Homeಮುಖಪುಟಬಾಲಿವುಡ್ ಗ್ಯಾಂಗ್! ಸ್ವಜನಪಕ್ಷಪಾತದ ಸುಳಿಯಲ್ಲಿ ಹಿಂದಿ ಚಿತ್ರರಂಗ

ಬಾಲಿವುಡ್ ಗ್ಯಾಂಗ್! ಸ್ವಜನಪಕ್ಷಪಾತದ ಸುಳಿಯಲ್ಲಿ ಹಿಂದಿ ಚಿತ್ರರಂಗ

- Advertisement -
- Advertisement -

ಬಹುತೇಕರಿಗೆ ನೆನಪಿದೆ. ತೊಂಬತ್ತರ ದಶಕದ ಮಧ್ಯಭಾಗದಲ್ಲಿ, ಅಂದರೆ 1995ರಲ್ಲಿ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ರಂಗೀಲಾ’ ಚಿತ್ರ ಹೊರಬಂತು. 90ರ ದಶಕದ ಹಿಂದಿ ಚಿತ್ರರಂಗದ ಅಷ್ಟೇನು ಆಪ್ತವಲ್ಲದ ಸಿನಿ ಸಂಗೀತಕ್ಕೆ ಹೊಸ ಹುರುಪು ಬಂದಿತ್ತು. ಮೂವತ್ತು ವರ್ಷದ ಎ ಆರ್ ರೆಹಮಾನ್ ಸಿನಿ ಸಂಗೀತದ ಹೊಸ ರುಚಿಯನ್ನು ಉಣಿಸಿದರು. ಅಷ್ಟು ಹೊತ್ತಿಗೆ ದಕ್ಷಿಣ ಭಾರತದಲ್ಲಿ ಹದಿನೆಂಟು ಚಿತ್ರಗಳಿಗೆ ಸಂಗೀತ ನೀಡಿ ತಮ್ಮ ಛಾಪು ಒತ್ತಿದ್ದರು.

ದಕ್ಷಿಣದವರೇ ಆದ ವರ್ಮಾ ರೆಹಮಾನ್‍ರನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದ್ದು, ಬಾಲಿವುಡ್ ಸಿನಿ ಸಂಗೀತದ ಸ್ವರೂಪವನ್ನೇ ಬದಲಿಸಿತು.

ಅದು ಪಂಜಾಬಿ ಹಿನ್ನೆಲೆಯ ‘ರಂಗ್‍ದೇ ಬಸಂತಿ’ ಇರಲಿ, ಸೂಫಿ ಸಂಗೀತ ಅನುಭವ ನೀಡುವ ‘ಜೋಧಾ ಅಕ್ಬರ್’ ಇರಲಿ, ಪಾಶ್ಚಾತ್ಯ ಸ್ಪರ್ಶವಿರುವ ‘ಯುವ್‍ರಾಜ್’ ಇರಲಿ, ಹೀಗೆ ಪಟ್ಟಿ ಮಾಡುತ್ತಲೇ ಹೋಗಬಹುದು. ಅಂತಹ ವೈವಿಧ್ಯಮಯವಾದ ಸಂಗೀತ ನೀಡಿದ ಪ್ರತಿಭಾವಂತ ರೆಹಮಾನ್.

ಯಾಕೆ ಇಷ್ಟೆಲ್ಲಾ ನೆನಪಿಸಿಕೊಳ್ಳಬೇಕಾಯಿತು ಎಂದರೆ, ಯಾವ ಜನ ಈತನನ್ನು ಕೊಂಡಾಡಿದ್ದರೊ, ಅವರೇ ಗುಂಪುಗಾರಿಕೆ, ಸ್ವಜನಪಕ್ಷಪಾತ ಮಾಡುವ ಮೂಲಕ ತಮ್ಮನ್ನು ಅವಕಾಶಗಳಿಂದ ದೂರ ಮಾಡುತ್ತಿದ್ದಾರೆ ಎಂದು ಈಗ ಸ್ವತಃ ರೆಹಮಾನ್ ಹೇಳಿದ್ದಾರೆ. ಅವರು ‘ಗ್ಯಾಂಗ್’ ಎನ್ನುವ ಪದವನ್ನು ಬಳಸಿದ್ದಾರೆ. ಅಂದರೆ ಒಂದು ಗುಂಪು ವ್ಯವಸ್ಥಿತವಾಗಿ ಯಾರನ್ನು ಬೆಳೆಸಬೇಕು, ಯಾರನ್ನು ತುಳಿಯಬೇಕು ಎಂಬುದನ್ನು ನಿರ್ಧರಿಸುತ್ತದೆ ಎಂಬುದನ್ನು ಸೂಚಿಸಿದ್ದಾರೆ.

ನಿಜ, ಯಾವುದೇ ಸೃಜನಶೀಲ ವ್ಯಕ್ತಿಯ ಸೃಜನಶಕ್ತಿ ಒಂದು ಕಾಲದ ನಂತರ ಆಕರ್ಷಣೆ ಕಳೆದುಕೊಳ್ಳುತ್ತದೆ. ಆದರೆ ರೆಹಮಾನ್ ಇತರೆ ಭಾಷೆಯ ಸಿನಿಮಾಗಳಿಗೆ ನೀಡುವ ಸಂಗೀತದಲ್ಲಿ ಇನ್ನೂ ಅದೇ ಮೋಡಿ ಉಳಿದಿದೆ. ಆದರೂ ಹಿಂದಿ ಚಿತ್ರರಂಗ ಅವರನ್ನು ದೂರವಿಟ್ಟಿದ್ದು ಏಕೆ?

ರೆಹಮಾನ್ ಸಾರ್ವಜನಿಕವಾಗಿ ಬಾಲಿವುಡ್‍ನ ಪಕ್ಷಪಾತವನ್ನು, ಗುಂಪುಗಾರಿಕೆಯ ಬಗ್ಗೆ ತಮ್ಮ ಅಸಮಾಧಾನ, ಬೇಸರವನ್ನು ಹೊರಹಾಕುವುದಕ್ಕೂ ಎರಡು ದಿನಗಳ ಮೊದಲು ಹಿಂದಿನ ಪ್ರಸಿದ್ಧ ನಿರ್ದೇಶಕರುಗಳಾದ ಅನುಭವ ಸಿನ್ಹಾ, ಹನ್ಸಲ್ ಮೆಹ್ತಾ ಮತ್ತು ಸುಧೀರ್ ಶರ್ಮಾ, ಇನ್ನು ಬಾಲಿವುಡ್‍ನಿಂದ ಹೊರನಡೆಯುವುದಾಗಿ ಹೇಳಿಕೆಯನ್ನು ಕೊಟ್ಟಿದ್ದಾರೆ. ಇದು ಬಾಲಿವುಡ್ ಪಾಲಿಗೆ ಒಂದು ಆಘಾತ!

ತೊಂಬತ್ತರ ದಶಕದಲ್ಲಿ ಎರಡನೆಯ ದರ್ಜೆಯ ಸಿನಿಮಾಗಳೇ ಸದ್ದು ಮಾಡುತ್ತಿದ್ದಾಗ, ಹೊಸ ಅಲೆಯ ಸಿನಿಮಾ ಮತ್ತು ಸಂಗೀತ ಎರಡೂ ನಿಧಾನವಾಗಿ ತನ್ನ ಛಾಪು ಒತ್ತಿತು. ಇದು 2000ದಲ್ಲೂ ಮುಂದುವರೆದು ಹಿಂದಿ ಚಿತ್ರರಂಗದಲ್ಲಿ ಹೊಸ ಪ್ರಯೋಗಗಳು ನಡೆದವು.

ಖಾನ್, ಕಪೂರ್ ಸೇರಿದಂತೆ ಕೆಲವೇ ಕುಟುಂಬಗಳು ಹಿಂದಿ ಚಿತ್ರರಂಗವನ್ನು ನಿಯಂತ್ರಿಸುತ್ತಿದ್ದವು. ಆದರೆ ಕಾಲ ಸರಿದಂತೆ ಯಾವುದೇ ನಟನೆಯ ಹಿನ್ನೆಲೆಯಿಲ್ಲದ, ಸಿನಿಮಾ ಕುಟುಂಬದವರಲ್ಲದ ಪ್ರತಿಭೆಗಳು ನಟನೆ, ನಿರ್ದೇಶನ, ಸಂಗೀತ ನಿರ್ದೇಶನದ ಕನಸುಗಳನ್ನು ಹೊತ್ತು ಬಾಲಿವುಡ್ ಅಂಗಳಕ್ಕೆ ಬಂದರು. ವರ್ಷಗಟ್ಟಲೆ ಕಷ್ಟಪಟ್ಟು ತಮ್ಮದೇ ಆದ ವರ್ಚಸ್ಸು ರೂಪಿಸಿಕೊಳ್ಳಲು ಶ್ರಮಿಸಿದರು.

ಈ ಲೇಖನ ಬರೆಯುವ ಹೊತ್ತಿಗೆ ‘ಗ್ಯಾಂಗ್’ವೊಂದರ ಸ್ವಜನ ಪಕ್ಷಪಾತ ಅವರ ವೃತ್ತಿಜೀವನಕ್ಕೆ ಎಷ್ಟು ತೊಂದರೆ ಕೊಟ್ಟಿತು ಎಂಬುದನ್ನು ನಟ ರಣವೀರ್ ಶೊರೆ ವಿವರಿಸಿದ್ದಾರೆ. ಮಹೇಶ್ ಕುಟುಂಬದಿಂದ ಸಾಕಷ್ಟು ತೊಂದರೆ ಅನುಭವಿಸಿದ್ದ ಶೋರೆ, ತಮ್ಮ ವಿರುದ್ಧ ಹರಡಲಾದ ಗಾಳಿಸುದ್ದಿ, ಸುಳ್ಳುಗಳಿಂದ ಮುಕ್ತವಾಗಿ ನಟನಾಗಿ ಬೆಳೆಯುವುದಕ್ಕೆ ಉಂಟಾದ ಕಷ್ಟಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಮತ್ತೊಬ್ಬ ನಟ ಆಯುಷ್‌ಮಾನ್ ಖೊರನಾ, ಬಾಲಿವುಡ್‍ನಲ್ಲಿ ಸ್ವಜನ ಪಕ್ಷಪಾತವಿಲ್ಲದೇ ಹೋಗಿದ್ದರೆ ಐದು ವರ್ಷದ ಮೊದಲೇ ನಾನು ನಾಯಕ ನಟನಾಗುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.

ನಟ ಸುಶಾಂತ್ ರಾಜಪೂತ್ ಸಾವು ಹಲವರನ್ನು ಕಂಗೆಡಿಸಿದೆ. ಸಾಮಾನ್ಯ ಕುಟುಂಬದಿಂದ ಬಂದ ಸುಶಾಂತ್ ಸಿಂಗ್ ಒಳ್ಳೆಯ ನಟನಾಗಿ ಬೆಳೆಯುವುದನ್ನು ಸಹಿಸಿದ ಬಾಲಿವುಡ್‍ನ ಕೆಲವು ಹಿರಿಯರು ಆತನಿಗೆ ಅವಕಾಶ ಕೊಡದೇ ಇದ್ದ ಸುದ್ದಿಗಳು ನಿಧಾನವಾಗಿ ಹೊರಗೆ ಬರಲಾರಂಭಿಸಿದ ಕೂಡಲೇ ಅನೇಕರು ಬಾಲಿವುಡ್‍ನ ಒಳಗಿನ ಹೊಲಸನ್ನು ಬಿಚ್ಚಿಡಲಾರಂಭಿಸಿದ್ದಾರೆ.

ಈ ಬಾಲಿವುಡ್ ಒಂದು ಕಾಲದಲ್ಲಿ ಹಾಜಿ ಮಸ್ತಾನ್, ದಾವೂದ್ ಇಬ್ರಾಹಿಂ ಹಿಡಿತದಲ್ಲಿತ್ತು. ಅನಿಲ್ ಕಪೂರ್, ಸಲ್ಮಾನ್ ಖಾನ್, ಸುನಿಲ್ ದತ್, ಮಂದಾಕಿನಿ ಹೀಗೆ ಎಷ್ಟೊಂದು ನಟನಟಿಯರು ಭೂಗತ ದೊರೆಗಳ ಸಂಪರ್ಕದಲ್ಲಿ ಇದ್ದದ್ದು, ಸಿನಿಮಾ ನಿರ್ಮಾಣ, ನಟ-ನಟಿಯರ ಆಯ್ಕೆ ಎಲ್ಲದರಲ್ಲೂ ಈ ಭೂಗತ ಪಾತಕಿಗಳ ಕೈವಾಡ ಇದ್ದ ವಿಷಯಗಳೆಲ್ಲವೂ ತಿಳಿದದ್ದೆ. ಆದರೆ ಬಾಲಿವುಡ್‍ನ ಬೆರಳೆಣಿಕೆಯ ಚಿತ್ರ ನಿರ್ಮಾಣ ಸಂಸ್ಥೆಗಳು ಬಲಿಷ್ಠವಾದ ಮೇಲೆ, ಅವು ಬಾಲಿವುಡ್‍ನ ಪಾರುಪತ್ಯ ನಡೆಸುತ್ತಿವೆ ಎಂಬ ದೂರುಗಳು ಈಗ ಬಯಲಾಗುತ್ತಿವೆ.

ಧರ್ಮ ಪ್ರೊಡಕ್ಷನ್ಸ್‌ನ ಕರಣ್ ಜೋಹರ್ ಈಗ ನೆಪೊಟಿಸಂ ಆರೋಪಕ್ಕೆ ತೀವ್ರವಾಗಿ ಗುರಿಯಾಗಿರುವ ನಿರ್ಮಾಪಕ. ಸೂಪರ್ ಸ್ಟಾರ್ ಗಳನ್ನೇ ತಾರಾಗಣಕ್ಕೆ ಬಳಸಿ ಕೆಟ್ಟ ಸಿನಿಮಾಗಳನ್ನು ನಿರ್ಮಿಸಿಯೂ ಮಾರುಕಟ್ಟೆಯಲ್ಲಿ ಬದುಕುಳಿಯುವ ಯಶ್ ರಾಜ್ ಫಿಲ್ಮ್ಸ್ ವಿರುದ್ಧ ಅಂತಹ ದೂರುಗಳಿವೆ.

ಪ್ರೊಡಕ್ಷನ್ ಹೌಸ್‍ಗಳಷ್ಟೇ ಅಲ್ಲ, ಚಿತ್ರರಂಗದ ಹಿರಿತಲೆಗಳು ಕೂಡ ಉತ್ಸಾಹಿಗಳನ್ನು ಹತ್ತಿಕ್ಕಿದ್ದಾರೆ. ಮಹೇಶ್ ಭಟ್‍ರಂತಹ ನಿರ್ದೇಶಕರ ಮೇಲೆ ಇಂತಹ ಆರೋಪಗಳಿವೆ.

ಗುಜರಾತ್‍ನ ಗೋಧ್ರಾ ಪ್ರಕರಣದ ನಂತರ ರಾಜಕೀಯದ ಪ್ರಭಾವವೂ ತೀವ್ರವಾಗಿದ್ದು, ಚಿತ್ರರಂಗದ ಅನೇಕ ನಟ, ನಿರ್ದೇಶಕರಿಗೆ ತಮ್ಮ ವೃತ್ತಿ ಮುಂದುವರೆಸುವ ಸವಾಲು ಕೂಡ ಕಾಡಿದೆ. ಸದ್ಯ ಬಾಲಿವುಡ್‍ಗೆ ಗುಡ್ ಬೈ ಹೇಳಿದ ಮೂವರು ನಿರ್ದೇಶಕರು, ಭಯೋತ್ಪಾದನೆ, ಜಾತಿ ವ್ಯವಸ್ಥೆ, ಭ್ರಷ್ಟ ರಾಜಕಾರಣ, ಕೋಮು ರಾಜಕಾರಣಗಳನ್ನು ಬಲವಾಗಿ ಖಂಡಿಸಿ ಚಿತ್ರಗಳನ್ನು ನಿರ್ಮಿಸಿದ್ದವರು.

ಕಾಲಕಾಲಕ್ಕೆ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳುವುದಕ್ಕೆ ಎಲ್ಲ ರೀತಿಯ ಪಟ್ಟುಗಳನ್ನು ಹಾಕುತ್ತಾ ಬಂದ ಹಿಂದಿ ಚಿತ್ರರಂಗದ ಕೆಲವು ಪ್ರಭಾವಿಗಳು ನಿಧಾನವಾಗಿ ಕಥೆ, ಪ್ರತಿಭೆ, ಸೃಜನಶೀಲತೆಗೆ ಒತ್ತುಕೊಡದೆ, ಅಸ್ತಿತ್ವ, ಹಿತಾಸಕ್ತಿಗಳಿಗೆ ಒತ್ತುನೀಡುತ್ತಾ, ಪ್ರತಿಭಾವಂತರನ್ನು ಮತ್ತು ಚಿತ್ರ ನಿರ್ಮಾಣದ ನೈಜ ಸೃಜನಶೀಲ ಕ್ರಿಯೆಯನ್ನು ಕೊಲ್ಲಲಾರಂಭಿಸಿವೆ.

ಎಸ್ ಕುಮಾರ್


ಇದನ್ನು ಓದಿ: ಕರ್ನಾಟಕದ ಕರಿ ಚಿರತೆ; ಜಂಗಲ್ ಬುಕ್‌‌ ಸಿನಿಮಾದ ’ಬಘೀರಾ’ ಎಂದ ನೆಟ್ಟಿಗರು..!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...