Homeಕರ್ನಾಟಕಫ್ಯಾಕ್ಟ್ ಚೆಕ್: ಬೆಂಗಳೂರಲ್ಲಿ ‘ಮೋದಿ ಮಸೀದಿ’ ಇದೆಯೇ? ಇಲ್ಲಿದೆ ನೋಡಿ ಅಸಲಿ ಕಹಾನಿ!

ಫ್ಯಾಕ್ಟ್ ಚೆಕ್: ಬೆಂಗಳೂರಲ್ಲಿ ‘ಮೋದಿ ಮಸೀದಿ’ ಇದೆಯೇ? ಇಲ್ಲಿದೆ ನೋಡಿ ಅಸಲಿ ಕಹಾನಿ!

ಈ ಮಸೀದಿಯನ್ನು 175 ವರ್ಷಗಳಿಗೂ ಹಿಂದೆಯೇ ಕಟ್ಟಲಾಗಿದೆ. ಇತ್ತೀಚಿಗೆ ಈ ಮಸೀದಯನ್ನು ನವೀಕರಣ ಮಾಡಿದ ಕಾರಣಕ್ಕಾಗಿ ಈಗ ಅದು ಸುದ್ದಿಯಲ್ಲಿದೆ. ಈ ಮಸೀದಿ ಶಿವಾಜಿ ನಗರದಲ್ಲಿದೆ.

- Advertisement -
- Advertisement -

ಸಾಮಾಜಿಕ ಜಾಲತಾಣಗಳಲ್ಲಿ ಹೀಗೊಂದು ಫೋಟೊ-ಸುದ್ದಿ ಹರಿದಾಡುತ್ತಿದೆ: ‘ಬೆಂಗಳೂರಿನ ಮುಸ್ಲಿಮರು ಮಸೀದಿಯೊಂದಕ್ಕೆ ನರೇಂದ್ರ ಮೋದಿ ಹೆಸರಿಟ್ಟಿದ್ದಾರೆ… ಇದನ್ನು ನೋಡಿ ಎಷ್ಟು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಾರೋ’ ಎಂಬುದು ಆ ಸುದ್ದಿಯ ಸಾರಾಂಶ.

ಮೇಲಿನ ಸಂದೇಶದ ಪ್ರಕಾರ, ಬೆಂಗಳೂರಿನಲ್ಲಿ ಮಸೀದಿಯೊಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಹೆಸರಿಟ್ಟಿದ್ದಾರೆ. ಮೋದಿಯವರು ಫಾಲೋ ಮಾಡುವ ಟ್ವೀಟ್ ಖಾತೆ( @mahesh10816 ) ಯಿಂದ ಮೇಲಿನ ಸಂದೇಶವನ್ನು ಟ್ವೀಟ್ ಮಾಡಲಾಗಿದ್ದು, ಈ ಟ್ವೀಟ್ ಜೊತೆ ಎರಡು ಫೋಟೊಗಳೂ ಇವೆ. ಜೂನ್ 20ರ ಈ ಸಂದೇಶ ಅಂದೇ 400ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ. ಪೋಸ್ಟ್‍ನ ಎಡಕ್ಕಿರುವ ಫೋಟೊದಲ್ಲಿ ‘MODI MASJID’ ಎಂಬುದನ್ನು, ಬಲಭಾಗದ ಫೋಟೊದಲ್ಲಿ ಹಿಂಬದಿಯಲ್ಲಿ ಮೋದಿಯ ಪೋಸ್ಟರ್ ಅನ್ನು ಕಾಣಬಹುದು. ವ್ಯಾಟ್ಸಾಪ್ ನಲ್ಲೂ ಈ ಸಂದೇಶ ವಿಪರೀತ ಹರಿದಾಡುತ್ತಿದೆ.

ಕನ್ನಡದ ಶೀರ್ಷಿಕೆ ಇರುವ ಫೋಟೊ ಒಂದು ಕೂಡ ಹರಿದಾಡುತ್ತಿದ್ದು, ‘ಮೋದಿ ಹೆಸರಲ್ಲಿ 12 ಕೋಟಿಯ ಮಸೀದಿ, ಮೋದಿ ಮಸೀದಿಯಲ್ಲಿ ಜಮೀರ ಖಾನ್’ ಎಂಬ ಸಾಲುಗಳಿವೆ. ಇಂಥದ್ದನ್ನು ತೋರಿಸಿ, ನೋಡಿ ಬೆಂಗಳೂರಿನ ಮುಸ್ಲಿಮರೂ ಮೋದಿ ಸಾಧನೆ ಮೆಚ್ಚಿದ್ದಾರೆ ಎಂದು ಸುಳ್ಳನ್ನು ಹರಡುವ ಕುತಂತ್ರವಿದು.

ಸತ್ಯ: ಬೆಂಗಳೂರಿನ ಯಾವ ಮಸಿದಿಗೂ ನರೆಂದ್ರ ಮೋದಿಯ ಹೆಸರನ್ನು ಇಡಲಾಗಿಲ್ಲ. ಮೇಲಿನ ಸಂದೇಶವನ್ನು ಮೋದಿ ಕೆಲವರು ಮುಸ್ಲಿಮರಲ್ಲೂ ಜನಪ್ರಿಯರು ಎಂದು ತೋರಿಸುವ ಭಾಗವಾಗಿ ಹರಡುತ್ತಿದ್ದಾರೆ. ಇದನ್ನು ಸತ್ಯ ಎಂದು ನಂಬಿದ ಅಮಾಯಕರು ವ್ಯಾಟ್ಸಾಪ್‍ನಲ್ಲಿ ತಮ್ಮ ಸ್ನೇಹಿತರಿಗೆ ಇದನ್ನು ಕಳಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದ ಬಳಕೆದಾರರ ಕೋರಿಕೆಯ ಮೇಲೆ ಮೇಲಿನ ಸಂದೇಶದ ಕುರಿತಾಗಿ ಆಲ್ಟ್‍ನ್ಯೂಸ್ ಫ್ಯಾಕ್ಟ್‍ಚೆಕ್ ಮಾಡಿದೆ. ಬೆಂಗಳೂರಲ್ಲಿ ಮೋದಿ ಮಸೀದಿ ಎಂಬುದು ಇದೆ ಆದರೂ, ಅದು ನರೇಂದ್ರ ಮೋದಿ ಹೆಸರಿನದ್ದಲ್ಲ. ಅದನ್ನು ‘ಮೋದಿ ಅಬ್ದುಲ್ ಗಫೂರ್’ ಎಂಬ ದಾನಿಯ ಸ್ಮರಣಾರ್ಥ ‘ಮೋದಿ ಮಸೀದಿ’ ಎಂದು ಹೆಸರಿಸಲಾಗಿದೆ. ಈ ಮಸೀದಿಯನ್ನು 175 ವರ್ಷಗಳಿಗೂ ಹಿಂದೆಯೇ ಕಟ್ಟಲಾಗಿದೆ. ಇತ್ತೀಚಿಗೆ ಈ ಮಸೀದಯನ್ನು ನವೀಕರಣ ಮಾಡಿದ ಕಾರಣಕ್ಕಾಗಿ ಈಗ ಅದು ಸುದ್ದಿಯಲ್ಲಿದೆ. ಈ ಮಸೀದಿ ಶಿವಾಜಿ ನಗರದಲ್ಲಿದೆ.

ಟ್ವೀಟ್ ಜೊತೆಗಿರುವ ಎಡಭಾಗದ ಫೋಟೊ ‘ಮೋದಿ ಮಸೀದಿ’ಯದ್ದು (ನರೇಂದ್ರ ಮೋದಿಯಲ್ಲ, ಮೋದಿ ಅಬ್ದುಲ್ ಗಫೂರ್)… ಎರಡನೇ ಫೋಟೊದ ಮೂಲ ಗೊತ್ತಾಗಿಲ್ಲವಾದರೂ, ಅದು ‘ಮೋದಿ ಮಸೀದಿ’ಯ ಫೋಟೊವಂತೂ ಅಲ್ಲ. ಮೇಲಿನ ಫೇಕ್ ಆಧರಿಸಿಯೇ ಜಮೀರ್ ನಿಂತಿರುವ ಮಸಿದಿಯ ಫೋಟೊ ಇರುವ ಕನ್ನಡ ವಿಡಿಯೊವನ್ನು ಸೃಷ್ಟಿಸಿ ಯುಟ್ಯೂಬ್‍ಗೆ ಅಪಲೋಡ್ ಮಾಡಲಾಗಿದೆ. ಕಳೆದ ವರ್ಷವಷ್ಟೇ ಈ ಮಸೀದಿ ನಿರ್ಮಸಿಲಾಗಿದೆ ಎಂದು ಸುಳ್ಳು ಬಿತ್ತರಿಸಲಾಗಿದೆ.

ಈ ಮಸೀದಿ ಬಗ್ಗೆ ಗೊತ್ತಾದರೆ ನಮ್ಮ ಚಾನೆಲ್‍ಗಳೂ ಮೋದಿ ಹೆಸರಲ್ಲಿ ಬೆಂಗಳೂರಲ್ಲಿ ಮಸೀದಿ ಎಂದು ವಿಶೇಷ ಕಾರ್ಯಕ್ರಮ ಪ್ರಸಾರ ಮಾಡಬಹುದು, ಎಚ್ಚರವಿರಲಿ…

ಕೃಪೆ: ಆಲ್ಟ್ ನ್ಯೂಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...