Homeಮುಖಪುಟಕಂಗಾಲು ಮೋದಿಯ ಕಳಾ ವೃದ್ಧಿಗೆ ನಮೋ ಯಜ್ಞ

ಕಂಗಾಲು ಮೋದಿಯ ಕಳಾ ವೃದ್ಧಿಗೆ ನಮೋ ಯಜ್ಞ

- Advertisement -
- Advertisement -

ಶುದ್ಧೋದನ |

ಸಂಘಪರಿವಾರದಲ್ಲಿ ಶುರುವಿಟ್ಟುಕೊಂಡಿರುವ ನಡುಕ ದಿನಗಳೆದಂತೆ ಜೋರಾಗುತ್ತದೆ. ಹಿಂದಿ ಹೃದಯ ಭೂಮಿಯ ಅಸೆಂಬ್ಲಿ ಚುನಾವಣೆಗಳಲ್ಲಿ ಬಿಜೆಪಿ ಮಕಾಡೆ ಮಲಗುತ್ತಿದ್ದಂತೆಯೇ ಮೋದಿ ಮಹಾತ್ಮನ ಮಂಕುಬೂದಿ ಕಳೆ ಕಳೆದುಕೊಂಡಿರುವ ಭೀತಿ ಸಂಘ ಪರಿವಾರವನ್ನು ಆವರಿಸಿಬಿಟ್ಟಿದೆ. ಹಿಂದುತ್ವದ ಹಿಡನ್ ಅಜೆಂಡಾಗಳನ್ನೆಲ್ಲ ಜಾರಿಗೊಳಿಸಲು ಮೋದಿಯಂಥ “ಬದಲಿ ಶೂದ್ರ” ಸದ್ಯಕ್ಕಂತೂ ಆರೆಸೆಸ್-ವಿಎಚ್‍ಪಿ ಬಳಗಕ್ಕೆ ಸಿಗುವಹಾಗಿಲ್ಲ. ಹಾಗಾಗಿ ಹೇಗಾದರೂ ಮಾಡಿ ಸುಳ್ಳುಗಳಿಗೆ ಕಲಾತ್ಮಕವಾಗಿ ಹೂಳಪು ಕೊಡಲು ಚೆಡ್ಡಿ-ಕಾವಿ ತಂಡ ತರಹೇವಾರಿ ಮಸಲತ್ತು ಮಾಡಲಾರಂಭಿಸಿದೆ.
ರೈತರು, ಕಾರ್ಮಿಕರು, ನಿರುದ್ಯೋಗಿ ಯುವಕರು, ಅಮಾಯಕ ಮಹಿಳೆಯರಿಗೆಲ್ಲ ನಿರಂತರ ಮೋಸ, ವಂಚನೆ ಮಾಡುತ್ತ ದೇಶದ ನೆಮ್ಮದಿ ಕೆಡಿಸಿದ ಪಾಪಕ್ಕೆ ಫಲವಾಗಿ ಅಧಃಪತನದ ಅಂಚಿಗೆ ಬಂದು ನಿಂತಿರುವ ಬಿಜೆಪಿ ಮನುವಾದಿಗಳೀಗ ಮೋದಿ ಕಳಾ ವೃದ್ಧಿಗೆ ಯಜ್ಞದ ಮೊರೆ ಹೋಗಿದ್ದಾರೆ. ಮೌಢ್ಯ ತುಂಬುವ ಹೋಮ-ಹವನ, ಯಜ್ಞ-ಯಾಗ, ಮಡಿ-ಮೈಲಿಗೆ, ಮೋಸ-ಸುಳ್ಳುಗಳ ಪೇಟೆಂಟ್ ಸಂಘಪರಿವಾರ ಪಡೆದುಕೊಂಡು ಅದ್ಯಾವುದೋ ಕಾಲವಾಗಿಹೋಗಿದೆ! ಆದರೆ ಈ ಆನಾಹುತಕಾರಿ ತಂತ್ರಗಳೇ ಸಂಘ ಪರಿವಾರದ ಕೈಗೊಂಬೆ ಮೋದಿಗೆ ತಿರುಗುಬಾಣ ಆಗುತ್ತಿವೆ. ಧನಾತ್ಮಕವಾಗಿ ಜನರ ಮನಸ್ಸು ಗೆಲ್ಲಲಾಗದ ಮೋದಿ ಶಿಷ್ಯಸಂಕುಲ, ಮತ್ತದೇ ವಾಮಮಾರ್ಗಕ್ಕೆ ಬಿದ್ದಿದೆ. ಯಜ್ಞ-ತಂತ್ರದಿಂದ ಜನರ ಮರುಳುಗೊಳಿಸಿ ಆಸ್ತಿತ್ವ ಉಳಿಸಿಕೊಳ್ಳಲು ತಿಣುಕಾಡುತ್ತಿದೆ.
ಲೋಕಸಭಾ ಚುನಾವಣೆ ಎದುರಾಗಿರುವ ಈ ಯುದ್ಧಕಾಲದಲ್ಲಿ ಸೇನಾಧಿಪತಿಯೇ ಕಾಲು ಮುರಿದುಕೊಂಡು ಕೂತಂತಾಗಿದೆ ಬಿಜೆಪಿ ಪರಿಸ್ಥಿತಿ. ಹುಸಿ ವೀರಾವೇಷದ ಭಾಷಣ ಎರಚುವ ಮೋದಿಯ ಮನಮುರಕು ಮಾತುಗಳನ್ನು ಕೇಳುವ ಸ್ಥಿತಿಯಲ್ಲೀಗ ಜನರಿಲ್ಲ ಎಂಬುವುದು ಪರಿವಾರ ಪುರೋಹಿತರಿಗೆ ಪಕ್ಕಾ ಆಗಿದೆ. ರಾಮಮಂದಿರ-ಹಿಂದೂತ್ವದ ಶಾರ್ಟ್‍ಕಟ್ ದಾರಿಯಲ್ಲಿ ದಿಲ್ಲಿ ಸಿಂಹಾಸನ ತಲುಪಿದ್ದ ಮೋದಿಗೆ ಪ್ರಧಾನಿಯಾಗಿ ನಾಲ್ಕುವರೆ ವರ್ಷ ಕಳೆದರೂ ಅಯೋಧ್ಯೆ, ರಾಮಮಂದಿರ ನೆನಪಾಗಲೇ ಇಲ್ಲ. ಕಟ್ಟರ್ ಹಿಂದೂತ್ವದ ಹುಡುಗರಿಗೂ ಅಯೋಧ್ಯೆಯ ರಾಮಮಂದಿರ ಅನ್ನೋದು, ಬಿಜೆಪಿಯು ಎಲೆಕ್ಷನ್ ಗೆಲುವಿನ ಸಲುವಾಗಿ ಹುಟ್ಟುಹಾಕುವ ಅತಿದೊಡ್ಡ ವಂಚನೆ ಅನ್ನೋದು ನಿಸ್ಸಂಶಯವಾಗಿ ಅರ್ಥವಾಗಿಬಿಟ್ಟಿದೆ! ಆ ಕಾರಣಕ್ಕೇ 1992ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದಾಗ ಹೊತ್ತಿ ಉರಿದಿದ್ದ ಮಧ್ಯಪ್ರದೇಶ, ರಾಜಸ್ಥಾನದಂತಹ ಉತ್ತರ ಭಾರತದ ಹಿಂದಿ ಹಾರ್ಟ್‍ಲ್ಯಾಂಡ್‍ಗಳಲ್ಲೇ ಕೇಸರಿ ಸಾಧುಗಳ ರಾಮಮಂದಿರ ಜನಾಗ್ರಹ ಸಮಾವೇಶಗಳು ಬಿಜೆಪಿಗೆ ಮತ ತಂದುಕೊಡುವಲ್ಲಿ ಸಂಪೂರ್ಣವಾಗಿ ಸೋತುಹೋಗಿವೆ.
ದೇಶದ ಬೆನ್ನೆಲುಬಾದ ರೈತರು ಬೆಳೆದ ಬೆಳೆಗೆ ಬೆಲೆ ಸಿಗದೆ ಆತ್ಮಹತ್ಯೆ ದಾರಿ ಹಿಡಿದಿದ್ದರೆ, ವರ್ಷಕ್ಕೆ 1 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದಿದ್ದ ಮೋದಿ ಇರೋ ಉದ್ಯೋಗಗಳನ್ನೇ ನಾಶ ಮಾಡುವ ಕೆಲಸಕ್ಕೆ ಹೈಹಾಕಿದ್ದಾರೆ. ಬ್ಯಾಂಕ್ ರಾಷ್ಟ್ರೀಕರಣದಿಂದ ಜನಮನ ಗೆದ್ದಿದ್ದ ಇಂದಿರಾ ಗಾಂಧಿಯಂತೆ ನೋಟ್ ಬ್ಯಾನ್ ಮಾಡಲು ಹೋಗಿ ಮೋದಿ ಇಡೀ ದೇಶದ ಆರ್ಥಿಕತೆಯೇ ಮುಗ್ಗರಿಸಿ ಬೀಳುವಂತೆ ಮಾಡಿದ್ದಾರೆ. ಕಪ್ಪುಹಣವನ್ನೂ ತರದೆ, ಪ್ರತಿ ಅಕೌಂಟಿಗೆ ಹದಿನೈದು ಲಕ್ಷವನ್ನೂ ಡೆಪಾಸಿಟ್ ಮಾಡದ ಮೋದಿಯ ವರ್ಚಸ್ಸೀಗ ಸಂಪೂರ್ಣ ಕುಸಿದುಬಿದ್ದಿದೆ. ಸಾಲದ್ದಕ್ಕೆ ಅಂಬಾನಿ-ಅದಾನಿಗಳ ಖಜಾನೆ ಹಿಗ್ಗಿಸಲು ಹೋಗಿ ರಫೇಲ್ ಭಾನ್ಗಡಿಯಲ್ಲಿ ಮೋದಿ ಮುಸುಡಿಯನ್ನೇ ಸಿಗಾಕಿಕೊಂಡು ಕೂತು ದೇಶದ ಮುಂದೆ ಬೆತ್ತಲಾಗಿದ್ದಾರೆ. ಮೊನ್ನೆ ನಡೆದ ಪಂಚರಾಜ್ಯ ಫಲಿತಾಂಶಗಳೇ ಇದಕ್ಕೆ ಸಾಕ್ಷಿ.
ಇಂಥಾ ಯಡವಟ್ಟುಗಳನ್ನು ಸರಿ ಮಾಡಿಕೊಂಡು ಜನರ ಮನಸ್ಸನ್ನು ಗೆಲ್ಲೋದು ಬಿಟ್ಟು, ಮೋದಿಯ ಪರಿವಾರದ ಪಟಾಲಮ್ಮು ಯಜ್ಞ, ಯಾಗ ಮಾಡಿ ವರ್ಚಸ್ಸು ವೃದ್ಧಿಗೆ ಕೈಹಾಕಿದೆ! ಆ ಮೂಲಕ ತಮ್ಮ ಹಾದಿಯೇನಿದ್ದರೂ ಪ್ರಗತಿಯತ್ತಲ್ಲ, ಹಳೇ ಶಿಲಾಯುಗದತ್ತ ಅನ್ನೋದನ್ನು ತಾನೇ ಸಾಬೀತು ಮಾಡಿಕೊಂಡಿದೆ. ಬಿಜೆಪಿಯ ಈ ಶಿಲಾಯುಗದ ನಿದರ್ಶನ ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ಗೋವಾ ಬಿಜೆಪಿ ಸರ್ಕಾರದ ಕೃಷಿ ಇಲಾಖೆ ವೇದ-ಮಂತ್ರ ಪಠಣದಿಂದ ರೈತರು ಬಂಪರ್ ಬೆಳೆ ತೆಗೆದು ಸುಖವಾಗಿ ಇರಬಹುದೆಂದು ಅಧೀಕೃತವಾಗೇ ಘೋಷಿಸಿದ್ದು ಓದುಗರಿಗೆ ನೆನಪಿರಬಹುದು.
ಟೀಮ್ ಮೋದಿ ತನ್ನ ಕಫ್ತಾನನ ವೈಫಲ್ಯಗಳನ್ನು ಮುಚ್ಚಿಹಾಕುವ ಸಲುವಾಗಿ ಮೌಢ್ಯದ ಯಜ್ಞ-ಮಂತ್ರ-ವೇದಗಳ ಮೊರೆಹೋಗಿರೋದನ್ನು ಕಂಡು ಜನ ನಗಾಡುತ್ತಿದ್ದಾರೆ. ದಕ್ಷಿಣ ಕನ್ನಡದ ಬದಿಯಡ್ಕ ಬಳಿಯ ಮಾನ್ಯ ಸಮೀಪದ ಮೇಗಿನಡ್ಕ ಎಂಬಲ್ಲಿ ಮೋದಿಯನ್ನು ಕಂಟಕದಿಂದ ಪಾರು ಮಾಡಲು ಯಜ್ಞ ಒಂದನ್ನು ಇದೇ ಡಿಸೆಂಬರ್ 28 ರಿಂದ 31ರವರೆಗೆ ನಡೆಸಲು ಚೆಡ್ಡಿಗಳು ನಿರ್ಧರಿಸಿದ್ದಾರೆ.
ಕರಾವಳಿಯ ದೇವಸ್ಥಾನಗಳ ಬ್ರಹ್ಮಕಲಶೋತ್ಸವ, ಕಳಾವೃದ್ಧಿ ಧಾರ್ಮಿಕ ದಗಲುಬಾಜಿತನದಿಂದಲೇ ಪ್ರವರ್ಧಮಾನಕ್ಕೆ ಬಂದ ಕಲ್ಲಡ್ಕ ಪ್ರಭಾಕರ ಭಟ್ಟ ಮತ್ತು ಬೆಂಕಿ ಬ್ರಾಂಡಿನ ಸಂಸದ ನಳಿನ್ ಕುಮಾರ್ ಕಟೀಲ್ ಗುರು-ಶಿಷ್ಯರ “ನಮೋ ಯಜ್ಞ” ಎಂಬ ಸರ್ಕಸ್ಸೇ ಈ ಲೇಟೆಸ್ಟ್ ಪ್ರಹಸನ. ನಾಲ್ಕು ದಿನ ನಮೋ, ಜ್ಞಾನ, ಭಕ್ತಿ ಮತ್ತು ಯಕ್ಷ ಯಜ್ಞಗಳೆಂಬ ಚತುರ್ವಿಧ ಹಿಕಮತ್ತಿನ ಮೂಲ ಉದ್ದೇಶ ಮೋದಿಗೆ ಅರ್ಥಾತ್ ಬಿಜೆಪಿಗೆ ಆಗುತ್ತಿರುವ ಡ್ಯಾಮೇಜ್ ಕಂಟ್ರೋಲ್ ಮಾಡೋದು!
ಕಾರ್ಯಕ್ರಮದ ಸಂಘಟಕರೇ ಹೇಳುವ ಹಾಗೆ ಇದೊಂದು ಮೋದಿಗೆ ಶಕ್ತಿ ತುಂಬುವ ಯಾಗ. ಅಲ್ಲಿಗೆ ಮೋದಿ ದುರ್ಬಲಗೊಂಡಿದ್ದಾರೆ ಅನ್ನೋದನ್ನು ಬಿಜೆಪಿಗರೇ ಒಪ್ಪಿಕೊಂಡಂತಾಯ್ತು! ಇಂಥದೊಂದು ಯಜ್ಞ ಮೋದಿಗಿಂತ ಹೆಚ್ಚಾಗಿ ಸೋಲಿನ ಭೀತಿಯಲ್ಲಿರುವ ಲೋಕಲ್ ಸಂಸದ ನಳಿನ್‍ಕುಮಾರ್ ಕಟೀಲ್‍ಗೆ ಬೇಕಾಗಿದೆ. ಪರಮ ಚೆಡ್ಡಿ ಸಾಹಿತಿಗಳಾದ ಎಸ್.ಎಲ್.ಭೈರಪ್ಪ, ಪ್ರಧಾನ್ ಗುರುದತ್ತ ಜತೆ ಸಂವಾದ ಕಾರ್ಯಕ್ರಮ ಹೆಣೆದಿರುವ ಕಲ್ಲಡ್ಕ, ನಳಿನ್‍ರ ಮುಖ್ಯಗುರಿ ಯುವಕರ ದಿಕ್ಕುತಪ್ಪಿಸಿ ಚುನಾವಣೆಗೆ ಅಣಿಯಾಗುವುದು. ಒಂದು ಕಾಲಕ್ಕೆ ಸುಶಿಕ್ಷಿತರ, ಪ್ರಜ್ಞಾವಂತರ ಜಿಲ್ಲೆಯೆಂದೇ ಹೆಸರಾಗಿದ್ದ ದಕ್ಷಿಣ ಕನ್ನಡದ ಮಂದಿ ಈಗ ಇಂಥಾ ಹುಚ್ಚಾಟಗಳಿಗೆ ಸಾಕ್ಷಿಯಾಗಬೇಕಾಗಿ ಬಂದಿರೋದು ದುರಂತ.
ತಮಾಷೆಯೆಂದರೆ, ತೆಲಂಗಾಣದ ಎಲೆಕ್ಷನ್ ಹೊತ್ತಲ್ಲಿ ಪ್ರಧಾನಿ ಮೋದಿಯು ಅಲ್ಲಿನ ಟಿಆರ್‍ಎಸ್ ಪಕ್ಷದ ಅಧಿನಾಯಕ ಕೆಸಿಆರ್‍ಗೆ ಸೋಲಿನ ಭೀತಿ ಆವರಿಸಿರೋದರಿಂದ ಜ್ಯೋತಿಷಿಗಳ ಮಾತುಕೇಳಿಕೊಂಡು ಹೋಮ-ಹವನ-ಪೂಜೆ ಮಾಡಿಸಿಕೊಂಡು ತಿರುಗಾಡುತ್ತಿದ್ದಾರೆಂದು ಗೇಲಿ ಮಾಡಿದ್ದುಂಟು!! ಈಗ ಮೋದಿ ಭಕ್ತರು ಅದೇ ಹಾದಿಯಲ್ಲಿದ್ದಾರೆ. ಅಂದಹಾಗೆ, ಎಲ್ಲರನ್ನೂ ಎಲ್ಲ ಕಾಲಕ್ಕೂ ಮೂರ್ಖರನ್ನಾಗಿ ಮಾಡಲು ಸಾಧ್ಯವಾ?
ಅಂತೂ ತಮ್ಮ ಪತನ ಪ್ರಾರಂಭವಾಗಿದೆ ಅನ್ನೋದನ್ನು ಮೋದಿ ಪರಿವಾರವೇ ಈ ಯಜ್ಞದ ಮೂಲಕ ಒಪ್ಪಿಕೊಂಡಂತಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...