Homeಅಂಕಣಗಳುಪಿಕೆ ಟಾಕೀಸ್: ಕೌಟುಂಬಿಕ ಕರಾಳತೆಯನ್ನು ಬಿಂಬಿಸುವ ಯಾನಿಸ್‌ನ ವರ್ಣರಹಿತ ಚಿತ್ರಗಳು

ಪಿಕೆ ಟಾಕೀಸ್: ಕೌಟುಂಬಿಕ ಕರಾಳತೆಯನ್ನು ಬಿಂಬಿಸುವ ಯಾನಿಸ್‌ನ ವರ್ಣರಹಿತ ಚಿತ್ರಗಳು

- Advertisement -
- Advertisement -

ಪಿಕೆ ಟಾಕೀಸ್ 11/ ಜಾಗತಿಕ ಸಿನಿಮಾ/ ಗ್ರೀಸ್/ ಯಾನಿಸ್ ಯಕಾನೊಮಿಡಿಸ್

ಮ್ಯಾಚ್ ಬಾಕ್ಸ್ (2003): ಇಕ್ಕಟ್ಟಿನ ಚೌಕದಲ್ಲಿ ಬೆಂಕಿ ಹತ್ತಿಕೊಂಡು ಉರಿದು ಹೋಗಬಲ್ಲವರೆಲ್ಲವರು ಒಟ್ಟಾಗಿ ಇರುವುದನ್ನು ರೂಪಕವಾಗಿ ಮ್ಯಾಚ್ ಬಾಕ್ಸ್/ ಬೆಂಕಿಪೊಟ್ಟಣ ಎಂದಿದ್ದಾರೆ. ಅದೇ ಈ ಸಿನಿಮಾದ ಕಥಾನಕ. ಒಂದೇ ಮನೆಯಲ್ಲಿ ಬೇಸಿಗೆಯ ಬಿಸಿಯಿಂದ ಬೆವರು ಸುರಿಯುವ ಹವಾಮಾನದಲ್ಲಿ ಕುಟುಂಬ ಸದಸ್ಯರು ಪರಸ್ಪರ ಕೋಪಾಗ್ನಿಗೆ ಒಳಗಾಗದರೆ ಏನಾಗಬಹುದು?

ಬಿಸಿ ತುತ್ತತುದಿ ಮುಟ್ಟಿದಾಗ, ಐವತ್ತು ವಯಸ್ಸು ದಾಟಿದ ಮುಂಗೋಪಿ ಡಿಮಿಟ್ರಿ ತನ್ನ ಅಂಗಡಿ ವ್ಯಾಪಾರದ ಕುರಿತು ನಿರಾಸಕ್ತನಾದ ಕೆಲಸಗಾರನಿಗೆ, ವ್ಯವಹಾರಗಳನ್ನು ಗಮನವಿಟ್ಟು ಸರಿಯಾಗಿ ನಡೆಸುವಂತೆ ಜೋರಾಗಿ ಕೂಗಿ ಕಿರುಚಾಡುತ್ತಿರುತ್ತಾನೆ. ಕೆಲಸಗಾರ ಅವನ ಮಾತಿಗೆ ಹೌದು ಅಥವಾ ಇಲ್ಲವೆಂಬಂತೆ ಉತ್ತರ ನೀಡುತ್ತಿರುತ್ತಾನೆ. ಇದರಿಂದ ಇನ್ನಷ್ಟು ಕೋಪಗೊಂಡು ಬೈಯ್ಯುತ್ತಿರುತ್ತಾನೆ. ಇದೆಲ್ಲವೂ ನಮಗೆ ಸಂಬಂಧಿಸಿದಲ್ಲವೆಂಬಂತಿರುವ ಬೇಜಾವಾಬ್ದಾರಿ ಯುವ ಮಗ, ತಂದೆಗೆ ತಿರುಗಿ ಬೈಯ್ಯುವ ಮಗಳು, ಡಿಮಿಟ್ರಿಯ ಬಗ್ಗೆ ಆಸಕ್ತಿಯೆ ವಹಿಸದ ಹೆಂಡತಿ ಇವೆಲ್ಲದರ ಜೊತೆಗೆ ಉರಿಯುವ ಬಿಸಿಲು!

ಮಹಡಿಯ ಮೇಲೆ ಈ ಬೇಜಾವಾಬ್ದಾರಿ ಮಗ ತನ್ನ ಫೋನಿನಲ್ಲಿ ಗೆಳೆಯರೊಂದಿಗೆ, ತನ್ನ ತಂದೆ ಮಾತನಾಡುವಾಗ ಬಳಸುವ ಅವೇ ಕೆಟ್ಟ ಮಾತುಗಳನ್ನು ಆಡುತ್ತಾ ಹುಡುಗಿಯರು ಮತ್ತು ಚಟಗಳ ಕುರಿತು ಮಾತಾಡುತ್ತಿರುತ್ತಾನೆ. ಬಾಲ್ಕನಿಯಲ್ಲಿ ಮಗಳು ಕೋಪದಿಂದ ಫೋನಿನಲ್ಲಿ ಯಾರ ಜೊತೆಗೋ ಕೂಗಾಡುತ್ತಿರುತ್ತಾಳೆ. ಹೀಗೆ ಮನೆಯ ಸದಸ್ಯರೆಲ್ಲ ಅವರವರ ಪಾಡಿಗೆ ಅವರದ್ದೇ ಪ್ರಪಂಚಗಳಲ್ಲಿ ಕೋಪದಿಂದ ಕುದಿಯುತ್ತಿರುತ್ತಾರೆ.

PC : Taste of Cinema

ಮತ್ತೊಂದು ಪ್ರಸಂಗದಲ್ಲಿ, ಅಂಗಡಿಯ ಮತ್ತೊಬ್ಬ ಕೆಲಸಗಾರನಿಗೆ ಗರ್ಭಿಣಿ ಹೆಂಗಸೊಬ್ಬಳನ್ನು ಮದುವೆಯಾಗುವಂತೆ ಡಿಮಿಟ್ರಿ ಒತ್ತಾಯಿಸುತ್ತಾನೆ. ಅದಕ್ಕೆ, ಆ ಮಹಿಳೆ ಗರ್ಭ ಧರಿಸುವುದಕ್ಕೂ ತನಗೂ ಸಂಬಂಧವಿಲ್ಲವೆಂದು ಆ ಕೆಲಸಗಾರ ಹೇಳುತ್ತಾನೆ. ಆದರೆ ಡಿಮಿಟ್ರಿ ಸಿಡಿಮಿಡಿಗೊಂಡು ಅವನು ಆಕೆಯನ್ನು ಮದುವೆಯಾಗಲೇಬೇಕೆಂದು ಹಠಮಾಡುತ್ತಾನೆ. ಆಗ ಅಲ್ಲಿಂದ ಕೆಲಸಗಾರ ಹೋಗಿಬಿಡುತ್ತಾನೆ. ಇವೆಲ್ಲಾ ಜಗಳದ ಗದ್ದಲದಿಂದ ಡಿಮಿಟ್ರಿಗೆ ತನ್ನ ಹೆಂಡತಿಯೊಂದಿಗೆ ಜಗಳ ಹಚ್ಚಿಕೊಳ್ಳುತ್ತದೆ. ಶಾಂತವಾಗಿದ್ದವಳು ಒಮ್ಮೆಲೆ ಕೋಪಗೊಂಡು ಅವಳು ಧರಿಸಿದ್ದ ಬಟ್ಟೆಗಳನ್ನು ಬಿಚ್ಚಿ, ಜಗಳಕ್ಕಿಳಿದು ಡಿಮಿಟ್ರಿಯನ್ನು ಬೈಯ್ಯುತ್ತಾ, ತಮ್ಮ ಮಗಳು ಡಿಮಿಟ್ರಿಯಿಂದ ಹುಟ್ಟಿಲ್ಲವೆಂದು ಹೇಳಿ ಹೊರನಡೆಯುತ್ತಾಳೆ.

ಈ ವಿಷಯ ತಿಳಿದು ಡಿಮಿಟ್ರಿ ಆಘಾತದಿಂದ ಕುಸಿಯುತ್ತಾನೆ. ಆಗ ಅವನ ನಿರಾಸಕ್ತ ಕೆಲಸಗಾರ ಬರುತ್ತಾನೆ. ’ಕೆಲಸಗಾರನಿಗೆ ತನ್ನ ಹೆಂಡತಿಯ ಮೇಲೆ ನಂಬಿಕೆ ಇದಿಯಾ’ ಎಂದು ಕೇಳುತ್ತಾನೆ ಡಿಮಿಟ್ರಿ. ಈ ಪ್ರಶ್ನೆಗೂ ಉತ್ತರಿಸದ ಆ ಕೆಲಸಗಾರನಿಗೂ ಮತ್ತು ಡಿಮಿಟ್ರಿಗೂ ಜಗಳ ಏರಿಬಿಡುತ್ತದೆ. ಡಿಮಿಟ್ರಿಯ ಉದ್ವೇಗವನ್ನು ತಣ್ಣಾಗಿಸಲು ಸ್ನಾನ ಮಾಡಿಸಿ ಮಲಗಿಸಲು ಕೆಲಸಗಾರ ಪ್ರಯತ್ನಿಸುತ್ತಾನೆ.

ಇತ್ತ ಮಗ ಅವರಪ್ಪನ ಸ್ಥಿತಿಯನ್ನು ನೋಡಿ ಮತ್ತೆ ಮಹಡಿ ಏರಿ ಹೋಗುತ್ತಾನೆ. ತಿರುಗಿ ಬಂದ ಹೆಂಡತಿ ಮತ್ತೆ ಜಗಳ ಮಾಡಲು ಮುಂದಾದಾಗ ಡಿಮಿಟ್ರಿ ಸುಮ್ಮನಾಗಿಬಿಡುತ್ತಾನೆ. ಹೀಗೆ ಬೇಸಿಗೆಯ ಬಿಸಿಲಿಗೆ, ಮನಸ್ಸಿನ ಅನುಮಾನಗಳ ಬೇಗೆಯನ್ನು ಬೆರೆಸಿ, ಸದಾ ಉದ್ವೇಗದಲ್ಲೇ ಮತ್ತು ನಿರಂತರ ಮಾತುಗಳಿಂದಲೇ ಕಟ್ಟಿರುವ ಸಿನಿಮಾ ಇದು.

ತೊಂಬತ್ತು ನಿಮಿಷಗಳ ಸಿನಿಮಾ ಒಂದೇ ಮನೆಯಲ್ಲಿ ನಡೆಯುವುದು ವಿಶೇಷ. ಯಾವುದೇ ಮಿತಿ ಅಥವಾ ನಿರ್ಭಂದವನ್ನಿಟ್ಟುಕೊಂಡು ಸಿನಿಮಾ ಕಟ್ಟುವುದು ಕಷ್ಟದ ಕೆಲಸ. ಆದರೆ ಇಲ್ಲಿ ಮನೆಯನ್ನು ರೂಪಕವಾಗಿ ಬೆಂಕಿಪೊಟ್ಟಣ್ಣಕ್ಕೆ ಬಳಸಿರುವುದರಿಂದ ಸಿನಿಮಾ ಅಪ್ಯಾಯಮಾನವಾಗಿ ಮೂಡಿದೆ.

ಈ ಸಿನಿಮಾದ ಸಿನಿಮ್ಯಾಟೋಗ್ರಫಿ ಕಪ್ಪು ಬಿಳುಪಿನಲ್ಲಿದ್ದು, ಕೌಟುಂಬಿಕ ಕರಾಳತೆಯನ್ನು ತೋರಿಸಿದ್ದಾರೆ. ಸಿನಿಮಾ ಬಹುಭಾಗವನ್ನು ಕ್ಲೊಸಅಪ್‌ಗಳಲ್ಲೇ ಸೆರೆಹಿಡಿದಿರುವುದರಿಂದ ಎಲ್ಲ ಪಾತ್ರಗಳು ಸನ್ನಿವೇಶಗಳಿಗೆ ಸಿಕ್ಕಿಹಾಕಿಕೊಂಡಿದ್ದಾರೆಂದು ಅನಿಸದ ಇರದು.

ನೈಫಾರ್ (2011): ಹಾಸಿಗೆಯಲ್ಲಿ ಮಲಗಿ ನಿರ್ಭಾವುಕವಾಗಿ ಟಿವಿಯಲ್ಲಿ ಬರುತ್ತಿರುವ ಕಪ್ಪು ಬಿಳುಪಿನ ಕಾರ್ಟೂನ್ ಚಿತ್ರವನ್ನು ನೋಡುತ್ತಿರುವ ವೃದ್ಧ. ಅವನ ಪಕ್ಕಕ್ಕೆ ಕುಳಿತು ಕಡಲೆಕಾಯಿ ತಿನ್ನುತ್ತಿರುವ ನಲವತ್ತರ ಅಸುಪಾಸಿನ ನಿಕೋಸ್. ತನ್ನ ತಂದೆಯ ಸಾವಿನ ನಂತರದಲ್ಲಿ ನಿಕೋಸ್‌ನ ಬದುಕಿನಲ್ಲಾಗುವ ಬದಲಾವಣೆಗಳೇ ಈ ಸಿನಿಮಾದ ಕಥಾನಕ.

ನಿಕೋಸ್ ತನ್ನ ಗೆಳಯರೊಂದಿಗೆ ಸಮಯ ಕಳೆಯುತ್ತಾ, ಯಾವುದೇ ಕೆಲಸ ಕಾರ್ಯವಿಲ್ಲದೆ, ಗ್ರೀಸಿನ ಹಳ್ಳಿಯಲ್ಲಿ ಬದುಕುತ್ತಿರುತ್ತಾನೆ. ವೃದ್ಧ ತಂದೆಯ ಸಾವಿಗೆ ಬಂದ ದೂರದ ಸಂಬಂಧಿ ಐವತ್ತರ ಗಡಿದಾಟಿದ ಅಲೆಕೊಸ್, ಅಥೆನ್ಸ್‌ನ ಹೊರವಲಯದಲ್ಲಿರುವ ತನ್ನ ಮನೆಗೆ ಬರುವಂತೆ ಹೇಳುತ್ತಾನೆ.

ಅಲೆಕೊಸ್ ಮನೆಯಲ್ಲಿರುವ ನಾಯಿಗಳನ್ನು ನೋಡಿಕೊಳ್ಳುವ ಕೆಲಸಕ್ಕೆ ನಿಗದಿಯಾಗುತ್ತಾನೆ ನಿಕೋಸ್. ಅಲ್ಲೂ ಅಷ್ಟಾಗಿ ಕೆಲಸವಿರುವುದಿಲ್ಲ. ತಿನ್ನುವುದು, ಟಿವಿ ನೋಡುವುದು. ಮೊಬೈಲಿನಲ್ಲಿ ಆಟವಾಡುವುದು ಮತ್ತು ಹಸ್ತ ಮೈಥುನ ಮಾಡಿಕೊಳ್ಳುವುದೇ ನಿಕೋಸ್‌ನ ದಿನಚರಿ.

ಅಲೆಕೊಸ್ ನಿಕೋಸ್‌ನನ್ನು ಸದಾ ಬೈಯ್ಯುತಿರುತ್ತಾನೆ. ನಿಕೋಸ್‌ಗೆ ಬೇರೆ ಗತಿಯಿಲ್ಲದೇ ಅಲ್ಲೇ ಇರಬೇಕಾಗುತ್ತದೆ. ಈ ಮಧ್ಯೆ ಅಲೆಕೊಸ್‌ನ ಸುಂದರ ಹೆಂಡತಿ ನಿಕೋಸ್‌ನತ್ತ ಆರ್ಕಷಿತಳಾಗುತ್ತಾಳೆ. ಹಾಗೆಯೇ ಇವರಿಬ್ಬರ ನಡುವೆ ರಹಸ್ಯ ಸಂಬಂಧವೂ ಏರ್ಪಡುತ್ತದೆ. ಇದು ಅಲೆಕೊಸ್‌ಗೆ ತಿಳಿಯುವುದಿಲ್ಲ.

ಅಲೆಕೊಸ್‌ನ ವ್ಯಾಪಾರದ ಸಮಯದಲ್ಲಿ, ಅವನ ಅಂಗಡಿಗೆ ಅಪರಿಚಿತರ ಬಂದು ದಾಳಿ ಮಾಡುತ್ತಾರೆ. ಇದರಿಂದ ಅವನು ಗಾಯಗೊಳ್ಳುತ್ತಾನೆ. ಆಸ್ಪತ್ರೆಯಲ್ಲಿ ವಿಚಾರಿಸಲು ಬಂದ ನಿಕೋಸ್‌ನನ್ನು ತನ್ನ ದಬ್ಬಾಳಿಕೆಯ ಮನೋಭಾವದಿಂದ ತನ್ನ ಹೆಂಡತಿಯ ಮುಂದೆಯೇ ಬೈಯ್ಯುತ್ತಾನೆ. ನಡುವೆ ಬಂದ ಹೆಂಡತಿಯನ್ನೂ ಸಹ ನಿಂದಿಸುತ್ತಾನೆ.

ಅಲ್ಲಿಗೆ ನಿಕೋಸ್ ಮತ್ತು ಅವನ ಪ್ರಿಯತಮೆ, ಅಲೆಕೊಸ್‌ನನ್ನು ಕೊಲ್ಲಲು ಸರಿಯಾದ ಯೋಜನೆ ರೂಪಿಸಿ ಕೊಂದು ಮುಗಿಸಿ, ಅದೇ ಮನೆಯಿಂದ ಮಕ್ಕಳೊಂದಿಗೆ ಕಾರಿನಲ್ಲಿ ಹೋಗುವ ದೃಶ್ಯದೊಂದಿಗೆ ಸಿನಿಮಾ ಮುಗಿಯುತ್ತದೆ.

ಈ ಸಿನಿಮಾ ಆಧುನಿಕ ಗ್ರೀಸ್ ಸಮಾಜದಲ್ಲಿ ಪುರುಷಪ್ರಧಾನ ದಬ್ಬಾಳಿಕೆಯಿಂದ ಜಡ್ಡುಗಟ್ಟಿ, ಕುಸಿಯುತ್ತಿರುವ ಕೌಟುಂಬಿಕ ಮೌಲ್ಯಗಳ ಕುರಿತು ನಿರ್ದೇಶಕನ ವ್ಯಾಖ್ಯಾನಿವೆಸುತ್ತದೆ.

ಯಾನಿಸ್ ಯಕಾನೊಮಿಡಿಸ್: ಯಾನಿಸ್‌ಗೆ ಗ್ರೀಕ್ ವಿಲಕ್ಷಣ ಅಲೆಯಲ್ಲಿ ಅತಿ ಮುಖ್ಯವಾದ ಪಾತ್ರವಿದೆ. ಇವರು ಇಂಡಿಪೆಂಡೆಂಟ್ ಸಿನಿಮಾ ನಿರ್ದೇಶಕ. ಆದರೆ, ಕೇವಲ ತನ್ನನ್ನು ನಿರ್ದೇಶಕನಾಗಿ ಮಾತ್ರ ನಿರ್ಭಂಧಿಸಿಕೊಳ್ಳದೆ, ಹಲವಾರು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ ಕೂಡ. ಅದಲ್ಲದೆ ನಿರ್ಮಾಪಕನಾಗಿ ’ಮ್ಯಾಚ್ ಬಾಕ್ಸ್’ ಜೊತೆಗೆ ಇನ್ನು ಹಲವಾರು ಇಂಡಿಪೆಂಡೆಂಟ್ ಸಿನಿಮಾಗಳನ್ನು ಮಾಡಿದ್ದಾರೆ. ಬರಹಗಾರನಾಗಿಯೂ ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವುದು ಗಮನಾರ್ಹ.

ಯಾನಿಸ್‌ನ ಕಥಾವಸ್ತುಗಳು ಆಧುನಿಕ ಗ್ರೀಸ್ ಸಮಾಜ, ಕುಟುಂಬದಲ್ಲಿನ ಸಂಬಂಧಗಳನ್ನು ಒಳಗೊಂಡಿರುವುದೇ ಹೆಚ್ಚು. ಇವರ ಒಟ್ಟಾರೆ ಸಿನಿಮಾ ತಯಾರಿಸುವ ಶೈಲಿ ಸರಳವಾದದ್ದು ಮತ್ತು ನೇರವಾಗಿರುವ ಸ್ವತಂತ್ರ ಶೈಲಿಯದ್ದು.

ಯಾನಿಸ್ ಯಕಾನೊಮಿಡಿಸ್

ಇವರ ಸಿನಿಮ್ಯಾಟೋಗ್ರಾಫಿಯಂತೂ ಉಲ್ಲೇಖನಿಯ. ನೈಫಾರ್ ಸಿನಿಮಾದಲ್ಲಿ ಕಪ್ಪು ಬಿಳುಪಿನ ಕಲರ್ ಸ್ಕೀಮ್‌ಅನ್ನು ಬಳಸಿದ್ದರೂ, ಅದ್ಬುತವಾಗಿ ಕಾಣುವ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದಾರೆ. ಕಪ್ಪು ಬಿಳುಪಿನ ಲ್ಯಾಂಡ್‌ಸ್ಕೇಫ್ ಪೋಟೊಗ್ರಾಫಿ ಅತ್ಯುತ್ತಮವಾಗಿ ಮೂಡಿಬಂದಿದೆ.

ಮನೆಗಳು ಅಥವಾ ಚಿಕ್ಕದಾದ ಜಾಗಗಳಲ್ಲಿ ನಟರನ್ನು ಬಾಗಿಲುಗಳ ಮೂಲಕ ಫ್ರೇಮ್ ಮಾಡುವ ಮೂಲಕ ಪಾತ್ರಗಳು ಸಿಕ್ಕಿಹಾಕಿಕೊಂಡಿದ್ದಾರೆಂಬ ಅನಿಸಿಕೆ ಹುಟ್ಟಿಸುತ್ತಾರೆ. ಹಾಗೆಯೇ ಪಾತ್ರಗಳ ಅನೈತಿಕ ಕೆಲಸಗಳನ್ನು ಕಿಟಕಿಗಳ ಮೂಲಕ ನೋಡುತ್ತಿರುವಂತೆ ಪ್ರೇಕ್ಷಕರಿಗೆ ಭಾಸವಾಗುವಂತೆ ಮಾಡುತ್ತಾರೆ.

ಇವರ ಹೆಚ್ಚಿನ ಸಿನಿಮಾಗಳಲ್ಲಿ ಕಪ್ಪು ಬಿಳುಪು ಅಥವಾ ವರ್ಣರಹಿತವಾಗಿರುವ ಕಲರ್ ಸ್ಕೀಮ್ ಇರುವುದನ್ನು ಗಮನಿಸಬಹುದು ಏಕೆಂದರೆ ಇವರ ಕಥಾವಸ್ತುಗಳಲ್ಲಿ ನಿರಾಸಕ್ತಿ, ಖಾಲಿತನವನ್ನೇ ಇವರ ಪೋಟೋಗ್ರಾಫಿಯೂ ಪ್ರತಿಧ್ವನಿಸುತ್ತದೆ.

ಸೋಲ್ ಕಿಕೀಂಗ್(2006)ನಲ್ಲಿ ತಾಕೀಸ್ ಎನ್ನುವ ಪಾತ್ರ ಮನೆ ನಡೆಸಲು ಸಾಲ ಪಡೆದಿರುತ್ತಾನೆ. ಇತ್ತ ಸಾಲಗಾರರು ಕೆಲಸ ಮಾಡುವ ಜಾಗದಲ್ಲಿ ಮತ್ತು ಮನೆಯಲ್ಲಿ ಹೆಂಡತಿ ಈ ಎಲ್ಲರೂ ತಾಕೀಸ್‌ನನ್ನು ಬೈಯ್ಯುತ್ತಿರುವುದೇ ಸಿನಿಮಾದ ಕಥೆ. ಹೀಗೆ ಎಲ್ಲ ಕಡೆಯಿಂದ ಒತ್ತಡವನ್ನು ತಾಳಲಾಗದೆ, ತನ್ನ ಹೆಂಡತಿ ಬೇರೊಬ್ಬನ ಜೊತೆ ಹೊಂದಿರುವ ಅನೈತಿಕ ಸಂಬಂಧವನ್ನು ಸಹಿಸಿಕೊಳ್ಳಲಾಗದೆ ತಾಕೀಸ್ ಕೊಲೆಗಾರನಾಗುವುದೇ ಸಿನಿಮಾದ ಅಂತ್ಯ. ವಿಶೇಷವೆಂದರೆ ಇದರಲ್ಲೂ ಬಣ್ಣಗಳೇ ಇಲ್ಲದಂತೆ ಚಿತ್ರಿಸಿದ್ದಾರೆ.

ವ್ಯಕ್ತಿ ಮತ್ತು ಕೌಟುಂಬಿಕ ಒತ್ತಡಗಳನ್ನು ನಿಭಾಯಿಸಲು ಮಾಡುವ ಪ್ರಯತ್ನಗಳು, ಕೆಲವೊಮ್ಮೆ ಅವುಗಳಿಂದಲೇ ಕೊಲೆಯಾಗುವ ಪಾತ್ರಗಳು, ಇನ್ನೊಮ್ಮೆ ಕೊಲೆ ಮಾಡುವ ಪಾತ್ರಗಳನ್ನು ಸೃಷ್ಠಿಸುವ ಮೂಲಕ ಗ್ರೀಸ್ ಸಮಾಜದಲ್ಲಿರುವ ಕೌಟುಂಬಿಕ ಕಲಹಗಳನ್ನು ಮತ್ತು ಸಂಬಂಧಗಳ ಸಂಘರ್ಷಗಳನ್ನು ನೈಜವಾಗಿ ಯಾನಿಸ್ ಚಿತ್ರಿಸಿದ್ದಾರೆ.


ಇದನ್ನೂ ಓದಿ: ಪಿಕೆ ಟಾಕೀಸ್: ಪೀಳಿಗೆಗಳ ನಡುವಿನ ಸಂಘರ್ಷಗಳನ್ನು ಚಿತ್ರಿಸಿರುವ ಅರ್ಗಿರಿಸ್ ಸಿನಿಮಾಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನರಿಗೆ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿ

ಹಿರಿಯ ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನ ಹಿರಿಯ ಸಾಧಕರು 2026ನೇ ಸಾಲಿನ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಯಚೂರು ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ...

ಗಾಜಾ; ಗೊಂಬೆಯೊಂದಿಗೆ ‘ಅಂತ್ಯಕ್ರಿಯೆ’ ಆಟ ಆಡುವ ಎಳೆಯ ಮಕ್ಕಳ ವಿಡಿಯೋ ವೈರಲ್; ಸುತ್ತಲಿನ ಘಟನೆಯನ್ನು ಪುನರಾವರ್ತಿಸುವ ಮಕ್ಕಳು

ಅಕ್ಟೋಬರ್ 2023 ರಲ್ಲಿ ಇಸ್ರೇಲಿ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದ ನಂತರ ಗಾಜಾದಿಂದ ದುಃಖಕರ ದೃಶ್ಯಗಳು ಹೊರಹೊಮ್ಮುತ್ತಿವೆ. ಇತ್ತೀಚಿನ ಒಂದು ಘಟನೆಯಲ್ಲಿ, ಚಿಕ್ಕ ಮಕ್ಕಳು ಅಂತ್ಯಕ್ರಿಯೆಗಾಗಿ ಗೊಂಬೆಯನ್ನು ಹೊತ್ತುಕೊಂಡು ಹೋಗುವುದನ್ನು ಕಾಣಬಹುದು - ಇದು ಅವರು...

ದೆಹಲಿ| ಆಳವಾದ ಚರಂಡಿಗೆ ಬಿದ್ದು ನೈರ್ಮಲ್ಯ ಕಾರ್ಮಿಕ ಸಾವು; ನ್ಯಾಯಕ್ಕೆ ಆಗ್ರಹಿಸಿದ ಮೃತನ ಕುಟುಂಬ

ಮಾರ್ಚ್ 30 ರಂದು ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್ ಪ್ರದೇಶದಲ್ಲಿ ಸುರಕ್ಷತಾ ಸಾಧನಗಳಿಲ್ಲದೆ ಆಳವಾದ ಚರಂಡಿ ಸ್ವಚ್ಛಗೊಳಿಸುವ ಸಮಯದಲ್ಲಿ ಯುವ ನೈರ್ಮಲ್ಯ ಕಾರ್ಮಿಕ ರಾಹುಲ್ ಎಂಬುವವರು ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 2:00 ರ ಸುಮಾರಿಗೆ...

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲು; ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥ

ಬೆಂಗಳೂರು: ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಭಾಷಣದ ವೇಳೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಪ್ರಿಲ್ 4ರ, ಶುಕ್ರವಾರ ಬೆಂಗಳೂರಿನ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ...

ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್: ನಿರ್ಧಾರ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ರಾಜ್ಯಪಾಲ ಗೆಹ್ಲೋಟ್ 

ಬೆಂಗಳೂರು: 10ನೇ ತರಗತಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ವಿಷಯಕ್ಕೆ ಅಂಕಗಳನ್ನು ಬದಲಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ. ಸರ್ಕಾರವು ಈ ನಿರ್ಧಾರವನ್ನು "ಸಮಗ್ರವಾಗಿ ಪರಿಶೀಲಿಸಬೇಕು" ಎಂದು ಲೋಕಭವನವು...

ತಿರುಚ್ಚಿ ಪೂರ್ವದ ಪೆರಂಬೂರಿನಲ್ಲಿ ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ವರದಿ  

ಚೆನ್ನೈ: ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಎರಡು ಪ್ರತ್ಯೇಕ ಚುನಾವಣಾ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ಕಾನೂನು ಮತ್ತು ರಾಜಕೀಯ ಪರಿಶೀಲನೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪೆರಂಬೂರು ಮತ್ತು...

ಉತ್ತಮ್ ನಗರದಲ್ಲಿ ಶಾಂತಿ ಕಾಪಾಡುವಲ್ಲಿ ದೆಹಲಿ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ ಎಪಿಸಿಆರ್

ಈದ್ ಅಲ್-ಫಿತರ್, ರಾಮ ನವಮಿ ಮತ್ತು ಹನುಮಾನ್ ಜಯಂತಿ ಸೇರಿದಂತೆ ಧಾರ್ಮಿಕ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಉತ್ತಮ್ ನಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿದ್ದಕ್ಕಾಗಿ ನಾಗರಿಕ ಹಕ್ಕುಗಳ ರಕ್ಷಣಾ...

ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ

ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ 'ಔಪಚಾರಿಕ ಕ್ಷಮೆಯಾಚನೆ' ಕೇಳುವುದಾಗಿ...

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...