HomeUncategorizedಮಾದರಿ ನೀತಿಸಂಹಿತೆ ಎಂದರೇನು? : ಡೇಟಾಖೋಲಿ ಬೈ ಡೇಟಾಮ್ಯಾಟಿಕ್ಸ್‌

ಮಾದರಿ ನೀತಿಸಂಹಿತೆ ಎಂದರೇನು? : ಡೇಟಾಖೋಲಿ ಬೈ ಡೇಟಾಮ್ಯಾಟಿಕ್ಸ್‌

- Advertisement -
- Advertisement -

ಜನರಿಂದ ಆರಿಸಿ ಹೋಗಿ ಜನವಿರೋಧಿ ಕೆಲಸವನ್ನು ಕಾಯಿದೇ ಶೀರ ಮಾಡುವವರಿಗೆ ನಮ್ಮ ದೇಶದೊಳಗ ಜನಪ್ರತಿನಿಧಿ ಅಂತ ಹೆಸರು.

ಅಂಥವರು ಒಲ್ಲೆ ಒಲ್ಲೆ ಅನಕೋತ ಮಾಡಿದ ಅನೇಕ ಕಾನೂನುಗಳಲ್ಲಿ ಒಂದು ಅಂದರ ಚುನಾವಣೆ ಆಯೋಗದ ಮಾದರಿ ನೀತಿಸಂಹಿತೆ (ಮಾನಿಸಂ). ಖರೇ ಹೇಳಬೇಕಂದರ ಅದು ಸಂಸತ್ತು ಮಾಡಿದಲ್ಲ. ಆಯೋಗ ಮಾಡಿದ್ದು ಅಧೀನ ಶಾಸಕಾಂಗದ ಅಧಿಕಾರದೊಳಗ.

ಕೇಂದ್ರ ಚುನಾವಣಾ ಆಯೋಗ ಮಾದರಿ ನೀತಿಸಂಹಿತೆಯನ್ನ ಪ್ರತಿ ಚುನಾವಣೆಗೆ ಮುಂಚೆ ಬದಲಿಸಿಗೋತ, ಗಟ್ಟಿ ಮಾಡಿಕೋತ, ತಪ್ಪುಗಳನ್ನು ತಿದ್ದಿಕೋತ, ಹಿಂದಿನ ಚುನಾವಣೆ ಪಾಠಗಳನ್ನು ಕಲಕೋತ ಖರೇ ಅರ್ಥದೊಳಗ ಅದನ್ನ ಮಾದರಿ ಮಾಡಬೇಕು ಅನ್ನೊ ಕೆಲಸ ಮಾಡಿಕೋತ ಬಂದದ.

ಅದರ ಕೆಲವು ಅಂಶಗಳನ್ನು ನೋಡೋಣ.
 ಹೊಸ ಯೋಜನೆ ಘೋಷಿಸಬಾರದು, ಹೊಸ ಕಾರ್ಯಕ್ರಮ ಶುರುಮಾಡಬಾರದು
 ಸರಕಾರಿ ವಸತಿಗೃಹ, ಕಚೇರಿಗಳನ್ನ ರಾಜಕೀಯ ಕಾರಣಗಳಿಗೆ ಬಳಸಬಾರದು, ಮೀಟಿಂಗು ಮಾಡಬಾರದು
 ಸರಕಾರಿ ಸ್ಥಳಗಳನ್ನ ಅಂದಗೆಡಿಸಬಾರದು.
 ವಿರೋಧಿಗಳ ಮನೀ ಮುಂದ, ಅವರಿಗೆ ಕಿರಿಕಿರಿ ಆಗೋ ಹಂಗ ಪ್ರಭಾತಫೇರಿ ತೆಗೀಬಾರದು, ಹೊಯ್ಕೋ- ಬಡಕೋ ಮಾಡಬಾರದು
 ಸರಕಾರಿ ಮಾಧ್ಯಮದೊಳಗ ಎಲ್ಲಾ ಪಕ್ಷಗಳಿಗೂ ಸಮಾನ ಅವಕಾಶ ಸಿಗಬೇಕು
 ಮೈಕಾಸುರನನ್ನ ರಾತ್ರಿ ಒದರಸಬಾರದು.
 ಆಡಳಿತ ಪಕ್ಷ ತನ್ನ ಶಕ್ತಿಯ ದುರುಪಯೋಗ ಮಾಡಬಾರದು
 ಮಂತ್ರಿಗಳು ಗಾಡಿ, ಘೋಡಾ, ಪೀಏ, ಪೀಪಿ, ಗನ್ ಮ್ಯಾನು, ಉಪಯೋಗಿಸಬಾರದು.
 ಮತದಾನದ ದಿವಸ ಮತದಾರ ಮಹಾಪ್ರಭುಗಳನ್ನ ಹುದ್ದರಿಗಳು ತಮ್ಮ ಗಾಡಿಯೊಳಗ ಕರಕೊಂಡು ಹೋಗಬಾರದು.
 (ಅಧಿಕಾರಿಗಳಿಗೆ ಗೊತ್ತಾಗೋ ಹಂಗ) ಹಣ- ಹೆಂಡ ಹಂಚಬಾರದು, ಇತ್ಯಾದಿ, ಇತ್ಯಾದಿ.

ಒಟ್ಟಿನೊಳಗ, ನಾಯಕರು ಜನಪ್ರೀತಿಯಿಂದ ಚುನಾವಣೆ ಗೆಲ್ಲಬೇಕೇ ಹೊರತು ಜನರನ್ನು ಪ್ರಲೋಭಿಸಿ ಅಥವಾ ಹೆದರಿಸಿ ಗೆಲ್ಲಬಾರದು ಅನ್ನೋದು ಮಾನೀಸಂ ಉದ್ದೇಶ.

ಇದು ಚುನಾವಣೆ ಘೋಷಣೆ ಆದತಕ್ಷಣ ಜಾರಿಗೆ ಬರತದ. ಚುನಾವಣೆ ಪ್ರಕ್ರಿಯೆ ಮುಗಿಯೋ ತನಕಾ ಇರತದ.

ಬಹುಮಟ್ಟಿಗೆ ಯಾವುದಾದರೂ ಕ್ಷೇತ್ರದೊಳಗ ಚುನಾವಣೆ ಬಂದರ ಆ ಇಡೀ ರಾಜ್ಯ ಅಥವಾ ಜಿಲ್ಲೆಗೆ ಇದು ಲಾಗೂ ಆಗತದ.

ಇದನ್ನು ಉಲ್ಲಂಘಿಸಿದರ ಜೈಲಿಗೆ ಹಾಕೋದರಿಂದ ಹಿಡದು ಮುಂದಿನ ಚುನಾವಣೆಗೆ ಅಯೋಗ್ಯರನ್ನಾಗಿ ಮಾಡೋ ತನಕಾ ಆಯೋಗಕ್ಕ ಅಧಿಕಾರ ಐತಿ.

ಹಿಂದೆಲ್ಲಾ ಚುನಾವಣೆ ಅಧಿಕಾರಿಗಳಿಗೆ ಹೆಚ್ಚಿನ ಡ್ಯೂಟಿ ಹಾಕಿ ಮಾನೀಸಂ ಮೇಲುಸ್ತುವಾರಿ ಕೊಡತಿದ್ದರು. ಈಗ ಮಾನೀಸಂ ಜಾರಿಗೆ ಅಂತನೇ ಬ್ಯಾರೆ ಅಧಿಕಾರಿ ಇರತಾರ.
ಆದರೂ ಚುನಾವಣೆಗೆ ಬಡಿದ ಮುಸುಕು ಸರದಿಲ್ಲ. ಅವು ಪಾರದರ್ಶಕ ಆಗಿಲ್ಲ ಅನ್ನೋ ಮಾತು ಕಡಿಮಿ ಆಗಿಲ್ಲ.

ಇವೆಲ್ಲವನ್ನೂ ನಾವು ಸರಿಯಾಗಿ ಪಾಲಿಸಲಿಕ್ಕೆ ಹತ್ತೇವೇನು? ಇದಕ್ಕ `ಇಲ್ಲ’ ಅನ್ನೋ ಯಾಷಿ ಮಾತಿನಗಿಂತಾ `ಕಮ್ಮಿ ಖರೇ’ ಅನ್ನೋ ಸಿಹಿಮಾತಿನ ಉತ್ತರನ ಸರಿ ಆದೀತು.
ಈ ಹಿನ್ನೆಲೆಯೊಳಗ ಒಂದು ವಿಷಯ ನೆನಪು ಆಗತದ.

`ಅವರು ಭಾಳ ಪ್ರತಿಭಾವಂತರು, ಒಳ್ಳೆಯವರು, ಇತರರಿಗೆ ಮಾದರಿಯಾಗಬಲ್ಲವರು ಆದರೆ ಅವರಿಗೆ ಸಿಗಬೇಕಾದ ಮನ್ನಣೆ ಸಿಗಲಿಲ್ಲ” ಅನ್ನೋದು ಏನದಲಾ, ಅದು ನಂ ಹಿಂದೂಸ್ತಾನದಾಗ ಕೇಳಿ ಬರಕೋತನ ಇರೋ ಸಿಕ್ಕಾಪಟ್ಟೆ ಕೂಗುಗಳೊಳಗ ಒಂದು. ಈ ಮಾತಿಗೆ ತಕ್ಕಂತೆ ಇದ್ದ ಒಬ್ಬ ದೊಡ್ಡ ಮನಿಷ ಅಂದರ ಮಾಜಿ ಉಪಪ್ರಧಾನಿ, ಪ್ರಕಾಂಡಪಂಡಿತ ಬಾಬು ಜಗಜೀವನರಾಂ. ಅವರ ಧರ್ಮಪತ್ನಿ ಇಂದ್ರಾಣಿ ದೇವಿ. ಕಾನಪುರದ ಸಾಮಾಜಿಕ ಕಾರ್ಯಕರ್ತರ ಮಗಳಾದ ಇಂದ್ರಾಣಿ ದೇವಿ ಅವರು ಒಂದು ಪುಸ್ತಕ ಬರೆದರು ಅದರ ಹೆಸರು `ದೇಖಿ, ಸುನಿ, ಬೀತಿ ಬಾತೆಂ’ (ನೋಡಿದ, ಕೇಳಿದ, ಆಗಿ ಹೋದ ಮಾತುಗಳು).

ಅದರೊಳಗ ಒಂದು ಭಾರಿ ಮಜಾ ವಿಷಯ ಐತಿ. “ಅಮೆರಿಕಯಲ್ಲಿ ಬಿಳಿಯರು ಕರಿಯರಿಗೆ ಹಿಂಸೆ ಕೊಡಬಾರದು ಅಂತ ಅಬ್ರಹಾಂ ಲಿಂಕನ್ ಹಾಗೂ ಇತರ ನಾಯಕರು ಪ್ರಯತ್ನಿಸಿದಾಗ ಅಲ್ಲಿ ಭಯಂಕರ ಪ್ರತಿರೋಧ ಬಂತು. ಆದರೆ ಭಾರತದಲ್ಲಿ ಗುಲಾಮಗಿರಿ ಹಾಗೂ ಅಸ್ಪೃಶ್ಯತೆ ಯನ್ನು ಪ್ರತಿಬಂಧಿಸಿದಾಗ ಹಾಗಾಗಲಿಲ್ಲ” ಅನ್ನೋದು.

ಅದಕ್ಕೆ ಇಂದ್ರಾಣಿ ಅವರು ಕೊಡುವ ಕಾರಣ ಇನ್ನೂ ಮಜಾ. “ಯಾಕೆ ಗೊತ್ತೇ? ಈ ಕಾನೂನುಗಳನ್ನು ಈ ದೇಶದಲ್ಲಿ ಯಾರೂ ಸರಿಯಾಗಿ ಜಾರಿ ಮಾಡೋದಿಲ್ಲ. ಇಂತಹ ಎಷ್ಟು ಕಾನೂನು ಬಂದರೂ ಇಲ್ಲಿ ನಿಮ್ನ ವರ್ಗದ ಜನರ ಬದುಕು ಬದಲಾಗೋದಿಲ್ಲ” ಅಂತ ಅವರು ಷರಾ ಎಳೀತಾರ. ಆ ಪುಸ್ತಕ ಓದಿ ಕೆಳಗ ಇಡಬೇಕಾದರ ‘ಐವತ್ತು ವರ್ಷದ ಹಿಂದೆ ಹೇಳಿದ ಈ ಮಾತುಗಳು ಎಷ್ಟು ಪ್ರಸ್ತುತ’ ಅಂತ ಮತ್ತ ಕ್ಲೀಷೆಯೊಳಗ ಮಾತಾಡಬೇಕಾಗತದ.

ಹೆಚ್ಚಿನ ಮಾಹಿತಿಗೆ – ಇಲ್ಲಿ ನೋಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...