Homeಅಂಕಣಗಳುಮೋದಿ ಸರ್ಕಾರ ಸಾರ್ವಜನಿಕ ಉದ್ದಿಮೆಗಳನ್ನು ನಾಶಮಾಡುತ್ತಿರುವುದು ಅಕ್ಷಮ್ಯ...

ಮೋದಿ ಸರ್ಕಾರ ಸಾರ್ವಜನಿಕ ಉದ್ದಿಮೆಗಳನ್ನು ನಾಶಮಾಡುತ್ತಿರುವುದು ಅಕ್ಷಮ್ಯ…

- Advertisement -
- Advertisement -

ಖಾಸಗೀಕರಣಕ್ಕೆ ಹಾತೊರೆಯುತ್ತಿರುವ ಸರ್ಕಾರ ನಮ್ಮ ಸಾರ್ವಜನಿಕ ಉದ್ಯಮಗಳು ನಷ್ಟಕ್ಕೆ ಏಕೆ ಒಳಗಾದವು? ಅವುಗಳನ್ನು ಲಾಭದಾಯಕ ಮಾಡುವುದು ಹೇಗೆ ಎಂಬುದರ ಕುರಿತು ಗಂಭೀರವಾಗಿ ವಿಚಾರ ಮಾಡದೇ ಅವುಗಳನ್ನು ಮುಚ್ಚಿಸಿ, ಖಾಸಗಿಯವರಿಗೆ ದೋಚಲು ಅವಕಾಶ ಮಾಡಿಕೊಡಲು ಹೊರಟಿರುವುದು ದೇಶದ ದೌರ್ಭಾಗ್ಯವೇ ಸರಿ.

ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಮಾರಾಟ ಮಾಡುವುದು ಮೋದಿ ಸರ್ಕಾರದ ಧೋರಣೆಯಾಗಿದೆ. ಕೆಲವು ಸಾರ್ವಜನಿಕ ವಲಯದ ಉದ್ದಿಮೆಗಳು ಅನೇಕ ವರ್ಷದಿಂದ ನಷ್ಟದಲ್ಲಿ ನಡೆಯುತ್ತಿವೆ. ಅವುಗಳನ್ನು ಮುಚ್ಚಲು ಅಭ್ಯಂತರವಿಲ್ಲ. ಆದರೆ ಕೆಲವು ಲಾಭದಾಯಕವಾದ ಸಂಸ್ಥೆಗಳನ್ನು ಅವುಗಳನ್ನು ನಿರ್ವಹಿಸುತ್ತಿದ್ದ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ನಷ್ಟದಲ್ಲಿ ನಡೆಯುವಂತೆ ಮಾಡಿ ಕಬಳಿಸಿದ್ದೂ ಉಂಟು.

ಭಾರತದ ಆಭರಣಗಳೆಂದು ಕರೆಯಲ್ಪಡುತ್ತಿದ್ದ ಸಾರ್ವಜನಿಕವಲಯದ ಉದ್ದಿಮೆಗಳನ್ನು ಜವಹಾರ್‍ಲಾಲ್ ನೆಹರು ಅವರು ಆರಂಭಿಸಿದ್ದರು. ಆ ಹೆಮ್ಮೆಯ ದಿನಗಳು ಆಗಿಹೋಯಿತು. ಈಗ ಅವುಗಳನ್ನೆಲ್ಲ ನಷ್ಟದಲ್ಲಿ ನಡೆಯುತ್ತಿದೆಯೆಂದು ಹೆಸರಿಸಿ ಅವುಗಳನ್ನು ತಮಗೆ ಬೇಕಾದ ಉದ್ದಿಮೆದಾರರಿಗೆ ಮಾರಾಟ ಮಾಡುವ ಹುನ್ನಾರ ನಡದಿದೆ. ಉದಾಹರಣೆಗೆ BEML, BEL ಮುಂತಾದ ಲಾಭದಾಯಕ ಉದ್ಯಮಗಳನ್ನು ಮಾರಾಟ ಮಾಡುವ ವಿಚಾರ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ಸ್ವಾತಂತ್ರ್ಯ ಬಂದ ಮೊದಲ ಕೆಲವು ವರ್ಷಗಳ ಕಾಲ ಖಾಸಗಿ ಉದ್ದಿಮೆದಾರರು ಲಕ್ಷಾಂತರ ಹಣ ಹೂಡಿ ಉದ್ಯಮಗಳನ್ನು ಆರಂಭಿಸಲು ಬಂಡವಾಳ ಹಾಕಲು ಹಿಂದೇಟು ಹಾಕುತ್ತಿದ್ದರು. ಅಂತಹ ಸಂದರ್ಭದಲ್ಲಿ ಸರ್ಕಾರಿ ಸ್ವಾಮ್ಯದ ಉದ್ಯಮಗಳಿಗೆ ನೆಹರು ಅವರು ಉತ್ತೇಜನ ಕೊಟ್ಟರು. ಅವೆಲ್ಲ ಲಾಭದಾಯಕ ಸಂಸ್ಥೆಗಳಾಗಿ ಮುಂದುವರೆದವು. ಅದರಿಂದ ದೇಶದ ಆರ್ಥಿಕತೆ ದೌಡಾಯಿಸಿತು. ಆರ್ಥಿಕ ಪ್ರಗತಿ ಆಯಿತು.

ನೆಹರು ಅವರು ಈ ಸರ್ಕಾರಿ ಉದ್ಯಮಗಳನ್ನು ಆರಂಭಿಸಲು ಮತ್ತೊಂದು ಪ್ರಬಲ ಉದ್ದೇಶವಿತ್ತು. ಅದೇನೆಂದರೆ ಜನತೆಗೆ ಉದ್ಯೋಗ ಒದಗಿಸುವುದು. ಉದ್ಯಮೀಕರಣ ದಾಪುಗಾಲಿಟ್ಟಿತಾದರೂ ಜನತೆಗೆ ಉದ್ಯೋಗ ಒದಗಿಸುವ ಗುರಿ ತಲುಪಲಾಗಲಿಲ್ಲ. ನಿರ್ವಹಣೆಯ ಅನಾದರದಿಂದ ಹಾಗೂ ಕಾರ್ಮಿಕ ಸಂಘಟನೆಗಳ ಕಾಟದಿಂದ ಉದ್ಯಮಗಳು ಸೊರಗಲು ಆರಂಭವಾದವು.

ಕೇಂದ್ರದಿಂದ ಆರಂಭವಾದ ಸಾರ್ವಜನಿಕ ವಲಯದ ಉದ್ಯಮಗಳು ಲಾಭದಾಯಕವಾಗಿಯೇ ನಡೆದವಾದರೂ, ರಾಜ್ಯಗಳು ಆರಂಭಿಸಿದ ಸಾರ್ವಜನಿಕ ವಲಯದ ಉದ್ಯಮಗಳು ಕಾಲಕ್ರಮೇಣ ನೆಲಕಚ್ಚಿದವು. ಅವುಗಳಿಗೆ ಆಕ್ಸಿಜನ್ ಕೊಟ್ಟು ಜೀವಂತವಾಗಿಡಲು ವರ್ಷ ವರ್ಷ ಲಕ್ಷಾಂತರ ರೂಗಳನ್ನು ಕೇಂದ್ರ ಸರ್ಕಾರ ಒದಗಿಸಬೇಕಾಯಿತು.

1991ರಲ್ಲಿ ಉದಾರೀಕರಣ ಖಾಸಗೀಕರಣದತ್ತ ಸರ್ಕಾರ ವಾಲಿತು. ಈ ರಾಷ್ಟ್ರೀಕೃತ ಉದ್ಯಮಗಳಿಗಿಂತ ಉತ್ತಮವಾಗಿ ಖಾಸಗಿ ಉದ್ಯಮಗಳು ನಡೆಯುತ್ತಿದ್ದುದರಿಂದ ಸರ್ಕಾರಿ ಉದ್ಯಮಗಳನ್ನು ಸರ್ಕಾರ ಸ್ಥಗಿತ ಗೊಳಿಸಿದವು. ಅವುಗಳ ಷೇರುಗಳನ್ನು ಮಾರಲು ಆರಂಭವಾಯಿತು. ಸರ್ಕಾರ ಕೆಲವು ಕಂಪನಿಗಳ ಷೇರುಗಳನ್ನು ಸಂಪೂರ್ಣವಾಗಿ ಇನ್ನು ಕೆಲವು ಕಂಪನಿಗಳ ಷೇರುಗಳನ್ನು ಭಾಗಶಃ ಮಾರಾಟ ಮಾಡಿದವು ಈ ನಿಲುವಿಗೆ ಸರ್ಕಾರ ತನ್ನ ಸಮರ್ಥನೆ ನೀಡಿತು.

ಪ್ರವಾಸೋದ್ಯಮ, ಹೊಟೇಲ್ ನಡೆಸುವುದು ದಿನಬಳಕೆಯ ವಸ್ತುಗಳ ಉತ್ಪಾದನೆ, ಸಾರಿಗೆವಾಹನಗಳ ಉತ್ಪಾದನೆಗಳನ್ನು ಖಾಸಗಿ ಉದ್ಯಮಿಗಳು ಯಶಸ್ವಿಯಾಗಿ ನಡೆಸುವರಾಗಿದ್ದರಿಂದ ಸರ್ಕಾರ ಈ ಉದ್ಯಮಗಳಿಗೆ ಕೈಹಾಕಬಾರದು. ಸಾರ್ವಜನಿಕ ಉದ್ಯಮಗಳ ಆರೋಗ್ಯಕ್ಕೆ ಸಂಬಂಧಪಟ್ಟ ವಿದ್ಯಮಾನಗಳನ್ನು ಬಲಪಡಿಸುವುದು ಸರ್ಕಾರದ ನಿಲುವಾಯಿತು.

ತದನಂತರ ಅಸ್ತಿತ್ವಕ್ಕೆ ಬಂದ ಸರ್ಕಾರಗಳೂ ಲಾಭದಾಯಕವಾಗಿ ನಡೆಯುತ್ತಿದ್ದ ಸಾರ್ವಜನಿಕ ಉದ್ದಿಮೆಗಳ ಷೇರುಗಳನ್ನು ಮಾರಾಟ ಮಾಡಿ ಒಂದು ಲಕ್ಷ ಕೋಟಿ ರೂಗಳ ಬಂಡವಾಳ ಹಿಂಪಡೆಯಬೇಕೆಂದು ನಿರ್ಧರಿಸಿದವು. ಸಾರ್ವಜನಿಕ ವಲಯದ ಉದ್ಯಮಗಳನ್ನು ಬೆಳೆಸುವುದು ಅನವಶ್ಯಕ. ಖಾಸಗೀಕರಣವೇ ಮುಕ್ತಿದಾಯಕ ಎಂದು ಸರ್ಕಾರ ಭಾವಿಸಿತು. ಸಾರ್ವಜನಿಕ ವಲಯದ ಉದ್ಯಮಗಳ ಷೇರುಗಳ ಮಾರಾಟದ ಜೊತೆಗೆ ಸರ್ಕಾರ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳನ್ನು ಖಾಸಗೀಕರಣ ಮಾಡತೊಡಗಿದವು. ಹಣಕಾಸಿನ ಕೊರತೆ ಖಾಸಗೀಕರಣಕ್ಕೆ ಕಾರಣ ಎಂದು ಸಬೂಬು ಹೇಳಿತು. ಭಾರತ್ ಪೆಟ್ರೋಲಿಯಂನಂತಹ ಲಾಭದಾಯಕ, ಪ್ರತಿಷ್ಠಿತ ಉದ್ಯಮದ ಷೇರುಗಳನ್ನು ಕೂಡ ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಿರುವುದು ದುರ್ದೈವ.

ಸಾಮಾನ್ಯ ಜನರಿಗೆ ಆರೋಗ್ಯ ಕಾಪಾಡಿಕೊಳ್ಳಲು, ಉತ್ತಮ ಶಿಕ್ಷಣ ಪಡೆಯಲು ಇದ್ದ ಅವಕಾಶವನ್ನು ಸರ್ಕಾರ ಲಾಭಕೋರ ಖಾಸಗಿ ಸಂಸ್ಥೆಗಳಿಗೆ ವಹಿಸಿ ಪ್ರಜಾದ್ರೋಹ ಎಸಗಲಾಗಿದೆ.

ಅದರಂತೆಯೇ ಷಿಪ್ಪಿಂಗ್ ಇಂಡಸ್ಟ್ರಿ ಆಫ್ ಇಂಡಿಯಾ ಮತ್ತು ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾ ಕಂಪನಿಗಳ ಷೇರುಗಳನ್ನು ಮಾರಾಟ ಮಾಡಲು ತೀರ್ಮಾನಿಸಿರುವುದರ ಲಾಜಿಕ್ ಏನು ಎಂಬುದು ಒಂದು ಚಿದಂಬರ ರಹಸ್ಯವಾಗಿದೆ. ಒಟ್ಟಿನಲ್ಲಿ ಈ ಎಲ್ಲಾ ಸಾರ್ವಜನಿಕ ಸೇವಾಉದ್ಯಮಗಳ ಶೇ.51ರಷ್ಟು ಷೇರುಗಳನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ. ಇದಕ್ಕಿರುವ ಏಕೈಕ ಕಾರಣ ಇಂದಿನ ಸರ್ಕಾರಕ್ಕೆ ಉಡಾಯಿಸಲು ಹಣ ಬೇಕು. ಅದೇ ದೃಷ್ಟಿಯಿಂದ ರಿಸರ್ವ್ ಬ್ಯಾಂಕಿನ ರಿಸರ್ವ್ ಫಂಡಿನಲ್ಲಿ ಒಂದು ಭಾಗ ಅಂದರೆ ಎಷ್ಟೋ ಕೋಟಿ ಹಣ ಸರ್ಕಾರಕ್ಕೆ ಕೊಡಿ ಎಂಬ ಒತ್ತಾಯ ಬಂದಿದೆ. ನವರತ್ನಗಳಲ್ಲಿ ಒಂದಾದ ಭಾರತ್ ಪೆಟ್ರೋಲಿಯಂ ಕಂಪನಿಯನ್ನು ಮಾರಲು ಹೊರಟಿವುದರ ರಹಸ್ಯವೇನು? ಇದರಿಂದ ನಾವು ಕಲಿಯಬಹುದಾದ ಪಾಠ ಯಾವುದು?

ಲಾಭದಾಯಕವೋ, ನಷ್ಟವೋ PSUಗಳನ್ನು ಮಾರಾಟ ಮಾಡುವುದು ನಮ್ಮ ಧ್ಯೇಯ ಎಂದು ಸರ್ಕಾರ ಭಾವಿಸಿರಬಹುದು.

ಖಾಸಗೀಕರಣಕ್ಕೆ ಹಾತೊರೆಯುತ್ತಿರುವ ಸರ್ಕಾರ ನಮ್ಮ ಸಾರ್ವಜನಿಕ ಉದ್ಯಮಗಳು ನಷ್ಟಕ್ಕೆ ಏಕೆ ಒಳಗಾದವು? ಅವುಗಳನ್ನು ಲಾಭದಾಯಕ ಮಾಡುವುದು ಹೇಗೆ ಎಂಬುದರ ಕುರಿತು ಗಂಭೀರವಾಗಿ ವಿಚಾರ ಮಾಡದೇ ಅವುಗಳನ್ನು ಮುಚ್ಚಿಸಿ, ಖಾಸಗಿಯವರಿಗೆ ದೋಚಲು ಅವಕಾಶ ಮಾಡಿಕೊಡಲು ಹೊರಟಿರುವುದು ದೇಶದ ದೌರ್ಭಾಗ್ಯವೇ ಸರಿ.

PSUಗಳನ್ನು ಮುಗಿಸುವುದಕ್ಕೆ ಕಾರಣಗಳೇನು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ರಿಸರ್ವ್ ಬ್ಯಾಂಕಿನ ರಿಸರ್ವ್ ಫಂಡಿಗೆ ಏಕೆ ಲಗ್ಗೆ ಹಾಕಬೇಕು ಎಂಬುದನ್ನು ಜನತೆಗೆ ಸ್ಪಷ್ಟ ನುಡಿಗಳಲ್ಲಿ ಮನವರಿಕೆ ಮಾಡಿಕೊಡಬೇಕು. ಈ ಬಗೆಗೆ ಸರ್ಕಾರದ ಪಾಲಿಸಿ ಏನು ಎಂಬುದನ್ನು ನಿರ್ದಿಷ್ಟವಾಗಿ ತಿಳಿಸಬೇಕು. PSUಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ತಮ್ಮ ಭವಿಷ್ಯದ ಬಗೆಗೆ ಗಾಬರಿ ಉಂಟಾಗುತ್ತದೆ.

ಚುನಾಯಿತ ಸರ್ಕಾರ ಅಭಿವೃದ್ಧಿ ಮತ್ತು ಸಮಾನತೆಗೆ ಬದ್ಧನಾಗಿರಬೇಕು. ಅಭಿವೃದ್ಧಿಯ ಎಲ್ಲ ಆಯಾಮಗಳನ್ನು ಪಟ್ಟಭದ್ರ ಹಿತಾಸಕ್ತಿಗಳೇ ನಿರ್ಧರಿಸುವುದಾದರೆ ಜನಸಾಮಾನ್ಯರ ಪಾಡೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...