Homeಕರ್ನಾಟಕಮಸ್ಕಿ ಬೆವರು ಬೆಂಗಳೂರಿನಲ್ಲಿ: ಬಸವಕಲ್ಯಾಣದಲ್ಲಿ ನಾರಾಯಣರಾವ್ ಸರಳತೆ ಉಳಿಯುವುದೇ?

ಮಸ್ಕಿ ಬೆವರು ಬೆಂಗಳೂರಿನಲ್ಲಿ: ಬಸವಕಲ್ಯಾಣದಲ್ಲಿ ನಾರಾಯಣರಾವ್ ಸರಳತೆ ಉಳಿಯುವುದೇ?

- Advertisement -
- Advertisement -

ಮಸ್ಕಿ ಎಂಬ ಪುಟ್ಟ ತಾಲೂಕಿನ ಮ್ಯಾಲ ಐದಾರು ನೀರಾವರಿ ಯೋಜನೆ ಹೇರಿಬಿಟ್ಟಿದೆ ನಮ್ಮ ಸರ್ಕಾರ! ತಮ್ಮನ್ನು ಅಧಿಕಾರಕ್ಕೆ ತಂದರು ಎಂಬ ಏಕೈಕ ಕಾರಣಕ್ಕೆ ಇಂತಹ ಕ್ಷೇತ್ರಗಳಿಗೆ ಸಿಕ್ಕಾಪಟ್ಟೆ ಯೋಜನೆ ಘೋಷಣೆ ಮಾಡಿಬಿಟ್ಟಿದೆ ಯಡಿಯೂರಪ್ಪ ಸರ್ಕಾರ!

ನಂಜುಂಡಪ್ಪ ವರದಿಯ ಅತಿ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿ ಈ ಮಸ್ಕಿಯೂ ಒಂದು. ಇಲ್ಲಿನ ತಳ ಸಮುದಾಯದ ಜನಕ್ಕೆ ಭೂಮಿ ಇಲ್ಲ. ಅವರೆಲ್ಲ ಬೆಂಗಳೂರಿಗೋ, ಮಂಗಳೂರಿಗೋ ಹೋಗಿ ಬೆವರು ಹರಿಸುತ್ತಾರೆ, ಹೊಟ್ಟೆ ತುಂಬಿಸಿಕೊಳ್ಳಲು.

ಮೀಸಲು ಕ್ಷೇತ್ರ ಮಸ್ಕಿ ಎರಡು ಜಿಲ್ಲೆಗಳಲ್ಲಿ ಹರಿದು ಹಂಚಿ ಹೋಗಿದೆ. ಕೊಪ್ಪಳ ಮತ್ತು ರಾಯಚೂರಿನ ನೂರಾರು ಗ್ರಾಮಗಳನ್ನು ಸೇರಿಸಿ ಈ ಮಸ್ಕಿ ಕ್ಷೇತ್ರ ಮಾಡಲಾಗಿದೆ. ಸಿಂಧನೂರಿನಲ್ಲಿ ತುಂಗಭದ್ರೆ ಹರಿಯುತ್ತಾಳೆ, ಆ ಭಾಗ್ಯ ಮಸ್ಕಿ ಜನರಿಗಿಲ್ಲ. ಅವರು ಈಗ ಪಕ್ಕದಲ್ಲೇ ಹಾದು ಹೋಗುವ ಕೃಷ್ಣೆಯ ನೀರು ಕೇಳುತ್ತಿದ್ದಾರೆ. ಮುಖ್ಯವಾಹಿನಿ ಮಾಧ್ಯಮಕ್ಕೆ ಇದು ಒಂದು ಇಶ್ಯೂ ಆಗಲೇ ಇಲ್ಲ!

ಮಸ್ಕಿ ಮ್ಯಾಲ ದೊಡ್ಡ ಭಾರ

107 ಹಳ್ಳಿಗಳು ಅದರಲ್ಲೂ ಮುಖ್ಯವಾಗಿ 58 ಹಳ್ಳಿಗಳು ತಮ್ಮ ಭೂಮಿಗೆ ನೀರು ಬೇಕು ಅನ್ನುತ್ತಿವೆ. ಆದರೆ ಕೃಷ್ಣಾದಿಂದ ನೀರು ಕೊಡಲು ಆಗದು ಎಂದು ಅಧಿಕಾರಿಗಳು ಸಲ್ಲಿಸಿದ ವರದಿಯನ್ನೇ ಪ್ರತಾಪಗೌಡ ಪಾಟೀಲರು ಸತ್ಯ ಎಂದು ನಂಬಿದ್ದಾರೆ.

ಈಗ ಏನಾಗಿದೆ ಅಂದರೆ, ಮಸ್ಕಿಯ ಮೇಲೆ ಹಲವು ನೀರಾವರಿ ಪ್ರಾಜೆಕ್ಟ್ ಹೇರಲಾಗಿದೆ. ಇವೆಲ್ಲ ಕಾಟಾಚಾರದ ಯೋಜನೆಗಳು. ಬಜೆಟ್ ಅಲೊಕೇಷನ್ ಇಲ್ಲವೇ ಇಲ್ಲ! ಕೃಷ್ಣಾ ನದಿಯಿಂದ 17 ಕೆರೆ ತುಂಬಿಸುವ ಯೊಜನೆಯಲ್ಲಿ ಈಗ 87 ಕೋಟಿ ರೂ ಬಿಡುಗಡೆ ಆಗಿದೆ. ಅದು ಕಂಟ್ರಾಕ್ಟರ್‌ಗಳ ಪಾಲಾಗಿದೆ ಎಂಬ ದೊಡ್ಡ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಮಸ್ಕಿ ಉಪಚುನಾವಣೆ: NRBC_5A ನೀರಾವರಿ ಹೋರಾಟ ಫಲಿತಾಂಶ ಬದಲಿಸಬಲ್ಲದೇ?

’58 ಹಳ್ಳಿಯ ಜನ 100 ದಿನದಿಂದ ಪ್ರತಿಭಟನೆ ಮಾಡ್ತಾ ತಮ್ಮ ಭೂಮಿಗೆ ನೀರು ಬೇಕು ಅಂತಾರಲ್ಲರಿ?’ ಎಂದು ನಾವು ಬಿಜೆಪಿ ಅಭ್ಯರ್ಥಿ ಪ್ರತಾಪಗೌಡರನ್ನು ಕೇಳಿದೆವು. ‘’ಹಂಗೆಲ್ಲ ನೀರ್ ಕೋಡೋಕ್ ಆಗಲ್ಲ. ಅದೊಂದು ಅವೈಜ್ಞಾನಿಕ ಯೋಜನಾ ಅದ.. ನಾವ್ ಜನ್ರಿಗೆ ತಿಳವಳಿಕೆ ಕೊಟ್ಟೀವಿ. ಅಲ್ಲಿ ಯಾರೋ ಸ್ವಲ್ಪ ಮಂದಿ ಸ್ಟ್ರೈಕ್ ಮಾಡಾಕ ಹತ್ಯಾರ’ ಎಂದರು.
ಅಲ್ಲ ನೀವು ಪರ್ಯಾಯದ ಬಗ್ಗೆ ವಿಚಾರನಾ ಮಾಡಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರತಾಪಗೌಡರು, ನಂದವಾಡಗಿ ನೀರಾವರಿ ಯೋಜನಾ ಅದ, ಕೋಟೆಕಲ್ ಬಸವಣ್ಣ ಏತ ನೀರಾವರಿ ಯೋಜನಾನೂ ಐತಿ, 500 ಕೋಟಿ ರೂ ಕೊಟ್ಟು ಕೆರೆ ತುಂಬಿಸ್ತಾ ಇದ್ದೀವಿ’ ಎಂದರು.

ಮಸ್ಕಿಯಲ್ಲಿ ಗುಳೆ ಸಮಸ್ಯೆ ವ್ಯಾಪಕವಾಗಿದೆ. ಇಲ್ಲಿನ ಎಸ್‌ಸಿ/ಎಸ್‌ಟಿ ಸಮುದಾಯದ ಜನರು ಕೂಲಿಗಾಗಿ ಬೆಂಗಳೂರು, ಮಂಗಳೂರು, ಗೋವಾ ಕಡೆ ವಲಸೆ ಹೋಗುವುದು ನಿತ್ಯದ ಕತೆಯೇ ಆಗಿದೆ.

ಆದರೆ ಗೆಜೆಟ್‌ನಲ್ಲಿ ಮಸ್ಕಿ ಭರಪೂರ ನೀರಾವರಿ ಆಗಿಬಿಟ್ಟಿದೆ.. ಅದನ್ನೆ ಪ್ರತಾಪಗೌಡ ಪಾಟೀಲರು ನಂಬಿದ್ದಾರೆ. ಜನ ಏನು ನಂಬುತ್ತಾರೆ ಎಂಬುವುದು ಚುನಾವಣಾ ಫಲಿತಾಂಶದಲ್ಲಿ ಗೋಚರವಾಗಲಿದೆ.

ಬಸವಕಲ್ಯಾಣ: ಆಟ ‘ಟಫ್’ ಇದೆ, ಬಟ್ ನಾರಾಯಣರಾವ್ ಸರಳತೆ ಚಾಲ್ತಿಗೆ ಬಂದಿದೆ!

ಆರಾಮಾಗಿ ಎತ್ತಿಕೊಳ್ಳಬಹುದಾದ ಈ ಕ್ಷೇತ್ರದಲ್ಲಿ ಬಿಜೆಪಿ ಸಿಕ್ಕಾಪಟ್ಟೆ ರೊಕ್ಕ ಹರಿಸಿಯೂ ನಿಟ್ಟುಸಿರು ಬಿಡ್ತಾ ಇದೆ, ಅದಕ್ಕೆ ಕಾರಣ ಮೃತ ಕಾಂಗ್ರಸ್ ಶಾಸಕ ನಾರಾಯಣರಾವ್ ಸರಳತೆ!
ಸದನದಲ್ಲಿ ಸಿಕ್ಕ ಒಂದೇ ಅವಕಾಶದಿಂದ ರೊಕ್ಕದ ರಾಜಕೀಯ, ಬಾಂಬೇ ಗಮ್ಮತ್ತು ಎಲ್ಲವನ್ನೂ ಬಟಾಬಯಲು ಮಾಡಿದ ನಾರಾಯಣರಾವ್ ಅವರ ಪತ್ನಿ ಈಗ ಕಾಂಗ್ರೆಸ್ ಅಭ್ಯರ್ಥಿ.

ಇದನ್ನೂ ಓದಿ: ಲಿಂಗಾಯಿತರು ನನಗೆ ಮತ ಕೊಡದಿದ್ದರೂ ಪರವಾಗಿಲ್ಲ, ಬಸವ ತತ್ವದ ಮೇಲೆ ನಡೆದರೆ ಸಾಕು: ಶಾಸಕ ಬಿ.ನಾರಾಯಣರಾವ್ 

ಬಿಜೆಪಿಯಿಂದ ನಿಂತಿರುವ ಶರಣು ಸದಲಗ ಕಲಬುರ್ಗಿ ಜಿಲ್ಲೆಯ ಮನುಷ್ಯ ಆಗಿರೋ ಕಾರಣ ಬೀದರ್‌ನ ಬಸವಕಲ್ಯಾಣದಲ್ಲಿ ಈಗ ಒಂದು ಅಪಸ್ವರ ಸಹಜವಾಗಿಯೇ ಎದ್ದಿದೆ.
ನಾರಾಯಣರಾವ್ ಸದನದಲ್ಲಿ ಮಾಡಿದ ಕೊನೆಯ ಭಾಷಣ ಈಗ ಫಲಿತಾಂಶವನ್ನು ನಿರ್ಧರಿಸುವ ಮಟ್ಟಕ್ಕೆ ಬಂದಿದೆ. ‘ಸಿದ್ರಾಮಯ್ಯ ಸಾಹೇಬ್ರು ಟಿಕೇಟ್ ಕೊಟ್ರು’ ಎಂಬ ನಾರಾಯಣರಾವ್ ಮಾತು ಈಗ ಜನಪ್ರಿಯವಾಗಿದ್ದು, ಅವರ ‘ಸಿದ್ರಾಮಯ್ಯ’ ——— ಕೂಡ ಈ ಕ್ಷೇತ್ರವನ್ನು ಸೀರಿಯಸ್ ಆಗಿ ಪರಿಗಣಿಸಿದ್ದಾರೆ ಎನ್ನಲಾಗಿದೆ.

ಹಾಗೆಯೇ ಬಿಜೆಪಿ ಸಂಸದ ಭಗವಂತ ಖೂಬಾರವರ ಪುತ್ರ ಮಲ್ಲಿಕಾರರ್ಜುನ ಖೂಬಾ ಟಿಕೆಟ್ ಸಿಗದೇ ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ. ನಾಳೆ ನಡೆಯುವ ಪ್ರೆಸ್‌ಮೀಟ್‌ನಲ್ಲಿ ಖೂಬಾ ತಮ್ಮ ಒಲವು ಯಾರ ಕಡೆ ಎಂದು ಘೋಷಣೆ ಮಾಡಲಿದ್ದಾರೆ.


ಇದನ್ನೂ ಓದಿ: ಸದನದಲ್ಲಿಂದು ಗಮನಸೆಳೆದ ಕಾಂಗ್ರೆಸ್ಸಿನ ಶಾಸಕ ಬಿ.ನಾರಾಯಣರಾವ್ ರವರ ಮಾತುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...