Homeಅಂತರಾಷ್ಟ್ರೀಯಗಂಗಾವತಿಯಲ್ಲಿ ಮೋದಿ ಭಾಷಣ: ಸಾಧನೆಗಳೇ ಇಲ್ಲದ ತರಾವರಿ ಕಾಲಹರಣ!

ಗಂಗಾವತಿಯಲ್ಲಿ ಮೋದಿ ಭಾಷಣ: ಸಾಧನೆಗಳೇ ಇಲ್ಲದ ತರಾವರಿ ಕಾಲಹರಣ!

- Advertisement -
- Advertisement -

| ಮಲ್ಲನಗೌಡರ್ ಪಿ.ಕೆ |

‘ಲೇ ತಮ್ಮಾ, ಈ ಸರೆ ಪರೀಕ್ಸೆ ಹೆಂಗಾಗ್ಯಾವ್ಲೇ….ನೀ ಓದಿದ್ದ ನೋಡಿಲ್ಲಲೇ…ಹ್ಯಂಗ್ ಬರದಿದಿ?’- ಸಂಬಂಧಿಯೊಬ್ಬರು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿರುವ ಹುಡುಗನನ್ನು ಪ್ರಶ್ನಿಸಿದರು.
ಹುಡುಗ: ಅಂವಾ ಅಣ್ಣಾ ನಮ್ ಮನಿ ಮಗ್ಗಲ ಅದಾನಲ್ರಿ. ಅವಾ ಹ್ವಾದ ವರ್ಷ ಫೇಲಾಗಿದ್ದಾರಿ…ಹಹಹಹಾ…
ಸಂಬಂಧಿ: ನೀ ಹ್ಯಾಂಗ ಬರದಿಯೋ?
ಹುಡುಗ: ಅಂವಾ ನಮ್ ಸ್ಕೂಲ್ ಸೆಕ್ಯುರಿಟಿ ಅದಾನಲ್ರಿ, ಬಾಳ ಸ್ಟ್ರಿಕ್ಟ್ ಅದಾನರಿ. ಕಾಪಿ ಚೀಟಿ ಒಯ್ಯಾಕ ಬಿಡದ ಇಲ್ರಿ.
ಸಂಬಂಧಿ: ಹಂಗ ಇರ್ಬೇಕೋ…
(ಹುಡುಗ ಮನಸ್ಸಲ್ಲೇ ನಗುತ್ತ, ಯಪ್ಪಾ, ಪರೀಕ್ಷೆ ವಿಷಯ ಬಿಟ್ರಲ್ಲ ಸಾಕು ಎಂದು ವಿಷಯಾಂತರ ಮಾಡುತ್ತ ಹೋದ)
**

2019ರ ಚುನಾವಣೆಯಲ್ಲಿ ಮೋದಿ ಈ ಹುಡುಗನ ತರಹ ಭಾಷಣ ಕುಟ್ಟುತ್ತಿದ್ದಾರೆ. ಶುಕ್ರವಾರ ಗಂಗಾವತಿಯಲ್ಲಿ ಅವರು ಅಕ್ಷರಶ: ತೌಡು ಕುಟ್ಟಿ ಹೋದರು. ವಿಷಯಗಳೇ ಇಲ್ಲದ, ಸಾಧನೆಗಳೇ ಇಲ್ಲದ ವ್ಯಕ್ತಿ, ‘ಪಕ್ಕದ ಮನೆ ಅಣ್ಣ ಫೇಲಾಗಿದ್ದನ್ನು, ಸ್ಕೂಲ್ ಸೆಕ್ಯರಿಟಿ ಗಾರ್ಡ್ ಸ್ಟ್ರಿಕ್ಟ್ ಇರುವುದನ್ನು’ ಹೇಳುತ್ತ ಕಾಲಹರಣ ಮಾಡಿ ಹೋಗಿದ್ದಾರೆ.

ಅವರ ಭಾಷಣ ಆರಂಭವಾಗುವುದೇ ಎಚ್.ಡಿ. ರೇವಣ್ಣರ ಹೇಳಿಕೆ ಪ್ರಸ್ತಾಪಿಸುವ ಮೂಲಕ! ‘2014ರಲ್ಲೂ ದೇವೇಗೌಡರು ಹೀಗೆ ಹೇಳಿದ್ದರು, ಮೋದಿ ಪ್ರಧಾನಿಯಾದರೆ ರಾಜಕೀಯ ಸನ್ಯಾಸ ತಗೊಳ್ತೀನಿ ಅಂತಾ. ಸನ್ಯಾಸ ತಗೊಂಡ್ರಾ? (ಪ್ರೇಕ್ಷಕರಿಂದ ಯಾವುದೇ ಪ್ರತಿಕ್ರಿಯೆ ಇಲ್ಲ!), ಅವರ ಮಗ ತಗಳ್ತಾರಾ?’- ಹೀಗೆ ಶುರುವಾಗಿ, ‘ಇದು ಕುಟುಂಬ ರಾಜಕಾರಣ ಮತ್ತು ರಾಷ್ಟ್ರವಾದಗಳ ನಡುವಿನ ಚುನಾವಣೆ’ ಎಂದು ನೀರು ಕುಡಿಯುತ್ತಾರೆ. ಅಷ್ಟರಲ್ಲಿ ‘ಮೋದಿ ಮೋದಿ’ ಎಂಬ ನಾದ ತೇಲಿ ಬಂದ ಕೂಡಲೇ, ‘ನಿಮ್ಮ ಪ್ರೀತಿಗೆ ಋಣಿ’ ಎನ್ನುತ್ತಾರೆ. ಒಟ್ಟು ಸುಮಾರು 40 ನಿಮಿಷದ ಭಾಷಣದಲ್ಲಿ ಐದು ಸಲ ಹೀಗೆ ‘ಡಿಸ್ಟರ್ಬ್’ ಆಗುತ್ತದೆ. ಮೋದಿ ಸುಧಾರಿಸಿಕೊಳ್ಳಲು ಭಕ್ತರು ಅವಕಾಶ ಮಾಡಿಕೊಡುತ್ತಾರೆ!

ಒಮ್ಮೆ ಬಲಗೈನ ತೋರುಬೆರಳು, ಮರುಕ್ಷಣವೇ ಎಡಗೈನ ತೋರುಬೆರಳನ್ನು ಆಕಾಶಕ್ಕೆ ತೋರಿಸುತ್ತ ಧ್ವನಿಯಲ್ಲಿ ಹಾವಭಾವ ತೋರಿಸಲು ಯತ್ನಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಸೈನಿಕರ ಕುರಿತು ಕಾಳಜಿಯಿಂದ ಮಾತಾಡಿದ್ದು, ಸೈನಿಕರ ಹೆಸರನ್ನು ಬಳಸಿಕೊಳ್ಳುವ ಮೋದಿಯನ್ನು ಟೀಕಿಸಿದ್ದನ್ನು ತಿರುಚಿದ ಮೋದಿ, ‘ಎರಡು ಹೊತ್ತು ಊಟ ಇಲ್ಲದವರು ಸೇನೆ ಸೇರುತ್ತಾರೆ ಎಂದು ಕುಮಾರಸ್ವಾಮಿ ಸೈನಿಕರನ್ನು ಅವಮಾನಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿವ ಅಭಿನಯ ಮಾಡಿದರು.

ಒಟ್ಟೂ ಭಾಷಣದಲ್ಲಿ ಆರು ಸಲ ಸೇನೆಯ ವಿಷಯ, ಎರಡು ಸಲ ಪಾಕ್ ವಿಷಯ ಬರುತ್ತದೆ. ‘ಮಾಸೂಮ್ ಬಚ್ಚೇ’ ಎಂದು ಐದು ಸಲ ಪ್ರಸ್ತಾಪಿಸುವ ಮೋದಿ, ‘ಮಧ್ಯಪ್ರದೇಶ ಸರ್ಕಾರವು ಮುಗ್ಧ ಮಕ್ಕಳ ಮತ್ತು ಗರ್ಭಿಣಿಯರಿಗೆ ಆಹಾರ ನೀಡುವ ಯೋಜನೆಯಲ್ಲಿ ಭ್ರಷ್ಟಾಚಾರ ಮಾಡಿ ಕಾಂಗ್ರೆಸ್‍ಗೆ ದುಡ್ಡು ನೀಡಿದೆ’ ಎಂದು ಅಪಾದಿಸುತ್ತಾರೆ. ಮಾಸೂಮ್ ಬಚ್ಚೇ ಕೆ ಥಾಲಿ’ (ಮುಗ್ಧ ಮಕ್ಕಳ ರೊಟ್ಟಿ) ಕಸಿದಿದ್ದಾರೆ ಎಂಬ ಭಾವನಾತ್ಮಕ ಮಾತನ್ನು ರಿಪೀಟ್ ಮಾಡಿ ಸುಸ್ತಾಗಿ ಮತ್ತೆ ನೀರು ಕುಡಿಯುತ್ತಾರೆ. ಮತ್ತೆ ಮೋದಿ ಮೋದಿ…..

ಉದ್ಯೋಗ ಸೃಷ್ಟಿ, ಬೆಲೆ ಏರಿಕೆ, ಕೃಷಿ ಬಿಕ್ಕಟ್ಟು –ಇದ್ಯಾವುದರ ಕುರಿತು ಚಕಾರವೇ ಇಲ್ಲ. ‘ಮೇಕ್ ಇನ್ ಇಂಡಿಯಾ’ , ಸ್ಮಾರ್ಟ್ ಸಿಟಿ ಬಗ್ಗೆಯೂ ಮಾತೇ ಇಲ್ಲ. ರಫೇಲ್ ಕುರಿತು ಬಾಯಿ ಬಿಡಲೇ ಇಲ್ಲ!

ಮೋದಿಯ ಜೋಶ್ ಇಳಿದು ಹೋಗಿದೆ. ಅದು ವಯಸ್ಸಿನ ಕಾರಣಕ್ಕೆ , ದೇಹದ ಕಾರಣಕ್ಕೆ ಅಲ್ಲ. ಮಾನಸಿಕವಾಗಿ ಮೋದಿ ‘ವೀಕ್’ ಆಗಿದ್ದಾರೆ. ಭಾಷಣಕ್ಕೆ ವಸ್ತುಗಳಿಲ್ಲದೇ ಪಾಕ್, ಸೈನಿಕರ ಮೊರೆ ಹೋಗುತ್ತಿದ್ದಾರೆ. ಕೊಪ್ಪಳ, ಬಳ್ಳಾರಿ, ರಾಯಚೂರು ಕ್ಷೇತ್ರಗಳ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಈ ಸಭೆ ಆಯೋಜಿಸಲಾಗಿತ್ತು. ಇಲ್ಲಿ ಮೂರೂ ಕಡೆ ಜೆಡಿಎಸ್ ಅಭ್ಯರ್ಥಿಗಳೇ ಇಲ್ಲ. ಆದರೆ ಭಾಷಣದ ಮೊದಲ ಹತ್ತು ನಿಮಿಷವನ್ನು ಜೆಡಿಎಸ್ ಟೀಕೆಯಲ್ಲೇ ಕಳೆದರು. ಇಡೀ ಭಾಷಣದಲ್ಲಿ ಅವರ ಕುಗ್ಗಿದ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು. ಏನೋ ಮಾತಾಡಬೇಕು ಎಂಬಂತೆ ಕಾಲಹರಣ ಮಾಡಿದ್ದಷ್ಟೇ ಬಂತು. ಹಿಂದಿ ಭಾಷಿಕ ಪ್ರೇಕ್ಷಕರ ಎದುರೇ ಸಪ್ಪೆಯಾಗಿರುವ ಮೋದಿ, ಕನ್ನಡ-ತೆಲುಗು ಭಾಷಿಕ ಪ್ರೇಕ್ಷಕರ ಎದುರು ಫುಲ್ ಡಲ್. ಖಾಲಿ ಡಬ್ಬಿಯನ್ನು ಅಲ್ಲಾಡಿಸಿದಂತೆ ಇತ್ತು ಅವರ ಭಾಷಣ.. ನಡುನಡುವೆ ಮಬ್ಭಕ್ತರ ‘ಮೋದಿ ಮೋದಿ’ ಎಂಬುದಷ್ಟೇ ಮೋದಿಗೆ ಹಿತ ತಂದಿರಬಹುದು.

ರಾಹುಲ್ ಗಾಂಧಿ ಕನ್ನಡದಲ್ಲಿ ತಪ್ಪಾಗಿ ಮಾತಾಡಿದಾಗ ನ್ಯೂಸ್ ಮಾಡುವ ಮಾಧ್ಯಮಗಳು, ಮೋದಿ ಮಾಡಿದ ಅಪಭ್ರಂಶಗಳ ಬಗ್ಗೆ ಸುದ್ದಿನೇ ಮಾಡಿದಂತೆ ಕಾಣ್ತಾ ಇಲ್ಲ. ‘ಹಳ್ಳಿ ಹಳ್ಳಿಗೂ ಮೋದಿ’ ಎನ್ನುವಾಗ ಅವರು ‘ಹಲ್ಲಿ ಹಲ್ಲಿಗೂ ಮೋದಿ’ ಎಂದರು. ಸತ್ಯದ ಮಾತೇ ಎಂದು ಸುಮ್ಮನಿದ್ದು ಬಿಡೋಣವೇ?
***

ಈಗ ಮೊದಲ ಪ್ಯಾರಾಕ್ಕೆ ಬನ್ನಿ. ಈ ಸಲ ಪರೀಕ್ಷೆ ಬರೆದ ಎಸ್‍ಎಸ್‍ಎಲ್‍ಸಿ ಹುಡುಗ ಸಂಬಂಧಿಯನ್ನು ಯಾಮಾರಿಸುವ ರೀತಿಯಲ್ಲಿ ಮೋದಿ ಭಾಷಣವಿತ್ತು.
ಮನೆಗೆ ಹೋದ ಸಂಬಂಧಿ, ಆ ಹುಡುಗ ಫೇಲ್ ಆಗ್ತಾನೆ ಬಿಡು ಎಂದು ಪತ್ನಿಗೆ ಹೇಳಿ ಸುಮ್ಮನಾದರಂತೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...