Homeಕರ್ನಾಟಕಮಸ್ಕಿ ಬೆವರು ಬೆಂಗಳೂರಿನಲ್ಲಿ: ಬಸವಕಲ್ಯಾಣದಲ್ಲಿ ನಾರಾಯಣರಾವ್ ಸರಳತೆ ಉಳಿಯುವುದೇ?

ಮಸ್ಕಿ ಬೆವರು ಬೆಂಗಳೂರಿನಲ್ಲಿ: ಬಸವಕಲ್ಯಾಣದಲ್ಲಿ ನಾರಾಯಣರಾವ್ ಸರಳತೆ ಉಳಿಯುವುದೇ?

- Advertisement -
- Advertisement -

ಮಸ್ಕಿ ಎಂಬ ಪುಟ್ಟ ತಾಲೂಕಿನ ಮ್ಯಾಲ ಐದಾರು ನೀರಾವರಿ ಯೋಜನೆ ಹೇರಿಬಿಟ್ಟಿದೆ ನಮ್ಮ ಸರ್ಕಾರ! ತಮ್ಮನ್ನು ಅಧಿಕಾರಕ್ಕೆ ತಂದರು ಎಂಬ ಏಕೈಕ ಕಾರಣಕ್ಕೆ ಇಂತಹ ಕ್ಷೇತ್ರಗಳಿಗೆ ಸಿಕ್ಕಾಪಟ್ಟೆ ಯೋಜನೆ ಘೋಷಣೆ ಮಾಡಿಬಿಟ್ಟಿದೆ ಯಡಿಯೂರಪ್ಪ ಸರ್ಕಾರ!

ನಂಜುಂಡಪ್ಪ ವರದಿಯ ಅತಿ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿ ಈ ಮಸ್ಕಿಯೂ ಒಂದು. ಇಲ್ಲಿನ ತಳ ಸಮುದಾಯದ ಜನಕ್ಕೆ ಭೂಮಿ ಇಲ್ಲ. ಅವರೆಲ್ಲ ಬೆಂಗಳೂರಿಗೋ, ಮಂಗಳೂರಿಗೋ ಹೋಗಿ ಬೆವರು ಹರಿಸುತ್ತಾರೆ, ಹೊಟ್ಟೆ ತುಂಬಿಸಿಕೊಳ್ಳಲು.

ಮೀಸಲು ಕ್ಷೇತ್ರ ಮಸ್ಕಿ ಎರಡು ಜಿಲ್ಲೆಗಳಲ್ಲಿ ಹರಿದು ಹಂಚಿ ಹೋಗಿದೆ. ಕೊಪ್ಪಳ ಮತ್ತು ರಾಯಚೂರಿನ ನೂರಾರು ಗ್ರಾಮಗಳನ್ನು ಸೇರಿಸಿ ಈ ಮಸ್ಕಿ ಕ್ಷೇತ್ರ ಮಾಡಲಾಗಿದೆ. ಸಿಂಧನೂರಿನಲ್ಲಿ ತುಂಗಭದ್ರೆ ಹರಿಯುತ್ತಾಳೆ, ಆ ಭಾಗ್ಯ ಮಸ್ಕಿ ಜನರಿಗಿಲ್ಲ. ಅವರು ಈಗ ಪಕ್ಕದಲ್ಲೇ ಹಾದು ಹೋಗುವ ಕೃಷ್ಣೆಯ ನೀರು ಕೇಳುತ್ತಿದ್ದಾರೆ. ಮುಖ್ಯವಾಹಿನಿ ಮಾಧ್ಯಮಕ್ಕೆ ಇದು ಒಂದು ಇಶ್ಯೂ ಆಗಲೇ ಇಲ್ಲ!

ಮಸ್ಕಿ ಮ್ಯಾಲ ದೊಡ್ಡ ಭಾರ

107 ಹಳ್ಳಿಗಳು ಅದರಲ್ಲೂ ಮುಖ್ಯವಾಗಿ 58 ಹಳ್ಳಿಗಳು ತಮ್ಮ ಭೂಮಿಗೆ ನೀರು ಬೇಕು ಅನ್ನುತ್ತಿವೆ. ಆದರೆ ಕೃಷ್ಣಾದಿಂದ ನೀರು ಕೊಡಲು ಆಗದು ಎಂದು ಅಧಿಕಾರಿಗಳು ಸಲ್ಲಿಸಿದ ವರದಿಯನ್ನೇ ಪ್ರತಾಪಗೌಡ ಪಾಟೀಲರು ಸತ್ಯ ಎಂದು ನಂಬಿದ್ದಾರೆ.

ಈಗ ಏನಾಗಿದೆ ಅಂದರೆ, ಮಸ್ಕಿಯ ಮೇಲೆ ಹಲವು ನೀರಾವರಿ ಪ್ರಾಜೆಕ್ಟ್ ಹೇರಲಾಗಿದೆ. ಇವೆಲ್ಲ ಕಾಟಾಚಾರದ ಯೋಜನೆಗಳು. ಬಜೆಟ್ ಅಲೊಕೇಷನ್ ಇಲ್ಲವೇ ಇಲ್ಲ! ಕೃಷ್ಣಾ ನದಿಯಿಂದ 17 ಕೆರೆ ತುಂಬಿಸುವ ಯೊಜನೆಯಲ್ಲಿ ಈಗ 87 ಕೋಟಿ ರೂ ಬಿಡುಗಡೆ ಆಗಿದೆ. ಅದು ಕಂಟ್ರಾಕ್ಟರ್‌ಗಳ ಪಾಲಾಗಿದೆ ಎಂಬ ದೊಡ್ಡ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಮಸ್ಕಿ ಉಪಚುನಾವಣೆ: NRBC_5A ನೀರಾವರಿ ಹೋರಾಟ ಫಲಿತಾಂಶ ಬದಲಿಸಬಲ್ಲದೇ?

’58 ಹಳ್ಳಿಯ ಜನ 100 ದಿನದಿಂದ ಪ್ರತಿಭಟನೆ ಮಾಡ್ತಾ ತಮ್ಮ ಭೂಮಿಗೆ ನೀರು ಬೇಕು ಅಂತಾರಲ್ಲರಿ?’ ಎಂದು ನಾವು ಬಿಜೆಪಿ ಅಭ್ಯರ್ಥಿ ಪ್ರತಾಪಗೌಡರನ್ನು ಕೇಳಿದೆವು. ‘’ಹಂಗೆಲ್ಲ ನೀರ್ ಕೋಡೋಕ್ ಆಗಲ್ಲ. ಅದೊಂದು ಅವೈಜ್ಞಾನಿಕ ಯೋಜನಾ ಅದ.. ನಾವ್ ಜನ್ರಿಗೆ ತಿಳವಳಿಕೆ ಕೊಟ್ಟೀವಿ. ಅಲ್ಲಿ ಯಾರೋ ಸ್ವಲ್ಪ ಮಂದಿ ಸ್ಟ್ರೈಕ್ ಮಾಡಾಕ ಹತ್ಯಾರ’ ಎಂದರು.
ಅಲ್ಲ ನೀವು ಪರ್ಯಾಯದ ಬಗ್ಗೆ ವಿಚಾರನಾ ಮಾಡಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರತಾಪಗೌಡರು, ನಂದವಾಡಗಿ ನೀರಾವರಿ ಯೋಜನಾ ಅದ, ಕೋಟೆಕಲ್ ಬಸವಣ್ಣ ಏತ ನೀರಾವರಿ ಯೋಜನಾನೂ ಐತಿ, 500 ಕೋಟಿ ರೂ ಕೊಟ್ಟು ಕೆರೆ ತುಂಬಿಸ್ತಾ ಇದ್ದೀವಿ’ ಎಂದರು.

ಮಸ್ಕಿಯಲ್ಲಿ ಗುಳೆ ಸಮಸ್ಯೆ ವ್ಯಾಪಕವಾಗಿದೆ. ಇಲ್ಲಿನ ಎಸ್‌ಸಿ/ಎಸ್‌ಟಿ ಸಮುದಾಯದ ಜನರು ಕೂಲಿಗಾಗಿ ಬೆಂಗಳೂರು, ಮಂಗಳೂರು, ಗೋವಾ ಕಡೆ ವಲಸೆ ಹೋಗುವುದು ನಿತ್ಯದ ಕತೆಯೇ ಆಗಿದೆ.

ಆದರೆ ಗೆಜೆಟ್‌ನಲ್ಲಿ ಮಸ್ಕಿ ಭರಪೂರ ನೀರಾವರಿ ಆಗಿಬಿಟ್ಟಿದೆ.. ಅದನ್ನೆ ಪ್ರತಾಪಗೌಡ ಪಾಟೀಲರು ನಂಬಿದ್ದಾರೆ. ಜನ ಏನು ನಂಬುತ್ತಾರೆ ಎಂಬುವುದು ಚುನಾವಣಾ ಫಲಿತಾಂಶದಲ್ಲಿ ಗೋಚರವಾಗಲಿದೆ.

ಬಸವಕಲ್ಯಾಣ: ಆಟ ‘ಟಫ್’ ಇದೆ, ಬಟ್ ನಾರಾಯಣರಾವ್ ಸರಳತೆ ಚಾಲ್ತಿಗೆ ಬಂದಿದೆ!

ಆರಾಮಾಗಿ ಎತ್ತಿಕೊಳ್ಳಬಹುದಾದ ಈ ಕ್ಷೇತ್ರದಲ್ಲಿ ಬಿಜೆಪಿ ಸಿಕ್ಕಾಪಟ್ಟೆ ರೊಕ್ಕ ಹರಿಸಿಯೂ ನಿಟ್ಟುಸಿರು ಬಿಡ್ತಾ ಇದೆ, ಅದಕ್ಕೆ ಕಾರಣ ಮೃತ ಕಾಂಗ್ರಸ್ ಶಾಸಕ ನಾರಾಯಣರಾವ್ ಸರಳತೆ!
ಸದನದಲ್ಲಿ ಸಿಕ್ಕ ಒಂದೇ ಅವಕಾಶದಿಂದ ರೊಕ್ಕದ ರಾಜಕೀಯ, ಬಾಂಬೇ ಗಮ್ಮತ್ತು ಎಲ್ಲವನ್ನೂ ಬಟಾಬಯಲು ಮಾಡಿದ ನಾರಾಯಣರಾವ್ ಅವರ ಪತ್ನಿ ಈಗ ಕಾಂಗ್ರೆಸ್ ಅಭ್ಯರ್ಥಿ.

ಇದನ್ನೂ ಓದಿ: ಲಿಂಗಾಯಿತರು ನನಗೆ ಮತ ಕೊಡದಿದ್ದರೂ ಪರವಾಗಿಲ್ಲ, ಬಸವ ತತ್ವದ ಮೇಲೆ ನಡೆದರೆ ಸಾಕು: ಶಾಸಕ ಬಿ.ನಾರಾಯಣರಾವ್ 

ಬಿಜೆಪಿಯಿಂದ ನಿಂತಿರುವ ಶರಣು ಸದಲಗ ಕಲಬುರ್ಗಿ ಜಿಲ್ಲೆಯ ಮನುಷ್ಯ ಆಗಿರೋ ಕಾರಣ ಬೀದರ್‌ನ ಬಸವಕಲ್ಯಾಣದಲ್ಲಿ ಈಗ ಒಂದು ಅಪಸ್ವರ ಸಹಜವಾಗಿಯೇ ಎದ್ದಿದೆ.
ನಾರಾಯಣರಾವ್ ಸದನದಲ್ಲಿ ಮಾಡಿದ ಕೊನೆಯ ಭಾಷಣ ಈಗ ಫಲಿತಾಂಶವನ್ನು ನಿರ್ಧರಿಸುವ ಮಟ್ಟಕ್ಕೆ ಬಂದಿದೆ. ‘ಸಿದ್ರಾಮಯ್ಯ ಸಾಹೇಬ್ರು ಟಿಕೇಟ್ ಕೊಟ್ರು’ ಎಂಬ ನಾರಾಯಣರಾವ್ ಮಾತು ಈಗ ಜನಪ್ರಿಯವಾಗಿದ್ದು, ಅವರ ‘ಸಿದ್ರಾಮಯ್ಯ’ ——— ಕೂಡ ಈ ಕ್ಷೇತ್ರವನ್ನು ಸೀರಿಯಸ್ ಆಗಿ ಪರಿಗಣಿಸಿದ್ದಾರೆ ಎನ್ನಲಾಗಿದೆ.

ಹಾಗೆಯೇ ಬಿಜೆಪಿ ಸಂಸದ ಭಗವಂತ ಖೂಬಾರವರ ಪುತ್ರ ಮಲ್ಲಿಕಾರರ್ಜುನ ಖೂಬಾ ಟಿಕೆಟ್ ಸಿಗದೇ ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ. ನಾಳೆ ನಡೆಯುವ ಪ್ರೆಸ್‌ಮೀಟ್‌ನಲ್ಲಿ ಖೂಬಾ ತಮ್ಮ ಒಲವು ಯಾರ ಕಡೆ ಎಂದು ಘೋಷಣೆ ಮಾಡಲಿದ್ದಾರೆ.


ಇದನ್ನೂ ಓದಿ: ಸದನದಲ್ಲಿಂದು ಗಮನಸೆಳೆದ ಕಾಂಗ್ರೆಸ್ಸಿನ ಶಾಸಕ ಬಿ.ನಾರಾಯಣರಾವ್ ರವರ ಮಾತುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...