Homeಅಂಕಣಗಳುಜಲಿಯನ್ ವಾಲಾಬಾಗ್ ಹತ್ಯಾಕಾಂಡದ ನಂತರದ ದಂತಕಥೆ ನಿಮಗೆ ಗೊತ್ತೇ?

ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ನಂತರದ ದಂತಕಥೆ ನಿಮಗೆ ಗೊತ್ತೇ?

- Advertisement -
- Advertisement -

ಏಪ್ರಿಲ್ 13, 1919. ಅದು ಪಂಜಾಬ್‍ನ ಅಮೃತಸರ ಜಿಲ್ಲೆಯ ಜಲಿಯನ್ ವಾಲಾಬಾಗ್ ವಾಲಾಬಾಗ್ ಉದ್ಯಾನವನ. ಅಲ್ಲಿ ಶಾಂತಿಯುತವಾಗಿ ಮತ್ತು ನಿಶಸ್ತ್ರವಾಗಿ ಸಭೆ ಸೇರಿದ್ದ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಬ್ರಿಟೀಷ್ ಸೇನಾಧಿಕಾರಿ ಜನರಲ್ ಡಯರ್‍ನ ಆಜ್ಞಾನುಸಾರ ಗುಂಡಿನ ಮಳೆಗೆರೆಯಲಾಗುತ್ತದೆ. ಮೂರು ಸಾವಿರಕ್ಕೂ ಅಧಿಕ ಮಂದಿ ಹೋರಾಟಗಾರರು ಪ್ರಾಣಾರ್ಪಣೆ ಮಾಡುತ್ತಾರೆ. ಆ ಸುದ್ದಿ ಜಲಿಯನ್ ವಾಲಾಬಾಗ್ ದುರಂತ ಎಂದು ಜಗತ್ತಿನಾದ್ಯಂತ ಪಸರಿಸುತ್ತದೆ.

ಏಪ್ರಿಲ್ 14, 1919. ಅಲ್ಲಿಗೆ ಪುಟ್ಟ ಬಾಲಕನೊಬ್ಬ ಬರುತ್ತಾನೆ. ರಕ್ತಸಿಕ್ತ ಮಣ್ಣ, ಹಳೇ ಬಟ್ಟೆ ಬರೆ ಚಪ್ಪಲಿಗಳನ್ನು ನೋಡಿ ಕ್ರುದ್ಧಗೊಳ್ಳುತ್ತಾನೆ. ಡಬ್ಬಿಯಲ್ಲಿದ್ದ ಊಟವನ್ನು ಚೆಲ್ಲಿ ಅದಕ್ಕೆ ರಕ್ತಸಿಕ್ತವಾದ ಮಣ್ಣನ್ನು ತುಂಬಿ, ನಿಮ್ಮ ಸಾವಿಗೆ ನ್ಯಾಯ ದೊರಕಿಸುತ್ತೇನೆಂದು ಶಪಥ ಮಾಡುತ್ತಾನೆ. ‘ಅಣ್ಣ ಏಕೆ ಸಪ್ಪಗಿದ್ದೀಯಾ, ಊಟ ಮಾಡೋಲ್ಲವೇ?’ ಮನೆಯಲ್ಲಿ ತಂಗಿ ಕೇಳುತ್ತಾಳೆ. ತನ್ನ ತಂಗಿಗೆ ನಿನ್ನೆ ನಡೆದಿದ್ದ ದುರಂತದ ಬಗ್ಗೆ ವಿವರಿಸುತ್ತಾನೆ. ನಮ್ಮ ದೇಶಕ್ಕೆ ನುಗ್ಗಿರುವ ದ್ರೋಹಿ ಬ್ರಿಟೀಷರನ್ನು ಸೆದೆಬಡಿಯಬೇಕೆಂದು ತಿಳಿಸುತ್ತಾನೆ.

ಏಪ್ರಿಲ್ 15, 1919. ಆ ಬಾಲಕನ ಚಿಕ್ಕಪ್ಪ ಮಾವಿನ ಬೀಜ(ವಾಟೆ)ವನ್ನು ಹಿತ್ತಲಿನಲ್ಲಿ ನೆಡುತ್ತಿರುತ್ತಾರೆ. ಅಲ್ಲಿಗೆ ಬಂದ ಬಾಲಕ ಕೇಳುತ್ತಾನೆ.
ಚಿಕ್ಕಪ್ಪ ಏನು ಮಾಡುತ್ತಿದ್ದೀರಿ?
ಮಾವಿನ ಬೀಜ ನೆಡುತ್ತಿದ್ದೇನೆ ಮಗು
ಏಕೆ ನೆಡುತ್ತಿದ್ದೀರಿ?
ಏಕೆಂದರೆ ಇದು ಮಾವಿನ ಸಸಿಯಾಗುತ್ತದೆ, ನಂತರ ಬೆಳೆದು ಮರವಾಗುತ್ತದೆ.
ಅದರಿಂದ ಏನು ಪ್ರಯೋಜನ?
ಇದು ಸಾವಿರಾರು ಮಾವಿನ ಹಣ್ಣುಗಳನ್ನು ನಮಗೆ ನೀಡುತ್ತದೆ.
ಇದನ್ನು ಕೇಳಿದ ಕೂಡಲೇ ಆ ಬಾಲಕ ಮನೆಗ ಓಡುತ್ತಾನೆ. ತನಗೆ ಆಡಲೆಂದು ತಂದಿದ್ದ ಪಿಸ್ತೂಲೊಂದನ್ನು ತಂದು ತಾನು ಸಹ ನೆಡಲು ಆರಂಭಿಸುತ್ತಾನೆ. ಆಗ ಪ್ರಶ್ನೆ ಕೇಳುವ ಸರದಿ ಆತನ ಚಿಕ್ಕಪ್ಪನದಾಗಿರುತ್ತದೆ.
ಏನು ಮಾಡುತ್ತಿದ್ದೀಯ ಮಗು?
ಕಾಣುತ್ತಿಲ್ಲವೇ, ಬಂದೂಕು ನೆಡುತ್ತಿದ್ದೇನೆ
ಏಕೆ ನೆಡುತ್ತಿದ್ದೀಯಾ?
ಏಕೆಂದರೆ ಇದು ಬಂದೂಕಿನ ಗಿಡವಾಗುತ್ತದೆ, ನಂತರ ಬೆಳೆದು ಮರವಾಗುತ್ತದೆ.
ಅದರಿಂದ ಏನು ಪ್ರಯೋಜನ?
ಇದು ಸಾವಿರಾರು ಬಂದೂಕೂಗಳನ್ನು ನಮಗೆ ನೀಡುತ್ತದೆ. ಆ ಬಂದೂಕುಗಳಿಂದ ನಮ್ಮನ್ನು ಹಿಂಸಿಸುತ್ತಿರುವ ಬ್ರೀಟಿಷರನ್ನು ಸುಟ್ಟು ಈ ದೇಶದಿಂದ ಓಡಿಸುತ್ತೇನೆ ಎನ್ನುತ್ತಾನೆ ಆ ಪುಟ್ಟ ಬಾಲಕ.
ಎದುರಿಗಿದ್ದ ಆತನ ಚಿಕ್ಕಪ್ಪನ ಬಾಯಲ್ಲಿ ಮಾತೇ ಬರುವುದಿಲ್ಲ. ಆ ಬಾಲಕನ್ನು ಅಪ್ಪಿ ಕಣ್ಣಿರಿಡುತ್ತಾರೆ.
ಆ ಬಾಲಕನ ಹೆಸರು ಭಗತ್ ಸಿಂಗ್. ಆಗ ಆತನ ವಯಸ್ಸು ಕೇವಲ 12 ವರ್ಷ. ಆತನ ಚಿಕ್ಕಪ್ಪನ ಹೆಸರು ಸರ್ದಾರ್ ಅಜಿತ ಸಿಂಗ್.

ಸ್ನೇಹಿತರೇ ಇದು ಸತ್ಯವೋ, ಸುಳ್ಳೋ ಎಂಬುದು ಮುಖ್ಯವಲ್ಲ. ಇಂದು ಬಹಳಷ್ಟು ಕಡೆ ಈ ದಂತಕಥೆ ಹಬ್ಬಿದೆ. ಭಗತ್ ಸಿಂಗ್ ಜೀವನ ಮತ್ತು ಹೋರಾಟ ಕುರಿತ ಸಿನಿಮಾಗಳಲ್ಲಿ ಇದು ಬರುತ್ತದೆ. ಇದರ ಸಾರಂಶ ಮಾತ್ರ ಎಂತವರನ್ನು ಸ್ಫೂರ್ತಿಗೊಳಿಸುತ್ತದೆ. 12 ವರ್ಷದ ಬಾಲಕ ಭಗತ್ ಸಿಂಗ್ ಗಿದ್ದ ದೇಶಪ್ರೇಮ, ಶತ್ರುಗಳ ವಿರುದ್ಧ ಇದ್ದ ಸಿಟ್ಟು, ಆಕ್ರೋಶ, ತಾನು ಹತಾತ್ಮನಾಗುವವರೆಗೂ ಇದ್ದ ಬದ್ಧತೆ, ಭಾರತದ ಭವಿಷ್ಯದ ಬಗ್ಗೆ ಇದ್ದ ಸ್ಪಷ್ಟತೆ ಭಗತ್ ಸಿಂಗ್‍ರನ್ನು ಪ್ರಪಂಪದ ಮೇರು ಹೋರಾಟಗಾರನ ಸ್ಥಾನಕ್ಕೆ ಏರಿಸಿದೆ.

ನೂರು ವರ್ಷಗಳ ಹಿಂದೆ ನಡೆದಿದ್ದ ಜಲಿಯನ್ ವಾಲಾಬಾಗ್ ದುರಂತದ ಹುತಾತ್ಮರಿಗೆ ನಾವು ಗೌರವ ಮತ್ತು ನ್ಯಾಯ ಸಲ್ಲಿಸಬೇಕಿದೆ. ಇಂದಿಗೂ ಕೂಡ ಜನರ ಹಕ್ಕುಗಳು ಅಪಾಯದ ಅಂಚಿನಲ್ಲಿವೆ. ಬಡವರು, ತಳಸಮುದಾಯದವರು, ಮಹಿಳೆಯರು ಆತಂಕದಲ್ಲಿದ್ದಾರೆ. ಅವರ ಪರವಾಗಿ ದಿಟ್ಟವಾಗಿ ದನಿಯೆತ್ತುವ ತುರ್ತು ಹಿಂದಿಗಿಂತಲೂ ಹೆಚ್ಚು ಅನಿವಾರ್ಯವಾಗಿದೆ. ನೂರು ವರ್ಷದ ಹಿಂದೆ ಮಡಿದ ವೀರರ ತ್ಯಾಗ ಬಲಿದಾನಗಳನ್ನು ಸ್ಫೂರ್ತಿಯಾಗಿ ಪಡೆದು ಹೋರಾಟ ಮುಂದುವರೆಸೋಣ. ಅವರಿಗೆ ನಿಜವಾದ ಗೌರವ ಸಲ್ಲಿಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...