Homeಅಂಕಣಗಳುಮೋದಿ ಆತ್ಮನಿರ್ಭರತೆ V/S ಸ್ವದೇಶಿ, ಸ್ವಾವಲಂಬನೆ, ಸ್ವಾಭಿಮಾನ

ಮೋದಿ ಆತ್ಮನಿರ್ಭರತೆ V/S ಸ್ವದೇಶಿ, ಸ್ವಾವಲಂಬನೆ, ಸ್ವಾಭಿಮಾನ

- Advertisement -
- Advertisement -

ಕೊರೋನ ಮಹಾಮಾರಿ ಹಿಡಿಯಾಗಿ ಪ್ರಪಂಚವನ್ನೇ ಕಾಡಲುಹತ್ತಿದ್ದರಿಂದ ಯಾವ ದೇಶದವರೂ ಭಾರತಕ್ಕೆ ಬಂಡವಾಳ ತೆಗೆದುಕೊಂಡು ಬಂದು ಉದ್ಯಮಗಳನ್ನು ಆರಂಭಿಸುವ ಸಾಧ್ಯತೆಗಳಿಲ್ಲ ಎಂಬುದನ್ನು ಮನಗಂಡು ಈಗ ಹೊಸ ರಾಗ ಹಾಡಲು ಮೋದಿಯವರು ತೊಡಗಿದ್ದಾರೆ. ಅವರ ಇಂದಿನ ಸ್ಲೋಗನ್‍ಗಳೆಂದರೆ ಆತ್ಮ ನಿರ್ಭರತೆ, ಸ್ವದೇಶಿ, ಸ್ವಾವಲಂಬನೆ, ಸ್ವಾಭಿಮಾನಗಳನ್ನು ಬೆಳಸಿಕೊಳ್ಳುವುದು. ಇದು ಸರಿಯಾದ ತೀರ್ಮಾನವೇ ಸರಿ. ಆದರೆ ಈ ತತ್ವಗಳಿಗೆ ಮೋದಿ ಸರ್ಕಾರ ಮುಂದೆ ಎಂದೆಂದೂ ಬದ್ಧವಾಗಿ ಇರುತ್ತದೆಯೇ ಎಂಬುದು ಮೂಲ ಭೂತ ಪ್ರಶ್ನೆ.

ಕೊರೋನ ವ್ಯಾದಿ ವಿಶ್ವದೆಲ್ಲಡೆ ಇಲ್ಲವಾಗಿ ಆರ್ಥಿಕ ಚೇತರಿಕೆಯೂ ಆದಮೇಲೂ ಆತ್ಮನಿರ್ಭರತೆ ಇವರ ಸ್ಲೋಗನ್ ಆಗಿರುತ್ತದೆಯೇ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಇದನ್ನು ಕಾಲವೇ ನಿರ್ಧರಿಸುತ್ತದೆ.

ಆತ್ಮನಿರ್ಭರತೆ ಇನ್ನು ಮುಂದೆ ಭಾರತ ಸರ್ಕಾರದ ನೀತಿ ಎಂದು ಮೋದಿಯವರು ಘೋಷಿಸಿದರೆ ಮಾತ್ರ ಇದು ಬರಿ ಸ್ಲೋಗನ್ ಅಲ್ಲ, ನಮ್ಮ ರಾಷ್ಟ್ರ ನೀತಿ ಎಂದು ನಾವು ನಂಬಬಹುದು. ಸ್ವದೇಶಿ, ಸ್ವಾವಲಂಬನೆ, ಸ್ವಾಭಿಮಾನ, ಇವು ಬರಿಯ ಸ್ಲೋಗನ್‍ಗಳಾಗಬಾರದು.

ಸ್ವದೇಶಿ ಒಂದು ವ್ರತವಾಗಬೇಕು. ಸರ್ಕಾರ ಈ ವ್ರತವನ್ನು ಕಾರ್ಯಗೊಳಿಸಬೇಕು. ಜಪಾನಿನಲ್ಲಿ ಬೃಹತ್ ಯಂತ್ರಗಳಿಂದ ವಿವಿಧ ವಸ್ತುಗಳನ್ನು ತಯಾರಿಸುತ್ತಾರೆ. ಆದರೆ ಅವೆಲ್ಲವೂ ರಫ್ತಿಗಾಗಿ. ಅವರ ನಿತ್ಯದ ಅಗತ್ಯತೆಯ ವಸ್ತುಗಳೆನ್ನೆಲ್ಲ ಅವರು ಗೃಹೋದ್ಯೋಗದ ಮೂಲಕ ಪಡೆಯುತ್ತಾರೆ. ಗೃಹೋದ್ಯೋಗದಿಂದ ತಯಾರಾದ ಪದಾರ್ಥಗಳನ್ನು ಇವು ನಮ್ಮ ಹೆಮ್ಮೆಯ ಪದಾರ್ಥಗಳೆಂದು ಭಾವಿಸಿ ಬಳಸುತ್ತಾರೆ. ಇದೇ ಆತ್ಮನಿರ್ಭರತೆ. ಇದಕ್ಕೆ ಮೋದಿಯವರ ಸಹಮತ ಇದೆಯೇ? ನಮ್ಮದು ಪ್ರಜಾ ಸಂಖ್ಯೆ ಅಧಿಕವಾಗಿರುವ ದೇಶ. ಇಲ್ಲಿ ಜನರ ಕೈಗೆ ಕೆಲಸ ಕೊಡಬೇಕು. ಅದಕ್ಕೆ ಅನುಗಣವಾದ ಅಪ್ರೋಪ್ರಿಯೇಟ್ ಟೆಕ್ನಾಲಾಜಿಯನ್ನೇ ನಾವು ಅಳವಡಿಸಿಕೊಳ್ಳಬೇಕು. ಬೃಹತ್ ಯಂತ್ರಗಳು, ದೈತ್ಯ ಯಂತ್ರಗಳು, ಸ್ವಯಂ ಚಾಲಿತ ಯಂತ್ರಗಳು ನಮ್ಮ ಜನರು ಉದ್ಯೋಗವನ್ನು ಕಸಿದುಕೊಳ್ಳುತ್ತವೆ. ಬಡಜನರ ಹೊಟ್ಟೆಯ ಮೇಲೆ ಹೊಡೆಯುತ್ತವೆ.

ಆದ್ದರಿಂದ ನಮ್ಮ ಜನರ ಉದ್ಯೋಗಗಳನ್ನು ಕಸಿಯದ ಯಂತ್ರೋದ್ಯಮಕ್ಕೆ ನಮ್ಮ ಆದ್ಯತೆ ಎಂದು ಸರ್ಕಾರ ಘೋಷಿಸುತ್ತದೆಯೆ?

ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಎಂಬ ಸ್ಲೋಗನ್‍ಗಳನ್ನು ಮೋದಿಯವರು ಉಚ್ಛರಿಸಿದರು. ಮೇಡ್ ಇನ್ ಇಂಡಿಯಾ ಸ್ಲೋಗನ್ ಅನ್ನು ಇಂದಿರಾ ಗಾಂಧಿ ಹಿಂದೆಯೆ ಘೋಷಣೆ ಮಾಡಿದ್ದರು. ಈ ಎರಡು ಘೋಷಣೆಗಳು ದೋಷಪೂರಿತವಾದದ್ದು. ಭಾರತದಲ್ಲಿ ತಯಾರಾದ ಮಾತ್ರಕ್ಕೆ ಆ ಪದಾರ್ಥಗಳು ಸ್ವದೇಶಿ ಅಲ್ಲ. ಬಂಡವಾಳಗಾರರು ಹೆಚ್ಚಿನ ಲಾಭಗಳಿಕೆಗಾಗಿಯೇ ಉದ್ಯಮ ನಡೆಸುವುದು. ಬಂಡವಾಳಶಾಹಿಗಳು ಭಾರತಿಯರಿರಬಹುದು, ಬಹುರಾಷ್ಟ್ರೀಯರಿರಬಹುದು. ಅವರಿಬ್ಬರಿದೂ ಉದ್ದೇಶ ಒಂದೆ. ಅದೆಂದರೆ ತಮ್ಮ ಶಕ್ತಿ ಮೀರಿ ಲಾಭ ಗಳಿಸುವುದು. ಇದರಲ್ಲಿ ಒಂದು ನಾಡ ಕತ್ತಿ, ಮತ್ತೊಂದು ಸೀಮೆಯ ಕತ್ತಿ. ಒಟ್ಟಿನಲ್ಲಿ ಅವರೆಡು ಕ್ಷೌರದ ಕತ್ತಿಗಳೆ. ಅವೆರಡು ಬಯಸುವುದು ಹೆಚ್ಚಿಗೆ ಲಾಭ, ಅಗ್ಗದ ಶ್ರಮಶಕ್ತಿ, ಸಂಪನ್ಮೂಲಗಳ ಲೂಟಿ.

ಆದ್ದರಿಂದ ಈ ಲೂಟಿಕೋರರು ಭಾರತದ ಉದ್ಯಮಪತಿಗಳೆ ಆಗಿದ್ದರೂ, ಬೇರೆ ರಾಷ್ಟ್ರಗಳ ಶ್ರೀಮಂತರೇ ಆಗಿದ್ದರೂ ಅವರನ್ನು ದೂರ ಇಡಬೇಕು. ಬದಲಿಗೆ ಸರ್ಕಾರ, ಸ್ಥಳೀಯ ಸಂಸ್ಥೆಗಳು ಮತ್ತು ಸಹಕಾರಿ ಸಂಸ್ಥೆಗಳ ಮೂಲಕ ಸಣ್ಣ ಕೈಗಾರಿಕೆಗಳಲ್ಲಿನ ಉತ್ಪಾದನೆ ಮಾತ್ರವೇ ಸ್ವದೇಶಿ ಅನಿಸಿಕೊಳ್ಳುತ್ತದೆ.

ನಮ್ಮಲ್ಲಿ ತಯಾರಾಗದ ಪದಾರ್ಥಗಳನ್ನು ತಯಾರು ಮಾಡಲು ಪರದೇಶದ ಕಂಪನಿಗಳನ್ನು ಭಾರತಕ್ಕೆ ಕರೆತರಬಹುದು. ಆದರೆ ಒಂದು ಕರಾರಿನ ಮೇಲೆ ಮಾತ್ರ. ಅದೆಂದರೆ ಹಾಗೇ ಬರುವವರು ಹತ್ತು ವರ್ಷಗಳ ಕಾಲ ಮಾತ್ರ ಭಾರತದಲ್ಲಿ ತಮ್ಮ ಉದ್ಯಮವನ್ನು ನಡೆಸಬಹುದು ಮತ್ತು ನಮ್ಮ ಜನರಿಗೆ ಆ ಪದಾರ್ಥಗಳ ತಯಾರಿಕೆಯ ತಂತ್ರಜ್ಞಾನವನ್ನು ಕಲಿಸಿಕೊಟ್ಟು ಹೋಗಬೇಕು.

ವಲಸಿಗ ಕಾರ್ಮಿಕರು ಈಗ ಬಹುಸಂಖ್ಯೆಯಲ್ಲಿ ನಗರಗಳನ್ನು, ಪಟ್ಟಣದಗಳನ್ನು ಬಿಟ್ಟು ಗ್ರಾಮಗಳಿಗೆ ಹೋಗಿದ್ದಾರೆ. ಅವರು ತಮ್ಮ ಗ್ರಾಮಗಳಲ್ಲಿ ಜೀವನ ನಡೆಸುವುದಾದರೂ ಹೇಗೆ? ಭೂಮಿತಿ ಶಾಸನವನ್ನು ಪುನಃ ಪರಿಶೀಲಿಸಿ ಸೀಲಿಂಗ್ ಲಿಮಿಟ್ ಅನ್ನು ಇಳಿಸಿ ಯಾರು ವ್ಯವಸಾಯದಲ್ಲಿ ತೊಡಗಿಕೊಳ್ಳಲು ಆಶಿಸುವರೋ ಅವರಿಗೆ ತಲಾ ನಾಲ್ಕುವರೆ ಎಕರೆ ಕುಷ್ಕಿ ಜಮೀನನ್ನು ಮಂಜೂರು ಮಾಡಬೇಕು. ಹೀಗೆ ಸರ್ಕಾರ ಕೊಟ್ಟ ಭೂಮಿಯನ್ನು ಮಾರಾಟ-ಭೋಗ್ಯ ಯಾವುದನ್ನು ಮಾಡುವ ಆಗಿಲ್ಲ ಎಂದು ಕಾನೂನು ಮಾಡಬೇಕು. ಉಳಿದ ವಲಸಿಗರಿಗೆ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಿ ಕೆಲಸ ಕೊಡಬೇಕು. ನಾಲ್ಕು ಹಳ್ಳಿಗಳಿಗೆ ಸೇರಿದಂತೆ ಒಂದು ಸಣ್ಣ ಕೈಗಾರಿಕೆ ಸ್ಥಾಪಿತವಾಗುವದಾದರೆ ಅವರಿಗೆಲ್ಲ ಕೆಲಸ ಕೊಡಬಹುದು.

ಗ್ರಾಮಗಳಲ್ಲಿ ಇರುವ ಬಡಗಿ, ಕಮ್ಮಾರ, ನೇಕಾರ, ಚಮ್ಮಾರ, ಇವರಿಗೆಲ್ಲ ಶಿಕ್ಷಣ ಕೊಟ್ಟು ತಮ್ಮ ವೃತ್ತಿ ಕೌಶಲವನ್ನು ಬೆಳೆಸಿಕೊಳ್ಳಲು ಮಾರ್ಗದರ್ಶನ ಮಾಡಬೇಕು. ನಲ್ಲಿ, ಮೋಟಾರ್ ಸೈಕಲ್, ರೇಡಿಯೋ, ಟಿ.ವಿ. ಕೊಳವೇ ಬಾವಿ, ಗಡಿಯಾರ, ಮುಂತಾದವುಗಳ ರಿಪೇರಿ ಕೆಲಸ ಕಲಿಸಿ ಅವರಿಗೆ ಒಬ್ಬೊಬ್ಬರಿಗೂ ಒಂದು ಕಿಟ್ ಕೊಟ್ಟರೇ ಅವರು ಜೀವನ ನಿರ್ವಹಣೆಗೆ ಈ ಕಸುಬುಗಳನ್ನು ಅವಲಂಬಿಸಿಯಾರು. ತರಕಾರಿ, ಹಣ್ಣು ಇವುಗಳ ಸಂಸ್ಕರಣ ಘಟಕಗಳನ್ನು ಸ್ಥಾಪಿಸಿ ಜನರಿಗೆ ಕೆಲಸ ಕೊಡಬಹುದು. ಈ ಮೂಲಕ ಗ್ರಾಮೀಣ ಜನರ ಬಡತನವನ್ನು ದೂರಮಾಡಬಹುದು. ಇದನ್ನೆಲ್ಲ ಮೋದಿ ಸರ್ಕಾರ ಮಾಡೀತೇ ಎಂದು ಕುತೂಹಲದಿಂದ ಕಾದುಕೂತು ನೋಡಬಯಸುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...