Homeಕರ್ನಾಟಕಮಸ್ಕಿ ಬೆವರು ಬೆಂಗಳೂರಿನಲ್ಲಿ: ಬಸವಕಲ್ಯಾಣದಲ್ಲಿ ನಾರಾಯಣರಾವ್ ಸರಳತೆ ಉಳಿಯುವುದೇ?

ಮಸ್ಕಿ ಬೆವರು ಬೆಂಗಳೂರಿನಲ್ಲಿ: ಬಸವಕಲ್ಯಾಣದಲ್ಲಿ ನಾರಾಯಣರಾವ್ ಸರಳತೆ ಉಳಿಯುವುದೇ?

- Advertisement -
- Advertisement -

ಮಸ್ಕಿ ಎಂಬ ಪುಟ್ಟ ತಾಲೂಕಿನ ಮ್ಯಾಲ ಐದಾರು ನೀರಾವರಿ ಯೋಜನೆ ಹೇರಿಬಿಟ್ಟಿದೆ ನಮ್ಮ ಸರ್ಕಾರ! ತಮ್ಮನ್ನು ಅಧಿಕಾರಕ್ಕೆ ತಂದರು ಎಂಬ ಏಕೈಕ ಕಾರಣಕ್ಕೆ ಇಂತಹ ಕ್ಷೇತ್ರಗಳಿಗೆ ಸಿಕ್ಕಾಪಟ್ಟೆ ಯೋಜನೆ ಘೋಷಣೆ ಮಾಡಿಬಿಟ್ಟಿದೆ ಯಡಿಯೂರಪ್ಪ ಸರ್ಕಾರ!

ನಂಜುಂಡಪ್ಪ ವರದಿಯ ಅತಿ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿ ಈ ಮಸ್ಕಿಯೂ ಒಂದು. ಇಲ್ಲಿನ ತಳ ಸಮುದಾಯದ ಜನಕ್ಕೆ ಭೂಮಿ ಇಲ್ಲ. ಅವರೆಲ್ಲ ಬೆಂಗಳೂರಿಗೋ, ಮಂಗಳೂರಿಗೋ ಹೋಗಿ ಬೆವರು ಹರಿಸುತ್ತಾರೆ, ಹೊಟ್ಟೆ ತುಂಬಿಸಿಕೊಳ್ಳಲು.

ಮೀಸಲು ಕ್ಷೇತ್ರ ಮಸ್ಕಿ ಎರಡು ಜಿಲ್ಲೆಗಳಲ್ಲಿ ಹರಿದು ಹಂಚಿ ಹೋಗಿದೆ. ಕೊಪ್ಪಳ ಮತ್ತು ರಾಯಚೂರಿನ ನೂರಾರು ಗ್ರಾಮಗಳನ್ನು ಸೇರಿಸಿ ಈ ಮಸ್ಕಿ ಕ್ಷೇತ್ರ ಮಾಡಲಾಗಿದೆ. ಸಿಂಧನೂರಿನಲ್ಲಿ ತುಂಗಭದ್ರೆ ಹರಿಯುತ್ತಾಳೆ, ಆ ಭಾಗ್ಯ ಮಸ್ಕಿ ಜನರಿಗಿಲ್ಲ. ಅವರು ಈಗ ಪಕ್ಕದಲ್ಲೇ ಹಾದು ಹೋಗುವ ಕೃಷ್ಣೆಯ ನೀರು ಕೇಳುತ್ತಿದ್ದಾರೆ. ಮುಖ್ಯವಾಹಿನಿ ಮಾಧ್ಯಮಕ್ಕೆ ಇದು ಒಂದು ಇಶ್ಯೂ ಆಗಲೇ ಇಲ್ಲ!

ಮಸ್ಕಿ ಮ್ಯಾಲ ದೊಡ್ಡ ಭಾರ

107 ಹಳ್ಳಿಗಳು ಅದರಲ್ಲೂ ಮುಖ್ಯವಾಗಿ 58 ಹಳ್ಳಿಗಳು ತಮ್ಮ ಭೂಮಿಗೆ ನೀರು ಬೇಕು ಅನ್ನುತ್ತಿವೆ. ಆದರೆ ಕೃಷ್ಣಾದಿಂದ ನೀರು ಕೊಡಲು ಆಗದು ಎಂದು ಅಧಿಕಾರಿಗಳು ಸಲ್ಲಿಸಿದ ವರದಿಯನ್ನೇ ಪ್ರತಾಪಗೌಡ ಪಾಟೀಲರು ಸತ್ಯ ಎಂದು ನಂಬಿದ್ದಾರೆ.

ಈಗ ಏನಾಗಿದೆ ಅಂದರೆ, ಮಸ್ಕಿಯ ಮೇಲೆ ಹಲವು ನೀರಾವರಿ ಪ್ರಾಜೆಕ್ಟ್ ಹೇರಲಾಗಿದೆ. ಇವೆಲ್ಲ ಕಾಟಾಚಾರದ ಯೋಜನೆಗಳು. ಬಜೆಟ್ ಅಲೊಕೇಷನ್ ಇಲ್ಲವೇ ಇಲ್ಲ! ಕೃಷ್ಣಾ ನದಿಯಿಂದ 17 ಕೆರೆ ತುಂಬಿಸುವ ಯೊಜನೆಯಲ್ಲಿ ಈಗ 87 ಕೋಟಿ ರೂ ಬಿಡುಗಡೆ ಆಗಿದೆ. ಅದು ಕಂಟ್ರಾಕ್ಟರ್‌ಗಳ ಪಾಲಾಗಿದೆ ಎಂಬ ದೊಡ್ಡ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಮಸ್ಕಿ ಉಪಚುನಾವಣೆ: NRBC_5A ನೀರಾವರಿ ಹೋರಾಟ ಫಲಿತಾಂಶ ಬದಲಿಸಬಲ್ಲದೇ?

’58 ಹಳ್ಳಿಯ ಜನ 100 ದಿನದಿಂದ ಪ್ರತಿಭಟನೆ ಮಾಡ್ತಾ ತಮ್ಮ ಭೂಮಿಗೆ ನೀರು ಬೇಕು ಅಂತಾರಲ್ಲರಿ?’ ಎಂದು ನಾವು ಬಿಜೆಪಿ ಅಭ್ಯರ್ಥಿ ಪ್ರತಾಪಗೌಡರನ್ನು ಕೇಳಿದೆವು. ‘’ಹಂಗೆಲ್ಲ ನೀರ್ ಕೋಡೋಕ್ ಆಗಲ್ಲ. ಅದೊಂದು ಅವೈಜ್ಞಾನಿಕ ಯೋಜನಾ ಅದ.. ನಾವ್ ಜನ್ರಿಗೆ ತಿಳವಳಿಕೆ ಕೊಟ್ಟೀವಿ. ಅಲ್ಲಿ ಯಾರೋ ಸ್ವಲ್ಪ ಮಂದಿ ಸ್ಟ್ರೈಕ್ ಮಾಡಾಕ ಹತ್ಯಾರ’ ಎಂದರು.
ಅಲ್ಲ ನೀವು ಪರ್ಯಾಯದ ಬಗ್ಗೆ ವಿಚಾರನಾ ಮಾಡಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರತಾಪಗೌಡರು, ನಂದವಾಡಗಿ ನೀರಾವರಿ ಯೋಜನಾ ಅದ, ಕೋಟೆಕಲ್ ಬಸವಣ್ಣ ಏತ ನೀರಾವರಿ ಯೋಜನಾನೂ ಐತಿ, 500 ಕೋಟಿ ರೂ ಕೊಟ್ಟು ಕೆರೆ ತುಂಬಿಸ್ತಾ ಇದ್ದೀವಿ’ ಎಂದರು.

ಮಸ್ಕಿಯಲ್ಲಿ ಗುಳೆ ಸಮಸ್ಯೆ ವ್ಯಾಪಕವಾಗಿದೆ. ಇಲ್ಲಿನ ಎಸ್‌ಸಿ/ಎಸ್‌ಟಿ ಸಮುದಾಯದ ಜನರು ಕೂಲಿಗಾಗಿ ಬೆಂಗಳೂರು, ಮಂಗಳೂರು, ಗೋವಾ ಕಡೆ ವಲಸೆ ಹೋಗುವುದು ನಿತ್ಯದ ಕತೆಯೇ ಆಗಿದೆ.

ಆದರೆ ಗೆಜೆಟ್‌ನಲ್ಲಿ ಮಸ್ಕಿ ಭರಪೂರ ನೀರಾವರಿ ಆಗಿಬಿಟ್ಟಿದೆ.. ಅದನ್ನೆ ಪ್ರತಾಪಗೌಡ ಪಾಟೀಲರು ನಂಬಿದ್ದಾರೆ. ಜನ ಏನು ನಂಬುತ್ತಾರೆ ಎಂಬುವುದು ಚುನಾವಣಾ ಫಲಿತಾಂಶದಲ್ಲಿ ಗೋಚರವಾಗಲಿದೆ.

ಬಸವಕಲ್ಯಾಣ: ಆಟ ‘ಟಫ್’ ಇದೆ, ಬಟ್ ನಾರಾಯಣರಾವ್ ಸರಳತೆ ಚಾಲ್ತಿಗೆ ಬಂದಿದೆ!

ಆರಾಮಾಗಿ ಎತ್ತಿಕೊಳ್ಳಬಹುದಾದ ಈ ಕ್ಷೇತ್ರದಲ್ಲಿ ಬಿಜೆಪಿ ಸಿಕ್ಕಾಪಟ್ಟೆ ರೊಕ್ಕ ಹರಿಸಿಯೂ ನಿಟ್ಟುಸಿರು ಬಿಡ್ತಾ ಇದೆ, ಅದಕ್ಕೆ ಕಾರಣ ಮೃತ ಕಾಂಗ್ರಸ್ ಶಾಸಕ ನಾರಾಯಣರಾವ್ ಸರಳತೆ!
ಸದನದಲ್ಲಿ ಸಿಕ್ಕ ಒಂದೇ ಅವಕಾಶದಿಂದ ರೊಕ್ಕದ ರಾಜಕೀಯ, ಬಾಂಬೇ ಗಮ್ಮತ್ತು ಎಲ್ಲವನ್ನೂ ಬಟಾಬಯಲು ಮಾಡಿದ ನಾರಾಯಣರಾವ್ ಅವರ ಪತ್ನಿ ಈಗ ಕಾಂಗ್ರೆಸ್ ಅಭ್ಯರ್ಥಿ.

ಇದನ್ನೂ ಓದಿ: ಲಿಂಗಾಯಿತರು ನನಗೆ ಮತ ಕೊಡದಿದ್ದರೂ ಪರವಾಗಿಲ್ಲ, ಬಸವ ತತ್ವದ ಮೇಲೆ ನಡೆದರೆ ಸಾಕು: ಶಾಸಕ ಬಿ.ನಾರಾಯಣರಾವ್ 

ಬಿಜೆಪಿಯಿಂದ ನಿಂತಿರುವ ಶರಣು ಸದಲಗ ಕಲಬುರ್ಗಿ ಜಿಲ್ಲೆಯ ಮನುಷ್ಯ ಆಗಿರೋ ಕಾರಣ ಬೀದರ್‌ನ ಬಸವಕಲ್ಯಾಣದಲ್ಲಿ ಈಗ ಒಂದು ಅಪಸ್ವರ ಸಹಜವಾಗಿಯೇ ಎದ್ದಿದೆ.
ನಾರಾಯಣರಾವ್ ಸದನದಲ್ಲಿ ಮಾಡಿದ ಕೊನೆಯ ಭಾಷಣ ಈಗ ಫಲಿತಾಂಶವನ್ನು ನಿರ್ಧರಿಸುವ ಮಟ್ಟಕ್ಕೆ ಬಂದಿದೆ. ‘ಸಿದ್ರಾಮಯ್ಯ ಸಾಹೇಬ್ರು ಟಿಕೇಟ್ ಕೊಟ್ರು’ ಎಂಬ ನಾರಾಯಣರಾವ್ ಮಾತು ಈಗ ಜನಪ್ರಿಯವಾಗಿದ್ದು, ಅವರ ‘ಸಿದ್ರಾಮಯ್ಯ’ ——— ಕೂಡ ಈ ಕ್ಷೇತ್ರವನ್ನು ಸೀರಿಯಸ್ ಆಗಿ ಪರಿಗಣಿಸಿದ್ದಾರೆ ಎನ್ನಲಾಗಿದೆ.

ಹಾಗೆಯೇ ಬಿಜೆಪಿ ಸಂಸದ ಭಗವಂತ ಖೂಬಾರವರ ಪುತ್ರ ಮಲ್ಲಿಕಾರರ್ಜುನ ಖೂಬಾ ಟಿಕೆಟ್ ಸಿಗದೇ ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ. ನಾಳೆ ನಡೆಯುವ ಪ್ರೆಸ್‌ಮೀಟ್‌ನಲ್ಲಿ ಖೂಬಾ ತಮ್ಮ ಒಲವು ಯಾರ ಕಡೆ ಎಂದು ಘೋಷಣೆ ಮಾಡಲಿದ್ದಾರೆ.


ಇದನ್ನೂ ಓದಿ: ಸದನದಲ್ಲಿಂದು ಗಮನಸೆಳೆದ ಕಾಂಗ್ರೆಸ್ಸಿನ ಶಾಸಕ ಬಿ.ನಾರಾಯಣರಾವ್ ರವರ ಮಾತುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...