು, ಸಾರ್ವಜನಿಕ ರೆಸ್ಟೋರೆಂಟ್‌ಗಳಿಗೆ ಪ್ರವೇಶ, ಹೋಟೆಲ್‌ಗಳು ಮತ್ತು ಸಾರ್ವಜನಿಕ ಮನರಂಜನೆಯ ಅರಮನೆಗಳು; ಅಥವಾ (ಬಿ) ಬಾವಿಗಳು, ತೊಟ್ಟಿಗಳು, ಸ್ನಾನಘಟ್ಟಗಳು, ರಸ್ತೆಗಳು ಮತ್ತು ಸಾರ್ವಜನಿಕ ರೆಸಾರ್ಟ್‌ಗಳ ಬಳಕೆಯನ್ನು ಸಂಪೂರ್ಣವಾಗಿ ಅಥವಾ ಭಾಗಶಃ ರಾಜ್ಯದ ನಿಧಿಯಿಂದ ನಿರ್ವಹಿಸಲಾಗುತ್ತದೆ ಅಥವಾ ಸಾರ್ವಜನಿಕರ ಬಳಕೆಗೆ ಸಮರ್ಪಿಸಲಾಗಿದೆ” ಎನ್ನಲಾಗಿದೆ.

ಈ ಮಳಿಗೆಗಳನ್ನು ಹಂಚುವ ಪ್ರಕ್ರಿಯೆಯು ವಾಣಿಜ್ಯ ಪ್ರಕ್ರಿಯೆಯಾಗಿರುವುದರಿಂದ, ಮಾರಾಟಗಾರರು ಬಿಡ್‌ಗಳನ್ನು ಸಲ್ಲಿಸುವ ಮೂಲಕ ಆಗಿರುವುದರಿಂದ, ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವುದು ಸಂಪೂರ್ಣವಾಗಿ ಆರ್ಟಿಕಲ್ 15(2) ಅನ್ನು ಉಲ್ಲಂಘಿಸುತ್ತದೆ ಎಂದು ವಾದಿಸಬಹುದು.

“ಈ ಕ್ರಮವು ಆರ್ಟಿಕಲ್ 15 (2) ರ ಉಲ್ಲಂಘನೆಯಾಗಿದೆ. ಏಕೆಂದರೆ ನೀವು ಸಂವಿಧಾನದ ರಚನೆಯ ಇತಿಹಾಸವನ್ನು ನೋಡಿದರೆ, ‘ಅಂಗಡಿಗಳು’ ಎಂಬ ಪದವನ್ನು ನಿಬಂಧನೆಯ ಸಂದರ್ಭದಲ್ಲಿ ಬಹಿಷ್ಕಾರ-ವಿರೋಧಿ ನಿಬಂಧನೆ ಎಂದು ಅರ್ಥೈಸಿಕೊಳ್ಳಬೇಕು” ಎಂದು ಸಾಂವಿಧಾನಿಕ ವಿದ್ವಾಂಸ ಮತ್ತು ವಕೀಲ ಗೌತಮ್ ಭಾಟಿಯಾ ‘ದಿ ಕ್ವಿಂಟ್‌’ನೊಂದಿಗೆ ವಿವರಿಸಿದ್ದರು.

“ಧರ್ಮ, ಜಾತಿ ಮತ್ತು ಮುಂತಾದವುಗಳ ಆಧಾರದ ಮೇಲೆ ಬಹಿಷ್ಕಾರಗಳ ಮೂಲಕ ಇತರರನ್ನು ಆರ್ಥಿಕ ಜೀವನದಿಂದ ಹೊರಗಿಡುವುದನ್ನು ನಿಷೇಧಿಸಲಾಗಿದೆ” ಎನ್ನುವ ಗೌತಮ್‌, “ಇದೇ ಮಾತನ್ನು ಐಎಂಎ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ” ಎಂದಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...