Homeಕಥೆಕಠೋಪನಿಷತ್ತು - ಬಾಲಕನೊಬ್ಬನ ಬಂಡಾಯದ ಕತೆ: ಯೋಗೇಶ್ ಮಾಸ್ಟರ್

ಕಠೋಪನಿಷತ್ತು – ಬಾಲಕನೊಬ್ಬನ ಬಂಡಾಯದ ಕತೆ: ಯೋಗೇಶ್ ಮಾಸ್ಟರ್

- Advertisement -
- Advertisement -

ಆಚರಣೆಯು ಅನುಷ್ಠಾನದಿಂದ ಹೊರತಾಗಿರುವುದರ ವಿರುದ್ಧವಾಗಿ ಬಂಡಾಯವೇಳುವ ನಚಿಕೇತನೆಂಬ ಹುಡುಗನ ಕತೆ ಈ ಕಠೋಪನಿಷತ್ತು.

ಉದ್ದಾಲಕ ನಚಿಕೇತನ ತಂದೆ. ಅವನು ಸರ್ವವೇದಸ್ ಎಂಬ ಯಜ್ಞವನ್ನು ಮಾಡಿದ. ಅದರ ಪ್ರಕಾರ ತನ್ನಲ್ಲಿರುವ ಎಲ್ಲವನ್ನೂ ಕೂಡಾ ಯಜ್ಞಕರ್ತೃವು ಕೊಡಬೇಕು. ಹಸುಗಳೇ ಅವರ ಸಂಪತ್ತು. ಉದ್ದಾಲಕನು ತನ್ನಲ್ಲಿರುವ ಎಲ್ಲಾ ಹಸುಗಳನ್ನು ದಾನ ಮಾಡುವ ಬದಲು ಉತ್ತಮವಾದ ಹಸುಗಳನ್ನು ಇಟ್ಟುಕೊಂಡು ಗೊಡ್ಡು ಹಸುಗಳನ್ನು ಬಂದವರಿಗೆ ದಾನವಾಗಿ ನೀಡುತ್ತಿದ್ದ.

ಇದನ್ನು ನಚಿಕೇತ ಗಮನಿಸಿದ. ತನ್ನಲ್ಲಿರುವ ಸರ್ವಸ್ವವನ್ನೂ ಕೊಟ್ಟು ಲೌಕಿಕ ಭಾರದಿಂದ ಮುಕ್ತನಾಗಬೇಕಿದ್ದ ತಂದೆ ಆಚರಣೆಯಲ್ಲಿ ಹಾಗೆ ತೋರುತ್ತಿದ್ದಾನೆ ಆದರೆ ವಾಸ್ತವದಲ್ಲಿ ಲೋಭಿಯೇ ಆಗಿದ್ದಾನೆ. ನಡೆನುಡಿ ಹೊಂದದ, ಆಚರಣೆ ಅನುಷ್ಠಾನಗಳಿಗೆ ತಾಳೆಯಾಗದ ಈ ಯಜ್ಞವನ್ನು ಅವನು ಪ್ರತಿಭಟಿಸುವ ರೀತಿ ವಿಶಿಷ್ಟವಾಗಿದೆ.

ನಚಿಕೇತ ಅವರ ಮನೆಯಲ್ಲಿ ಜಾಣನಾಗಿ ಗುರುತಿಸಿಕೊಂಡಿರುವವನಲ್ಲ. ಒಂದು ರೀತಿಯಲ್ಲಿ ಕೆಲಸಕ್ಕೆ ಬಾರದವನು. ಏನೂ ಕೆಲಸಕ್ಕೆ ಬಾರದ ಹಸುಗಳನ್ನು ದಕ್ಷಿಣೆಯಾಗಿ ಕೊಡುತ್ತಿದ್ದ ತಂದೆಯ ಗಮನ ಸೆಳೆದು ಇದೇ ಕೆಲಸಕ್ಕೆ ಬಾರದ ಮಗ ಕೇಳಿದ “ನನ್ನನ್ನು ಯಾರಿಗೆ ಕೊಡುತ್ತೀರಿ?” ಎಂದು.

ಈ ಪ್ರಶ್ನೆಯೇ ಅವನ ಪ್ರತಿಭಟನೆ. ಈ ಪ್ರಶ್ನೆಯಲ್ಲಿ ತಂದೆಯ ಡಾಂಭಿಕತನವನ್ನು ಪ್ರಶ್ನಿಸುತ್ತಾನೆ. ಶುಷ್ಕ ಆಚರಣೆಗಳನ್ನು, ಆಧ್ಯಾತ್ಮ ಮೌಲ್ಯಗಳನ್ನು ಗ್ರಹಿಸದ ವಿಧಿಗಳನ್ನು, ತನ್ನ ಸಂಪತ್ತನ್ನು ದಾನ ತೆಗೆದುಕೊಳ್ಳಿ ಎಂದು ಪೊಳ್ಳನ್ನು ಕೊಡುವ ಮೋಸವನ್ನು ಪ್ರಶ್ನಿಸುತ್ತಾನೆ. ಕೆಲಸಕ್ಕೆ ಬಾರದ ಮಗನನ್ನು ಏನು ಮಾಡುತ್ತೀಯಾ ಎಂದು ಕೆಲಸಕ್ಕೆ ಬಾರದವೆಂದು ಹಸುಗಳನ್ನು ದಾನದ ಹೆಸರಲ್ಲಿ ಕೈ ತೊಳೆದುಕೊಳ್ಳುವ ಮನುಷ್ಯನ ವ್ಯಾಮೋಹವನ್ನು ಪ್ರಶ್ನಿಸುತ್ತಾನೆ.

ನಚಿಕೇತ ಎಲ್ಲೋ ಮೂಲೆಯಲ್ಲಿ ಕೇಳಲಿಲ್ಲ. ಯಜ್ಞ ನಡೆಯುವಲ್ಲಿ ಎಲ್ಲರ ಮುಂದೆ ಕೇಳಿದ. ಮುಜುಗರಗೊಂಡ ತಂದೆ ಉತ್ತರಿಸದೇ ತಪ್ಪಿಸಿಕೊಳ್ಳುತ್ತಾನೆ. ಆದರೆ ಇವನು ಬಿಡದೇ ಮೂರು ಬಾರಿ ಕೇಳುತ್ತಾನೆ. ಕೆರಳಿದ ತಂದೆ ನಿನ್ನ ಸಾವಿಗೆ ಕೊಡುತ್ತೇನೆ ಎನ್ನುತ್ತಾನೆ.

ಮಾತು ಮತ್ತು ಕೃತಿಗಳ ಮೌಲ್ಯವನ್ನು ಎತ್ತಿ ಹಿಡಿಯುವ ನಚಿಕೇತನ ಪ್ರತಿಭಟನೆ ಮುಂದುವರಿಯುತ್ತದೆ. ನಾನು ಸಾವಿಗೆ ಹೋಗುತ್ತೇನೆ ಎಂದು ಹೋಗುತ್ತಾನೆ ನಚಿಕೇತ.
ಮುಂದಿನ ಭಾಗ ರೂಪಕ. ಏಕೆಂದರೆ ಮೃತ್ಯುವಿನ ದೇವತೆಯಾದ ಯಮನಿಗಾಗಿ ಮೂರು ದಿನಗಳ ಕಾಲ ಕಾದು ನಂತರ ಅವನನ್ನು ಸಂಧಿಸಿ ಮರಣದಾಚೆಯ ಬದುಕಿನ ಬಗ್ಗೆ ತಿಳಿದುಕೊಳ್ಳುತ್ತಾನೆ.

ವೈದಿಕರ ಯಾವ ಯಜ್ಞವನ್ನು ವಿರೋಧಿಸಿ ಮಾತು ಕೃತಿಗಳ ಮೌಲ್ಯವನ್ನು ಎತ್ತಿ ಹಿಡಿದನೋ ಆ ನಚಿಕೇತನೇ ಮುಂದೆ ಯಮನಿಂದ ಯಜ್ಞ ಮಾಡುವುದನ್ನು ಕಲಿತುಕೊಳ್ಳುವುದನ್ನು ಸೂಚಿಸುತ್ತದೆ. ಆದರೆ ಅದು ಸಮಿತ್ತುಗಳನ್ನಿಟ್ಟು ಅಗ್ನಿಕಾರ್ಯದಿಂದ ಮಾಡುವ ಯಜ್ಞವಾಗಿರದೇ ಆಂತರಿಕ ಯಜ್ಞವಾಗಿ ಅನಾವರಣಗೊಳ್ಳುತ್ತದೆ.

ಅದೇನೇ ಇರಲಿ, ಒಬ್ಬ ಪ್ರತಿಭಟನಾಕಾರನಿಗೆ ಇರಬೇಕಾದ ಆತ್ಮವಿಶ್ವಾಸವನ್ನು ನಚಿಕೇತ ಅಲ್ಲಿ ತೋರುತ್ತಾನೆ. “ನಿನ್ನನ್ನು ಮೃತ್ಯುವಿಗೆ ಕೊಡುತ್ತೇನೆ” ಎಂದು ತಂದೆ ಹೇಳಿದಾಗ, “ಬಹುಜನರಲ್ಲಿ ಪ್ರಥಮನಾಗಿ, ಬಹುಜನರಲ್ಲಿ ಮಧ್ಯಮನಾಗಿರುವ ನನ್ನಿಂದ ಯಾವ ಕೆಲಸ ಮೃತ್ಯುವಿಗೆ ಆಗುತ್ತದೆ?” ಎಂದು ಯೋಚಿಸುತ್ತಾನೆ. ತಾನು ಅಧಮನಲ್ಲ ಎಂಬ ಆತ್ಮವಿಶ್ವಾಸವಿದೆ ಅವನಲ್ಲಿ. ಅಷ್ಟೇಅಲ್ಲದೇ ತಾನು ಪ್ರತಿಭಟಿಸಿದ ತಂದೆಗೆ ನಿದ್ರೆಗಳಿಂದ ಕೂಡಿರುವ ರಾತ್ರಿಯಿರಲಿ ಎಂದು ಒತ್ತಡರಹಿತವಾದ ಮನಸ್ಥಿತಿ ಬಯಸುತ್ತಾನೆ. ಪ್ರತಿಭಟನೆ ಮತ್ತು ಪ್ರೀತಿ ತೋರುವ ಆತ್ಮೀಯ ಭಾವ ನಚಿಕೇತದಲ್ಲಿ.

ಕಠೋಪನಿಷತ್ತಿನಲ್ಲಿ ಮೂಲಕತೆಯೊಂದಿಗೆ ನುಸುಳುವಿಕೆಗಳಿವೆ ಎಂದು ತೋರುತ್ತದೆ. ಆದರೆ, ನಚಿಕೇತನೆಂಬ ಸಾತ್ವಿಕ ಬಂಡಾಯಗಾರನ ಪ್ರತಿಮೆ ಮಾತ್ರ ಅತ್ಯಂತ ಆಪ್ತ. ಇದನ್ನೇ ಆಧರಿಸಿ ತ ರಾ ಸು “ಬೆಳಕು ತಂದ ಬಾಲಕ” ಎಂಬ ಕಾದಂಬರಿ ರಚಿಸಿದ್ದಾರೆ. ಇದೂ ಕೂಡಾ ನಚಿಕೇತನ ವ್ಯಕ್ತಿತ್ವದ ದರ್ಶನ ಮಾಡಿಸುವಂತದ್ದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...