Homeಅಂತರಾಷ್ಟ್ರೀಯಗಂಗಾವತಿಯಲ್ಲಿ ಮೋದಿ ಭಾಷಣ: ಸಾಧನೆಗಳೇ ಇಲ್ಲದ ತರಾವರಿ ಕಾಲಹರಣ!

ಗಂಗಾವತಿಯಲ್ಲಿ ಮೋದಿ ಭಾಷಣ: ಸಾಧನೆಗಳೇ ಇಲ್ಲದ ತರಾವರಿ ಕಾಲಹರಣ!

- Advertisement -
- Advertisement -

| ಮಲ್ಲನಗೌಡರ್ ಪಿ.ಕೆ |

‘ಲೇ ತಮ್ಮಾ, ಈ ಸರೆ ಪರೀಕ್ಸೆ ಹೆಂಗಾಗ್ಯಾವ್ಲೇ….ನೀ ಓದಿದ್ದ ನೋಡಿಲ್ಲಲೇ…ಹ್ಯಂಗ್ ಬರದಿದಿ?’- ಸಂಬಂಧಿಯೊಬ್ಬರು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿರುವ ಹುಡುಗನನ್ನು ಪ್ರಶ್ನಿಸಿದರು.
ಹುಡುಗ: ಅಂವಾ ಅಣ್ಣಾ ನಮ್ ಮನಿ ಮಗ್ಗಲ ಅದಾನಲ್ರಿ. ಅವಾ ಹ್ವಾದ ವರ್ಷ ಫೇಲಾಗಿದ್ದಾರಿ…ಹಹಹಹಾ…
ಸಂಬಂಧಿ: ನೀ ಹ್ಯಾಂಗ ಬರದಿಯೋ?
ಹುಡುಗ: ಅಂವಾ ನಮ್ ಸ್ಕೂಲ್ ಸೆಕ್ಯುರಿಟಿ ಅದಾನಲ್ರಿ, ಬಾಳ ಸ್ಟ್ರಿಕ್ಟ್ ಅದಾನರಿ. ಕಾಪಿ ಚೀಟಿ ಒಯ್ಯಾಕ ಬಿಡದ ಇಲ್ರಿ.
ಸಂಬಂಧಿ: ಹಂಗ ಇರ್ಬೇಕೋ…
(ಹುಡುಗ ಮನಸ್ಸಲ್ಲೇ ನಗುತ್ತ, ಯಪ್ಪಾ, ಪರೀಕ್ಷೆ ವಿಷಯ ಬಿಟ್ರಲ್ಲ ಸಾಕು ಎಂದು ವಿಷಯಾಂತರ ಮಾಡುತ್ತ ಹೋದ)
**

2019ರ ಚುನಾವಣೆಯಲ್ಲಿ ಮೋದಿ ಈ ಹುಡುಗನ ತರಹ ಭಾಷಣ ಕುಟ್ಟುತ್ತಿದ್ದಾರೆ. ಶುಕ್ರವಾರ ಗಂಗಾವತಿಯಲ್ಲಿ ಅವರು ಅಕ್ಷರಶ: ತೌಡು ಕುಟ್ಟಿ ಹೋದರು. ವಿಷಯಗಳೇ ಇಲ್ಲದ, ಸಾಧನೆಗಳೇ ಇಲ್ಲದ ವ್ಯಕ್ತಿ, ‘ಪಕ್ಕದ ಮನೆ ಅಣ್ಣ ಫೇಲಾಗಿದ್ದನ್ನು, ಸ್ಕೂಲ್ ಸೆಕ್ಯರಿಟಿ ಗಾರ್ಡ್ ಸ್ಟ್ರಿಕ್ಟ್ ಇರುವುದನ್ನು’ ಹೇಳುತ್ತ ಕಾಲಹರಣ ಮಾಡಿ ಹೋಗಿದ್ದಾರೆ.

ಅವರ ಭಾಷಣ ಆರಂಭವಾಗುವುದೇ ಎಚ್.ಡಿ. ರೇವಣ್ಣರ ಹೇಳಿಕೆ ಪ್ರಸ್ತಾಪಿಸುವ ಮೂಲಕ! ‘2014ರಲ್ಲೂ ದೇವೇಗೌಡರು ಹೀಗೆ ಹೇಳಿದ್ದರು, ಮೋದಿ ಪ್ರಧಾನಿಯಾದರೆ ರಾಜಕೀಯ ಸನ್ಯಾಸ ತಗೊಳ್ತೀನಿ ಅಂತಾ. ಸನ್ಯಾಸ ತಗೊಂಡ್ರಾ? (ಪ್ರೇಕ್ಷಕರಿಂದ ಯಾವುದೇ ಪ್ರತಿಕ್ರಿಯೆ ಇಲ್ಲ!), ಅವರ ಮಗ ತಗಳ್ತಾರಾ?’- ಹೀಗೆ ಶುರುವಾಗಿ, ‘ಇದು ಕುಟುಂಬ ರಾಜಕಾರಣ ಮತ್ತು ರಾಷ್ಟ್ರವಾದಗಳ ನಡುವಿನ ಚುನಾವಣೆ’ ಎಂದು ನೀರು ಕುಡಿಯುತ್ತಾರೆ. ಅಷ್ಟರಲ್ಲಿ ‘ಮೋದಿ ಮೋದಿ’ ಎಂಬ ನಾದ ತೇಲಿ ಬಂದ ಕೂಡಲೇ, ‘ನಿಮ್ಮ ಪ್ರೀತಿಗೆ ಋಣಿ’ ಎನ್ನುತ್ತಾರೆ. ಒಟ್ಟು ಸುಮಾರು 40 ನಿಮಿಷದ ಭಾಷಣದಲ್ಲಿ ಐದು ಸಲ ಹೀಗೆ ‘ಡಿಸ್ಟರ್ಬ್’ ಆಗುತ್ತದೆ. ಮೋದಿ ಸುಧಾರಿಸಿಕೊಳ್ಳಲು ಭಕ್ತರು ಅವಕಾಶ ಮಾಡಿಕೊಡುತ್ತಾರೆ!

ಒಮ್ಮೆ ಬಲಗೈನ ತೋರುಬೆರಳು, ಮರುಕ್ಷಣವೇ ಎಡಗೈನ ತೋರುಬೆರಳನ್ನು ಆಕಾಶಕ್ಕೆ ತೋರಿಸುತ್ತ ಧ್ವನಿಯಲ್ಲಿ ಹಾವಭಾವ ತೋರಿಸಲು ಯತ್ನಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಸೈನಿಕರ ಕುರಿತು ಕಾಳಜಿಯಿಂದ ಮಾತಾಡಿದ್ದು, ಸೈನಿಕರ ಹೆಸರನ್ನು ಬಳಸಿಕೊಳ್ಳುವ ಮೋದಿಯನ್ನು ಟೀಕಿಸಿದ್ದನ್ನು ತಿರುಚಿದ ಮೋದಿ, ‘ಎರಡು ಹೊತ್ತು ಊಟ ಇಲ್ಲದವರು ಸೇನೆ ಸೇರುತ್ತಾರೆ ಎಂದು ಕುಮಾರಸ್ವಾಮಿ ಸೈನಿಕರನ್ನು ಅವಮಾನಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿವ ಅಭಿನಯ ಮಾಡಿದರು.

ಒಟ್ಟೂ ಭಾಷಣದಲ್ಲಿ ಆರು ಸಲ ಸೇನೆಯ ವಿಷಯ, ಎರಡು ಸಲ ಪಾಕ್ ವಿಷಯ ಬರುತ್ತದೆ. ‘ಮಾಸೂಮ್ ಬಚ್ಚೇ’ ಎಂದು ಐದು ಸಲ ಪ್ರಸ್ತಾಪಿಸುವ ಮೋದಿ, ‘ಮಧ್ಯಪ್ರದೇಶ ಸರ್ಕಾರವು ಮುಗ್ಧ ಮಕ್ಕಳ ಮತ್ತು ಗರ್ಭಿಣಿಯರಿಗೆ ಆಹಾರ ನೀಡುವ ಯೋಜನೆಯಲ್ಲಿ ಭ್ರಷ್ಟಾಚಾರ ಮಾಡಿ ಕಾಂಗ್ರೆಸ್‍ಗೆ ದುಡ್ಡು ನೀಡಿದೆ’ ಎಂದು ಅಪಾದಿಸುತ್ತಾರೆ. ಮಾಸೂಮ್ ಬಚ್ಚೇ ಕೆ ಥಾಲಿ’ (ಮುಗ್ಧ ಮಕ್ಕಳ ರೊಟ್ಟಿ) ಕಸಿದಿದ್ದಾರೆ ಎಂಬ ಭಾವನಾತ್ಮಕ ಮಾತನ್ನು ರಿಪೀಟ್ ಮಾಡಿ ಸುಸ್ತಾಗಿ ಮತ್ತೆ ನೀರು ಕುಡಿಯುತ್ತಾರೆ. ಮತ್ತೆ ಮೋದಿ ಮೋದಿ…..

ಉದ್ಯೋಗ ಸೃಷ್ಟಿ, ಬೆಲೆ ಏರಿಕೆ, ಕೃಷಿ ಬಿಕ್ಕಟ್ಟು –ಇದ್ಯಾವುದರ ಕುರಿತು ಚಕಾರವೇ ಇಲ್ಲ. ‘ಮೇಕ್ ಇನ್ ಇಂಡಿಯಾ’ , ಸ್ಮಾರ್ಟ್ ಸಿಟಿ ಬಗ್ಗೆಯೂ ಮಾತೇ ಇಲ್ಲ. ರಫೇಲ್ ಕುರಿತು ಬಾಯಿ ಬಿಡಲೇ ಇಲ್ಲ!

ಮೋದಿಯ ಜೋಶ್ ಇಳಿದು ಹೋಗಿದೆ. ಅದು ವಯಸ್ಸಿನ ಕಾರಣಕ್ಕೆ , ದೇಹದ ಕಾರಣಕ್ಕೆ ಅಲ್ಲ. ಮಾನಸಿಕವಾಗಿ ಮೋದಿ ‘ವೀಕ್’ ಆಗಿದ್ದಾರೆ. ಭಾಷಣಕ್ಕೆ ವಸ್ತುಗಳಿಲ್ಲದೇ ಪಾಕ್, ಸೈನಿಕರ ಮೊರೆ ಹೋಗುತ್ತಿದ್ದಾರೆ. ಕೊಪ್ಪಳ, ಬಳ್ಳಾರಿ, ರಾಯಚೂರು ಕ್ಷೇತ್ರಗಳ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಈ ಸಭೆ ಆಯೋಜಿಸಲಾಗಿತ್ತು. ಇಲ್ಲಿ ಮೂರೂ ಕಡೆ ಜೆಡಿಎಸ್ ಅಭ್ಯರ್ಥಿಗಳೇ ಇಲ್ಲ. ಆದರೆ ಭಾಷಣದ ಮೊದಲ ಹತ್ತು ನಿಮಿಷವನ್ನು ಜೆಡಿಎಸ್ ಟೀಕೆಯಲ್ಲೇ ಕಳೆದರು. ಇಡೀ ಭಾಷಣದಲ್ಲಿ ಅವರ ಕುಗ್ಗಿದ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು. ಏನೋ ಮಾತಾಡಬೇಕು ಎಂಬಂತೆ ಕಾಲಹರಣ ಮಾಡಿದ್ದಷ್ಟೇ ಬಂತು. ಹಿಂದಿ ಭಾಷಿಕ ಪ್ರೇಕ್ಷಕರ ಎದುರೇ ಸಪ್ಪೆಯಾಗಿರುವ ಮೋದಿ, ಕನ್ನಡ-ತೆಲುಗು ಭಾಷಿಕ ಪ್ರೇಕ್ಷಕರ ಎದುರು ಫುಲ್ ಡಲ್. ಖಾಲಿ ಡಬ್ಬಿಯನ್ನು ಅಲ್ಲಾಡಿಸಿದಂತೆ ಇತ್ತು ಅವರ ಭಾಷಣ.. ನಡುನಡುವೆ ಮಬ್ಭಕ್ತರ ‘ಮೋದಿ ಮೋದಿ’ ಎಂಬುದಷ್ಟೇ ಮೋದಿಗೆ ಹಿತ ತಂದಿರಬಹುದು.

ರಾಹುಲ್ ಗಾಂಧಿ ಕನ್ನಡದಲ್ಲಿ ತಪ್ಪಾಗಿ ಮಾತಾಡಿದಾಗ ನ್ಯೂಸ್ ಮಾಡುವ ಮಾಧ್ಯಮಗಳು, ಮೋದಿ ಮಾಡಿದ ಅಪಭ್ರಂಶಗಳ ಬಗ್ಗೆ ಸುದ್ದಿನೇ ಮಾಡಿದಂತೆ ಕಾಣ್ತಾ ಇಲ್ಲ. ‘ಹಳ್ಳಿ ಹಳ್ಳಿಗೂ ಮೋದಿ’ ಎನ್ನುವಾಗ ಅವರು ‘ಹಲ್ಲಿ ಹಲ್ಲಿಗೂ ಮೋದಿ’ ಎಂದರು. ಸತ್ಯದ ಮಾತೇ ಎಂದು ಸುಮ್ಮನಿದ್ದು ಬಿಡೋಣವೇ?
***

ಈಗ ಮೊದಲ ಪ್ಯಾರಾಕ್ಕೆ ಬನ್ನಿ. ಈ ಸಲ ಪರೀಕ್ಷೆ ಬರೆದ ಎಸ್‍ಎಸ್‍ಎಲ್‍ಸಿ ಹುಡುಗ ಸಂಬಂಧಿಯನ್ನು ಯಾಮಾರಿಸುವ ರೀತಿಯಲ್ಲಿ ಮೋದಿ ಭಾಷಣವಿತ್ತು.
ಮನೆಗೆ ಹೋದ ಸಂಬಂಧಿ, ಆ ಹುಡುಗ ಫೇಲ್ ಆಗ್ತಾನೆ ಬಿಡು ಎಂದು ಪತ್ನಿಗೆ ಹೇಳಿ ಸುಮ್ಮನಾದರಂತೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...