Homeಅಂಕಣಗಳುಬುಧನ ಜಾತಕ ಶಂಭಾ ಜೋಷಿ

ಬುಧನ ಜಾತಕ ಶಂಭಾ ಜೋಷಿ

- Advertisement -
- Advertisement -

“ಭಾಷೆಯೊಳಗಿನ ಪದಗಳಿಗೆ ಇತಿಹಾಸ ಉಂಟು. ಇದರಿಂದಾಗಿ, ಯಾವುದೊಂದು ಪದದ ಅರ್ಥವು ಬದಲಾಗುವುದರ ಹಿಂದಿನ ಇತಿಹಾಸವು ಅರಿಕೆಗೆ ಬರುತ್ತದೆ. ಜೀವನ ಜೀವಿತದ ಪ್ರತಿಬಿಂಬವು ಭಾಷೆಯಲ್ಲಿ ಒಡಮೂಡಿ ನಿಂತಿದೆ” ಎನ್ನುವ ಶಂಭಾ ಜೋಷಿ ಮಾನವನ ಭಾಷಾಪೂರ್ವ ಹಂತಕ್ಕೆ ಹೋಗಿ ಅಲ್ಲಿಂದ ನರನನ್ನು ರೂಪಿಸಿರುವ ಪ್ರಜ್ಞೆ ಮತ್ತು ಬುದ್ಧಿಗಳ ಮೂಲಕ್ಕೆ ಪಯಣಿಸುತ್ತಾರೆ. ಹಿಮ್ಮುಖವಾದ ಈ ಪಯಣಕ್ಕೆ ಕಾರಣವೇನು ಎನ್ನುವುದಾದರೆ ಪಾ ವೆಂ ಆಚಾರ್ಯರವರು ಗುರುತಿಸುವಂತೆ, “ಮನುಷ್ಯನ ಶ್ರೇಯಸ್ಸು ಯಾವುದರಲ್ಲಿದೆ? ಅವನ ಅಶ್ರೇಯಸ್ಸು ಯಾರಿಂದ ಆಗಿದೆ?” ಎಂಬುದು ಶಂಭಾರವರ ಪ್ರಧಾನ ತಾತ್ವಿಕ ಕಾಳಜಿ.

ಧರ್ಮ ಎಂದರೆ ವಿಶ್ವ ನಿಯಮ. ಆದರೆ, ಧರ್ಮ: ಸಂಸ್ಕೃತಿಯ ಮೂಲ ಪ್ರಚೋದನೆ ಮಾನವನ ಅಂತರಂಗದಲ್ಲಿ ಉಂಟು ಎನ್ನುವ ಬುಧನ ಜಾತಕವನ್ನು ಓದುವಾಗ “ತನ್ನ ನೇರಕ್ಕೆ ನೋಡುವ ಬುದ್ಧಿಗೆ, ಭಾಷೆಯ ಕಟ್ಟಡದ ತೊಡಕು ಅರ್ಥವಾಗುವುದಿಲ್ಲ. ಭಾಷೆಯು ವೈವೆತ್ತಿರುವಲ್ಲಿ, ಪ್ರಜ್ಞೆಯ ಅಂಗವಾದ ಮನಸ್ಸಿನ ಕೈವಾಡವಿದೆ” ಎನ್ನುವ ಅಂಶವನ್ನು ಅರಿವಿಗೆಟುಕಿಸುವಲ್ಲಿ ಶಂಭಾ ಯಶಸ್ವಿಯಾಗುತ್ತಾರೆ. ಆದರೆ ಶಂಭಾ ಜೊತೆಗೆ ತಾತ್ವಿಕವಾಗಿ ಪ್ರಯಾಣ ಮಾಡುವುದು ಅಷ್ಟೇನೂ ಸುಲಭವಲ್ಲ. ಒಬ್ಬ ಓದುಗನಿಗೆ ತಾತ್ವಿಕ ತಿಳಿವಳಿಕೆ, ಆಧ್ಯಾತ್ಮದ ತಾಂತ್ರಿಕ ತಿಳಿವಳಿಕೆ ಮತ್ತು ವೇದ ಪುರಾಣ ಇತಿಹಾಸಗಳ ಕೀಲಿ ಪ್ರಜ್ಞೆಗಳಿರಬೇಕು. ಪಾಶ್ಚಾತ್ಯ ಮತ್ತು ಪೌರಾತ್ಯಗಳೆರಡನ್ನೂ ಒಳಗೊಂಡು; ಅವುಗಳಿಂದ ಅತೀತವಾಗಿ ನಿಂತು ವಿವೇಚಿಸಲೂ ತಿಳಿದಿರಬೇಕು. ಮಾನವಶಾಸ್ತ್ರ, ಸಾಂಸ್ಕೃತಿಕ ಚರಿತ್ರೆ ಮತ್ತು ಮನೋವಿಜ್ಞಾನಗಳ ಮೂಲತತ್ವಗಳೂ ತಿಳಿದಿರಬೇಕು. ಇಲ್ಲವಾದರೆ, “ವೇದ ಸುಳ್ಳನ್ನು ನಂಬಹಚ್ಚಿದೆ. ರಾಮಾಯಣ, ಮಹಾಭಾರತ, ಪುರಾಣಾದಿಗಳು ಅಂತರ್ ವಿಸಂಗತಿಗಳಿಂದ ಕೂಡಿವೆ. ಮಾನವಧರ್ಮವನ್ನು ನಷ್ಟ ಮಾಡಿ, ಮೋಕ್ಷಕಾಮಿ ನರಧರ್ಮ ಎತ್ತಿಕಟ್ಟಲು ವ್ಯವಸ್ಥಿತ ರೀತಿಯಿಂದ ರಚನೆಗೊಂಡಿದೆ. ಜೀವನ್ಮುಕ್ತಿಯನ್ನು ಪ್ರತಿಪಾದಿಸುವ ಸನ್ಯಾಸಿ ಸಂತರು ಉನ್ಮಾದಕ್ಕೊಳಗಾಗಿ ಸತ್ಯವನ್ನು ಅರಿಯಲಾರದ ಅಜ್ಞರು; ಇಲ್ಲವೇ ವಂಚಕರು. ಪರಂಪರೆಯ ಕಣ್ಕಟ್ಟನ್ನು ಅರಿಯದೇ ತತ್ವಜ್ಞಾನ ಪ್ರತಿಪಾದಿಸಿರುವ ರಾಮಕೃಷ್ಣ ಪರಮಹಂಸ, ಅರವಿಂದ, ಟಿಳಕ್, ಗಾಂಧೀ, ರಾಧಾಕೃಷ್ಣನ್ ಮೊದಲಾದವರೆಲ್ಲ ಮರುಳರು; ಅರಿತೂ ಪ್ರತಿಪಾದಿಸಿದ್ದರೆ ಮೋಸಗಾರರು. ಭಾರತೀಯರು ಧರ್ಮಗ್ರಂಥಗಳ ಸಮ್ಮೋಹನಕ್ಕೆ ಒಳಗಾಗಿದ್ದಾರೆ. ಅವರ ತಲೆ ತಿರುಗಿಹೋಗಿದೆ ! (ಬ್ರೈನ್‍ವಾಶ್ ಆಗಿದೆ) ಅಂದರೆ, ಭಾರತದಲ್ಲಿ ಸಾಂಸ್ಕೃತಿಕ ತಿರುವುಮುರುವು ಉಂಟಾಗಿದೆ; ಸಾಂಸ್ಕೃತಿಕ ಪಲ್ಲಟವಾಗಿದೆ. ಈ ಸಾಂಸ್ಕೃತಿಕ ಪಲ್ಲಟವೇ ಭಾರತೀಯರ ಅವನತಿಗೆ ಕಾರಣವಾಗಿದೆ” ಎಂದು ನಿಷ್ಟುರಿ ತತ್ವಜ್ಞಾನಿಯೊಬ್ಬ ಗರ್ಜಿಸಿದಂತೆ ತೋರುತ್ತದೆ. ಆದರೆ, “ಭಾರತೀಯರು ತಮ್ಮ ಮೂಲ ಪರಂಪರೆಯನ್ನು ಅರಿತು, ಅದನ್ನು ಆಚರಣೆಯಲ್ಲಿ ತಂದಾಗ ಮಾತ್ರ ಅವರ ಉದ್ಧಾರ ಸಾಧ್ಯ. ‘ವೈವಸ್ವತಮನು ಪ್ರಣೀತ ಮಾನವಧರ್ಮ’ ಇದು ಭಾರತೀಯರ ಧಾರ್ಮಿಕ ಪರಂಪರೆಯ ಮೂಲ ಹೆಸರು. ಪ್ರಪಂಚದಲ್ಲಿ ಧರ್ಮ ಅನ್ನುವುದಿದ್ದರೆ, ಅದು ಮಾನವ ಧರ್ಮ ಒಂದೇ” ಎಂಬುದು ಅವರ ಗ್ರಹಿಕೆ ಮತ್ತು ಸಮರ್ಥನೆಯ ಅರಿಕೆ.

ಭಾರತೀಯರು ತಲೆಯ ಮೇಲೆ ಇಟ್ಟುಕೊಂಡು ಕಣ್ಣು ಮುಚ್ಚಿಕೊಂಡಿರುವ ಪವಿತ್ರಗ್ರಂಥಗಳು ಹೇಗೆ ವೈವಸ್ವತಸತ್ಯವನ್ನು ಬುದ್ಧಿಪೂರ್ವಕವಾಗಿ ಮರೆಮಾಚಿವೆಯೆಂಬುದನ್ನು ಉದಾಹರಣೆಗಳೊಂದಿಗೆ ಶಂಭಾ ಅವರು ಪ್ರತಿಪಾದಿಸಿ ವ್ಯಾಸ, ವಾಲ್ಮೀಕಿ, ವಶಿಷ್ಠಾದಿಗಳೆಲ್ಲಾ ಹೇಗೆ ಎಡವಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತಾರೆ.

ಭಗವದ್ಗೀತೆಯಲ್ಲಿರುವ ಎಡವಟ್ಟುಗಳನ್ನು ತೋರುವ ಶಂಭಾ “ಉದ್ಧರೇತ್ ಆತ್ಮನಾತ್ಮಾನಂ” ಎಂದು ಉಪದೇಶ ಮಾಡುವ ಅ-ಮೃತ ಸ್ವರೂಪ ಈ ಭಗವಂತನು. ಆ ಬಳಿಕ, ನನಗೇ ಶರಣು ಬಾ ಎಂದು ಅಪ್ಪಣೆ ಕೊಡುತ್ತಾನೆ! ಎಂದು ವ್ಯಂಗ್ಯವಾಡುತ್ತಾರೆ.

ನಿಜವಾದ ದೇವರು ಯಾರು? ಅವನ ಐತಿಹಾಸಿಕ ಸ್ವರೂಪವೇನು ಎಂದೆಲ್ಲಾ ಎಳೆ ಹಿಡಿದುಹೋಗುವ ಶಂಭಾರವರ ಅಧ್ಯಯನ ಮತ್ತು ವಿಶ್ಲೇಷಣೆಗಳನ್ನು ಒಪ್ಪದ ಕೆ ಎಸ್ ನಾರಾಯಣಾಚಾರ್ಯರಂತಹ ಸಂಪ್ರದಾಯವಾದಿಗಳು ಅವರನ್ನು ಕಠೋರವಾಗಿ ಟೀಕಿಸಿದ್ದು ಉಂಟು. ಆದರೆ, ಅವರ ಟೀಕೆಯಲ್ಲಿ ವ್ಯಕ್ತಿಗತವಾಗಿ ನಿಂದನೆಯ ಮಟ್ಟಕ್ಕೆ ಹೋಗುವರೇ ಹೊರತು, ಶಂಭಾ ಎತ್ತುವ ಪ್ರಶ್ನೆಗಳಿಗೆ ಉತ್ತರಿಸಲು ಅಥವಾ ಪರ್ಯಾಯವಾಗಿ ಮತ್ತೊಂದು ಸಂಶೋಧನಾ ಶಿಸ್ತನ್ನು ತೋರಿಸಲು ವಿಫಲರಾಗುತ್ತಾರೆ.

ಬುದ್ಧಿ, ಪ್ರಜ್ಞೆ, ಮಾನವ, ನರ, ಧರ್ಮ, ಸಂಸ್ಕೃತಿ ಹೀಗೆ ಎಲ್ಲವನ್ನೂ ಪದರಪದರವಾಗಿ ಅರಿವಿಗೆ ಎಟುಕಿಸುವ ಈ ಬುಧನ ಜಾತಕ ಅರಿಯಲು ಬಹು ತಾಳ್ಮೆ ಮತ್ತು ಎಚ್ಚರಿಕೆ ಬೇಕು.

ಈ ಪುಟ್ಟ ಲೇಖನದಲ್ಲಿ ಅವನ್ನು ಸಂಗ್ರಹಿಸಿ ಒಪ್ಪಿಸಲು ಸಾಧ್ಯವೇ ಇಲ್ಲ. ಆದರೆ ಇದೊಂದು ಪರಿಚಯಾತ್ಮಕ ಲೇಖನವಾಗಿ ಓದುಗರು ಶಂಭಾ ಕೃತಿಗಳ ಕಡೆಗೆ ಹೊರಳಲಿ ಮತ್ತು ತಿಳಿಯುವ ಪ್ರಯತ್ನಗಳನ್ನು ಮಾಡಲಿ ಎಂಬ ಆಶಯವನ್ನು ಪ್ರಾಮಾಣಿಕವಾಗಿ ಹೊಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....