Homeಕರ್ನಾಟಕಅಂಬೇಡ್ಕರ್‌ರವರ ಹೋರಾಟದ ರಥವನ್ನು ಮುಂದಕ್ಕೊಯ್ಯೋಣ: ನಿಜಗುಣಾನಂದ ಸ್ವಾಮಿಗಳು

ಅಂಬೇಡ್ಕರ್‌ರವರ ಹೋರಾಟದ ರಥವನ್ನು ಮುಂದಕ್ಕೊಯ್ಯೋಣ: ನಿಜಗುಣಾನಂದ ಸ್ವಾಮಿಗಳು

ಕನ್ನಡನೆಟ್‌.ಕಾಂಗೆ ದಶಮಾನ ಸಂಭ್ರಮ - ಬಹುತ್ವ ಭಾರತ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ನಿಜಗುಣಾನಂದ ಸ್ವಾಮಿಯವರ ಅಭಿಪ್ರಾಯ..

- Advertisement -
- Advertisement -

ಭಾರತವೆಂಬ ಹಡಗಿಗೆ ನಾವಿಕರು ರಾಜಕಾರಣಿಗಳಾಗಬಾರದು. ಬದಲಿಗೆ ಬುದ್ದ, ಬಸವ, ಅಂಬೇಡ್ಕರ್‌ರವರ ಚಿಂತನೆಗಳು ನಾವಿಕರಾಗಬೇಕು. ಬುದ್ದನ ತನು, ಬಸವಣ್ಣನ ಮನಸ್ಸು ಮತ್ತು ಅಂಬೇಡ್ಕರ್‌ರವರ ಆತ್ಮ ಭಾರತ ದೇಶವನ್ನು ಮುನ್ನಡೆಸಬೇಕೆಂದು ತೋಂಟದಾರ್ಯ ಶಾಖಾ ಮಠ, ಮುಂಡರಗಿಯ ನಿಜಗುಣಾನಂದ ಸ್ವಾಮಿಯವರು ಹೇಳಿದರು.

ಕೊಪ್ಪಳದಲ್ಲಿ ಕನ್ನಡನೆಟ್‌.ಕಾಂಗೆ ದಶಮಾನ ಸಂಭ್ರಮದ ಪ್ರಯುಕ್ತ ’ಬಹುತ್ವ ಭಾರತ’ ಮಾಸಪತ್ರಿಕೆ ಬಿಡುಗಡೆ ಮಾತನಾಡಿದ ಅವರು ಸಂಬಂಧಗಳ ಬೆಸುಗೆ ಮಾಡುವುದೇ ಮಾಧ್ಯಮ. ಅದಕ್ಕೆ ತನ್ನದೇಯಾದ ಪರಂಪರೆ ಮತ್ತು ಇತಿಹಾಸವಿದೆ. ಪ್ರಜಾಪ್ರಭುತ್ವದ ನಿಸರ್ಗದಲ್ಲಿ ಒಬ್ಬ ಮನುಷ್ಯನಾಗಿ ಬದುಕುತ್ತಿದ್ದು, ಎಲ್ಲರೂ ಮನುಷ್ಯನಾಗಿ ಬದುಕಬೇಕೆಂದು ಬಯಸಲು ಮಾಧ್ಯಮಗಳು ಪ್ರಯತ್ನಿಸಬೇಕು ಎಂದರು.

ಇಂದಿನ ಪ್ರಜಾಪ್ರಭುತ್ವ ಕುಸಿಯಲಿಕ್ಕೆ ಪ್ರಜೆಗಳೇ ಕಾರಣರಾಗಿರುವುದು ದುರಂತ. ಪ್ರಜೆಗಳು ಗಟ್ಟಿಯಿದ್ದರೆ, ಜಾಗೃತರಿದ್ದರೆ ಸ್ವಾಮಿಜಿಗಳು ಗಟ್ಟಿಯಾಗಿರುತ್ತಾರೆ, ರಾಜಕಾರಣಿಗಳು ಸಹ ಗಟ್ಟಿಯಾಗಿರುತ್ತಾರೆ. ಇದನ್ನು ಎಲ್ಲಿವರೆಗೂ ಪ್ರಜೆಗಳು ಅಂತರಂಗದೊಳಗೆ ಅರ್ಥಮಾಡಿಕೊಳ್ಳುವುದಿಲ್ಲವೋ ಆಗ ಪ್ರಜಾಪ್ರಭುತ್ವದ ವ್ಯವಸ್ಥೆ ಕಳೆದುಕೊಳ್ಳುತ್ತದೆ ಎಂದರು.

ಸೋಷಿಯಲ್‌ ಮೀಡಿಯಾ ಬಂದಮೇಲೆ ನಮ್ಮಂತವರ ಮಾತಿಗೆ ಒಂದಷ್ಟು ಬೆಲೆ ಬಂದಿದೆ. ಕರ್ನಾಟಕದಲ್ಲಿ ಮೊಟ್ಟ ಮೊದಲಿಗೆ ಪತ್ರಿಕೆ ತಂದವರು ಸನಾತನಾವಾದಿಗಳು, ಸಂಪ್ರದಾಯವಾದಿಗಳಲ್ಲ, ವಿದ್ಯಾವಂತರೂ ಸಹ ಅಲ್ಲ. ಬದಲಿಗೆ ಕ್ರೈಸ್ತಮಿಷನರಿಗಳು ಮಂಗಳೂರು ಸಮಾಚಾರ ತಂದರು. ಮಂಗಳೂರು ಸಮಾಚಾರ ಬಳ್ಳಾರಿಯಲ್ಲಿ ಪ್ರಿಂಟ್‌ ಆಗುತ್ತಿತ್ತು, ಆಗ ಕ್ರೈಸ್ತರು ಪತ್ರಿಕೆಯೆಂದರೇ ಏನು ಎಂದು ಅರ್ಥಮಾಡಿಸಿದರು ಎಂದು ತಿಳಿಸಿದರು.

ಮಾಧ್ಯಮ ಎನ್ನುವುದು ಹೊಟ್ಟೆಪಾಡಿನ ಕೆಲಸವಲ್ಲ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದಿಂದ ನ್ಯಾಯಸಿಗದಿದ್ದಾಗ, ದಾರಿತಪ್ಪಿದಾಗ ಕೆಲಸ ಮಾಡಬೇಕದ ಅಂತರಂಗದ ತರಂಗ ಶಕ್ತಿಯೇ ಮಾಧ್ಯಮ. ಸತ್ಯ ಯಾವುದು? ಸುಳ್ಳು ಯಾವುದು? ಎಂದು ತಿಳಿಸುವುದು ಮಾಧ್ಯಮದ ಕೆಲಸ ಎಂದರು.

ಆದರಿಂದು ಹಲವು ಮಾಧ್ಯಮಗಳು ಕೆಲವೇ ಜಾತಿಧರ್ಮದ, ರಾಜಕೀಯ ಪಕ್ಷಗಳ ಪರವಾಗಿ ಕೆಲಸ ಮಾಡುತ್ತಿವೆ. ಎಂ.ಎಂ ಕಲಬುರ್ಗಿಯವರು ಯು.ಆರ್‌ ಅನಂತಮೂರ್ತಿಯವರ ಪ್ರಸಂಗವನ್ನು ಉಲ್ಲೇಖ ಮಾಡಿ ಮಾತನಾಡಿದನ್ನು ಹಿಂದೂ ಧರ್ಮದ ಕವಲೊಡೆದ ಎಂದೆಲ್ಲಾ ಸುಳ್ಳು ಸುದ್ದಿಪ್ರಕಟಿಸಿದರು. ಹಿಂದೂ ಧರ್ಮದ, ದೇವಸ್ಥಾನದ ವಿರೋಧ ಎಂದೆಲ್ಲಾ ಬರೆದು ಕಚೋಧ್ಯ, ಮತೀಯವಾದಿಗಳ, ಮತಾಂಧರ, ಪಟ್ಟಭದ್ರ ಹಿತಾಸಕ್ತಿಯ ಮಾಧ್ಯಮಗಳು ಕಲಬುರ್ಗಿಯವರ ಸಾವಿಗೆ ಕಾರಣವಾದುದು ದುರಂತ ಎಂದರು.

ಇಂದು ಎಲ್ಲಿಯಾದರೂ ಮಾತನಾಡಿ ಹೋದ ನಂತರ ನಾವು ಮನೆಸೇರುತ್ತೇವೆ ಎಂಬುದಕ್ಕೆ ಗ್ಯಾರಂಟಿಯಿಲ್ಲ. ಪ್ರತಿದಿನ ಮಾತನಾಡುವಾಗ ಸಾವಿನ ಕದವನ್ನು ತಟ್ಟಿ ಮಾತನಾಡುತ್ತೇನೆ. ಕಾರಣ ಧಾರ್ಮಿಕ ಮುಖಂಡರು ಹೀಗೆ ಮಾತನಾಡಬಾರದು. ಅವರೇನಿದ್ದರೂ ಹಾವಿನ ಹೆಡೆಯಂತೆ ಆರ್ಶಿವಾದದ ಕೈಹಾಕಬೇಕು. ಸ್ವಾಮಿಗಳೇಕೆ ಹೀಗೆ ಮಾತನಾಡಬೇಕು ಎನ್ನುವ ರೀತಿ ಮಾಧ್ಯಮಗಳು ನಮ್ಮ ಬಗ್ಗೆ ವರದಿ ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಾರತ ದಿನೇ ದಿನೇ ಏಕಾಧಿಪತ್ಯ ಆಳ್ವಿಕೆಗೆ ಒಳಗಾಗುತ್ತಿದೆ. ಇದು ಸರಿಯಲ್ಲ. ನಮ್ಮದು ಬಹುತ್ವದ ದೇಶ. ಇದು ಬುದ್ದ, ಮಹಾವೀರ, ಲೋಕಾಯತ, ಚಾರ್ವಕ, ಕನಕಪುರಂದರ, ಬಸವಣ್ಣನವರ, ತಿರುವಳ್ಳುವರ್, ಸ್ವಾಮಿ ವಿವೇಕನಂದ, ಗಾಂಧಿ, ಅಂಬೇಡ್ಕರರ ಚಿಂತನೆಗಳ ದೇಶವಾಗಿದೆ ಎಂದರು.

ನಾನು ದೇಶವಿರೋಧಿ, ಧರ್ಮದ ವಿರೋಧಿಯಲ್ಲ. ನಾಸ್ತಿಕನೂ ಅಲ್ಲ. ನಾನು ಇಲ್ಲಿರುವ ಎಲ್ಲಾ ಜಾತಿ ಧರ್ಮದವರನ್ನು ಸಮಾನವಾಗಿ ಕಾಣಿ ಎಂದು ಹೇಳುತ್ತೇನೆ. ಏಕೆಂದರೆ ಎಲ್ಲರೂ ಸಮಾನವಾಗ ಬದುಕುಬೇಕೆಂಬ ಸತ್ಯದ ಆಶಯವಿರುವ ಬಾಬಾಸಾಹೇಬರ ಸಂವಿಧಾನಿವಿದೆ ಈ ದೇಶದಲ್ಲಿ ಎಂದರು.

ಕನ್ನಡನೆಟ್‌.ಕಾಂ ಒಂದು ಜೀವವನ್ನು ಉಳಿಸುವ ಕೆಲಸ ಮಾಡುತ್ತಿದೆ. ಅಂಬೇಡ್ಕರ್‌ರ ಪೆನ್ನು ಹೇಗೆ ದೇಶಕ್ಕೆ ದೊಡ್ಡ ಕೊಡುಗೆ ನೀಡಿತೋ ಹಾಗೆಯೇ ನೀವು ಮುಂದುವರೆಯಿರಿ ಎಂದು ಸಲಹೆ ನೀಡಿದರು.

ಮಾಧ್ಯಮಗಳು ಹಫ್ತಾ, ವಸೂಲಿ, ಮಟ್ಕಾ ದಂಧೆಯ ಬಗ್ಗೆ ಬರೆಯಿರಿ, ಹುಡುಕಿ ಹುಡುಕಿ ಬರೆಯಿರಿ ಬದಲಿಗೆ ಸುಳ್ಳು ಬರೆಯಬೇಡಿ, ಬ್ರೆಕಿಂಗ್‌ ನ್ಯೂಸ್‌ ಎಂಬ ಧಾವಂತಕ್ಕೆ ಬೀಳದೆ ಸತ್ಯ ಪರಿಶೀಲಿಸಿ ಪ್ರಕಟಿಸಿ ಎಂದರು. ನೆರೆ ಸಂತ್ರಸ್ತರು ತಲ್ಲಣಿಸುತ್ತಿದ್ದಾರೆ. ರೈತರು ಕಷ್ಟದಲ್ಲಿದ್ದಾರೆ. ಕಪ್ಪತಗುಡ್ಡ ತೊಂದರೆಯಲ್ಲಿದೆ. ಇವುಗಳ ಕುರಿತು ಹೆಚ್ಚು ಹೆಚ್ಚು ಬರೆದು ಆಳುವವರ ಕಣ್ತೆರೆಸಿ ಎಂದು ಮನವಿ ಮಾಡಿದರು.

ಮನುಷ್ಯನಿಗೆ ಮೂಲಭೂತವಾಗಿ ಅನ್ನ, ಅರಿವೆ, ಅರಿವು, ಆಶ್ರಯ, ಔಷಧ. ಆದರೆ ಎಲ್ಲಾ ಮನುಷ್ಯರಿಗೂ ಇದು ಸಿಗುತ್ತಿಲ್ಲ. ಅದಕ್ಕಾಗಿ ದೊಡ್ಡ ಹೋರಾಟ ನಡೆಯುತ್ತಿದೆ. ಈ ಹೋರಾಟದಲ್ಲಿ ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿಯಬೇಡಿ, ಅಂಬೇಡ್ಕರ್‌ರವರು ಹೇಳಿದಂತೆ ಥೇರನ್ನು ಮುಂದಕ್ಕೆ ಎಳೆದುಕೊಂಡಹೋಗೋಣ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಹೈದರಾಬಾದ್‌ ಕರ್ನಾಟಕ ಹೋರಾಟಗಾರ ಡಾ.ರಜಾಕ್‌ ಉಸ್ತಾದ್‌ “ಟಿ.ವಿ ಮಾಧ್ಯಮದವರು ಓದುವುದಿಲ್ಲ, ಪತ್ರಿಕಾ ಮಾಧ್ಯಮದವರು ಸ್ಥಳಕ್ಕೆ ಹೋಗುವುದಿಲ್ಲ ಎಂಬತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು. ಹಿಂದೆ ಜನ ಸುಳ್ಳು ಹೇಳುತ್ತಿದ್ದಾಗ ಪತ್ರಿಕೆಗಳು ಸತ್ಯ ಬರೆಯುತ್ತಿದ್ದವು. ಆದರಿಂದು ಪತ್ರಿಕೆಗಳು ಸುಳ್ಳು ಬರೆಯುತ್ತಿದ್ದು ಜನ ಸತ್ಯ ಹುಡುಕಿದ್ದಾರೆ ಎಂಬ ರವೀಶ್‌ ಕುಮಾರ್‌ರವರ ಮಾತನ್ನು ಉಲ್ಲೇಖಿಸಿ ಪ್ರಸ್ತುತ ಮಾಧ್ಯಮದ ಸ್ಥಿತಿಯನ್ನು ವಿವರಿಸಿದರು.

ಇದೇ ಸಂದರ್ಭದಲ್ಲಿ ತನಿಖಾ ಪತ್ರಿಕೋದ್ಯಮದ ಮೂಲಕ ಬಹಳಷ್ಟು ಹಗರಣಗಳನ್ನು ಬಯಲಿಗೆ ತಂದ ಹಿರಿಯ ಪತ್ರಕರ್ತರು ಮತ್ತು ಪ್ರಗತಿಪರ ಚಳವಳಿಗಳ ಒಡನಾಡಿಯಾದ ಕೊಪ್ಪಳದ ವಿಠ್ಠಪ್ಪ ಗೋರಂಟ್ಲಿಯವರಿಗೆ, ಹೈದರಾಬಾದ್‌ ಕರ್ನಾಟಕದ ಸಮಸ್ಯೆಗಳನ್ನು ಮುನ್ನಲೆಗೆ ತರುತ್ತಿರುವ ಪತ್ರಕರ್ತರಾದ ರಾಯಚೂರಿನ ಸಿದ್ದು ಬಿರಾದರ್‌‌ರವರಿಗೆ ಮತ್ತು ದಿ ಹಿಂದು ಪತ್ರಿಕೆಯ ಮೂಲಕ ಜನಪರ ಪತ್ರಿಕೋದ್ಯಮದ ಭಾಗವಾದ ಬಳ್ಳಾರಿಯ ಅಹಿರಾಜ್‌ರವರಿಗೆ “ಬಹುತ್ವ ಭಾರತೀಯ” ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಪತ್ರಕರ್ತರದ ಸಿದ್ದನಗೌಡ ಪಾಟೀಲ್, ಕಾರ್ಮಿಕ ಮುಖಂಡರಾದ ಆರ್‌ ಭಾರಧ್ವಜ್‌, ಕನ್ನಡ ನೆಟ್‌ ಸಂಪಾದಕರಾದ ರಾಜಭಕ್ಷಿ, ಬಹುತ್ವ ಭಾರತ ಮಾಸಪತ್ರಿಕೆಯ ಸಂಪಾದಕರಾದ ಸಿರಾಜ್‌ ಬಿಸ್ರಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಉತ್ತರಾಖಂಡ| 150 ವರ್ಷಗಳ ಜಾತಿ ತಡೆಗೋಡೆ ಮುರಿದು ತಮ್ಮದೇ ಮುಖ್ಯಸ್ಥರ ಆಯ್ಕೆ ಮಾಡಿಕೊಂಡ ದಲಿತರು

ಉತ್ತರಾಖಂಡದ ದೂರದ ಜೌನ್ಸರ್-ಬವಾರ್ ಪ್ರದೇಶದ ಬಿಜ್ನು ಬಿಜ್ನಾಡ್ ಗ್ರಾಮದ ದಲಿತ ಸಮುದಾಯವು ಸುಮಾರು 150 ವರ್ಷಗಳಲ್ಲಿ ಮೊದಲ ಬಾರಿಗೆ ತನ್ನದೇ ಆದ 'ಸೈನಾ' (ಗ್ರಾಮದ ಮುಖ್ಯಸ್ಥ) ಆಯ್ಕೆ ಮಾಡುವ ಮೂಲಕ ಐತಿಹಾಸಿಕ ಹೆಜ್ಜೆ...

ರಿಲಯನ್ಸ್ ಇಂಡಸ್ಟ್ರೀಸ್‌ಗೆ ರೂ. 56.44 ಕೋಟಿ ಸಿಜಿಎಸ್‌ಟಿ ದಂಡ

ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ಅಹಮದಾಬಾದ್‌ನ ಸಿಜಿಎಸ್‌ಟಿ ಜಂಟಿ ಆಯುಕ್ತರಿಂದ 56.44 ಕೋಟಿ ರೂ. ದಂಡದ ಆದೇಶವನ್ನು ಸ್ವೀಕರಿಸಿದೆ ಎಂದು ಶುಕ್ರವಾರ ತಿಳಿಸಿದೆ. ನವೆಂಬರ್ 25 ರಂದು ಹೊರಡಿಸಲಾದ ಆದೇಶದಲ್ಲಿ, ಕಂಪನಿಯ ಇನ್‌ಪುಟ್...

ತಮಿಳುನಾಡು| ರಸ್ತೆ ಅಪಘಾತದಲ್ಲಿ ಇಬ್ಬರು ದಲಿತ ಯುವಕರು ಸಾವು; ಜಾತಿ ವೈಷಮ್ಯ ಆರೋಪ

ತಮಿಳುನಾಡಿನ ಧರ್ಮಪುರಿಯಲ್ಲಿ ಬುಧವಾರ ರಾತ್ರಿ ಚಿನ್ನಾರ್ಥಳ್ಳಿ ಕೂಟ್ ರಸ್ತೆಯ ಬಳಿ ಅಪರಿಚಿತ ವಾಹನವೊಂದು ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸೊನ್ನಂಪಟ್ಟಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ ಎಂದು...

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...