Homeಕರ್ನಾಟಕಪಂಚಾಚಾರ್ಯರು ಇಟ್ಟ ಬತ್ತಿ, ಯಡ್ಡಿಗೆ ಕಸಿವಿಸಿ : ಎಂ.ಬಿ. ಪಾಟೀಲ್, ಡಿಕೆಶಿ ನಡುವೆ ಪೈಪೋಟಿ

ಪಂಚಾಚಾರ್ಯರು ಇಟ್ಟ ಬತ್ತಿ, ಯಡ್ಡಿಗೆ ಕಸಿವಿಸಿ : ಎಂ.ಬಿ. ಪಾಟೀಲ್, ಡಿಕೆಶಿ ನಡುವೆ ಪೈಪೋಟಿ

ಧರ್ಮದ ಹೆಸರಲ್ಲಿ ರಾಜಕೀಯ ಮಾಡಿದ ಯಡಿಯೂರಪ್ಪರಿಗೆ ಇದು ಆತಂಕ ತಂದಿರಬಹುದೇ? ಯಾಕೆಂದರೆ, ಜನರಿಗೆ ಗೊತ್ತೇ ಇಲ್ಲದ ಸಂತೋಷ್‍ಜೀ ಎಂಬ ಆರ್‍ಎಸ್‍ಎಸ್ ಕುಳ ಬೇರೆ ಬೆನ್ನಿನ ಹಿಂದೆ ಬಿದ್ದಿದ್ದಾರೆ.

- Advertisement -
- Advertisement -

| ಪಿ.ಕೆ ಮಲ್ಲನಗೌಡರ್ |

ಮೈಸೂರು ಭಾಗದ ಎರಡನೇ ಹಂತದ ಒಕ್ಕಲಿಗರ ನಾಯಕ ಡಿ.ಕೆ ಶಿವಕುಮಾರ್ ಉತ್ತರದ ಭಾಗದಲ್ಲಿ ಸಪೋರ್ಟ್ ಬೇಸ್ ರೆಡಿ ಮಾಡಿಕೊಳ್ಳುತ್ತಿದ್ದಾರಾ? ಕುಂದಗೋಳ ಉಪ ಚುನಾವಣೆ ಗೆಲ್ಲಿಸುವ ಜವಾಬ್ದಾರಿಯನ್ನು ಹೊತ್ತಿರುವ ಅವರು, ಇದು ತಮ್ಮದೇ ಚುನಾವಣೆ ಎಂಬಂತೆ ಸಕ್ರಿಯರಾಗಿದ್ದಾರೆ. ಈ ನಡುವೆ ನಿನ್ನೆ (ಬುಧವಾರ) ಅವರು, ಲಕ್ಷ್ನೇಶ್ವರ ಹತ್ತಿರದ ಮುಕ್ತಿಮಂದಿರಕ್ಕೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ. ಇದರ ಹಿಂದೆ ಪಂಚಾಚಾರ್ಯರ ಆಶಿರ್ವಾದವೂ ಇದೆಯಾ? ಯಡಿಯೂರಪ್ಪರಿಗೆ ಇದು ಆತಂಕದ ವಿಷಯವಾ? ತನ್ನ ಸ್ಪರ್ಧಿ ಎಂ.ಬಿ. ಪಾಟೀಲರಿಗೂ ಡಿಕೆಶಿ ಚಾಲೆಂಜ್ ಮಾಡ್ತಿದ್ದೀರಾ? ಧರ್ಮ, ಜಾತಿಗಳ ಹೆಸರಲ್ಲಿ ನಡೆಯುವ ಕ್ಷುಲ್ಲಕ ರಾಜಕೀಯದ ಒಂದು ಅಸಹ್ಯ ಝಲಕ್ ಇದು

ನೇರ ವಿಷಯಕ್ಕೆ ಬಂದರೆ, ಉತ್ರರ ಕರ್ನಾಟಕದಲ್ಲಿ ಒಂದು ಸಣ್ಣ ಸಪೋರ್ಟ್ ಬೇಸ್ ಸೃಷ್ಟಿಸಿಕೊಳ್ಳಲು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಯತ್ನಿಸುತ್ತಿರುವ ಎಲ್ಲ ಲಕ್ಷಣಗಳೂ ಅವರ ಇತ್ತೀಚಿನ ನಡೆಯಲ್ಲಿ ಕಂಡು ಬರುತ್ತಿವೆ.

ಕುಂದಗೋಳ ಕ್ಷೇತ್ರದ ಜವಾಬ್ದಾರಿ ಅವರ ಮೇಲಿದೆ. ಅದಕ್ಕೆ ಬೇಕಾದುದೆಲ್ಲವನ್ನೂ ಮಾಡುತ್ತಲೇ, ಇಲ್ಲಿ ಅವರು ಒಂದಿಷ್ಟು ‘ಭವಿಷ್ಯ ನಿರ್ಮಾಣ’ದ ಕೆಲಸದಲ್ಲೂ ನಿರತರಾಗಿದ್ದಾರೆ. ಇಲ್ಲಿನ ಹಲವಾರು ಲೋಕಲ್ ನಾಯಕರ ಜೊತೆ ಸೌಹಾರ್ದ ಸಂಬಂಧವನ್ನು ಕಟ್ಟಿಕೊಳ್ಳುತ್ತಲೇ, ಒಟ್ಟೂ ಈ ಭಾಗದಲ್ಲಿ ತಮ್ಮನ್ನು ಸಪೋರ್ಟ್ ಮಾಡುವ ಒಂದು ರಾಜಕೀಯ ಗುಂಪು ಮತ್ತು ಧಾರ್ಮಿಕ ನಾಯಕರ ಗುಂಪು ಇರಲೆಂದು ಅವರು ಕಾರ್ಯಾಚರಣೆ ನಡೆಸಿದ್ದು ಎದ್ದು ಕಾಣುತ್ತಿದೆ.

ಇದ್ಹೇಗೆ ಯಡಿಯೂರಪ್ಪ ಆತಂಕಕ್ಕೆ ಕಾರಣವಾಗುತ್ತದೆ? ಏಕೆಂದರೆ, ಯಡಿಯೂರಪ್ಪ  ಲಿಂಗಾಯತರ ಯಾವ ಪಂಗಡಗಳನ್ನು ನೆಚ್ಚಿದ್ದರೋ ಅದೇ ಪಂಗಡಗಳ ಹಿಂದೆ ಡಿ.ಕೆ ಶಿವಕುಮಾರ್ ಬಿದ್ದಂತಿದೆ. ಈಗ ಮುಕ್ತಿಮಂದಿರಕ್ಕೆ ಭೇಟಿ ಕೊಟ್ಟಾಗ ಅವರು ಹೇಳಿದ್ದು: ‘ನನಗೆ ಈ ದೇವರ ಮೇಲೆ, ದೇವಸ್ಥಾನದ ಮೇಲೆ ನಂಬಿಕೆಯಿದೆ’ ಎಂದು. ಯಾವ ದೇವರು? ಅವರಿಗೇ ಗೊತ್ತಿಲ್ಲ. ಭಕ್ತರಿಗೆ ಯಾವ ದೇವರಾದರೇನು ಎಂದು ಸುಮ್ಮನಾಗೋಣ.

ಇಲ್ಲಿ ಐತೆ ಪಾಲಿಟಿಕ್ಸ್!

ಆಟದ ಮಸಲತ್ತೇ ಇಲ್ಲಿದೆ. ಮೊನ್ನೆ ಮುಕ್ತಿಮಂದಿರಕ್ಕೆ ಡಿಕೆಶಿ ಭೇಟಿ ಕೊಟ್ಟರಲ್ಲ ಅದು ಪುಟ್ಟಾಪೂರಾ ಪಂಚಾಚಾರ್ಯರ ಅಂದರೆ ಕರ್ಮಠ ವೀರಶೈವರ/ಜಂಗಮರ ಮಂದಿರ. ಇದರ ಹಿಂದೆ ಇರುವುದು ಪಂಚಾಚಾರ್ಯ ಜಗದ್ಗುರು ರಂಭಾಪುರಿ ಸ್ವಾಮೀಜಿ! ಯಡಿಯೂರಪ್ಪರ ಹಿಡನ್ ರಿಲಿಜಿಯಸ್ ಗುರು ಇವರು… ಅವರನ್ನೇ ಡಿಕೆಶಿ ಬುಟ್ಟಿಗೆ ಹಾಕಿಕೊಂಡರಾ ಎಂಬ ಪ್ರಶ್ನೆ ಭವಿಷ್ಯದ್ದು.

ಎಂ.ಬಿ. ಪಾಟೀಲ್ ವರ್ಸಸ್ ಡಿಕೆಶಿ?

ಇಲ್ಲಿ ವಿಚಿತ್ರ ಮತ್ತು ಅಸಹ್ಯದ ಧರ್ಮೋ-ರಾಜಕೀಯದ ವಿದ್ಯಮಾನ ಜರುಗುತ್ತಿವೆ. ಗೃಹ ಸಚಿವ ಎಂ.ಬಿ. ಪಾಟೀಲ್ ಲಿಂಗಾಯತ ಪ್ರತ್ಯೇಕ ಧರ್ಮದ ಪರ ಬಹಿರಂಗವಾಗಿ ನಿಂತಿದ್ದರು. ನಾಲ್ಕು ದಿನಗಳ ಹಿಂದೆ ಅವರು, ಪ್ರತ್ಯೇಕ ಧರ್ಮ ವಿರೋಧಿಸಿದ್ದ ಪಂಚಾಚಾರ್ಯರ ಶಾಖಾಮಠಕ್ಕೆ ಅಂದರೆ ಮುಕ್ತಿಮಂದಿರಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಸ್ವಾಮಿ ಅವರನ್ನು ಸನ್ಮಾನವನ್ನೂ ಮಾಡಿತ್ತು. ವೀರಶೈವ ಮಹಾಸಭಾ ಆ ಸ್ವಾಮಿ ವಿರುದ್ಧ ಕಿಡಿ ಕಾರಿತ್ತು! ಆದಾದ ಎರಡೇ ದಿನಕ್ಕೆ ಅಲ್ಲಿ ಡಿ.ಕೆ ಶಿವಕುಮಾರರಿಂದ ಭಕ್ತಿಪೂರ್ವಕ ಪೂಜೆ!

ಡಿಕೇಶಿ, ರಂಭಾಪುರಿ ದೋಸ್ತಿ

ಇದೆಲ್ಲ ಬಿಡಿ, ರಾಜಕಾರಣಕ್ಕೆ ಬರೋಣ.. ಕೇವಲ ನೂರಾರು ಕೋಟಿ ವ್ಯಯಿಸಿ ಬಿಟ್ಟರೆ ಸಿಎಂ ಆಗಲ್ಲ ಎಂದು ಡಿ.ಕೆ ಶಿವಕುಮಾರ್‍ಗೆ ಈಗ ಅರಿವಾದಂತಿದೆ. ಈಗಲ್ಲ, ಮುಂದಿನ ಚುನಾವಣೆ ವೇಳೆಗೆ ರಾಜ್ಯದಾದ್ಯಂತ ಸಪೋರ್ಟ್ ಬೇಸ್ ಹೊಂದಲು ಅವರು ಪ್ರಯತ್ನ ಪಡುತ್ತಿದ್ದಾರೆ. 

ಆರು ತಿಂಗಳ ಹಿಂದೆ  ಇದೇ ಲಕ್ಷ್ಮೇಶ್ವರದಲ್ಲಿ ರಂಭಾಪುರಿ ‘ಜಗದ್ಗುರು’ವಿನ ಸಮಾರಂಭದಲ್ಲಿ  ಭಾವಹಿಸಿದ್ದ ಡಿ.ಕೆ. ಶಿವಕುಮಾರ್, ‘ಪ್ರತ್ಯೇಕ ಧರ್ಮ ಬೆಂಬಲಿಸಿದ್ದು ಕಾಂಗ್ರೆಸ್‍ನ ತಪ್ಪು’ ಎಂದಿದ್ದರು. ಆಗ ಸಿದ್ದರಾಮಯ್ಯ ಬೆಂಬಲಿಗ ಶಾಸಕರು ತರಾಟೆಗೆ ತೆಗೆದುಕೊಂಡ ಮೇಲೆ ವಿಷಾದ ವ್ಯಕ್ತಪಡಿಸಿದ್ದರು.

ತಿಂಗಳ ಹಿಂದಷ್ಟೇ ಡಿಕೆಶಿ ಲಿಂಗಾಯತ ಧರ್ಮದ ಬಗ್ಗೆ ಎಲ್ಲೊ ಮಾತಾಡಿದ್ದನ್ನು ಪ್ರಸ್ತಾಪಿಸಿದ್ದ ಗೃಹ ಸಚಿವ ‘ಅಂವಂಗೇನು ಗೊತ್ತು ಬಸವ ಧರ್ಮ, ಮೂರ್ಖ’ ಎಂದು ಡಿಕೆಶಿಯನ್ನು ಏಕವಚನದಲ್ಲಿ ಬೈದಿದ್ದರು. ಬಹುಶಃ ಇದು, ಎರಡನೇ ಹಂತದ ನಾಯಕರಲ್ಲಿ ಮುಖ್ಯಮಂತ್ರಿಯಾಗುವ ಹಂಬಲವುಳ್ಳವರ ಜಿದ್ದಾಜಿದ್ದಿಯೇ?
ಧರ್ಮದ ಹೆಸರಲ್ಲಿ ರಾಜಕೀಯ ಮಾಡಿದ ಯಡಿಯೂರಪ್ಪರಿಗೆ ಇದು ಆತಂಕ ತಂದಿರಬಹುದೇ? ಯಾಕೆಂದರೆ, ಜನರಿಗೆ ಗೊತ್ತೇ ಇಲ್ಲದ ಸಂತೋಷ್‍ಜೀ ಎಂಬ ಆರ್‍ಎಸ್‍ಎಸ್ ಕುಳ ಬೆನ್ನಿನ ಹಿಂದೆ ಬಿದ್ದಿರುವಾಗ, ಡಿಕೆಶಿ ಮತ್ತು ಎಂಬಿ ಪಾಟೀಲ್ ಕೂಡ ತಮ್ಮ ಬೇಸ್ ಅಲುಗಾಡಿಸುತ್ತಿದ್ದಾರೆಯೇ ಎಂಬ ಭಯ ಅವರಲ್ಲಿ ಕಾಡುತ್ತಿದೆಯೇ?
ಇನ್ನು ಬಾದಮಿಯಿಂದ ಸ್ಪರ್ಧಿಸಿ ಗೆದ್ದಿರುವ ಮಾಜಿ ಸಿಎಂ ಸಿದ್ದರಾಮಯ್ಯನವರು ಈಗಾಗಲೇ ಉತ್ತರ ಕರ್ನಾಟಕಕ್ಕೂ ಲೀಡರ್ ಆಗುವ ಪಯಣದ ಹಾದಿಯಲ್ಲಿ ಅರ್ಧ ಸಾಗಿ ಆಗಿದೆ ಎಂದೇ ಹೇಳುತ್ತಿದ್ದಾರೆ. ಮುಖ್ಯವಾಗಿ ಅಹಿಂದ ಜೊತೆಗೆ ಎಲ್ಲಾ ಸಮುದಾಯದ ಜನರ ಮೇಲೂ ಪ್ರಭಾವ ಬೀರಲು ಅವರು ಶುರುವಚ್ಚಿಕೊಂಡಿದ್ದಾರೆ. ಕೊಪ್ಪಳದಲ್ಲಿ ಕುರುಬ ಸಮುದಾಯದವರಿಗೆ ಟಿಕೆಟ್ ನೀಡಿ ಶತಯಗತಾಯ ಗೆಲ್ಲಿಸಲು ಶ್ರಮ ಹಾಕಿದ್ದಾರೆ. ಇನ್ನೊಂದು ಕಡೆ ಸಿದ್ದರಾಮಯ್ಯನವರ ಕ್ಯಾಂಡಿಡೇಟ್ ಬಾಗಲಕೋಟೆಯ ಆಕ್ಟಿವ್ ಹುಡುಗಿ ವೀಣಾ ಕಾಶೆಪ್ಪನವರ್ ಈಗಾಗಲೇ ಗೆದ್ದಾಗಿದೆ ಎಂದು ಹೇಳಲಾಗುತ್ತಿದೆ.
ಇದೆಲ್ಲಾ ಎಲ್ಲಿಗೆ ಹೋಗಿ ತಲುಪುತ್ತದೆ ಎಂಬುದಕ್ಕೆ ಕಾಲವೇ ಉತ್ತರ ನೀಡಬೇಕಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...