Homeಮುಖಪುಟಕಂಗಾಲು ಮೋದಿಯ ಕಳಾ ವೃದ್ಧಿಗೆ ನಮೋ ಯಜ್ಞ

ಕಂಗಾಲು ಮೋದಿಯ ಕಳಾ ವೃದ್ಧಿಗೆ ನಮೋ ಯಜ್ಞ

- Advertisement -
- Advertisement -

ಶುದ್ಧೋದನ |

ಸಂಘಪರಿವಾರದಲ್ಲಿ ಶುರುವಿಟ್ಟುಕೊಂಡಿರುವ ನಡುಕ ದಿನಗಳೆದಂತೆ ಜೋರಾಗುತ್ತದೆ. ಹಿಂದಿ ಹೃದಯ ಭೂಮಿಯ ಅಸೆಂಬ್ಲಿ ಚುನಾವಣೆಗಳಲ್ಲಿ ಬಿಜೆಪಿ ಮಕಾಡೆ ಮಲಗುತ್ತಿದ್ದಂತೆಯೇ ಮೋದಿ ಮಹಾತ್ಮನ ಮಂಕುಬೂದಿ ಕಳೆ ಕಳೆದುಕೊಂಡಿರುವ ಭೀತಿ ಸಂಘ ಪರಿವಾರವನ್ನು ಆವರಿಸಿಬಿಟ್ಟಿದೆ. ಹಿಂದುತ್ವದ ಹಿಡನ್ ಅಜೆಂಡಾಗಳನ್ನೆಲ್ಲ ಜಾರಿಗೊಳಿಸಲು ಮೋದಿಯಂಥ “ಬದಲಿ ಶೂದ್ರ” ಸದ್ಯಕ್ಕಂತೂ ಆರೆಸೆಸ್-ವಿಎಚ್‍ಪಿ ಬಳಗಕ್ಕೆ ಸಿಗುವಹಾಗಿಲ್ಲ. ಹಾಗಾಗಿ ಹೇಗಾದರೂ ಮಾಡಿ ಸುಳ್ಳುಗಳಿಗೆ ಕಲಾತ್ಮಕವಾಗಿ ಹೂಳಪು ಕೊಡಲು ಚೆಡ್ಡಿ-ಕಾವಿ ತಂಡ ತರಹೇವಾರಿ ಮಸಲತ್ತು ಮಾಡಲಾರಂಭಿಸಿದೆ.
ರೈತರು, ಕಾರ್ಮಿಕರು, ನಿರುದ್ಯೋಗಿ ಯುವಕರು, ಅಮಾಯಕ ಮಹಿಳೆಯರಿಗೆಲ್ಲ ನಿರಂತರ ಮೋಸ, ವಂಚನೆ ಮಾಡುತ್ತ ದೇಶದ ನೆಮ್ಮದಿ ಕೆಡಿಸಿದ ಪಾಪಕ್ಕೆ ಫಲವಾಗಿ ಅಧಃಪತನದ ಅಂಚಿಗೆ ಬಂದು ನಿಂತಿರುವ ಬಿಜೆಪಿ ಮನುವಾದಿಗಳೀಗ ಮೋದಿ ಕಳಾ ವೃದ್ಧಿಗೆ ಯಜ್ಞದ ಮೊರೆ ಹೋಗಿದ್ದಾರೆ. ಮೌಢ್ಯ ತುಂಬುವ ಹೋಮ-ಹವನ, ಯಜ್ಞ-ಯಾಗ, ಮಡಿ-ಮೈಲಿಗೆ, ಮೋಸ-ಸುಳ್ಳುಗಳ ಪೇಟೆಂಟ್ ಸಂಘಪರಿವಾರ ಪಡೆದುಕೊಂಡು ಅದ್ಯಾವುದೋ ಕಾಲವಾಗಿಹೋಗಿದೆ! ಆದರೆ ಈ ಆನಾಹುತಕಾರಿ ತಂತ್ರಗಳೇ ಸಂಘ ಪರಿವಾರದ ಕೈಗೊಂಬೆ ಮೋದಿಗೆ ತಿರುಗುಬಾಣ ಆಗುತ್ತಿವೆ. ಧನಾತ್ಮಕವಾಗಿ ಜನರ ಮನಸ್ಸು ಗೆಲ್ಲಲಾಗದ ಮೋದಿ ಶಿಷ್ಯಸಂಕುಲ, ಮತ್ತದೇ ವಾಮಮಾರ್ಗಕ್ಕೆ ಬಿದ್ದಿದೆ. ಯಜ್ಞ-ತಂತ್ರದಿಂದ ಜನರ ಮರುಳುಗೊಳಿಸಿ ಆಸ್ತಿತ್ವ ಉಳಿಸಿಕೊಳ್ಳಲು ತಿಣುಕಾಡುತ್ತಿದೆ.
ಲೋಕಸಭಾ ಚುನಾವಣೆ ಎದುರಾಗಿರುವ ಈ ಯುದ್ಧಕಾಲದಲ್ಲಿ ಸೇನಾಧಿಪತಿಯೇ ಕಾಲು ಮುರಿದುಕೊಂಡು ಕೂತಂತಾಗಿದೆ ಬಿಜೆಪಿ ಪರಿಸ್ಥಿತಿ. ಹುಸಿ ವೀರಾವೇಷದ ಭಾಷಣ ಎರಚುವ ಮೋದಿಯ ಮನಮುರಕು ಮಾತುಗಳನ್ನು ಕೇಳುವ ಸ್ಥಿತಿಯಲ್ಲೀಗ ಜನರಿಲ್ಲ ಎಂಬುವುದು ಪರಿವಾರ ಪುರೋಹಿತರಿಗೆ ಪಕ್ಕಾ ಆಗಿದೆ. ರಾಮಮಂದಿರ-ಹಿಂದೂತ್ವದ ಶಾರ್ಟ್‍ಕಟ್ ದಾರಿಯಲ್ಲಿ ದಿಲ್ಲಿ ಸಿಂಹಾಸನ ತಲುಪಿದ್ದ ಮೋದಿಗೆ ಪ್ರಧಾನಿಯಾಗಿ ನಾಲ್ಕುವರೆ ವರ್ಷ ಕಳೆದರೂ ಅಯೋಧ್ಯೆ, ರಾಮಮಂದಿರ ನೆನಪಾಗಲೇ ಇಲ್ಲ. ಕಟ್ಟರ್ ಹಿಂದೂತ್ವದ ಹುಡುಗರಿಗೂ ಅಯೋಧ್ಯೆಯ ರಾಮಮಂದಿರ ಅನ್ನೋದು, ಬಿಜೆಪಿಯು ಎಲೆಕ್ಷನ್ ಗೆಲುವಿನ ಸಲುವಾಗಿ ಹುಟ್ಟುಹಾಕುವ ಅತಿದೊಡ್ಡ ವಂಚನೆ ಅನ್ನೋದು ನಿಸ್ಸಂಶಯವಾಗಿ ಅರ್ಥವಾಗಿಬಿಟ್ಟಿದೆ! ಆ ಕಾರಣಕ್ಕೇ 1992ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದಾಗ ಹೊತ್ತಿ ಉರಿದಿದ್ದ ಮಧ್ಯಪ್ರದೇಶ, ರಾಜಸ್ಥಾನದಂತಹ ಉತ್ತರ ಭಾರತದ ಹಿಂದಿ ಹಾರ್ಟ್‍ಲ್ಯಾಂಡ್‍ಗಳಲ್ಲೇ ಕೇಸರಿ ಸಾಧುಗಳ ರಾಮಮಂದಿರ ಜನಾಗ್ರಹ ಸಮಾವೇಶಗಳು ಬಿಜೆಪಿಗೆ ಮತ ತಂದುಕೊಡುವಲ್ಲಿ ಸಂಪೂರ್ಣವಾಗಿ ಸೋತುಹೋಗಿವೆ.
ದೇಶದ ಬೆನ್ನೆಲುಬಾದ ರೈತರು ಬೆಳೆದ ಬೆಳೆಗೆ ಬೆಲೆ ಸಿಗದೆ ಆತ್ಮಹತ್ಯೆ ದಾರಿ ಹಿಡಿದಿದ್ದರೆ, ವರ್ಷಕ್ಕೆ 1 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದಿದ್ದ ಮೋದಿ ಇರೋ ಉದ್ಯೋಗಗಳನ್ನೇ ನಾಶ ಮಾಡುವ ಕೆಲಸಕ್ಕೆ ಹೈಹಾಕಿದ್ದಾರೆ. ಬ್ಯಾಂಕ್ ರಾಷ್ಟ್ರೀಕರಣದಿಂದ ಜನಮನ ಗೆದ್ದಿದ್ದ ಇಂದಿರಾ ಗಾಂಧಿಯಂತೆ ನೋಟ್ ಬ್ಯಾನ್ ಮಾಡಲು ಹೋಗಿ ಮೋದಿ ಇಡೀ ದೇಶದ ಆರ್ಥಿಕತೆಯೇ ಮುಗ್ಗರಿಸಿ ಬೀಳುವಂತೆ ಮಾಡಿದ್ದಾರೆ. ಕಪ್ಪುಹಣವನ್ನೂ ತರದೆ, ಪ್ರತಿ ಅಕೌಂಟಿಗೆ ಹದಿನೈದು ಲಕ್ಷವನ್ನೂ ಡೆಪಾಸಿಟ್ ಮಾಡದ ಮೋದಿಯ ವರ್ಚಸ್ಸೀಗ ಸಂಪೂರ್ಣ ಕುಸಿದುಬಿದ್ದಿದೆ. ಸಾಲದ್ದಕ್ಕೆ ಅಂಬಾನಿ-ಅದಾನಿಗಳ ಖಜಾನೆ ಹಿಗ್ಗಿಸಲು ಹೋಗಿ ರಫೇಲ್ ಭಾನ್ಗಡಿಯಲ್ಲಿ ಮೋದಿ ಮುಸುಡಿಯನ್ನೇ ಸಿಗಾಕಿಕೊಂಡು ಕೂತು ದೇಶದ ಮುಂದೆ ಬೆತ್ತಲಾಗಿದ್ದಾರೆ. ಮೊನ್ನೆ ನಡೆದ ಪಂಚರಾಜ್ಯ ಫಲಿತಾಂಶಗಳೇ ಇದಕ್ಕೆ ಸಾಕ್ಷಿ.
ಇಂಥಾ ಯಡವಟ್ಟುಗಳನ್ನು ಸರಿ ಮಾಡಿಕೊಂಡು ಜನರ ಮನಸ್ಸನ್ನು ಗೆಲ್ಲೋದು ಬಿಟ್ಟು, ಮೋದಿಯ ಪರಿವಾರದ ಪಟಾಲಮ್ಮು ಯಜ್ಞ, ಯಾಗ ಮಾಡಿ ವರ್ಚಸ್ಸು ವೃದ್ಧಿಗೆ ಕೈಹಾಕಿದೆ! ಆ ಮೂಲಕ ತಮ್ಮ ಹಾದಿಯೇನಿದ್ದರೂ ಪ್ರಗತಿಯತ್ತಲ್ಲ, ಹಳೇ ಶಿಲಾಯುಗದತ್ತ ಅನ್ನೋದನ್ನು ತಾನೇ ಸಾಬೀತು ಮಾಡಿಕೊಂಡಿದೆ. ಬಿಜೆಪಿಯ ಈ ಶಿಲಾಯುಗದ ನಿದರ್ಶನ ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ಗೋವಾ ಬಿಜೆಪಿ ಸರ್ಕಾರದ ಕೃಷಿ ಇಲಾಖೆ ವೇದ-ಮಂತ್ರ ಪಠಣದಿಂದ ರೈತರು ಬಂಪರ್ ಬೆಳೆ ತೆಗೆದು ಸುಖವಾಗಿ ಇರಬಹುದೆಂದು ಅಧೀಕೃತವಾಗೇ ಘೋಷಿಸಿದ್ದು ಓದುಗರಿಗೆ ನೆನಪಿರಬಹುದು.
ಟೀಮ್ ಮೋದಿ ತನ್ನ ಕಫ್ತಾನನ ವೈಫಲ್ಯಗಳನ್ನು ಮುಚ್ಚಿಹಾಕುವ ಸಲುವಾಗಿ ಮೌಢ್ಯದ ಯಜ್ಞ-ಮಂತ್ರ-ವೇದಗಳ ಮೊರೆಹೋಗಿರೋದನ್ನು ಕಂಡು ಜನ ನಗಾಡುತ್ತಿದ್ದಾರೆ. ದಕ್ಷಿಣ ಕನ್ನಡದ ಬದಿಯಡ್ಕ ಬಳಿಯ ಮಾನ್ಯ ಸಮೀಪದ ಮೇಗಿನಡ್ಕ ಎಂಬಲ್ಲಿ ಮೋದಿಯನ್ನು ಕಂಟಕದಿಂದ ಪಾರು ಮಾಡಲು ಯಜ್ಞ ಒಂದನ್ನು ಇದೇ ಡಿಸೆಂಬರ್ 28 ರಿಂದ 31ರವರೆಗೆ ನಡೆಸಲು ಚೆಡ್ಡಿಗಳು ನಿರ್ಧರಿಸಿದ್ದಾರೆ.
ಕರಾವಳಿಯ ದೇವಸ್ಥಾನಗಳ ಬ್ರಹ್ಮಕಲಶೋತ್ಸವ, ಕಳಾವೃದ್ಧಿ ಧಾರ್ಮಿಕ ದಗಲುಬಾಜಿತನದಿಂದಲೇ ಪ್ರವರ್ಧಮಾನಕ್ಕೆ ಬಂದ ಕಲ್ಲಡ್ಕ ಪ್ರಭಾಕರ ಭಟ್ಟ ಮತ್ತು ಬೆಂಕಿ ಬ್ರಾಂಡಿನ ಸಂಸದ ನಳಿನ್ ಕುಮಾರ್ ಕಟೀಲ್ ಗುರು-ಶಿಷ್ಯರ “ನಮೋ ಯಜ್ಞ” ಎಂಬ ಸರ್ಕಸ್ಸೇ ಈ ಲೇಟೆಸ್ಟ್ ಪ್ರಹಸನ. ನಾಲ್ಕು ದಿನ ನಮೋ, ಜ್ಞಾನ, ಭಕ್ತಿ ಮತ್ತು ಯಕ್ಷ ಯಜ್ಞಗಳೆಂಬ ಚತುರ್ವಿಧ ಹಿಕಮತ್ತಿನ ಮೂಲ ಉದ್ದೇಶ ಮೋದಿಗೆ ಅರ್ಥಾತ್ ಬಿಜೆಪಿಗೆ ಆಗುತ್ತಿರುವ ಡ್ಯಾಮೇಜ್ ಕಂಟ್ರೋಲ್ ಮಾಡೋದು!
ಕಾರ್ಯಕ್ರಮದ ಸಂಘಟಕರೇ ಹೇಳುವ ಹಾಗೆ ಇದೊಂದು ಮೋದಿಗೆ ಶಕ್ತಿ ತುಂಬುವ ಯಾಗ. ಅಲ್ಲಿಗೆ ಮೋದಿ ದುರ್ಬಲಗೊಂಡಿದ್ದಾರೆ ಅನ್ನೋದನ್ನು ಬಿಜೆಪಿಗರೇ ಒಪ್ಪಿಕೊಂಡಂತಾಯ್ತು! ಇಂಥದೊಂದು ಯಜ್ಞ ಮೋದಿಗಿಂತ ಹೆಚ್ಚಾಗಿ ಸೋಲಿನ ಭೀತಿಯಲ್ಲಿರುವ ಲೋಕಲ್ ಸಂಸದ ನಳಿನ್‍ಕುಮಾರ್ ಕಟೀಲ್‍ಗೆ ಬೇಕಾಗಿದೆ. ಪರಮ ಚೆಡ್ಡಿ ಸಾಹಿತಿಗಳಾದ ಎಸ್.ಎಲ್.ಭೈರಪ್ಪ, ಪ್ರಧಾನ್ ಗುರುದತ್ತ ಜತೆ ಸಂವಾದ ಕಾರ್ಯಕ್ರಮ ಹೆಣೆದಿರುವ ಕಲ್ಲಡ್ಕ, ನಳಿನ್‍ರ ಮುಖ್ಯಗುರಿ ಯುವಕರ ದಿಕ್ಕುತಪ್ಪಿಸಿ ಚುನಾವಣೆಗೆ ಅಣಿಯಾಗುವುದು. ಒಂದು ಕಾಲಕ್ಕೆ ಸುಶಿಕ್ಷಿತರ, ಪ್ರಜ್ಞಾವಂತರ ಜಿಲ್ಲೆಯೆಂದೇ ಹೆಸರಾಗಿದ್ದ ದಕ್ಷಿಣ ಕನ್ನಡದ ಮಂದಿ ಈಗ ಇಂಥಾ ಹುಚ್ಚಾಟಗಳಿಗೆ ಸಾಕ್ಷಿಯಾಗಬೇಕಾಗಿ ಬಂದಿರೋದು ದುರಂತ.
ತಮಾಷೆಯೆಂದರೆ, ತೆಲಂಗಾಣದ ಎಲೆಕ್ಷನ್ ಹೊತ್ತಲ್ಲಿ ಪ್ರಧಾನಿ ಮೋದಿಯು ಅಲ್ಲಿನ ಟಿಆರ್‍ಎಸ್ ಪಕ್ಷದ ಅಧಿನಾಯಕ ಕೆಸಿಆರ್‍ಗೆ ಸೋಲಿನ ಭೀತಿ ಆವರಿಸಿರೋದರಿಂದ ಜ್ಯೋತಿಷಿಗಳ ಮಾತುಕೇಳಿಕೊಂಡು ಹೋಮ-ಹವನ-ಪೂಜೆ ಮಾಡಿಸಿಕೊಂಡು ತಿರುಗಾಡುತ್ತಿದ್ದಾರೆಂದು ಗೇಲಿ ಮಾಡಿದ್ದುಂಟು!! ಈಗ ಮೋದಿ ಭಕ್ತರು ಅದೇ ಹಾದಿಯಲ್ಲಿದ್ದಾರೆ. ಅಂದಹಾಗೆ, ಎಲ್ಲರನ್ನೂ ಎಲ್ಲ ಕಾಲಕ್ಕೂ ಮೂರ್ಖರನ್ನಾಗಿ ಮಾಡಲು ಸಾಧ್ಯವಾ?
ಅಂತೂ ತಮ್ಮ ಪತನ ಪ್ರಾರಂಭವಾಗಿದೆ ಅನ್ನೋದನ್ನು ಮೋದಿ ಪರಿವಾರವೇ ಈ ಯಜ್ಞದ ಮೂಲಕ ಒಪ್ಪಿಕೊಂಡಂತಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....