Homeಮುಖಪುಟಕನಿಷ್ಟ ಮೂಲ ಆದಾಯ ಖಾತರಿ: ಕಾಂಗ್ರೆಸ್ ಭರವಸೆಯ ಕುರಿತು ಚರ್ಚೆ ಭಾಗ-2

ಕನಿಷ್ಟ ಮೂಲ ಆದಾಯ ಖಾತರಿ: ಕಾಂಗ್ರೆಸ್ ಭರವಸೆಯ ಕುರಿತು ಚರ್ಚೆ ಭಾಗ-2

- Advertisement -
- Advertisement -

ಮೂಲ: ಶರತ್ ದವಲ

ಕನ್ನಡಕ್ಕೆ : ಎನ್ ಶಂಕರ ಕೆಂಚನೂರು

ಭಾಗ -1 ಕಾಂಗ್ರೆಸ್ ಪ್ರಣಾಳಿಕೆ ಹಿನ್ನೆಲೆಯಲ್ಲಿ ಬೇಸಿಕ್ ಇನ್ಕಮ್ ಸುತ್ತ ಒಂದು ಚರ್ಚೆ ಇಲ್ಲಿ ಕ್ಲಿಕ್ ಮಾಡಿ

ನೂರಾಮೂವತ್ತು ಕೋಟಿ ಬೃಹತ್ ಜನ ಸಂಖ್ಯೆಯ ಭಾರತದಲ್ಲಿ ಈ ಯೋಜನೆಯ ಸಾರ್ವತ್ರಿಕ ಎನ್ನುವ ವೈಶಿಷ್ಟ್ಯಕ್ಕೆ ನಾವು ಅಂಟಿಕೊಂಡಲ್ಲಿ ಈ ಯೋಜನೆಯನ್ನು ನಿಭಾಯಿಸುವುದು ಬಹಳ ಕಷ್ಟದ ಕೆಲಸ. ಭಾರತೀಯಸಂದರ್ಭದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಜನರನ್ನು ಒಳಗೊಳ್ಳಬೇಕಿರುವುದಿಂದ ಯೋಜನೆಯ ಮೂಲಕ  ಕೊಡುವ ಮೊತ್ತ ಬಹಳ ಸಣ್ಣದಾಗಿರುವ ಸಾಧ್ಯತೆಗಳಿವೆ. ಇದರಿಂದ ಯೋಜನೆಯ ಮೂಲ ಆಶಯ ಈಡೇರದೆ ಜನರಬದುಕಿನಲ್ಲಿ ಯಾವುದೇ ವ್ಯತ್ಯಾಸ ಕಾಣದಿರುವ ಅಪಾಯವಿದೆ. ಹಾಗಿದ್ದರೆ ಈ ಯೋಜನೆಯನ್ನು ಅರ್ಥಪೂರ್ಣವಾಗಿ ಕಾರ್ಯಗತಗೊಳಿಸಲು ಅರ್ಹ ಫಲಾನುಭವಿ ವರ್ಗವನ್ನು ಗುರುತಿಸುವುದು ಅನಿವಾರ್ಯವೆ?. ಹಾಗೆಮಾಡುವುದಾದರೆ ಈ ಯೋಜನೆಯನ್ನು ಸಾಧ್ಯವಿರುವಷ್ಟು ಸರಳಗೊಳಿಸಬೇಕೆ.

ಇತ್ತೀಚೆಗೆ ತೆಲಂಗಾಣದಲ್ಲಿ ‘ರೈತಬಂಧು’ ಎನ್ನುವ ಯೋಜನೆಯಡಿ ರೈತರಿಗೆ ಬಿತ್ತನೆಯ ಸಮಯದಲ್ಲಿ ಹೂಡಿಕೆ ಬಂಡವಾಳವಾಗಿ ನಿರ್ದಿಷ್ಟ ಮೊತ್ತವನ್ನು ಆರು ತಿಂಗಳಿಗೊಮ್ಮೆ ನೀಡಲಾಯಿತು. ಈ ಯೋಜನೆಯು ಎಲ್ಲಾರೈತರನ್ನು ಒಳಗೊಳ್ಳುವಂತೆ ಮಾಡಲು ಮತ್ತು ತಲುಪುವಿಕೆಯ ಎಲ್ಲಾ ಮಿತಿಗನ್ನು ಮೀರಲು ಇದನ್ನು ನಿಬಂಧನೆ ರಹಿತ ಮತ್ತು ಸಾರ್ವತ್ರಿಕಗೊಳಿಸಲಾಗಿತ್ತು. ಇದರಿಂದಾಗಿ ಎಲ್ಲಾ ಎಪ್ಪತ್ತು ಲಕ್ಷ ರೈತರೂ ಈ ಯೋಜನೆಯವ್ಯಾಪ್ತಿಯಲ್ಲಿ ಬರುವ ಹಾಗಾಯಿತು. ಮತ್ತು ಈ ಯೋಜನೆಯಡಿ ಬರಲು ಯಾವುದೇ ಷರತ್ತು ಇರಲಿಲ್ಲ. ಅಲ್ಲದೆ ಹಣ ಪಡೆದ ರೈತ ತನ್ನ ನೆಲದಲ್ಲಿ ಬೇಸಾಯ ಮಾಡಲೇಬೇಕು ಎನ್ನುವ ನಿಯಮವೂ ಇದ್ದಿರಲಿಲ್ಲ. ಇತ್ತೀಚೆಗೆಪ್ರಧಾನ ಮಂತ್ರಿಯವರು ಘೋಷಣೆ ಮಾಡಿದ ಪಿಎಮ್-ಕಿಸಾನ್ ಯೋಜನೆಯು ಸಹ ಸಾಂಪ್ರದಾಯಿಕ ಗುರಿಯ ಸಮಾಜದ ಒಂದು ವಿಭಾಗದ ಎಲ್ಲರನ್ನೂ ಒಳಗೊಳ್ಳುವ ಯೋಜನೆಯಾಗಿದೆ. ಆದರೆ ಈ ಯೋಜನೆಗಳು ಈದೇಶದ ಒಂದು ವಿಭಾಗವನ್ನು ಮಾತ್ರ ಪ್ರತಿನಿಧಿಸುತ್ತದೆ.

ಈಗ ರಾಹುಲ್ ಗಾಂಧಿ ಅಧಿಕಾರಕ್ಕೆ ಬಂದರೆ ಬಡವರಿಗೆ ಕೊಡುತ್ತೇನೆ ಎಂದು ಹೇಳುತ್ತಿರುವ ಕನಿಷ್ಟ ಮೂಲ ಆದಾಯ ಖಾತರಿಯ ಜಾರಿಯಲ್ಲೂ ಇಂತಹ ಪ್ರಶ್ನೆಗಳನ್ನು ಹುಟ್ಟಿಸುತ್ತವೆ. ಅಷ್ಟೂ ಬಡವರಿಗೆ ಹೇಗೆ ಕೊಡುತ್ತಾರೆ?ಬಡವರನ್ನು ತಲುಪುವ ಯಾವುದಾದರೂ ಸರಳವಾದ ದಾರಿಯಿದೆಯೆ?. ನಾವು ಇನ್ನೂ ಇದಕ್ಕೆ ದಾರಿಯನ್ನು ಹುಡುಕಬೇಕಿದೆ.

ಹಾಗಿದ್ದರೆ ಈ ಒಗಟಿಗೆ ಉತ್ತರ ಹೇಗೆ ಹುಡುಕುವುದು? ಅರ್ಹ ಫಲಾನುಭವಿಗಳ ಸಲುವಾಗಿ ಮಾನದಂಡವನ್ನು ತಯಾರಿಸುವದಕ್ಕಿಂತ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಯನ್ನು ಕಾರ್ಯಗತಗೊಳಿಸಬಹುದೆ?ಎಂದರೆ ಉದಾಹರಣೆಗೆ- ಆದಾಯ ತೆರಿಗೆ ಪಾವತಿಸುವವರನ್ನು ಈ ಯೋಜನೆಯಿಂದ ಹೊರಗಿಡುವುದು. ಆದರೆ ಹಾಗೆ ಮಾಡಿದರೂ ಈ ಯೋಜನೆಯಿಂದ ಕೇವಲ ಶೇಕಡಾ ಐದರಷ್ಟು ಜನಸಂಖ್ಯೆ ಮಾತ್ರ ಈಯೋಜನೆಯಿಂದ ಹೊರಗುಳಿಯುತ್ತದೆ. ಅರವಿಂದ ಸುಬ್ರಹ್ಮಣ್ಯ ಅವರು ದೇಶದ ಎಲ್ಲಾ ಮಹಿಳೆಯರನ್ನು ಈ ಯೋಜನೆಯ ವ್ಯಾಪ್ತಿಯಲ್ಲಿ ತಂದು ಅವರಿಗೆ ಕನಿಷ್ಟ ಮೂಲ ಆದಾಯವನ್ನು ನೀಡಬೇಕೆಂದು ಸಲಹೆ ನೀಡಿದ್ದರು.ಇದರಿಂದ ಎಲ್ಲಾ ಮನೆಗಳಿಗೂ ಈ ಯೋಜನೆಯ ಪ್ರತಿಫಲ ದೊರೆಯುತ್ತದೆಯಾದರೂ ಇದು ಪುರುಷ ತಾರತಮ್ಯವಾಗುತ್ತದೆ. ಈ ಸನ್ನಿವೇಶವನ್ನು ನಿಭಾಯಿಸುವುದು ಭಾರತದ ಸಂಧರ್ಭದಲ್ಲಿ ಸಾರ್ವತ್ರಿಕ ಮೂಲ ಆದಾಯಪರಿಕಲ್ಪನೆಯ ಮುಖ್ಯ ಸವಾಲಾಗಿದೆ.

ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯ ಇನ್ನೆರಡು ಮೂಲ ಆಶಯಗಳಾದ ‘ವ್ಯಕ್ತಿ ಕೇಂದ್ರಿತ’ ಮತ್ತು ‘ಮಾಸಿಕ’ ಎನ್ನುವ ಇನ್ನೆರಡು ವಿಷಯಗಳ ಕುರಿತು ಯೋಚಿಸೋಣ. ಭಾರತದಲ್ಲಿ ಗಮನಿಸಿದರೆ ಶೈಕ್ಷಣಿಕಸ್ಕಾಲರ್‍ಶಿಪ್‍ಗಳು, ಹಿರಿಯ ನಾಗರಿಕರ ಪಿಂಚಣಿ, ಸಾಮಾನ್ಯ ಬಡತನ ನಿರ್ಮೂಲನ ಕಾರ್ಯಕ್ರಮಗಳ ವ್ಯಾಕರಣ ಕೌಟುಂಬಿಕ ನೆಲೆಯಲ್ಲಿ ವ್ಯಾಖ್ಯಾನಿಸಲ್ಪಟ್ಟಿವೆ. ಮತ್ತು ಮಹಿಳಾ ಸಬಲೀಕರಣ ಯೋಜನೆಗಳಾದ ಬಡ್ಡಿರಹಿತಸಾಲ, ಸಬ್ಸಿಡಿ ಅಡುಗೆ ಅನಿಲ ಇವುಗಳನ್ನು ನೀಡುವಾಗಲೂ ಕೌಟುಂಬಿಕ ನೆಲೆಯಲ್ಲಿಯೇ ನೀಡಲಾಗಿದೆ. ವ್ಯಕ್ತಿಗತ ನೆಲೆಯಲ್ಲಿ ಭಾರತದ ಬಡತನ ನಿರ್ಮೂಲನೆ ಯೋಜನೆಗಳನ್ನು ಯೋಜಿಸಿದ ಉದಾಹರಣೆಗಳು ಸಿಗುವುದಿಲ್ಲ.ಹೀಗಾಗಿ ನಾವು ಬಡತನವನ್ನು ವೈಯಕ್ತಿಕ ನೆಲೆಯಲ್ಲಿ ಯೋಚಿಸಿ ಯೋಜನೆಗಳನ್ನು ನಿರೂಪಿಸಬೇಕಿದೆ. ಈ ನೆಲೆಯಲ್ಲಿ ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆ ಒಂದು ಉತ್ತಮ ಯೋಚನೆ. ಇದರ ಜೊತೆಗ ಪ್ರತಿ ‘ತಿಂಗಳು’ನಿರಂತರವಾಗಿ ನಿರ್ದಿಷ್ಟ ಆದಾಯದ ಖಾತರಿ ದೊರೆತಾಗ ಆರ್ಥಿಕ ಭದ್ರತೆಯ ಜೊತೆಗೆ ಪ್ರತಿ ವ್ಯಕ್ತಿಯಲ್ಲೂ ಮಾನಸಿಕ ಸ್ಥೈರ್ಯ ಹೆಚ್ಚುತ್ತದೆ.

ನೇರ ಹಣ ವರ್ಗಾವಣೆಯ ವಿಷಯದಲ್ಲಿ ನಮ್ಮ ದೇಶದ ಬಹುದೊಡ್ಡ ಬುದ್ಧಿಜೀವಿಗಳ ವರ್ಗ ಬಡವರ ಕುರಿತು ಅಪನಂಬಿಕೆಯನ್ನು ಹೊಂದಿವೆ. ಬಡವರಿಗೆ ನೇರ ಹಣವನ್ನು ನೀಡಿದಾಗ ಅವರು ಅದನ್ನು ಮೋಜಿಗಾಗಿ ಬಳಸಿದುರುಪಯೋಗ ಮಾಡಿಕೊಳ್ಳುತ್ತಾರೆ. ಉದ್ದೇಶಿತ ಉದ್ದೇಶಕ್ಕೆ ಬಳಸಿಕೊಳ್ಳುವುದಿಲ್ಲ ಎನ್ನುವುದು ಇವರ ಆರೋಪ. ಈ ಭಯದಿಂದಾಗಿಯೇ ಸರಕಾರಗಳು ನೇರ ನಗದನ್ನು ಕೊಡುವ ಬದಲು ಸೀರೆ, ಆಹಾರ ಪದಾರ್ಥಗಳು,ಸೈಕಲ್, ಯೂನಿಫಾರ್ಮ ಇತ್ಯಾದಿಯನ್ನು ಕೊಡುತ್ತಿವೆ. ಆದರೆ ಜಾಗತಿಕ ಸಂಶೋಧನೆಗಳು ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ವರದಿಗಳನ್ನು ನೀಡುವ ಮೂಲಕ ಇಂತಹ ಮೂಢ ನಂಬಿಕೆಗಳನ್ನು ಸಾರಸಗಟಾಗಿ ತಳ್ಳಿಹಾಕಿವೆ. ಇಂತಹವಿಷಯದಲ್ಲಿ ರಾಜಕಾಣಿಗಳು ಮತ್ತು ನೀತಿನಿರೂಪಕರಲ್ಲಿ ಸಾಕಷ್ಟು ಪೂರ್ವಗ್ರಹಗಳಿವೆ. ಅವುಗಳನ್ನು ತೊಡೆದುಹಾಕಿ ಹೊಸ ರೀತಿಯಲ್ಲಿ ಯೋಚಿಸಬೇಕಿರುವುದು ಇಂದಿನ ತುರ್ತು.

ಈಗ ಸಾರ್ವತ್ರಿಕ ಮೂಲ ಆದಾಯವನ್ನು ಒಂದು ಹಕ್ಕನ್ನಾಗಿ ಏಕೆ ಪರಿಗಣಿಸಬೇಕು ಮತ್ತು ಅದನ್ನು ಹೇಗೆ ಕಾರ್ಯಗತಗೊಳಿಬಹುದು ಎನ್ನುವುದನ್ನು ನೋಡೋಣ. ಸಾರ್ವತ್ರಿಕ ಮೂಲ ಆದಾಯವನ್ನು ಕೇವಲ ಯೋಜನೆಯಾಗಿಕಾರ್ಯಗತಗೊಳಿಸಿದಾಗ ಸರಕಾರಗಳು ಬದಲಾದಾಗ ಯೋಜನೆಯನ್ನು ಹಿಂಪಡೆಯುವ ಸಾಧ್ಯತೆಗಳಿರುತ್ತವೆ. ಇದಕ್ಕಾಗಿ ಇದನ್ನು ಒಂದು ಹಕ್ಕನ್ನಾಗಿ ಪರಿಗಣಿಸಿ ಕಾಯ್ದೆಯನ್ನು ಮಾಡಿದಾಗ ಇದನ್ನು ಹಿಂಪಡೆಯಲುಸಾಧ್ಯವಿಲ್ಲ. ಮತ್ತು ಈ ಪರಿಕಲ್ಪನೆಯನ್ನು ಹಣದುಬ್ಬರದ ಸೂಚ್ಯಂಕದೊಂದಿಗೆ ಸಂಯೋಜನೆಯನ್ನು ಹೊಂದಬೇಕು ಆಗ ಬದಲಾಗುವ ಹಣದ ಮೌಲ್ಯದೊಂದಿಗೆ ಯೋಜನೆಯ ಮೂಲಕ ನೀಡುವ ಮೊತ್ತವೂ ಬದಲಾಗುತ್ತದೆ.ಇದನ್ನು ಯೋಜಿಸುವಾಗ ನಾವು ಮುಂದಿನ ಐದು ವರ್ಷಗಳನ್ನು  ಗಮನದಲ್ಲಿ ಇಟ್ಟುಕೊಂಡು ಯೋಜನೆ ತಯಾರಿಸಬೇಕು. ಇಂತಹ ಆರ್ಥಿಕ ಯೋಜನೆಗಳಿಗೆ ಭದ್ರತೆಯು ಮುಖ್ಯವಾಗಿದೆ.

ಕೊನೆಯದಾಗಿ ಈ ಸಾರ್ವತ್ರಿಕ ಮೂಲ ಆದಾಯವು ‘ಬೇಷರತ್’ ಆಗಿರಬೇಕು. ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯ ಮೂಲಭೂತ ಆಶಯವೇ ಈ ಯೋಜನೆಯು ಬೇಷರತ್ ಆಗಿರಬೇಕು ಎನ್ನುವುದಾಗಿದೆ. ಆದರೆ ಈವ್ಯಾಖ್ಯಾನವು ಭಾರತೀಯ ಸಮಾಜ ಕಲ್ಯಾಣ ಯೋಜನೆಗಳಿಗೆ ಅಪರಿಚಿತ ಪದವಾಗಿದೆ. ನಮ್ಮ ಪ್ರತಿ ಯೋಜನೆಯೂ ನಿಯಮಗಳಿಂದ ಕೂಡಿವೆ. ಯಾಕೆಂದರೆ ನಾವು ಬಡತನ ನಿರ್ಮೂಲನ ಯೋಜನೆಗಳನ್ನು ದಾನ-ಧರ್ಮದನೆಲೆಯಲ್ಲಿ ನೋಡುತ್ತೇವೆ. ಸ್ಪರ್ಧೆಯಲ್ಲಿ ಹಿಂದೆ ಬಿದ್ದವನಿಗೆ ನೀಡುವ ಸಹಾಯವೆಂಬಂತೆ ನೋಡುತ್ತೇವೆ. ಆದರೆ ಈ ರೀತಿಯ ಯೋಚನೆಗಳು ಬದಲಾಗಬೇಕಿದೆ. ಈ ಸಮಾಜದಲ್ಲಿ ಅಸಮಾನ ಅವಕಾಶಗಳ ಕಾರಣಕ್ಕೆ ಹಿಂದೆಬಿದ್ದವರನ್ನು ನಾವು ಅವಕಾಶವಂಚಿತರನ್ನಾಗಿ ನೋಡಬೇಕಿದೆ. ಅವರಿಗೆ ನಾವು ಧರ್ಮಕ್ಕೆ ನೀಡುತ್ತಿದ್ದೇವೆ ಎನ್ನುವ ಭಾವನೆಯನ್ನು ತೊಡೆದುಹಾಕಿ ಅವರು ಅದನ್ನು ಪಡೆಯುವ ಹಕ್ಕನ್ನು ಹೊಂದಿದ್ದಾರೆ ಎಂದುಅರಿತುಕೊಳ್ಳಬೇಕಿದೆ. ಇದನ್ನು ಸಾಮಾಜಿಕ ಜವಬ್ದಾರಿ ಎಂದು ಗ್ರಹಿಸಬೇಕಿದೆಯೇ ಹೊರತು ದಾನದಂತೆ ಅಲ್ಲ. ನಮ್ಮ ಅತಿಯಾದ ಖಾಸಗಿ ಆಸ್ತಿಯ ಮೋಹ ಮತ್ತು ಪಿತ್ರಾರ್ಜಿತ ಹಂಚಿಕೆಯ ಗ್ರಹಿಕೆಯಿಂದಾಗಿ ರಾಷ್ಟ್ರೀಯಸೊತ್ತುಗಳು ಎಲ್ಲರಿಗೂ ಸೇರಿದ್ದು ಎನ್ನುವುದನ್ನು ಮರೆತಿದ್ದೇವೆ. ಮತ್ತು ಸರಕಾರ ಕೇವಲ ವಾರಸುದಾರ ಮಾತ್ರ. ಸಾರ್ವಜನಿಕ ಆಸ್ತಿಗಳು ಎಂದಿಗೂ ಸಾರ್ವಜನಿಕರ ಸೊತ್ತು ಎನ್ನುವುದನ್ನು ಮರೆಯಬಾದು. ಈ ದೇಶದಪ್ರತಿಯೊಬ್ಬ ಪ್ರಜೆಗೂ ಇಲ್ಲಿ ಸಂಪನ್ಮೂಲಗಳ ಮೇಲೆ ಹಕ್ಕಿರುತ್ತದೆ. ಆದರೆ ನಮ್ಮ ಖಾಸಗಿತನದ ಮೇಲಿನ ಅತಿಯಾದ ಮೋಹ ಈ ತಿಳುವಳಿಕೆಯನ್ನು ನಮ್ಮಿಂದ ದೂರಾಗಿಸಿದೆ. ಈ ರೀತಿಯ ದೃಷ್ಟಿಕೋನದ ಅತಿಮುಖ್ಯರೂಪಾಂತರವು ಇಂದಿನ ಅಗತ್ಯವಾಗಿದೆ.

ಷರತ್ತುಗಳು ನಿಯಂತ್ರಕರು ಮತ್ತು ಮೇಲ್ವಿಚಾರಕರ ಸೈನ್ಯಗಳನ್ನು ಹುಟ್ಟುಹಾಕುತ್ತವೆ. ಮತ್ತು ಇವು ಅಗಾಧವಾದ ವಿವೇಚನೆಯ ಅಧಿಕಾರವನ್ನು ಪಡೆದುಕೊಳ್ಳುತ್ತಾರೆ. ಇದು ಅಗಾಧ ಭೃಷ್ಟಾಚಾರಕ್ಕೆ ಕಾರಣವಾಗುತ್ತದೆ  ಮತ್ತುಯೋಜನೆಯು ಸೋರಿಕೆ ಮತ್ತು ಹಣದ ಪೋಲಾಗುವಿಕೆಯಲ್ಲಿ ಕೊನೆಯಾಗುತ್ತದೆ.

ಕೊನೆಯದಾಗಿ ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯು ಭಾರತದ ಮಟ್ಟಿಗೆ ಒಂದು ಒಳ್ಳೆಯ ಯೋಜನೆಯಾಗಿದೆ. ಇದೊಂದು ಸಮಾನ ಮತ್ತು ಎಲ್ಲರನ್ನು ಒಳಗೊಂಡ ಸಮಾಜದ ಪರಿಕಲ್ಪನೆಗೆ ಬುನಾದಿಯಾಗಿದೆ. ಇದುಪ್ರತಿಯೊಬ್ಬ ನಾಗರಿಕನಿಗೂ ಕನಿಷ್ಟ ಬದುಕಿನ ಭದ್ರತೆಯನ್ನು ಖಚಿತಗೊಳಿಸುತ್ತದೆ. ಇದನ್ನು ಅರ್ಥಪೂರ್ಣವಾಗಿ ಜಾರಿಗೆ ತರಲು ಕೆಲವು ಕ್ರಮಗಳನ್ನು ಕೈಗೊಳ್ಳಬೇಕಿದೆ. ಅದನ್ನೂ ಸಹ ನಾವು ಸಾಧಿಸಬಹುದು.

ಶರತ್ ದವಲ

(ಲೇಖಕರು ಬೇಸಿಕ್ ಇನ್‍ಕಮ್ ಅರ್ತ್ ನೆಟ್‍ವರ್ಕ್ ಇದರ ಉಪ ನಿರ್ದೇಶಕರು ಮತ್ತು ಇಂಡಿಯಾ ನೆಟ್ವರ್ಕ್ ಫಾರ್ ಬೇಸಿಕ್ ಇನ್ಕಮ್ ಇದರ ಕೋ ಆರ್ಡಿನೇಟರ್ ಆಗಿರುತ್ತಾರೆ.)

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...