‘ಗೋದ್ರಾ ಆದಮೇಲೆ ಏನಾಯ್ತು ಗೊತ್ತ? 2002ರ ಇತಿಹಾಸ ನೆನಪಿಸಿಕೊಳ್ಳಿ. 48 ಜನ ರಾಮಭಕ್ತರನ್ನು ಕೊಂದ ಮೇಲೆ ಆದ ಪ್ರತಿಕಾರವಿದೆಯಲ್ಲ ಅದು ಎಲ್ಲೂ ಆಗಬಾರದು. ಅದಕ್ಕಾಗಿ ನೀವು ದಯವಿಟ್ಟು ಮನೆಯಲ್ಲಿ ದಿನಕ್ಕೆ ಐದು ಸಾರಿ ನಮಾಜ್ ಮಾಡಿಕೊಂಡಿರಿ’ ಎಂದು ಬಹಿರಂಗ ಕಾರ್ಯಕ್ರಮದಲ್ಲಿ ಬಜರಂಗದಳದ ಮುಖಂಡ ಉಲ್ಲಾಸ್ ಕೋಮು ಗಲಭೆಗೆ ಪ್ರಚೋದನೆ ನೀಡುವಂತಹ ಹೇಳಿಕೆ ನೀಡಿರುವ ಘಟನೆ ಅರಸೀಕೆರೆಯಲ್ಲಿ ನಡೆದಿದೆ.
"Remember what happened in Godhra, this will repeated if you try to do anything" This was the speech done by Bajarangdal leader Ullas from Hassan district in a program conducted by VHP & Bajarangdal in Arsikere Taluk particularly to threaten Muslims.
1/3 pic.twitter.com/4fCroIsuFO— Undefeated_Faith (@Shaad_Bajpe) October 29, 2021
ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಜಂಟಿಯಾಗಿ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಆಯೋಜಿಸಿದ್ದ ಬಹಿರಂಗ ಕಾರ್ಯಕ್ರಮದಲ್ಲಿ ಕೋಮುಸೌಹಾರ್ದತೆ ಕದಡುವಂತಹ ಹೇಳಿಕೆ ನೀಡಿದ್ದಾರೆ.
‘ನಾವು ಮೆರವಣಿಗೆ ಕರೆದುಕೊಂಡು ಬರುವುದು ವರ್ಷಕ್ಕೊಂದು ಸಲ. ಇದು ಕೇವಲ ಟ್ರೇಲರ್ ಅಷ್ಟೆ. ಇನ್ನೆರಡು ತಿಂಗಳು ಕಾಯಿರಿ. ಹನುಮ ಜಯಂತಿ ದಿನ ಪೂರ್ತಿ ಪಿಕ್ಚರ್ ತೋರಿಸುತ್ತೇವೆ. ಇನ್ನು ಮುಂದೆ ಪ್ರತಿ ಆರು ತಿಂಗಳಿಗೊಮ್ಮೆ ಆರ್ಎಸ್ಎಸ್, ಬಜರಂಗದಳ ಮತ್ತು ವಿಎಚ್ಪಿ ನಾಯಕತ್ವದಲ್ಲಿ ಪಿಕ್ಚರ್ ತೋರಿಸುತ್ತೇವೆ’ ಎನ್ನುವ ಮೂಲಕ ಮತೀಯ ದ್ವೇಷಕಾರಿದ್ದಾರೆ.
"This gathering is just a trailer, wait for 2 months, We will show the entire picture during Hanuma Jayanthi. For every 6months we will show picture in the leadership of RSS, BD, VHP" he said.
2/3 pic.twitter.com/CKLmL4KIXo— Undefeated_Faith (@Shaad_Bajpe) October 29, 2021
ಬಹಿರಂಗ ಸಭೆಗೂ ಮೊದಲು ನಡೆದ ಪ್ರತಿಭಟನಾ ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯ ಮತ್ತು ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿ ಘೋಷಣೆಗಳನ್ನು ಕೂಗಿದ್ದಾರೆ’ ಎಂದು ಸುನ್ನಿ ಮುಸ್ಲಿಂ ಜಮಾತ್ ಕಮಿಟಿ ಆರೋಪಿಸಿದೆ.
Also in the rally slogans were raised defaming the sanctity of Almighty Allah. Even after local committee complaining it is said that FIR yet to be filed against them.
Waiting for action @SPHassan2 @DC_DEO_Hassan @tv9kannada @dhanyarajendran @alishan_jafri pic.twitter.com/0cCezHNOHX— Undefeated_Faith (@Shaad_Bajpe) October 29, 2021
ಈ ಪ್ರಕರಣ ಕುರಿತಂತೆ ತಹಶೀಲ್ದಾರರಿಗೆ ದೂರು ನೀಡಿರುವ ಮುಸ್ಲಿಂ ಜಮಾತ್ ಕಮಿಟಿಯು, ‘ಇಸ್ಲಾಂ ಧರ್ಮ ಮತ್ತು ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಘೋಷಣೆ ಕೂಗಿ, ಜಾತಿ ನಿಂದನೆ ಮಾಡಿದ್ದಾರೆ. ಈ ಮೂಲಕ ಮುಸ್ಲಿಂ ಸಮುದಾಯದ ಬಗ್ಗೆ ಪ್ರಚೋದನಕಾರಿ, ಅವಹೇಳನಕಾರಿ ಘೋಷಣೆಗಳನ್ನು ಮತ್ತು ಬೆದರಿಕೆಯ ಹೇಳಿಕೆಗಳನ್ನು ನೀಡಿ ಕೋಮು ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿರುವ ವಿಎಚ್ಪಿ ಬಜರಂಗದಳ ನಾಯಕರ ಮೇಲೆ ಕಠಿಣವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಅರಸೀಕೆರೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಿಮ್ಮಯ್ಯನವರು, “ಎರಡೂ ಕಡೆಯಿಂದಲೂ ಕೋಮುವಾದಿ ಭಾಷಣಗಳು ನಡೆದಿವೆ. ಮುಸ್ಲಿಂ ಗುಂಪುಗಳು ಸಹ ಬಜರಂಗದಳದ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ಕುರಿತು ಒಟ್ಟು ಎರಡೂ ಕಡೆಯವರ ಮೇಲೆ ಒಟ್ಟು 7 ಪ್ರಕರಣಗಳು ದಾಖಲಾಗಿವೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಗುಜರಾತ್: ರಾಮಮಂದಿರ ಪ್ರವೇಶಿಸಿದ ದಲಿತ ಕುಟುಂಬಕ್ಕೆ ಮಾರಣಾಂತಿಕ ಹಲ್ಲೆ