Homeಮುಖಪುಟಸಂಕಷ್ಟದಲ್ಲಿ ನರೇಗ ನಂಬಿದ ಜನಸಮೂಹ: ಕೇಂದ್ರ ನೀಡಿದ ನಿಧಿ ಆರು ತಿಂಗಳಿಗೇ ಖಾಲಿ!

ಸಂಕಷ್ಟದಲ್ಲಿ ನರೇಗ ನಂಬಿದ ಜನಸಮೂಹ: ಕೇಂದ್ರ ನೀಡಿದ ನಿಧಿ ಆರು ತಿಂಗಳಿಗೇ ಖಾಲಿ!

`ಲಾಕ್‌ಡೌನ್‌ ತೆರವಿನ ಬಳಿಕ ನಿಧಿಯನ್ನು ಕಡಿತಗೊಳಿಸಿದ್ದೇ ಈ ಸಮಸ್ಯೆಗೆ ಕಾರಣ'

- Advertisement -
- Advertisement -

ಕೋವಿಡ್‌‌ ಸಮಯದಲ್ಲಿ ಗ್ರಾಮಗಳಿಗೆ ಮರಳಿದ ಬಹುದೊಡ್ಡ ಜನಸಮೂಹವನ್ನು ಕೈ ಹಿಡಿದದ್ದು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳು. ಆದರೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ನರೇಗ ಕಾಮಗಾರಿಗಳು ಹಳ್ಳ ಹಿಡಿಯುತ್ತಿದೆ ಎಂದು ‘ದಿ ಹಿಂದೂ’ ಪತ್ರಿಕೆ ವರದಿ ಮಾಡಿದೆ.

ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಜನರಿಗೆ  ಉದ್ಯೋಗವನ್ನು ನೀಡಿ ಕಾಪಾಡಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗೆ ಕೋವಿಡ್ ಸಮಯದಲ್ಲಿ 1.11 ಲಕ್ಷ ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ವಿನಿಯೋಗಿಸಿತ್ತು. 11 ಕೋಟಿ ಜನರಿಗೆ ಉದ್ಯೋಗ ದೊರಕಿತ್ತು.

ಆದಾಗ್ಯೂ ನರೇಗ ಯೋಜನೆಯ 2021-22ರ ಬಜೆಟ್ ಅನ್ನು ಕೇವಲ ₹73,000 ಕೋಟಿಗೆ ನಿಗದಿಪಡಿಸಲಾಗಿದೆ. ರಾಷ್ಟ್ರವ್ಯಾಪಿ ಲಾಕ್‌ಡೌನ್ ಮುಗಿದಿದೆ ಮತ್ತು ಹಣ ಖಾಲಿಯಾದರೆ ಪೂರಕ ಬಜೆಟ್ ಹಂಚಿಕೆಗಳು ಲಭ್ಯವಿರುತ್ತವೆ ಎಂದು ಸರ್ಕಾರ ವಾದಿಸುತ್ತಿದೆ.

ಅಕ್ಟೋಬರ್ 29ರ ಹೊತ್ತಿಗೆ ಪಾವತಿಸಬೇಕಾದ ಮೊತ್ತವು ಸೇರಿದಂತೆ ಒಟ್ಟು ವೆಚ್ಚವು ಈಗಾಗಲೇ ₹79,810 ಕೋಟಿಗಳನ್ನು ತಲುಪಿದೆ. ಈ ಬೆಳವಣಿಗೆ ನರೇಗವನ್ನು ಹಳ್ಳ ಹಿಡಿಸುತ್ತಿದೆ. ಈಗಾಗಲೇ, 21 ರಾಜ್ಯಗಳು ಋಣಾತ್ಮಕ ನಿವ್ವಳ ಸಮತೋಲನವನ್ನು ಎದುರಿಸುತ್ತಿವೆ. ಆಂಧ್ರಪ್ರದೇಶ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಪರಿಸ್ಥಿತಿ ಶೋಚನೀಯವಾಗಿದೆ.

“ನಾವು ನರೇಗವನ್ನು ವರ್ಷದ ಅರ್ಧದಾರಿಯಲ್ಲೇ ಮುಚ್ಚುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ವೆಚ್ಚವನ್ನು ಯಾರು ಭರಿಸುತ್ತಾರೆ? ಸಾಂಕ್ರಾಮಿಕ ರೋಗದ ಪ್ರಭಾವದಿಂದ ಬಡ ಮತ್ತು ಅತ್ಯಂತ ದುರ್ಬಲ ಸಮುದಾಯಗಳು ನಲುಗಿ ಹೋಗಿವೆ” ಎಂದು ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆಯ ಸಂಸ್ಥಾಪಕ ನಿಖಿಲ್ ಡೇ ಹೇಳಿದ್ದಾರೆ.

ಇದನ್ನೂ ಓದಿರಿ: ಗುಜರಾತ್: ರಾಮಮಂದಿರ ಪ್ರವೇಶಿಸಿದ ದಲಿತ ಕುಟುಂಬಕ್ಕೆ ಮಾರಣಾಂತಿಕ ಹಲ್ಲೆ

ಸುಪ್ರೀಂ ಕೋರ್ಟ್‌ನ ತೀರ್ಪನ್ನು ಉಲ್ಲೇಖಿಸಿರುವ ನಿಖಿಲ್‌ ಡೇ, “ನರೇಗ ಅಡಿ ಬಾಕಿ ಉಳಿಸಿಕೊಂಡಿರುವ ವೇತನ ಪಾವತಿಯು ಸರ್ಕಾರದಿಂದಾದ ಸ್ಪಷ್ಟ ಸಾಂವಿಧಾನಿಕ ಉಲ್ಲಂಘನೆಯಾಗಿದೆ. ಇದು ಭಿಕ್ಷುಕನ ಆಧುನಿಕ ರೂಪ” ಎಂದಿದ್ದಾರೆ.

“ಭಾರತ ಸರಕಾರವು ಮೇಲ್ನೋಟಕ್ಕೆ, ಕೋಟ್ಯಂತರ ಜನರನ್ನು ಬಲವಂತದ ದುಡಿಮೆಗೆ ತಳ್ಳುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಎಚ್ಚರಿಸಿದೆ” ಎಂದು ನಿಖಿಲ್‌ ಡೇ ಹೇಳುತ್ತಾರೆ.

“ಈ ವರ್ಷ ಸ್ವಲ್ಪ ಮುಂಚಿತವಾಗಿಯೇ ನಿಧಿಯ ಕೊರತೆಯಿದೆ” ಎಂದು ಹೆಸರು ಹೇಳಲು ಇಚ್ಛಿಸದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಒಪ್ಪಿಕೊಂಡಿದ್ದಾರೆ ಎಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ.

“ಜನರಿಗೆ ಉದ್ಯೋಗ ದೊರಕುತ್ತದೆ. ಆದರೆ ಹಣ ಲಭ್ಯವಾದ ನಂತರ ಮಾತ್ರ ಪಾವತಿಯನ್ನು ಮಾಡಲಾಗುತ್ತದೆ. ಅನೇಕ ರಾಜ್ಯಗಳು ತಮ್ಮ ಖಾತೆಯಿಂದ ತಾತ್ಕಾಲಿಕ ಹಣವನ್ನು ಒದಗಿಸಬಹುದು. ನಿಧಿ ಲಭ್ಯವಾದ ಬಳಿಕ, ಅದನ್ನು [ಕೇಂದ್ರದಿಂದ] ಮರುಪಾವತಿ ಮಾಡಿಕೊಳ್ಳಬಹುದು” ಎಂದು ಸಲಹೆ ನೀಡಿದ್ದಾರೆ.

“ಪ್ರಸ್ತುತ ಪರಿಸ್ಥಿತಿಗೆ ರಾಜ್ಯ ಸರ್ಕಾರಗಳು ಕಾರಣ” ಎಂದು ಅಧಿಕಾರಿ ದೂರಿದ್ದಾರೆ. “ರಾಜ್ಯಗಳು ಇದನ್ನು ಬೇಡಿಕೆ ಚಾಲಿತ ಯೋಜನೆಯಾಗಿ ಬಳಸುತ್ತಿಲ್ಲ, ಆದರೆ ಪೂರೈಕೆ ಆಧಾರಿತ ಯೋಜನೆಯಾಗಿ ಬಳಸುತ್ತಿವೆ ಎಂಬುದು ನನ್ನ ಆತಂಕ. ಕೃತಕವಾಗಿ ಬೇಡಿಕೆಯನ್ನು ಸೃಷ್ಟಿಸಲು ತಮ್ಮ ಕ್ಷೇತ್ರದ ಅಧಿಕಾರಿಗಳಿಗೆ ಸರ್ಕಾರಗಳು ಹೇಳುತ್ತಿವೆ” ಎಂದಿದ್ದಾರೆ.

“ಯೋಜನೆಯ ಸ್ವರೂಪವೆಂದರೆ ಜನರು ಒಮ್ಮೆ ಬಂದು ಉದ್ಯೋಗಕ್ಕಾಗಿ ಬೇಡಿಕೆಯಿಟ್ಟರೆ, ನಂತರ ಬೇಡಿಕೆಯನ್ನು ಸ್ವೀಕರಿಸಲಾಗುತ್ತದೆ” ಎಂದು ಅಧಿಕಾರಿ ಹೇಳಿದ್ದಾರೆ.

ಇದಕ್ಕೆ ತದ್ವಿರುದ್ಧವಾಗಿ ವಾಸ್ತವಗಳಿವೆ ಎನ್ನುತ್ತಾರೆ ಕಾರ್ಯಕರ್ತರು. ಕೆಲಸಕ್ಕಾಗಿ ಬೇಡಿಕೆಯಿರುವ ಶೇ. 13ರಷ್ಟು ಕುಟುಂಬಗಳಿಗೆ ಕೆಲಸ ನೀಡಲಾಗಿಲ್ಲ ಎಂಬುದನ್ನು ನರೇಗ ದತ್ತಾಂಶವು ಹೇಳುತ್ತದೆ. “ಈ ಅಂಕಿಅಂಶಗಳೂ ವಾಸ್ತವವಾಗಿಲ್ಲ. ನೋಂದಾಯಿಸಲಾದ ಬೇಡಿಕೆಯನ್ನು ಮಾತ್ರ ನರೇಗ ದತ್ತಾಂಶದಲ್ಲಿ ಸೇರಿಸಲಾಗಿದೆ. ಅನೇಕ ಕಾರ್ಮಿಕರು ಕೆಲಸಕ್ಕಾಗಿ ಬೇಡಿಕೆಯಿಟ್ಟಾಗ, ಅವರ ಬೇಡಿಕೆಯನ್ನು ನೋಂದಾಯಿಸದೆ ಅಧಿಕಾರಿಗಳು ಸುಮ್ಮನೆ ತಿರುಗುತ್ತಾರೆ” ಎಂದು ಉದ್ಯೋಗ ಖಾತರಿಗಾಗಿ ಪೀಪಲ್ಸ್ ಆಕ್ಷನ್‌ನ ಸಂಶೋಧಕ ವಿಜಯ್ ರಾಮ್ ಆರೋಪಿಸಿದ್ದಾರೆ.


ಇದನ್ನೂ ಓದಿರಿ: ಜನರ ಜೀವದೊಂದಿಗೆ ಚೆಲ್ಲಾಟ ಆಡಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿಯ ತಪ್ಪು ದಾರಿಗೆಳೆಯುವ ಜಾಹೀರಾತು: ಸಾರ್ವಜನಿಕ ಕ್ಷಮೆಯಾಚನೆಗೆ ಸಿದ್ದ ಎಂದ ಬಾಬಾ ರಾಮ್‌ದೇವ್, ಬಾಲಕೃಷ್ಣ

0
ಇಂದು (ಏ.16) ಸುಪ್ರೀಂ ಕೋರ್ಟ್‌ಗೆ ಖುದ್ದಾಗಿ ಹಾಜರಾದ ಪತಂಜಲಿ ಆಯುರ್ವೇದ ಲಿಮಿಟೆಡ್‌ನ ಸಹ-ಸಂಸ್ಥಾಪಕ ಬಾಬಾ ರಾಮ್‌ದೇವ್, ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯನ್ನು ಉಲ್ಲಂಘಿಸಿ ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಮತ್ತು ಅಲೋಪತಿ ಔಷಧಿಗಳ ವಿರುದ್ಧ...