Homeಅಂಕಣಗಳುಮೋದಿ ಆತ್ಮನಿರ್ಭರತೆ V/S ಸ್ವದೇಶಿ, ಸ್ವಾವಲಂಬನೆ, ಸ್ವಾಭಿಮಾನ

ಮೋದಿ ಆತ್ಮನಿರ್ಭರತೆ V/S ಸ್ವದೇಶಿ, ಸ್ವಾವಲಂಬನೆ, ಸ್ವಾಭಿಮಾನ

- Advertisement -
- Advertisement -

ಕೊರೋನ ಮಹಾಮಾರಿ ಹಿಡಿಯಾಗಿ ಪ್ರಪಂಚವನ್ನೇ ಕಾಡಲುಹತ್ತಿದ್ದರಿಂದ ಯಾವ ದೇಶದವರೂ ಭಾರತಕ್ಕೆ ಬಂಡವಾಳ ತೆಗೆದುಕೊಂಡು ಬಂದು ಉದ್ಯಮಗಳನ್ನು ಆರಂಭಿಸುವ ಸಾಧ್ಯತೆಗಳಿಲ್ಲ ಎಂಬುದನ್ನು ಮನಗಂಡು ಈಗ ಹೊಸ ರಾಗ ಹಾಡಲು ಮೋದಿಯವರು ತೊಡಗಿದ್ದಾರೆ. ಅವರ ಇಂದಿನ ಸ್ಲೋಗನ್‍ಗಳೆಂದರೆ ಆತ್ಮ ನಿರ್ಭರತೆ, ಸ್ವದೇಶಿ, ಸ್ವಾವಲಂಬನೆ, ಸ್ವಾಭಿಮಾನಗಳನ್ನು ಬೆಳಸಿಕೊಳ್ಳುವುದು. ಇದು ಸರಿಯಾದ ತೀರ್ಮಾನವೇ ಸರಿ. ಆದರೆ ಈ ತತ್ವಗಳಿಗೆ ಮೋದಿ ಸರ್ಕಾರ ಮುಂದೆ ಎಂದೆಂದೂ ಬದ್ಧವಾಗಿ ಇರುತ್ತದೆಯೇ ಎಂಬುದು ಮೂಲ ಭೂತ ಪ್ರಶ್ನೆ.

ಕೊರೋನ ವ್ಯಾದಿ ವಿಶ್ವದೆಲ್ಲಡೆ ಇಲ್ಲವಾಗಿ ಆರ್ಥಿಕ ಚೇತರಿಕೆಯೂ ಆದಮೇಲೂ ಆತ್ಮನಿರ್ಭರತೆ ಇವರ ಸ್ಲೋಗನ್ ಆಗಿರುತ್ತದೆಯೇ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಇದನ್ನು ಕಾಲವೇ ನಿರ್ಧರಿಸುತ್ತದೆ.

ಆತ್ಮನಿರ್ಭರತೆ ಇನ್ನು ಮುಂದೆ ಭಾರತ ಸರ್ಕಾರದ ನೀತಿ ಎಂದು ಮೋದಿಯವರು ಘೋಷಿಸಿದರೆ ಮಾತ್ರ ಇದು ಬರಿ ಸ್ಲೋಗನ್ ಅಲ್ಲ, ನಮ್ಮ ರಾಷ್ಟ್ರ ನೀತಿ ಎಂದು ನಾವು ನಂಬಬಹುದು. ಸ್ವದೇಶಿ, ಸ್ವಾವಲಂಬನೆ, ಸ್ವಾಭಿಮಾನ, ಇವು ಬರಿಯ ಸ್ಲೋಗನ್‍ಗಳಾಗಬಾರದು.

ಸ್ವದೇಶಿ ಒಂದು ವ್ರತವಾಗಬೇಕು. ಸರ್ಕಾರ ಈ ವ್ರತವನ್ನು ಕಾರ್ಯಗೊಳಿಸಬೇಕು. ಜಪಾನಿನಲ್ಲಿ ಬೃಹತ್ ಯಂತ್ರಗಳಿಂದ ವಿವಿಧ ವಸ್ತುಗಳನ್ನು ತಯಾರಿಸುತ್ತಾರೆ. ಆದರೆ ಅವೆಲ್ಲವೂ ರಫ್ತಿಗಾಗಿ. ಅವರ ನಿತ್ಯದ ಅಗತ್ಯತೆಯ ವಸ್ತುಗಳೆನ್ನೆಲ್ಲ ಅವರು ಗೃಹೋದ್ಯೋಗದ ಮೂಲಕ ಪಡೆಯುತ್ತಾರೆ. ಗೃಹೋದ್ಯೋಗದಿಂದ ತಯಾರಾದ ಪದಾರ್ಥಗಳನ್ನು ಇವು ನಮ್ಮ ಹೆಮ್ಮೆಯ ಪದಾರ್ಥಗಳೆಂದು ಭಾವಿಸಿ ಬಳಸುತ್ತಾರೆ. ಇದೇ ಆತ್ಮನಿರ್ಭರತೆ. ಇದಕ್ಕೆ ಮೋದಿಯವರ ಸಹಮತ ಇದೆಯೇ? ನಮ್ಮದು ಪ್ರಜಾ ಸಂಖ್ಯೆ ಅಧಿಕವಾಗಿರುವ ದೇಶ. ಇಲ್ಲಿ ಜನರ ಕೈಗೆ ಕೆಲಸ ಕೊಡಬೇಕು. ಅದಕ್ಕೆ ಅನುಗಣವಾದ ಅಪ್ರೋಪ್ರಿಯೇಟ್ ಟೆಕ್ನಾಲಾಜಿಯನ್ನೇ ನಾವು ಅಳವಡಿಸಿಕೊಳ್ಳಬೇಕು. ಬೃಹತ್ ಯಂತ್ರಗಳು, ದೈತ್ಯ ಯಂತ್ರಗಳು, ಸ್ವಯಂ ಚಾಲಿತ ಯಂತ್ರಗಳು ನಮ್ಮ ಜನರು ಉದ್ಯೋಗವನ್ನು ಕಸಿದುಕೊಳ್ಳುತ್ತವೆ. ಬಡಜನರ ಹೊಟ್ಟೆಯ ಮೇಲೆ ಹೊಡೆಯುತ್ತವೆ.

ಆದ್ದರಿಂದ ನಮ್ಮ ಜನರ ಉದ್ಯೋಗಗಳನ್ನು ಕಸಿಯದ ಯಂತ್ರೋದ್ಯಮಕ್ಕೆ ನಮ್ಮ ಆದ್ಯತೆ ಎಂದು ಸರ್ಕಾರ ಘೋಷಿಸುತ್ತದೆಯೆ?

ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಎಂಬ ಸ್ಲೋಗನ್‍ಗಳನ್ನು ಮೋದಿಯವರು ಉಚ್ಛರಿಸಿದರು. ಮೇಡ್ ಇನ್ ಇಂಡಿಯಾ ಸ್ಲೋಗನ್ ಅನ್ನು ಇಂದಿರಾ ಗಾಂಧಿ ಹಿಂದೆಯೆ ಘೋಷಣೆ ಮಾಡಿದ್ದರು. ಈ ಎರಡು ಘೋಷಣೆಗಳು ದೋಷಪೂರಿತವಾದದ್ದು. ಭಾರತದಲ್ಲಿ ತಯಾರಾದ ಮಾತ್ರಕ್ಕೆ ಆ ಪದಾರ್ಥಗಳು ಸ್ವದೇಶಿ ಅಲ್ಲ. ಬಂಡವಾಳಗಾರರು ಹೆಚ್ಚಿನ ಲಾಭಗಳಿಕೆಗಾಗಿಯೇ ಉದ್ಯಮ ನಡೆಸುವುದು. ಬಂಡವಾಳಶಾಹಿಗಳು ಭಾರತಿಯರಿರಬಹುದು, ಬಹುರಾಷ್ಟ್ರೀಯರಿರಬಹುದು. ಅವರಿಬ್ಬರಿದೂ ಉದ್ದೇಶ ಒಂದೆ. ಅದೆಂದರೆ ತಮ್ಮ ಶಕ್ತಿ ಮೀರಿ ಲಾಭ ಗಳಿಸುವುದು. ಇದರಲ್ಲಿ ಒಂದು ನಾಡ ಕತ್ತಿ, ಮತ್ತೊಂದು ಸೀಮೆಯ ಕತ್ತಿ. ಒಟ್ಟಿನಲ್ಲಿ ಅವರೆಡು ಕ್ಷೌರದ ಕತ್ತಿಗಳೆ. ಅವೆರಡು ಬಯಸುವುದು ಹೆಚ್ಚಿಗೆ ಲಾಭ, ಅಗ್ಗದ ಶ್ರಮಶಕ್ತಿ, ಸಂಪನ್ಮೂಲಗಳ ಲೂಟಿ.

ಆದ್ದರಿಂದ ಈ ಲೂಟಿಕೋರರು ಭಾರತದ ಉದ್ಯಮಪತಿಗಳೆ ಆಗಿದ್ದರೂ, ಬೇರೆ ರಾಷ್ಟ್ರಗಳ ಶ್ರೀಮಂತರೇ ಆಗಿದ್ದರೂ ಅವರನ್ನು ದೂರ ಇಡಬೇಕು. ಬದಲಿಗೆ ಸರ್ಕಾರ, ಸ್ಥಳೀಯ ಸಂಸ್ಥೆಗಳು ಮತ್ತು ಸಹಕಾರಿ ಸಂಸ್ಥೆಗಳ ಮೂಲಕ ಸಣ್ಣ ಕೈಗಾರಿಕೆಗಳಲ್ಲಿನ ಉತ್ಪಾದನೆ ಮಾತ್ರವೇ ಸ್ವದೇಶಿ ಅನಿಸಿಕೊಳ್ಳುತ್ತದೆ.

ನಮ್ಮಲ್ಲಿ ತಯಾರಾಗದ ಪದಾರ್ಥಗಳನ್ನು ತಯಾರು ಮಾಡಲು ಪರದೇಶದ ಕಂಪನಿಗಳನ್ನು ಭಾರತಕ್ಕೆ ಕರೆತರಬಹುದು. ಆದರೆ ಒಂದು ಕರಾರಿನ ಮೇಲೆ ಮಾತ್ರ. ಅದೆಂದರೆ ಹಾಗೇ ಬರುವವರು ಹತ್ತು ವರ್ಷಗಳ ಕಾಲ ಮಾತ್ರ ಭಾರತದಲ್ಲಿ ತಮ್ಮ ಉದ್ಯಮವನ್ನು ನಡೆಸಬಹುದು ಮತ್ತು ನಮ್ಮ ಜನರಿಗೆ ಆ ಪದಾರ್ಥಗಳ ತಯಾರಿಕೆಯ ತಂತ್ರಜ್ಞಾನವನ್ನು ಕಲಿಸಿಕೊಟ್ಟು ಹೋಗಬೇಕು.

ವಲಸಿಗ ಕಾರ್ಮಿಕರು ಈಗ ಬಹುಸಂಖ್ಯೆಯಲ್ಲಿ ನಗರಗಳನ್ನು, ಪಟ್ಟಣದಗಳನ್ನು ಬಿಟ್ಟು ಗ್ರಾಮಗಳಿಗೆ ಹೋಗಿದ್ದಾರೆ. ಅವರು ತಮ್ಮ ಗ್ರಾಮಗಳಲ್ಲಿ ಜೀವನ ನಡೆಸುವುದಾದರೂ ಹೇಗೆ? ಭೂಮಿತಿ ಶಾಸನವನ್ನು ಪುನಃ ಪರಿಶೀಲಿಸಿ ಸೀಲಿಂಗ್ ಲಿಮಿಟ್ ಅನ್ನು ಇಳಿಸಿ ಯಾರು ವ್ಯವಸಾಯದಲ್ಲಿ ತೊಡಗಿಕೊಳ್ಳಲು ಆಶಿಸುವರೋ ಅವರಿಗೆ ತಲಾ ನಾಲ್ಕುವರೆ ಎಕರೆ ಕುಷ್ಕಿ ಜಮೀನನ್ನು ಮಂಜೂರು ಮಾಡಬೇಕು. ಹೀಗೆ ಸರ್ಕಾರ ಕೊಟ್ಟ ಭೂಮಿಯನ್ನು ಮಾರಾಟ-ಭೋಗ್ಯ ಯಾವುದನ್ನು ಮಾಡುವ ಆಗಿಲ್ಲ ಎಂದು ಕಾನೂನು ಮಾಡಬೇಕು. ಉಳಿದ ವಲಸಿಗರಿಗೆ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಿ ಕೆಲಸ ಕೊಡಬೇಕು. ನಾಲ್ಕು ಹಳ್ಳಿಗಳಿಗೆ ಸೇರಿದಂತೆ ಒಂದು ಸಣ್ಣ ಕೈಗಾರಿಕೆ ಸ್ಥಾಪಿತವಾಗುವದಾದರೆ ಅವರಿಗೆಲ್ಲ ಕೆಲಸ ಕೊಡಬಹುದು.

ಗ್ರಾಮಗಳಲ್ಲಿ ಇರುವ ಬಡಗಿ, ಕಮ್ಮಾರ, ನೇಕಾರ, ಚಮ್ಮಾರ, ಇವರಿಗೆಲ್ಲ ಶಿಕ್ಷಣ ಕೊಟ್ಟು ತಮ್ಮ ವೃತ್ತಿ ಕೌಶಲವನ್ನು ಬೆಳೆಸಿಕೊಳ್ಳಲು ಮಾರ್ಗದರ್ಶನ ಮಾಡಬೇಕು. ನಲ್ಲಿ, ಮೋಟಾರ್ ಸೈಕಲ್, ರೇಡಿಯೋ, ಟಿ.ವಿ. ಕೊಳವೇ ಬಾವಿ, ಗಡಿಯಾರ, ಮುಂತಾದವುಗಳ ರಿಪೇರಿ ಕೆಲಸ ಕಲಿಸಿ ಅವರಿಗೆ ಒಬ್ಬೊಬ್ಬರಿಗೂ ಒಂದು ಕಿಟ್ ಕೊಟ್ಟರೇ ಅವರು ಜೀವನ ನಿರ್ವಹಣೆಗೆ ಈ ಕಸುಬುಗಳನ್ನು ಅವಲಂಬಿಸಿಯಾರು. ತರಕಾರಿ, ಹಣ್ಣು ಇವುಗಳ ಸಂಸ್ಕರಣ ಘಟಕಗಳನ್ನು ಸ್ಥಾಪಿಸಿ ಜನರಿಗೆ ಕೆಲಸ ಕೊಡಬಹುದು. ಈ ಮೂಲಕ ಗ್ರಾಮೀಣ ಜನರ ಬಡತನವನ್ನು ದೂರಮಾಡಬಹುದು. ಇದನ್ನೆಲ್ಲ ಮೋದಿ ಸರ್ಕಾರ ಮಾಡೀತೇ ಎಂದು ಕುತೂಹಲದಿಂದ ಕಾದುಕೂತು ನೋಡಬಯಸುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...