Homeಮುಖಪುಟಹನುಮ ಜಯಂತಿ ದಿನ ಪೂರ್ತಿ ಪಿಕ್ಚರ್‌ ತೋರಿಸುತ್ತೇವೆ: ಪ್ರಚೋದನಕಾರಿ ಹೇಳಿಕೆ ನೀಡಿದ ಬಜರಂಗದಳ ಮುಖಂಡ

ಹನುಮ ಜಯಂತಿ ದಿನ ಪೂರ್ತಿ ಪಿಕ್ಚರ್‌ ತೋರಿಸುತ್ತೇವೆ: ಪ್ರಚೋದನಕಾರಿ ಹೇಳಿಕೆ ನೀಡಿದ ಬಜರಂಗದಳ ಮುಖಂಡ

‘ಗೋದ್ರಾ ಆದಮೇಲೆ ಏನಾಯ್ತು ಗೊತ್ತ? 2002ರ ಇತಿಹಾಸ ನೆನಪಿಸಿಕೊಳ್ಳಿ. 48 ಜನ ರಾಮಭಕ್ತರನ್ನು ಕೊಂದ ಮೇಲೆ ಆದ ಪ್ರತಿಕಾರವಿದೆಯಲ್ಲ ಅದು ಎಲ್ಲೂ ಆಗಬಾರದು. ಅದಕ್ಕಾಗಿ ನೀವು ದಯವಿಟ್ಟು ಮನೆಯಲ್ಲಿ ದಿನಕ್ಕೆ ಐದು ಸಾರಿ ನಮಾಜ್‌ ಮಾಡಿಕೊಂಡಿರಿ'

- Advertisement -
- Advertisement -

‘ಗೋದ್ರಾ ಆದಮೇಲೆ ಏನಾಯ್ತು ಗೊತ್ತ? 2002ರ ಇತಿಹಾಸ ನೆನಪಿಸಿಕೊಳ್ಳಿ. 48 ಜನ ರಾಮಭಕ್ತರನ್ನು ಕೊಂದ ಮೇಲೆ ಆದ ಪ್ರತಿಕಾರವಿದೆಯಲ್ಲ ಅದು ಎಲ್ಲೂ ಆಗಬಾರದು. ಅದಕ್ಕಾಗಿ ನೀವು ದಯವಿಟ್ಟು ಮನೆಯಲ್ಲಿ ದಿನಕ್ಕೆ ಐದು ಸಾರಿ ನಮಾಜ್‌ ಮಾಡಿಕೊಂಡಿರಿ’ ಎಂದು ಬಹಿರಂಗ ಕಾರ್ಯಕ್ರಮದಲ್ಲಿ ಬಜರಂಗದಳದ ಮುಖಂಡ ಉಲ್ಲಾಸ್‌ ಕೋಮು ಗಲಭೆಗೆ ಪ್ರಚೋದನೆ ನೀಡುವಂತಹ ಹೇಳಿಕೆ ನೀಡಿರುವ ಘಟನೆ ಅರಸೀಕೆರೆಯಲ್ಲಿ ನಡೆದಿದೆ.

ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಜಂಟಿಯಾಗಿ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಆಯೋಜಿಸಿದ್ದ ಬಹಿರಂಗ ಕಾರ್ಯಕ್ರಮದಲ್ಲಿ ಕೋಮುಸೌಹಾರ್ದತೆ ಕದಡುವಂತಹ ಹೇಳಿಕೆ ನೀಡಿದ್ದಾರೆ.

‘ನಾವು ಮೆರವಣಿಗೆ ಕರೆದುಕೊಂಡು ಬರುವುದು ವರ್ಷಕ್ಕೊಂದು ಸಲ. ಇದು ಕೇವಲ ಟ್ರೇಲರ್‌ ಅಷ್ಟೆ. ಇನ್ನೆರಡು ತಿಂಗಳು ಕಾಯಿರಿ. ಹನುಮ ಜಯಂತಿ ದಿನ ಪೂರ್ತಿ ಪಿಕ್ಚರ್‌ ತೋರಿಸುತ್ತೇವೆ. ಇನ್ನು ಮುಂದೆ ಪ್ರತಿ ಆರು ತಿಂಗಳಿಗೊಮ್ಮೆ ಆರ್‌ಎಸ್‌ಎಸ್, ಬಜರಂಗದಳ ಮತ್ತು ವಿಎಚ್‌ಪಿ ನಾಯಕತ್ವದಲ್ಲಿ ಪಿಕ್ಚರ್‌ ತೋರಿಸುತ್ತೇವೆ’ ಎನ್ನುವ ಮೂಲಕ ಮತೀಯ ದ್ವೇಷಕಾರಿದ್ದಾರೆ.

ಬಹಿರಂಗ ಸಭೆಗೂ ಮೊದಲು ನಡೆದ ಪ್ರತಿಭಟನಾ ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯ ಮತ್ತು ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿ ಘೋಷಣೆಗಳನ್ನು ಕೂಗಿದ್ದಾರೆ’ ಎಂದು ಸುನ್ನಿ ಮುಸ್ಲಿಂ ಜಮಾತ್‌ ಕಮಿಟಿ ಆರೋಪಿಸಿದೆ.

ಈ ಪ್ರಕರಣ ಕುರಿತಂತೆ ತಹಶೀಲ್ದಾರರಿಗೆ ದೂರು ನೀಡಿರುವ ಮುಸ್ಲಿಂ ಜಮಾತ್ ಕಮಿಟಿಯು, ‘ಇಸ್ಲಾಂ ಧರ್ಮ ಮತ್ತು ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಘೋಷಣೆ ಕೂಗಿ, ಜಾತಿ ನಿಂದನೆ ಮಾಡಿದ್ದಾರೆ. ಈ ಮೂಲಕ ಮುಸ್ಲಿಂ ಸಮುದಾಯದ ಬಗ್ಗೆ ಪ್ರಚೋದನಕಾರಿ, ಅವಹೇಳನಕಾರಿ ಘೋಷಣೆಗಳನ್ನು ಮತ್ತು ಬೆದರಿಕೆಯ ಹೇಳಿಕೆಗಳನ್ನು ನೀಡಿ ಕೋಮು ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿರುವ ವಿಎಚ್‌ಪಿ ಬಜರಂಗದಳ ನಾಯಕರ ಮೇಲೆ ಕಠಿಣವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಅರಸೀಕೆರೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ತಿಮ್ಮಯ್ಯನವರು, “ಎರಡೂ ಕಡೆಯಿಂದಲೂ ಕೋಮುವಾದಿ ಭಾಷಣಗಳು ನಡೆದಿವೆ. ಮುಸ್ಲಿಂ ಗುಂಪುಗಳು ಸಹ ಬಜರಂಗದಳದ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ಕುರಿತು ಒಟ್ಟು ಎರಡೂ ಕಡೆಯವರ ಮೇಲೆ ಒಟ್ಟು 7 ಪ್ರಕರಣಗಳು ದಾಖಲಾಗಿವೆ” ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ಗುಜರಾತ್: ರಾಮಮಂದಿರ ಪ್ರವೇಶಿಸಿದ ದಲಿತ ಕುಟುಂಬಕ್ಕೆ ಮಾರಣಾಂತಿಕ ಹಲ್ಲೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗದಿದ್ದರೆ ಮತ್ತೆ ಹಾಗೆ ಮಾಡ್ತಾರೆ: ಅತ್ಯಾಚಾರ ಸಂತ್ರಸ್ತೆಯ ಸಹೋದರಿ ಹೇಳಿಕೆ

0
"ಪ್ರಜ್ವಲ್ ಮತ್ತು ರೇವಣ್ಣ ಯಾವತ್ತೂ ತಲೆ ಎತ್ತಿ ನಡೆಯಬಾರದು, ಅಂತಹ ಶಿಕ್ಷೆಯಾಗಬೇಕು" ಎಂದು ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯೊಬ್ಬರ ಸಹೋದರಿ ಮಾಲಾ (ಹೆಸರು ಬದಲಿಸಲಾಗಿದೆ) ಹೇಳಿರುವುದಾಗಿ thenewsminute.com ವರದಿ ಮಾಡಿದೆ. ಮಾಲಾಗೆ ತನ್ನ ಸಹೋದರಿ...