Homeಅಂತರಾಷ್ಟ್ರೀಯಗಂಗಾವತಿಯಲ್ಲಿ ಮೋದಿ ಭಾಷಣ: ಸಾಧನೆಗಳೇ ಇಲ್ಲದ ತರಾವರಿ ಕಾಲಹರಣ!

ಗಂಗಾವತಿಯಲ್ಲಿ ಮೋದಿ ಭಾಷಣ: ಸಾಧನೆಗಳೇ ಇಲ್ಲದ ತರಾವರಿ ಕಾಲಹರಣ!

- Advertisement -
- Advertisement -

| ಮಲ್ಲನಗೌಡರ್ ಪಿ.ಕೆ |

‘ಲೇ ತಮ್ಮಾ, ಈ ಸರೆ ಪರೀಕ್ಸೆ ಹೆಂಗಾಗ್ಯಾವ್ಲೇ….ನೀ ಓದಿದ್ದ ನೋಡಿಲ್ಲಲೇ…ಹ್ಯಂಗ್ ಬರದಿದಿ?’- ಸಂಬಂಧಿಯೊಬ್ಬರು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿರುವ ಹುಡುಗನನ್ನು ಪ್ರಶ್ನಿಸಿದರು.
ಹುಡುಗ: ಅಂವಾ ಅಣ್ಣಾ ನಮ್ ಮನಿ ಮಗ್ಗಲ ಅದಾನಲ್ರಿ. ಅವಾ ಹ್ವಾದ ವರ್ಷ ಫೇಲಾಗಿದ್ದಾರಿ…ಹಹಹಹಾ…
ಸಂಬಂಧಿ: ನೀ ಹ್ಯಾಂಗ ಬರದಿಯೋ?
ಹುಡುಗ: ಅಂವಾ ನಮ್ ಸ್ಕೂಲ್ ಸೆಕ್ಯುರಿಟಿ ಅದಾನಲ್ರಿ, ಬಾಳ ಸ್ಟ್ರಿಕ್ಟ್ ಅದಾನರಿ. ಕಾಪಿ ಚೀಟಿ ಒಯ್ಯಾಕ ಬಿಡದ ಇಲ್ರಿ.
ಸಂಬಂಧಿ: ಹಂಗ ಇರ್ಬೇಕೋ…
(ಹುಡುಗ ಮನಸ್ಸಲ್ಲೇ ನಗುತ್ತ, ಯಪ್ಪಾ, ಪರೀಕ್ಷೆ ವಿಷಯ ಬಿಟ್ರಲ್ಲ ಸಾಕು ಎಂದು ವಿಷಯಾಂತರ ಮಾಡುತ್ತ ಹೋದ)
**

2019ರ ಚುನಾವಣೆಯಲ್ಲಿ ಮೋದಿ ಈ ಹುಡುಗನ ತರಹ ಭಾಷಣ ಕುಟ್ಟುತ್ತಿದ್ದಾರೆ. ಶುಕ್ರವಾರ ಗಂಗಾವತಿಯಲ್ಲಿ ಅವರು ಅಕ್ಷರಶ: ತೌಡು ಕುಟ್ಟಿ ಹೋದರು. ವಿಷಯಗಳೇ ಇಲ್ಲದ, ಸಾಧನೆಗಳೇ ಇಲ್ಲದ ವ್ಯಕ್ತಿ, ‘ಪಕ್ಕದ ಮನೆ ಅಣ್ಣ ಫೇಲಾಗಿದ್ದನ್ನು, ಸ್ಕೂಲ್ ಸೆಕ್ಯರಿಟಿ ಗಾರ್ಡ್ ಸ್ಟ್ರಿಕ್ಟ್ ಇರುವುದನ್ನು’ ಹೇಳುತ್ತ ಕಾಲಹರಣ ಮಾಡಿ ಹೋಗಿದ್ದಾರೆ.

ಅವರ ಭಾಷಣ ಆರಂಭವಾಗುವುದೇ ಎಚ್.ಡಿ. ರೇವಣ್ಣರ ಹೇಳಿಕೆ ಪ್ರಸ್ತಾಪಿಸುವ ಮೂಲಕ! ‘2014ರಲ್ಲೂ ದೇವೇಗೌಡರು ಹೀಗೆ ಹೇಳಿದ್ದರು, ಮೋದಿ ಪ್ರಧಾನಿಯಾದರೆ ರಾಜಕೀಯ ಸನ್ಯಾಸ ತಗೊಳ್ತೀನಿ ಅಂತಾ. ಸನ್ಯಾಸ ತಗೊಂಡ್ರಾ? (ಪ್ರೇಕ್ಷಕರಿಂದ ಯಾವುದೇ ಪ್ರತಿಕ್ರಿಯೆ ಇಲ್ಲ!), ಅವರ ಮಗ ತಗಳ್ತಾರಾ?’- ಹೀಗೆ ಶುರುವಾಗಿ, ‘ಇದು ಕುಟುಂಬ ರಾಜಕಾರಣ ಮತ್ತು ರಾಷ್ಟ್ರವಾದಗಳ ನಡುವಿನ ಚುನಾವಣೆ’ ಎಂದು ನೀರು ಕುಡಿಯುತ್ತಾರೆ. ಅಷ್ಟರಲ್ಲಿ ‘ಮೋದಿ ಮೋದಿ’ ಎಂಬ ನಾದ ತೇಲಿ ಬಂದ ಕೂಡಲೇ, ‘ನಿಮ್ಮ ಪ್ರೀತಿಗೆ ಋಣಿ’ ಎನ್ನುತ್ತಾರೆ. ಒಟ್ಟು ಸುಮಾರು 40 ನಿಮಿಷದ ಭಾಷಣದಲ್ಲಿ ಐದು ಸಲ ಹೀಗೆ ‘ಡಿಸ್ಟರ್ಬ್’ ಆಗುತ್ತದೆ. ಮೋದಿ ಸುಧಾರಿಸಿಕೊಳ್ಳಲು ಭಕ್ತರು ಅವಕಾಶ ಮಾಡಿಕೊಡುತ್ತಾರೆ!

ಒಮ್ಮೆ ಬಲಗೈನ ತೋರುಬೆರಳು, ಮರುಕ್ಷಣವೇ ಎಡಗೈನ ತೋರುಬೆರಳನ್ನು ಆಕಾಶಕ್ಕೆ ತೋರಿಸುತ್ತ ಧ್ವನಿಯಲ್ಲಿ ಹಾವಭಾವ ತೋರಿಸಲು ಯತ್ನಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಸೈನಿಕರ ಕುರಿತು ಕಾಳಜಿಯಿಂದ ಮಾತಾಡಿದ್ದು, ಸೈನಿಕರ ಹೆಸರನ್ನು ಬಳಸಿಕೊಳ್ಳುವ ಮೋದಿಯನ್ನು ಟೀಕಿಸಿದ್ದನ್ನು ತಿರುಚಿದ ಮೋದಿ, ‘ಎರಡು ಹೊತ್ತು ಊಟ ಇಲ್ಲದವರು ಸೇನೆ ಸೇರುತ್ತಾರೆ ಎಂದು ಕುಮಾರಸ್ವಾಮಿ ಸೈನಿಕರನ್ನು ಅವಮಾನಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿವ ಅಭಿನಯ ಮಾಡಿದರು.

ಒಟ್ಟೂ ಭಾಷಣದಲ್ಲಿ ಆರು ಸಲ ಸೇನೆಯ ವಿಷಯ, ಎರಡು ಸಲ ಪಾಕ್ ವಿಷಯ ಬರುತ್ತದೆ. ‘ಮಾಸೂಮ್ ಬಚ್ಚೇ’ ಎಂದು ಐದು ಸಲ ಪ್ರಸ್ತಾಪಿಸುವ ಮೋದಿ, ‘ಮಧ್ಯಪ್ರದೇಶ ಸರ್ಕಾರವು ಮುಗ್ಧ ಮಕ್ಕಳ ಮತ್ತು ಗರ್ಭಿಣಿಯರಿಗೆ ಆಹಾರ ನೀಡುವ ಯೋಜನೆಯಲ್ಲಿ ಭ್ರಷ್ಟಾಚಾರ ಮಾಡಿ ಕಾಂಗ್ರೆಸ್‍ಗೆ ದುಡ್ಡು ನೀಡಿದೆ’ ಎಂದು ಅಪಾದಿಸುತ್ತಾರೆ. ಮಾಸೂಮ್ ಬಚ್ಚೇ ಕೆ ಥಾಲಿ’ (ಮುಗ್ಧ ಮಕ್ಕಳ ರೊಟ್ಟಿ) ಕಸಿದಿದ್ದಾರೆ ಎಂಬ ಭಾವನಾತ್ಮಕ ಮಾತನ್ನು ರಿಪೀಟ್ ಮಾಡಿ ಸುಸ್ತಾಗಿ ಮತ್ತೆ ನೀರು ಕುಡಿಯುತ್ತಾರೆ. ಮತ್ತೆ ಮೋದಿ ಮೋದಿ…..

ಉದ್ಯೋಗ ಸೃಷ್ಟಿ, ಬೆಲೆ ಏರಿಕೆ, ಕೃಷಿ ಬಿಕ್ಕಟ್ಟು –ಇದ್ಯಾವುದರ ಕುರಿತು ಚಕಾರವೇ ಇಲ್ಲ. ‘ಮೇಕ್ ಇನ್ ಇಂಡಿಯಾ’ , ಸ್ಮಾರ್ಟ್ ಸಿಟಿ ಬಗ್ಗೆಯೂ ಮಾತೇ ಇಲ್ಲ. ರಫೇಲ್ ಕುರಿತು ಬಾಯಿ ಬಿಡಲೇ ಇಲ್ಲ!

ಮೋದಿಯ ಜೋಶ್ ಇಳಿದು ಹೋಗಿದೆ. ಅದು ವಯಸ್ಸಿನ ಕಾರಣಕ್ಕೆ , ದೇಹದ ಕಾರಣಕ್ಕೆ ಅಲ್ಲ. ಮಾನಸಿಕವಾಗಿ ಮೋದಿ ‘ವೀಕ್’ ಆಗಿದ್ದಾರೆ. ಭಾಷಣಕ್ಕೆ ವಸ್ತುಗಳಿಲ್ಲದೇ ಪಾಕ್, ಸೈನಿಕರ ಮೊರೆ ಹೋಗುತ್ತಿದ್ದಾರೆ. ಕೊಪ್ಪಳ, ಬಳ್ಳಾರಿ, ರಾಯಚೂರು ಕ್ಷೇತ್ರಗಳ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಈ ಸಭೆ ಆಯೋಜಿಸಲಾಗಿತ್ತು. ಇಲ್ಲಿ ಮೂರೂ ಕಡೆ ಜೆಡಿಎಸ್ ಅಭ್ಯರ್ಥಿಗಳೇ ಇಲ್ಲ. ಆದರೆ ಭಾಷಣದ ಮೊದಲ ಹತ್ತು ನಿಮಿಷವನ್ನು ಜೆಡಿಎಸ್ ಟೀಕೆಯಲ್ಲೇ ಕಳೆದರು. ಇಡೀ ಭಾಷಣದಲ್ಲಿ ಅವರ ಕುಗ್ಗಿದ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು. ಏನೋ ಮಾತಾಡಬೇಕು ಎಂಬಂತೆ ಕಾಲಹರಣ ಮಾಡಿದ್ದಷ್ಟೇ ಬಂತು. ಹಿಂದಿ ಭಾಷಿಕ ಪ್ರೇಕ್ಷಕರ ಎದುರೇ ಸಪ್ಪೆಯಾಗಿರುವ ಮೋದಿ, ಕನ್ನಡ-ತೆಲುಗು ಭಾಷಿಕ ಪ್ರೇಕ್ಷಕರ ಎದುರು ಫುಲ್ ಡಲ್. ಖಾಲಿ ಡಬ್ಬಿಯನ್ನು ಅಲ್ಲಾಡಿಸಿದಂತೆ ಇತ್ತು ಅವರ ಭಾಷಣ.. ನಡುನಡುವೆ ಮಬ್ಭಕ್ತರ ‘ಮೋದಿ ಮೋದಿ’ ಎಂಬುದಷ್ಟೇ ಮೋದಿಗೆ ಹಿತ ತಂದಿರಬಹುದು.

ರಾಹುಲ್ ಗಾಂಧಿ ಕನ್ನಡದಲ್ಲಿ ತಪ್ಪಾಗಿ ಮಾತಾಡಿದಾಗ ನ್ಯೂಸ್ ಮಾಡುವ ಮಾಧ್ಯಮಗಳು, ಮೋದಿ ಮಾಡಿದ ಅಪಭ್ರಂಶಗಳ ಬಗ್ಗೆ ಸುದ್ದಿನೇ ಮಾಡಿದಂತೆ ಕಾಣ್ತಾ ಇಲ್ಲ. ‘ಹಳ್ಳಿ ಹಳ್ಳಿಗೂ ಮೋದಿ’ ಎನ್ನುವಾಗ ಅವರು ‘ಹಲ್ಲಿ ಹಲ್ಲಿಗೂ ಮೋದಿ’ ಎಂದರು. ಸತ್ಯದ ಮಾತೇ ಎಂದು ಸುಮ್ಮನಿದ್ದು ಬಿಡೋಣವೇ?
***

ಈಗ ಮೊದಲ ಪ್ಯಾರಾಕ್ಕೆ ಬನ್ನಿ. ಈ ಸಲ ಪರೀಕ್ಷೆ ಬರೆದ ಎಸ್‍ಎಸ್‍ಎಲ್‍ಸಿ ಹುಡುಗ ಸಂಬಂಧಿಯನ್ನು ಯಾಮಾರಿಸುವ ರೀತಿಯಲ್ಲಿ ಮೋದಿ ಭಾಷಣವಿತ್ತು.
ಮನೆಗೆ ಹೋದ ಸಂಬಂಧಿ, ಆ ಹುಡುಗ ಫೇಲ್ ಆಗ್ತಾನೆ ಬಿಡು ಎಂದು ಪತ್ನಿಗೆ ಹೇಳಿ ಸುಮ್ಮನಾದರಂತೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...