Homeಮುಖಪುಟವೈದ್ಯವಿಜ್ಞಾನ ನೊಬೆಲ್ 2021; ನಮ್ಮ ಸುತ್ತಲಿನ ಜಗತ್ತನ್ನು ನಾವು ಹೇಗೆ ಗ್ರಹಿಸುತ್ತೇವೆ?

ವೈದ್ಯವಿಜ್ಞಾನ ನೊಬೆಲ್ 2021; ನಮ್ಮ ಸುತ್ತಲಿನ ಜಗತ್ತನ್ನು ನಾವು ಹೇಗೆ ಗ್ರಹಿಸುತ್ತೇವೆ?

- Advertisement -
- Advertisement -

ಈ ವರ್ಷದ ಶರೀರಶಾಸ್ತ್ರ ಅಥವಾ ವೈದ್ಯವಿಜ್ಞಾನಕ್ಕೆ ನೀಡಲಾಗುವ ನೊಬೆಲ್ ಪಾರಿತೋಷಕವನ್ನು ತಾಪಮಾನ ಮತ್ತು ಸ್ಪರ್ಶದ ಗ್ರಾಹಕಗಳ (ರಿಸೆಪ್ಟರ್‌ಗಳ) ಸಂಶೋಧನೆಗಾಗಿ ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೋಷಿಯನ್ ಅವರುಗಳಿಗೆ ನೀಡಲಾಗಿದೆ.

ನಾವು ಶಾಖ, ತಂಪು ಮತ್ತು ಸ್ಪರ್ಶವನ್ನು ಹೇಗೆ ಗ್ರಹಿಸುತ್ತೇವೆ ಎಂಬುದು ಮನುಷ್ಯಜಗತ್ತಿನ ಅತಿದೊಡ್ಡ ವಿಸ್ಮಯಗಳಲ್ಲೊಂದು ಮತ್ತು ನಮ್ಮ ಉಳಿವಿಗೆ ಹಾಗೂ ನಮ್ಮ ಸುತ್ತಲಿನ ಪ್ರಪಂಚದೊಂದಿಗೆ ನಾವು ಹೇಗೆ ವ್ಯವಹರಿಸುತ್ತೇವೆಂಬುದಕ್ಕೆ ಅತಿಮುಖ್ಯ. ನಮ್ಮ ನಿತ್ಯದ ಬದುಕಿನಲ್ಲಿ ಈ ಅರಿವನ್ನು ನಾವು ಸಹಜವೆಂದು ಭಾವಿಸುತ್ತೇವೆ. ಆದರೆ, ತಾಪಮಾನ ಮತ್ತು ಒತ್ತಡವನ್ನು ಅರಿಯಲು ಸಾಧ್ಯವಾಗುವಂತೆ ನರಪ್ರಚೋದನೆಗಳು (ನರ್ವ್ ಇಂಪಲ್ಸಸ್) ಹೊರಡುವುದು ಹೇಗೆ? ಈ ಪ್ರಶ್ನೆಯನ್ನು ಈ ಬಾರಿಯ ನೊಬೆಲ್ ಪುರಸ್ಕೃತರು ಬಗೆಹರಿಸಿದ್ದಾರೆ.

ಕಣ್ಣುಗಳು ಹೇಗೆ ಬೆಳಕನ್ನು ಗುರುತಿಸುತ್ತವೆ, ಶಬ್ದತರಂಗಗಳು ನಮ್ಮ ಒಳಗಿವಿಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಹಾಗೂ ಹೇಗೆ ವಿವಿಧ ರಾಸಾಯನಿಕ ಸಂಯೋಜನೆಗಳು ನಮ್ಮ ಮೂಗು ಮತ್ತು ಬಾಯಿಯೊಳಗಿನ ರಿಸೆಪ್ಟರ್‌ಗಳೊಂದಿಗೆ ಪ್ರವರ್ತಿಸಿ ವಾಸನೆ ಹಾಗೂ ರುಚಿಯನ್ನು ಹುಟ್ಟಿಸುತ್ತವೆಂಬ ಪ್ರಶ್ನೆಗಳು ಶತಮಾನಗಳ ಕಾಲ ಮನುಷ್ಯರ ಮನಸ್ಸನ್ನು ದಿಗ್ಭ್ರಮೆಗೊಳಿಸಿವೆ.

ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವ, ಗಾಳಿಯ ಬೀಸು ಮತ್ತು ಸೂರ್ಯನ ತಾಪದ ಸಂವೇದನೆಗಳನ್ನು ನಮ್ಮ ದೇಹ ಹೇಗೆ ಗ್ರಹಿಸುತ್ತದೆ; ಈ ಬದಲಾಗುವ ಪ್ರಚೋದಕಗಳು ಹಾಗೂ ತಾಪಮಾನ, ಸ್ಪರ್ಶ ಮತ್ತು ಚಲನೆಯ ಪರಿಣಾಮಗಳಿಗೆ ದೇಹ ಹೊಂದಿಕೊಳ್ಳುತ್ತದೆ ಎಂಬ ಪ್ರಶ್ನೆಗಳು ಕೂಡ.

ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಪೋಷಿಯನ್ ಅವರುಗಳ ಸಂಶೋಧನೆಗಿಂತ ಮೊದಲು, ನರವ್ಯವಸ್ಥೆ ಹೇಗೆ ಸುತ್ತಲಿನ ಪರಿಸರದ ಮತ್ತು ರಾಸಾಯನಿಕ ಪ್ರಚೋದಕಗಳನ್ನು ಗ್ರಹಿಸುತ್ತದೆ ಮತ್ತು ಅರ್ಥೈಸುತ್ತದೆ ಎಂಬುದರ ಕುರಿತ ನಮ್ಮ ತಿಳಿವಳಿಕೆಯಲ್ಲಿ ಒಂದು ಬಗೆಹರಿಯದ ಪ್ರಶ್ನೆ ಇತ್ತು; ತಾಪಮಾನ ಮತ್ತು ಯಾಂತ್ರಿಕ ಪ್ರಚೋದಕಗಳು ವಿದ್ಯುತ್ ಸಂದೇಶಗಳಾಗಿ ನಮ್ಮ ನರವ್ಯವಸ್ಥೆಯಲ್ಲಿ ಹೇಗೆ ಪರಿವರ್ತಿತವಾಗುತ್ತವೆ ಎಂಬುದು ತಿಳಿಯದ ಪ್ರಶ್ನೆಯಾಗಿ ಉಳಿದಿತ್ತು.

1990ರಲ್ಲಿ ಡೇವಿಡ್ ಜ್ಯೂಲಿಯಸ್ ಅವರು, ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಕ್ಯಾಲಿಫೊರ್ನಿಯಾ ವಿಶ್ವವಿದ್ಯಾಲಯದಲ್ಲಿ, ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ಎಂಬ ರಾಸಾಯನಿಕ ಸಂಯುಕ್ತವು ಉರಿಯುವ ಅನುಭವವನ್ನು ಯಾಕೆ ಉಂಟುಮಾಡುತ್ತದೆಂಬುದರ ಮೇಲೆ ಕೆಲಸ ಮಾಡುತ್ತಿದ್ದರು. ಕ್ಯಾಪ್ಸೈಸಿನ್ ನರಕೋಶಗಳನ್ನು ಸಕ್ರಿಯಗೊಳಿಸುತ್ತದೆಂಬುದು ಗೊತ್ತಿದ್ದ ಸಂಗತಿಯಾಗಿತ್ತು; ಆದರೆ ಆ ಕಾರ್ಯವಿಧಾನವೇನೆಂಬುದು ಒಗಟಾಗಿತ್ತು.

ಜ್ಯೂಲಿಯಸ್ ಮತ್ತು ಅವರ ಜೊತೆಗಾರರು, ನೋವು, ಉಷ್ಣಾಂಶ ಮತ್ತು ಸ್ಪರ್ಶಕ್ಕೆ ಪ್ರತಿಕ್ರಿಯಿಸುವ ನರಕೋಶಗಳನ್ನು ಪ್ರತಿನಿಧಿಸುವ ಡಿಎನ್‌ಎ ತುಣುಕುಗಳ ಒಂದು ಸಂಗ್ರಹವನ್ನು ಸಿದ್ಧಪಡಿಸಿದರು. ಕಠಿಣವಾದ ಸಂಶೋಧನೆಯ ನಂತರ, ಜೀವಕೋಶಗಳನ್ನು ಕ್ಯಾಪ್ಸೈಸಿನ್‌ಗೆ ಸಂವೇದನಾಶೀಲಗೊಳಿಸುವ ಒಂದು ವಂಶವಾಹಿಯನ್ನು (ಜೀನ್) ಗುರುತಿಸುವುದು ಸಾಧ್ಯವಾಯಿತು. ಹೀಗೆ, ಕ್ಯಾಪ್ಸೈಸಿನ್‌ಗೆ ಸಂವೇದನಾಶೀಲವಾದ ವಂಶವಾಹಿ ದೊರಕಿತು! ಈ ವಂಶವಾಹಿಯ ಪ್ರೊಟೀನ್‌ನ್ನು ಟಿಆರ್‌ಪಿವಿ1 ಎಂದು ಕರೆಯಲಾಯಿತು. ಈ ರಿಸೆಪ್ಟರ್ ಉಷ್ಣಾಂಶವನ್ನು ಗ್ರಹಿಸುವ ರಿಸೆಪ್ಟರ್ ಆಗಿತ್ತು ಮತ್ತು ನೋವುಂಟುಮಾಡಬಲ್ಲವೆಂದು ಹೇಳಬಹುದಾದ ಉಷ್ಣಾಂಶಗಳಲ್ಲಿ ಇದು ಸಕ್ರಿಯಗೊಳ್ಳುತ್ತಿತ್ತು.

ಈ ಸಂಶೋಧನೆಯು ಅತಿ ಮಹತ್ವದ್ದಾಗಿತ್ತು. ಇದು, ತಣ್ಣಗಿರುವುದನ್ನು ಗ್ರಹಿಸುವ ಇನ್ನೂ ಅನೇಕ ತಾಪಮಾನದ ರಿಸೆಪ್ಟರ್‌ಗಳ ಶೋಧಕ್ಕೆ ದಾರಿಮಾಡಿಕೊಟ್ಟಿತು. ಅನೇಕ ಪ್ರಯೋಗಾಲಯಗಳು, ಜೀವವೈಜ್ಞಾನಿಕವಾಗಿ ಮಾರ್ಪಡಿಸಲ್ಪಟ್ಟು ಈ ಹೊಸದಾಗಿ ಕಂಡುಹಿಡಿಯಲಾದ ವಂಶವಾಹಿಗಳನ್ನು ಹೊಂದಿಲ್ಲದ ಇಲಿಗಳ ಮೇಲೆ, ಸಂಶೋಧಿಸಲ್ಪಟ್ಟಿದ್ದ ಗ್ರಾಹಕಗಳು ತಾಪಮಾನ ಸಂವೇದನೆಯ ಮೇಲೆ ಬೀರುವ ಪರಿಣಾಮವೇನು ಎಂಬುದರ ಕುರಿತ ಪ್ರಯೋಗಗಳನ್ನು ಆರಂಭಿಸಿದವು. ಡೇವಿಡ್ ಜ್ಯೂಲಿಯಸ್ ಅವರು ಟಿಆರ್‌ಪಿವಿ1ನ್ನು ಕಂಡುಹಿಡಿದ ಸಂಶೋಧನೆಯು, ತಾಪಮಾನದ ವ್ಯತ್ಯಾಸಗಳು ಹೇಗೆ ನರ ವ್ಯವಸ್ಥೆಯಲ್ಲಿ ವಿದ್ಯುತ್ ಸಂದೇಶಗಳನ್ನು ಹುಟ್ಟುಹಾಕಬಲ್ಲವು ಎಂಬ ಕುರಿತು ಪಥಪ್ರವರ್ತಕವಾದುದಾಗಿತ್ತು.

ಅಮೆರಿಕದ ಕ್ಯಾಲಿಫೋರ್ನಿಯಾದ ಲಹೋಯಾದಲ್ಲಿರುವ ಸ್ಕ್ರಿಪ್ಸ್ ರಿಸರ್ಚ್ ಸಂಸ್ಥೆಯಲ್ಲಿದ್ದ ಆರ್ಡೆಮ್ ಪಟಪೋಷಿಯನ್ ಅವರು, ಯಾಂತ್ರಿಕ ಪ್ರಚೋದಕಗಳಿಂದ ಸಕ್ರಿಯಗೊಳ್ಳುವ ಅಸ್ಪಷ್ಟ ರಿಸೆಪ್ಟರ್‌ಗಳನ್ನು ಕಂಡುಹಿಡಿಯಲು ಬಯಸಿದರು.

ಒಂದು ಮೈಕ್ರೋಪಿಪೆಟ್ (ದ್ರವಪದಾರ್ಥಗಳನ್ನು ಅಳೆಯುವುದಕ್ಕೆ ಬಳಸುವ ಒಂದು ಅತಿಸಣ್ಣ ಕೊಳವೆ)ನಿಂದ ತಟ್ಟಿದಾಗ ಅಳೆಯಲು ಸಾಧ್ಯವಿರುವಷ್ಟು ಪ್ರಮಾಣದ ವಿದ್ಯುತ್ ಸಂದೇಶವನ್ನು ಹೊರಡಿಸುವ ಜೀವಕೋಶಗಳ ಸಾಲೊಂದನ್ನು ಪಟಪೋಷಿಯನ್ ಮತ್ತು ಅವರ ಜೊತೆಗಾರರು ಮೊದಲು ಕಂಡುಹಿಡಿದರು. ಕಷ್ಟಕರವಾದ ಹುಡುಕಾಟದ ನಂತರ, ಪಟಪೋಷಿಯನ್ ಮತ್ತು ಅವರ ಜೊತೆಗಾರರಿಗೆ ಮೈಕ್ರೋಪಿಪೆಟ್‌ನ ಒತ್ತುವಿಕೆಯ ಪರಿಣಾಮವನ್ನು ಮೌನವಾಗಿಸುವಂತೆ ಜೀವಕೋಶಗಳನ್ನು ಅಸಂವೇದನಾಶೀಲಗೊಳಿಸುವ ವಂಶವಾಹಿಯನ್ನು ಶೋಧಿಸುವುದು ಸಾಧ್ಯವಾಯಿತು. ಈ ವಂಶವಾಹಿಗಳು ಈ ಹಿಂದೆ ನಮಗೆ ತಿಳಿಯದಿದ್ದ ಯಾಂತ್ರಿಕ ಸಂವೇದನಾಶೀಲ ಅಯಾನ್ ಚಾನಲ್‌ಅನ್ನು ಕೋಡ್ ಮಾಡುವಂಥವಾಗಿದ್ದವು.

ಇವುಗಳನ್ನು ’ಒತ್ತಡ’ ಎಂಬುದರ ಗ್ರೀಕ್ ಪದದ ಮೇಲೆ ಪೈಜ಼ೋ1 ಹಾಗೂ ಪೈಜ಼ೋ2 ಎಂದು ಹೆಸರಿಸಲಾಯಿತು. ಇನ್ನೂ ಮುಂದುವರೆದ ಅಧ್ಯಯನಗಳು, ಪೈಜ಼ೋ1 ಮತ್ತು ಪೈಜ಼ೋ2ಗಳು ಜೀವಕೋಶದ ಕೋಶಪದರದ ಮೇಲೆ ಉಂಟಾಗುವ ಒತ್ತಡದಿಂದ ನೇರವಾಗಿ ಸಕ್ರಿಯಗೊಳ್ಳುವ ಅಯಾನ್ ಚಾನಲ್‌ಗಳೆಂಬುದು ಖಚಿತವಾಯಿತು.

ಟಿಆರ್‌ಪಿವಿ1, ಟಿಆರ್‌ಪಿಎಂ8, ಪೈಜ಼ೋ ಚಾನಲ್‌ಗಳೆಲ್ಲವನ್ನು ಕಂಡುಹಿಡಿದ ವಿನೂತನ ಮತ್ತು ಅದ್ವಿತೀಯ ಸಂಶೋಧನೆಗಳ ಮೂಲಕ ಈ ಬಾರಿಯ ನೊಬೆಲ್ ಪಾರಿತೋಷಕದ ವಿಜೇತರು, ಶಾಖ, ತಂಪು ಮತ್ತು ಯಾಂತ್ರಿಕ ಶಕ್ತಿಗಳು ಉಂಟುಮಾಡುವ ನರ ಸಂವೇದನೆಗಳು ಹೇಗೆ ಸುತ್ತಲಿನ ಪರಿಸರವನ್ನು ಗ್ರಹಿಸಲು ಮತ್ತು ಅದಕ್ಕೆ ಹೊಂದಿಕೊಳ್ಳಲು ನಮಗೆ ನೆರವಾಗುತ್ತವೆಂಬುದನ್ನು ನಾವು ಅರಿಯಲು ಅವಕಾಶ ಮಾಡಿಕೊಟ್ಟಿದ್ದಾರೆ.

ಕನ್ನಡಕ್ಕೆ: ಮಲ್ಲಿಗೆ

ಡಾ. ಸ್ವಾತಿ ಶುಕ್ಲಾ

ಡಾ.ಸ್ವಾತಿ ಶುಕ್ಲಾ
ಜರ್ಮನಿಯಲ್ಲಿ ‘ರೋಗ ನಿರೋಧಕ’ ಶಾಸ್ತ್ರದಲ್ಲಿ ಪಿಎಚ್‌ಡಿಯನ್ನು ಮುಗಿಸಿದ್ದಾರೆ. ಸ್ವೀಡನ್‌ನಲ್ಲಿ ಪೋಸ್ಟ್ ಡಾಕ್ಟೋರಲ್ ಸಂಶೋಧನೆಯನ್ನೂ ಮುಗಿಸಿ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಸ್ತುತ ಗೌರಿಲಂಕೇಶ್‌ನ್ಯೂಸ್.ಕಾಮ್‌ನ ಸಹ ಸಂಪಾದಕರಾಗಿದ್ದಾರೆ.


ಇದನ್ನೂ ಓದಿ: ತಾಂಜೇನಿಯಾ ಲೇಖಕ ಅಬ್ದುಲ್ ರಜಾಕ್‌‌‌ ಅವರಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ-2021

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...