Homeಕರ್ನಾಟಕತೀವ್ರ ಬೆಲೆ ಏರಿಕೆಯಾದರೂ ಅನುದಾನ ಹೆಚ್ಚಳವಿಲ್ಲ: ಅರೆಹೊಟ್ಟೆಯಲ್ಲಿ ಶಾಲಾ ಮಕ್ಕಳು

ತೀವ್ರ ಬೆಲೆ ಏರಿಕೆಯಾದರೂ ಅನುದಾನ ಹೆಚ್ಚಳವಿಲ್ಲ: ಅರೆಹೊಟ್ಟೆಯಲ್ಲಿ ಶಾಲಾ ಮಕ್ಕಳು

ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ 2020ರ ಜೂನ್‌ನಲ್ಲಿ ನಿಗಧಿಪಡಿಸಿದ ಅನುದಾನವನ್ನೇ ಈಗಲೂ ನೀಡಲಾಗುತ್ತಿದೆ.

- Advertisement -
- Advertisement -

ಪ್ರಾಥಮಿಕ ಶಾಲೆ, ಪ್ರೌಢ ಶಾಲೆಗಳಲ್ಲಿ ಮಕ್ಕಳಿಗೆ ಕೊಡುತ್ತಿರುವ ಮಧ್ಯಾಹ್ನದ ಬಿಸಿಯೂಟ ಹೊಟ್ಟೆ ತುಂಬ ಸಿಗದಂತಾಗಿದೆ. ಒಂದೇ ಸಮನೆ ಗ್ಯಾಸ್ ಸಿಲೆಂಡರ್, ದವಸ ಧಾನ್ಯ ಮತ್ತು ತರಕಾರಿ ಬೆಲೆ ಏರಿಕೆಯಾಗುತ್ತಿದ್ದರೂ ಹಿಂದಿನ ಅನುದಾನ ಪರಿಷ್ಕರಿಸದೆ ಸರಕಾರ ಉದಾಸೀನ ತೋರಿರುವುದರಿಂದ ಬಿಸಿಯೂಟ ಯೋಜನೆಯ್ನು ಶಾಲೆಗಳಲ್ಲಿ ನಿಭಾಯಿಸಲಾಗುತ್ತಿಲ್ಲವೆಂದು ಶಿಕ್ಷಕರು ಅಲವತ್ತುಕೊಳ್ಳುತ್ತಿದ್ದಾರೆ. ಶಿಕ್ಷಣ ಮಂತ್ರಿಯಾದಿಯಾಗಿ ಜನಪ್ರತಿನಿಧಿಗಳೆಲ್ಲ ಇದು ತಮಗೆ ಸಂಬಂಧಿಸಿದ ಸಂಗತಿ ಅಲ್ಲವೆಂಬಂತೆ ಇರುವುದರಿಂದ ವಿಧ್ಯಾರ್ಥಿಗಳು ಅರೆ-ಬರೆ ಉಂಡೇಳುವಂತಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಪ್ರತಿ ಮಗುವಿನ ಲೆಕ್ಕಾಚಾರದಲ್ಲಿ ಪ್ರತಿ ವರ್ಷ ಬಿಸಿಊಟದ ದರ ಸರ್ಕಾರ ಪರಿಷ್ಕರಿಸುವುದು ಪದ್ದತಿ. ಜೂನ್ 2020ರಲ್ಲಿ ಶೇ.10.99ರಷ್ಟು ಅನುದಾನ ಜಾಸ್ತಿ ಮಾಡಲಾಗಿತ್ತು. ಈ ದರದಂತೆ 1ರಿಂದ 5ನೇ ತರಗತಿ ವರೆಗಿನ ಒಂದು ಮಗುವಿಗೆ 4.97ರೂ. ಖರ್ಚು ಮಾಡಬಹುದು. 6ರಿಂದ 10ನೇ ತರಗತಿ ಮಕ್ಕಳಿಗೆ ತಲಾ 7.45ರೂ ವ್ಯಯಿಸಬೇಕು. ಅಡುಗೆ ಅನಿಲದಿಂದ, ಎಣ್ಣೆ ಬೇಳೆಕಾಳಿನ ತನಕದ ಎಲ್ಲ ಖರ್ಚು-ವೆಚ್ಚ ಹೆಚ್ಚಾಗಿದ್ದರೂ ಈ ವರ್ಷ ಅನುದಾನ ಮಾತ್ರ ಸರ್ಕಾರ ಹೆಚ್ಚಿಸಿಲ್ಲ. ಒಂದರಿಂದ ಐದನೇ ತರಗತಿ ವರೆಗಿನ ಒಂದು ಮಗುವಿಗೆ 2 ರೂಗೆ ತೊಗರಿ ಬೇಳೆ (20 ಗ್ರಾಂ), 1.36ರೂಗೆ ತರಕಾರಿ (50 ಗ್ರಾಂ), 1.73ರೂಗೆ ಎಣ್ಣೆ (5 ಗ್ರಾಂ), 37 ಪೈಸೆಗೆ ಸಾಂಬಾರ್ ಪುಡಿ, 3 ಪೈಸೆಗೆ ಉಪ್ಪು (2ಗ್ರಾಂ), ಇಂಧನಕ್ಕೆ 79 ಪೈಸೆ ಖರ್ಚು ಮಾಡಲಾಗುತ್ತಿದೆ.

ಅದೇ ರೀತಿಯಾಗಿ 6ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ 2.95ರೂಗೆ ತೊಗರಿಬೇಳೆ (30 ಗ್ರಾಂ), 2.04ರೂಗೆ ತರಕಾರಿ (75 ಗ್ರಾಂ), 54ಪೈಸೆಗೆ ಸಾಂಬಾರ್ ಪುಡಿ, 67 ಪೈಸೆಗೆ ಎಣ್ಣೆ (7.5 ಗ್ರಾಂ), 6 ಪೈಸೆಗೆ ಉಪ್ಪು(4ಗ್ರಾಂ), 1.19ರೂಗೆ ಇಂಧನದ ಲೆಕ್ಕದಲ್ಲಿ ಖರ್ಚು ಮಾಡಬೇಕೆಂದು ಸರ್ಕಾರಿ ಸುತ್ತೋಲೆ ಹೆಳುತ್ತದೆ. ವಾರಕ್ಕೊಮ್ಮೆ ಪಾಯಸ-ಹುಗ್ಗಿ ಮಕ್ಕಳಿಗೆ ಹಂಚಬೇಕು. ಇದಕ್ಕೆ ಪ್ರತ್ಯೇಕ ಅನುದಾನವಿಲ್ಲ. ಬಿಸಿಯೂಟ ಖಾತೆಯಿಂದ ನಿಗದಿತ ಪ್ರಮಾಣಕ್ಕಿಂತ ಒಂದು ಪೈಸೆ ಹೆಚ್ಚು ತೆಗೆಯುವಂತಿಲ್ಲ. ಆದರೆ ಈ ದರದಲ್ಲಿ ಬಿಸಿಯೂಟ ತಯಾರಿಸುವುದು ಹಾಲಿ ದುಬಾರಿ ದಿನ ಮಾನದಲ್ಲಿ ಅಸಾಧ್ಯದ ಮಾತೆಂಬ ಸಾಮಾನ್ಯ ಜ್ಞಾನ ಸರಕಾರ ನಡೆಸುವವರಿಗೆ ಇರಬೇಡವೆ ಎಂದು ಪಾಲಕರು ಪ್ರಶ್ನಿಸುತ್ತಾರೆ.

ಸರಕಾರ ನಿಗದಿಸಿರುವ ಈ ತಲಾ ಖರ್ಚಿನಲ್ಲಿ ಮಕ್ಕಳು ಕಡಿಮೆ ಸಂಖ್ಯೆಯಲ್ಲಿರುವ ಸರಕಾರಿ ಮತ್ತು ಅನುದಾನಿತ ಶಾಲೆಗಳಲಿ ಬಿಸಿಯೂಟ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಮೊದಲು ಶಾಲೆಗಳಿಗೆ ತಿಂಗಳಿಗೆ ಎರಡು ಅನಿಲ ಸಿಲೆಂಡರ್ ಕೊಡಲಾಗುತ್ತಿತ್ತು. ಈಗ ಅದರ ವೆಚ್ಚ ನೀಡಲಾಗುತ್ತಿದ್ದು ಶಿಕ್ಷಕರೆ ಗ್ಯಾಸ್‌ ತಂದುಕೊಳ್ಳಬೇಕಿದೆ. ಸರಕಾರ ಕೊಡುವ ಅನುದಾನದಲ್ಲಿ 910ರೂಗೆ ಗ್ಯಾಸ್ ಸಿಲೆಂಡರ್, ಕೆ.ಜಿ.ಗೆ 105 ರೂ.ಗಳ ತೊಗರಿ ಬೇಳೆ, ಕನಿಷ್ಟವೆಂದರೂ 40 ರಿಂದ 50 ರೂ.ಗಳಿರುವ ಕೆಜಿ ಈರುಳ್ಳಿ, ಟೊಮೆಟೊ, ಇನ್ನಿತರ ತರಕಾರಿ ಮತ್ತು ಲೀಟರಿಗೆ 160 ರೂ.ಗಳ ಖಾದ್ಯ ತೈಲಕ್ಕೆ ವಿಂಗಡಿಸಿ ಈ ಬೆಲೆ ಏರಿಕೆಯ ದಿನಗಳಲ್ಲಿ ಬಿಸಿಯೂಟ ತಯಾರಿಕೆ ಸಾಧ್ಯವಿಲ್ಲವೆಂದು ನಿರ್ವಾಹಕರು ಹೇಳುತ್ತಾರೆ.

“ಅಡುಗೆ ಅನಿಲ ಸಮಸ್ಯೆಯಿಂದ ಬಿಸಿಯೂಟ ತಯಾರಿಸುವುದು ದೊಡ್ಡ ಸವಾಲಿನ ಸಂಗತಿಯೆಂಬಂತಾಗಿದೆ. 50 ಮಕ್ಕಳಿರುವ ಶಾಲೆಗೆ ತಿಂಗಳಿಗೆ ಒಂದು ಸಿಲೆಂಡರ್ ಮತ್ತು 100 ಮಕ್ಕಳಿರುವ ಶಾಲೆಗಳಿಗೆ ತಿಂಗಳಿಗೆ ಎರಡು ಸಿಲಿಂಡರ್ ನಿಗದಿಪಡಿಸಲಾಗಿದೆ. 20ರಿಂದ 30 ಮಕ್ಕಳಿರುವ ಶಾಲೆಗಳೆ ಹೆಚ್ಚಿವೆ. ನಮ್ಮದು ಸಹ ಅಂತಹ ಶಾಲೆಯಾಗಿದ್ದು ಇಲ್ಲಿ 16-17 ದಿನಕ್ಕೆ ಸಿಲಿಂಡರ್ ಖಾಲಿಯಾಗುತ್ತಿದೆ. ಉಳಿದ ದಿನಗಳ ಸಮಸ್ಯೆಗೆ ನಾವೆ ತಲೆಕೊಡಬೇಕಾಗಿದೆ” ಎಂದು ಹೆಸರು ಹೇಳಲು ಇಚ್ಛಿಸಿದ ಶಾಲಾ ಮುಖ್ಯೋಪಾಧ್ಯಾಯರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇನ್ನು ಬಿಸಿ ಊಟ ತಯಾರಿಸುವ ಮಹಿಳಾ ನೌಕರರಿಗೆ 2021ರ ಜೂನ್ ತಿಂಗಳಿನಿಂದಲೂ ಸಂಬಳ ನೀಡಿಲ್ಲ. ಈ ಬಗ್ಗೆ ಹಲವು ಹೋರಾಟಗಳು ನಡೆದರೂ ಸರ್ಕಾರ ಮಾತ್ರ ಕಡೆಗಣಿಸುತ್ತಲೇ ಇದೆ.

ಬಿಸಿಯೂಟ ತಯಾರಿಕೆಯಲ್ಲಾಗುತ್ತಿರುವ ತೊಂದರೆ-ತೊಡಕು ನಿವಾರಣೆಗೆ ಜನ ಪ್ರತಿನಿಧಿಗಳು ಅದರಲ್ಲೂ ಶಾಸಕರು ಇಚ್ಚಾ ಶಕ್ತಿ ತೋರಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ.


ಇದನ್ನೂ ಓದಿ: ಮೋದಿ ಅಭಿವೃದ್ಧಿ ವಾಹನವು ರಿವರ್ಸ್ ಗೇರ್‌ನಲ್ಲಿದೆ ಹಾಗೂ ಅದರ ಬ್ರೇಕ್‌ ವಿಫಲವಾಗಿದೆ: ರಾಹುಲ್‌ ಗಾಂಧಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...