ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಭಾರತದ ಹಿರಿಯ ಪುರುಷರಲ್ಲಿ ಒಬ್ಬರಾದ ಸುಧಾಕರ್ ಚತುರ್ವೇದಿಯವರಯ ಗುರುವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಇವರು ವೇದ ವಿದ್ವಾಂಸ ಮತ್ತು ಪತ್ರಕರ್ತ ಕೂಡಾ ಆಗಿದ್ದ ಇವರು ಜಲಿಯನ್ ವಾಲಾ ಬಾಗ್ ಹತ್ಯಾಕಾಂಡಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದರು. ನಾಲ್ಕು ವೇದಗಳನ್ನು ಚೆನ್ನಾಗಿ ತಿಳಿದಿದ್ದರಿಂದ ಪಂಡಿತ್ ಸುಧಾಕರ್ “ಚತುರ್ವೇದಿ” ಎಂದು ಕರೆಯಲ್ಪಡುವ ಇವರು ಬೆಂಗಳೂರಿನ ಜಯನಗರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಸುಧಾಕರ್ ಚತುರ್ವೇದಿ 1897 ರಲ್ಲಿ ತುಮಕುರು ಕ್ಯಾತಸಂದ್ರದಲ್ಲಿ ಜನಿಸಿದರು. ಹಾಗೇ ನೊಡಿದರೆ ಇವರಿಗೆ 124 ವರ್ಷವಾಗಿದ್ದು, ಧೀರ್ಘ ಕಾಲ ಬದುಕಿದ ಭಾರತದ ಅತಿ ಹಿರಿಯ ಪುರುಷ ಎನಿಸಿಕೊಂಡಿದ್ದರು.
ಇವರನ್ನು “ಗಾಂಧಿಜಿಯ ಪೋಸ್ಟ್ ಮ್ಯಾನ್” ಎಂದು ಕರೆಯಲಾಗುತ್ತಿತ್ತು. ಅಲ್ಲದೆ ಗಾಂಧೀಜಿ ಇವರನ್ನು “ಕರ್ನಾಟಕಿ” ಎಂದು ಪ್ರೀತಿಯಿಂದ ಕರೆಯುತ್ತಿದ್ದರು ಎಂದು ಹೇಳಲಾಗುತ್ತದೆ.
ಸುಧಾಕರ್ ಚತುರ್ವೇದಿ 1919ರ ಏಪ್ರಿಲ್ 13 ರಂದು 379 ಭಾರತೀಯರನ್ನು ಕೊಂದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ನಡೆದಾಗ ಅಮೃತಸರದಲ್ಲಿ ವರದಿ ಮಾಡಲು ನಿಯೋಜಿಸಲ್ಪಟ್ಟಿದ್ದರು.
ಇವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ “ಶತಾಯುಷಿ, ಸ್ವಾತಂತ್ರ್ಯ ಹೋರಾಟಗಾರ, ವೇದ ವಿದ್ವಾಂಸ ಸುಧಾಕರ ಚತುರ್ವೇದಿಯವರ ನಿಧನಕ್ಕೆ ತೀವ್ರ ಸಂತಾಪಗಳು. ತುಮಕೂರಿನ ಕ್ಯಾತಸಂದ್ರದಲ್ಲಿ ಜನಿಸಿದ ಚತುರ್ವೇದಿಯವರು, ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಪ್ರತ್ಯಕ್ಷದರ್ಶಿಗಳು. ಮಹಾತ್ಮ ಗಾಂಧಿಯವರ ಒಡನಾಟದಲ್ಲಿದ್ದು, ಸ್ವಾತಂತ್ರ ಹೋರಾಟದಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದರು. ಜೊತೆಗೆ ವೇದ ಪ್ರಚಾರಕ್ಕಾಗಿ 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ” ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಸುಧಾಕರ ಚತುರ್ವೇದಿಯವರ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ
ಶತಾಯುಷಿ, ಸ್ವಾತಂತ್ರ್ಯ ಹೋರಾಟಗಾರ, ವೇದ ವಿದ್ವಾಂಸ ಸುಧಾಕರ ಚತುರ್ವೇದಿಯವರ ನಿಧನಕ್ಕೆ ಮುಖ್ಯಮಂತ್ರಿ ಶ್ರೀ @BSYBJP ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತುಮಕೂರಿನ ಕ್ಯಾತಸಂದ್ರದಲ್ಲಿ ಜನಿಸಿದ ಚತುರ್ವೇದಿಯವರು, ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಪ್ರತ್ಯಕ್ಷದರ್ಶಿಗಳು. 1/2
— CM of Karnataka (@CMofKarnataka) February 27, 2020
ಜಯನಗರದ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಕೂಡ ನಿಧನನಕ್ಕೆ ಸಂತಾಪ ಸೂಚಿಸಿದ್ದಾರೆ.
Today we have lost a man who is believed to be India's oldest man ever to have lived – Sri. Sudhakar Chaturvedi. He was a Vedic scholar and an Indologist. #SowmyaReddy #jayanagar#FreedomFighter
1/6 pic.twitter.com/jQrN8fPBMM— Sowmya Reddy (@Sowmyareddyr) February 27, 2020