Homeಮುಖಪುಟಕೇರಳದ ರಾಹುಲ್ ರ್ಯಾಲಿಯಲ್ಲಿ ಪಾಕ್ ಧ್ವಜ ಹಾರಾಡಿದ್ದು ಸುಳ್ಳು ಸುದ್ದಿ

ಕೇರಳದ ರಾಹುಲ್ ರ್ಯಾಲಿಯಲ್ಲಿ ಪಾಕ್ ಧ್ವಜ ಹಾರಾಡಿದ್ದು ಸುಳ್ಳು ಸುದ್ದಿ

- Advertisement -
- Advertisement -

ಹಸಿರು ಹಾರಿದರೆ ಅದು ಪಾಕ್ ಧ್ವಜ! ಸಂಘಿಗಳ ಬಹುಕಾಲದ ಹುನ್ನಾರ
ಇದು ಇವತ್ತು ನಿನ್ನೆಯದಲ್ಲ, ಸಂಘದ ಅಂಗಸಂಸ್ಥೆಗಳು ಸುಮಾರು ಎರಡು ದಶಕಗಳಿಂದ ನಡೆಸಿಕೊಂಡು ಬಂದಿರುವ ಪ್ರಪಗಂಡಾ. ಯಾವುದಾದರೂ ರ್ಯಾಲಿಯಲ್ಲಿ ಹಸಿರು ಬಾವುಟ ಕಂಡರೆ ಸಾಕು, ಅಲ್ಲಿ ಪಾಕ್ ಧ್ವಜ/ಇಸ್ಲಾಮಿಕ್ ಧ್ವಜ ಹಾರಾಡಿದವು ಎಂದೆಲ್ಲ ಸುದ್ದಿ ಹಬ್ಬಿಸುವುದು. ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದ ಮೇಲೆ ಅಂತಹ ಫೋಟೊ, ವಿಡಿಯೋಗಳ ಮೂಲಕ ರಾಜಕೀಯವಾಗಿ ಮುಗ್ಧರಾದವರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತ ಬರಲಾಗಿದೆ. ಕಾಂಗ್ರೆಸ್ ವಿರುದ್ಧವೇ ಈ ‘ಅಸ್ತ್ರ’ ಜಾಸ್ತಿ ಬಳಕೆಯಾಗಿದೆ, ಜೊತೆಗೆ ಮಮತಾ ಬ್ಯಾನರ್ಜಿಯವರನ್ನೂ ಬಿಟ್ಟಿಲ್ಲ.
ಈಗ ರಾಹುಲ್ ಗಾಂಧಿ ಕೇರಳದ ವಯನಾಡಿನಲ್ಲಿ ನಾಮಪತ್ರ ಸಲ್ಲಿಸುವ ಮುನ್ನ ನಡೆಸಿದ ರ್ಯಾಲಿ ವಿಚಾರದಲ್ಲೂ ಭಕ್ತರಲ್ಲಿ ಮತ್ತೆ ‘ಹಸಿರು ಕಾಮಾಲೆ’ ಕಾಣಿಸಿಕೊಂಡಿದೆ. ಇದು ಮರುಕಳಿಸುತ್ತಲೇ ಹೋಗಬಹುದಾದ್ದರಿಂದ ಪಾಕ್ ಧ್ವಜ, ಐಯುಎಂಎಲ್ ಪಕ್ಷದ ಧ್ವಜ ಮತ್ತು ಇಸ್ಲಾಮಿಕ್ ಬ್ಯಾನರ್‍ಗಳ ಕುರಿತ ಪ್ರಾಥಮಿಕ ತಿಳವಳಿಕೆಯನ್ನು ಇಲ್ಲಿ ನೀಡುತ್ತಿದ್ದೇವೆ.
ಮಿಥ್ಯ: ಏಪ್ರಿಲ್ 4ರಂದು ವಯನಾಡಿನಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸುವ ಮುನ್ನ ನಡೆದ ರ್ಯಾಲಿಯಲ್ಲಿ ಪಾಕ್ ಧ್ವಜಗಳು ಹಾರಾಡಿವೆ. ಇಸ್ಲಾಮಿಕ್ ಧ್ವಜಗಳೂ ಕಂಡಿವೆ. ಭಯೋತ್ಪಾದಕ ಜಿನ್ನಾ ಒಂದು ಕಾಶ್ಮೀರ ಮಾಡಿ ಹೋದ, ರಾಹುಲ್ 500 ಕಾಶ್ಮೀರಗಳನ್ನು ಸೃಷ್ಟಿಸಿ, ದೇಶ ಒಡೆಯಲಿದ್ದಾರೆ…. ಈಗಲಾದರೂ ಜಿಹಾದಿ ಪ್ರಿಯ ಕಾಂಗ್ರೆಸ್ ಅನ್ನು ಅರ್ಥ ಮಾಡಿಕೊಳ್ಳಿ ಎಂದು ಹಲವಾರು ಟ್ವಿಟ್ಟರ್ ಹ್ಯಾಂಡಲ್‍ಗಳಿಂದ ಸುದ್ದಿ ಹುಟ್ಟುತ್ತದೆ. ವಯನಾಡ್ ರ್ಯಾಲಿಯ ಫೋಟೊ, ವಿಡಿಯೋಗಳಲ್ಲಿ ಹಸಿರು ಧ್ವಜಗಳನ್ನು ಉಲ್ಲೇಖಿಸಿ ಈ ‘ಅಪಾದನೆ’ ಮಾಡಲಾಗಿದೆ. ಭಕ್ತರು ಇದನ್ನು ರಿಟ್ವೀಟ್ ಮಾಡುತ್ತಲೇ ಇದ್ದಾರೆ. ಫೇಸ್‍ಬುಕ್, ವ್ಯಾಟ್ಸಾಪ್‍ಗಳಿಗೂ ಇದು ಹರಡಿದೆ.


ಸತ್ಯ: ಇದು ಮೊದಲೇನಲ್ಲ. ಕೇರಳದ ‘ಇಂಡಿಯನ್ ಯುನಿಯನ್ ಮುಸ್ಲಿಂ ಲೀಗ್’ (ಐಯುಎಂಎಲ್) ಪಕ್ಷದ ಧ್ವಜ ಕಂಡಾಗಲೆಲ್ಲ ಇಂತಹ ಸುಳ್ಳು ಅಪಾದನೆ ಮಾಡುತ್ತ ಬರಲಾಗಿದೆ. ಐಯುಎಂಎಲ್ ಕೇರಳದಲ್ಲಿ ಅದು ಗಣನೀಯ ಬೇಸ್ ಹೊಂದಿದೆ. ಮೊನ್ನೆ ರ್ಯಾಲಿಯಲ್ಲಿ ಕಂಡಿದ್ದು ಇದೇ ಪಕ್ಷದ ಧ್ವಜ ಮತ್ತು ಬ್ಯಾನರ್ ಅವು ಖಂಡಿತ ಪಾಕ್ ಧ್ವಜಗಳೂ ಅಲ್ಲ, ಇಸ್ಲಾಮಿಕ್ ಧ್ವಜಗಳೂ ಅಲ್ಲ. ಜೊತೆಗೆ ಕಾಂಗ್ರೆಸ್ ಧ್ವಜಗಳಂತೂ ಅಲ್ಲವೇ ಅಲ್ಲ.
ಪಾಕ್ ಧ್ವಜದಲ್ಲಿ ಅರ್ಧಚಂದ್ರ ಮತ್ತು ನಕ್ಷತ್ರಗಳು ಮಧ್ಯಭಾಗದಲ್ಲಿ ಇದ್ದರೆ, ಅವು ಐಯುಎಂಎಲ್ ಧ್ವಜ/ಬ್ಯಾನರಿನಲ್ಲಿ ಎಡಮೂಲೆ ಟಾಪ್‍ನಲ್ಲಿವೆ. ಪಾಕ್ ಧ್ವಜದಲ್ಲಿ ಎಡಕ್ಕೆ ಬಿಳಿ ಪಟ್ಟೆ ಇರುತ್ತದೆ. ಸಾಮಾನ್ಯವಾಗಿ ಮುಸ್ಲಿಮರು ಧಾರ್ಮಿಕ ಧ್ವಜ ಎಂಬರ್ಥದಲ್ಲಿ ಬಳಸುವ ಬ್ಯಾನರ್‍ನಲ್ಲಿ ಈ ಬಿಳಿ ಪಟ್ಟೆ ಇರುವುದಿಲ್ಲ. ಅಂದು ರ್ಯಾಲಿಯಲ್ಲಿ ಹಾರಾಡಿದ್ದು ಐಯುಎಂಎಲ್ ಪಕ್ಷದ ಧ್ವಜಗಳಷ್ಟೇ.

ಇನ್ನೊಂದು ಕಡೆ ನಟಿ ಕೊಯ್ನ ಮಿತ್ರ ಒಂದು ಟ್ವೀಟ್ ಮಾಡಿದ್ದು, ಅಲ್ಲಿ ಬರೀ ಹಸಿರು ಧ್ವಜಗಳ ಚಿತ್ರವಿದೆ. ಇದು ವಯನಾಡ್ ರ್ಯಾಲಿಗೆ ಸಂಬಂಧವೇ ಇಲ್ಲದ ಚಿತ್ರ. ಐಯುಎಂಎಲ್ ಪಕ್ಷದ ಮಾಜಿ ಸಚಿವ ಕುನಾಲ್‍ಕುಟ್ಟಿ 2016ರಲ್ಲಿ ನಡೆಸಿದ ರ್ಯಾಲಿಯ ಚಿತ್ರವದು. ಅಲ್ಲಿ ಸಹಜವಾಗಿ ಐಯುಎಂಎಲ್ ಧ್ವಜಗಳೇ ಇವೆ.
(ಆಧಾರ: ಅಲ್ಟ್‍ನ್ಯೂಸ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...