Homeಅಂಕಣಗಳುಬೀದಿಗೆ ಬಿದ್ದ ತೊಗಲುಗೊಂಬೆ ಕಲಾವಿದೆ ಗೌರಮ್ಮ

ಬೀದಿಗೆ ಬಿದ್ದ ತೊಗಲುಗೊಂಬೆ ಕಲಾವಿದೆ ಗೌರಮ್ಮ

- Advertisement -
- Advertisement -
ಎಲೆಮರೆ-32

ಊರಿಂದ ಊರಿಗೆ ಸಂಚರಿಸಿ ಸಾರ್ವಜನಿಕ ಕಾರ್ಯಕ್ರಮ ಕೊಡುತ್ತಾ ಜೀವನ ನಡೆಸುತ್ತಿದ್ದ ರಾಜ್ಯದ ಸಾವಿರಾರು ಜನಪದ ಮತ್ತು ರಂಗಭೂಮಿ ಕಲಾವಿದರು ಕೋರೋನ ಲಾಕ್‍ಡೌನ್ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಲಾವಿದರಿಗೆ ಸಂಸ್ಕೃತಿ ಇಲಾಖೆ ಎರಡು ಸಾವಿರ ಧನ ಸಹಾಯ ಘೋಷಿಸಿ ಅರ್ಜಿ ಆಹ್ವಾನಿಸಿದರೂ ಆ ಹಣವಿನ್ನು ಕಲಾವಿದರಿಗೆ ತಲುಪಿಲ್ಲ. ಅಷ್ಟಕ್ಕೂ ಈ ಅರ್ಜಿ ಹಾಕಲೂ ಗೊತ್ತಾಗದ, ಗೊತ್ತಾದರೂ ಅದಕ್ಕೆ ಬೇಕಾದ ದಾಖಲಾತಿಗಳಿಲ್ಲದ ಸಾವಿರಾರು ಕಲಾವಿದರಿಗೆ ನಿತ್ಯದ ಊಟಕ್ಕೂ ಪರದಾಡುವ ಸ್ಥಿತಿ ಬಂದಿದೆ. ಹೀಗೆ ಹುಡುಕುತ್ತಾ ಹೋದರೆ ನೂರಾರು ಕಲಾವಿದರ ಗೋಳಿನ ಕಥೆಗಳನ್ನು ಕೇಳಬಹುದಾಗಿದೆ. ಅಂತಹ ಕಲಾವಿದರಲ್ಲಿ ರಾಮನಗರದ ಚಿತ್ತಂಗ್‍ವಾಡಿಯ ಅಂಚಿನಲ್ಲಿ ಪುಟ್ಟ ಗುಡಿಸಲು ಹಾಕಿಕೊಂಡು ಒಪ್ಪತ್ತಿನ ಊಟಕ್ಕೂ ಪರದಾಡುತ್ತಾ ಸಂಕಷ್ಟಕ್ಕೆ ಸಿಲುಕಿರುವವರು ಕಲಾವಿದೆ ತೊಗಲುಗೊಂಬೆ ಗೌರಮ್ಮ.

ಈ ಪುಟ್ಟ ಗುಡಿಸಲಲ್ಲಿ ಕೂತು ಗೌರಮ್ಮನ ಕಲಾ ಬದುಕಿನ ಬಗ್ಗೆ ಕೇಳಿದರೆ, ಎಲ್ಲಾ ಸಂಕಷ್ಟಗಳನ್ನು ಮರೆತು ಚೈತನ್ಯ ಮೂಡಿದಂತೆ ಗಡುಸು ಧ್ವನಿಯಲ್ಲಿ ತನ್ನ ಕಲಾ ಬದುಕಿನ ವಿವಿಧ ಘಟ್ಟಗಳನ್ನು ಹೇಳತೊಡಗುತ್ತಾರೆ. ತನ್ನ ತಂದೆ ತಾಯಿ ಇಬ್ಬರೂ ರಂಗಭೂಮಿ ಮತ್ತು ತೊಗಲುಗೊಂಬೆ ಕಲಾವಿದರು. ತೊಗಲುಗೊಂಬೆ ಚಿತ್ರಪಟಗಳ ಜತೆ ಆಟವಾಡುತ್ತಲೇ ಗೌರಮ್ಮ ಬೆಳೆಯುತ್ತಾರೆ. ಇದು ಸಹಜವಾಗಿ ಕಲಾ ಪರಂಪರೆಯ ಕೊಂಡಿಯಂತೆ ಗೌರಮ್ಮ ಬಾಲ್ಯದಲ್ಲೆ ಪುಟ್ಟಪುಟ್ಟ ಪಾತ್ರಗಳನ್ನು ಮಾಡುತ್ತಾಳೆ. ಜಗತ್ತಿನಾದ್ಯಾಂತ ಪ್ರಚಲಿತದಲ್ಲಿರುವ ತೊಗಲುಗೊಂಬೆ ಕಲೆ ಭಾರತದ ಒಂದು ಪ್ರಾಚೀನ ಕಲೆ. ಕ್ರಿ.ಪೂ ಮೂರು ಸಾವಿರದಷ್ಟು ಹಿಂದಿನದೆಂದು ಊಹಿಸಲಾಗಿದೆ. ಕಿಳ್ಳೆಕ್ಯಾತರ ಸಮುದಾಯ ಮೂಲಪುರುಷ ಮಹಾಭಾರತದ ವನವಾಸದಲ್ಲಿ ಪಾಂಡವರನ್ನು ತೊಗಲುಗೊಂಬೆ ಆಡಿಸಿ ಮನರಂಜಿಸಿದ್ದ ಎನ್ನುವ ದಂತಕತೆಗಳಿವೆ. ಕನ್ನಡದ ಪ್ರಾಚೀನ ಪಠ್ಯಗಳಲ್ಲಿಯೂ ತೊಗಲುಗೊಂಬೆಯಾಟದ ಉಲ್ಲೇಖಗಳಿವೆ. ಕಿಳ್ಳೇಕ್ಯಾತ ಸಮುದಾಯಕ್ಕೆ ಸೇರಿದ ಕಲಕೇತ ಬೊಮ್ಮಯ್ಯ ಎಂಬ ವಚನಕಾರ 12 ನೇ ಶತಮಾನದಲ್ಲಿದ್ದ ಎನ್ನುವ ಚರ್ಚೆಗಳಿವೆ.

ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿ ತೊಗಲುಗೊಂಬೆಯಾಟವನ್ನು ಬೇರೆ ಬೇರೆ ಪ್ರಾದೇಶಿಕ ಹೆಸರುಗಳಿಂದ ಕರೆಯುತ್ತಾರೆ. ಹಗರಿಬೊಮ್ಮನಹಳ್ಳಿಯ ಪಕ್ಕದ ಯಡ್ರಾಮನಹಳ್ಳಿ ದೊಡ್ಡಭರಮಪ್ಪ, ಬೆಳಗಲ್ ವೀರಣ್ಣನಂತವರು ತೊಗಲುಗೊಂಬೆಯಾಟವನ್ನು ವಿದೇಶಗಳಲ್ಲಿಯೂ ಜನಪ್ರಿಯಗೊಳಿಸಿದ್ದಾರೆ. ಇಂತಹ ಕಿಳ್ಳೇಕ್ಯಾತರ ತೊಗಲುಗೊಂಬೆಯಾಟದಲ್ಲಿ ಗಂಡಸರು ಹೆಚ್ಚು ಪ್ರಸಿದ್ಧಿಗೆ ಬಂದಿದ್ದಾರೆ. ಆದರೆ ತೆರೆಮರೆಯಲ್ಲಿ ತೊಗಲುಗೊಂಬೆಯಾಡಿಸುವ ಮಹಿಳೆಯರು ಹೆಚ್ಚು ಪ್ರಚಾರಕ್ಕೆ ಬಂದಿಲ್ಲ. ರಾಮನಗರ ಭಾಗದಲ್ಲಿ ಗೌರಮ್ಮ ತೊಗಲು ಗೊಂಬೆ ಕಲೆಯನ್ನು ಜನಪ್ರಿಯಗೊಳಿಸಿದ್ದಾರೆ. ಮುಖ್ಯವಾಗಿ ಚರ್ಮ ಹದ ಮಾಡಿ, ಬಣ್ಣ ಹೊಂದಿಸಿ, ತೊಗಲುಗೊಂಬೆ ರಚಿಸಿವುದರಿಂದ ಹಿಡಿದು ಮೂವತ್ತಕ್ಕೂ ಹೆಚ್ಚು ಕಥೆಗಳನ್ನು ತೊಗಲುಗೊಂಬೆಯಲ್ಲಿ ಪ್ರದರ್ಶನ ಮಾಡುವಷ್ಟು ಗೌರಮ್ಮ ಕಲಾ ಪ್ರವೀಣೆಯಾಗಿದ್ದಾರೆ. ಮುಖ್ಯವಾಗಿ ಗೌರಮ್ಮ ಹರಿಕಥೆಯನ್ನೂ ಹೇಳುವ ರಂಗ ಕಲಾವಿದೆ ಕೂಡ. ಈ ಕಾರಣ ಗೌರಮ್ಮನ ತೊಗಲುಗೊಂಬೆಯಾಟಕ್ಕೆ ಒಂದು ವಿಶೇಷ ಚಹರೆ ಬಂದಿದೆ.

`ನಾನು ರಂಗಭೂಮಿ ಕಲಾವಿದೆ ಕೂಡ. ಹರಿಕಥೆಯಲ್ಲಿ ಮಾತಾಡಿ ಮಾತಾಡಿ ಗಂಟಲು ಸ್ವಲ್ಪ ಒರಟಾಗಿ ಗಂಡಸಿನ ಧ್ವನಿ ಆದಂಗೆ ಆಗಿದೆ. ಹೀಗಾಗಿ ನನ್ನ ಧ್ವನಿ ಹೆಣ್ಣು ಪಾತ್ರಗಳಿಗೆ ಸರಿ ಹೋಗಲ್ಲ. ಹಂಗಾಗಿ ಹೆಣ್ಣು ಪಾತ್ರಗಳನ್ನು ನಾನು ಮಾಡೋಲ್ಲ. ಕೇವಲ ಗಂಡು ಪಾತ್ರಗಳನ್ನು ಮಾತ್ರ ಮಾಡ್ತೀನಿ. ರಾಮಾಯಣದಲ್ಲಿ ದಶರಥ, ಕುರುಕ್ಷೇತ್ರದಲ್ಲಿ ಭೀಮ, ರಾಜಾ ಸತ್ಯವ್ರತದಲ್ಲಿ ದೇವೇಂದ್ರ, ಸಾವಿತ್ರಿಯಲ್ಲಿ ಸತ್ಯವಂತ, ಸದಾರಮೆಯಲ್ಲಿ ರಾಜ ಮಾರ್ತಾಂಡ, ಆಂಜನೇಯ ಮುಂತಾದ ಬರೀ ಗಂಡು ಪಾತ್ರಗಳನ್ನು ಮಾಡುವೆ’ ಎಂದು ತನ್ನ ರಂಗಭೂಮಿ ನಂಟನ್ನು ಹಂಚಿಕೊಳ್ಳುತ್ತಾರೆ.

ಗೌರಮ್ಮನಿಗೆ ಇಬ್ಬರು ಮಕ್ಕಳು, ಒಬ್ಬರು ತಬಲಾ ಸಾತಿ, ಮತ್ತೊಬ್ಬರು ಡ್ರಾಮಾ ಮೇಷ್ಟ್ರು. ಇಬ್ಬರೂ ನಾಟಕ ಕಲಿಸುವ ಕಲಾವಿದರು. ಗೌರಮ್ಮ ಇಬ್ಬರ ಬಳಿಯೂ ಇಲ್ಲ. `ಈಗಿನ ಕಾಲದ್ ಸೊಸೆಯಂದ್ರತ್ರ ಹೆಚ್ಚು ಮಾತಾಡಿದ್ರೆ ಮನೆ ಹೊಡೆದೋಗುತ್ತೆ. ಹೆಂಗೋ ಬದುಕೊಳ್ರೀ ಅಂತ ಬಿಟ್ ಬಿಟ್ಟಿದಿನಿ. ನನ್ನ ಪಾಡಿಗೆ ನಾನಿದಿನಿ, ಎಸ್ಸಿ ಜನ ಹನುಮಂತು ಅನ್ನೋರ ಹೊಲದಲ್ಲಿ ಕೇಳಿಕೊಂಡ್ ಒಂದ್ ಸಣ್ಣ ಸೊಪ್ಪಿನ ಗುಡ್ಲು ಹಾಕೊಂಡು ಕಾಲ ಕಳಿತಿದೀನಿ. ಮೂರು ದೊಡ್ ದೊಡ್ ಆಪರೇಷನ್ ಆಗಿವೆ. ನಡೆದಾಡೋಕೆ ಆಗಲ್ಲ. ಕೂತಲ್ಲೆ ಎಲೆ ಅಡಿಕೆ ಖರ್ಚಿಗೆ ಬಳೆ ಯಾಪಾರ ಮಾಡ್ತಿದ್ದೆ. ಈ ಕೊರೋನ ಅಡ್ಡ ಬಂದು ಅದೂನು ನಿಂತೋಗಿದೆ, ಈಗ ಉಣ್ಣೋಕು ಕಷ್ಟ ಆಗೇತಿ’ ಎನ್ನುತ್ತಾರೆ.

ಇದೀಗ 66 ವರ್ಷದ ಗೌರಮ್ಮ ಈತನಕ ಎರಡು ಮೂರು ಬಾರಿ ಸಂಸ್ಕೃತಿ ಇಲಾಖೆಗೆ ಅರ್ಜಿ ಸಲ್ಲಿಸಿದರೂ ಕಲಾವಿದರ ಮಾಶಾಸನ ಈ ತನಕವೂ ಬಂದಿಲ್ಲ. ತನ್ನ ಆರೋಗ್ಯವೂ ಸರಿ ಇಲ್ಲದ ಕಾರಣ `ಏನಾದ್ರೂ ಮಾಡಾಣ ಅಂದ್ರೆ ಬದುಕಿನ ದೋಣಿನೇ ಮುರುಕಲು ಆಗೋಗಿದೆ’ ಎಂದು ಒಗಟಾಗಿ ನೋವಿನಿಂದ ನುಡಿಯುತ್ತಾರೆ. ಈಗಲೂ ಆಡ್ಸೋರು ಈಳ್ಯೆ ಕೊಟ್ರೆ ತನ್ನ ಶಿಷ್ಯರ ತಂಡಗಳನ್ನು ಕರೆಸಿ ತೊಗಲುಗೊಂಬೆಯಾಟ ಆಡಿಸುವ ಗೌರಮ್ಮ ಯಾರಾದರೂ ಕಲಿಯುವ ಆಸಕ್ತಿ ಇದ್ದವರು ಬಂದರೆ ಕಲಿಸಿಕೊಡುವೆ, ಯಾರಿಗಾದರೂ ಗೊಂಬೆಗಳು ಬೇಕಾದರೆ ಮಾಡಿಕೊಡುವೆ, ಒಟ್ನಲ್ಲಿ ಕಲೆ ಉಳಿದ್ರೆ ಸಾಕು, ಸ್ಕೂಲ್ ಮಕ್ಕಳಿಗೆ ಕಲಿ-ನಲಿ ಕಾರ್ಯಕ್ರಮದಲ್ಲಿ ಸ್ಕೂಲಲ್ಲಿ ಇರೋ ಪಾಠಗಳನ್ನೆ ಗೊಂಬೆ ಮಾಡಿ ಗೊಂಬೆಯಾಟ ಆಡ್ಸಿದಿವಿ’ ಎನ್ನುತ್ತಾರೆ.

ನಾವು ಪ್ರಾಣ ಹೋದ್ರೂನು ಗೊಂಬೆಗಳನ್ನು ಕಳೆಯೋದಿಲ್ಲ ಎನ್ನುವ ಗೌರಮ್ಮ ತಾನಿರುವ ಗುಡಿಸಲಲ್ಲಿ ಗೊಂಬೆ ಮಡಗೋಕೆ ಜಾಗ ಇಲ್ಲದ್ದಕ್ಕೆ, ಒಂದಕ್ಕೊಂಡು ಕಚ್‍ಕೊಂಡು ಬಣ್ಣನೆಲ್ಲ ಬಿಟ್ಟು ಕೆಟ್ಟೋಗತ್ತೆ ಅಂತ ಗೊಂಬೆಗಳನ್ನು ತನ್ನ ತವರು ಮನೆ ಬೆಳ್ಳೂರು ಪಕ್ಕ ಬೆಟ್ಟುಕೊಂಡನಹಳ್ಳಿಯಲ್ಲಿ ಇಟ್ಟಿದ್ದಾರೆ. `ನನ್ನ ಶಿಷ್ಯರೆಲ್ಲಾ ಬೆಳ್ಳೂರು ನಾಗಮಂಗಲ, ಕಲ್ಲೂರು ಭಾಗದಲ್ಲೆ ಇದಾರೆ. ಒಟ್ಟು ಅವರ 13 ತಂಡಗಳಿವೆ’ ಎನ್ನುವ ಗೌರಮ್ಮ, `ಈ ಸರಕಾರಕ್ಕೆ ಕಣ್ಣಿಲ್ಲ ಸರ್ ಗೋರ್ಮೆಂಟಿನೋರು ಒಂದು ಮನೆ ಕೊಟ್ರೆ, ಕಲಾವಿದರ ಮಾಶಾಸನ ಮುಂಜೂರು ಮಾಡಿದ್ರೆ ಸಾಕು ಸಾಯೋ ಕಾಲದಲ್ಲಿ ನಾಕು ದಿನನಾದ್ರೂ ನೆಮ್ಮದೀಲಿ ಬದುಕಿ ಸಾಯ್ತೀನಿ ಇದೊಂದೆ ಸರ್ ನನ್ನ ಆಸೆ’ ಎನ್ನುತ್ತಾರೆ.

ರಾಮನಗರ ಭಾಗದಲ್ಲಿ ಇಂತಹ ಜನಪದ ಕಲಾವಿದರನ್ನು ಹುಡುಕಿ, ಅವರುಗಳ ಸಂದರ್ಶನ ಮಾಡಿ ಪತ್ರಿಕೆಗಳಿಗೆ ಬರೆದು, ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆದು ಕಲಾವಿದರಿಗೆ ನೆರವಾಗುವ ಕೆಲಸವನ್ನು ಯುವ ಪತ್ರಕರ್ತ ರುದ್ರೇಶ್ ಮಾಡುತ್ತಿದ್ದಾರೆ. ಹಿಂದೊಮ್ಮೆ ಗುಬ್ಬಿವೀರಣ್ಣನ ಸೊಸೆ ಶಾಂತಮ್ಮನ ಬಗ್ಗೆ ಬರೆದಾಗಲೂ ರುದ್ರೇಶ್ ಪರಿಚಯಿಸಿದ್ದರು. ಈ ಗೌರಮ್ಮನ ಬಗ್ಗೆ ಗಮನಸೆಳೆದವರೂ ಕೂಡ ರುದ್ರೇಶ್ ಅವರೆ. ಗೌರಮ್ಮನ ಕುರಿತು ಹಿಂದೆ ಪ್ರಜಾವಾಣಿಯ ಪ್ರಾದೇಶಿಕ ಪುಟದಲ್ಲಿ ಬರೆದಿದ್ದರು. ರುದ್ರೇಶ್ ಹೇಳುವಂತೆ `ಗೌರಮ್ಮನಂಥಹ ದೊಡ್ಡ ಕಲಾವಿದರಿಗೆ ಸರಕಾರ ಮಾಶಾಸನವನ್ನೂ ಕೊಡದಿರುವುದು ದುರಂತ. ಈ ಭಾಗದ ಜನಪ್ರತಿನಿಧಿಗಳು ಇಂತಹ ಕಲಾವಿದರನ್ನು ಪ್ರೋತ್ಸಾಹಿಸಬೇಕು. ನಾನೊಬ್ಬ ಪತ್ರಕರ್ತನಾಗಿ ಕಲಾವಿದರನ್ನು ಪರಿಚಯಿಸಬಹುದು, ಸಣ್ಣಪುಟ್ಟ ನೆರವು ನೀಡಬಹುದು. ಆದರೆ ಸರಕಾರ ನೆರವಿನ ಅಗತ್ಯವಿದೆ’ ಎನ್ನುತ್ತಾರೆ. ಕೊರೋನ ಲಾಕ್‍ಡೌನ ಪರಿಣಾಮ ಗೌರಮ್ಮನಂತಹ ಸಾವಿರಾರು ರಂಗಭೂಮಿ ಮತ್ತು ಜನಪದ ಕಲಾವಿದರು ಇಂದು ಬೀದಿಗೆ ಬಿದ್ದಿದ್ದಾರೆ. ಅವರ ಚೇತರಿಕೆಗೆ ಸರಕಾರದ ಯೋಜನೆಗಳು ಕಣ್ಣುಬಿಟ್ಟು ನೋಡಬೇಕಾಗಿದೆ. ಅಂತೆಯೇ ವಯಕ್ತಿಕ ನೆಲೆಯಲ್ಲಿ ಇಂತಹವರನ್ನು ಗುರುತಿಸಿ ಕೈಲಾದಷ್ಟು ನೆರವು ನೀಡಬೇಕಾಗಿದೆ.

ಈ ಬರಹ ಓದಿದವರು, ಗೌರಮ್ಮನಿಗೆ ನೆರವಾಗುವ ಮನಸ್ಸಿದ್ದರೆ ಈ ನಂಬರಿಗೆ ಸಂಪರ್ಕಿಸಿ. 9731049042.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಾಚಿಕೆಯಾಗಬೇಕು, ಕರೋನ ಕರಾಳತೆಯಲ್ಲೂ ಹಣ ಲೂಟಿ ಮಾಡುವ ಈ ಕಡು ಭ್ರಷ್ಟರಿಗೆ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...