Homeಮುಖಪುಟಕಂಗಾಲು ಮೋದಿಯ ಕಳಾ ವೃದ್ಧಿಗೆ ನಮೋ ಯಜ್ಞ

ಕಂಗಾಲು ಮೋದಿಯ ಕಳಾ ವೃದ್ಧಿಗೆ ನಮೋ ಯಜ್ಞ

- Advertisement -
- Advertisement -

ಶುದ್ಧೋದನ |

ಸಂಘಪರಿವಾರದಲ್ಲಿ ಶುರುವಿಟ್ಟುಕೊಂಡಿರುವ ನಡುಕ ದಿನಗಳೆದಂತೆ ಜೋರಾಗುತ್ತದೆ. ಹಿಂದಿ ಹೃದಯ ಭೂಮಿಯ ಅಸೆಂಬ್ಲಿ ಚುನಾವಣೆಗಳಲ್ಲಿ ಬಿಜೆಪಿ ಮಕಾಡೆ ಮಲಗುತ್ತಿದ್ದಂತೆಯೇ ಮೋದಿ ಮಹಾತ್ಮನ ಮಂಕುಬೂದಿ ಕಳೆ ಕಳೆದುಕೊಂಡಿರುವ ಭೀತಿ ಸಂಘ ಪರಿವಾರವನ್ನು ಆವರಿಸಿಬಿಟ್ಟಿದೆ. ಹಿಂದುತ್ವದ ಹಿಡನ್ ಅಜೆಂಡಾಗಳನ್ನೆಲ್ಲ ಜಾರಿಗೊಳಿಸಲು ಮೋದಿಯಂಥ “ಬದಲಿ ಶೂದ್ರ” ಸದ್ಯಕ್ಕಂತೂ ಆರೆಸೆಸ್-ವಿಎಚ್‍ಪಿ ಬಳಗಕ್ಕೆ ಸಿಗುವಹಾಗಿಲ್ಲ. ಹಾಗಾಗಿ ಹೇಗಾದರೂ ಮಾಡಿ ಸುಳ್ಳುಗಳಿಗೆ ಕಲಾತ್ಮಕವಾಗಿ ಹೂಳಪು ಕೊಡಲು ಚೆಡ್ಡಿ-ಕಾವಿ ತಂಡ ತರಹೇವಾರಿ ಮಸಲತ್ತು ಮಾಡಲಾರಂಭಿಸಿದೆ.
ರೈತರು, ಕಾರ್ಮಿಕರು, ನಿರುದ್ಯೋಗಿ ಯುವಕರು, ಅಮಾಯಕ ಮಹಿಳೆಯರಿಗೆಲ್ಲ ನಿರಂತರ ಮೋಸ, ವಂಚನೆ ಮಾಡುತ್ತ ದೇಶದ ನೆಮ್ಮದಿ ಕೆಡಿಸಿದ ಪಾಪಕ್ಕೆ ಫಲವಾಗಿ ಅಧಃಪತನದ ಅಂಚಿಗೆ ಬಂದು ನಿಂತಿರುವ ಬಿಜೆಪಿ ಮನುವಾದಿಗಳೀಗ ಮೋದಿ ಕಳಾ ವೃದ್ಧಿಗೆ ಯಜ್ಞದ ಮೊರೆ ಹೋಗಿದ್ದಾರೆ. ಮೌಢ್ಯ ತುಂಬುವ ಹೋಮ-ಹವನ, ಯಜ್ಞ-ಯಾಗ, ಮಡಿ-ಮೈಲಿಗೆ, ಮೋಸ-ಸುಳ್ಳುಗಳ ಪೇಟೆಂಟ್ ಸಂಘಪರಿವಾರ ಪಡೆದುಕೊಂಡು ಅದ್ಯಾವುದೋ ಕಾಲವಾಗಿಹೋಗಿದೆ! ಆದರೆ ಈ ಆನಾಹುತಕಾರಿ ತಂತ್ರಗಳೇ ಸಂಘ ಪರಿವಾರದ ಕೈಗೊಂಬೆ ಮೋದಿಗೆ ತಿರುಗುಬಾಣ ಆಗುತ್ತಿವೆ. ಧನಾತ್ಮಕವಾಗಿ ಜನರ ಮನಸ್ಸು ಗೆಲ್ಲಲಾಗದ ಮೋದಿ ಶಿಷ್ಯಸಂಕುಲ, ಮತ್ತದೇ ವಾಮಮಾರ್ಗಕ್ಕೆ ಬಿದ್ದಿದೆ. ಯಜ್ಞ-ತಂತ್ರದಿಂದ ಜನರ ಮರುಳುಗೊಳಿಸಿ ಆಸ್ತಿತ್ವ ಉಳಿಸಿಕೊಳ್ಳಲು ತಿಣುಕಾಡುತ್ತಿದೆ.
ಲೋಕಸಭಾ ಚುನಾವಣೆ ಎದುರಾಗಿರುವ ಈ ಯುದ್ಧಕಾಲದಲ್ಲಿ ಸೇನಾಧಿಪತಿಯೇ ಕಾಲು ಮುರಿದುಕೊಂಡು ಕೂತಂತಾಗಿದೆ ಬಿಜೆಪಿ ಪರಿಸ್ಥಿತಿ. ಹುಸಿ ವೀರಾವೇಷದ ಭಾಷಣ ಎರಚುವ ಮೋದಿಯ ಮನಮುರಕು ಮಾತುಗಳನ್ನು ಕೇಳುವ ಸ್ಥಿತಿಯಲ್ಲೀಗ ಜನರಿಲ್ಲ ಎಂಬುವುದು ಪರಿವಾರ ಪುರೋಹಿತರಿಗೆ ಪಕ್ಕಾ ಆಗಿದೆ. ರಾಮಮಂದಿರ-ಹಿಂದೂತ್ವದ ಶಾರ್ಟ್‍ಕಟ್ ದಾರಿಯಲ್ಲಿ ದಿಲ್ಲಿ ಸಿಂಹಾಸನ ತಲುಪಿದ್ದ ಮೋದಿಗೆ ಪ್ರಧಾನಿಯಾಗಿ ನಾಲ್ಕುವರೆ ವರ್ಷ ಕಳೆದರೂ ಅಯೋಧ್ಯೆ, ರಾಮಮಂದಿರ ನೆನಪಾಗಲೇ ಇಲ್ಲ. ಕಟ್ಟರ್ ಹಿಂದೂತ್ವದ ಹುಡುಗರಿಗೂ ಅಯೋಧ್ಯೆಯ ರಾಮಮಂದಿರ ಅನ್ನೋದು, ಬಿಜೆಪಿಯು ಎಲೆಕ್ಷನ್ ಗೆಲುವಿನ ಸಲುವಾಗಿ ಹುಟ್ಟುಹಾಕುವ ಅತಿದೊಡ್ಡ ವಂಚನೆ ಅನ್ನೋದು ನಿಸ್ಸಂಶಯವಾಗಿ ಅರ್ಥವಾಗಿಬಿಟ್ಟಿದೆ! ಆ ಕಾರಣಕ್ಕೇ 1992ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದಾಗ ಹೊತ್ತಿ ಉರಿದಿದ್ದ ಮಧ್ಯಪ್ರದೇಶ, ರಾಜಸ್ಥಾನದಂತಹ ಉತ್ತರ ಭಾರತದ ಹಿಂದಿ ಹಾರ್ಟ್‍ಲ್ಯಾಂಡ್‍ಗಳಲ್ಲೇ ಕೇಸರಿ ಸಾಧುಗಳ ರಾಮಮಂದಿರ ಜನಾಗ್ರಹ ಸಮಾವೇಶಗಳು ಬಿಜೆಪಿಗೆ ಮತ ತಂದುಕೊಡುವಲ್ಲಿ ಸಂಪೂರ್ಣವಾಗಿ ಸೋತುಹೋಗಿವೆ.
ದೇಶದ ಬೆನ್ನೆಲುಬಾದ ರೈತರು ಬೆಳೆದ ಬೆಳೆಗೆ ಬೆಲೆ ಸಿಗದೆ ಆತ್ಮಹತ್ಯೆ ದಾರಿ ಹಿಡಿದಿದ್ದರೆ, ವರ್ಷಕ್ಕೆ 1 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದಿದ್ದ ಮೋದಿ ಇರೋ ಉದ್ಯೋಗಗಳನ್ನೇ ನಾಶ ಮಾಡುವ ಕೆಲಸಕ್ಕೆ ಹೈಹಾಕಿದ್ದಾರೆ. ಬ್ಯಾಂಕ್ ರಾಷ್ಟ್ರೀಕರಣದಿಂದ ಜನಮನ ಗೆದ್ದಿದ್ದ ಇಂದಿರಾ ಗಾಂಧಿಯಂತೆ ನೋಟ್ ಬ್ಯಾನ್ ಮಾಡಲು ಹೋಗಿ ಮೋದಿ ಇಡೀ ದೇಶದ ಆರ್ಥಿಕತೆಯೇ ಮುಗ್ಗರಿಸಿ ಬೀಳುವಂತೆ ಮಾಡಿದ್ದಾರೆ. ಕಪ್ಪುಹಣವನ್ನೂ ತರದೆ, ಪ್ರತಿ ಅಕೌಂಟಿಗೆ ಹದಿನೈದು ಲಕ್ಷವನ್ನೂ ಡೆಪಾಸಿಟ್ ಮಾಡದ ಮೋದಿಯ ವರ್ಚಸ್ಸೀಗ ಸಂಪೂರ್ಣ ಕುಸಿದುಬಿದ್ದಿದೆ. ಸಾಲದ್ದಕ್ಕೆ ಅಂಬಾನಿ-ಅದಾನಿಗಳ ಖಜಾನೆ ಹಿಗ್ಗಿಸಲು ಹೋಗಿ ರಫೇಲ್ ಭಾನ್ಗಡಿಯಲ್ಲಿ ಮೋದಿ ಮುಸುಡಿಯನ್ನೇ ಸಿಗಾಕಿಕೊಂಡು ಕೂತು ದೇಶದ ಮುಂದೆ ಬೆತ್ತಲಾಗಿದ್ದಾರೆ. ಮೊನ್ನೆ ನಡೆದ ಪಂಚರಾಜ್ಯ ಫಲಿತಾಂಶಗಳೇ ಇದಕ್ಕೆ ಸಾಕ್ಷಿ.
ಇಂಥಾ ಯಡವಟ್ಟುಗಳನ್ನು ಸರಿ ಮಾಡಿಕೊಂಡು ಜನರ ಮನಸ್ಸನ್ನು ಗೆಲ್ಲೋದು ಬಿಟ್ಟು, ಮೋದಿಯ ಪರಿವಾರದ ಪಟಾಲಮ್ಮು ಯಜ್ಞ, ಯಾಗ ಮಾಡಿ ವರ್ಚಸ್ಸು ವೃದ್ಧಿಗೆ ಕೈಹಾಕಿದೆ! ಆ ಮೂಲಕ ತಮ್ಮ ಹಾದಿಯೇನಿದ್ದರೂ ಪ್ರಗತಿಯತ್ತಲ್ಲ, ಹಳೇ ಶಿಲಾಯುಗದತ್ತ ಅನ್ನೋದನ್ನು ತಾನೇ ಸಾಬೀತು ಮಾಡಿಕೊಂಡಿದೆ. ಬಿಜೆಪಿಯ ಈ ಶಿಲಾಯುಗದ ನಿದರ್ಶನ ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ಗೋವಾ ಬಿಜೆಪಿ ಸರ್ಕಾರದ ಕೃಷಿ ಇಲಾಖೆ ವೇದ-ಮಂತ್ರ ಪಠಣದಿಂದ ರೈತರು ಬಂಪರ್ ಬೆಳೆ ತೆಗೆದು ಸುಖವಾಗಿ ಇರಬಹುದೆಂದು ಅಧೀಕೃತವಾಗೇ ಘೋಷಿಸಿದ್ದು ಓದುಗರಿಗೆ ನೆನಪಿರಬಹುದು.
ಟೀಮ್ ಮೋದಿ ತನ್ನ ಕಫ್ತಾನನ ವೈಫಲ್ಯಗಳನ್ನು ಮುಚ್ಚಿಹಾಕುವ ಸಲುವಾಗಿ ಮೌಢ್ಯದ ಯಜ್ಞ-ಮಂತ್ರ-ವೇದಗಳ ಮೊರೆಹೋಗಿರೋದನ್ನು ಕಂಡು ಜನ ನಗಾಡುತ್ತಿದ್ದಾರೆ. ದಕ್ಷಿಣ ಕನ್ನಡದ ಬದಿಯಡ್ಕ ಬಳಿಯ ಮಾನ್ಯ ಸಮೀಪದ ಮೇಗಿನಡ್ಕ ಎಂಬಲ್ಲಿ ಮೋದಿಯನ್ನು ಕಂಟಕದಿಂದ ಪಾರು ಮಾಡಲು ಯಜ್ಞ ಒಂದನ್ನು ಇದೇ ಡಿಸೆಂಬರ್ 28 ರಿಂದ 31ರವರೆಗೆ ನಡೆಸಲು ಚೆಡ್ಡಿಗಳು ನಿರ್ಧರಿಸಿದ್ದಾರೆ.
ಕರಾವಳಿಯ ದೇವಸ್ಥಾನಗಳ ಬ್ರಹ್ಮಕಲಶೋತ್ಸವ, ಕಳಾವೃದ್ಧಿ ಧಾರ್ಮಿಕ ದಗಲುಬಾಜಿತನದಿಂದಲೇ ಪ್ರವರ್ಧಮಾನಕ್ಕೆ ಬಂದ ಕಲ್ಲಡ್ಕ ಪ್ರಭಾಕರ ಭಟ್ಟ ಮತ್ತು ಬೆಂಕಿ ಬ್ರಾಂಡಿನ ಸಂಸದ ನಳಿನ್ ಕುಮಾರ್ ಕಟೀಲ್ ಗುರು-ಶಿಷ್ಯರ “ನಮೋ ಯಜ್ಞ” ಎಂಬ ಸರ್ಕಸ್ಸೇ ಈ ಲೇಟೆಸ್ಟ್ ಪ್ರಹಸನ. ನಾಲ್ಕು ದಿನ ನಮೋ, ಜ್ಞಾನ, ಭಕ್ತಿ ಮತ್ತು ಯಕ್ಷ ಯಜ್ಞಗಳೆಂಬ ಚತುರ್ವಿಧ ಹಿಕಮತ್ತಿನ ಮೂಲ ಉದ್ದೇಶ ಮೋದಿಗೆ ಅರ್ಥಾತ್ ಬಿಜೆಪಿಗೆ ಆಗುತ್ತಿರುವ ಡ್ಯಾಮೇಜ್ ಕಂಟ್ರೋಲ್ ಮಾಡೋದು!
ಕಾರ್ಯಕ್ರಮದ ಸಂಘಟಕರೇ ಹೇಳುವ ಹಾಗೆ ಇದೊಂದು ಮೋದಿಗೆ ಶಕ್ತಿ ತುಂಬುವ ಯಾಗ. ಅಲ್ಲಿಗೆ ಮೋದಿ ದುರ್ಬಲಗೊಂಡಿದ್ದಾರೆ ಅನ್ನೋದನ್ನು ಬಿಜೆಪಿಗರೇ ಒಪ್ಪಿಕೊಂಡಂತಾಯ್ತು! ಇಂಥದೊಂದು ಯಜ್ಞ ಮೋದಿಗಿಂತ ಹೆಚ್ಚಾಗಿ ಸೋಲಿನ ಭೀತಿಯಲ್ಲಿರುವ ಲೋಕಲ್ ಸಂಸದ ನಳಿನ್‍ಕುಮಾರ್ ಕಟೀಲ್‍ಗೆ ಬೇಕಾಗಿದೆ. ಪರಮ ಚೆಡ್ಡಿ ಸಾಹಿತಿಗಳಾದ ಎಸ್.ಎಲ್.ಭೈರಪ್ಪ, ಪ್ರಧಾನ್ ಗುರುದತ್ತ ಜತೆ ಸಂವಾದ ಕಾರ್ಯಕ್ರಮ ಹೆಣೆದಿರುವ ಕಲ್ಲಡ್ಕ, ನಳಿನ್‍ರ ಮುಖ್ಯಗುರಿ ಯುವಕರ ದಿಕ್ಕುತಪ್ಪಿಸಿ ಚುನಾವಣೆಗೆ ಅಣಿಯಾಗುವುದು. ಒಂದು ಕಾಲಕ್ಕೆ ಸುಶಿಕ್ಷಿತರ, ಪ್ರಜ್ಞಾವಂತರ ಜಿಲ್ಲೆಯೆಂದೇ ಹೆಸರಾಗಿದ್ದ ದಕ್ಷಿಣ ಕನ್ನಡದ ಮಂದಿ ಈಗ ಇಂಥಾ ಹುಚ್ಚಾಟಗಳಿಗೆ ಸಾಕ್ಷಿಯಾಗಬೇಕಾಗಿ ಬಂದಿರೋದು ದುರಂತ.
ತಮಾಷೆಯೆಂದರೆ, ತೆಲಂಗಾಣದ ಎಲೆಕ್ಷನ್ ಹೊತ್ತಲ್ಲಿ ಪ್ರಧಾನಿ ಮೋದಿಯು ಅಲ್ಲಿನ ಟಿಆರ್‍ಎಸ್ ಪಕ್ಷದ ಅಧಿನಾಯಕ ಕೆಸಿಆರ್‍ಗೆ ಸೋಲಿನ ಭೀತಿ ಆವರಿಸಿರೋದರಿಂದ ಜ್ಯೋತಿಷಿಗಳ ಮಾತುಕೇಳಿಕೊಂಡು ಹೋಮ-ಹವನ-ಪೂಜೆ ಮಾಡಿಸಿಕೊಂಡು ತಿರುಗಾಡುತ್ತಿದ್ದಾರೆಂದು ಗೇಲಿ ಮಾಡಿದ್ದುಂಟು!! ಈಗ ಮೋದಿ ಭಕ್ತರು ಅದೇ ಹಾದಿಯಲ್ಲಿದ್ದಾರೆ. ಅಂದಹಾಗೆ, ಎಲ್ಲರನ್ನೂ ಎಲ್ಲ ಕಾಲಕ್ಕೂ ಮೂರ್ಖರನ್ನಾಗಿ ಮಾಡಲು ಸಾಧ್ಯವಾ?
ಅಂತೂ ತಮ್ಮ ಪತನ ಪ್ರಾರಂಭವಾಗಿದೆ ಅನ್ನೋದನ್ನು ಮೋದಿ ಪರಿವಾರವೇ ಈ ಯಜ್ಞದ ಮೂಲಕ ಒಪ್ಪಿಕೊಂಡಂತಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...