Homeಮುಖಪುಟಕನಿಷ್ಟ ಮೂಲ ಆದಾಯ ಖಾತರಿ: ಕಾಂಗ್ರೆಸ್ ಭರವಸೆಯ ಕುರಿತು ಚರ್ಚೆ ಭಾಗ-2

ಕನಿಷ್ಟ ಮೂಲ ಆದಾಯ ಖಾತರಿ: ಕಾಂಗ್ರೆಸ್ ಭರವಸೆಯ ಕುರಿತು ಚರ್ಚೆ ಭಾಗ-2

- Advertisement -
- Advertisement -

ಮೂಲ: ಶರತ್ ದವಲ

ಕನ್ನಡಕ್ಕೆ : ಎನ್ ಶಂಕರ ಕೆಂಚನೂರು

ಭಾಗ -1 ಕಾಂಗ್ರೆಸ್ ಪ್ರಣಾಳಿಕೆ ಹಿನ್ನೆಲೆಯಲ್ಲಿ ಬೇಸಿಕ್ ಇನ್ಕಮ್ ಸುತ್ತ ಒಂದು ಚರ್ಚೆ ಇಲ್ಲಿ ಕ್ಲಿಕ್ ಮಾಡಿ

ನೂರಾಮೂವತ್ತು ಕೋಟಿ ಬೃಹತ್ ಜನ ಸಂಖ್ಯೆಯ ಭಾರತದಲ್ಲಿ ಈ ಯೋಜನೆಯ ಸಾರ್ವತ್ರಿಕ ಎನ್ನುವ ವೈಶಿಷ್ಟ್ಯಕ್ಕೆ ನಾವು ಅಂಟಿಕೊಂಡಲ್ಲಿ ಈ ಯೋಜನೆಯನ್ನು ನಿಭಾಯಿಸುವುದು ಬಹಳ ಕಷ್ಟದ ಕೆಲಸ. ಭಾರತೀಯಸಂದರ್ಭದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಜನರನ್ನು ಒಳಗೊಳ್ಳಬೇಕಿರುವುದಿಂದ ಯೋಜನೆಯ ಮೂಲಕ  ಕೊಡುವ ಮೊತ್ತ ಬಹಳ ಸಣ್ಣದಾಗಿರುವ ಸಾಧ್ಯತೆಗಳಿವೆ. ಇದರಿಂದ ಯೋಜನೆಯ ಮೂಲ ಆಶಯ ಈಡೇರದೆ ಜನರಬದುಕಿನಲ್ಲಿ ಯಾವುದೇ ವ್ಯತ್ಯಾಸ ಕಾಣದಿರುವ ಅಪಾಯವಿದೆ. ಹಾಗಿದ್ದರೆ ಈ ಯೋಜನೆಯನ್ನು ಅರ್ಥಪೂರ್ಣವಾಗಿ ಕಾರ್ಯಗತಗೊಳಿಸಲು ಅರ್ಹ ಫಲಾನುಭವಿ ವರ್ಗವನ್ನು ಗುರುತಿಸುವುದು ಅನಿವಾರ್ಯವೆ?. ಹಾಗೆಮಾಡುವುದಾದರೆ ಈ ಯೋಜನೆಯನ್ನು ಸಾಧ್ಯವಿರುವಷ್ಟು ಸರಳಗೊಳಿಸಬೇಕೆ.

ಇತ್ತೀಚೆಗೆ ತೆಲಂಗಾಣದಲ್ಲಿ ‘ರೈತಬಂಧು’ ಎನ್ನುವ ಯೋಜನೆಯಡಿ ರೈತರಿಗೆ ಬಿತ್ತನೆಯ ಸಮಯದಲ್ಲಿ ಹೂಡಿಕೆ ಬಂಡವಾಳವಾಗಿ ನಿರ್ದಿಷ್ಟ ಮೊತ್ತವನ್ನು ಆರು ತಿಂಗಳಿಗೊಮ್ಮೆ ನೀಡಲಾಯಿತು. ಈ ಯೋಜನೆಯು ಎಲ್ಲಾರೈತರನ್ನು ಒಳಗೊಳ್ಳುವಂತೆ ಮಾಡಲು ಮತ್ತು ತಲುಪುವಿಕೆಯ ಎಲ್ಲಾ ಮಿತಿಗನ್ನು ಮೀರಲು ಇದನ್ನು ನಿಬಂಧನೆ ರಹಿತ ಮತ್ತು ಸಾರ್ವತ್ರಿಕಗೊಳಿಸಲಾಗಿತ್ತು. ಇದರಿಂದಾಗಿ ಎಲ್ಲಾ ಎಪ್ಪತ್ತು ಲಕ್ಷ ರೈತರೂ ಈ ಯೋಜನೆಯವ್ಯಾಪ್ತಿಯಲ್ಲಿ ಬರುವ ಹಾಗಾಯಿತು. ಮತ್ತು ಈ ಯೋಜನೆಯಡಿ ಬರಲು ಯಾವುದೇ ಷರತ್ತು ಇರಲಿಲ್ಲ. ಅಲ್ಲದೆ ಹಣ ಪಡೆದ ರೈತ ತನ್ನ ನೆಲದಲ್ಲಿ ಬೇಸಾಯ ಮಾಡಲೇಬೇಕು ಎನ್ನುವ ನಿಯಮವೂ ಇದ್ದಿರಲಿಲ್ಲ. ಇತ್ತೀಚೆಗೆಪ್ರಧಾನ ಮಂತ್ರಿಯವರು ಘೋಷಣೆ ಮಾಡಿದ ಪಿಎಮ್-ಕಿಸಾನ್ ಯೋಜನೆಯು ಸಹ ಸಾಂಪ್ರದಾಯಿಕ ಗುರಿಯ ಸಮಾಜದ ಒಂದು ವಿಭಾಗದ ಎಲ್ಲರನ್ನೂ ಒಳಗೊಳ್ಳುವ ಯೋಜನೆಯಾಗಿದೆ. ಆದರೆ ಈ ಯೋಜನೆಗಳು ಈದೇಶದ ಒಂದು ವಿಭಾಗವನ್ನು ಮಾತ್ರ ಪ್ರತಿನಿಧಿಸುತ್ತದೆ.

ಈಗ ರಾಹುಲ್ ಗಾಂಧಿ ಅಧಿಕಾರಕ್ಕೆ ಬಂದರೆ ಬಡವರಿಗೆ ಕೊಡುತ್ತೇನೆ ಎಂದು ಹೇಳುತ್ತಿರುವ ಕನಿಷ್ಟ ಮೂಲ ಆದಾಯ ಖಾತರಿಯ ಜಾರಿಯಲ್ಲೂ ಇಂತಹ ಪ್ರಶ್ನೆಗಳನ್ನು ಹುಟ್ಟಿಸುತ್ತವೆ. ಅಷ್ಟೂ ಬಡವರಿಗೆ ಹೇಗೆ ಕೊಡುತ್ತಾರೆ?ಬಡವರನ್ನು ತಲುಪುವ ಯಾವುದಾದರೂ ಸರಳವಾದ ದಾರಿಯಿದೆಯೆ?. ನಾವು ಇನ್ನೂ ಇದಕ್ಕೆ ದಾರಿಯನ್ನು ಹುಡುಕಬೇಕಿದೆ.

ಹಾಗಿದ್ದರೆ ಈ ಒಗಟಿಗೆ ಉತ್ತರ ಹೇಗೆ ಹುಡುಕುವುದು? ಅರ್ಹ ಫಲಾನುಭವಿಗಳ ಸಲುವಾಗಿ ಮಾನದಂಡವನ್ನು ತಯಾರಿಸುವದಕ್ಕಿಂತ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಯನ್ನು ಕಾರ್ಯಗತಗೊಳಿಸಬಹುದೆ?ಎಂದರೆ ಉದಾಹರಣೆಗೆ- ಆದಾಯ ತೆರಿಗೆ ಪಾವತಿಸುವವರನ್ನು ಈ ಯೋಜನೆಯಿಂದ ಹೊರಗಿಡುವುದು. ಆದರೆ ಹಾಗೆ ಮಾಡಿದರೂ ಈ ಯೋಜನೆಯಿಂದ ಕೇವಲ ಶೇಕಡಾ ಐದರಷ್ಟು ಜನಸಂಖ್ಯೆ ಮಾತ್ರ ಈಯೋಜನೆಯಿಂದ ಹೊರಗುಳಿಯುತ್ತದೆ. ಅರವಿಂದ ಸುಬ್ರಹ್ಮಣ್ಯ ಅವರು ದೇಶದ ಎಲ್ಲಾ ಮಹಿಳೆಯರನ್ನು ಈ ಯೋಜನೆಯ ವ್ಯಾಪ್ತಿಯಲ್ಲಿ ತಂದು ಅವರಿಗೆ ಕನಿಷ್ಟ ಮೂಲ ಆದಾಯವನ್ನು ನೀಡಬೇಕೆಂದು ಸಲಹೆ ನೀಡಿದ್ದರು.ಇದರಿಂದ ಎಲ್ಲಾ ಮನೆಗಳಿಗೂ ಈ ಯೋಜನೆಯ ಪ್ರತಿಫಲ ದೊರೆಯುತ್ತದೆಯಾದರೂ ಇದು ಪುರುಷ ತಾರತಮ್ಯವಾಗುತ್ತದೆ. ಈ ಸನ್ನಿವೇಶವನ್ನು ನಿಭಾಯಿಸುವುದು ಭಾರತದ ಸಂಧರ್ಭದಲ್ಲಿ ಸಾರ್ವತ್ರಿಕ ಮೂಲ ಆದಾಯಪರಿಕಲ್ಪನೆಯ ಮುಖ್ಯ ಸವಾಲಾಗಿದೆ.

ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯ ಇನ್ನೆರಡು ಮೂಲ ಆಶಯಗಳಾದ ‘ವ್ಯಕ್ತಿ ಕೇಂದ್ರಿತ’ ಮತ್ತು ‘ಮಾಸಿಕ’ ಎನ್ನುವ ಇನ್ನೆರಡು ವಿಷಯಗಳ ಕುರಿತು ಯೋಚಿಸೋಣ. ಭಾರತದಲ್ಲಿ ಗಮನಿಸಿದರೆ ಶೈಕ್ಷಣಿಕಸ್ಕಾಲರ್‍ಶಿಪ್‍ಗಳು, ಹಿರಿಯ ನಾಗರಿಕರ ಪಿಂಚಣಿ, ಸಾಮಾನ್ಯ ಬಡತನ ನಿರ್ಮೂಲನ ಕಾರ್ಯಕ್ರಮಗಳ ವ್ಯಾಕರಣ ಕೌಟುಂಬಿಕ ನೆಲೆಯಲ್ಲಿ ವ್ಯಾಖ್ಯಾನಿಸಲ್ಪಟ್ಟಿವೆ. ಮತ್ತು ಮಹಿಳಾ ಸಬಲೀಕರಣ ಯೋಜನೆಗಳಾದ ಬಡ್ಡಿರಹಿತಸಾಲ, ಸಬ್ಸಿಡಿ ಅಡುಗೆ ಅನಿಲ ಇವುಗಳನ್ನು ನೀಡುವಾಗಲೂ ಕೌಟುಂಬಿಕ ನೆಲೆಯಲ್ಲಿಯೇ ನೀಡಲಾಗಿದೆ. ವ್ಯಕ್ತಿಗತ ನೆಲೆಯಲ್ಲಿ ಭಾರತದ ಬಡತನ ನಿರ್ಮೂಲನೆ ಯೋಜನೆಗಳನ್ನು ಯೋಜಿಸಿದ ಉದಾಹರಣೆಗಳು ಸಿಗುವುದಿಲ್ಲ.ಹೀಗಾಗಿ ನಾವು ಬಡತನವನ್ನು ವೈಯಕ್ತಿಕ ನೆಲೆಯಲ್ಲಿ ಯೋಚಿಸಿ ಯೋಜನೆಗಳನ್ನು ನಿರೂಪಿಸಬೇಕಿದೆ. ಈ ನೆಲೆಯಲ್ಲಿ ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆ ಒಂದು ಉತ್ತಮ ಯೋಚನೆ. ಇದರ ಜೊತೆಗ ಪ್ರತಿ ‘ತಿಂಗಳು’ನಿರಂತರವಾಗಿ ನಿರ್ದಿಷ್ಟ ಆದಾಯದ ಖಾತರಿ ದೊರೆತಾಗ ಆರ್ಥಿಕ ಭದ್ರತೆಯ ಜೊತೆಗೆ ಪ್ರತಿ ವ್ಯಕ್ತಿಯಲ್ಲೂ ಮಾನಸಿಕ ಸ್ಥೈರ್ಯ ಹೆಚ್ಚುತ್ತದೆ.

ನೇರ ಹಣ ವರ್ಗಾವಣೆಯ ವಿಷಯದಲ್ಲಿ ನಮ್ಮ ದೇಶದ ಬಹುದೊಡ್ಡ ಬುದ್ಧಿಜೀವಿಗಳ ವರ್ಗ ಬಡವರ ಕುರಿತು ಅಪನಂಬಿಕೆಯನ್ನು ಹೊಂದಿವೆ. ಬಡವರಿಗೆ ನೇರ ಹಣವನ್ನು ನೀಡಿದಾಗ ಅವರು ಅದನ್ನು ಮೋಜಿಗಾಗಿ ಬಳಸಿದುರುಪಯೋಗ ಮಾಡಿಕೊಳ್ಳುತ್ತಾರೆ. ಉದ್ದೇಶಿತ ಉದ್ದೇಶಕ್ಕೆ ಬಳಸಿಕೊಳ್ಳುವುದಿಲ್ಲ ಎನ್ನುವುದು ಇವರ ಆರೋಪ. ಈ ಭಯದಿಂದಾಗಿಯೇ ಸರಕಾರಗಳು ನೇರ ನಗದನ್ನು ಕೊಡುವ ಬದಲು ಸೀರೆ, ಆಹಾರ ಪದಾರ್ಥಗಳು,ಸೈಕಲ್, ಯೂನಿಫಾರ್ಮ ಇತ್ಯಾದಿಯನ್ನು ಕೊಡುತ್ತಿವೆ. ಆದರೆ ಜಾಗತಿಕ ಸಂಶೋಧನೆಗಳು ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ವರದಿಗಳನ್ನು ನೀಡುವ ಮೂಲಕ ಇಂತಹ ಮೂಢ ನಂಬಿಕೆಗಳನ್ನು ಸಾರಸಗಟಾಗಿ ತಳ್ಳಿಹಾಕಿವೆ. ಇಂತಹವಿಷಯದಲ್ಲಿ ರಾಜಕಾಣಿಗಳು ಮತ್ತು ನೀತಿನಿರೂಪಕರಲ್ಲಿ ಸಾಕಷ್ಟು ಪೂರ್ವಗ್ರಹಗಳಿವೆ. ಅವುಗಳನ್ನು ತೊಡೆದುಹಾಕಿ ಹೊಸ ರೀತಿಯಲ್ಲಿ ಯೋಚಿಸಬೇಕಿರುವುದು ಇಂದಿನ ತುರ್ತು.

ಈಗ ಸಾರ್ವತ್ರಿಕ ಮೂಲ ಆದಾಯವನ್ನು ಒಂದು ಹಕ್ಕನ್ನಾಗಿ ಏಕೆ ಪರಿಗಣಿಸಬೇಕು ಮತ್ತು ಅದನ್ನು ಹೇಗೆ ಕಾರ್ಯಗತಗೊಳಿಬಹುದು ಎನ್ನುವುದನ್ನು ನೋಡೋಣ. ಸಾರ್ವತ್ರಿಕ ಮೂಲ ಆದಾಯವನ್ನು ಕೇವಲ ಯೋಜನೆಯಾಗಿಕಾರ್ಯಗತಗೊಳಿಸಿದಾಗ ಸರಕಾರಗಳು ಬದಲಾದಾಗ ಯೋಜನೆಯನ್ನು ಹಿಂಪಡೆಯುವ ಸಾಧ್ಯತೆಗಳಿರುತ್ತವೆ. ಇದಕ್ಕಾಗಿ ಇದನ್ನು ಒಂದು ಹಕ್ಕನ್ನಾಗಿ ಪರಿಗಣಿಸಿ ಕಾಯ್ದೆಯನ್ನು ಮಾಡಿದಾಗ ಇದನ್ನು ಹಿಂಪಡೆಯಲುಸಾಧ್ಯವಿಲ್ಲ. ಮತ್ತು ಈ ಪರಿಕಲ್ಪನೆಯನ್ನು ಹಣದುಬ್ಬರದ ಸೂಚ್ಯಂಕದೊಂದಿಗೆ ಸಂಯೋಜನೆಯನ್ನು ಹೊಂದಬೇಕು ಆಗ ಬದಲಾಗುವ ಹಣದ ಮೌಲ್ಯದೊಂದಿಗೆ ಯೋಜನೆಯ ಮೂಲಕ ನೀಡುವ ಮೊತ್ತವೂ ಬದಲಾಗುತ್ತದೆ.ಇದನ್ನು ಯೋಜಿಸುವಾಗ ನಾವು ಮುಂದಿನ ಐದು ವರ್ಷಗಳನ್ನು  ಗಮನದಲ್ಲಿ ಇಟ್ಟುಕೊಂಡು ಯೋಜನೆ ತಯಾರಿಸಬೇಕು. ಇಂತಹ ಆರ್ಥಿಕ ಯೋಜನೆಗಳಿಗೆ ಭದ್ರತೆಯು ಮುಖ್ಯವಾಗಿದೆ.

ಕೊನೆಯದಾಗಿ ಈ ಸಾರ್ವತ್ರಿಕ ಮೂಲ ಆದಾಯವು ‘ಬೇಷರತ್’ ಆಗಿರಬೇಕು. ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯ ಮೂಲಭೂತ ಆಶಯವೇ ಈ ಯೋಜನೆಯು ಬೇಷರತ್ ಆಗಿರಬೇಕು ಎನ್ನುವುದಾಗಿದೆ. ಆದರೆ ಈವ್ಯಾಖ್ಯಾನವು ಭಾರತೀಯ ಸಮಾಜ ಕಲ್ಯಾಣ ಯೋಜನೆಗಳಿಗೆ ಅಪರಿಚಿತ ಪದವಾಗಿದೆ. ನಮ್ಮ ಪ್ರತಿ ಯೋಜನೆಯೂ ನಿಯಮಗಳಿಂದ ಕೂಡಿವೆ. ಯಾಕೆಂದರೆ ನಾವು ಬಡತನ ನಿರ್ಮೂಲನ ಯೋಜನೆಗಳನ್ನು ದಾನ-ಧರ್ಮದನೆಲೆಯಲ್ಲಿ ನೋಡುತ್ತೇವೆ. ಸ್ಪರ್ಧೆಯಲ್ಲಿ ಹಿಂದೆ ಬಿದ್ದವನಿಗೆ ನೀಡುವ ಸಹಾಯವೆಂಬಂತೆ ನೋಡುತ್ತೇವೆ. ಆದರೆ ಈ ರೀತಿಯ ಯೋಚನೆಗಳು ಬದಲಾಗಬೇಕಿದೆ. ಈ ಸಮಾಜದಲ್ಲಿ ಅಸಮಾನ ಅವಕಾಶಗಳ ಕಾರಣಕ್ಕೆ ಹಿಂದೆಬಿದ್ದವರನ್ನು ನಾವು ಅವಕಾಶವಂಚಿತರನ್ನಾಗಿ ನೋಡಬೇಕಿದೆ. ಅವರಿಗೆ ನಾವು ಧರ್ಮಕ್ಕೆ ನೀಡುತ್ತಿದ್ದೇವೆ ಎನ್ನುವ ಭಾವನೆಯನ್ನು ತೊಡೆದುಹಾಕಿ ಅವರು ಅದನ್ನು ಪಡೆಯುವ ಹಕ್ಕನ್ನು ಹೊಂದಿದ್ದಾರೆ ಎಂದುಅರಿತುಕೊಳ್ಳಬೇಕಿದೆ. ಇದನ್ನು ಸಾಮಾಜಿಕ ಜವಬ್ದಾರಿ ಎಂದು ಗ್ರಹಿಸಬೇಕಿದೆಯೇ ಹೊರತು ದಾನದಂತೆ ಅಲ್ಲ. ನಮ್ಮ ಅತಿಯಾದ ಖಾಸಗಿ ಆಸ್ತಿಯ ಮೋಹ ಮತ್ತು ಪಿತ್ರಾರ್ಜಿತ ಹಂಚಿಕೆಯ ಗ್ರಹಿಕೆಯಿಂದಾಗಿ ರಾಷ್ಟ್ರೀಯಸೊತ್ತುಗಳು ಎಲ್ಲರಿಗೂ ಸೇರಿದ್ದು ಎನ್ನುವುದನ್ನು ಮರೆತಿದ್ದೇವೆ. ಮತ್ತು ಸರಕಾರ ಕೇವಲ ವಾರಸುದಾರ ಮಾತ್ರ. ಸಾರ್ವಜನಿಕ ಆಸ್ತಿಗಳು ಎಂದಿಗೂ ಸಾರ್ವಜನಿಕರ ಸೊತ್ತು ಎನ್ನುವುದನ್ನು ಮರೆಯಬಾದು. ಈ ದೇಶದಪ್ರತಿಯೊಬ್ಬ ಪ್ರಜೆಗೂ ಇಲ್ಲಿ ಸಂಪನ್ಮೂಲಗಳ ಮೇಲೆ ಹಕ್ಕಿರುತ್ತದೆ. ಆದರೆ ನಮ್ಮ ಖಾಸಗಿತನದ ಮೇಲಿನ ಅತಿಯಾದ ಮೋಹ ಈ ತಿಳುವಳಿಕೆಯನ್ನು ನಮ್ಮಿಂದ ದೂರಾಗಿಸಿದೆ. ಈ ರೀತಿಯ ದೃಷ್ಟಿಕೋನದ ಅತಿಮುಖ್ಯರೂಪಾಂತರವು ಇಂದಿನ ಅಗತ್ಯವಾಗಿದೆ.

ಷರತ್ತುಗಳು ನಿಯಂತ್ರಕರು ಮತ್ತು ಮೇಲ್ವಿಚಾರಕರ ಸೈನ್ಯಗಳನ್ನು ಹುಟ್ಟುಹಾಕುತ್ತವೆ. ಮತ್ತು ಇವು ಅಗಾಧವಾದ ವಿವೇಚನೆಯ ಅಧಿಕಾರವನ್ನು ಪಡೆದುಕೊಳ್ಳುತ್ತಾರೆ. ಇದು ಅಗಾಧ ಭೃಷ್ಟಾಚಾರಕ್ಕೆ ಕಾರಣವಾಗುತ್ತದೆ  ಮತ್ತುಯೋಜನೆಯು ಸೋರಿಕೆ ಮತ್ತು ಹಣದ ಪೋಲಾಗುವಿಕೆಯಲ್ಲಿ ಕೊನೆಯಾಗುತ್ತದೆ.

ಕೊನೆಯದಾಗಿ ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯು ಭಾರತದ ಮಟ್ಟಿಗೆ ಒಂದು ಒಳ್ಳೆಯ ಯೋಜನೆಯಾಗಿದೆ. ಇದೊಂದು ಸಮಾನ ಮತ್ತು ಎಲ್ಲರನ್ನು ಒಳಗೊಂಡ ಸಮಾಜದ ಪರಿಕಲ್ಪನೆಗೆ ಬುನಾದಿಯಾಗಿದೆ. ಇದುಪ್ರತಿಯೊಬ್ಬ ನಾಗರಿಕನಿಗೂ ಕನಿಷ್ಟ ಬದುಕಿನ ಭದ್ರತೆಯನ್ನು ಖಚಿತಗೊಳಿಸುತ್ತದೆ. ಇದನ್ನು ಅರ್ಥಪೂರ್ಣವಾಗಿ ಜಾರಿಗೆ ತರಲು ಕೆಲವು ಕ್ರಮಗಳನ್ನು ಕೈಗೊಳ್ಳಬೇಕಿದೆ. ಅದನ್ನೂ ಸಹ ನಾವು ಸಾಧಿಸಬಹುದು.

ಶರತ್ ದವಲ

(ಲೇಖಕರು ಬೇಸಿಕ್ ಇನ್‍ಕಮ್ ಅರ್ತ್ ನೆಟ್‍ವರ್ಕ್ ಇದರ ಉಪ ನಿರ್ದೇಶಕರು ಮತ್ತು ಇಂಡಿಯಾ ನೆಟ್ವರ್ಕ್ ಫಾರ್ ಬೇಸಿಕ್ ಇನ್ಕಮ್ ಇದರ ಕೋ ಆರ್ಡಿನೇಟರ್ ಆಗಿರುತ್ತಾರೆ.)

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...