Homeಕರ್ನಾಟಕಯುವಜನರೊಂದಿಗೆ ಸಮಾನತೆಯ ಆಶಯದೊಂದಿಗೆ ಸಂವಾದಕ್ಕಿಳಿದ 'ಮತ್ತೆ ಕಲ್ಯಾಣ'ದ ಪ್ರಯೋಗ ಜನಪರವಲ್ಲವೇ?

ಯುವಜನರೊಂದಿಗೆ ಸಮಾನತೆಯ ಆಶಯದೊಂದಿಗೆ ಸಂವಾದಕ್ಕಿಳಿದ ‘ಮತ್ತೆ ಕಲ್ಯಾಣ’ದ ಪ್ರಯೋಗ ಜನಪರವಲ್ಲವೇ?

- Advertisement -
- Advertisement -

ಹನ್ನೆರಡನೆಯ ಶತಮಾನದಲ್ಲಿ ನಡೆದ ಶರಣ ಚಳುವಳಿಯ ಆಶಯಗಳನ್ನು ಜನಸಾಮಾನ್ಯರು ಮತ್ತು ಯುವಜನರ ಬಳಿ ಮತ್ತೆ ತೆಗೆದುಕೊಂಡು ಹೋಗಬೇಕೆನ್ನುವ ಆಶಯದೊಂದಿಗೆ ಒಂದು ವಿಶಿಷ್ಟ ಕಾರ್ಯಕ್ರಮ ಶುರುವಾಗಿದೆ. ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮಿಜಿಗಳ ನೇತೃತ್ವದಲ್ಲಿ ವಿವಿಧ ಸ್ವಾಮೀಜಿಗಳು, ಜನಪರ ಸಂಘಟನೆಗಳ ಸಹಯೋಗದಲ್ಲಿ ಮತ್ತೆ ಕಲ್ಯಾಣ ಎಂಬ ಆಂದೋಲನ ನಡೆಯುತ್ತಿದೆ.

ಮತ್ತೆ ಕಲ್ಯಾಣದ ಪರಿಕಲ್ಪನೆ ಹನ್ನೆರಡನೆ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಮಾನವೀಯ ಮೌಲ್ಯಗಳನ್ನು ಮುನ್ನೆಲೆಗೆ ತಂದ ಶರಣ ಚಳುವಳಿಯ ಆಶಯಗಳನ್ನು ಸಮಾಜದ ಮಧ್ಯೆ ತೆಗೆದುಕೊಂಡು ಹೋಗಲು ಹುಟ್ಟಿಕೊಂಡ ಒಂದು ಆಂದೋಲನವಾಗಿದೆ. ಈ ಆಂದೋಲನವು ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಕಾರ್ಯಕ್ರಮವನ್ನು ನಡೆಸುತ್ತಿದ್ದು ಯುವಜನರೊಂದಿಗೆ ಸಂವಾದ ನಡೆಸುವುದು ಇದರ ಮುಖ್ಯವಾದ ಭಾಗವಾಗಿದೆ.

ನಾವು ಮುಖ್ಯವಾಗಿ ಗಮನಿಸಬೇಕೇರುವುದು ಬಹುಪಾಲು ವಾಟ್ಸಪ್ , ಫೇಸ್‌ಬುಕ್ ಪದವಿಧರರಾಗಿರುವ ಯುವಜನರ ಜೊತೆ ಈ ಆಂದೋಲನ ಎದುರಾಗುತ್ತಿರುವುದು. ಇಲ್ಲಿ ಸ್ವಾಮೀಜಿಯವರನ್ನು ಒಳಗೊಂಡಂತೆ ಇಬ್ಬರು ಚಿಂತಕರಿಗೆ ಬಂದಂತಹ ಹೆಚ್ಚಿನ ಪ್ರಶ್ನೆಗಳಾವುವು ನೋಡಬೇಕು. ಎಲ್ಲಾ ಕಡೆ ಎದುರಾಗುತ್ತಿರುವ ಪ್ರಶ್ನೆ ಎಂದರೆ ಮೀಸಲಾತಿಯಿಂದ ಮೇಲ್ಜಾತಿಯವರಿಗೆ ಅನ್ಯಾಯವಾಗುತ್ತಿದೆ. ಈ ಮೀಸಲಾತಿಯನ್ನು ಕೊನೆಗಾಣಿಸಬೇಕಲ್ಲವೆ ಎಂಬುದು. ಈ ರೀತಿಯ ಯೋಚನೆಗಳು ಇತ್ತೀಚಿಗೆ ಹೆಚ್ಚು ಕೇಳಿ ಬರುತ್ತಿರುವುದನ್ನು ಗಮನಿಸಬಹುದು. ಇದಕ್ಕೆ ಕಾರಣ ಬಲಪಂಥೀಯ ಶಕ್ತಿಗಳು ಸೋಷೀಯಲ್ ಮೀಡೀಯಾದಲ್ಲಿ ಇದನ್ನು ಒಂದು ನಿರಂತರ ಅಜೆಂಡಾವಾಗಿ ಮಾಡಿಕೊಂಡು ಅಭಿಪ್ರಾಯ ರೂಪಿಸಲು ಸತತವಾಗಿ ಪ್ರಯತ್ನಪಡುತ್ತಲೇ ಇವೆ. ಮೀಸಲಾತಿಯಿಂದಲೇ ಈ ದೇಶ ಹಿಂದುಳಿದಿದೆ ಎನ್ನುವಂತಹ ಮನಸ್ಥಿತಿಯನ್ನು ರೂಪಿಸುವಲ್ಲಿ ಒಂದು ಮಟ್ಟಿಗೆ ಯಶಸ್ಸನ್ನೂ ಪಡೆದಿದ್ದಾರೆ. ದುರಂತವೆಂದರೆ ಎಸ್.ಸಿ/ ಎಸ್.ಟಿ ಸಮುದಾಯಗಳಂತೆ ಮೀಸಲಾತಿಯ ಫಲಾನುಭವಿಗಳಾದಂತಹ ಒ.ಬಿ.ಸಿ ಸಮುದಾಯದ ಯುವಜನರಲ್ಲೇ  ಹೆಚ್ಚು ಈ ರೀತಿಯ ಮನಸ್ಥಿತಿ ಬೆಳೆಯುತ್ತಿದೆ.

ಈ ಪ್ರಶ್ನೆಯನ್ನು ಸಮರ್ಥವಾಗಿ ಎದುರಿಸುತ್ತಿರುವ ಪಂಡಿತಾರಾಧ್ಯ ಸ್ವಾಮೀಜಿಗಳು ಜಾತಿ ಇರುವವರೆಗೂ, ಅಸಮಾನತೆ ತೊಲಗುವವರೆಗೂ ಮೀಸಲಾತಿ ಅವಶ್ಯಕ ಎಂದು ಪ್ರತಿಪಾದಿಸುತ್ತಾ ಬಂದಿದ್ದಾರೆ. ನಿಜವಾಗಲೂ ಸಮಾನತೆ ಬಂದಮೇಲೆ ಮೀಸಲಾತಿ, ಬಡ್ತಿ ಮೀಸಲಾತಿಯ ಅವಶ್ಯಕತೆ ಇರುವುದಿಲ್ಲ ಎಂದು ಹೇಳಿದ್ದರು. ಈ ಸುಧ್ದಿ ಮಾಧ್ಯಮಗಳಲ್ಲಿ ತಪ್ಪಾಗಿ ಪ್ರಕಟವಾಗಿ ನಂತರ ಸ್ವಾಮೀಜಿಯವರು ಸ್ಫಷ್ಟನೆ ನೀಡಬೇಕಾಗಿ ಬಂದಿತು. ಈ ಮಧ್ಯೆ ಸಾಕಷ್ಟು ಜನರ ಟೀಕೆಗಳು ಬಂದು ಹೋದವು. ಈಗ ಅರ್ಧ ಜಿಲ್ಲೆಗಳಲ್ಲಿ ಕಾರ್ಯಕ್ರಮ ಮುಗಿಯುತ್ತಾ ಬಂದಿದೆ. ಎಲ್ಲಾ ಜಿಲ್ಲೆಗಳಲ್ಲೂ ಬಂದ ಜಾತಿ ಬಗೆಗಿನ, ಮೀಸಲಾತಿ ಬಗೆಗಿನ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರಿಸಿದ್ದಾರೆ ಮತ್ತು ಲಿಂಗಾಯತ ಜಾತಿವಾದಿಗಳು ಸಹ ಕಟು ವಾಸ್ತವಗಳನ್ನು ಕೇಳಿಸಿಕೊಂಡಿದ್ದಾರೆ.

ತರಿಕೆರೆಯಲ್ಲಿ ಸ್ವಾಮೀಜಿಗಳಿಗೆ ಒಬ್ಬ ವಿದ್ಯಾರ್ಥಿ ಎಂ.ಎಂ.ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆ ಮತ್ತು ಹನ್ನೆರಡನೆ ಶತಮಾನದ ಶರಣರ ಕೊಲೆಗಳು ಒಂದೇನಾ ? ಅನ್ನುವ ಪ್ರಶ್ನೆಗೆ ಇದು ಭಿನ್ನವಾದ ಸಂದರ್ಭದಲ್ಲಿ ನಡೆದ ಹತ್ಯೆಗಳಾದರೂ, ಹತ್ಯೆ ಮಾಡಿದರು ಒಂದೇ ವಂಶಜರು, ಪಟ್ಟಭದ್ರ ಹಿತಾಸಕ್ತಿಗಳಿಂದಲೇ ನಡೆಯಿತು ಎಂದು ಉತ್ತರಿಸಿದರು. ಈ ರೀತಿ ಬೇರೆ ಬೇರೆ ರೀತಿಯ ಪ್ರಶ್ನೆಗಳನ್ನು ಮತ್ತೆ ಕಲ್ಯಾಣ ತಂಡ ಎದುರಿಸುತ್ತಾ ಯಶಸ್ವಿಯಾಗಿ ಇಂದಿಗೆ ೧೯ ಜಿಲ್ಲೆಗಳನ್ನು ಮುಕ್ತಾಯ ಮಾಡಿದೆ. ಈ ತಿಂಗಳಾದ್ಯಂತ ಆಂದೋಲನ ಮುಂದುವರೆಯಲಿದ್ದು ಈ ಪೀಳಿಗೆಯ ಯುವಜನರ ಪ್ರಶ್ನೆಗಳನ್ನು ಎದುರಿಸುತ್ತಾ ಪರಸ್ಪರ ಮುಖಾಮುಖಿಯು ಹೊಸದನ್ನು ಕಲಿಸುವ ಸಾಧ್ಯತೆಯಿದೆ.

ಮಂಗಳೂರಿಗೆ ಮೋಹನ್ ಆಳ್ವಾ ಅಂತ ವ್ಯಕ್ತಿಯನ್ನ ಒಳಗೊಂಡಿದ್ದು ಸಹಾ ವಿಮರ್ಶೆಗೊಳಗಾಯಿತು. ವಿಮರ್ಶೆಯ ಕಣ್ಣಿನಿಂದಲೇ ಈ ಆಂದೋಲನದ ಜೊತೆ ಇರುವ ಅವಶ್ಯಕತೆ ಖಂಡಿತ ಇದೆ ಎಂದು ಎನಿಸುತ್ತದೆ. ತಮಗೆ ನೂರೆಂಟು ಮಿತಿಗಳನ್ನು ಹಾಕಿಕೊಂಡು, ಮಠಗಳನ್ನು ತಮ್ಮ ಸಮುದಾಯಗಳವರ ಹಿತಕ್ಕಾಗಿ, ಮಠದ ಆಸ್ತಿ ಮಾಡಲು ಮತ್ತು ರಾಜಕೀಯ ಮಾಡುವುದೇ ಉದ್ದೇಶವಾಗಿ ನಡೆಸುತ್ತಿರುವ ಹಲವು ಮಠಾಧೀಶರ ನಡುವೆ ನಿಜವಾಗಲೂ ಬಸವ ತತ್ವ ಪ್ರಚಾರಕರಾಗಿ ಮಾಡಬೇಕಾದ ಕೆಲಸವನ್ನು ಮತ್ತೆ ಕಲ್ಯಾಣದ ಮೂಲಕ ಪಂಡಿತಾರಾಧ್ಯ ಸ್ವಾಮೀಜಿಯವರು ವಿಭಿನ್ನವಾದ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಎನಿಸುತ್ತಿದೆ.

ಇಂತಹ ಪ್ರಯೋಗಗಳನ್ನು ನಡೆಸುವಾಗ ಬಹಳ ಎಚ್ಚರದಿಂದ ಹೆಜ್ಜೆ ಹಾಕಬೇಕಾಗುತ್ತದೆ. ನೀವು ಎಂತದ್ದೇ ಜನಪರವಾದ ಕಾರ್ಯಕ್ರಮವನ್ನು ಬೀದಿಗೆ ಬಂದು ಮಾಡಿ ಅದು ಆಳುವ ವರ್ಗದ ಪರವಿಲ್ಲದಿದ್ದರೆ ಅದಕ್ಕೆ ಕೊಡಬೇಕಾದಷ್ಟು ಪ್ರಾಶಾಸ್ತ್ಯವನ್ನು  ಮಾರಿಕೊಂಡ ಮಾಧ್ಯಮಗಳು ಕೊಡುವುದಿಲ್ಲ. ಇದು ಬೀದಿಗಿಳಿದು ಜನಪರ ಕೆಲಸ ಮಾಡುವ ದಲಿತ, ಜೀವಪರ ಹೋರಾಟಗಾರರ ಅನುಭವಕ್ಕೆ ಬಂದಿರುತ್ತದೆ. ಬಲಪಂಥೀಯ ಶಕ್ತಿಗಳು ಪದೇ ಪದೇ ಹಲವು ವಿಚಾರಗಳಲ್ಲಿ ಗೆಲುವು ಸಾಧಿಸಿದಾಗ ಯುವಜನರನ್ನು ಒಳಗೊಳ್ಳಬೇಕು ಎನ್ನುವ ಸಾಕಷ್ಟು ಮಾತು ಇದುವರೆಗೆ ನಡೆದಿದೆ.

ಬುದ್ಧಿವಂತರು ಯುವಜನರ ಜೊತೆ ಕೆಲಸ ಮಾಡುವಂತಹ ಜೀವಪರರಿಗೆ ಬೆಂಬಲಿಸದೆ ಜೊತೆ ನಿಲ್ಲದೆ ಇರುವ ಎಷ್ಟೋ ಉದಾಹರಣೆಗಳಿವೆ. ಮತ್ತೆ ಕಲ್ಯಾಣ ಯಾವುದೇ ವಿಮರ್ಶೆಗೆ ಅತೀತವಾದದ್ದಲ್ಲ. ಒಂದು ಮಠದ ಹಿನ್ನಲೆಯ ಸ್ವಾಮೀಜಿಯ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮವಾದ್ದರಿಂದ ಅನುಮಾನದಿಂದಲೇ ನೋಡಬೇಕಾದ ಅವಶ್ಯಕತೆ ಖಂಡಿತ ಇದೆ. ಆದರೆ ಇದೇ ವಿಚಾರವಾಗಿ ಆ ಆಂದೋಲನ ಎಲ್ಲರನ್ನು ಒಳಗೊಳ್ಳುವ ಮೂಲಕ ಏನನ್ನು ಹೇಳಲು ಹೊರಟಿದೆ ಎನ್ನುವುದನ್ನು ಯೋಚಿಸಬೇಕಿದೆ. ಈ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳ ಮೂಲಕ ಹುಸಿ ದೇಶ/ದ್ವೇಷಭಕ್ತಿಯನ್ನೆ ಮನಸ್ಸಲ್ಲಿ ತುಂಬಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ನಮ್ಮದೇ ನೆಲದಲ್ಲಿ ಒಂದು ಮಾನವೀಯ ತತ್ವಗಳ ಆಧಾರದಲ್ಲಿ ಹನ್ನೆರಡನೆ ಶತಮಾನದಲ್ಲಿ  ಒಂದು ಸಿದ್ದಾಂತ ಹುಟ್ಟಿತ್ತು, ಅದು ಸರ್ವ ಜಾತಿಗಳ ನಡುವೆ ಸಮಾನತೆಯನ್ನು ಬಯಸಿತ್ತು, ಕಾಯಕ ಘನತೆಯನ್ನು ಎತ್ತಿ ಹಿಡಿದಿತ್ತು, ಅಂತರ್ಜಾತಿ ವಿವಾಹಗಳನ್ನು ಮಾಡಲು ಸಂಘರ್ಷ ನಡೆಸಿತ್ತು, ಅದನ್ನು ನಾವು ಮತ್ತೆ ನೆನೆಪಿಸಿಕೊಳ್ಳಬೇಕಿದೆ ಎನಿಸುತ್ತದೆ.

ಇದರ ಅನುಭವದ ಹಿನ್ನೆಲೆಯಲ್ಲಿ ಜಾತಿವಿನಾಶದಂತಹ ದೊಡ್ಡ ಹೆಜ್ಜೆಗಳನ್ನಿಡಲು ಬಸವ ತತ್ವದಲ್ಲಿರುವ ಅಂಶಗಳು ಯಾವುವು, ಕರ್ಮಠತನಕ್ಕೆ ಒಗ್ಗಿಕೊಂಡ ಲಿಂಗಾಯತ ಸಮುದಾಯಕ್ಕೆ ಮನವರಿಕೆ ಮಾಡಿಕೊಡುವುದಾದರೂ ಹೇಗೆ ಎಂದು ಮುಂದಿನ ದಿನಗಳಲ್ಲಿ ಚಿಂತಿಸಬೇಕಿದೆ. ಈಗ ನಡೆಯುತ್ತಿರುವ ಆಂದೋಲನವನ್ನು ನಾವು ನೋಡಬೇಕಾದ ರೀತಿ ಹೇಗೆ ಎಂದು ಮರುಚಿಂತಿಸಬೇಕಿದೆ ಎನಿಸುತ್ತದೆ. ಶರಣರು ಸಾಮಾಜಿಕ ಸಮಸ್ಯೆಗಳಿಗೆ ಸೂಚಿಸಿದ ಮೌಲ್ಯಾಧಾರಿತ ಪರಿಹಾರಗಳು, ಅವರು ವಿಚಾರಗಳನ್ನು ಸರಳ ವಚನಗಳ ರೂಪದಲ್ಲಿ ಮನಸ್ಸಿನಾಳಕ್ಕೆ ಇಳಿಸಿದ ಬಗ್ಗೆ ಇನ್ನಷ್ಟು ಸಂಶೋಧನೆ, ಅಧ್ಯಯನವನ್ನು ಪ್ರಜ್ಞಾವಂತ ವಲಯ ಮಾಡಬೇಕಿದೆ. ನಮ್ಮದೇ ನೆಲದ ಬಸವ ಚಿಂತನೆಯನ್ನು ಇಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನಗಳಿಗೆ ಬಲ ತುಂಬ ಬೇಕಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...