Homeಅಂಕಣಗಳುಬುಧನ ಜಾತಕ ಶಂಭಾ ಜೋಷಿ

ಬುಧನ ಜಾತಕ ಶಂಭಾ ಜೋಷಿ

- Advertisement -
- Advertisement -

“ಭಾಷೆಯೊಳಗಿನ ಪದಗಳಿಗೆ ಇತಿಹಾಸ ಉಂಟು. ಇದರಿಂದಾಗಿ, ಯಾವುದೊಂದು ಪದದ ಅರ್ಥವು ಬದಲಾಗುವುದರ ಹಿಂದಿನ ಇತಿಹಾಸವು ಅರಿಕೆಗೆ ಬರುತ್ತದೆ. ಜೀವನ ಜೀವಿತದ ಪ್ರತಿಬಿಂಬವು ಭಾಷೆಯಲ್ಲಿ ಒಡಮೂಡಿ ನಿಂತಿದೆ” ಎನ್ನುವ ಶಂಭಾ ಜೋಷಿ ಮಾನವನ ಭಾಷಾಪೂರ್ವ ಹಂತಕ್ಕೆ ಹೋಗಿ ಅಲ್ಲಿಂದ ನರನನ್ನು ರೂಪಿಸಿರುವ ಪ್ರಜ್ಞೆ ಮತ್ತು ಬುದ್ಧಿಗಳ ಮೂಲಕ್ಕೆ ಪಯಣಿಸುತ್ತಾರೆ. ಹಿಮ್ಮುಖವಾದ ಈ ಪಯಣಕ್ಕೆ ಕಾರಣವೇನು ಎನ್ನುವುದಾದರೆ ಪಾ ವೆಂ ಆಚಾರ್ಯರವರು ಗುರುತಿಸುವಂತೆ, “ಮನುಷ್ಯನ ಶ್ರೇಯಸ್ಸು ಯಾವುದರಲ್ಲಿದೆ? ಅವನ ಅಶ್ರೇಯಸ್ಸು ಯಾರಿಂದ ಆಗಿದೆ?” ಎಂಬುದು ಶಂಭಾರವರ ಪ್ರಧಾನ ತಾತ್ವಿಕ ಕಾಳಜಿ.

ಧರ್ಮ ಎಂದರೆ ವಿಶ್ವ ನಿಯಮ. ಆದರೆ, ಧರ್ಮ: ಸಂಸ್ಕೃತಿಯ ಮೂಲ ಪ್ರಚೋದನೆ ಮಾನವನ ಅಂತರಂಗದಲ್ಲಿ ಉಂಟು ಎನ್ನುವ ಬುಧನ ಜಾತಕವನ್ನು ಓದುವಾಗ “ತನ್ನ ನೇರಕ್ಕೆ ನೋಡುವ ಬುದ್ಧಿಗೆ, ಭಾಷೆಯ ಕಟ್ಟಡದ ತೊಡಕು ಅರ್ಥವಾಗುವುದಿಲ್ಲ. ಭಾಷೆಯು ವೈವೆತ್ತಿರುವಲ್ಲಿ, ಪ್ರಜ್ಞೆಯ ಅಂಗವಾದ ಮನಸ್ಸಿನ ಕೈವಾಡವಿದೆ” ಎನ್ನುವ ಅಂಶವನ್ನು ಅರಿವಿಗೆಟುಕಿಸುವಲ್ಲಿ ಶಂಭಾ ಯಶಸ್ವಿಯಾಗುತ್ತಾರೆ. ಆದರೆ ಶಂಭಾ ಜೊತೆಗೆ ತಾತ್ವಿಕವಾಗಿ ಪ್ರಯಾಣ ಮಾಡುವುದು ಅಷ್ಟೇನೂ ಸುಲಭವಲ್ಲ. ಒಬ್ಬ ಓದುಗನಿಗೆ ತಾತ್ವಿಕ ತಿಳಿವಳಿಕೆ, ಆಧ್ಯಾತ್ಮದ ತಾಂತ್ರಿಕ ತಿಳಿವಳಿಕೆ ಮತ್ತು ವೇದ ಪುರಾಣ ಇತಿಹಾಸಗಳ ಕೀಲಿ ಪ್ರಜ್ಞೆಗಳಿರಬೇಕು. ಪಾಶ್ಚಾತ್ಯ ಮತ್ತು ಪೌರಾತ್ಯಗಳೆರಡನ್ನೂ ಒಳಗೊಂಡು; ಅವುಗಳಿಂದ ಅತೀತವಾಗಿ ನಿಂತು ವಿವೇಚಿಸಲೂ ತಿಳಿದಿರಬೇಕು. ಮಾನವಶಾಸ್ತ್ರ, ಸಾಂಸ್ಕೃತಿಕ ಚರಿತ್ರೆ ಮತ್ತು ಮನೋವಿಜ್ಞಾನಗಳ ಮೂಲತತ್ವಗಳೂ ತಿಳಿದಿರಬೇಕು. ಇಲ್ಲವಾದರೆ, “ವೇದ ಸುಳ್ಳನ್ನು ನಂಬಹಚ್ಚಿದೆ. ರಾಮಾಯಣ, ಮಹಾಭಾರತ, ಪುರಾಣಾದಿಗಳು ಅಂತರ್ ವಿಸಂಗತಿಗಳಿಂದ ಕೂಡಿವೆ. ಮಾನವಧರ್ಮವನ್ನು ನಷ್ಟ ಮಾಡಿ, ಮೋಕ್ಷಕಾಮಿ ನರಧರ್ಮ ಎತ್ತಿಕಟ್ಟಲು ವ್ಯವಸ್ಥಿತ ರೀತಿಯಿಂದ ರಚನೆಗೊಂಡಿದೆ. ಜೀವನ್ಮುಕ್ತಿಯನ್ನು ಪ್ರತಿಪಾದಿಸುವ ಸನ್ಯಾಸಿ ಸಂತರು ಉನ್ಮಾದಕ್ಕೊಳಗಾಗಿ ಸತ್ಯವನ್ನು ಅರಿಯಲಾರದ ಅಜ್ಞರು; ಇಲ್ಲವೇ ವಂಚಕರು. ಪರಂಪರೆಯ ಕಣ್ಕಟ್ಟನ್ನು ಅರಿಯದೇ ತತ್ವಜ್ಞಾನ ಪ್ರತಿಪಾದಿಸಿರುವ ರಾಮಕೃಷ್ಣ ಪರಮಹಂಸ, ಅರವಿಂದ, ಟಿಳಕ್, ಗಾಂಧೀ, ರಾಧಾಕೃಷ್ಣನ್ ಮೊದಲಾದವರೆಲ್ಲ ಮರುಳರು; ಅರಿತೂ ಪ್ರತಿಪಾದಿಸಿದ್ದರೆ ಮೋಸಗಾರರು. ಭಾರತೀಯರು ಧರ್ಮಗ್ರಂಥಗಳ ಸಮ್ಮೋಹನಕ್ಕೆ ಒಳಗಾಗಿದ್ದಾರೆ. ಅವರ ತಲೆ ತಿರುಗಿಹೋಗಿದೆ ! (ಬ್ರೈನ್‍ವಾಶ್ ಆಗಿದೆ) ಅಂದರೆ, ಭಾರತದಲ್ಲಿ ಸಾಂಸ್ಕೃತಿಕ ತಿರುವುಮುರುವು ಉಂಟಾಗಿದೆ; ಸಾಂಸ್ಕೃತಿಕ ಪಲ್ಲಟವಾಗಿದೆ. ಈ ಸಾಂಸ್ಕೃತಿಕ ಪಲ್ಲಟವೇ ಭಾರತೀಯರ ಅವನತಿಗೆ ಕಾರಣವಾಗಿದೆ” ಎಂದು ನಿಷ್ಟುರಿ ತತ್ವಜ್ಞಾನಿಯೊಬ್ಬ ಗರ್ಜಿಸಿದಂತೆ ತೋರುತ್ತದೆ. ಆದರೆ, “ಭಾರತೀಯರು ತಮ್ಮ ಮೂಲ ಪರಂಪರೆಯನ್ನು ಅರಿತು, ಅದನ್ನು ಆಚರಣೆಯಲ್ಲಿ ತಂದಾಗ ಮಾತ್ರ ಅವರ ಉದ್ಧಾರ ಸಾಧ್ಯ. ‘ವೈವಸ್ವತಮನು ಪ್ರಣೀತ ಮಾನವಧರ್ಮ’ ಇದು ಭಾರತೀಯರ ಧಾರ್ಮಿಕ ಪರಂಪರೆಯ ಮೂಲ ಹೆಸರು. ಪ್ರಪಂಚದಲ್ಲಿ ಧರ್ಮ ಅನ್ನುವುದಿದ್ದರೆ, ಅದು ಮಾನವ ಧರ್ಮ ಒಂದೇ” ಎಂಬುದು ಅವರ ಗ್ರಹಿಕೆ ಮತ್ತು ಸಮರ್ಥನೆಯ ಅರಿಕೆ.

ಭಾರತೀಯರು ತಲೆಯ ಮೇಲೆ ಇಟ್ಟುಕೊಂಡು ಕಣ್ಣು ಮುಚ್ಚಿಕೊಂಡಿರುವ ಪವಿತ್ರಗ್ರಂಥಗಳು ಹೇಗೆ ವೈವಸ್ವತಸತ್ಯವನ್ನು ಬುದ್ಧಿಪೂರ್ವಕವಾಗಿ ಮರೆಮಾಚಿವೆಯೆಂಬುದನ್ನು ಉದಾಹರಣೆಗಳೊಂದಿಗೆ ಶಂಭಾ ಅವರು ಪ್ರತಿಪಾದಿಸಿ ವ್ಯಾಸ, ವಾಲ್ಮೀಕಿ, ವಶಿಷ್ಠಾದಿಗಳೆಲ್ಲಾ ಹೇಗೆ ಎಡವಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತಾರೆ.

ಭಗವದ್ಗೀತೆಯಲ್ಲಿರುವ ಎಡವಟ್ಟುಗಳನ್ನು ತೋರುವ ಶಂಭಾ “ಉದ್ಧರೇತ್ ಆತ್ಮನಾತ್ಮಾನಂ” ಎಂದು ಉಪದೇಶ ಮಾಡುವ ಅ-ಮೃತ ಸ್ವರೂಪ ಈ ಭಗವಂತನು. ಆ ಬಳಿಕ, ನನಗೇ ಶರಣು ಬಾ ಎಂದು ಅಪ್ಪಣೆ ಕೊಡುತ್ತಾನೆ! ಎಂದು ವ್ಯಂಗ್ಯವಾಡುತ್ತಾರೆ.

ನಿಜವಾದ ದೇವರು ಯಾರು? ಅವನ ಐತಿಹಾಸಿಕ ಸ್ವರೂಪವೇನು ಎಂದೆಲ್ಲಾ ಎಳೆ ಹಿಡಿದುಹೋಗುವ ಶಂಭಾರವರ ಅಧ್ಯಯನ ಮತ್ತು ವಿಶ್ಲೇಷಣೆಗಳನ್ನು ಒಪ್ಪದ ಕೆ ಎಸ್ ನಾರಾಯಣಾಚಾರ್ಯರಂತಹ ಸಂಪ್ರದಾಯವಾದಿಗಳು ಅವರನ್ನು ಕಠೋರವಾಗಿ ಟೀಕಿಸಿದ್ದು ಉಂಟು. ಆದರೆ, ಅವರ ಟೀಕೆಯಲ್ಲಿ ವ್ಯಕ್ತಿಗತವಾಗಿ ನಿಂದನೆಯ ಮಟ್ಟಕ್ಕೆ ಹೋಗುವರೇ ಹೊರತು, ಶಂಭಾ ಎತ್ತುವ ಪ್ರಶ್ನೆಗಳಿಗೆ ಉತ್ತರಿಸಲು ಅಥವಾ ಪರ್ಯಾಯವಾಗಿ ಮತ್ತೊಂದು ಸಂಶೋಧನಾ ಶಿಸ್ತನ್ನು ತೋರಿಸಲು ವಿಫಲರಾಗುತ್ತಾರೆ.

ಬುದ್ಧಿ, ಪ್ರಜ್ಞೆ, ಮಾನವ, ನರ, ಧರ್ಮ, ಸಂಸ್ಕೃತಿ ಹೀಗೆ ಎಲ್ಲವನ್ನೂ ಪದರಪದರವಾಗಿ ಅರಿವಿಗೆ ಎಟುಕಿಸುವ ಈ ಬುಧನ ಜಾತಕ ಅರಿಯಲು ಬಹು ತಾಳ್ಮೆ ಮತ್ತು ಎಚ್ಚರಿಕೆ ಬೇಕು.

ಈ ಪುಟ್ಟ ಲೇಖನದಲ್ಲಿ ಅವನ್ನು ಸಂಗ್ರಹಿಸಿ ಒಪ್ಪಿಸಲು ಸಾಧ್ಯವೇ ಇಲ್ಲ. ಆದರೆ ಇದೊಂದು ಪರಿಚಯಾತ್ಮಕ ಲೇಖನವಾಗಿ ಓದುಗರು ಶಂಭಾ ಕೃತಿಗಳ ಕಡೆಗೆ ಹೊರಳಲಿ ಮತ್ತು ತಿಳಿಯುವ ಪ್ರಯತ್ನಗಳನ್ನು ಮಾಡಲಿ ಎಂಬ ಆಶಯವನ್ನು ಪ್ರಾಮಾಣಿಕವಾಗಿ ಹೊಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...