Homeಅಂಕಣಗಳುಮೋದಿ ಆತ್ಮನಿರ್ಭರತೆ V/S ಸ್ವದೇಶಿ, ಸ್ವಾವಲಂಬನೆ, ಸ್ವಾಭಿಮಾನ

ಮೋದಿ ಆತ್ಮನಿರ್ಭರತೆ V/S ಸ್ವದೇಶಿ, ಸ್ವಾವಲಂಬನೆ, ಸ್ವಾಭಿಮಾನ

- Advertisement -
- Advertisement -

ಕೊರೋನ ಮಹಾಮಾರಿ ಹಿಡಿಯಾಗಿ ಪ್ರಪಂಚವನ್ನೇ ಕಾಡಲುಹತ್ತಿದ್ದರಿಂದ ಯಾವ ದೇಶದವರೂ ಭಾರತಕ್ಕೆ ಬಂಡವಾಳ ತೆಗೆದುಕೊಂಡು ಬಂದು ಉದ್ಯಮಗಳನ್ನು ಆರಂಭಿಸುವ ಸಾಧ್ಯತೆಗಳಿಲ್ಲ ಎಂಬುದನ್ನು ಮನಗಂಡು ಈಗ ಹೊಸ ರಾಗ ಹಾಡಲು ಮೋದಿಯವರು ತೊಡಗಿದ್ದಾರೆ. ಅವರ ಇಂದಿನ ಸ್ಲೋಗನ್‍ಗಳೆಂದರೆ ಆತ್ಮ ನಿರ್ಭರತೆ, ಸ್ವದೇಶಿ, ಸ್ವಾವಲಂಬನೆ, ಸ್ವಾಭಿಮಾನಗಳನ್ನು ಬೆಳಸಿಕೊಳ್ಳುವುದು. ಇದು ಸರಿಯಾದ ತೀರ್ಮಾನವೇ ಸರಿ. ಆದರೆ ಈ ತತ್ವಗಳಿಗೆ ಮೋದಿ ಸರ್ಕಾರ ಮುಂದೆ ಎಂದೆಂದೂ ಬದ್ಧವಾಗಿ ಇರುತ್ತದೆಯೇ ಎಂಬುದು ಮೂಲ ಭೂತ ಪ್ರಶ್ನೆ.

ಕೊರೋನ ವ್ಯಾದಿ ವಿಶ್ವದೆಲ್ಲಡೆ ಇಲ್ಲವಾಗಿ ಆರ್ಥಿಕ ಚೇತರಿಕೆಯೂ ಆದಮೇಲೂ ಆತ್ಮನಿರ್ಭರತೆ ಇವರ ಸ್ಲೋಗನ್ ಆಗಿರುತ್ತದೆಯೇ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಇದನ್ನು ಕಾಲವೇ ನಿರ್ಧರಿಸುತ್ತದೆ.

ಆತ್ಮನಿರ್ಭರತೆ ಇನ್ನು ಮುಂದೆ ಭಾರತ ಸರ್ಕಾರದ ನೀತಿ ಎಂದು ಮೋದಿಯವರು ಘೋಷಿಸಿದರೆ ಮಾತ್ರ ಇದು ಬರಿ ಸ್ಲೋಗನ್ ಅಲ್ಲ, ನಮ್ಮ ರಾಷ್ಟ್ರ ನೀತಿ ಎಂದು ನಾವು ನಂಬಬಹುದು. ಸ್ವದೇಶಿ, ಸ್ವಾವಲಂಬನೆ, ಸ್ವಾಭಿಮಾನ, ಇವು ಬರಿಯ ಸ್ಲೋಗನ್‍ಗಳಾಗಬಾರದು.

ಸ್ವದೇಶಿ ಒಂದು ವ್ರತವಾಗಬೇಕು. ಸರ್ಕಾರ ಈ ವ್ರತವನ್ನು ಕಾರ್ಯಗೊಳಿಸಬೇಕು. ಜಪಾನಿನಲ್ಲಿ ಬೃಹತ್ ಯಂತ್ರಗಳಿಂದ ವಿವಿಧ ವಸ್ತುಗಳನ್ನು ತಯಾರಿಸುತ್ತಾರೆ. ಆದರೆ ಅವೆಲ್ಲವೂ ರಫ್ತಿಗಾಗಿ. ಅವರ ನಿತ್ಯದ ಅಗತ್ಯತೆಯ ವಸ್ತುಗಳೆನ್ನೆಲ್ಲ ಅವರು ಗೃಹೋದ್ಯೋಗದ ಮೂಲಕ ಪಡೆಯುತ್ತಾರೆ. ಗೃಹೋದ್ಯೋಗದಿಂದ ತಯಾರಾದ ಪದಾರ್ಥಗಳನ್ನು ಇವು ನಮ್ಮ ಹೆಮ್ಮೆಯ ಪದಾರ್ಥಗಳೆಂದು ಭಾವಿಸಿ ಬಳಸುತ್ತಾರೆ. ಇದೇ ಆತ್ಮನಿರ್ಭರತೆ. ಇದಕ್ಕೆ ಮೋದಿಯವರ ಸಹಮತ ಇದೆಯೇ? ನಮ್ಮದು ಪ್ರಜಾ ಸಂಖ್ಯೆ ಅಧಿಕವಾಗಿರುವ ದೇಶ. ಇಲ್ಲಿ ಜನರ ಕೈಗೆ ಕೆಲಸ ಕೊಡಬೇಕು. ಅದಕ್ಕೆ ಅನುಗಣವಾದ ಅಪ್ರೋಪ್ರಿಯೇಟ್ ಟೆಕ್ನಾಲಾಜಿಯನ್ನೇ ನಾವು ಅಳವಡಿಸಿಕೊಳ್ಳಬೇಕು. ಬೃಹತ್ ಯಂತ್ರಗಳು, ದೈತ್ಯ ಯಂತ್ರಗಳು, ಸ್ವಯಂ ಚಾಲಿತ ಯಂತ್ರಗಳು ನಮ್ಮ ಜನರು ಉದ್ಯೋಗವನ್ನು ಕಸಿದುಕೊಳ್ಳುತ್ತವೆ. ಬಡಜನರ ಹೊಟ್ಟೆಯ ಮೇಲೆ ಹೊಡೆಯುತ್ತವೆ.

ಆದ್ದರಿಂದ ನಮ್ಮ ಜನರ ಉದ್ಯೋಗಗಳನ್ನು ಕಸಿಯದ ಯಂತ್ರೋದ್ಯಮಕ್ಕೆ ನಮ್ಮ ಆದ್ಯತೆ ಎಂದು ಸರ್ಕಾರ ಘೋಷಿಸುತ್ತದೆಯೆ?

ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಎಂಬ ಸ್ಲೋಗನ್‍ಗಳನ್ನು ಮೋದಿಯವರು ಉಚ್ಛರಿಸಿದರು. ಮೇಡ್ ಇನ್ ಇಂಡಿಯಾ ಸ್ಲೋಗನ್ ಅನ್ನು ಇಂದಿರಾ ಗಾಂಧಿ ಹಿಂದೆಯೆ ಘೋಷಣೆ ಮಾಡಿದ್ದರು. ಈ ಎರಡು ಘೋಷಣೆಗಳು ದೋಷಪೂರಿತವಾದದ್ದು. ಭಾರತದಲ್ಲಿ ತಯಾರಾದ ಮಾತ್ರಕ್ಕೆ ಆ ಪದಾರ್ಥಗಳು ಸ್ವದೇಶಿ ಅಲ್ಲ. ಬಂಡವಾಳಗಾರರು ಹೆಚ್ಚಿನ ಲಾಭಗಳಿಕೆಗಾಗಿಯೇ ಉದ್ಯಮ ನಡೆಸುವುದು. ಬಂಡವಾಳಶಾಹಿಗಳು ಭಾರತಿಯರಿರಬಹುದು, ಬಹುರಾಷ್ಟ್ರೀಯರಿರಬಹುದು. ಅವರಿಬ್ಬರಿದೂ ಉದ್ದೇಶ ಒಂದೆ. ಅದೆಂದರೆ ತಮ್ಮ ಶಕ್ತಿ ಮೀರಿ ಲಾಭ ಗಳಿಸುವುದು. ಇದರಲ್ಲಿ ಒಂದು ನಾಡ ಕತ್ತಿ, ಮತ್ತೊಂದು ಸೀಮೆಯ ಕತ್ತಿ. ಒಟ್ಟಿನಲ್ಲಿ ಅವರೆಡು ಕ್ಷೌರದ ಕತ್ತಿಗಳೆ. ಅವೆರಡು ಬಯಸುವುದು ಹೆಚ್ಚಿಗೆ ಲಾಭ, ಅಗ್ಗದ ಶ್ರಮಶಕ್ತಿ, ಸಂಪನ್ಮೂಲಗಳ ಲೂಟಿ.

ಆದ್ದರಿಂದ ಈ ಲೂಟಿಕೋರರು ಭಾರತದ ಉದ್ಯಮಪತಿಗಳೆ ಆಗಿದ್ದರೂ, ಬೇರೆ ರಾಷ್ಟ್ರಗಳ ಶ್ರೀಮಂತರೇ ಆಗಿದ್ದರೂ ಅವರನ್ನು ದೂರ ಇಡಬೇಕು. ಬದಲಿಗೆ ಸರ್ಕಾರ, ಸ್ಥಳೀಯ ಸಂಸ್ಥೆಗಳು ಮತ್ತು ಸಹಕಾರಿ ಸಂಸ್ಥೆಗಳ ಮೂಲಕ ಸಣ್ಣ ಕೈಗಾರಿಕೆಗಳಲ್ಲಿನ ಉತ್ಪಾದನೆ ಮಾತ್ರವೇ ಸ್ವದೇಶಿ ಅನಿಸಿಕೊಳ್ಳುತ್ತದೆ.

ನಮ್ಮಲ್ಲಿ ತಯಾರಾಗದ ಪದಾರ್ಥಗಳನ್ನು ತಯಾರು ಮಾಡಲು ಪರದೇಶದ ಕಂಪನಿಗಳನ್ನು ಭಾರತಕ್ಕೆ ಕರೆತರಬಹುದು. ಆದರೆ ಒಂದು ಕರಾರಿನ ಮೇಲೆ ಮಾತ್ರ. ಅದೆಂದರೆ ಹಾಗೇ ಬರುವವರು ಹತ್ತು ವರ್ಷಗಳ ಕಾಲ ಮಾತ್ರ ಭಾರತದಲ್ಲಿ ತಮ್ಮ ಉದ್ಯಮವನ್ನು ನಡೆಸಬಹುದು ಮತ್ತು ನಮ್ಮ ಜನರಿಗೆ ಆ ಪದಾರ್ಥಗಳ ತಯಾರಿಕೆಯ ತಂತ್ರಜ್ಞಾನವನ್ನು ಕಲಿಸಿಕೊಟ್ಟು ಹೋಗಬೇಕು.

ವಲಸಿಗ ಕಾರ್ಮಿಕರು ಈಗ ಬಹುಸಂಖ್ಯೆಯಲ್ಲಿ ನಗರಗಳನ್ನು, ಪಟ್ಟಣದಗಳನ್ನು ಬಿಟ್ಟು ಗ್ರಾಮಗಳಿಗೆ ಹೋಗಿದ್ದಾರೆ. ಅವರು ತಮ್ಮ ಗ್ರಾಮಗಳಲ್ಲಿ ಜೀವನ ನಡೆಸುವುದಾದರೂ ಹೇಗೆ? ಭೂಮಿತಿ ಶಾಸನವನ್ನು ಪುನಃ ಪರಿಶೀಲಿಸಿ ಸೀಲಿಂಗ್ ಲಿಮಿಟ್ ಅನ್ನು ಇಳಿಸಿ ಯಾರು ವ್ಯವಸಾಯದಲ್ಲಿ ತೊಡಗಿಕೊಳ್ಳಲು ಆಶಿಸುವರೋ ಅವರಿಗೆ ತಲಾ ನಾಲ್ಕುವರೆ ಎಕರೆ ಕುಷ್ಕಿ ಜಮೀನನ್ನು ಮಂಜೂರು ಮಾಡಬೇಕು. ಹೀಗೆ ಸರ್ಕಾರ ಕೊಟ್ಟ ಭೂಮಿಯನ್ನು ಮಾರಾಟ-ಭೋಗ್ಯ ಯಾವುದನ್ನು ಮಾಡುವ ಆಗಿಲ್ಲ ಎಂದು ಕಾನೂನು ಮಾಡಬೇಕು. ಉಳಿದ ವಲಸಿಗರಿಗೆ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಿ ಕೆಲಸ ಕೊಡಬೇಕು. ನಾಲ್ಕು ಹಳ್ಳಿಗಳಿಗೆ ಸೇರಿದಂತೆ ಒಂದು ಸಣ್ಣ ಕೈಗಾರಿಕೆ ಸ್ಥಾಪಿತವಾಗುವದಾದರೆ ಅವರಿಗೆಲ್ಲ ಕೆಲಸ ಕೊಡಬಹುದು.

ಗ್ರಾಮಗಳಲ್ಲಿ ಇರುವ ಬಡಗಿ, ಕಮ್ಮಾರ, ನೇಕಾರ, ಚಮ್ಮಾರ, ಇವರಿಗೆಲ್ಲ ಶಿಕ್ಷಣ ಕೊಟ್ಟು ತಮ್ಮ ವೃತ್ತಿ ಕೌಶಲವನ್ನು ಬೆಳೆಸಿಕೊಳ್ಳಲು ಮಾರ್ಗದರ್ಶನ ಮಾಡಬೇಕು. ನಲ್ಲಿ, ಮೋಟಾರ್ ಸೈಕಲ್, ರೇಡಿಯೋ, ಟಿ.ವಿ. ಕೊಳವೇ ಬಾವಿ, ಗಡಿಯಾರ, ಮುಂತಾದವುಗಳ ರಿಪೇರಿ ಕೆಲಸ ಕಲಿಸಿ ಅವರಿಗೆ ಒಬ್ಬೊಬ್ಬರಿಗೂ ಒಂದು ಕಿಟ್ ಕೊಟ್ಟರೇ ಅವರು ಜೀವನ ನಿರ್ವಹಣೆಗೆ ಈ ಕಸುಬುಗಳನ್ನು ಅವಲಂಬಿಸಿಯಾರು. ತರಕಾರಿ, ಹಣ್ಣು ಇವುಗಳ ಸಂಸ್ಕರಣ ಘಟಕಗಳನ್ನು ಸ್ಥಾಪಿಸಿ ಜನರಿಗೆ ಕೆಲಸ ಕೊಡಬಹುದು. ಈ ಮೂಲಕ ಗ್ರಾಮೀಣ ಜನರ ಬಡತನವನ್ನು ದೂರಮಾಡಬಹುದು. ಇದನ್ನೆಲ್ಲ ಮೋದಿ ಸರ್ಕಾರ ಮಾಡೀತೇ ಎಂದು ಕುತೂಹಲದಿಂದ ಕಾದುಕೂತು ನೋಡಬಯಸುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...