Homeಕಥೆಕಠೋಪನಿಷತ್ತು - ಬಾಲಕನೊಬ್ಬನ ಬಂಡಾಯದ ಕತೆ: ಯೋಗೇಶ್ ಮಾಸ್ಟರ್

ಕಠೋಪನಿಷತ್ತು – ಬಾಲಕನೊಬ್ಬನ ಬಂಡಾಯದ ಕತೆ: ಯೋಗೇಶ್ ಮಾಸ್ಟರ್

- Advertisement -
- Advertisement -

ಆಚರಣೆಯು ಅನುಷ್ಠಾನದಿಂದ ಹೊರತಾಗಿರುವುದರ ವಿರುದ್ಧವಾಗಿ ಬಂಡಾಯವೇಳುವ ನಚಿಕೇತನೆಂಬ ಹುಡುಗನ ಕತೆ ಈ ಕಠೋಪನಿಷತ್ತು.

ಉದ್ದಾಲಕ ನಚಿಕೇತನ ತಂದೆ. ಅವನು ಸರ್ವವೇದಸ್ ಎಂಬ ಯಜ್ಞವನ್ನು ಮಾಡಿದ. ಅದರ ಪ್ರಕಾರ ತನ್ನಲ್ಲಿರುವ ಎಲ್ಲವನ್ನೂ ಕೂಡಾ ಯಜ್ಞಕರ್ತೃವು ಕೊಡಬೇಕು. ಹಸುಗಳೇ ಅವರ ಸಂಪತ್ತು. ಉದ್ದಾಲಕನು ತನ್ನಲ್ಲಿರುವ ಎಲ್ಲಾ ಹಸುಗಳನ್ನು ದಾನ ಮಾಡುವ ಬದಲು ಉತ್ತಮವಾದ ಹಸುಗಳನ್ನು ಇಟ್ಟುಕೊಂಡು ಗೊಡ್ಡು ಹಸುಗಳನ್ನು ಬಂದವರಿಗೆ ದಾನವಾಗಿ ನೀಡುತ್ತಿದ್ದ.

ಇದನ್ನು ನಚಿಕೇತ ಗಮನಿಸಿದ. ತನ್ನಲ್ಲಿರುವ ಸರ್ವಸ್ವವನ್ನೂ ಕೊಟ್ಟು ಲೌಕಿಕ ಭಾರದಿಂದ ಮುಕ್ತನಾಗಬೇಕಿದ್ದ ತಂದೆ ಆಚರಣೆಯಲ್ಲಿ ಹಾಗೆ ತೋರುತ್ತಿದ್ದಾನೆ ಆದರೆ ವಾಸ್ತವದಲ್ಲಿ ಲೋಭಿಯೇ ಆಗಿದ್ದಾನೆ. ನಡೆನುಡಿ ಹೊಂದದ, ಆಚರಣೆ ಅನುಷ್ಠಾನಗಳಿಗೆ ತಾಳೆಯಾಗದ ಈ ಯಜ್ಞವನ್ನು ಅವನು ಪ್ರತಿಭಟಿಸುವ ರೀತಿ ವಿಶಿಷ್ಟವಾಗಿದೆ.

ನಚಿಕೇತ ಅವರ ಮನೆಯಲ್ಲಿ ಜಾಣನಾಗಿ ಗುರುತಿಸಿಕೊಂಡಿರುವವನಲ್ಲ. ಒಂದು ರೀತಿಯಲ್ಲಿ ಕೆಲಸಕ್ಕೆ ಬಾರದವನು. ಏನೂ ಕೆಲಸಕ್ಕೆ ಬಾರದ ಹಸುಗಳನ್ನು ದಕ್ಷಿಣೆಯಾಗಿ ಕೊಡುತ್ತಿದ್ದ ತಂದೆಯ ಗಮನ ಸೆಳೆದು ಇದೇ ಕೆಲಸಕ್ಕೆ ಬಾರದ ಮಗ ಕೇಳಿದ “ನನ್ನನ್ನು ಯಾರಿಗೆ ಕೊಡುತ್ತೀರಿ?” ಎಂದು.

ಈ ಪ್ರಶ್ನೆಯೇ ಅವನ ಪ್ರತಿಭಟನೆ. ಈ ಪ್ರಶ್ನೆಯಲ್ಲಿ ತಂದೆಯ ಡಾಂಭಿಕತನವನ್ನು ಪ್ರಶ್ನಿಸುತ್ತಾನೆ. ಶುಷ್ಕ ಆಚರಣೆಗಳನ್ನು, ಆಧ್ಯಾತ್ಮ ಮೌಲ್ಯಗಳನ್ನು ಗ್ರಹಿಸದ ವಿಧಿಗಳನ್ನು, ತನ್ನ ಸಂಪತ್ತನ್ನು ದಾನ ತೆಗೆದುಕೊಳ್ಳಿ ಎಂದು ಪೊಳ್ಳನ್ನು ಕೊಡುವ ಮೋಸವನ್ನು ಪ್ರಶ್ನಿಸುತ್ತಾನೆ. ಕೆಲಸಕ್ಕೆ ಬಾರದ ಮಗನನ್ನು ಏನು ಮಾಡುತ್ತೀಯಾ ಎಂದು ಕೆಲಸಕ್ಕೆ ಬಾರದವೆಂದು ಹಸುಗಳನ್ನು ದಾನದ ಹೆಸರಲ್ಲಿ ಕೈ ತೊಳೆದುಕೊಳ್ಳುವ ಮನುಷ್ಯನ ವ್ಯಾಮೋಹವನ್ನು ಪ್ರಶ್ನಿಸುತ್ತಾನೆ.

ನಚಿಕೇತ ಎಲ್ಲೋ ಮೂಲೆಯಲ್ಲಿ ಕೇಳಲಿಲ್ಲ. ಯಜ್ಞ ನಡೆಯುವಲ್ಲಿ ಎಲ್ಲರ ಮುಂದೆ ಕೇಳಿದ. ಮುಜುಗರಗೊಂಡ ತಂದೆ ಉತ್ತರಿಸದೇ ತಪ್ಪಿಸಿಕೊಳ್ಳುತ್ತಾನೆ. ಆದರೆ ಇವನು ಬಿಡದೇ ಮೂರು ಬಾರಿ ಕೇಳುತ್ತಾನೆ. ಕೆರಳಿದ ತಂದೆ ನಿನ್ನ ಸಾವಿಗೆ ಕೊಡುತ್ತೇನೆ ಎನ್ನುತ್ತಾನೆ.

ಮಾತು ಮತ್ತು ಕೃತಿಗಳ ಮೌಲ್ಯವನ್ನು ಎತ್ತಿ ಹಿಡಿಯುವ ನಚಿಕೇತನ ಪ್ರತಿಭಟನೆ ಮುಂದುವರಿಯುತ್ತದೆ. ನಾನು ಸಾವಿಗೆ ಹೋಗುತ್ತೇನೆ ಎಂದು ಹೋಗುತ್ತಾನೆ ನಚಿಕೇತ.
ಮುಂದಿನ ಭಾಗ ರೂಪಕ. ಏಕೆಂದರೆ ಮೃತ್ಯುವಿನ ದೇವತೆಯಾದ ಯಮನಿಗಾಗಿ ಮೂರು ದಿನಗಳ ಕಾಲ ಕಾದು ನಂತರ ಅವನನ್ನು ಸಂಧಿಸಿ ಮರಣದಾಚೆಯ ಬದುಕಿನ ಬಗ್ಗೆ ತಿಳಿದುಕೊಳ್ಳುತ್ತಾನೆ.

ವೈದಿಕರ ಯಾವ ಯಜ್ಞವನ್ನು ವಿರೋಧಿಸಿ ಮಾತು ಕೃತಿಗಳ ಮೌಲ್ಯವನ್ನು ಎತ್ತಿ ಹಿಡಿದನೋ ಆ ನಚಿಕೇತನೇ ಮುಂದೆ ಯಮನಿಂದ ಯಜ್ಞ ಮಾಡುವುದನ್ನು ಕಲಿತುಕೊಳ್ಳುವುದನ್ನು ಸೂಚಿಸುತ್ತದೆ. ಆದರೆ ಅದು ಸಮಿತ್ತುಗಳನ್ನಿಟ್ಟು ಅಗ್ನಿಕಾರ್ಯದಿಂದ ಮಾಡುವ ಯಜ್ಞವಾಗಿರದೇ ಆಂತರಿಕ ಯಜ್ಞವಾಗಿ ಅನಾವರಣಗೊಳ್ಳುತ್ತದೆ.

ಅದೇನೇ ಇರಲಿ, ಒಬ್ಬ ಪ್ರತಿಭಟನಾಕಾರನಿಗೆ ಇರಬೇಕಾದ ಆತ್ಮವಿಶ್ವಾಸವನ್ನು ನಚಿಕೇತ ಅಲ್ಲಿ ತೋರುತ್ತಾನೆ. “ನಿನ್ನನ್ನು ಮೃತ್ಯುವಿಗೆ ಕೊಡುತ್ತೇನೆ” ಎಂದು ತಂದೆ ಹೇಳಿದಾಗ, “ಬಹುಜನರಲ್ಲಿ ಪ್ರಥಮನಾಗಿ, ಬಹುಜನರಲ್ಲಿ ಮಧ್ಯಮನಾಗಿರುವ ನನ್ನಿಂದ ಯಾವ ಕೆಲಸ ಮೃತ್ಯುವಿಗೆ ಆಗುತ್ತದೆ?” ಎಂದು ಯೋಚಿಸುತ್ತಾನೆ. ತಾನು ಅಧಮನಲ್ಲ ಎಂಬ ಆತ್ಮವಿಶ್ವಾಸವಿದೆ ಅವನಲ್ಲಿ. ಅಷ್ಟೇಅಲ್ಲದೇ ತಾನು ಪ್ರತಿಭಟಿಸಿದ ತಂದೆಗೆ ನಿದ್ರೆಗಳಿಂದ ಕೂಡಿರುವ ರಾತ್ರಿಯಿರಲಿ ಎಂದು ಒತ್ತಡರಹಿತವಾದ ಮನಸ್ಥಿತಿ ಬಯಸುತ್ತಾನೆ. ಪ್ರತಿಭಟನೆ ಮತ್ತು ಪ್ರೀತಿ ತೋರುವ ಆತ್ಮೀಯ ಭಾವ ನಚಿಕೇತದಲ್ಲಿ.

ಕಠೋಪನಿಷತ್ತಿನಲ್ಲಿ ಮೂಲಕತೆಯೊಂದಿಗೆ ನುಸುಳುವಿಕೆಗಳಿವೆ ಎಂದು ತೋರುತ್ತದೆ. ಆದರೆ, ನಚಿಕೇತನೆಂಬ ಸಾತ್ವಿಕ ಬಂಡಾಯಗಾರನ ಪ್ರತಿಮೆ ಮಾತ್ರ ಅತ್ಯಂತ ಆಪ್ತ. ಇದನ್ನೇ ಆಧರಿಸಿ ತ ರಾ ಸು “ಬೆಳಕು ತಂದ ಬಾಲಕ” ಎಂಬ ಕಾದಂಬರಿ ರಚಿಸಿದ್ದಾರೆ. ಇದೂ ಕೂಡಾ ನಚಿಕೇತನ ವ್ಯಕ್ತಿತ್ವದ ದರ್ಶನ ಮಾಡಿಸುವಂತದ್ದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...