Homeಸಿನಿಮಾಲವ್ ಪೀಳಿಗೆಯನ್ನು ಎಚ್ಚರಿಸುವ ಸಿನಿಮಾ

ಲವ್ ಪೀಳಿಗೆಯನ್ನು ಎಚ್ಚರಿಸುವ ಸಿನಿಮಾ

- Advertisement -
- Advertisement -

ಸೋಮಶೇಖರ್ ಚಲ್ಯ ||

ನಡುವೆ ಅಂತರವಿರಲಿ. ಎಲ್ಲಾ ವಾಹನಗಳ ಹಿಂದೆಯೂ ಈ ಸಾಲು ಇದ್ದೇ ಇರುತ್ತದೆ. ಇದನ್ನ ಸಿನಿಮಾದ ಆರಂಭದಲ್ಲಿಯೂ ಮೆನ್ಷನ್ ಮಾಡಿದ್ದಾರೆ. ಹಾಗೆಯೇ ಈ ಅಂತರ ಪ್ರೀತಿಯಲ್ಲಿಯೂ ಇರಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಇದ್ದೇ ಇರುತ್ತದೆ.
ಪ್ರೀತಿ ಎಂಬುದು ಸುಂದರವಾದ ಅನುಬಂಧ, ಎರಡು ಮನಸುಗಳ ಸುಮಧುರ ಸಮ್ಮಿಲನ. ಪ್ರೀತಿ ಕಣ್ಣಾಮಚ್ಚಾಲೆಯ ಆಟವಲ್ಲ. ಆದರೆ ಇಂದು ಕಾಮದ ಸೆಳೆತದ ಮುಸುಕಿನಲ್ಲಿ ಕಮರಿಹೋಗುತ್ತಿದೆ. ಮನಸ್ಸುಗಳನ್ನು ಭಾವನೆಗಳನ್ನು ಬೆಸೆಯುವ ಮಾನದಂಡವಾಗಿದ್ದ ಪ್ರೀತಿಯನ್ನು ದೈಹಿಕ ಆಕರ್ಷಣೆಯೊಳಗೆ ಎಳೆದು ನಿಲ್ಲಿಸುವುದರ ಅಪಾಯವನ್ನು ಬಿಚ್ಚಿಡುವ ಪ್ರಯತ್ನವನ್ನು ನಡುವೆ ಅಂತರವಿರಲಿ ಚಿತ್ರತಂಡ ಮಾಡಿದೆ.
ಮದುವೆ ಎಂಬುದು ಹೇಗೆ ಬದುಕಿನ ಟರ್ನಿಂಗ್ ಪಾಯಿಂಟ್ ಎಂದು ಕರೆಯುತ್ತೇವೋ ಅದು ಈಗ ಪ್ರೀತಿಯೆಡೆಗೆ ವಾಲಿದೆ. ಪ್ರೀತಿ ಗಟ್ಟಿಯಾಗಿ ಬೇರೂರಿದಾಗಲೇ ಬದುಕು ಮುಂದೆ ಸಾಗಲು ಸಾಧ್ಯ. ಪರಿಚಯದ ಮುಂದುವರಿದ ಭಾಗವಾಗಿ ಪ್ರೀತಿ ಬೆಳೆಯುತ್ತದೆ. ಪರಸ್ಪರ ಅಭಿರುಚಿ, ಆಲೋಚನೆ, ಅಭಿವ್ಯಕ್ತಿಗಳಲ್ಲಿ ಸಾಮತ್ಯ ಇದ್ದಾಗ ಪರಿಚಯ ಗಟ್ಟಿಯಾಗುತ್ತಾ ಸಾಗುತ್ತದೆ. ಈ ಹಾದಿಯಲ್ಲಿ ಅದು ಸ್ನೇಹವೋ, ಪ್ರೀತಿಯೋ ಎಂದು ಗುರುತಿಸಲ್ಪಡುತ್ತದೆ. ಗಟ್ಟಿಯಾದ ಸ್ನೇಹ ಪ್ರೀತಿಯಾಗಿ ಬದಲಾಗಲು ಸಾಧ್ಯವಿಲ್ಲ. ಅಂತೆಯೇ ಪ್ರೀತಿ ಸ್ನೇಹವಾಗಲೂ ಆಗುವುದಿಲ್ಲ. ಮನಸ್ಸಿನ ಭಾವನೆಗಳ ಸಮ್ಮಿಲನದಿಂದ ಹುಟ್ಟುವ ಪ್ರೀತಿಗೆ ಕಾಮದ ಆತುರತೆಯ ಹಂಗಿರುವುದಿಲ್ಲ. ಸ್ನೇಹದಲ್ಲೂ ಪ್ರೀತಿ ಇರುತ್ತದೆ, ಪ್ರೀತಿಯಲ್ಲೂ ಪ್ರೀತಿ ಇರುತ್ತದೆ. ಆದರೆ ಅವೆರೆಡರ ಮಧ್ಯೆ ಕೆಲವು ವ್ಯತ್ಯಾಸಗಳಿರುತ್ತವೆ. ಹೆಣ್ಣು ಗಂಡಿನ ನಡುವಿನ ಗಟ್ಟಿಯಾದ ಸ್ನೇಹವನ್ನು ಅರ್ಥೈಸಿಕೊಳ್ಳುವಲ್ಲಿ ಎಲ್ಲರೂ ಎಡವುತ್ತಾರೆ. ಸ್ನೇಹವನ್ನು ಪ್ರೀತಿಯೆಂದು ಭಾವಿಸಿ ಪ್ರೀತಿಯ ಅಲೆಯಲ್ಲಿ ಜಾರುತ್ತಾ ಸ್ನೇಹ-ಪ್ರೀತಿ ಎರಡೂ ಒಂದೇ ಎಂಬಂತೆ ಬಿಂಬಿಸಲಾಗುತ್ತಿದೆ. ಇಂತಹ ಒಡನಾಟದಲ್ಲಿ ಒಮ್ಮೆ ಮನಸ್ಸಿನಲ್ಲಿ ಮೂಡಿದ ಭಾವನೆ ತನ್ನಿಷ್ಟಕ್ಕೆ ತಕ್ಕಂತೆ ಬದಲಾಗಲಾರದು. ಒಡನಾಟದಿಂದ ಹುಟ್ಟುವ ಪ್ರೀತಿ ಇಂದು ‘ಲವ್ ಅಟ್ ಫಸ್ಟ್ ಸೈಟ್’ ಪ್ರೀತಿಯಾಗಿ ಬದಲಾಗಿದೆ. ಇಂತಹ ಪ್ರೀತಿಗೆ ನೆಲೆಯಿಲ್ಲ. ಅಕ್ಚುಯಲಿ ನೋಡಿದ ಕ್ಷಣದಲ್ಲಿ ಹುಟ್ಟುವುದು ಪ್ರೀತಿಯೇ ಅಲ್ಲ ಅದು ದೈಹಿಕ ಸೆಳೆತವಷ್ಟೇ. ಇಂತಹ ಸೆಳೆತದಿಂದ ಹುಟ್ಟುವ ಪ್ರೀತಿಯ ಒಳ-ಹೊರಗು ಈ ಚಿತ್ರದ ಕಥೆಯಾಗಿದೆ.
ನೋಡಿದ ತಕ್ಷಣ ಹುಟ್ಟುವ ಪ್ರೀತಿಯೇ ಆಗಿರಲಿ ಅಥವಾ ಒಡನಾಟದಲ್ಲಿ ಹುಟ್ಟಿದ ಪ್ರೀತಿಯೇ ಆಗಿರಲಿ ಆ ಪ್ರೀತಿಯಲ್ಲಿ ಕಣ್ಣಾ ಮುಚ್ಚಾಲೆಯ ಆಟ ಇರಬಾರದು. ಆದರೆ ಇಂದಿನ ಪ್ರೇಮಿಗಳ ಪ್ರೀತಿಯೆಂದರೆ ಅದು ಕಣ್ಣಾ ಮುಚ್ಚಾಲೆಯ ಆಟವಾಗಿ, ಪ್ರೀತಿ ತನ್ನ ಅರ್ಥವನ್ನೇ ಕಳೆದುಕೊಂಡಿದೆ. ಪ್ರೀತಿಯೆಂದರೆ ಆತಂಕ ಪಡುವ ಸನ್ನಿವೇಶ ಎದುರಾಗುತ್ತಿವೆ. ಪ್ರೀತಿಯಲ್ಲಿ ಜಾರುವ ಮುನ್ನ ಸ್ನೇಹಿತ ಗುಂಪಿನಲ್ಲಿರುತ್ತಿದ್ದ ಗೆಳೆಯ/ತಿ ಗುಂಪಿನಿಂದ ಮಾಯವಾಗುತ್ತಾರೆ. ಏಕಾಂತದ ಹೆಸರಲ್ಲಿ ಪ್ರೀತಿಯ ಸುತ್ತಾ ಗಿರಕಿ ಹೊಡೆಯುತ್ತಾ, ಬದುಕಿನ ಇನ್ನೆಲ್ಲವನ್ನೂ ಮರೆತು ಪ್ರೀತಿಯೇ ಬದುಕೆಂಬಂತೆ ಮುಳುಗಿ, ಸುಳ್ಳಿನ ಸರಮಾಲೆಯನ್ನೇ ತಮ್ಮ ಸುತ್ತಾ ಹೆಣೆದುಕೊಳ್ಳುತ್ತಾರೆ. ಅದಷ್ಟೇ ಅಲ್ಲ, ಎಂದಾದರೂ ಹೊರಬರಲೇ ಬೇಕಾದ ಪ್ರೀತಿಯೂ ಗೌಪ್ಯವಾಗಿರುತ್ತದೆ. ಪ್ರೀತಿ ಬಚ್ಚಿಟ್ಟುಕೊಂಡು ಆಡುವ ಆಟವಲ್ಲ. ಅದು ಬದುಕಿನ ಭಾಗ, ಎಂದಾದರೊಮ್ಮೆ ಹೊರ ಬರಲೇಬೇಕು. ಹೀಗಿರುವಾಗ ಪ್ರೀತಿಯನ್ನು ಮುಚ್ಚಿಡುವುದರಿಂದ ಪ್ರಯೋಜನವಿಲ್ಲ. ಇಂತಹ ಮುಚ್ಚಾಟದಿಂದ ಕೂಡಿದ ಪ್ರೀತಿ ಎಂದಿಗೂ ಟ್ರೂ ಲವ್ ಎನಿಸಿಕೊಳ್ಳಲಾರದು. ಹೆತ್ತವರನ್ನು ಫೇಸ್ ಮಾಡಿ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲಾಗದವರ ಮುಚ್ಚಿಟ್ಟ ಪ್ರೀತಿಯ ಅಂತ್ಯ ಬಹಳ ಕ್ರೂರವಾಗಿರುತ್ತದೆ. ಪ್ರೀತಿ ಚಿಗುರೊಡೆಯುವ ಸಮಯದಲ್ಲೇ ಅದು ಹೆತ್ತವರ ಮುಂದೆ ತೆರೆದಿರಬೇಕೇ ವಿನಹ ಸುಳ್ಳಿನ ಪರದೆಯಲ್ಲಿ ಮಾಸಬಾರದು.
ಆಕರ್ಷಣೆಯಿಂದ ಹುಟ್ಟುವ ಪ್ರೀತಿಯೂ ಕೆಲವೊಮ್ಮೆ ಆಲೋಚನೆಗಳ ಹೊಂದಾಣಿಕೆಯಿಂದ ಯಶಸ್ವಿಯಾಗುತ್ತವೆ. ಆದರೆ ಬಹುತೇಕ ಹೊಂದಾಣಿಕೆಯಿಲ್ಲದೆ ಅರ್ಧಕ್ಕೆ ಮುರಿದು ಬೀಳುತ್ತವೆ. ಇಂತಹ ಆಕರ್ಷಣೆಯ ಪ್ರೀತಿ ಆರಂಭದಲ್ಲೇ ರೊಮ್ಯಾನ್ಸ್ ಎಡೆಗೆ ತಿರುಗಿ ಅದೇ ಪ್ರೀತಿ ಎಂಬಂತೆ ಬಿಂಬಿತವಾಗುತ್ತದೆ. ಈ ಪ್ರೀತಿ ವiನಸ್ಸಿನ ಹೊಂದಾಣಿಕೆಯ ಮೊದಲ ಹಂತ ದಾಟುವ ಮೊದಲೆ ಪ್ರೇಮಿಗಳೆಂದುಕೊಂಡ ಜೋಡಿ ತಮ್ಮ ಎಲ್ಲೆಯನ್ನು ಮೀರಿ ದೈಹಿಕ ಹೊಂದಾಣಿಕೆಗೆ ಶರಣಾಗುತ್ತಾರೆ. ಇಷ್ಟೆಲ್ಲಾ ಅಂತರವನ್ನು ಮೀರಿದ ಪ್ರೀತಿಯನ್ನು ಉಳಿಸಿಕೊಳ್ಳಲೂ ಆಗದೆ, ಬಿಡಲೂ ಆಗದೆ ಒದ್ದಾಡುತ್ತಾ ಕೊನೆಗೆ ಕಮರಿ ಹೋಗುತ್ತದೆ. ಇದೆಲ್ಲದರೊಳಗೆ ಒಂದು ಜೀವ ಸೃಷ್ಟಿಯಾಗಿ ಆ ಜೀವದ ಭವಿಷ್ಯ ಆರಂಭದಲ್ಲೇ ಬದುಕಿದ್ದೂ ಹೇಗೆ ಅಂತ್ಯವಾಗುತ್ತದೆ ಎಂಬುದನ್ನು ನಿರ್ದೇಶಕ ರವೀಣ್ ಕುಮಾರ್ ಚಿತ್ರಿಸಿದ್ದಾರೆ.
ತನ್ನಂತೆಯೇ ತನ್ನ ಸ್ನೇಹಿತೆ ಆಕರ್ಷಣೆಯ ಪ್ರೀತಿಗೆ ತುತ್ತಾಗಬಾರದೆಂದು ಕಾಳಜಿ ತೋರುವ ಪ್ರೀತಿಯಿಂದ ಮೋಸವಾದ ಗೆಳತಿ. ಆ ಗೆಳತಿಗೆ ತಿಳಿಯದಂತೆ ಕದ್ದುಮುಚ್ಚಿ ಪ್ರೀತಿಸುವ ನಿತ್ಯ, ಇವರ ಪ್ರೀತಿಯ ವಿಷಯ ತಿಳಿದ ಗೆಳತಿ ನಿತ್ಯಳ ಅಮ್ಮ-ಅಪ್ಪರಿಗೆ ವಿಷಯ ತಿಳಿಸಿದಾಗ. ತನ್ನ ಸ್ನೇಹಿತೆಯ ನಡತೆಯೇ ಸರಿಯಿಲ್ಲ ಎಂದು ವಾದಿಸಿ ನುಣುಚಿಕೊಂಡ ನಿತ್ಯ. ತಂದೆತಾಯಿ ಅವಳ ಮೇಲಿಟ್ಟಿದ್ದ ಅಪಾರ ನಂಬಿಕೆಯನ್ನ ಅಳಿಸಿ ಹಾಕುವಂತೆ ಕಣ್ಣಾಮುಚ್ಚಾಲೆಯ ಪ್ರೀತಿ. ತಪ್ಪು ಮಾಡುವ ವಯಸ್ಸಿನಲ್ಲಿ ತಪ್ಪು ಮಾಡಿದರೆ ಅದು ತಪ್ಪೇ ಅಲ್ಲವೆಂದು ತಮ್ಮ ನಡುವಿನ ಅಂತರವನ್ನು ಮೀರಿ ಮುಂದುವರೆದು ದೈಹಿಕ ತೃಷೆಗೆ ಒಳಗಾಗಿ ತನ್ನ ಹೊಟ್ಟೆಯಲ್ಲಿ ಮತ್ತೊಂದು ಜೀವ ಚಿಗುರೊಡೆದ ಮೇಲೆ ಮತ್ತದೆ ಗೆಳತಿಯ ಅಂಗಲಾಚುತ್ತಾಳೆ. ತನ್ನ ಮಗಳು ಮದುವೆಗೂ ಮುಂಚೆಯೇ ತಾಯಿಯಾಗಿದ್ದಾಳೆಂದು ತಿಳಿದರೂ ನೋವನ್ನು ಸಹಿಸಿಕೊಂಡು ಶಾಕ್‍ನಿಂದ ಹೊರಬರಲಾರದೆ ಮಗಳಿಗೆ ಮದುವೆ ಮಾಡಲು ಮಗಳ ಲವರ್ ಸಂಜಯ್ ಮನೆಯಲ್ಲಿ ಅಂಗಲಾಚುವ ಪೋಷಕರು. ಆದರೆ ನಿತ್ಯ – ಸಂಜಯ್ ನಡುವಿನ ಈಗೋಗಳಿಂದ ಕೊನೆಗೂ ಅವರಿಬ್ಬರ ಮದುವೆ ಆಗುವುದೇ ಇಲ್ಲ. ನಿತ್ಯ ಮಗುವಿಗೆ ಜನ್ಮ ನೀಡುತ್ತಾಳೆ. ಹುಟ್ಟಿದ ಮಗುವನ್ನು ಅನಾಥ ಆಶ್ರಮದಲ್ಲಿ ಬಿಟ್ಟು ಮತ್ತೊಂದು ಮದುವೆಯಾಗುತ್ತಾರೆ. ಇಂತಹ ದೈಹಿಕ ಆಕರ್ಷಣೆಯ ಪ್ರೀತಿಗೆ ಬಲಿಯಾಗುವುದು ಏನು ಅರಿಯದ ಮಗುವೆಂದು ಸಿನಿಮಾದಲ್ಲಿ ಕಥೆ ಎಣೆದಿದ್ದರೂ. ಇಂತಹ ಲವ್ ಸ್ಟೋರಿಗಳಿಗೆ ಬಲಿಯಾಗುವುದು ಹೆಣ್ಣು ಮಕ್ಕಳೇ. ಗಂಡು ತಪ್ಪು ಮಾಡುತ್ತಾನೆ, ಅವನೊಂದಿಗೆ ಮಲಗುವಾಗ ನಿಮ್ಮ ಮಗಳ ಬುದ್ಧಿ ಎಲ್ಲಿ ಹೋಗಿತ್ತು ಎಂಬ ಮಾತು ಈ ಸಮಾಜ ಎಲ್ಲಾ ತಪ್ಪುಗಳನ್ನು ಹೆಣ್ಣಿನ ಮೇಲೆ ಏರುವುದನ್ನು ಬಿಂಬಿಸುತ್ತದೆ. ಗಂಡು ರಸಿಕನಾದರೆ, ಹೆಣ್ಣು ನಡತೆಗೆಟ್ಟವಳಾಗುತ್ತಾಳೆ.
ತಮ್ಮ ಮಕ್ಕಳು ತಮ್ಮ ನಡುವಿನ ಅಂತರವನ್ನು ಮೀರಿ ಮುಂದುವರೆದಿದ್ದಾರೆಂದು ತಿಳಿದರೂ ಜಾತಿ ಪ್ರತಿಷ್ಠೆಗಾಗಿ ಅವರಿಬ್ಬರನ್ನು ದೂರ ಮಾಡುವ ಸಂಚು ಹಾಕುವ ಸಂಜಯ್ ಪೋಷಕರು, ಇಂದಿನ ಮರ್ಯಾದಾ ಹತ್ಯೆಗಳನ್ನು ಪ್ರತಿನಿಧಿಸುತ್ತಾರೆ. ಜಾತಿ-ವರ್ಗಗಳ ತಾರತಮ್ಯದ ಗಡಿಗಳನ್ನು ಮೀರಿ ಪ್ರೀತಿ ಬೆಳೆಯಬೇಕು. ಆದರೆ ಆ ಪ್ರೀತಿ ತನ್ನನ್ನು ಉಳಿಸಿಕೊಳ್ಳುವುದರೊಳಗೆ ಅದು ಮತ್ತೊಂದು ತಪ್ಪಿಗೆ ಅವಕಾಶ ನೀಡಬಾರದು. ಪ್ರೇಮಿಗಳು ಬಾಳ ಸಂಗಾತಿಗಳಾಗುವವರೆಗೆ ಅಂತಹ ತಪ್ಪುಗಳಿಂದ ಅಂತರವನ್ನು ಕಾಯ್ದುಕೊಳ್ಳಬೇಕು. ಪ್ರೀತಿ ಬದುಕಿನ ಒಂದು ಭಾಗವಾಗಿರಬೇಕೆ ಹೊರತು ಪ್ರೀತಿಯೇ ಬದುಕಾಗಬಾರದು. ಸ್ನೇಹವನ್ನೇ ಮರೆತು ಪ್ರೀತಿಯಲ್ಲಿ ಬಿದ್ದು ಅದರೊಳಗೆ ಈಜುತ್ತಾ ಬಾವಿಯೊಳಗಿನ ಕಪ್ಪೆಯಾಗಬಾರದು. ಪ್ರೀತಿಯ ಜೊತೆಗೆ ಸ್ನೇಹವೂ ಇರಬೇಕು. ಪ್ರೀತಿಯ ಬಗೆಗೆ ಹಾಗೂ ಅದರಾಚೆಗೂ ಸ್ನೇಹಿತರು, ಪೋಷಕರ ಸಲಹೆಗಳನ್ನು ಪ್ರೀತಿಯ ಗುಂಗಿನಿಂದ ನೆಗ್ಲೆಟ್ ಮಾಡಬಾರದು ಹಾಗಂತ ಎಲ್ಲವನ್ನೂ ಕೇಳಲೇಬೇಕೆಂದಲ್ಲ ಅವುಗಳ ಬಗೆಗೆ ಯೋಚಿಸಿ ತೀರ್ಮಾನ ಮಾಡುವಂತಾದರೂ ಇರಬೇಕು. ಪ್ರೀತಿ ಮುಚ್ಚಿಡುವ ವಿಷಯವಲ್ಲ, ಪ್ರೀತಿಯಲ್ಲಿ ಯಾವುದು ಇರಬಾರದು, ಯಾವುದು ಇರಬೇಕು ಎಂಬುದನ್ನು ಚಿತ್ರ ಪರದೆಯ ಮೇಲೆ ತೋರಿಸಿದೆ.
ಇಂದಿನ ಲವ್ ಸ್ಟೋರಿಗಳಲ್ಲಿ ಪ್ರೀತಿಯನ್ನು ಉಳಿಸಿಕೊಳ್ಳಲು ಮನೆಯಿಂದ ಓಡಿಹೋಗುವ, ಕೈ ಕತ್ತರಿಸಿಕೊಳ್ಳುವ, ಪ್ರೀತಿಯಲ್ಲಿ ಏನೇ ಮಾಡಿದರೂ ಸರಿ ಎಂದು ತೋರಿಸುವ ಸಿನಿಮಾಗಳ ಮಧ್ಯೆ ಪ್ರೀತಿಯಲ್ಲೂ ಆಗುವ ತಪ್ಪುಗಳು, ಪ್ರೀತಿಸುವ ಮುನ್ನ ವಹಿಸಬೇಕಾದ ಎಚ್ಚರಿಕೆಗಳನ್ನು ನಡುವೆ ಅಂತರವಿರಲಿ ಚಿತ್ರತಂಡ ಯುವಜನರ ಮನಸ್ಸಿನಲ್ಲಿ ಹೊಸ ಆಲೋಚನೆಗಳು, ಎಚ್ಚರಿಕೆಗಳನ್ನು ಹುಟ್ಟುಹಾಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...