HomeUncategorizedಮಾದರಿ ನೀತಿಸಂಹಿತೆ ಎಂದರೇನು? : ಡೇಟಾಖೋಲಿ ಬೈ ಡೇಟಾಮ್ಯಾಟಿಕ್ಸ್‌

ಮಾದರಿ ನೀತಿಸಂಹಿತೆ ಎಂದರೇನು? : ಡೇಟಾಖೋಲಿ ಬೈ ಡೇಟಾಮ್ಯಾಟಿಕ್ಸ್‌

- Advertisement -
- Advertisement -

ಜನರಿಂದ ಆರಿಸಿ ಹೋಗಿ ಜನವಿರೋಧಿ ಕೆಲಸವನ್ನು ಕಾಯಿದೇ ಶೀರ ಮಾಡುವವರಿಗೆ ನಮ್ಮ ದೇಶದೊಳಗ ಜನಪ್ರತಿನಿಧಿ ಅಂತ ಹೆಸರು.

ಅಂಥವರು ಒಲ್ಲೆ ಒಲ್ಲೆ ಅನಕೋತ ಮಾಡಿದ ಅನೇಕ ಕಾನೂನುಗಳಲ್ಲಿ ಒಂದು ಅಂದರ ಚುನಾವಣೆ ಆಯೋಗದ ಮಾದರಿ ನೀತಿಸಂಹಿತೆ (ಮಾನಿಸಂ). ಖರೇ ಹೇಳಬೇಕಂದರ ಅದು ಸಂಸತ್ತು ಮಾಡಿದಲ್ಲ. ಆಯೋಗ ಮಾಡಿದ್ದು ಅಧೀನ ಶಾಸಕಾಂಗದ ಅಧಿಕಾರದೊಳಗ.

ಕೇಂದ್ರ ಚುನಾವಣಾ ಆಯೋಗ ಮಾದರಿ ನೀತಿಸಂಹಿತೆಯನ್ನ ಪ್ರತಿ ಚುನಾವಣೆಗೆ ಮುಂಚೆ ಬದಲಿಸಿಗೋತ, ಗಟ್ಟಿ ಮಾಡಿಕೋತ, ತಪ್ಪುಗಳನ್ನು ತಿದ್ದಿಕೋತ, ಹಿಂದಿನ ಚುನಾವಣೆ ಪಾಠಗಳನ್ನು ಕಲಕೋತ ಖರೇ ಅರ್ಥದೊಳಗ ಅದನ್ನ ಮಾದರಿ ಮಾಡಬೇಕು ಅನ್ನೊ ಕೆಲಸ ಮಾಡಿಕೋತ ಬಂದದ.

ಅದರ ಕೆಲವು ಅಂಶಗಳನ್ನು ನೋಡೋಣ.
 ಹೊಸ ಯೋಜನೆ ಘೋಷಿಸಬಾರದು, ಹೊಸ ಕಾರ್ಯಕ್ರಮ ಶುರುಮಾಡಬಾರದು
 ಸರಕಾರಿ ವಸತಿಗೃಹ, ಕಚೇರಿಗಳನ್ನ ರಾಜಕೀಯ ಕಾರಣಗಳಿಗೆ ಬಳಸಬಾರದು, ಮೀಟಿಂಗು ಮಾಡಬಾರದು
 ಸರಕಾರಿ ಸ್ಥಳಗಳನ್ನ ಅಂದಗೆಡಿಸಬಾರದು.
 ವಿರೋಧಿಗಳ ಮನೀ ಮುಂದ, ಅವರಿಗೆ ಕಿರಿಕಿರಿ ಆಗೋ ಹಂಗ ಪ್ರಭಾತಫೇರಿ ತೆಗೀಬಾರದು, ಹೊಯ್ಕೋ- ಬಡಕೋ ಮಾಡಬಾರದು
 ಸರಕಾರಿ ಮಾಧ್ಯಮದೊಳಗ ಎಲ್ಲಾ ಪಕ್ಷಗಳಿಗೂ ಸಮಾನ ಅವಕಾಶ ಸಿಗಬೇಕು
 ಮೈಕಾಸುರನನ್ನ ರಾತ್ರಿ ಒದರಸಬಾರದು.
 ಆಡಳಿತ ಪಕ್ಷ ತನ್ನ ಶಕ್ತಿಯ ದುರುಪಯೋಗ ಮಾಡಬಾರದು
 ಮಂತ್ರಿಗಳು ಗಾಡಿ, ಘೋಡಾ, ಪೀಏ, ಪೀಪಿ, ಗನ್ ಮ್ಯಾನು, ಉಪಯೋಗಿಸಬಾರದು.
 ಮತದಾನದ ದಿವಸ ಮತದಾರ ಮಹಾಪ್ರಭುಗಳನ್ನ ಹುದ್ದರಿಗಳು ತಮ್ಮ ಗಾಡಿಯೊಳಗ ಕರಕೊಂಡು ಹೋಗಬಾರದು.
 (ಅಧಿಕಾರಿಗಳಿಗೆ ಗೊತ್ತಾಗೋ ಹಂಗ) ಹಣ- ಹೆಂಡ ಹಂಚಬಾರದು, ಇತ್ಯಾದಿ, ಇತ್ಯಾದಿ.

ಒಟ್ಟಿನೊಳಗ, ನಾಯಕರು ಜನಪ್ರೀತಿಯಿಂದ ಚುನಾವಣೆ ಗೆಲ್ಲಬೇಕೇ ಹೊರತು ಜನರನ್ನು ಪ್ರಲೋಭಿಸಿ ಅಥವಾ ಹೆದರಿಸಿ ಗೆಲ್ಲಬಾರದು ಅನ್ನೋದು ಮಾನೀಸಂ ಉದ್ದೇಶ.

ಇದು ಚುನಾವಣೆ ಘೋಷಣೆ ಆದತಕ್ಷಣ ಜಾರಿಗೆ ಬರತದ. ಚುನಾವಣೆ ಪ್ರಕ್ರಿಯೆ ಮುಗಿಯೋ ತನಕಾ ಇರತದ.

ಬಹುಮಟ್ಟಿಗೆ ಯಾವುದಾದರೂ ಕ್ಷೇತ್ರದೊಳಗ ಚುನಾವಣೆ ಬಂದರ ಆ ಇಡೀ ರಾಜ್ಯ ಅಥವಾ ಜಿಲ್ಲೆಗೆ ಇದು ಲಾಗೂ ಆಗತದ.

ಇದನ್ನು ಉಲ್ಲಂಘಿಸಿದರ ಜೈಲಿಗೆ ಹಾಕೋದರಿಂದ ಹಿಡದು ಮುಂದಿನ ಚುನಾವಣೆಗೆ ಅಯೋಗ್ಯರನ್ನಾಗಿ ಮಾಡೋ ತನಕಾ ಆಯೋಗಕ್ಕ ಅಧಿಕಾರ ಐತಿ.

ಹಿಂದೆಲ್ಲಾ ಚುನಾವಣೆ ಅಧಿಕಾರಿಗಳಿಗೆ ಹೆಚ್ಚಿನ ಡ್ಯೂಟಿ ಹಾಕಿ ಮಾನೀಸಂ ಮೇಲುಸ್ತುವಾರಿ ಕೊಡತಿದ್ದರು. ಈಗ ಮಾನೀಸಂ ಜಾರಿಗೆ ಅಂತನೇ ಬ್ಯಾರೆ ಅಧಿಕಾರಿ ಇರತಾರ.
ಆದರೂ ಚುನಾವಣೆಗೆ ಬಡಿದ ಮುಸುಕು ಸರದಿಲ್ಲ. ಅವು ಪಾರದರ್ಶಕ ಆಗಿಲ್ಲ ಅನ್ನೋ ಮಾತು ಕಡಿಮಿ ಆಗಿಲ್ಲ.

ಇವೆಲ್ಲವನ್ನೂ ನಾವು ಸರಿಯಾಗಿ ಪಾಲಿಸಲಿಕ್ಕೆ ಹತ್ತೇವೇನು? ಇದಕ್ಕ `ಇಲ್ಲ’ ಅನ್ನೋ ಯಾಷಿ ಮಾತಿನಗಿಂತಾ `ಕಮ್ಮಿ ಖರೇ’ ಅನ್ನೋ ಸಿಹಿಮಾತಿನ ಉತ್ತರನ ಸರಿ ಆದೀತು.
ಈ ಹಿನ್ನೆಲೆಯೊಳಗ ಒಂದು ವಿಷಯ ನೆನಪು ಆಗತದ.

`ಅವರು ಭಾಳ ಪ್ರತಿಭಾವಂತರು, ಒಳ್ಳೆಯವರು, ಇತರರಿಗೆ ಮಾದರಿಯಾಗಬಲ್ಲವರು ಆದರೆ ಅವರಿಗೆ ಸಿಗಬೇಕಾದ ಮನ್ನಣೆ ಸಿಗಲಿಲ್ಲ” ಅನ್ನೋದು ಏನದಲಾ, ಅದು ನಂ ಹಿಂದೂಸ್ತಾನದಾಗ ಕೇಳಿ ಬರಕೋತನ ಇರೋ ಸಿಕ್ಕಾಪಟ್ಟೆ ಕೂಗುಗಳೊಳಗ ಒಂದು. ಈ ಮಾತಿಗೆ ತಕ್ಕಂತೆ ಇದ್ದ ಒಬ್ಬ ದೊಡ್ಡ ಮನಿಷ ಅಂದರ ಮಾಜಿ ಉಪಪ್ರಧಾನಿ, ಪ್ರಕಾಂಡಪಂಡಿತ ಬಾಬು ಜಗಜೀವನರಾಂ. ಅವರ ಧರ್ಮಪತ್ನಿ ಇಂದ್ರಾಣಿ ದೇವಿ. ಕಾನಪುರದ ಸಾಮಾಜಿಕ ಕಾರ್ಯಕರ್ತರ ಮಗಳಾದ ಇಂದ್ರಾಣಿ ದೇವಿ ಅವರು ಒಂದು ಪುಸ್ತಕ ಬರೆದರು ಅದರ ಹೆಸರು `ದೇಖಿ, ಸುನಿ, ಬೀತಿ ಬಾತೆಂ’ (ನೋಡಿದ, ಕೇಳಿದ, ಆಗಿ ಹೋದ ಮಾತುಗಳು).

ಅದರೊಳಗ ಒಂದು ಭಾರಿ ಮಜಾ ವಿಷಯ ಐತಿ. “ಅಮೆರಿಕಯಲ್ಲಿ ಬಿಳಿಯರು ಕರಿಯರಿಗೆ ಹಿಂಸೆ ಕೊಡಬಾರದು ಅಂತ ಅಬ್ರಹಾಂ ಲಿಂಕನ್ ಹಾಗೂ ಇತರ ನಾಯಕರು ಪ್ರಯತ್ನಿಸಿದಾಗ ಅಲ್ಲಿ ಭಯಂಕರ ಪ್ರತಿರೋಧ ಬಂತು. ಆದರೆ ಭಾರತದಲ್ಲಿ ಗುಲಾಮಗಿರಿ ಹಾಗೂ ಅಸ್ಪೃಶ್ಯತೆ ಯನ್ನು ಪ್ರತಿಬಂಧಿಸಿದಾಗ ಹಾಗಾಗಲಿಲ್ಲ” ಅನ್ನೋದು.

ಅದಕ್ಕೆ ಇಂದ್ರಾಣಿ ಅವರು ಕೊಡುವ ಕಾರಣ ಇನ್ನೂ ಮಜಾ. “ಯಾಕೆ ಗೊತ್ತೇ? ಈ ಕಾನೂನುಗಳನ್ನು ಈ ದೇಶದಲ್ಲಿ ಯಾರೂ ಸರಿಯಾಗಿ ಜಾರಿ ಮಾಡೋದಿಲ್ಲ. ಇಂತಹ ಎಷ್ಟು ಕಾನೂನು ಬಂದರೂ ಇಲ್ಲಿ ನಿಮ್ನ ವರ್ಗದ ಜನರ ಬದುಕು ಬದಲಾಗೋದಿಲ್ಲ” ಅಂತ ಅವರು ಷರಾ ಎಳೀತಾರ. ಆ ಪುಸ್ತಕ ಓದಿ ಕೆಳಗ ಇಡಬೇಕಾದರ ‘ಐವತ್ತು ವರ್ಷದ ಹಿಂದೆ ಹೇಳಿದ ಈ ಮಾತುಗಳು ಎಷ್ಟು ಪ್ರಸ್ತುತ’ ಅಂತ ಮತ್ತ ಕ್ಲೀಷೆಯೊಳಗ ಮಾತಾಡಬೇಕಾಗತದ.

ಹೆಚ್ಚಿನ ಮಾಹಿತಿಗೆ – ಇಲ್ಲಿ ನೋಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ | ಆರ್‌ಎಸ್‌ಎಸ್‌ ನಾಯಕನ ಭೇಟಿಯನ್ನು ಒಪ್ಪಿಕೊಂಡ ಎಡಿಜಿಪಿ ಅಜಿತ್ ಕುಮಾರ್ : ವರದಿ

0
ಕೇರಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌ ನಾಯಕನನ್ನು ಭೇಟಿಯಾಗಿರುವುದು ನಿಜ ಎಂದು ಕೇರಳ ಪೊಲೀಸರ ವಿಶೇಷ ಘಟಕ ಖಚಿತಪಡಿಸಿರುವುದಾಗಿ ವರದಿಯಾಗಿದೆ. ಎಡಿಜಿಪಿ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌...