Homeಅಂಕಣಗಳುಬುಧನ ಜಾತಕ ಶಂಭಾ ಜೋಷಿ

ಬುಧನ ಜಾತಕ ಶಂಭಾ ಜೋಷಿ

- Advertisement -
- Advertisement -

“ಭಾಷೆಯೊಳಗಿನ ಪದಗಳಿಗೆ ಇತಿಹಾಸ ಉಂಟು. ಇದರಿಂದಾಗಿ, ಯಾವುದೊಂದು ಪದದ ಅರ್ಥವು ಬದಲಾಗುವುದರ ಹಿಂದಿನ ಇತಿಹಾಸವು ಅರಿಕೆಗೆ ಬರುತ್ತದೆ. ಜೀವನ ಜೀವಿತದ ಪ್ರತಿಬಿಂಬವು ಭಾಷೆಯಲ್ಲಿ ಒಡಮೂಡಿ ನಿಂತಿದೆ” ಎನ್ನುವ ಶಂಭಾ ಜೋಷಿ ಮಾನವನ ಭಾಷಾಪೂರ್ವ ಹಂತಕ್ಕೆ ಹೋಗಿ ಅಲ್ಲಿಂದ ನರನನ್ನು ರೂಪಿಸಿರುವ ಪ್ರಜ್ಞೆ ಮತ್ತು ಬುದ್ಧಿಗಳ ಮೂಲಕ್ಕೆ ಪಯಣಿಸುತ್ತಾರೆ. ಹಿಮ್ಮುಖವಾದ ಈ ಪಯಣಕ್ಕೆ ಕಾರಣವೇನು ಎನ್ನುವುದಾದರೆ ಪಾ ವೆಂ ಆಚಾರ್ಯರವರು ಗುರುತಿಸುವಂತೆ, “ಮನುಷ್ಯನ ಶ್ರೇಯಸ್ಸು ಯಾವುದರಲ್ಲಿದೆ? ಅವನ ಅಶ್ರೇಯಸ್ಸು ಯಾರಿಂದ ಆಗಿದೆ?” ಎಂಬುದು ಶಂಭಾರವರ ಪ್ರಧಾನ ತಾತ್ವಿಕ ಕಾಳಜಿ.

ಧರ್ಮ ಎಂದರೆ ವಿಶ್ವ ನಿಯಮ. ಆದರೆ, ಧರ್ಮ: ಸಂಸ್ಕೃತಿಯ ಮೂಲ ಪ್ರಚೋದನೆ ಮಾನವನ ಅಂತರಂಗದಲ್ಲಿ ಉಂಟು ಎನ್ನುವ ಬುಧನ ಜಾತಕವನ್ನು ಓದುವಾಗ “ತನ್ನ ನೇರಕ್ಕೆ ನೋಡುವ ಬುದ್ಧಿಗೆ, ಭಾಷೆಯ ಕಟ್ಟಡದ ತೊಡಕು ಅರ್ಥವಾಗುವುದಿಲ್ಲ. ಭಾಷೆಯು ವೈವೆತ್ತಿರುವಲ್ಲಿ, ಪ್ರಜ್ಞೆಯ ಅಂಗವಾದ ಮನಸ್ಸಿನ ಕೈವಾಡವಿದೆ” ಎನ್ನುವ ಅಂಶವನ್ನು ಅರಿವಿಗೆಟುಕಿಸುವಲ್ಲಿ ಶಂಭಾ ಯಶಸ್ವಿಯಾಗುತ್ತಾರೆ. ಆದರೆ ಶಂಭಾ ಜೊತೆಗೆ ತಾತ್ವಿಕವಾಗಿ ಪ್ರಯಾಣ ಮಾಡುವುದು ಅಷ್ಟೇನೂ ಸುಲಭವಲ್ಲ. ಒಬ್ಬ ಓದುಗನಿಗೆ ತಾತ್ವಿಕ ತಿಳಿವಳಿಕೆ, ಆಧ್ಯಾತ್ಮದ ತಾಂತ್ರಿಕ ತಿಳಿವಳಿಕೆ ಮತ್ತು ವೇದ ಪುರಾಣ ಇತಿಹಾಸಗಳ ಕೀಲಿ ಪ್ರಜ್ಞೆಗಳಿರಬೇಕು. ಪಾಶ್ಚಾತ್ಯ ಮತ್ತು ಪೌರಾತ್ಯಗಳೆರಡನ್ನೂ ಒಳಗೊಂಡು; ಅವುಗಳಿಂದ ಅತೀತವಾಗಿ ನಿಂತು ವಿವೇಚಿಸಲೂ ತಿಳಿದಿರಬೇಕು. ಮಾನವಶಾಸ್ತ್ರ, ಸಾಂಸ್ಕೃತಿಕ ಚರಿತ್ರೆ ಮತ್ತು ಮನೋವಿಜ್ಞಾನಗಳ ಮೂಲತತ್ವಗಳೂ ತಿಳಿದಿರಬೇಕು. ಇಲ್ಲವಾದರೆ, “ವೇದ ಸುಳ್ಳನ್ನು ನಂಬಹಚ್ಚಿದೆ. ರಾಮಾಯಣ, ಮಹಾಭಾರತ, ಪುರಾಣಾದಿಗಳು ಅಂತರ್ ವಿಸಂಗತಿಗಳಿಂದ ಕೂಡಿವೆ. ಮಾನವಧರ್ಮವನ್ನು ನಷ್ಟ ಮಾಡಿ, ಮೋಕ್ಷಕಾಮಿ ನರಧರ್ಮ ಎತ್ತಿಕಟ್ಟಲು ವ್ಯವಸ್ಥಿತ ರೀತಿಯಿಂದ ರಚನೆಗೊಂಡಿದೆ. ಜೀವನ್ಮುಕ್ತಿಯನ್ನು ಪ್ರತಿಪಾದಿಸುವ ಸನ್ಯಾಸಿ ಸಂತರು ಉನ್ಮಾದಕ್ಕೊಳಗಾಗಿ ಸತ್ಯವನ್ನು ಅರಿಯಲಾರದ ಅಜ್ಞರು; ಇಲ್ಲವೇ ವಂಚಕರು. ಪರಂಪರೆಯ ಕಣ್ಕಟ್ಟನ್ನು ಅರಿಯದೇ ತತ್ವಜ್ಞಾನ ಪ್ರತಿಪಾದಿಸಿರುವ ರಾಮಕೃಷ್ಣ ಪರಮಹಂಸ, ಅರವಿಂದ, ಟಿಳಕ್, ಗಾಂಧೀ, ರಾಧಾಕೃಷ್ಣನ್ ಮೊದಲಾದವರೆಲ್ಲ ಮರುಳರು; ಅರಿತೂ ಪ್ರತಿಪಾದಿಸಿದ್ದರೆ ಮೋಸಗಾರರು. ಭಾರತೀಯರು ಧರ್ಮಗ್ರಂಥಗಳ ಸಮ್ಮೋಹನಕ್ಕೆ ಒಳಗಾಗಿದ್ದಾರೆ. ಅವರ ತಲೆ ತಿರುಗಿಹೋಗಿದೆ ! (ಬ್ರೈನ್‍ವಾಶ್ ಆಗಿದೆ) ಅಂದರೆ, ಭಾರತದಲ್ಲಿ ಸಾಂಸ್ಕೃತಿಕ ತಿರುವುಮುರುವು ಉಂಟಾಗಿದೆ; ಸಾಂಸ್ಕೃತಿಕ ಪಲ್ಲಟವಾಗಿದೆ. ಈ ಸಾಂಸ್ಕೃತಿಕ ಪಲ್ಲಟವೇ ಭಾರತೀಯರ ಅವನತಿಗೆ ಕಾರಣವಾಗಿದೆ” ಎಂದು ನಿಷ್ಟುರಿ ತತ್ವಜ್ಞಾನಿಯೊಬ್ಬ ಗರ್ಜಿಸಿದಂತೆ ತೋರುತ್ತದೆ. ಆದರೆ, “ಭಾರತೀಯರು ತಮ್ಮ ಮೂಲ ಪರಂಪರೆಯನ್ನು ಅರಿತು, ಅದನ್ನು ಆಚರಣೆಯಲ್ಲಿ ತಂದಾಗ ಮಾತ್ರ ಅವರ ಉದ್ಧಾರ ಸಾಧ್ಯ. ‘ವೈವಸ್ವತಮನು ಪ್ರಣೀತ ಮಾನವಧರ್ಮ’ ಇದು ಭಾರತೀಯರ ಧಾರ್ಮಿಕ ಪರಂಪರೆಯ ಮೂಲ ಹೆಸರು. ಪ್ರಪಂಚದಲ್ಲಿ ಧರ್ಮ ಅನ್ನುವುದಿದ್ದರೆ, ಅದು ಮಾನವ ಧರ್ಮ ಒಂದೇ” ಎಂಬುದು ಅವರ ಗ್ರಹಿಕೆ ಮತ್ತು ಸಮರ್ಥನೆಯ ಅರಿಕೆ.

ಭಾರತೀಯರು ತಲೆಯ ಮೇಲೆ ಇಟ್ಟುಕೊಂಡು ಕಣ್ಣು ಮುಚ್ಚಿಕೊಂಡಿರುವ ಪವಿತ್ರಗ್ರಂಥಗಳು ಹೇಗೆ ವೈವಸ್ವತಸತ್ಯವನ್ನು ಬುದ್ಧಿಪೂರ್ವಕವಾಗಿ ಮರೆಮಾಚಿವೆಯೆಂಬುದನ್ನು ಉದಾಹರಣೆಗಳೊಂದಿಗೆ ಶಂಭಾ ಅವರು ಪ್ರತಿಪಾದಿಸಿ ವ್ಯಾಸ, ವಾಲ್ಮೀಕಿ, ವಶಿಷ್ಠಾದಿಗಳೆಲ್ಲಾ ಹೇಗೆ ಎಡವಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತಾರೆ.

ಭಗವದ್ಗೀತೆಯಲ್ಲಿರುವ ಎಡವಟ್ಟುಗಳನ್ನು ತೋರುವ ಶಂಭಾ “ಉದ್ಧರೇತ್ ಆತ್ಮನಾತ್ಮಾನಂ” ಎಂದು ಉಪದೇಶ ಮಾಡುವ ಅ-ಮೃತ ಸ್ವರೂಪ ಈ ಭಗವಂತನು. ಆ ಬಳಿಕ, ನನಗೇ ಶರಣು ಬಾ ಎಂದು ಅಪ್ಪಣೆ ಕೊಡುತ್ತಾನೆ! ಎಂದು ವ್ಯಂಗ್ಯವಾಡುತ್ತಾರೆ.

ನಿಜವಾದ ದೇವರು ಯಾರು? ಅವನ ಐತಿಹಾಸಿಕ ಸ್ವರೂಪವೇನು ಎಂದೆಲ್ಲಾ ಎಳೆ ಹಿಡಿದುಹೋಗುವ ಶಂಭಾರವರ ಅಧ್ಯಯನ ಮತ್ತು ವಿಶ್ಲೇಷಣೆಗಳನ್ನು ಒಪ್ಪದ ಕೆ ಎಸ್ ನಾರಾಯಣಾಚಾರ್ಯರಂತಹ ಸಂಪ್ರದಾಯವಾದಿಗಳು ಅವರನ್ನು ಕಠೋರವಾಗಿ ಟೀಕಿಸಿದ್ದು ಉಂಟು. ಆದರೆ, ಅವರ ಟೀಕೆಯಲ್ಲಿ ವ್ಯಕ್ತಿಗತವಾಗಿ ನಿಂದನೆಯ ಮಟ್ಟಕ್ಕೆ ಹೋಗುವರೇ ಹೊರತು, ಶಂಭಾ ಎತ್ತುವ ಪ್ರಶ್ನೆಗಳಿಗೆ ಉತ್ತರಿಸಲು ಅಥವಾ ಪರ್ಯಾಯವಾಗಿ ಮತ್ತೊಂದು ಸಂಶೋಧನಾ ಶಿಸ್ತನ್ನು ತೋರಿಸಲು ವಿಫಲರಾಗುತ್ತಾರೆ.

ಬುದ್ಧಿ, ಪ್ರಜ್ಞೆ, ಮಾನವ, ನರ, ಧರ್ಮ, ಸಂಸ್ಕೃತಿ ಹೀಗೆ ಎಲ್ಲವನ್ನೂ ಪದರಪದರವಾಗಿ ಅರಿವಿಗೆ ಎಟುಕಿಸುವ ಈ ಬುಧನ ಜಾತಕ ಅರಿಯಲು ಬಹು ತಾಳ್ಮೆ ಮತ್ತು ಎಚ್ಚರಿಕೆ ಬೇಕು.

ಈ ಪುಟ್ಟ ಲೇಖನದಲ್ಲಿ ಅವನ್ನು ಸಂಗ್ರಹಿಸಿ ಒಪ್ಪಿಸಲು ಸಾಧ್ಯವೇ ಇಲ್ಲ. ಆದರೆ ಇದೊಂದು ಪರಿಚಯಾತ್ಮಕ ಲೇಖನವಾಗಿ ಓದುಗರು ಶಂಭಾ ಕೃತಿಗಳ ಕಡೆಗೆ ಹೊರಳಲಿ ಮತ್ತು ತಿಳಿಯುವ ಪ್ರಯತ್ನಗಳನ್ನು ಮಾಡಲಿ ಎಂಬ ಆಶಯವನ್ನು ಪ್ರಾಮಾಣಿಕವಾಗಿ ಹೊಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...