HomeUncategorizedಮಾದರಿ ನೀತಿಸಂಹಿತೆ ಎಂದರೇನು? : ಡೇಟಾಖೋಲಿ ಬೈ ಡೇಟಾಮ್ಯಾಟಿಕ್ಸ್‌

ಮಾದರಿ ನೀತಿಸಂಹಿತೆ ಎಂದರೇನು? : ಡೇಟಾಖೋಲಿ ಬೈ ಡೇಟಾಮ್ಯಾಟಿಕ್ಸ್‌

- Advertisement -
- Advertisement -

ಜನರಿಂದ ಆರಿಸಿ ಹೋಗಿ ಜನವಿರೋಧಿ ಕೆಲಸವನ್ನು ಕಾಯಿದೇ ಶೀರ ಮಾಡುವವರಿಗೆ ನಮ್ಮ ದೇಶದೊಳಗ ಜನಪ್ರತಿನಿಧಿ ಅಂತ ಹೆಸರು.

ಅಂಥವರು ಒಲ್ಲೆ ಒಲ್ಲೆ ಅನಕೋತ ಮಾಡಿದ ಅನೇಕ ಕಾನೂನುಗಳಲ್ಲಿ ಒಂದು ಅಂದರ ಚುನಾವಣೆ ಆಯೋಗದ ಮಾದರಿ ನೀತಿಸಂಹಿತೆ (ಮಾನಿಸಂ). ಖರೇ ಹೇಳಬೇಕಂದರ ಅದು ಸಂಸತ್ತು ಮಾಡಿದಲ್ಲ. ಆಯೋಗ ಮಾಡಿದ್ದು ಅಧೀನ ಶಾಸಕಾಂಗದ ಅಧಿಕಾರದೊಳಗ.

ಕೇಂದ್ರ ಚುನಾವಣಾ ಆಯೋಗ ಮಾದರಿ ನೀತಿಸಂಹಿತೆಯನ್ನ ಪ್ರತಿ ಚುನಾವಣೆಗೆ ಮುಂಚೆ ಬದಲಿಸಿಗೋತ, ಗಟ್ಟಿ ಮಾಡಿಕೋತ, ತಪ್ಪುಗಳನ್ನು ತಿದ್ದಿಕೋತ, ಹಿಂದಿನ ಚುನಾವಣೆ ಪಾಠಗಳನ್ನು ಕಲಕೋತ ಖರೇ ಅರ್ಥದೊಳಗ ಅದನ್ನ ಮಾದರಿ ಮಾಡಬೇಕು ಅನ್ನೊ ಕೆಲಸ ಮಾಡಿಕೋತ ಬಂದದ.

ಅದರ ಕೆಲವು ಅಂಶಗಳನ್ನು ನೋಡೋಣ.
 ಹೊಸ ಯೋಜನೆ ಘೋಷಿಸಬಾರದು, ಹೊಸ ಕಾರ್ಯಕ್ರಮ ಶುರುಮಾಡಬಾರದು
 ಸರಕಾರಿ ವಸತಿಗೃಹ, ಕಚೇರಿಗಳನ್ನ ರಾಜಕೀಯ ಕಾರಣಗಳಿಗೆ ಬಳಸಬಾರದು, ಮೀಟಿಂಗು ಮಾಡಬಾರದು
 ಸರಕಾರಿ ಸ್ಥಳಗಳನ್ನ ಅಂದಗೆಡಿಸಬಾರದು.
 ವಿರೋಧಿಗಳ ಮನೀ ಮುಂದ, ಅವರಿಗೆ ಕಿರಿಕಿರಿ ಆಗೋ ಹಂಗ ಪ್ರಭಾತಫೇರಿ ತೆಗೀಬಾರದು, ಹೊಯ್ಕೋ- ಬಡಕೋ ಮಾಡಬಾರದು
 ಸರಕಾರಿ ಮಾಧ್ಯಮದೊಳಗ ಎಲ್ಲಾ ಪಕ್ಷಗಳಿಗೂ ಸಮಾನ ಅವಕಾಶ ಸಿಗಬೇಕು
 ಮೈಕಾಸುರನನ್ನ ರಾತ್ರಿ ಒದರಸಬಾರದು.
 ಆಡಳಿತ ಪಕ್ಷ ತನ್ನ ಶಕ್ತಿಯ ದುರುಪಯೋಗ ಮಾಡಬಾರದು
 ಮಂತ್ರಿಗಳು ಗಾಡಿ, ಘೋಡಾ, ಪೀಏ, ಪೀಪಿ, ಗನ್ ಮ್ಯಾನು, ಉಪಯೋಗಿಸಬಾರದು.
 ಮತದಾನದ ದಿವಸ ಮತದಾರ ಮಹಾಪ್ರಭುಗಳನ್ನ ಹುದ್ದರಿಗಳು ತಮ್ಮ ಗಾಡಿಯೊಳಗ ಕರಕೊಂಡು ಹೋಗಬಾರದು.
 (ಅಧಿಕಾರಿಗಳಿಗೆ ಗೊತ್ತಾಗೋ ಹಂಗ) ಹಣ- ಹೆಂಡ ಹಂಚಬಾರದು, ಇತ್ಯಾದಿ, ಇತ್ಯಾದಿ.

ಒಟ್ಟಿನೊಳಗ, ನಾಯಕರು ಜನಪ್ರೀತಿಯಿಂದ ಚುನಾವಣೆ ಗೆಲ್ಲಬೇಕೇ ಹೊರತು ಜನರನ್ನು ಪ್ರಲೋಭಿಸಿ ಅಥವಾ ಹೆದರಿಸಿ ಗೆಲ್ಲಬಾರದು ಅನ್ನೋದು ಮಾನೀಸಂ ಉದ್ದೇಶ.

ಇದು ಚುನಾವಣೆ ಘೋಷಣೆ ಆದತಕ್ಷಣ ಜಾರಿಗೆ ಬರತದ. ಚುನಾವಣೆ ಪ್ರಕ್ರಿಯೆ ಮುಗಿಯೋ ತನಕಾ ಇರತದ.

ಬಹುಮಟ್ಟಿಗೆ ಯಾವುದಾದರೂ ಕ್ಷೇತ್ರದೊಳಗ ಚುನಾವಣೆ ಬಂದರ ಆ ಇಡೀ ರಾಜ್ಯ ಅಥವಾ ಜಿಲ್ಲೆಗೆ ಇದು ಲಾಗೂ ಆಗತದ.

ಇದನ್ನು ಉಲ್ಲಂಘಿಸಿದರ ಜೈಲಿಗೆ ಹಾಕೋದರಿಂದ ಹಿಡದು ಮುಂದಿನ ಚುನಾವಣೆಗೆ ಅಯೋಗ್ಯರನ್ನಾಗಿ ಮಾಡೋ ತನಕಾ ಆಯೋಗಕ್ಕ ಅಧಿಕಾರ ಐತಿ.

ಹಿಂದೆಲ್ಲಾ ಚುನಾವಣೆ ಅಧಿಕಾರಿಗಳಿಗೆ ಹೆಚ್ಚಿನ ಡ್ಯೂಟಿ ಹಾಕಿ ಮಾನೀಸಂ ಮೇಲುಸ್ತುವಾರಿ ಕೊಡತಿದ್ದರು. ಈಗ ಮಾನೀಸಂ ಜಾರಿಗೆ ಅಂತನೇ ಬ್ಯಾರೆ ಅಧಿಕಾರಿ ಇರತಾರ.
ಆದರೂ ಚುನಾವಣೆಗೆ ಬಡಿದ ಮುಸುಕು ಸರದಿಲ್ಲ. ಅವು ಪಾರದರ್ಶಕ ಆಗಿಲ್ಲ ಅನ್ನೋ ಮಾತು ಕಡಿಮಿ ಆಗಿಲ್ಲ.

ಇವೆಲ್ಲವನ್ನೂ ನಾವು ಸರಿಯಾಗಿ ಪಾಲಿಸಲಿಕ್ಕೆ ಹತ್ತೇವೇನು? ಇದಕ್ಕ `ಇಲ್ಲ’ ಅನ್ನೋ ಯಾಷಿ ಮಾತಿನಗಿಂತಾ `ಕಮ್ಮಿ ಖರೇ’ ಅನ್ನೋ ಸಿಹಿಮಾತಿನ ಉತ್ತರನ ಸರಿ ಆದೀತು.
ಈ ಹಿನ್ನೆಲೆಯೊಳಗ ಒಂದು ವಿಷಯ ನೆನಪು ಆಗತದ.

`ಅವರು ಭಾಳ ಪ್ರತಿಭಾವಂತರು, ಒಳ್ಳೆಯವರು, ಇತರರಿಗೆ ಮಾದರಿಯಾಗಬಲ್ಲವರು ಆದರೆ ಅವರಿಗೆ ಸಿಗಬೇಕಾದ ಮನ್ನಣೆ ಸಿಗಲಿಲ್ಲ” ಅನ್ನೋದು ಏನದಲಾ, ಅದು ನಂ ಹಿಂದೂಸ್ತಾನದಾಗ ಕೇಳಿ ಬರಕೋತನ ಇರೋ ಸಿಕ್ಕಾಪಟ್ಟೆ ಕೂಗುಗಳೊಳಗ ಒಂದು. ಈ ಮಾತಿಗೆ ತಕ್ಕಂತೆ ಇದ್ದ ಒಬ್ಬ ದೊಡ್ಡ ಮನಿಷ ಅಂದರ ಮಾಜಿ ಉಪಪ್ರಧಾನಿ, ಪ್ರಕಾಂಡಪಂಡಿತ ಬಾಬು ಜಗಜೀವನರಾಂ. ಅವರ ಧರ್ಮಪತ್ನಿ ಇಂದ್ರಾಣಿ ದೇವಿ. ಕಾನಪುರದ ಸಾಮಾಜಿಕ ಕಾರ್ಯಕರ್ತರ ಮಗಳಾದ ಇಂದ್ರಾಣಿ ದೇವಿ ಅವರು ಒಂದು ಪುಸ್ತಕ ಬರೆದರು ಅದರ ಹೆಸರು `ದೇಖಿ, ಸುನಿ, ಬೀತಿ ಬಾತೆಂ’ (ನೋಡಿದ, ಕೇಳಿದ, ಆಗಿ ಹೋದ ಮಾತುಗಳು).

ಅದರೊಳಗ ಒಂದು ಭಾರಿ ಮಜಾ ವಿಷಯ ಐತಿ. “ಅಮೆರಿಕಯಲ್ಲಿ ಬಿಳಿಯರು ಕರಿಯರಿಗೆ ಹಿಂಸೆ ಕೊಡಬಾರದು ಅಂತ ಅಬ್ರಹಾಂ ಲಿಂಕನ್ ಹಾಗೂ ಇತರ ನಾಯಕರು ಪ್ರಯತ್ನಿಸಿದಾಗ ಅಲ್ಲಿ ಭಯಂಕರ ಪ್ರತಿರೋಧ ಬಂತು. ಆದರೆ ಭಾರತದಲ್ಲಿ ಗುಲಾಮಗಿರಿ ಹಾಗೂ ಅಸ್ಪೃಶ್ಯತೆ ಯನ್ನು ಪ್ರತಿಬಂಧಿಸಿದಾಗ ಹಾಗಾಗಲಿಲ್ಲ” ಅನ್ನೋದು.

ಅದಕ್ಕೆ ಇಂದ್ರಾಣಿ ಅವರು ಕೊಡುವ ಕಾರಣ ಇನ್ನೂ ಮಜಾ. “ಯಾಕೆ ಗೊತ್ತೇ? ಈ ಕಾನೂನುಗಳನ್ನು ಈ ದೇಶದಲ್ಲಿ ಯಾರೂ ಸರಿಯಾಗಿ ಜಾರಿ ಮಾಡೋದಿಲ್ಲ. ಇಂತಹ ಎಷ್ಟು ಕಾನೂನು ಬಂದರೂ ಇಲ್ಲಿ ನಿಮ್ನ ವರ್ಗದ ಜನರ ಬದುಕು ಬದಲಾಗೋದಿಲ್ಲ” ಅಂತ ಅವರು ಷರಾ ಎಳೀತಾರ. ಆ ಪುಸ್ತಕ ಓದಿ ಕೆಳಗ ಇಡಬೇಕಾದರ ‘ಐವತ್ತು ವರ್ಷದ ಹಿಂದೆ ಹೇಳಿದ ಈ ಮಾತುಗಳು ಎಷ್ಟು ಪ್ರಸ್ತುತ’ ಅಂತ ಮತ್ತ ಕ್ಲೀಷೆಯೊಳಗ ಮಾತಾಡಬೇಕಾಗತದ.

ಹೆಚ್ಚಿನ ಮಾಹಿತಿಗೆ – ಇಲ್ಲಿ ನೋಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...