Homeಮುಖಪುಟಸಿಂಘು ಗಡಿಯಲ್ಲಿ ಲಖ್ಬೀರ್‌‌ ಹತ್ಯೆ ಪ್ರಕರಣ: ಹರಿಂದರ್‌‌‌ ಸಿಂಗ್‌‌ ಬರಹ

ಸಿಂಘು ಗಡಿಯಲ್ಲಿ ಲಖ್ಬೀರ್‌‌ ಹತ್ಯೆ ಪ್ರಕರಣ: ಹರಿಂದರ್‌‌‌ ಸಿಂಗ್‌‌ ಬರಹ

- Advertisement -
- Advertisement -

ಹರಿಂದರ್‌‌‌ ಸಿಂಗ್‌‌

(ಸಿಂಘು ಗಡಿಯಿಂದ… ರೈತ ಹೋರಾಟದ ನೆಲದಲ್ಲಿರುವ ದಲಿತ ಹೋರಾಟಗಾರ)

ಕೃಪೆ: zindahal.blogspot.com ([email protected])

ಸಿಂಘು ಬಾರ್ಡರ್‌ನಲ್ಲಿ ನಡೆದದ್ದು ಜಾತಿಗೆ ಸಂಬಂಧಿಸಿದ್ದಲ್ಲ, ಅಥವಾ ರೈತರಿಗೆ ಸಂಬಂಧಿಸಿದ್ದೂ ಅಲ್ಲ. ಇದು ಸಂಪೂರ್ಣವಾಗಿ ಧಾರ್ಮಿಕವಾದದ್ದು ಮತ್ತು ಅಪರಾಧದಿಂದ ಕೂಡಿದ್ದಾಗಿದೆ. ದುರಾದೃಷ್ಟವಶಾತ್‌ ಇದನ್ನು ರೈತರು ಮತ್ತು ಕಾರ್ಮಿಕರ ನಡುವಿನ ಸಂಘರ್ಷದಂತೆ ಬಿಂಬಿಸಲಾಗುತ್ತಿದೆ. ಆದರೆ ಅದರಾಚೆಗಿನ ಸತ್ಯಗಳಿವೆ. ಈ ಘಟನೆಯ ಬಗ್ಗೆ ಹೇಳಬೇಕೆಂದರೆ ಕೊಲೆಯಾದ ಹಾಗೂ ಕೊಲೆಗೈದ ಆರೋಪಿಗಳಿಬ್ಬರೂ ದಲಿತರಾಗಿದ್ದಾರೆ.

ಖಂಡಿತವಾಗಿಯೂ ಪಂಜಾಬ್‌ನಲ್ಲಿ ಜಾತಿ ವ್ಯವಸ್ಥೆ ಗಟ್ಟಿಯಾಗಿದೆ. ಆದರೆ ಪಂಜಾಬ್‌ ಮತ್ತು ಸಿಖ್ಖಿ ನಡುವಿನ ವ್ಯತ್ಯಾಸವನ್ನು ಅರಿಯಬೇಕಾಗಿದೆ. ಬಲಿಷ್ಠ ಜಾತಿ ವ್ಯವಸ್ಥೆಯನ್ನು ಹೊಂದಿರುವ ಪಂಜಾಬ್‌ನಲ್ಲಿ ಸಿಖ್ಖಿಯು ಜಾತಿ ವ್ಯವಸ್ಥೆಯ ಪರ ವಕಾಲತ್ತು ವಹಿಸುವುದಿಲ್ಲ. ಅದು ಜಾತೀಯತೆಯ ವಿರುದ್ಧವಿದೆ. ಸಿಖ್‌ ಧರ್ಮ ಗ್ರಂಥವು ಜಾತಿ ವಿರೋಧಿಯಾಗಿದೆ. ಗುರು ಗ್ರಂಥ ಸಾಹೇಬ್‌ಗೆ ದಲಿತರು ಅಪಾರ ಕೊಡುಗೆ ನೀಡಿದ್ದಾರೆ. ಖಲ್ಸ ಪಂತ್‌‌ ಹೋರಾಟದಲ್ಲಿ ಹಲವರು ದಲಿತ ನಾಯಕರು, ಸೈನಿಕರು ಇದ್ದರು. ಪಿತೃಪ್ರಧಾನ ಹಿಂದುತ್ವದ ಪ್ರಭಾವದಿಂದಾಗಿ ಗ್ರಾಮೀಣ ಸಮಾಜದಲ್ಲಿ ಈ ಸಮಸ್ಯೆ (ಜಾತಿ ವ್ಯವಸ್ಥೆ) ಇದೆ. ಪಂಜಾಬ್‌ನಲ್ಲಿ ಶೇ. 33ರಷ್ಟು ದಲಿತರಿದ್ದು, ಆದರೆ ಶೇ. 3ರಷ್ಟು ಮಂದಿ ಮಾತ್ರ ಕೃಷಿ ಭೂಮಿಯನ್ನು ರಾಜ್ಯದಲ್ಲಿ ಹೊಂದಿದ್ದಾರೆ. ಮುಖ್ಯವಾಗಿ ಜಾಟ್‌ ರೀತಿಯ ಮೇಲ್ಜಾತಿಗಳ ದೈಹಿಕ ಹಾಗೂ ಮಾನಸಿಕ ಕಿರುಕುಳವನ್ನು ದಿನನಿತ್ಯವೂ ದಲಿತರು ಅನುಭವಿಸುತ್ತಿದ್ದಾರೆ. ಅದರಲ್ಲೂ ದಲಿತ ಮಹಿಳೆಯರ ಸ್ಥಿತಿಯಂತೂ ಇನ್ನೂ ಶೋಚನೀಯವಾಗಿದೆ.

ಇದನ್ನೂ ಓದಿರಿ: ಲಖಿಂಪುರ್‌ ಹತ್ಯಾಕಾಂಡ: ಅಜಯ್ ಮಿಶ್ರಾ ಬಂಧನ, ವಜಾಗೆ ಆಗ್ರಹಿಸಿ ರೈತರ ರೈಲ್ ರೋಕೋ ಚಳವಳಿ

ದಲಿತ ಮುಖ್ಯಮಂತ್ರಿ, ಅಕಾಲ್‌ತಖ್‌ನ ದಲಿತ ಜಾತೇದಾರ್‌, ದಲಿತ ಪೊಲೀಸ್ ಮುಖ್ಯಸ್ಥ, ದಲಿತ-ಸ್ತ್ರೀ-ಎಡಪಂಥೀಯ ಗುಂಪುಗಳ ಸಕ್ರಿಯತೆ ಮತ್ತು ಶೇ. 33ರಷ್ಟು ದಲಿತ ಜನಸಂಖ್ಯೆ ಪಂಜಾಬ್‌ನಲ್ಲಿದ್ದರೂ ದಲಿತರು ಹಿಂದುಳಿದಿದ್ದಾರೆ, ವಂಚನೆ ಹಾಗೂ ಶೋಷಣೆಗೆ ಒಳಗಾಗಿದ್ದಾರೆ.

ಲೂದಿಯಾನದಲ್ಲಿನ ಪಂಜಾಬ್‌ ಕೃಷಿ ವಿವಿಯ ಸಮೀಕ್ಷೆಯ ಪ್ರಕಾರ, 2000ನೇ ಇಸವಿಯಿಂದ 2018ರವರೆಗೆ, ಪಂಜಾಬ್‌ನ 2400 ಹಳ್ಳಿಗಳಲ್ಲಿ ಒಟ್ಟು 7303 ಕೃಷಿ ಕಾರ್ಮಿಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪಂಜಾಬ್‌ನಲ್ಲಿ ಆತ್ಯಹತ್ಯೆಗೆ ಶರಣಾಗಿರುವ ರೈತರ ಪ್ರಮಾಣದಷ್ಟೇ ಕೃಷಿ ಕಾರ್ಮಿಕರ ಆತ್ಮಹತ್ಯೆಯ ಪ್ರಮಾಣವೂ ಇದೆ. ಕೃಷಿ ಕಾರ್ಮಿಕರ ಸಾವಿಗೆ ಸಾಲಬಾಧೆಯೇ ಪ್ರಮುಖ ಕಾರಣವಾಗಿದೆ. ಹಲವು ಸಮೀಕ್ಷೆಗಳ ಪ್ರಕಾರ, ಪ್ರತಿ ರೈತ ಕಾರ್ಮಿಕ ಕುಟುಂಬದ ಪ್ರತಿಯೊಬ್ಬರ ತಲೆ ಮೇಲೂ 68,000 ರೂ.ನಿಂದ 1 ಲಕ್ಷ ರೂ.ವರೆಗೆ ಸಾಲದ ಭಾರವಿದೆ. ಇದು ಭಾರತ ಕೃಷಿ ಮಾದರಿಯ ಸಾರ- ಸಣ್ಣ ರೈತರು ಮತ್ತು ಕೃಷಿ ಕಾರ್ಮಿಕರ ಆತ್ಮಹತ್ಯೆ!

ಮಹಿಳಾ ಕೃಷಿಕರ ಸ್ಥಿತಿಗಿಂತ ಮಹಿಳಾ ಕೃಷಿ ಕಾರ್ಮಿಕರ ಸ್ಥಿತಿಯಂತೂ ಇನ್ನೂ ಶೋಚನೀಯವಾಗಿದೆ. ದಲಿತ ಕೃಷಿ ಕಾರ್ಮಿಕರು, ಪಿತೃಪ್ರಧಾನ ವ್ಯವಸ್ಥೆ, ಕೂಲಿ, ಜಾತಿ ಮತ್ತು ಬಡತನದ ಭಾರದಲ್ಲಿ ಬದುಕುತ್ತಿದ್ದಾರೆ. ಹೊಸ ಪ್ರಜಾಪ್ರಭುತ್ವ ಸಮಾಜವನ್ನು ನಿರ್ಮಿಸಬೇಕಾದಲ್ಲಿ ಬಹುಮುಖ್ಯ ಪಾತ್ರ ವಹಿಸಬೇಕಿರುವ ಈ ಸಮಾಜವು, ಬಹುತೇಕ ಕೃಷಿ ಸಂಸ್ಥೆಗಳ ಕ್ರಾಂತಿಕಾರಿ ಸುಧಾರಣಾ ಕಾರ್ಯಕ್ರಮಗಳ ಭಾಗವಾಗಿಲ್ಲ.

ಕೃಷಿಕ ವರ್ಗವೇ ಕೃಷಿ ಕಾರ್ಮಿಕ ವರ್ಗವಾಗಿದ್ದಾಗ ಮತ್ತು ರೈತರು ಮತ್ತು ಕೃಷಿ ಕಾರ್ಮಿಕರ ಸಂಬಂಧಗಳು ‘ಐಕ್ಯತೆ ಮತ್ತು ಸಂಘರ್ಷ’ದ ಸಂಬಂಧವಾಗಿರುತ್ತದೆ. ಕೃಷಿ ವಲಯದಲ್ಲಿ ಕಾರ್ಮಿಕ ವಿರೋಧಿ ಯಾಂತ್ರೀಕರಣವಿದ್ದಾಗ ಕಾರ್ಮಿಕರಿಗೆ ಸಾಮೂಹಿಕ ನಿರುದ್ಯೋಗದ ಪ್ರಶ್ನೆಯಿರುತ್ತದೆ, ಇದು ದಬ್ಬಾಳಿಕೆಯ ಮೂಲಕ ಕಾರ್ಮಿಕರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತದೆ.

ಆದರೆ ಎಂಬ ಆದರೆ ಎಂಬುದಿದೆ. ಈ ಆದರೆ ದಲಿತ ವಿಚಾರಗಳ ಕುರಿತ ಅತಿಯಾದ ಚಿಂತನೆ ಹಾಗೂ ಕುತೂಹಲಕ್ಕೆ ಸಂಬಂಧಿಸಿದ್ದಾಗಿದೆ. ಜಾತಿ ಹಿಂಸೆಯು ಇರುವುದು ಸತ್ಯ, ಆದರೆ ಅದು ಸ್ವೀಕಾರರ್ಹವಲ್ಲ. ದಲಿತರು ವರ್ಸಸ್‌ ಜಾಟರು ಅಥವಾ ರೈತ ವರ್ಸಸ್‌ ಕೃಷಿ ಕಾರ್ಮಿಕ ಸಂಬಂಧಿಸಿದ ನೂರಾರು ಸಂಗತಿಗಳಿವೆ. ಆದರೆ ಈ ಪ್ರಕರಣದಲ್ಲಿ ನೀವು ಜಾತಿಯನ್ನು ಹುಡುಕಬಹುದೇ? ಕೊಲೆಯಾದ ಲಖ್ಬೀರ್‌ ಸಿಂಗ್‌ ದಲಿತ ಎಂಬುದನ್ನು ನಾವು ಸುಲಭವಾಗಿ ಪತ್ತೆ ಹಚ್ಚಿದೆವು. ಆದರೆ ಆರೋಪಿಗಳಾದ ಸರಬ್ಜಿತ್‌ ಸಿಂಗ್ ಹಾಗೂ ನಾರಾಯಣ್‌ ಸಿಂಗ್ ಕೂಡ ದಲಿತರು ಎಂಬುದನ್ನು ನಾವು ನೋಡಲಿಲ್ಲ. ಈ ಸಮಸ್ಯೆಯು ಸಂಪೂರ್ಣವಾಗಿ ಧಾರ್ಮಿಕ ಮತ್ತು ಅಪರಾಧ ಕೃತ್ಯವಾಗಿದೆ. ಸಿಖ್ಖರು ದಬ್ಬಾಳಿಕೆಯ ವಿರುದ್ಧ ತಮ್ಮ ಧ್ವನಿಯನ್ನು ಪ್ರತಿಪಾದಿಸಿದ ಭಾವುಕ ರೀತಿಯದ್ದಾಗಿದೆ. ಸಿಖ್/ನಿಹಾಂಗ್‌ಗಳಿಂದ ಹತ್ಯೆಗೀಡಾದ ಇಂದಿರಾ ಗಾಂಧಿ, ಬಿಯಾಂತ್ ಸಿಂಗ್, ಮಾಸಾ ರಂಗರ್ ಮೇಲ್ಜಾತಿಯವರು ಎಂಬುದನ್ನು ದಯವಿಟ್ಟು ಗಮನಿಸಬೇಕು.

ಇದನ್ನೂ ಓದಿರಿ: ಸಿಂಘು ಗಡಿನಲ್ಲಿ ಯುವಕನ ಹತ್ಯೆ: ನಿಹಾಂಗ್ ಗುಂಪು, ಮೃತ ವ್ಯಕ್ತಿಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದ ಎಸ್‌ಕೆಎಂ

ಇದು ಅಪವಿತ್ರತೆಯ ಸಮಸ್ಯೆಯಾಗಿದೆ. ಕೊಲೆಯಾದ ವ್ಯಕ್ತಿಯು ಪವಿತ್ರ ಗ್ರಂಥವನ್ನು ಮೋಟಾರ್‌ ಸೈಕಲ್‌ನ ಬಾಕ್ಸ್‌ನಲ್ಲಿ ಇಟ್ಟು ಕೊಳಕಾದ ರಸ್ತೆಯ ಬದಿಯಲ್ಲಿ ಇಟ್ಟಿದ್ದ ಎಂಬುದಕ್ಕೆ ಸಂಬಂಧಿಸಿದ್ದಾಗಿದೆ. ನಿಹಾಂಗ್ ಸಿಖ್ಖರು ಮೊದಲು ಲಖ್‌ಬೀರ್‌ಸಿಂಗ್ ಅವರ ಎಡಗೈಯನ್ನು ಕತ್ತರಿಸಿ ನಂತರ ಅವರ ಕಾಲಿನ ಮೇಲೆ ದಾಳಿ ಮಾಡಿದರು. ಮೊದಲ ದಾಳಿಯ 1 ಗಂಟೆಯ ನಂತರ ಲಖ್ಬೀರ್‌ ಸಾವಿಗೀಡಾದರು.

ಪಂಜಾಬ್‌ ನಲ್ಲಿ 2015ರಲ್ಲಿ ಗುರುಗ್ರಂಥ ಸಾಹೇಬ್‌ ಅಪವಿತ್ರತೆ ಪ್ರಕರಣವೊಂದು ಸಂಭವಿಸಿತು.  ಅಪವಿತ್ರಕ್ಕೆ ವಿರುದ್ಧವಾಗಿ ಸಂಗತ್‌‌ನವರು ಹೋರಾಡುತ್ತಿದ್ದಾಗ ಪೊಲೀಸರ ದಾಳಿಯಿಂದ ಇಬ್ಬರು ಸಿಖ್ಖರು ಸಾವನ್ನಪ್ಪಿದ್ದರು. ಮೂರು ತನಿಖಾ ಆಯೋಗಗಳನ್ನು ರಚಿಸಲಾಯಿತು, ಮೂವರು ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೆ, ಈ ಆಟದಲ್ಲಿ ಅನೇಕ ಅಧಿಕಾರಿಗಳು ಬಂದರು, ಹೋದರು ಆದರೆ ನ್ಯಾಯಮಾತ್ರ ಸಿಗಲಿಲ್ಲ. ಸಿಂಘುವಿನಲ್ಲಿ ಘಟನೆ ನಡೆಯುವ ಮೂರು ದಿನಗಳ ಹಿಂದೆ 2015ರ ಪ್ರಕರಣಕ್ಕೆ ಆರು ವರ್ಷಗಳಾಯಿತು. ಹಾಗೆಯೇ 1984ರ ಸಿಖ್ ವಿರೋಧಿ ಹತ್ಯಾಕಾಂಡಕ್ಕೆ 37 ವರ್ಷಗಳಾಗಿದೆ. ಅಂದಿನಿಂದಲೂ ಸಾವಿರಾರು ನಾಗರಿಕರ ಕರಾಳ ಹತ್ಯೆಗೆ ಪಂಜಾಬ್‌ ಸಾಕ್ಷಿಯಾಗಿದೆ. ಆದರೆ ಈವರೆಗೆ ನ್ಯಾಯ ಮಾತ್ರ ಸಿಕ್ಕಿಲ್ಲ.

ಕೊನೆಯ ಪ್ಯಾರಾಗ್ರಾಫ್ ಅನ್ನು ಉಲ್ಲೇಖಿಸುವ ಉದ್ದೇಶ ಈ ಸಿಂಘು ಪ್ರಕರಣವನ್ನು ಒಂದು ಪ್ರತ್ಯೇಕ ಘಟನೆಯಾಗಿ ನೋಡದಂತೆ ನಿಮ್ಮೆಲ್ಲರನ್ನೂ ವಿನಂತಿಸುವುದಾಗಿದೆ. ಯಾವುದೇ ಅಪವಿತ್ರತೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುವ ಹತ್ಯೆಯನ್ನು ನಿಹಾಂಗ್‌ಗಳು ‘ನ್ಯಾಯ’ ಎಂದು ಆಚರಿಸುತ್ತಾರೆ. ಈ ಪ್ರಕರಣದಲ್ಲಿನ ಹತ್ಯೆಯೂ ಅವರ ಪ್ರಕಾರ ನ್ಯಾಯದ ಸಂಕೇತವಾಗಿದೆ.

ಈ ಥರದ ಹತ್ಯೆಗಳು ನ್ಯಾಯವೆಂಬುದನ್ನು ನಾನು ಸಮರ್ಥಿಸುತ್ತಿಲ್ಲ. ಗುಂಪು ಹತ್ಯೆ ಹಾಗೂ ಕಾನೂನು ಬಾಹಿರ ಕೃತ್ಯಗಳಿಗಿಂತ ಈ ಪ್ರಕರಣ ಕಡಿಮೆಯೇನಲ್ಲ. ಧರ್ಮವನ್ನು ಅಪರಾಧೀಕರಿಸುವುದು ಅತ್ಯಂತ ಅಪಾಯಕಾರಿಯಾದದ್ದು, ಅದು ಈಗ ಚಾಲ್ತಿಯಲ್ಲಿದೆ. ದುರಾದೃಷ್ಟವಶಾತ್‌ ಈ ಘಟನೆ ರೈತ ಪ್ರತಿಭಟನಾ ನೆಲದಲ್ಲಿ ನಡೆಯಿತು. ರೈತ ಹೋರಾಟಕ್ಕೆ, ಸಂಯುಕ್ತ ಕಿಸಾನ್‌ ಮೋರ್ಚಾಕ್ಕೆ, ಸಿಖ್ಖಿಗೆ ನಕರಾತ್ಮಕ ಚಿತ್ರಣವನ್ನು ತಂದುಕೊಟ್ಟಿತು.

ಇದನ್ನೂ ಓದಿರಿ: ಅದಾನಿಯಿಂದ ಹಸ್ಡಿಯೋ ಕಾಡನ್ನು ಉಳಿಸಿ: ಚತ್ತೀಸ್‌ಘಡ ಆದಿವಾಸಿಗಳಿಂದ 300 ಕಿ.ಮೀ ಪಾದಯಾತ್ರೆ

“ಒಂದು ಪುಸ್ತಕ ಹೇಗೆ ಮುಖ್ಯವಾಗುತ್ತದೆ” ಎಂದು ಕೇಳುತ್ತಿರುವವರು ತಮ್ಮದೇ ಹೋರಾಟದಲ್ಲಿ ಮಾತ್ರ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ. ವಾಲ್ಮೀಕಿ ದೇವಾಲಯವೊಂದನ್ನು ದೆಹಲಿಯಲ್ಲಿ ಕೆಡವಲಾಯಿತು, ಎಲ್ಲ ಅಂಬೇಡ್ಕರ್ ವಾದಿಗಳು ಹೋರಾಟ ಆರಂಭಿಸಿದರು. ಬಾಬ್ರಿ ಮಸೀದಿ ದ್ವಂಸವು ಜಾತ್ಯತೀತತೆಯ ಮೇಲಿನ ದಾಳಿಯಾಗಿತ್ತು. ಬಾಬಾ ಸಾಹೇಬ್‌ ಅಂಬೇಡ್ಕರ್ ಅವರ ಪ್ರತಿಮೆಯನ್ನು ಉರುಳಿಸುವುದು ಕೂಡ ಅಗೌರವದ ಸಂಕೇತವಾಗಿದೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಸಾಂಕೇತಗಳು ಮತ್ತು ಚಿಹ್ನೆಗಳು ಸಮಾಜದ ಒಂದು ಪ್ರಮುಖ ಹಾಗೂ ಅವಿಭಾಜ್ಯ ಅಂಗ ಎಂಬುದನ್ನು ನಾವು ನಿರಾಕರಿಸಬಾರದು.

ಕೊಲೆಯಾದ ಲಖ್ಬೀರ್‌ ಸಿಂಗ್‌ ಪವಿತ್ರ ಗ್ರಂಥವನ್ನು ಮುಟ್ಟಿದ, ಅಸ್ಪೃಶ್ಯನಾದ ಲಖ್ಬೀರ್‌‌ನಿಂದಾಗಿ ಮೇಲ್ಜಾತಿಯ ಸಿಂಗ್‌ಗಳ ಭಾವನೆಗೆ ದಕ್ಕೆಯಾಯಿತು ಎಂಬುದು ಆಧಾರ ರಹಿತ ಸಂಗತಿ. ಬೇರೆಯವರಿಗೆ ಹೋಲಿಸಿದರೆ ಸಿಖ್‌ನಲ್ಲಿ ಹೆಚ್ಚಿನ ಸಾಮಾಜಿಕ ಚಲನೆ ಇದೆ. ದಲಿತನೂ ಕೂಡ ಪವಿತ್ರ ಗ್ರಂಥವನ್ನು ಮುಟ್ಟಬಹುದು, ಓದಬಹುದು. ಸಿಖಿ ಶ್ಲೋಕಗಳನ್ನು, ಕೀರ್ತನಗಳನ್ನು ಕೇಳಿದಾಕ್ಷಣ ಯಾರೂ ದಲಿತರ ಕಿವಿಗೆ ಹಾನಿ ಮಾಡುವುದಿಲ್ಲ. ಇನ್ನು ಹೇಳಬೇಕೆಂದರೆ ಗುರು ಗ್ರಂಥ ಸಾಹೇಬ್‌ ರಚನೆಯಲ್ಲಿ ದಲಿತರು ಬಹುದೊಡ್ಡ ಪಾತ್ರ ವಹಿಸಿದ್ದಾರೆ.

ನನ್ನ ಅಜ್ಜ ಎಸ್.ವೀರ್‌ ಸಿಂಗ್‌ ಕೂಡ ಒಬ್ಬ ದಲಿತ. ಅವರು ಗುರುದ್ವಾರದಲ್ಲಿ ಪಾತಿ ಆಗಿದ್ದರು. ಧಾರ್ಮಿಕ ವಿಧಿವಿಧಾನಗಳಿಗಾಗಿ ಎಲ್ಲ ಜಾತಿಯವರು ಆತನನ್ನು ಕರೆಸಿಕೊಳ್ಳುತ್ತಿದ್ದಾರೆ. ಮೊದಲನೆಯದಾಗಿ, ಸಿಖ್ ಫಿಲಾಸಫಿಯಲ್ಲಿ ಜಾತಿ ಎಂಬುದು ಇಲ್ಲ. ಎರಡನೆಯದಾಗಿ, ಪಂಜಾಬಿಗಳು ಜಾತಿ ವ್ಯವಸ್ಥೆಯನ್ನು ಹೊಂದಿದ್ದರೂ, ಹಿಂದೂ ಧರ್ಮದಂತೆ ಕಟುವಾಗಿ ಇಲ್ಲಿನ ಜಾತಿ ವ್ಯವಸ್ಥೆ ಇಲ್ಲ. ಸಿಖ್ ಧರ್ಮದಲ್ಲಿರುವ ದಲಿತರು ‘ಗುರು ಗ್ರಂಥ ಸಾಹಿಬ್’ ಅಥವಾ ಯಾವುದೇ ಪವಿತ್ರ ಪಠ್ಯವನ್ನು ಸ್ಪರ್ಶಿಸಬಹುದು, ಕೇಳಬಹುದು ಮತ್ತು ಓದಬಹುದು.

ಈ ಪ್ರಕರಣದಲ್ಲಿ ಇದು ಜಾತಿ ಹಿಂಸೆಯಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. ಆದರೆ ಇದು ಕ್ರೂರ ಹಿಂಸೆ ಎಂಬುದು ಸಾಬೀತಾಗಿದೆ. ಇದು ಅಧಿಕಾರಶಾಹಿಯಿಂದ ಪ್ರಚೋದಿತವಾದ ಹಿಂಸೆಯಾಗಿದೆ ಎಂಬುದನ್ನು ಇಲ್ಲಿ ಅರ್ಥಮಾಡಿಕೊಳ್ಳಬೇಕು. ಭಾರತ ಸರ್ಕಾರ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಹಿಂಸೆಯನ್ನು ಪ್ರಚಾರ ಮಾಡುತ್ತಿದೆ…

ಭಾರತವು ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಕಾನೂನು ಹೊಂದಿದೆ. ಈ ಸಮಸ್ಯೆಯನ್ನು ಕಾನೂನಿನ ಮೂಲಕ ಪರಿಗಣಿಸಬೇಕು. ಕಿಸಾನ್ ಮೋರ್ಚಾ ತನ್ನ ಹೇಳಿಕೆಯಲ್ಲಿ ಹೇಳುವಂತೆ “ಅವರು ಯಾವುದೇ ಧಾರ್ಮಿಕ ಪಠ್ಯ ಅಥವಾ ಚಿಹ್ನೆಯ ಅಗೌರವಕ್ಕೆ ವಿರುದ್ಧವಾಗಿದ್ದಾರೆ. ಆದರೆ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವುದನ್ನು ಒಪ್ಪುವುದಿಲ್ಲ. ಆದರೆ ಅದೇ ಸಮಯದಲ್ಲಿ, ನಮ್ಮ ನ್ಯಾಯ ವ್ಯವಸ್ಥೆಯು ಅಗತ್ಯವಿರುವವರಿಗೆ ಉತ್ತಮ ಹಾಗೂ ಸಕಾಲದಲ್ಲಿ ನ್ಯಾಯವನ್ನು ದೊರಕಿಸುವುದನ್ನು ಸಾಬೀತುಪಡಿಸುವ ಸಮಯ ಬಂದಿದೆ.

ನಾಲ್ಕು ನಿಹಾಂಗ್ಸ್ ಪೊಲೀಸರಿಗೆ ಶರಣಾಗಿದ್ದಾರೆ. ಅವರಲ್ಲಿ ಇಬ್ಬರು ಪ್ರಮುಖ ಆರೋಪಿಗಳು ದಲಿತರು ಎಂಬುದನ್ನು ನಾನು ದೃಢೀಕರಿಸಬಲ್ಲೆ. ಇವರೆಲ್ಲರೂ ದಲಿತರು ಎಂದು ಮಾಧ್ಯಮ ವರದಿಗಳು ಹೇಳುತ್ತವೆ. ಈ ನಿಹಾಂಗ್ ಗುಂಪಿನ ಮುಖ್ಯಸ್ಥನೂ ದಲಿತನೇ.

ಇನ್ನು ಮಾಧ್ಯಮಗಳ ಹಲವು ಪ್ರಶ್ನೆಗಳು ಉತ್ತರವಿಲ್ಲದೆ ಹಾಗೆ ಉಳಿದುಕೊಂಡಿವೆ.

1. ಸಿಂಘು ಗಡಿಗೆ ಲಖಬೀರ್ ಸಿಂಗ್ ಅವರನ್ನು ಕರೆತಂದವರು ಯಾರು?

2. ಅಪವಿತ್ರತೆಗೊಳಿಸಿದ್ದಕ್ಕೆ ಪುರಾವೆ ಏನು?

3. ಅವರು ಯಾಕೆ ಸಂತ್ರಸ್ತನನ್ನು ಪೊಲೀಸರಿಗೆ ಒಪ್ಪಿಸಲಿಲ್ಲ?

4. ಕಿಸಾನ್‌ ಸಂಯುಕ್ತ ಮೋರ್ಚಾ ಏಕೆ ಹೆಚ್ಚು ಮಾತಾಡಿಲ್ಲ ಮತ್ತು ಬೇಜವಾಬ್ದಾರಿ ತೋರಿದೆ?

ನನ್ನ ಒಂದೇ ಪ್ರಶ್ನೆಗೆ ಅವರು ಉತ್ತರಿಸಲಾಗಿಲ್ಲ.

“ಸರ್ಕಾರವು ಕೃಷಿ ಕಾನೂನುಗಳನ್ನು ಏಕೆ ರದ್ದುಗೊಳಿಸಿಲ್ಲ ಮತ್ತು ಏಕೆ ಎಂಎಸ್‌ಪಿ ಮೇಲೆ ಕಾನೂನು ಜಾರಿಗೊಳಿಸಿಲ್ಲ?

ಆಳವಾದ ತನಿಖೆ ನಡೆಯಬೇಕು. ಇದು ಪ್ರತ್ಯೇಕ ಘಟನೆಯಲ್ಲ. ಜಾತಿ ಎಂಬುದು ವದಂತಿಯಲ್ಲ; ಅದು ಗುರಾಣಿಯೂ ಅಲ್ಲ. ಹಿಂಸೆ ಎಂಬುದು ಹಿಂಸೆಯಷ್ಟೇ. ಒರಟು ನ್ಯಾಯ ಎಲ್ಲಿಯೂ ಸಮರ್ಥನೀಯವಲ್ಲ ಮತ್ತು ನ್ಯಾಯಸಮ್ಮತವಲ್ಲ.

ನೀವು ಮತ್ತು ನಾನು ಒಬ್ಬರನ್ನೊಬ್ಬರು ದೂಷಿಸುವ ಮೂರ್ಖರಾಗಿದ್ದೇವೆ. ಅಲ್ಲಿ ಸರ್ಕಾರವು ಯಶಸ್ವಿಯಾಗಿ ಒಡೆದು ಆಡುವ ನೀತಿಯೊಂದಿಗೆ ಯಶಸ್ವಿಯಾಗಿ ಆಡಳಿತ ನಡೆಸುತ್ತಿದೆ.

ಹರಿಂದರ್‌‌‌ ಸಿಂಗ್‌‌

(ಅಭಿಪ್ರಾಯಗಳು ಲೇಖಕರದ್ದು)


ಇದನ್ನೂ ಓದಿ: ಲಖ್ಬೀರ್ ಹತ್ಯೆ ಪ್ರಕರಣ: ರೈತ ಸಂಘಟನೆಗಳ‌ ಹೊಣೆಯ ಕುರಿತು ಎರಡು ನೋಟಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...