Homeಮುಖಪುಟಕನಿಷ್ಟ ಮೂಲ ಆದಾಯ ಖಾತರಿ: ಕಾಂಗ್ರೆಸ್ ಭರವಸೆಯ ಕುರಿತು ಚರ್ಚೆ ಭಾಗ-2

ಕನಿಷ್ಟ ಮೂಲ ಆದಾಯ ಖಾತರಿ: ಕಾಂಗ್ರೆಸ್ ಭರವಸೆಯ ಕುರಿತು ಚರ್ಚೆ ಭಾಗ-2

- Advertisement -
- Advertisement -

ಮೂಲ: ಶರತ್ ದವಲ

ಕನ್ನಡಕ್ಕೆ : ಎನ್ ಶಂಕರ ಕೆಂಚನೂರು

ಭಾಗ -1 ಕಾಂಗ್ರೆಸ್ ಪ್ರಣಾಳಿಕೆ ಹಿನ್ನೆಲೆಯಲ್ಲಿ ಬೇಸಿಕ್ ಇನ್ಕಮ್ ಸುತ್ತ ಒಂದು ಚರ್ಚೆ ಇಲ್ಲಿ ಕ್ಲಿಕ್ ಮಾಡಿ

ನೂರಾಮೂವತ್ತು ಕೋಟಿ ಬೃಹತ್ ಜನ ಸಂಖ್ಯೆಯ ಭಾರತದಲ್ಲಿ ಈ ಯೋಜನೆಯ ಸಾರ್ವತ್ರಿಕ ಎನ್ನುವ ವೈಶಿಷ್ಟ್ಯಕ್ಕೆ ನಾವು ಅಂಟಿಕೊಂಡಲ್ಲಿ ಈ ಯೋಜನೆಯನ್ನು ನಿಭಾಯಿಸುವುದು ಬಹಳ ಕಷ್ಟದ ಕೆಲಸ. ಭಾರತೀಯಸಂದರ್ಭದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಜನರನ್ನು ಒಳಗೊಳ್ಳಬೇಕಿರುವುದಿಂದ ಯೋಜನೆಯ ಮೂಲಕ  ಕೊಡುವ ಮೊತ್ತ ಬಹಳ ಸಣ್ಣದಾಗಿರುವ ಸಾಧ್ಯತೆಗಳಿವೆ. ಇದರಿಂದ ಯೋಜನೆಯ ಮೂಲ ಆಶಯ ಈಡೇರದೆ ಜನರಬದುಕಿನಲ್ಲಿ ಯಾವುದೇ ವ್ಯತ್ಯಾಸ ಕಾಣದಿರುವ ಅಪಾಯವಿದೆ. ಹಾಗಿದ್ದರೆ ಈ ಯೋಜನೆಯನ್ನು ಅರ್ಥಪೂರ್ಣವಾಗಿ ಕಾರ್ಯಗತಗೊಳಿಸಲು ಅರ್ಹ ಫಲಾನುಭವಿ ವರ್ಗವನ್ನು ಗುರುತಿಸುವುದು ಅನಿವಾರ್ಯವೆ?. ಹಾಗೆಮಾಡುವುದಾದರೆ ಈ ಯೋಜನೆಯನ್ನು ಸಾಧ್ಯವಿರುವಷ್ಟು ಸರಳಗೊಳಿಸಬೇಕೆ.

ಇತ್ತೀಚೆಗೆ ತೆಲಂಗಾಣದಲ್ಲಿ ‘ರೈತಬಂಧು’ ಎನ್ನುವ ಯೋಜನೆಯಡಿ ರೈತರಿಗೆ ಬಿತ್ತನೆಯ ಸಮಯದಲ್ಲಿ ಹೂಡಿಕೆ ಬಂಡವಾಳವಾಗಿ ನಿರ್ದಿಷ್ಟ ಮೊತ್ತವನ್ನು ಆರು ತಿಂಗಳಿಗೊಮ್ಮೆ ನೀಡಲಾಯಿತು. ಈ ಯೋಜನೆಯು ಎಲ್ಲಾರೈತರನ್ನು ಒಳಗೊಳ್ಳುವಂತೆ ಮಾಡಲು ಮತ್ತು ತಲುಪುವಿಕೆಯ ಎಲ್ಲಾ ಮಿತಿಗನ್ನು ಮೀರಲು ಇದನ್ನು ನಿಬಂಧನೆ ರಹಿತ ಮತ್ತು ಸಾರ್ವತ್ರಿಕಗೊಳಿಸಲಾಗಿತ್ತು. ಇದರಿಂದಾಗಿ ಎಲ್ಲಾ ಎಪ್ಪತ್ತು ಲಕ್ಷ ರೈತರೂ ಈ ಯೋಜನೆಯವ್ಯಾಪ್ತಿಯಲ್ಲಿ ಬರುವ ಹಾಗಾಯಿತು. ಮತ್ತು ಈ ಯೋಜನೆಯಡಿ ಬರಲು ಯಾವುದೇ ಷರತ್ತು ಇರಲಿಲ್ಲ. ಅಲ್ಲದೆ ಹಣ ಪಡೆದ ರೈತ ತನ್ನ ನೆಲದಲ್ಲಿ ಬೇಸಾಯ ಮಾಡಲೇಬೇಕು ಎನ್ನುವ ನಿಯಮವೂ ಇದ್ದಿರಲಿಲ್ಲ. ಇತ್ತೀಚೆಗೆಪ್ರಧಾನ ಮಂತ್ರಿಯವರು ಘೋಷಣೆ ಮಾಡಿದ ಪಿಎಮ್-ಕಿಸಾನ್ ಯೋಜನೆಯು ಸಹ ಸಾಂಪ್ರದಾಯಿಕ ಗುರಿಯ ಸಮಾಜದ ಒಂದು ವಿಭಾಗದ ಎಲ್ಲರನ್ನೂ ಒಳಗೊಳ್ಳುವ ಯೋಜನೆಯಾಗಿದೆ. ಆದರೆ ಈ ಯೋಜನೆಗಳು ಈದೇಶದ ಒಂದು ವಿಭಾಗವನ್ನು ಮಾತ್ರ ಪ್ರತಿನಿಧಿಸುತ್ತದೆ.

ಈಗ ರಾಹುಲ್ ಗಾಂಧಿ ಅಧಿಕಾರಕ್ಕೆ ಬಂದರೆ ಬಡವರಿಗೆ ಕೊಡುತ್ತೇನೆ ಎಂದು ಹೇಳುತ್ತಿರುವ ಕನಿಷ್ಟ ಮೂಲ ಆದಾಯ ಖಾತರಿಯ ಜಾರಿಯಲ್ಲೂ ಇಂತಹ ಪ್ರಶ್ನೆಗಳನ್ನು ಹುಟ್ಟಿಸುತ್ತವೆ. ಅಷ್ಟೂ ಬಡವರಿಗೆ ಹೇಗೆ ಕೊಡುತ್ತಾರೆ?ಬಡವರನ್ನು ತಲುಪುವ ಯಾವುದಾದರೂ ಸರಳವಾದ ದಾರಿಯಿದೆಯೆ?. ನಾವು ಇನ್ನೂ ಇದಕ್ಕೆ ದಾರಿಯನ್ನು ಹುಡುಕಬೇಕಿದೆ.

ಹಾಗಿದ್ದರೆ ಈ ಒಗಟಿಗೆ ಉತ್ತರ ಹೇಗೆ ಹುಡುಕುವುದು? ಅರ್ಹ ಫಲಾನುಭವಿಗಳ ಸಲುವಾಗಿ ಮಾನದಂಡವನ್ನು ತಯಾರಿಸುವದಕ್ಕಿಂತ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಯನ್ನು ಕಾರ್ಯಗತಗೊಳಿಸಬಹುದೆ?ಎಂದರೆ ಉದಾಹರಣೆಗೆ- ಆದಾಯ ತೆರಿಗೆ ಪಾವತಿಸುವವರನ್ನು ಈ ಯೋಜನೆಯಿಂದ ಹೊರಗಿಡುವುದು. ಆದರೆ ಹಾಗೆ ಮಾಡಿದರೂ ಈ ಯೋಜನೆಯಿಂದ ಕೇವಲ ಶೇಕಡಾ ಐದರಷ್ಟು ಜನಸಂಖ್ಯೆ ಮಾತ್ರ ಈಯೋಜನೆಯಿಂದ ಹೊರಗುಳಿಯುತ್ತದೆ. ಅರವಿಂದ ಸುಬ್ರಹ್ಮಣ್ಯ ಅವರು ದೇಶದ ಎಲ್ಲಾ ಮಹಿಳೆಯರನ್ನು ಈ ಯೋಜನೆಯ ವ್ಯಾಪ್ತಿಯಲ್ಲಿ ತಂದು ಅವರಿಗೆ ಕನಿಷ್ಟ ಮೂಲ ಆದಾಯವನ್ನು ನೀಡಬೇಕೆಂದು ಸಲಹೆ ನೀಡಿದ್ದರು.ಇದರಿಂದ ಎಲ್ಲಾ ಮನೆಗಳಿಗೂ ಈ ಯೋಜನೆಯ ಪ್ರತಿಫಲ ದೊರೆಯುತ್ತದೆಯಾದರೂ ಇದು ಪುರುಷ ತಾರತಮ್ಯವಾಗುತ್ತದೆ. ಈ ಸನ್ನಿವೇಶವನ್ನು ನಿಭಾಯಿಸುವುದು ಭಾರತದ ಸಂಧರ್ಭದಲ್ಲಿ ಸಾರ್ವತ್ರಿಕ ಮೂಲ ಆದಾಯಪರಿಕಲ್ಪನೆಯ ಮುಖ್ಯ ಸವಾಲಾಗಿದೆ.

ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯ ಇನ್ನೆರಡು ಮೂಲ ಆಶಯಗಳಾದ ‘ವ್ಯಕ್ತಿ ಕೇಂದ್ರಿತ’ ಮತ್ತು ‘ಮಾಸಿಕ’ ಎನ್ನುವ ಇನ್ನೆರಡು ವಿಷಯಗಳ ಕುರಿತು ಯೋಚಿಸೋಣ. ಭಾರತದಲ್ಲಿ ಗಮನಿಸಿದರೆ ಶೈಕ್ಷಣಿಕಸ್ಕಾಲರ್‍ಶಿಪ್‍ಗಳು, ಹಿರಿಯ ನಾಗರಿಕರ ಪಿಂಚಣಿ, ಸಾಮಾನ್ಯ ಬಡತನ ನಿರ್ಮೂಲನ ಕಾರ್ಯಕ್ರಮಗಳ ವ್ಯಾಕರಣ ಕೌಟುಂಬಿಕ ನೆಲೆಯಲ್ಲಿ ವ್ಯಾಖ್ಯಾನಿಸಲ್ಪಟ್ಟಿವೆ. ಮತ್ತು ಮಹಿಳಾ ಸಬಲೀಕರಣ ಯೋಜನೆಗಳಾದ ಬಡ್ಡಿರಹಿತಸಾಲ, ಸಬ್ಸಿಡಿ ಅಡುಗೆ ಅನಿಲ ಇವುಗಳನ್ನು ನೀಡುವಾಗಲೂ ಕೌಟುಂಬಿಕ ನೆಲೆಯಲ್ಲಿಯೇ ನೀಡಲಾಗಿದೆ. ವ್ಯಕ್ತಿಗತ ನೆಲೆಯಲ್ಲಿ ಭಾರತದ ಬಡತನ ನಿರ್ಮೂಲನೆ ಯೋಜನೆಗಳನ್ನು ಯೋಜಿಸಿದ ಉದಾಹರಣೆಗಳು ಸಿಗುವುದಿಲ್ಲ.ಹೀಗಾಗಿ ನಾವು ಬಡತನವನ್ನು ವೈಯಕ್ತಿಕ ನೆಲೆಯಲ್ಲಿ ಯೋಚಿಸಿ ಯೋಜನೆಗಳನ್ನು ನಿರೂಪಿಸಬೇಕಿದೆ. ಈ ನೆಲೆಯಲ್ಲಿ ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆ ಒಂದು ಉತ್ತಮ ಯೋಚನೆ. ಇದರ ಜೊತೆಗ ಪ್ರತಿ ‘ತಿಂಗಳು’ನಿರಂತರವಾಗಿ ನಿರ್ದಿಷ್ಟ ಆದಾಯದ ಖಾತರಿ ದೊರೆತಾಗ ಆರ್ಥಿಕ ಭದ್ರತೆಯ ಜೊತೆಗೆ ಪ್ರತಿ ವ್ಯಕ್ತಿಯಲ್ಲೂ ಮಾನಸಿಕ ಸ್ಥೈರ್ಯ ಹೆಚ್ಚುತ್ತದೆ.

ನೇರ ಹಣ ವರ್ಗಾವಣೆಯ ವಿಷಯದಲ್ಲಿ ನಮ್ಮ ದೇಶದ ಬಹುದೊಡ್ಡ ಬುದ್ಧಿಜೀವಿಗಳ ವರ್ಗ ಬಡವರ ಕುರಿತು ಅಪನಂಬಿಕೆಯನ್ನು ಹೊಂದಿವೆ. ಬಡವರಿಗೆ ನೇರ ಹಣವನ್ನು ನೀಡಿದಾಗ ಅವರು ಅದನ್ನು ಮೋಜಿಗಾಗಿ ಬಳಸಿದುರುಪಯೋಗ ಮಾಡಿಕೊಳ್ಳುತ್ತಾರೆ. ಉದ್ದೇಶಿತ ಉದ್ದೇಶಕ್ಕೆ ಬಳಸಿಕೊಳ್ಳುವುದಿಲ್ಲ ಎನ್ನುವುದು ಇವರ ಆರೋಪ. ಈ ಭಯದಿಂದಾಗಿಯೇ ಸರಕಾರಗಳು ನೇರ ನಗದನ್ನು ಕೊಡುವ ಬದಲು ಸೀರೆ, ಆಹಾರ ಪದಾರ್ಥಗಳು,ಸೈಕಲ್, ಯೂನಿಫಾರ್ಮ ಇತ್ಯಾದಿಯನ್ನು ಕೊಡುತ್ತಿವೆ. ಆದರೆ ಜಾಗತಿಕ ಸಂಶೋಧನೆಗಳು ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ವರದಿಗಳನ್ನು ನೀಡುವ ಮೂಲಕ ಇಂತಹ ಮೂಢ ನಂಬಿಕೆಗಳನ್ನು ಸಾರಸಗಟಾಗಿ ತಳ್ಳಿಹಾಕಿವೆ. ಇಂತಹವಿಷಯದಲ್ಲಿ ರಾಜಕಾಣಿಗಳು ಮತ್ತು ನೀತಿನಿರೂಪಕರಲ್ಲಿ ಸಾಕಷ್ಟು ಪೂರ್ವಗ್ರಹಗಳಿವೆ. ಅವುಗಳನ್ನು ತೊಡೆದುಹಾಕಿ ಹೊಸ ರೀತಿಯಲ್ಲಿ ಯೋಚಿಸಬೇಕಿರುವುದು ಇಂದಿನ ತುರ್ತು.

ಈಗ ಸಾರ್ವತ್ರಿಕ ಮೂಲ ಆದಾಯವನ್ನು ಒಂದು ಹಕ್ಕನ್ನಾಗಿ ಏಕೆ ಪರಿಗಣಿಸಬೇಕು ಮತ್ತು ಅದನ್ನು ಹೇಗೆ ಕಾರ್ಯಗತಗೊಳಿಬಹುದು ಎನ್ನುವುದನ್ನು ನೋಡೋಣ. ಸಾರ್ವತ್ರಿಕ ಮೂಲ ಆದಾಯವನ್ನು ಕೇವಲ ಯೋಜನೆಯಾಗಿಕಾರ್ಯಗತಗೊಳಿಸಿದಾಗ ಸರಕಾರಗಳು ಬದಲಾದಾಗ ಯೋಜನೆಯನ್ನು ಹಿಂಪಡೆಯುವ ಸಾಧ್ಯತೆಗಳಿರುತ್ತವೆ. ಇದಕ್ಕಾಗಿ ಇದನ್ನು ಒಂದು ಹಕ್ಕನ್ನಾಗಿ ಪರಿಗಣಿಸಿ ಕಾಯ್ದೆಯನ್ನು ಮಾಡಿದಾಗ ಇದನ್ನು ಹಿಂಪಡೆಯಲುಸಾಧ್ಯವಿಲ್ಲ. ಮತ್ತು ಈ ಪರಿಕಲ್ಪನೆಯನ್ನು ಹಣದುಬ್ಬರದ ಸೂಚ್ಯಂಕದೊಂದಿಗೆ ಸಂಯೋಜನೆಯನ್ನು ಹೊಂದಬೇಕು ಆಗ ಬದಲಾಗುವ ಹಣದ ಮೌಲ್ಯದೊಂದಿಗೆ ಯೋಜನೆಯ ಮೂಲಕ ನೀಡುವ ಮೊತ್ತವೂ ಬದಲಾಗುತ್ತದೆ.ಇದನ್ನು ಯೋಜಿಸುವಾಗ ನಾವು ಮುಂದಿನ ಐದು ವರ್ಷಗಳನ್ನು  ಗಮನದಲ್ಲಿ ಇಟ್ಟುಕೊಂಡು ಯೋಜನೆ ತಯಾರಿಸಬೇಕು. ಇಂತಹ ಆರ್ಥಿಕ ಯೋಜನೆಗಳಿಗೆ ಭದ್ರತೆಯು ಮುಖ್ಯವಾಗಿದೆ.

ಕೊನೆಯದಾಗಿ ಈ ಸಾರ್ವತ್ರಿಕ ಮೂಲ ಆದಾಯವು ‘ಬೇಷರತ್’ ಆಗಿರಬೇಕು. ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯ ಮೂಲಭೂತ ಆಶಯವೇ ಈ ಯೋಜನೆಯು ಬೇಷರತ್ ಆಗಿರಬೇಕು ಎನ್ನುವುದಾಗಿದೆ. ಆದರೆ ಈವ್ಯಾಖ್ಯಾನವು ಭಾರತೀಯ ಸಮಾಜ ಕಲ್ಯಾಣ ಯೋಜನೆಗಳಿಗೆ ಅಪರಿಚಿತ ಪದವಾಗಿದೆ. ನಮ್ಮ ಪ್ರತಿ ಯೋಜನೆಯೂ ನಿಯಮಗಳಿಂದ ಕೂಡಿವೆ. ಯಾಕೆಂದರೆ ನಾವು ಬಡತನ ನಿರ್ಮೂಲನ ಯೋಜನೆಗಳನ್ನು ದಾನ-ಧರ್ಮದನೆಲೆಯಲ್ಲಿ ನೋಡುತ್ತೇವೆ. ಸ್ಪರ್ಧೆಯಲ್ಲಿ ಹಿಂದೆ ಬಿದ್ದವನಿಗೆ ನೀಡುವ ಸಹಾಯವೆಂಬಂತೆ ನೋಡುತ್ತೇವೆ. ಆದರೆ ಈ ರೀತಿಯ ಯೋಚನೆಗಳು ಬದಲಾಗಬೇಕಿದೆ. ಈ ಸಮಾಜದಲ್ಲಿ ಅಸಮಾನ ಅವಕಾಶಗಳ ಕಾರಣಕ್ಕೆ ಹಿಂದೆಬಿದ್ದವರನ್ನು ನಾವು ಅವಕಾಶವಂಚಿತರನ್ನಾಗಿ ನೋಡಬೇಕಿದೆ. ಅವರಿಗೆ ನಾವು ಧರ್ಮಕ್ಕೆ ನೀಡುತ್ತಿದ್ದೇವೆ ಎನ್ನುವ ಭಾವನೆಯನ್ನು ತೊಡೆದುಹಾಕಿ ಅವರು ಅದನ್ನು ಪಡೆಯುವ ಹಕ್ಕನ್ನು ಹೊಂದಿದ್ದಾರೆ ಎಂದುಅರಿತುಕೊಳ್ಳಬೇಕಿದೆ. ಇದನ್ನು ಸಾಮಾಜಿಕ ಜವಬ್ದಾರಿ ಎಂದು ಗ್ರಹಿಸಬೇಕಿದೆಯೇ ಹೊರತು ದಾನದಂತೆ ಅಲ್ಲ. ನಮ್ಮ ಅತಿಯಾದ ಖಾಸಗಿ ಆಸ್ತಿಯ ಮೋಹ ಮತ್ತು ಪಿತ್ರಾರ್ಜಿತ ಹಂಚಿಕೆಯ ಗ್ರಹಿಕೆಯಿಂದಾಗಿ ರಾಷ್ಟ್ರೀಯಸೊತ್ತುಗಳು ಎಲ್ಲರಿಗೂ ಸೇರಿದ್ದು ಎನ್ನುವುದನ್ನು ಮರೆತಿದ್ದೇವೆ. ಮತ್ತು ಸರಕಾರ ಕೇವಲ ವಾರಸುದಾರ ಮಾತ್ರ. ಸಾರ್ವಜನಿಕ ಆಸ್ತಿಗಳು ಎಂದಿಗೂ ಸಾರ್ವಜನಿಕರ ಸೊತ್ತು ಎನ್ನುವುದನ್ನು ಮರೆಯಬಾದು. ಈ ದೇಶದಪ್ರತಿಯೊಬ್ಬ ಪ್ರಜೆಗೂ ಇಲ್ಲಿ ಸಂಪನ್ಮೂಲಗಳ ಮೇಲೆ ಹಕ್ಕಿರುತ್ತದೆ. ಆದರೆ ನಮ್ಮ ಖಾಸಗಿತನದ ಮೇಲಿನ ಅತಿಯಾದ ಮೋಹ ಈ ತಿಳುವಳಿಕೆಯನ್ನು ನಮ್ಮಿಂದ ದೂರಾಗಿಸಿದೆ. ಈ ರೀತಿಯ ದೃಷ್ಟಿಕೋನದ ಅತಿಮುಖ್ಯರೂಪಾಂತರವು ಇಂದಿನ ಅಗತ್ಯವಾಗಿದೆ.

ಷರತ್ತುಗಳು ನಿಯಂತ್ರಕರು ಮತ್ತು ಮೇಲ್ವಿಚಾರಕರ ಸೈನ್ಯಗಳನ್ನು ಹುಟ್ಟುಹಾಕುತ್ತವೆ. ಮತ್ತು ಇವು ಅಗಾಧವಾದ ವಿವೇಚನೆಯ ಅಧಿಕಾರವನ್ನು ಪಡೆದುಕೊಳ್ಳುತ್ತಾರೆ. ಇದು ಅಗಾಧ ಭೃಷ್ಟಾಚಾರಕ್ಕೆ ಕಾರಣವಾಗುತ್ತದೆ  ಮತ್ತುಯೋಜನೆಯು ಸೋರಿಕೆ ಮತ್ತು ಹಣದ ಪೋಲಾಗುವಿಕೆಯಲ್ಲಿ ಕೊನೆಯಾಗುತ್ತದೆ.

ಕೊನೆಯದಾಗಿ ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯು ಭಾರತದ ಮಟ್ಟಿಗೆ ಒಂದು ಒಳ್ಳೆಯ ಯೋಜನೆಯಾಗಿದೆ. ಇದೊಂದು ಸಮಾನ ಮತ್ತು ಎಲ್ಲರನ್ನು ಒಳಗೊಂಡ ಸಮಾಜದ ಪರಿಕಲ್ಪನೆಗೆ ಬುನಾದಿಯಾಗಿದೆ. ಇದುಪ್ರತಿಯೊಬ್ಬ ನಾಗರಿಕನಿಗೂ ಕನಿಷ್ಟ ಬದುಕಿನ ಭದ್ರತೆಯನ್ನು ಖಚಿತಗೊಳಿಸುತ್ತದೆ. ಇದನ್ನು ಅರ್ಥಪೂರ್ಣವಾಗಿ ಜಾರಿಗೆ ತರಲು ಕೆಲವು ಕ್ರಮಗಳನ್ನು ಕೈಗೊಳ್ಳಬೇಕಿದೆ. ಅದನ್ನೂ ಸಹ ನಾವು ಸಾಧಿಸಬಹುದು.

ಶರತ್ ದವಲ

(ಲೇಖಕರು ಬೇಸಿಕ್ ಇನ್‍ಕಮ್ ಅರ್ತ್ ನೆಟ್‍ವರ್ಕ್ ಇದರ ಉಪ ನಿರ್ದೇಶಕರು ಮತ್ತು ಇಂಡಿಯಾ ನೆಟ್ವರ್ಕ್ ಫಾರ್ ಬೇಸಿಕ್ ಇನ್ಕಮ್ ಇದರ ಕೋ ಆರ್ಡಿನೇಟರ್ ಆಗಿರುತ್ತಾರೆ.)

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...