Homeಅಂಕಣಗಳುಮೋದಿಜಿಯ ಸಮುದ್ರ ಗೀತೆಗಳು

ಮೋದಿಜಿಯ ಸಮುದ್ರ ಗೀತೆಗಳು

- Advertisement -
- Advertisement -

| ಥೂತ್ತೇರಿ ಯಾಹೂ |

ಭಾಜಪದ ಮೊದಲ ಪ್ರಧಾನಿ ವಾಜಪೇಯಿ ಆಗಾಗ್ಗೆ ಕವನ ಕೆರೆಯುತ್ತಿದ್ದರು. ಕವಿ ಹೃದಯವೂ ಅವರಿಗಿತ್ತು. ಆದ್ದರಿಂದ ಬಿಜೆಪಿ-ಕವಿ ಎನಿಸಿದ್ದರು. ಅವರಿಗೆ ನಾನೇನು ಕಡಿಮೆ ಎಂದು ಸೆಡ್ಡು ಹೊಡೆದಿರುವ ಈಗಿನ ಪ್ರಧಾನಿ ನರೇಂದ್ರ ಮೋದಿಯೂ ಪದಬೇಧಿ ಮಾಡಿಕೊಂಡು ಅದನ್ನೇ ಕಾವ್ಯವೆಂದು ಪರಿಗಣಿಸಿ ಬಿಜೆಪಿ ಕಾವ್ಯಪ್ರಿಯರಿಗೆ ಬಡಿಸಿದ್ದಾರಂತಲ್ಲಾ. ಅದನ್ನ ಕನ್ನಡ ಕರಪತ್ರ ಎಂಬ ಪತ್ರಿಕೆ ಪ್ರಕಟಿಸಿರುವುದಲ್ಲದೆ ಮೋದಿಯ ಪ್ರಾಮಾಣಿಕ ಅಭಿವ್ಯಕ್ತಿಯನ್ನ ತಿರುಚಿ ಪ್ರಕಟಿಸಿದೆಯಲ್ಲಾ. ವಾಸ್ತವವಾಗಿ ಮೋದಿ ಮೂಲಪ್ರತಿ ಹೇಗಿತ್ತು ಎಂಬ ಊಹೆಯ ಸಾಲುಗಳನ್ನು ನ್ಯಾಯಪಥ ಓದುಗರಿಗೆ ಕೊಡುವುದು ನಮ್ಮ ಧರ್ಮ. ಇದು ಕವಿಯೊಬ್ಬನ ಕಾವ್ಯದ ಸಾಲುಗಳ ನಡುವಿನ ಅಕ್ರಮ ಪ್ರವೇಶವಲ್ಲ. ಕಳೆದ ಶತಮಾನದಲ್ಲೇ ವರಕವಿ ಬೇಂದ್ರೆಯವರು ವಾಚನಕ್ಕೆ ಕಳುಹಿಸಿದ ಕವನದ ಸಾಲುಗಳಲ್ಲಿ ಕಡೆಯ ಕೆಲಸಾಲುಗಳು ಬಿಟ್ಟು ಹೋಗಿದ್ದು ಅದನ್ನ ಊಹಿಸಿ ಬರೆದು ಪೂರ್ಣಗೊಳಿಸಿದ ಕೀರ್ತಿ, ಕೀರ್ತಿನಾಥ ಕುರ್ತುಕೋಟಿಯವರದ್ದು. ಅಂತಹ ಭಾಗ್ಯ ಯಾಹುಗೆ ದೊರಕಿದ್ದು ಭಿನ್ನದೊಳಗಿನ ಸೌಭಾಗ್ಯವಲ್ಲವೆ, ಥೂತ್ತೇರಿ!

“ಮೋದಿಯ ಪದಬೇದಿ”

1

ನಮಸ್ತೇ ಸದಾ ವತ್ಸಲೇ ಸಾಗರ;
ನೀನು ಧೀರ ಗಂಭೀರ, ಆದರೆ ನಾನು,
ಸೀರ, ಬೀರ, ಚ್ವೌರ, ಕ್ವಾರ,
ನೀನು ನೀಲಿ
ನಮ್ಮ ಸಂಘ ಹಳದಿ
ನೀನು ಜಗತ್ತಿಗೆ ಜೀವನ ನೀಡುವೆ
ನಾನು ಸಂಘವೆಂಬ ವಿಷವೃಕ್ಷಕ್ಕೆ
ಹಾಲೆರೆಯುವೆ.
ಸಮುದ್ರದ ಮೇಲೆ ಕೋಲಾಹಲವಿದೆ,
ಭಾರತದ ಒಳಗೆ ಹಾಲಾಹಲವಿದೆ,
ನೀನು ವಿಚಲಿತನಾಗಲ್ಲ,
ನಾವು ಸದಾ ವಿಚಲಿತರು.
ಗರ್ಜಿಸುವ ಕನ್ನಯ್ಯನನ್ನು ಕಂಡರೆ
ನಮ್ಮವರು ಭಯಭೀತರಾಗುತ್ತಾರೆ.
ಸಾಬರನ್ನು ಕಂಡರೆ ಸಣ್ಣಗೆ ನಡುಗುತ್ತಾರೆ.
ನಿನ್ನೊಳಗೆ ಅಡಗಿರುವ ಶಾರ್ಕುಗಳಂತೆ
ಭಾರತದಲ್ಲಿ ಅಡಿಗಿದ್ದಾರವರು.

2
ನಮಸ್ತೇ ಸದಾವತ್ಸಲೇ ಸಾಗರ;
ನೀನು ಶಕ್ತಿಭಂಡಾರ.
ನಾನು ಕುಯುಕ್ತಿ ಬಿಡಾರ,
ನೀನು ಯಾವತ್ತೂ ನಿನ್ನ ಪರಿಧಿಯಲ್ಲಿರುತ್ತೀ.
ನಾವು ಸದಾ ಪರಿಧಿ ಮೀರುತ್ತೇವೆ,
ನೀನು ಯಾವತ್ತೂ ದೊಡ್ಡತನದ ಬೋಧನೆ ಮಾಡುತ್ತಿ,
ನಾವು ಪ್ರತಿಬಾರಿ ಸಣ್ಣತನದಲ್ಲೇ ವಾದಿಸುತ್ತೇವೆ.
ನಿನ್ನ ಅಲೆಗಳಲ್ಲಿ ಜೀವನ ಸಂದೇಶವಿದೆ,
ನಮ್ಮ ಮಾತುಗಳಲ್ಲಿ ಸರ್ವನಾಶದ ಆಶಯವಿದೆ.
ನಿನಗೆ ಯಾವ ಆಸೆಯೂ ಇಲ್ಲ,
ಭರತಖಂಡವನ್ನು ಹಿಂದೂ ರಾಷ್ಟ್ರ ಮಾಡುವ ದುರಾಶೆ ನಮ್ಮನ್ನು ಆಕ್ರಮಿಸಿದೆ.

3
ನಮಸ್ತೆ ಸದಾವತ್ಸಲೇ ಸಾಗರ;
ನಡೆಯುತ್ತಲೇ ಜೀವನ ನಡೆಸುತ್ತಿ,
ನಾನು ತಿರುಗುತ್ತಲೇ ಜೀವನ ನಡೆಸುತ್ತಿದ್ದೇನೆ.
ತಿರುಗಲು ನನಗೆ ಆಯಾಸವೇ ಇಲ್ಲ
ಏಕೆಂದರೆ ನನಗೆ ಮನೆ ಎಂಬುದೇ ಇಲ್ಲ,
ಅದಕ್ಕೆ ವಿದೇಶಗಳ ತಿರುಗುತ್ತೇನೆ.
ನನ್ನ ದೇಶದಲ್ಲೇ ತಿರುಗಿದರೆ
ಅತಿವೃಷ್ಠಿ ಅನಾವೃಷ್ಠಿಗೆ ತುತ್ತಾದವರ
ಅತಿಯಾದ ಬೇಡಿಕೆ ನಿಂದನೆಯ ನರಕ,
ಅದಕ್ಕೆ ವಿದೇಶಗಳ ತಿರುಗುತ್ತೇನೆ.
ನಾಯಿಗೆ ಕೆಲಸವಿಲ್ಲ,
ಕೂರಲು ಸಮಯವಿಲ್ಲ ಎಂಬಂತೆ,
ನನ್ನ ಅಲೆಮಾರಿ ಸಂದೇಶ
ಅನವರತ-ಅನವರತ.

4
ಓಂ ನಮೋ ಸದಾವತ್ಸಲೇ ಸಾಗರ:
ಅಲೆಯಿಂದ ಅಲೆಗಳು ಹೊರಬೀಳುವುದಿಲ್ಲ.
ಇದೇ ಸಂಘಕ್ಕೆ ಆದರ್ಶ,
ಬಿದ್ದರೂ ಉಪ ಅಲೆಗಳ ಆಶ್ರಯ,
ಹಿಂದೂ ಮಹಾಸಭಾ, ವಿಶ್ವಹಿಂದೂ ಪರಿಷತ್,
ಆರೆಸ್ಸೆಸ್ಸು, ಭಜರಂಗದಳದ ಅಲೆಗಳೆಲ್ಲಾ
ಸಂಘ ಸಂಯಮಗೊಂಡ ಸಮುಚ್ಛಯಗಳು.

5
ನಮಸ್ತೆ ಸದಾವತ್ಸಲೇ ಸಾಗರ:
ಸೂರ್ಯನ ಜೊತೆಗೆ ನಿನ್ನ ಗೆಳೆತನ ಹಳೆಯದು,
ನನ್ನ ಸಂಘ ಪರಿವಾರದ ಗೆಳೆತನವೂ ಹಳೆಯದು.
ಜೀವಂತ ಜಲ ನೀನು,
ನಿನ್ನನ್ನು ಕುಡಿದು, ಹೊರಬಿಡುವ ಜನ್ಮವಷ್ಟೇ ನನ್ನದು.
ನೀನು ಆಗಸವನ್ನ ಚುಂಬಿಸುತ್ತೀ,
ನಾನೇನು ಚುಂಬಿಸಲೀ,
ಚುಂಬನದಿಂದ ವಂಚಿತ ನಾನು.
ನೀನು ಮೋಡವಾಗಿ ಮಳೆ ಸುರಿಸುತ್ತಿ,
ನಾನು ಜನಸಾಗರದ ಮೇಲೆ ಸುಳ್ಳು ಸುರಿಸುತ್ತೇನೆ.
ನೀನು ಮಧುರಭಾವ ಇಟ್ಟುಕೊಂಡಿದ್ದಿ,
ಸಂಘ ಸೇರಿದಾಗಲೇ ನನ್ನ ಮಧುರಭಾವ ಮಾಯವಾಯ್ತು,
ಈಗೇನಿದ್ದರೂ ಮಧುರ ಕಾಶ ತಲೆನೋವಷ್ಟೇ..

6
ಓಂ ನಮೋ ಸದಾವತ್ಸಲೇ ಸಾಗರ:
ಜೀವನದ ಈ ಸೌಂದರ್ಯ ನೀಲಕಂಠನ ಆದರ್ಶ ನಿನ್ನದು,
ಜೀವನದ ಸೌಂದರ್ಯ ಹಾಳುಮಾಡುವುದೇ ನಮ್ಮ ಆದರ್ಶ.
ನೀನು ಭೂಮಿಯ ವಿಷವನ್ನು ಕುಡಿಯುತ್ತಿ,
ನಾವು ಭರತ ಖಂಡಕೆ ವಿಷ ಉಣಿಸುತ್ತೇವೆ.
ನೀನು ಲವಣಾಂಶವನ್ನು ನಿನ್ನಲ್ಲೇ ಇಟ್ಟುಕೊಳ್ಳುವೆ,
ನಾವು ತಡೆಯಲಾಗದೆ ಆಗಾಗ್ಗೆ ಬಿಟ್ಟುಬಿಡುತ್ತೇವೆ.
ನೀನು ಜಗತ್ತಿಗೆ ಹೊಸ ಜೀವನ ನೀಡುತ್ತಿ,
ನಾವು ಜಗತ್ತಿಗೆ ಹೊಸ ನರಕ ಕೊಡುತ್ತಿದ್ದೇವೆ.
ನೀನು ಜೀವನ ನಡೆಸುವ ಮರ್ಮ ನೀಡುತ್ತಿ,
ನಾವು ಜೀವನ ಸರ್ವನಾಶ ಮಾಡುವ ಕರ್ಮ ನೀಡುತ್ತೇವೆ.
ಹೇ ಸಮುದ್ರವೆ, ನಿನಗೆ ನನ್ನ ಶತಸಹಸ್ರ
ಪ್ರಣಾಮಗಳು.
ಥೂ…. ಥೂ….. ಥೂತ್ತೇರಿ!!!

ಸೆ: ಕನ್ನಡ ಕರಪತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮಹಿಳೆಯನ್ನು ಗರ್ಭಧಾರಣೆ ಪೂರ್ಣಗೊಳಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ’: ಅಪ್ರಾಪ್ತೆಗೆ 30 ವಾರಗಳ ಗರ್ಭಧಾರಣೆ ಅಂತ್ಯಗೊಳಿಸಲು ಸುಪ್ರೀಂ ಅನುಮತಿ

ನವದೆಹಲಿ: 17 ವರ್ಷದ ಬಾಲಕಿಯ 30 ವಾರಗಳ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಮುಕ್ತಾಯಗೊಳಿಸುವಂತೆ ನಿರ್ದೇಶಿಸಿದ ಸುಪ್ರೀಂ ಕೋರ್ಟ್, ನ್ಯಾಯಾಲಯಗಳು ಮಹಿಳೆಯನ್ನು, ಅಪ್ರಾಪ್ತ ವಯಸ್ಕಳನ್ನು ಹೊರತುಪಡಿಸಿ, ಗರ್ಭಧಾರಣೆಯನ್ನು ಮುಂದುವರಿಸಲು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಶುಕ್ರವಾರ ಹೇಳಿದೆ. ನ್ಯಾಯಮೂರ್ತಿಗಳಾದ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಶಿಯಾ ಧಾರ್ಮಿಕ ಕೇಂದ್ರದಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಕನಿಷ್ಠ 30 ಸಾವು, 160 ಕ್ಕೂ ಹೆಚ್ಚು ಜನರಿಗೆ ಗಾಯ

ಇಸ್ಲಾಮಾಬಾದ್: ಶುಕ್ರವಾರ ಇಸ್ಲಾಮಾಬಾದ್‌ನ ಶಿಯಾ ಧಾರ್ಮಿಕ ಕೇಂದ್ರದಲ್ಲಿ ಪ್ರಾರ್ಥನೆ ವೇಳೆ ನಡೆದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿ, 160 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.  ಪಾಕಿಸ್ತಾನ ರಾಜಧಾನಿಯ ಶೆಹಜಾದ್ ಟೌನ್ ಪ್ರದೇಶದ...

ನಾಳೆ ದೊರೈರಾಜ್‌ ಅವರ ‘ನಮ್ಮ ಹಟ್ಟಿ’ ಆತ್ಮಕಥೆ ಬಿಡುಗಡೆ

ದಲಿತ ಚಳವಳಿಯ ಹಿರಿಯ ಮುಖಂಡರಾದ ತುಮಕೂರಿನ ಕೆ.ದೊರೈರಾಜ್‌ ಅವರ 'ನಮ್ಮಹಟ್ಟಿ' ಆತ್ಮಕಥೆ ಶನಿವಾರ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಬಿಡುಗಡೆಯಾಗಲಿದೆ. ಸರ್ಕಾರಿ ಅಧಿಕಾರಿಯಾಗಿದ್ದ ದೊರೈರಾಜ್‌ ಅವರು, ತಮ್ಮ ವಿದ್ಯಾರ್ಥಿ ಜೀವನದಿಂದಲೇ ದಲಿತ ಚಳವಳಿಯಲ್ಲಿ ಗುರುತಿಸಿಕೊಂಡವರು....

‘ತಿರುಪತಿ ಲಡ್ಡುಗಳಲ್ಲಿ ರಾಸಾಯನಿಕಗಳಿಂದ ಮಾಡಿದ ತುಪ್ಪ ಬಳಸಲಾಗುತ್ತಿತ್ತು’: ವೈಎಸ್ಆರ್ಸಿಪಿ ಸರ್ಕಾರದ ವಿರುದ್ಧ ಆಂಧ್ರ ಸಿಎಂ ಆರೋಪ

ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡುಗಳನ್ನು ತುಪ್ಪ ಬಳಸಿ ತಯಾರಿಸಲಾಗುತ್ತಿತ್ತು, ಅದರಲ್ಲಿ ಬಾತ್ ರೂಂ(ಸ್ನಾನಗೃಹಗಳನ್ನು) ಸ್ವಚ್ಛಗೊಳಿಸಲು ಬಳಸುವ ರಾಸಾಯನಿಕಗಳನ್ನು ಬೆರೆಸಲಾಗುತ್ತಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಶುಕ್ರವಾರ ಆರೋಪಿಸಿದ್ದಾರೆ. ಕರ್ನೂಲು...

ಜಲಂಧರ್‌ನ ಗುರುದ್ವಾರದ ಹೊರಗೆ ಎಎಪಿ ನಾಯಕ ಲಕ್ಕಿ ಒಬೆರಾಯ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು

ಪಂಜಾಬ್‌ನ ಜಲಂಧರ್‌ನಲ್ಲಿ ಶುಕ್ರವಾರ ಹಾಡಹಗಲೇ ಎಎಪಿ ನಾಯಕ ಲಕ್ಕಿ ಒಬೆರಾಯ್ ಅವರನ್ನು ಮಾಡೆಲ್ ಟೌನ್ ಪ್ರದೇಶದ ಗುರುದ್ವಾರದ ಬಳಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಮಾಡಿದ್ದಾರೆ.  ಈ ಘಟನೆ ಬೆಳಿಗ್ಗೆ ನಡೆದಿದ್ದು, ಗುಂಡೇಟಿನಿಂದ ಗಾಯಗೊಂಡಿದ್ದ ಅವರನ್ನು...

ದೆಹಲಿ: ಜಲ ಮಂಡಳಿ ತೋಡಿದ ಗುಂಡಿಗೆ ಬಿದ್ದು ಬೈಕ್ ಸವಾರ ಸಾವು; ತನಿಖೆಗೆ ಆದೇಶಿಸಿದ ಸರ್ಕಾರ 

ಪಶ್ಚಿಮ ದೆಹಲಿಯ ಜನಕಪುರಿ ಪ್ರದೇಶದಲ್ಲಿ ದೆಹಲಿ ಜಲ ಮಂಡಳಿ (ಡಿಜೆಬಿ) ನಿರ್ಮಾಣ ಕಾರ್ಯಕ್ಕಾಗಿ ಅಗೆದ ಹೊಂಡಕ್ಕೆ ಬೈಕ್ ಬಿದ್ದು ಸವಾರನೊಬ್ಬ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಘಟನೆಯ ಬಗ್ಗೆ ತನಿಖೆಗೆ ದೆಹಲಿ...

2025ರ ಬಿಹಾರ ವಿಧಾನಸಭಾ ಚುನಾವಣೆ ಪ್ರಶ್ನಿಸಿ ಜನ ಸುರಾಜ್ ಪಕ್ಷದಿಂದ ಅರ್ಜಿ: ವಿಚಾರಣೆ ನಿರಾಕರಿಸಿದ ಸುಪ್ರೀಂ ಕೋರ್ಟ್ 

2025 ರ ಬಿಹಾರ ವಿಧಾನಸಭಾ ಚುನಾವಣೆಯ ನಡವಳಿಕೆ ಮತ್ತು ಫಲಿತಾಂಶವನ್ನು ಪ್ರಶ್ನಿಸಿ ಪ್ರಶಾಂತ್ ಕಿಶೋರ್ ನೇತೃತ್ವದ ಜನ್ ಸುರಾಜ್ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ರಾಜಕೀಯ...

ಗುಜರಾತ್‌| ನರ್ಸಿಂಗ್ ಓದುತ್ತಿದ್ದ ದಲಿತ ವಿದ್ಯಾರ್ಥಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ; ಪ್ರಿನ್ಸಿಪಲ್ ಸೇರಿ ಐವರ ವಿರುದ್ಧ ಪ್ರಕರಣ ದಾಖಲು

ಗುಜರಾತ್‌ನ ಖೇಡಾ ಜಿಲ್ಲೆಯ ನರ್ಸಿಂಗ್ ಕಾಲೇಜಿನ 19 ವರ್ಷದ ದಲಿತ ವಿದ್ಯಾರ್ಥಿಯೊಬ್ಬ, "ಪುರಾವೆಗಳಿಲ್ಲದೆ ಮೇಡಂ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ" ಎಂದು ಚಿತ್ರಹಿಂಸೆ ಉಲ್ಲೇಖಿಸುವ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾದ...

1.50 ಕೋಟಿ ರೂ. ಐಟಿ ದಂಡ ಪ್ರಶ್ನಿಸಿ ಟಿವಿಕೆ ಮುಖ್ಯಸ್ಥ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್ 

ಚೆನ್ನೈ: 2015–16ರ ಮೌಲ್ಯಮಾಪನ ವರ್ಷದಲ್ಲಿ ಆದಾಯ ಬಹಿರಂಗಪಡಿಸದಿದ್ದಕ್ಕಾಗಿ 1.50 ಕೋಟಿ ರೂ. ದಂಡ ವಿಧಿಸಿದ ಆದಾಯ ತೆರಿಗೆ ಇಲಾಖೆಯ ಆದೇಶವನ್ನು ಪ್ರಶ್ನಿಸಿ ನಟ-ರಾಜಕಾರಣಿ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಆದಾಯ...

ಮೇಘಾಲಯ ಗಣಿ ಸ್ಫೋಟ: ಸಾವನ್ನಪ್ಪಿದ ಮೂವರು ಅಸ್ಸಾಂ ಮೂಲದ ಕಾರ್ಮಿಕರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ

ಗುವಾಹಟಿ: ಮೇಘಾಲಯದ ಪಕ್ಕದ ಕಲ್ಲಿದ್ದಲು ಗಣಿ ಸ್ಫೋಟದಲ್ಲಿ ಸಾವನ್ನಪ್ಪಿದ ಅಸ್ಸಾಂ ರಾಜ್ಯದ ಮೂವರು ಕಾರ್ಮಿಕರ ಕುಟುಂಬಗಳಿಗೆ  ಸರ್ಕಾರ ತಲಾ 5 ಲಕ್ಷ ರೂ.ಗಳ ಪರಿಹಾರ ಘೋಷಿಸಿದೆ.  ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ, ಸಂತ್ರಸ್ತರು...