Homeಮುಖಪುಟ'ಲವ್ ಜಿಹಾದ್' ಕಾರ್ಯಕ್ರಮಗಳನ್ನು ತೆಗೆದು ಹಾಕಲು ಐದು ಚಾನೆಲ್‌ಗಳಿಗೆ ಎನ್‌ಬಿಡಿಎಸ್‌ಎ ಆದೇಶ

‘ಲವ್ ಜಿಹಾದ್’ ಕಾರ್ಯಕ್ರಮಗಳನ್ನು ತೆಗೆದು ಹಾಕಲು ಐದು ಚಾನೆಲ್‌ಗಳಿಗೆ ಎನ್‌ಬಿಡಿಎಸ್‌ಎ ಆದೇಶ

- Advertisement -
- Advertisement -

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‌ಸಿಆರ್‌ಟಿ) ಪಠ್ಯಪುಸ್ತಕವನ್ನು ‘ಲವ್ ಜಿಹಾದ್’ ಪಿತೂರಿಯೊಂದಿಗೆ ಜೋಡಿಸುವ ಎಂಟು ಕಾರ್ಯಕ್ರಮಗಳನ್ನು ತೆಗೆದುಹಾಕುವಂತೆ ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರವು (ಎನ್‌ಬಿಡಿಎಸ್‌ಎ) ಮಂಗಳವಾರ (ಡಿಸೆಂಬರ್ 2) ಐದು ಸುದ್ದಿ ವಾಹಿನಿಗಳಿಗೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ.

ಎನ್‌ಸಿಇಆರ್‌ಟಿಯ 3ನೇ ತರಗತಿಯ ಪರಿಸರ ಅಧ್ಯಯನದ ಹಳೆಯ ಅಧ್ಯಾಯವಾದ ‘ಚಿಟ್ಟಿ ಆಯಿ ಹೈ’ ನಲ್ಲಿ ಕಾಲ್ಪನಿಕ ಪತ್ರವೊಂದನ್ನು ತಪ್ಪಾಗಿ ನಿರೂಪಿಸಿರುವ ಬಗ್ಗೆ ದೂರು ದಾಖಲಾಗಿತ್ತು. ರೀನಾ ಎಂಬ ಪಾತ್ರಧಾರಿ ಅಹ್ಮದ್ ಎಂಬ ಮತ್ತೊಂದು ಪಾತ್ರಕ್ಕೆ ಬರೆದ ಪತ್ರವನ್ನು ದೂರದರ್ಶನ ವಾಹಿನಿಗಳು ಲವ್ ಜಿಹಾದ್ ಪಿತೂರಿಯ ಪುರಾವೆಯಾಗಿ ತಪ್ಪಾಗಿ ಬಿಂಬಿಸಿವೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಇಂಡಿಯಾ ಟಿವಿ, ನ್ಯೂಸ್ 18 ಎಂಪಿ/ಛತ್ತೀಸ್‌ಗಢ, ಝೀ ಎಂಪಿ/ಛತ್ತೀಸ್‌ಗಢ, ಜೀ ನ್ಯೂಸ್ ಮತ್ತು ಎಬಿಪಿ ನ್ಯೂಸ್‌ನಲ್ಲಿ ಪ್ರಸಾರ ಮಾಡಲಾಗಿದ್ದ ಕಾರ್ಯಕ್ರಮಗಳ ವಿರುದ್ಧ ಇಂದ್ರಜೀತ್ ಘೋರ್ಪಡೆ ಮತ್ತು ಉತ್ಕರ್ಷ್ ಮಿಶ್ರಾ ಎಂಬವರು ದೂರು ನೀಡಿದ್ದರು.

ಪಠ್ಯಪುಸ್ತಕದಲ್ಲಿ ಕೇವಲ ಒಬ್ಬ ಹುಡುಗಿ ಬೇರೆ ಧರ್ಮದ ಹುಡುಗನಿಗೆ ಪತ್ರ ಬರೆದಿದ್ದಾರೆ ಎಂಬ ಕಾರಣಕ್ಕಾಗಿ ಅದನ್ನು ಲವ್ ಜಿಹಾದ್ ಎಂದು ಪ್ರಚಾರ ಮಾಡಿ ವಿಡಿಯೋಗಳನ್ನು ಹಾಕುವುದು ಸರಿಯಲ್ಲ ಎಂದು ಎನ್‌ಬಿಡಿಎಸ್‌ಎ ಡಿಸೆಂಬರ್ 2ರಂದು ನೀಡಿರುವ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಆದ್ದರಿಂದ ಅಂತಹ ವಿಡಿಯೋಗಳನ್ನು ತೆಗೆದುಹಾಕಬೇಕಲು ಸೂಚಿಸಿದೆ ಎಂದು scroll.in ವರದಿ ಮಾಡಿದೆ.

ಎನ್‌ಬಿಡಿಎ ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಅವರು, “ಭಾರತವು ಜಾತ್ಯತೀತ ರಾಷ್ಟ್ರವಾಗಿದೆ, ಇದು ಸಂವಿಧಾನದ ಆದೇಶವೂ ಹೌದು. ಆದ್ದರಿಂದ ಪ್ರಸಾರಕರು (ಚಾನೆಲ್‌ಗಳು) ಎನ್‌ಸಿಇಆರ್‌ಟಿ ಪುಸ್ತಕದ ಒಂದು ಅಧ್ಯಾಯದಲ್ಲಿ ಇರುವ ವಿಷಯವನ್ನು ನಿಜವಾದ ಅರ್ಥದಿಂದ ಬೇರೆ ರೀತಿಗೆ ತಂದು, ಪಕ್ಷಪಾತಿಯಾಗಿರುವಂತೆ ತೋರಿಸಿದರೆ, ಅದು ನಿಯಮಗಳಿಗೆ ವಿರುದ್ಧವಾಗುತ್ತದೆ ಎಂದು ಆದೇಶ ಪ್ರತಿಯಲ್ಲಿ ಹೇಳಿರುವುದಾಗಿ ವರದಿ ತಿಳಿಸಿದೆ.

ಕಪೋಲಕಲ್ಪಿತ ಲವ್ ಜಿಹಾದ್ ವಿಷಯಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಈ ಹಿಂದೆ ಟೀಕೆಗೆ ಗುರಿಯಾಗಿದ್ದರೂ, ವೈಯಕ್ತಿಕ ಅಭಿಪ್ರಾಯ ಆಧಾರಿತ, ಜನರನ್ನು ವಿಭಜಿಸುವ ಮತ್ತು ಗಮನ ಸೆಳೆಯಲು ಕೆಲವು ಗುಂಪುಗಳು ರಚಿಸಿದ ವಿಷಯವನ್ನು ಮುಖ್ಯ ಸುದ್ದಿಯಾಗಿ ಚಾನೆಲ್‌ಗಳು ತೋರಿಸಿವೆ ಎಂದು ದೂರುದಾರರು ಆರೋಪಿಸಿದ್ದರು.

ಚಾನೆಲ್‌ಗಳು ಆ ವಿಷಯವನ್ನು (ಲವ್ ಜಿಹಾದ್) ಪ್ರಚಾರ ಮಾಡುವವರಿಗೆ ಅವಕಾಶ ಕೊಟ್ಟಿದ್ದು ಮಾತ್ರವಲ್ಲ, ಕೆಲವು ನಿರೂಪಕರು ಕೂಡ ಪರೋಕ್ಷ ಸಂಕೇತಗಳು (dog-whistling) ಮತ್ತು ಪರದೆಯಲ್ಲಿನ ಬರಹಗಳ ಮೂಲಕ ಆ ಹೇಳಿಕೆಗಳನ್ನು ಬೆಂಬಲಿಸುವ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಹೇಳಿದ್ದರು.

“ನ್ಯೂಸ್18 ಮಧ್ಯಪ್ರದೇಶ/ಛತ್ತೀಸ್‌ಗಢ ಚಾನೆಲ್‌ನ ಕಾರ್ಯಕ್ರಮದಲ್ಲಿ ಸಂಪೂರ್ಣ ಚರ್ಚೆ ಭಾಗೇಶ್ವರಧಾಮದ ಧೀರೆಂದ್ರ ಶಾಸ್ತ್ರಿಯವರ ಮಾತುಗಳನ್ನೇ ಕೇಂದ್ರವಾಗಿಸಿಕೊಂಡಿತ್ತು. ಅವರು ಲವ್ ಜಿಹಾದ್ ಮೂಲಕ ಮುಸ್ಲಿಂ ಜನಸಂಖ್ಯೆ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ ಮತ್ತು ಇದರಿಂದ ಹಿಂದೂ ಮಹಿಳೆಯರು ಅಪಾಯಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿದ್ದರು”

“ಕಾರ್ಯಕ್ರಮ ಟಿಕ್ಕರ್‌ಗಳು, ಗ್ರಾಫಿಕ್‌ಗಳು ಮತ್ತು ದೃಶ್ಯಗಳ ಮೂಲಕ ಶಾಸ್ತ್ರಿಯವರ ಮಾತುಗಳನ್ನು ಇನ್ನೂ ಗಟ್ಟಿ ಮಾಡಿತ್ತು, ಆದರೆ ಆ ಹೇಳಿಕೆಗಳು ತಪ್ಪು ಕಲಹ ಉಂಟುಮಾಡುವಂತಿವೆಯೇ ಎಂದು ಯಾವುದೇ ಪ್ರಶ್ನೆ ಅಥವಾ ಪರಿಶೀಲನೆ ಮಾಡಿಲ್ಲ”

“ಝೀ ನ್ಯೂಸ್ ಹಾಗೂ ಝೀ ಮಧ್ಯಪ್ರದೇಶ/ಛತ್ತೀಸ್‌ಗಢ ಚಾನೆಲ್‌ಗಳು ಶಿಕ್ಷಕರ ಮಾತುಗಳನ್ನು ಪ್ರಸಾರ ಮಾಡಿದರೂ, ಕಾರ್ಯಕ್ರಮದ ಒಟ್ಟು ರೂಪ ಮತ್ತು ವಿಷಯವು ಆ ಅಧ್ಯಾಯದಲ್ಲಿ ಏನೋ ಅನುಮಾನಾಸ್ಪದ ವಿಷಯ ಇದೆ ಎಂದು ಜನರಿಗೆ ಭಾಸವಾಗುವಂತೆ ಮಾಡಿತ್ತು”

“ವರದಿಗಾರರು ಆ ಅಧ್ಯಾಯವನ್ನು ಯಾಕೆ ಸೇರಿಸಲಾಗಿದೆ ಎಂಬುದನ್ನು ನೇರವಾಗಿ ಪ್ರಶ್ನಿಸಿ, ರೀನಾ ಮತ್ತು ಅಹಮದ್ ಎಂಬ ಹೆಸರಿನ ಪಾತ್ರಗಳಿರುವ ಪತ್ರವನ್ನು ಸೇರಿಸಿರುವುದೇ ಸಮಸ್ಯೆ ಎಂಬಂತೆ ತೋರಿಸಿದ್ದಾರೆ. ಕಾರ್ಯಕ್ರಮದಲ್ಲಿ ವರದಿಗಾರನ ವರ್ತನೆ, ಮಾತು ಹಾಗೂ ತೋರಿಸಿರುವ ದೃಶ್ಯಗಳು, ಆ ಅಧ್ಯಾಯವನ್ನು ಅವನು ಒಪ್ಪುತ್ತಿಲ್ಲ ಮತ್ತು ಅದಕ್ಕೆ ವಿರೋಧಿಯಾಗಿ ನಿಲ್ಲುತ್ತಿದ್ದಾನೆ ಎಂಬ ಸಂದೇಶ ನೀಡಿವೆ” ಎಂದು ದೂರುದಾರರು ಆರೋಪಿಸಿದ್ದರು.

ಇಂಡಿಯಾ ಟಿವಿಯಲ್ಲಿ, ಪಠ್ಯಪುಸ್ತಕಕ್ಕೆ ‘ಕಪ್ಪು ಬಣ್ಣ ಬಳಿಯುವ’ ವ್ಯಕ್ತಿಯ ಪ್ರತಿಕ್ರಿಯೆಯೂ ಸೇರಿದಂತೆ ತೀವ್ರ ಅತಿರೇಕಗಳನ್ನು ತೋರಿಸಿದೆ. ಚಾನೆಲ್ ಅದನ್ನು ತಪ್ಪು ಎಂದು ಹೇಳಿಲ್ಲ. ಇದರಿಂದ ಆತನ ವರ್ತನೆಗೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಂತಾಗಿದೆ ಎಂದು ಘೋರ್ಪಡೆ ಮತ್ತು ಮಿಶ್ರಾ ಹೇಳಿದ್ದರು.

ಬಹುತೇಕ ಎಲ್ಲಾ ಚಾನೆಲ್‌ಗಳು ಹೇಳಿಕೆಗಳನ್ನು ತಟಸ್ಥವಾಗಿ ಪರಿಶೀಲಿಸದೆ, ವಿಮರ್ಶಾತ್ಮಕ ಪ್ರಶ್ನೆಗಳು ಕೇಳದೆ ಪ್ರಸಾರ ಮಾಡುತ್ತಿದ್ದವು. ಆದರೆ ನ್ಯೂಸ್18 ಎಂ.ಪಿ/ಛತ್ತೀಸ್‌ಗಢ ಮತ್ತು ಎಬಿಪಿ ನ್ಯೂಸ್ ಮಾತ್ರ ಶಾಸ್ತ್ರಿಯವರ ಆರೋಪಗಳನ್ನು ಪ್ರಶ್ನಿಸುವ ಅಥವಾ ಅವುಗಳನ್ನು ಪರಿಶೀಲಿಸುವ ಕೆಲಸ ಮಾಡಿದ್ದವು ಎಂದಿದ್ದರು.

ಯಾವುದೇ ಚಾನೆಲ್‌ಗಳು ಎನ್‌ಸಿಇಆರ್‌ಟಿ ಅಭಿಪ್ರಾಯ ಕೇಳುವ ಪ್ರಯತ್ನ ಮಾಡಿಲ್ಲ ಎಂದು ಹೇಳಿದ್ದರು.


ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನರೇಗಾ ಹೆಸರು ಬದಲಾವಣೆಯು ರಾಜ್ಯಗಳ ಸ್ವಾಯತ್ತತೆ, ಅಂಚಿನ ಸಮುದಾಯಗಳ ಹಕ್ಕಿನ ಮೇಲೆ ನೇರ ದಾಳಿ: ರಾಹುಲ್

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ) ಹೆಸರು ಬದಲಾವಣೆಯು ರಾಜ್ಯಗಳ ಹಕ್ಕುಗಳನ್ನು ದುರ್ಬಲಗೊಳಿಸುತ್ತಿದೆ. ಅಂಚಿನ ಸಮುದಾಯಗಳ ಹಕ್ಕಿನ ಮೇಲೆ ನೇರವಾಗಿ ದಾಳಿ ಮಾಡಲಾಗುತ್ತಿದೆ ಎಂದು ಲೋಕಸಭೆ ವಿರೋಧ ಪಕ್ಷದ...

‘2025ರಲ್ಲಿ ಗಾಜಾ ಪತ್ರಕರ್ತರಿಗೆ ವಿಶ್ವದ ಅತ್ಯಂತ ಅಪಾಯಕಾರಿ ಸ್ಥಳವಾಯಿತು’: ಪ್ಯಾಲೆಸ್ಟೀನಿಯನ್ ಪತ್ರಕರ್ತರ ಒಕ್ಕೂಟ

ಪ್ಯಾಲೆಸ್ಟೀನಿಯನ್ ಪತ್ರಕರ್ತರ ವಿರುದ್ಧ ಇಸ್ರೇಲ್‌ನ ವ್ಯವಸ್ಥಿತ ಹಿಂಸಾಚಾರ ಅಭಿಯಾನವು ಅಕ್ಟೋಬರ್ 2023 ರಿಂದ ನಡೆಯುತ್ತಿದೆ, ಇದು 2025 ರಲ್ಲಿ ಅತ್ಯಂತ ಮಾರಕ ಸ್ಥಿತಿಗೆ ತಲುಪಿತು. ಡಜನ್‌ಗಟ್ಟಲೆ ಮಾಧ್ಯಮ ಕಾರ್ಯಕರ್ತರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ದಾಳಿ...

ಗಡಿ ಘರ್ಷಣೆ ಕೊನೆಗೊಳಿಸಿದ ಥೈಲ್ಯಾಂಡ್ ಮತ್ತು ಕಾಂಬೋಡಿಯಾ: ತಕ್ಷಣದ ಕದನ ವಿರಾಮಕ್ಕೆ ಎರಡು ದೇಶಗಳ ಒಪ್ಪಿಗೆ

ಥೈಲ್ಯಾಂಡ್ ಮತ್ತು ಕಾಂಬೋಡಿಯಾಗಳು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ, ಇದು ಇತ್ತೀಚಿನ ಗಡಿ ಘರ್ಷಣೆಗಳ ನಂತರದ ಉದ್ವಿಗ್ನತೆಯನ್ನು ಕಡಿಮೆ ಮಾಡುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ.  ಶನಿವಾರ ಎರಡೂ ದೇಶಗಳ ರಕ್ಷಣಾ ಸಚಿವರು ಸಹಿ ಮಾಡಿದ...

‘ಬಡವರ ಹೊಟ್ಟೆಗೆ ಒದ್ದ ನಂತರ, ಮೋದಿ ಸರ್ಕಾರ ಅವರ ಬೆನ್ನಿಗೆ ಚೂರಿ ಹಾಕಿದೆ’: ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಯುಪಿಎಯ ದೂರದೃಷ್ಟಿಯ ಕಾರ್ಯಕ್ರಮವಾದ ಎಂಜಿಎನ್‌ಆರ್‌ಇಜಿಎಯನ್ನು ರದ್ದುಗೊಳಿಸುವ ಮೂಲಕ ಅವರು "ಬಡವರ ಹೊಟ್ಟೆಗೆ...

ಕರ್ನಾಟಕದ ವಿಚಾರದಲ್ಲಿ ಪಿಣರಾಯಿ ವಿಜಯನ್ ಹಸ್ತಕ್ಷೇಪ ಮಾಡಬಾರದು: ಡಿಸಿಎಂ ಡಿ.ಕೆ. ಶಿವಕುಮಾರ್

"ಕೋಗಿಲು ಬಡಾವಣೆಯಲ್ಲಿ ಅಕ್ರಮ ಒತ್ತುವರಿ ಪ್ರದೇಶ ನೆಲಸಮಗೊಳಿಸಿರುವ ಪ್ರಕರಣದಲ್ಲಿ ಸತ್ಯಾಸತ್ಯತೆ ಅರಿಯದೇ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಕರ್ನಾಟಕ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು" ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು...

ಮಧ್ಯಪ್ರದೇಶ| ಬಿಜೆಪಿ ನಾಯಕಿ ಮಗನ ಮೇಲೆ ಅತ್ಯಾಚಾರ ಆರೋಪ; ವಿಷ ಸೇವಿಸಿದ ಸಂತ್ರಸ್ತೆ ಸ್ಥಿತಿ ಗಂಭೀರ

ಮಧ್ಯಪ್ರದೇಶದ ಶಿವಪುರಿ ನಗರ ಸಭೆಯ ಅಧ್ಯಕ್ಷೆ ಮತ್ತು ಬಿಜೆಪಿ ನಾಯಕಿ ಗಾಯತ್ರಿ ಶರ್ಮಾ ಅವರ ಪುತ್ರ ರಜತ್ ಶರ್ಮಾ ವಿರುದ್ಧ ಏಪ್ರಿಲ್ 30 ರಂದು ಎಫ್‌ಐಆರ್ ದಾಖಲಿಸಿದ್ದ ಮಹಿಳೆಯ ಆರೋಗ್ಯ ಹದಗೆಟ್ಟ ನಂತರ...

ದೆಹಲಿಯಲ್ಲಿ ಹೊಸ ವರ್ಷಕ್ಕೂ ಮುನ್ನ ಬೃಹತ್ ಕಾರ್ಯಾಚರಣೆ: 285 ಜನರ ಬಂಧನ, ಶಸ್ತ್ರಾಸ್ತ್ರಗಳು ಮತ್ತು ಮಾದಕ ವಸ್ತುಗಳ ವಶ

ದೆಹಲಿ ಹೊಸ ವರ್ಷಾಚರಣೆಗೆ ಸಜ್ಜಾಗುತ್ತಿದ್ದಂತೆ, ಹಬ್ಬದ ದಟ್ಟಣೆಯಲ್ಲಿ ಅಪರಾಧಗಳನ್ನು ತಡೆಗಟ್ಟುವ ಪ್ರಯತ್ನದಲ್ಲಿ, ಪೊಲೀಸರು ರಾಷ್ಟ್ರ ರಾಜಧಾನಿಯಾದ್ಯಂತ ರಾತ್ರಿಯಿಡೀ ವಿಸ್ತೃತ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ನೂರಾರು ಆರೋಪಿಗಳನ್ನು ಬಂಧಿಸಿದ್ದು, ಅಕ್ರಮ ಶಸ್ತ್ರಾಸ್ತ್ರಗಳು, ಮಾದಕ...

ಅತ್ಯಾಚಾರಿ ಸೆಂಗಾರ್‌ ಜೀವಾವಧಿ ಶಿಕ್ಷೆ ಅಮಾನತು; ದೆಹಲಿ ಹೈಕೋರ್ಟ್ ಮುಂದೆ ಸಂತ್ರಸ್ತೆ ತಾಯಿ ಪ್ರತಿಭಟನೆ

ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ನ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ದೆಹಲಿ ಹೈಕೋರ್ಟ್ ಹೊರಗೆ ಶುಕ್ರವಾರ (ಡಿ.26) ಪ್ರತಿಭಟನೆ ನಡೆಸಲಾಯಿತು. ಸೆಂಗಾರ್‌ಗೆ ನಿಡುರವ ಜಾಮೀನು ತಿರಸ್ಕರಿಸಬೇಕೆಂದು...

‘ಉತ್ತರ ಪ್ರದೇಶದ ಗಾಳಿ ಕರ್ನಾಟಕಕ್ಕೂ ಬೀಸಿದೆ, ಬುಲ್ಡೋಜರ್ ನೀತಿ ಇಲ್ಲೂ ಜಾರಿ ಮಾಡುವ ಕೆಲಸ ನಡೆಯುತ್ತಿದೆ: ಪಿಣರಾಯಿ ವಿಜಯನ್ ಟೀಕೆ

ಬೆಂಗಳೂರು: ಕರ್ನಾಟಕ ಸರ್ಕಾರಕ್ಕೂ ಉತ್ತರ ಪ್ರದೇಶ ಸರ್ಕಾರದ ಗಾಳಿ ಬಿಸಿದೆ. ಅಲ್ಲಿನ ಬುಲ್ಡೋಜರ್ ನೀತಿಯನ್ನು ಇಲ್ಲೂ ತರುವ ಕೆಲಸ ನಡೆಯುತ್ತಿದೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರ್ನಾಟಕದ ಕಾಂಗ್ರೆಸ್​​​ ಸರ್ಕಾರದ ವಿರುದ್ಧ...

ಡೆಹ್ರಾಡೂನ್‌ನಲ್ಲಿ ಜನಾಂಗೀಯ ದಾಳಿ; ಚಾಕು ಇರಿತಕ್ಕೆ ಒಳಗಾಗಿದ್ದ ತ್ರಿಪುರ ವಿದ್ಯಾರ್ಥಿ ಸಾವು

ಜನಾಂಗೀಯ ನಿಂದನೆಯಿಂದ ಪ್ರಾರಂಭವಾಯಿತು ಎನ್ನಲಾದ ಜಗಳವು ಹಿಂಸಾತ್ಮಕ ಪ್ರತಿಭಟನೆಗೆ ತಿರುಗಿದ್ದು, ಚಾಕು ಇರಿತದ ನಂತರ ತ್ರಿಪುರದ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಉತ್ತರಾಖಂಡ್ ಆಸ್ಪತ್ರೆಯಲ್ಲಿ ಎರಡು ವಾರಗಳಿಗೂ ಹೆಚ್ಚು ಕಾಲ ಚಿಕಿತ್ಸೆ ಪಡೆಯುತ್ತಿದ್ದ...