Homeಮುಖಪುಟವೈದ್ಯವಿಜ್ಞಾನ ನೊಬೆಲ್ 2021; ನಮ್ಮ ಸುತ್ತಲಿನ ಜಗತ್ತನ್ನು ನಾವು ಹೇಗೆ ಗ್ರಹಿಸುತ್ತೇವೆ?

ವೈದ್ಯವಿಜ್ಞಾನ ನೊಬೆಲ್ 2021; ನಮ್ಮ ಸುತ್ತಲಿನ ಜಗತ್ತನ್ನು ನಾವು ಹೇಗೆ ಗ್ರಹಿಸುತ್ತೇವೆ?

- Advertisement -
- Advertisement -

ಈ ವರ್ಷದ ಶರೀರಶಾಸ್ತ್ರ ಅಥವಾ ವೈದ್ಯವಿಜ್ಞಾನಕ್ಕೆ ನೀಡಲಾಗುವ ನೊಬೆಲ್ ಪಾರಿತೋಷಕವನ್ನು ತಾಪಮಾನ ಮತ್ತು ಸ್ಪರ್ಶದ ಗ್ರಾಹಕಗಳ (ರಿಸೆಪ್ಟರ್‌ಗಳ) ಸಂಶೋಧನೆಗಾಗಿ ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೋಷಿಯನ್ ಅವರುಗಳಿಗೆ ನೀಡಲಾಗಿದೆ.

ನಾವು ಶಾಖ, ತಂಪು ಮತ್ತು ಸ್ಪರ್ಶವನ್ನು ಹೇಗೆ ಗ್ರಹಿಸುತ್ತೇವೆ ಎಂಬುದು ಮನುಷ್ಯಜಗತ್ತಿನ ಅತಿದೊಡ್ಡ ವಿಸ್ಮಯಗಳಲ್ಲೊಂದು ಮತ್ತು ನಮ್ಮ ಉಳಿವಿಗೆ ಹಾಗೂ ನಮ್ಮ ಸುತ್ತಲಿನ ಪ್ರಪಂಚದೊಂದಿಗೆ ನಾವು ಹೇಗೆ ವ್ಯವಹರಿಸುತ್ತೇವೆಂಬುದಕ್ಕೆ ಅತಿಮುಖ್ಯ. ನಮ್ಮ ನಿತ್ಯದ ಬದುಕಿನಲ್ಲಿ ಈ ಅರಿವನ್ನು ನಾವು ಸಹಜವೆಂದು ಭಾವಿಸುತ್ತೇವೆ. ಆದರೆ, ತಾಪಮಾನ ಮತ್ತು ಒತ್ತಡವನ್ನು ಅರಿಯಲು ಸಾಧ್ಯವಾಗುವಂತೆ ನರಪ್ರಚೋದನೆಗಳು (ನರ್ವ್ ಇಂಪಲ್ಸಸ್) ಹೊರಡುವುದು ಹೇಗೆ? ಈ ಪ್ರಶ್ನೆಯನ್ನು ಈ ಬಾರಿಯ ನೊಬೆಲ್ ಪುರಸ್ಕೃತರು ಬಗೆಹರಿಸಿದ್ದಾರೆ.

ಕಣ್ಣುಗಳು ಹೇಗೆ ಬೆಳಕನ್ನು ಗುರುತಿಸುತ್ತವೆ, ಶಬ್ದತರಂಗಗಳು ನಮ್ಮ ಒಳಗಿವಿಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಹಾಗೂ ಹೇಗೆ ವಿವಿಧ ರಾಸಾಯನಿಕ ಸಂಯೋಜನೆಗಳು ನಮ್ಮ ಮೂಗು ಮತ್ತು ಬಾಯಿಯೊಳಗಿನ ರಿಸೆಪ್ಟರ್‌ಗಳೊಂದಿಗೆ ಪ್ರವರ್ತಿಸಿ ವಾಸನೆ ಹಾಗೂ ರುಚಿಯನ್ನು ಹುಟ್ಟಿಸುತ್ತವೆಂಬ ಪ್ರಶ್ನೆಗಳು ಶತಮಾನಗಳ ಕಾಲ ಮನುಷ್ಯರ ಮನಸ್ಸನ್ನು ದಿಗ್ಭ್ರಮೆಗೊಳಿಸಿವೆ.

ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವ, ಗಾಳಿಯ ಬೀಸು ಮತ್ತು ಸೂರ್ಯನ ತಾಪದ ಸಂವೇದನೆಗಳನ್ನು ನಮ್ಮ ದೇಹ ಹೇಗೆ ಗ್ರಹಿಸುತ್ತದೆ; ಈ ಬದಲಾಗುವ ಪ್ರಚೋದಕಗಳು ಹಾಗೂ ತಾಪಮಾನ, ಸ್ಪರ್ಶ ಮತ್ತು ಚಲನೆಯ ಪರಿಣಾಮಗಳಿಗೆ ದೇಹ ಹೊಂದಿಕೊಳ್ಳುತ್ತದೆ ಎಂಬ ಪ್ರಶ್ನೆಗಳು ಕೂಡ.

ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಪೋಷಿಯನ್ ಅವರುಗಳ ಸಂಶೋಧನೆಗಿಂತ ಮೊದಲು, ನರವ್ಯವಸ್ಥೆ ಹೇಗೆ ಸುತ್ತಲಿನ ಪರಿಸರದ ಮತ್ತು ರಾಸಾಯನಿಕ ಪ್ರಚೋದಕಗಳನ್ನು ಗ್ರಹಿಸುತ್ತದೆ ಮತ್ತು ಅರ್ಥೈಸುತ್ತದೆ ಎಂಬುದರ ಕುರಿತ ನಮ್ಮ ತಿಳಿವಳಿಕೆಯಲ್ಲಿ ಒಂದು ಬಗೆಹರಿಯದ ಪ್ರಶ್ನೆ ಇತ್ತು; ತಾಪಮಾನ ಮತ್ತು ಯಾಂತ್ರಿಕ ಪ್ರಚೋದಕಗಳು ವಿದ್ಯುತ್ ಸಂದೇಶಗಳಾಗಿ ನಮ್ಮ ನರವ್ಯವಸ್ಥೆಯಲ್ಲಿ ಹೇಗೆ ಪರಿವರ್ತಿತವಾಗುತ್ತವೆ ಎಂಬುದು ತಿಳಿಯದ ಪ್ರಶ್ನೆಯಾಗಿ ಉಳಿದಿತ್ತು.

1990ರಲ್ಲಿ ಡೇವಿಡ್ ಜ್ಯೂಲಿಯಸ್ ಅವರು, ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಕ್ಯಾಲಿಫೊರ್ನಿಯಾ ವಿಶ್ವವಿದ್ಯಾಲಯದಲ್ಲಿ, ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ಎಂಬ ರಾಸಾಯನಿಕ ಸಂಯುಕ್ತವು ಉರಿಯುವ ಅನುಭವವನ್ನು ಯಾಕೆ ಉಂಟುಮಾಡುತ್ತದೆಂಬುದರ ಮೇಲೆ ಕೆಲಸ ಮಾಡುತ್ತಿದ್ದರು. ಕ್ಯಾಪ್ಸೈಸಿನ್ ನರಕೋಶಗಳನ್ನು ಸಕ್ರಿಯಗೊಳಿಸುತ್ತದೆಂಬುದು ಗೊತ್ತಿದ್ದ ಸಂಗತಿಯಾಗಿತ್ತು; ಆದರೆ ಆ ಕಾರ್ಯವಿಧಾನವೇನೆಂಬುದು ಒಗಟಾಗಿತ್ತು.

ಜ್ಯೂಲಿಯಸ್ ಮತ್ತು ಅವರ ಜೊತೆಗಾರರು, ನೋವು, ಉಷ್ಣಾಂಶ ಮತ್ತು ಸ್ಪರ್ಶಕ್ಕೆ ಪ್ರತಿಕ್ರಿಯಿಸುವ ನರಕೋಶಗಳನ್ನು ಪ್ರತಿನಿಧಿಸುವ ಡಿಎನ್‌ಎ ತುಣುಕುಗಳ ಒಂದು ಸಂಗ್ರಹವನ್ನು ಸಿದ್ಧಪಡಿಸಿದರು. ಕಠಿಣವಾದ ಸಂಶೋಧನೆಯ ನಂತರ, ಜೀವಕೋಶಗಳನ್ನು ಕ್ಯಾಪ್ಸೈಸಿನ್‌ಗೆ ಸಂವೇದನಾಶೀಲಗೊಳಿಸುವ ಒಂದು ವಂಶವಾಹಿಯನ್ನು (ಜೀನ್) ಗುರುತಿಸುವುದು ಸಾಧ್ಯವಾಯಿತು. ಹೀಗೆ, ಕ್ಯಾಪ್ಸೈಸಿನ್‌ಗೆ ಸಂವೇದನಾಶೀಲವಾದ ವಂಶವಾಹಿ ದೊರಕಿತು! ಈ ವಂಶವಾಹಿಯ ಪ್ರೊಟೀನ್‌ನ್ನು ಟಿಆರ್‌ಪಿವಿ1 ಎಂದು ಕರೆಯಲಾಯಿತು. ಈ ರಿಸೆಪ್ಟರ್ ಉಷ್ಣಾಂಶವನ್ನು ಗ್ರಹಿಸುವ ರಿಸೆಪ್ಟರ್ ಆಗಿತ್ತು ಮತ್ತು ನೋವುಂಟುಮಾಡಬಲ್ಲವೆಂದು ಹೇಳಬಹುದಾದ ಉಷ್ಣಾಂಶಗಳಲ್ಲಿ ಇದು ಸಕ್ರಿಯಗೊಳ್ಳುತ್ತಿತ್ತು.

ಈ ಸಂಶೋಧನೆಯು ಅತಿ ಮಹತ್ವದ್ದಾಗಿತ್ತು. ಇದು, ತಣ್ಣಗಿರುವುದನ್ನು ಗ್ರಹಿಸುವ ಇನ್ನೂ ಅನೇಕ ತಾಪಮಾನದ ರಿಸೆಪ್ಟರ್‌ಗಳ ಶೋಧಕ್ಕೆ ದಾರಿಮಾಡಿಕೊಟ್ಟಿತು. ಅನೇಕ ಪ್ರಯೋಗಾಲಯಗಳು, ಜೀವವೈಜ್ಞಾನಿಕವಾಗಿ ಮಾರ್ಪಡಿಸಲ್ಪಟ್ಟು ಈ ಹೊಸದಾಗಿ ಕಂಡುಹಿಡಿಯಲಾದ ವಂಶವಾಹಿಗಳನ್ನು ಹೊಂದಿಲ್ಲದ ಇಲಿಗಳ ಮೇಲೆ, ಸಂಶೋಧಿಸಲ್ಪಟ್ಟಿದ್ದ ಗ್ರಾಹಕಗಳು ತಾಪಮಾನ ಸಂವೇದನೆಯ ಮೇಲೆ ಬೀರುವ ಪರಿಣಾಮವೇನು ಎಂಬುದರ ಕುರಿತ ಪ್ರಯೋಗಗಳನ್ನು ಆರಂಭಿಸಿದವು. ಡೇವಿಡ್ ಜ್ಯೂಲಿಯಸ್ ಅವರು ಟಿಆರ್‌ಪಿವಿ1ನ್ನು ಕಂಡುಹಿಡಿದ ಸಂಶೋಧನೆಯು, ತಾಪಮಾನದ ವ್ಯತ್ಯಾಸಗಳು ಹೇಗೆ ನರ ವ್ಯವಸ್ಥೆಯಲ್ಲಿ ವಿದ್ಯುತ್ ಸಂದೇಶಗಳನ್ನು ಹುಟ್ಟುಹಾಕಬಲ್ಲವು ಎಂಬ ಕುರಿತು ಪಥಪ್ರವರ್ತಕವಾದುದಾಗಿತ್ತು.

ಅಮೆರಿಕದ ಕ್ಯಾಲಿಫೋರ್ನಿಯಾದ ಲಹೋಯಾದಲ್ಲಿರುವ ಸ್ಕ್ರಿಪ್ಸ್ ರಿಸರ್ಚ್ ಸಂಸ್ಥೆಯಲ್ಲಿದ್ದ ಆರ್ಡೆಮ್ ಪಟಪೋಷಿಯನ್ ಅವರು, ಯಾಂತ್ರಿಕ ಪ್ರಚೋದಕಗಳಿಂದ ಸಕ್ರಿಯಗೊಳ್ಳುವ ಅಸ್ಪಷ್ಟ ರಿಸೆಪ್ಟರ್‌ಗಳನ್ನು ಕಂಡುಹಿಡಿಯಲು ಬಯಸಿದರು.

ಒಂದು ಮೈಕ್ರೋಪಿಪೆಟ್ (ದ್ರವಪದಾರ್ಥಗಳನ್ನು ಅಳೆಯುವುದಕ್ಕೆ ಬಳಸುವ ಒಂದು ಅತಿಸಣ್ಣ ಕೊಳವೆ)ನಿಂದ ತಟ್ಟಿದಾಗ ಅಳೆಯಲು ಸಾಧ್ಯವಿರುವಷ್ಟು ಪ್ರಮಾಣದ ವಿದ್ಯುತ್ ಸಂದೇಶವನ್ನು ಹೊರಡಿಸುವ ಜೀವಕೋಶಗಳ ಸಾಲೊಂದನ್ನು ಪಟಪೋಷಿಯನ್ ಮತ್ತು ಅವರ ಜೊತೆಗಾರರು ಮೊದಲು ಕಂಡುಹಿಡಿದರು. ಕಷ್ಟಕರವಾದ ಹುಡುಕಾಟದ ನಂತರ, ಪಟಪೋಷಿಯನ್ ಮತ್ತು ಅವರ ಜೊತೆಗಾರರಿಗೆ ಮೈಕ್ರೋಪಿಪೆಟ್‌ನ ಒತ್ತುವಿಕೆಯ ಪರಿಣಾಮವನ್ನು ಮೌನವಾಗಿಸುವಂತೆ ಜೀವಕೋಶಗಳನ್ನು ಅಸಂವೇದನಾಶೀಲಗೊಳಿಸುವ ವಂಶವಾಹಿಯನ್ನು ಶೋಧಿಸುವುದು ಸಾಧ್ಯವಾಯಿತು. ಈ ವಂಶವಾಹಿಗಳು ಈ ಹಿಂದೆ ನಮಗೆ ತಿಳಿಯದಿದ್ದ ಯಾಂತ್ರಿಕ ಸಂವೇದನಾಶೀಲ ಅಯಾನ್ ಚಾನಲ್‌ಅನ್ನು ಕೋಡ್ ಮಾಡುವಂಥವಾಗಿದ್ದವು.

ಇವುಗಳನ್ನು ’ಒತ್ತಡ’ ಎಂಬುದರ ಗ್ರೀಕ್ ಪದದ ಮೇಲೆ ಪೈಜ಼ೋ1 ಹಾಗೂ ಪೈಜ಼ೋ2 ಎಂದು ಹೆಸರಿಸಲಾಯಿತು. ಇನ್ನೂ ಮುಂದುವರೆದ ಅಧ್ಯಯನಗಳು, ಪೈಜ಼ೋ1 ಮತ್ತು ಪೈಜ಼ೋ2ಗಳು ಜೀವಕೋಶದ ಕೋಶಪದರದ ಮೇಲೆ ಉಂಟಾಗುವ ಒತ್ತಡದಿಂದ ನೇರವಾಗಿ ಸಕ್ರಿಯಗೊಳ್ಳುವ ಅಯಾನ್ ಚಾನಲ್‌ಗಳೆಂಬುದು ಖಚಿತವಾಯಿತು.

ಟಿಆರ್‌ಪಿವಿ1, ಟಿಆರ್‌ಪಿಎಂ8, ಪೈಜ಼ೋ ಚಾನಲ್‌ಗಳೆಲ್ಲವನ್ನು ಕಂಡುಹಿಡಿದ ವಿನೂತನ ಮತ್ತು ಅದ್ವಿತೀಯ ಸಂಶೋಧನೆಗಳ ಮೂಲಕ ಈ ಬಾರಿಯ ನೊಬೆಲ್ ಪಾರಿತೋಷಕದ ವಿಜೇತರು, ಶಾಖ, ತಂಪು ಮತ್ತು ಯಾಂತ್ರಿಕ ಶಕ್ತಿಗಳು ಉಂಟುಮಾಡುವ ನರ ಸಂವೇದನೆಗಳು ಹೇಗೆ ಸುತ್ತಲಿನ ಪರಿಸರವನ್ನು ಗ್ರಹಿಸಲು ಮತ್ತು ಅದಕ್ಕೆ ಹೊಂದಿಕೊಳ್ಳಲು ನಮಗೆ ನೆರವಾಗುತ್ತವೆಂಬುದನ್ನು ನಾವು ಅರಿಯಲು ಅವಕಾಶ ಮಾಡಿಕೊಟ್ಟಿದ್ದಾರೆ.

ಕನ್ನಡಕ್ಕೆ: ಮಲ್ಲಿಗೆ

ಡಾ. ಸ್ವಾತಿ ಶುಕ್ಲಾ

ಡಾ.ಸ್ವಾತಿ ಶುಕ್ಲಾ
ಜರ್ಮನಿಯಲ್ಲಿ ‘ರೋಗ ನಿರೋಧಕ’ ಶಾಸ್ತ್ರದಲ್ಲಿ ಪಿಎಚ್‌ಡಿಯನ್ನು ಮುಗಿಸಿದ್ದಾರೆ. ಸ್ವೀಡನ್‌ನಲ್ಲಿ ಪೋಸ್ಟ್ ಡಾಕ್ಟೋರಲ್ ಸಂಶೋಧನೆಯನ್ನೂ ಮುಗಿಸಿ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಸ್ತುತ ಗೌರಿಲಂಕೇಶ್‌ನ್ಯೂಸ್.ಕಾಮ್‌ನ ಸಹ ಸಂಪಾದಕರಾಗಿದ್ದಾರೆ.


ಇದನ್ನೂ ಓದಿ: ತಾಂಜೇನಿಯಾ ಲೇಖಕ ಅಬ್ದುಲ್ ರಜಾಕ್‌‌‌ ಅವರಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ-2021

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...