Homeಕರ್ನಾಟಕಪಂಚಾಚಾರ್ಯರು ಇಟ್ಟ ಬತ್ತಿ, ಯಡ್ಡಿಗೆ ಕಸಿವಿಸಿ : ಎಂ.ಬಿ. ಪಾಟೀಲ್, ಡಿಕೆಶಿ ನಡುವೆ ಪೈಪೋಟಿ

ಪಂಚಾಚಾರ್ಯರು ಇಟ್ಟ ಬತ್ತಿ, ಯಡ್ಡಿಗೆ ಕಸಿವಿಸಿ : ಎಂ.ಬಿ. ಪಾಟೀಲ್, ಡಿಕೆಶಿ ನಡುವೆ ಪೈಪೋಟಿ

ಧರ್ಮದ ಹೆಸರಲ್ಲಿ ರಾಜಕೀಯ ಮಾಡಿದ ಯಡಿಯೂರಪ್ಪರಿಗೆ ಇದು ಆತಂಕ ತಂದಿರಬಹುದೇ? ಯಾಕೆಂದರೆ, ಜನರಿಗೆ ಗೊತ್ತೇ ಇಲ್ಲದ ಸಂತೋಷ್‍ಜೀ ಎಂಬ ಆರ್‍ಎಸ್‍ಎಸ್ ಕುಳ ಬೇರೆ ಬೆನ್ನಿನ ಹಿಂದೆ ಬಿದ್ದಿದ್ದಾರೆ.

- Advertisement -
- Advertisement -

| ಪಿ.ಕೆ ಮಲ್ಲನಗೌಡರ್ |

ಮೈಸೂರು ಭಾಗದ ಎರಡನೇ ಹಂತದ ಒಕ್ಕಲಿಗರ ನಾಯಕ ಡಿ.ಕೆ ಶಿವಕುಮಾರ್ ಉತ್ತರದ ಭಾಗದಲ್ಲಿ ಸಪೋರ್ಟ್ ಬೇಸ್ ರೆಡಿ ಮಾಡಿಕೊಳ್ಳುತ್ತಿದ್ದಾರಾ? ಕುಂದಗೋಳ ಉಪ ಚುನಾವಣೆ ಗೆಲ್ಲಿಸುವ ಜವಾಬ್ದಾರಿಯನ್ನು ಹೊತ್ತಿರುವ ಅವರು, ಇದು ತಮ್ಮದೇ ಚುನಾವಣೆ ಎಂಬಂತೆ ಸಕ್ರಿಯರಾಗಿದ್ದಾರೆ. ಈ ನಡುವೆ ನಿನ್ನೆ (ಬುಧವಾರ) ಅವರು, ಲಕ್ಷ್ನೇಶ್ವರ ಹತ್ತಿರದ ಮುಕ್ತಿಮಂದಿರಕ್ಕೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ. ಇದರ ಹಿಂದೆ ಪಂಚಾಚಾರ್ಯರ ಆಶಿರ್ವಾದವೂ ಇದೆಯಾ? ಯಡಿಯೂರಪ್ಪರಿಗೆ ಇದು ಆತಂಕದ ವಿಷಯವಾ? ತನ್ನ ಸ್ಪರ್ಧಿ ಎಂ.ಬಿ. ಪಾಟೀಲರಿಗೂ ಡಿಕೆಶಿ ಚಾಲೆಂಜ್ ಮಾಡ್ತಿದ್ದೀರಾ? ಧರ್ಮ, ಜಾತಿಗಳ ಹೆಸರಲ್ಲಿ ನಡೆಯುವ ಕ್ಷುಲ್ಲಕ ರಾಜಕೀಯದ ಒಂದು ಅಸಹ್ಯ ಝಲಕ್ ಇದು

ನೇರ ವಿಷಯಕ್ಕೆ ಬಂದರೆ, ಉತ್ರರ ಕರ್ನಾಟಕದಲ್ಲಿ ಒಂದು ಸಣ್ಣ ಸಪೋರ್ಟ್ ಬೇಸ್ ಸೃಷ್ಟಿಸಿಕೊಳ್ಳಲು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಯತ್ನಿಸುತ್ತಿರುವ ಎಲ್ಲ ಲಕ್ಷಣಗಳೂ ಅವರ ಇತ್ತೀಚಿನ ನಡೆಯಲ್ಲಿ ಕಂಡು ಬರುತ್ತಿವೆ.

ಕುಂದಗೋಳ ಕ್ಷೇತ್ರದ ಜವಾಬ್ದಾರಿ ಅವರ ಮೇಲಿದೆ. ಅದಕ್ಕೆ ಬೇಕಾದುದೆಲ್ಲವನ್ನೂ ಮಾಡುತ್ತಲೇ, ಇಲ್ಲಿ ಅವರು ಒಂದಿಷ್ಟು ‘ಭವಿಷ್ಯ ನಿರ್ಮಾಣ’ದ ಕೆಲಸದಲ್ಲೂ ನಿರತರಾಗಿದ್ದಾರೆ. ಇಲ್ಲಿನ ಹಲವಾರು ಲೋಕಲ್ ನಾಯಕರ ಜೊತೆ ಸೌಹಾರ್ದ ಸಂಬಂಧವನ್ನು ಕಟ್ಟಿಕೊಳ್ಳುತ್ತಲೇ, ಒಟ್ಟೂ ಈ ಭಾಗದಲ್ಲಿ ತಮ್ಮನ್ನು ಸಪೋರ್ಟ್ ಮಾಡುವ ಒಂದು ರಾಜಕೀಯ ಗುಂಪು ಮತ್ತು ಧಾರ್ಮಿಕ ನಾಯಕರ ಗುಂಪು ಇರಲೆಂದು ಅವರು ಕಾರ್ಯಾಚರಣೆ ನಡೆಸಿದ್ದು ಎದ್ದು ಕಾಣುತ್ತಿದೆ.

ಇದ್ಹೇಗೆ ಯಡಿಯೂರಪ್ಪ ಆತಂಕಕ್ಕೆ ಕಾರಣವಾಗುತ್ತದೆ? ಏಕೆಂದರೆ, ಯಡಿಯೂರಪ್ಪ  ಲಿಂಗಾಯತರ ಯಾವ ಪಂಗಡಗಳನ್ನು ನೆಚ್ಚಿದ್ದರೋ ಅದೇ ಪಂಗಡಗಳ ಹಿಂದೆ ಡಿ.ಕೆ ಶಿವಕುಮಾರ್ ಬಿದ್ದಂತಿದೆ. ಈಗ ಮುಕ್ತಿಮಂದಿರಕ್ಕೆ ಭೇಟಿ ಕೊಟ್ಟಾಗ ಅವರು ಹೇಳಿದ್ದು: ‘ನನಗೆ ಈ ದೇವರ ಮೇಲೆ, ದೇವಸ್ಥಾನದ ಮೇಲೆ ನಂಬಿಕೆಯಿದೆ’ ಎಂದು. ಯಾವ ದೇವರು? ಅವರಿಗೇ ಗೊತ್ತಿಲ್ಲ. ಭಕ್ತರಿಗೆ ಯಾವ ದೇವರಾದರೇನು ಎಂದು ಸುಮ್ಮನಾಗೋಣ.

ಇಲ್ಲಿ ಐತೆ ಪಾಲಿಟಿಕ್ಸ್!

ಆಟದ ಮಸಲತ್ತೇ ಇಲ್ಲಿದೆ. ಮೊನ್ನೆ ಮುಕ್ತಿಮಂದಿರಕ್ಕೆ ಡಿಕೆಶಿ ಭೇಟಿ ಕೊಟ್ಟರಲ್ಲ ಅದು ಪುಟ್ಟಾಪೂರಾ ಪಂಚಾಚಾರ್ಯರ ಅಂದರೆ ಕರ್ಮಠ ವೀರಶೈವರ/ಜಂಗಮರ ಮಂದಿರ. ಇದರ ಹಿಂದೆ ಇರುವುದು ಪಂಚಾಚಾರ್ಯ ಜಗದ್ಗುರು ರಂಭಾಪುರಿ ಸ್ವಾಮೀಜಿ! ಯಡಿಯೂರಪ್ಪರ ಹಿಡನ್ ರಿಲಿಜಿಯಸ್ ಗುರು ಇವರು… ಅವರನ್ನೇ ಡಿಕೆಶಿ ಬುಟ್ಟಿಗೆ ಹಾಕಿಕೊಂಡರಾ ಎಂಬ ಪ್ರಶ್ನೆ ಭವಿಷ್ಯದ್ದು.

ಎಂ.ಬಿ. ಪಾಟೀಲ್ ವರ್ಸಸ್ ಡಿಕೆಶಿ?

ಇಲ್ಲಿ ವಿಚಿತ್ರ ಮತ್ತು ಅಸಹ್ಯದ ಧರ್ಮೋ-ರಾಜಕೀಯದ ವಿದ್ಯಮಾನ ಜರುಗುತ್ತಿವೆ. ಗೃಹ ಸಚಿವ ಎಂ.ಬಿ. ಪಾಟೀಲ್ ಲಿಂಗಾಯತ ಪ್ರತ್ಯೇಕ ಧರ್ಮದ ಪರ ಬಹಿರಂಗವಾಗಿ ನಿಂತಿದ್ದರು. ನಾಲ್ಕು ದಿನಗಳ ಹಿಂದೆ ಅವರು, ಪ್ರತ್ಯೇಕ ಧರ್ಮ ವಿರೋಧಿಸಿದ್ದ ಪಂಚಾಚಾರ್ಯರ ಶಾಖಾಮಠಕ್ಕೆ ಅಂದರೆ ಮುಕ್ತಿಮಂದಿರಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಸ್ವಾಮಿ ಅವರನ್ನು ಸನ್ಮಾನವನ್ನೂ ಮಾಡಿತ್ತು. ವೀರಶೈವ ಮಹಾಸಭಾ ಆ ಸ್ವಾಮಿ ವಿರುದ್ಧ ಕಿಡಿ ಕಾರಿತ್ತು! ಆದಾದ ಎರಡೇ ದಿನಕ್ಕೆ ಅಲ್ಲಿ ಡಿ.ಕೆ ಶಿವಕುಮಾರರಿಂದ ಭಕ್ತಿಪೂರ್ವಕ ಪೂಜೆ!

ಡಿಕೇಶಿ, ರಂಭಾಪುರಿ ದೋಸ್ತಿ

ಇದೆಲ್ಲ ಬಿಡಿ, ರಾಜಕಾರಣಕ್ಕೆ ಬರೋಣ.. ಕೇವಲ ನೂರಾರು ಕೋಟಿ ವ್ಯಯಿಸಿ ಬಿಟ್ಟರೆ ಸಿಎಂ ಆಗಲ್ಲ ಎಂದು ಡಿ.ಕೆ ಶಿವಕುಮಾರ್‍ಗೆ ಈಗ ಅರಿವಾದಂತಿದೆ. ಈಗಲ್ಲ, ಮುಂದಿನ ಚುನಾವಣೆ ವೇಳೆಗೆ ರಾಜ್ಯದಾದ್ಯಂತ ಸಪೋರ್ಟ್ ಬೇಸ್ ಹೊಂದಲು ಅವರು ಪ್ರಯತ್ನ ಪಡುತ್ತಿದ್ದಾರೆ. 

ಆರು ತಿಂಗಳ ಹಿಂದೆ  ಇದೇ ಲಕ್ಷ್ಮೇಶ್ವರದಲ್ಲಿ ರಂಭಾಪುರಿ ‘ಜಗದ್ಗುರು’ವಿನ ಸಮಾರಂಭದಲ್ಲಿ  ಭಾವಹಿಸಿದ್ದ ಡಿ.ಕೆ. ಶಿವಕುಮಾರ್, ‘ಪ್ರತ್ಯೇಕ ಧರ್ಮ ಬೆಂಬಲಿಸಿದ್ದು ಕಾಂಗ್ರೆಸ್‍ನ ತಪ್ಪು’ ಎಂದಿದ್ದರು. ಆಗ ಸಿದ್ದರಾಮಯ್ಯ ಬೆಂಬಲಿಗ ಶಾಸಕರು ತರಾಟೆಗೆ ತೆಗೆದುಕೊಂಡ ಮೇಲೆ ವಿಷಾದ ವ್ಯಕ್ತಪಡಿಸಿದ್ದರು.

ತಿಂಗಳ ಹಿಂದಷ್ಟೇ ಡಿಕೆಶಿ ಲಿಂಗಾಯತ ಧರ್ಮದ ಬಗ್ಗೆ ಎಲ್ಲೊ ಮಾತಾಡಿದ್ದನ್ನು ಪ್ರಸ್ತಾಪಿಸಿದ್ದ ಗೃಹ ಸಚಿವ ‘ಅಂವಂಗೇನು ಗೊತ್ತು ಬಸವ ಧರ್ಮ, ಮೂರ್ಖ’ ಎಂದು ಡಿಕೆಶಿಯನ್ನು ಏಕವಚನದಲ್ಲಿ ಬೈದಿದ್ದರು. ಬಹುಶಃ ಇದು, ಎರಡನೇ ಹಂತದ ನಾಯಕರಲ್ಲಿ ಮುಖ್ಯಮಂತ್ರಿಯಾಗುವ ಹಂಬಲವುಳ್ಳವರ ಜಿದ್ದಾಜಿದ್ದಿಯೇ?
ಧರ್ಮದ ಹೆಸರಲ್ಲಿ ರಾಜಕೀಯ ಮಾಡಿದ ಯಡಿಯೂರಪ್ಪರಿಗೆ ಇದು ಆತಂಕ ತಂದಿರಬಹುದೇ? ಯಾಕೆಂದರೆ, ಜನರಿಗೆ ಗೊತ್ತೇ ಇಲ್ಲದ ಸಂತೋಷ್‍ಜೀ ಎಂಬ ಆರ್‍ಎಸ್‍ಎಸ್ ಕುಳ ಬೆನ್ನಿನ ಹಿಂದೆ ಬಿದ್ದಿರುವಾಗ, ಡಿಕೆಶಿ ಮತ್ತು ಎಂಬಿ ಪಾಟೀಲ್ ಕೂಡ ತಮ್ಮ ಬೇಸ್ ಅಲುಗಾಡಿಸುತ್ತಿದ್ದಾರೆಯೇ ಎಂಬ ಭಯ ಅವರಲ್ಲಿ ಕಾಡುತ್ತಿದೆಯೇ?
ಇನ್ನು ಬಾದಮಿಯಿಂದ ಸ್ಪರ್ಧಿಸಿ ಗೆದ್ದಿರುವ ಮಾಜಿ ಸಿಎಂ ಸಿದ್ದರಾಮಯ್ಯನವರು ಈಗಾಗಲೇ ಉತ್ತರ ಕರ್ನಾಟಕಕ್ಕೂ ಲೀಡರ್ ಆಗುವ ಪಯಣದ ಹಾದಿಯಲ್ಲಿ ಅರ್ಧ ಸಾಗಿ ಆಗಿದೆ ಎಂದೇ ಹೇಳುತ್ತಿದ್ದಾರೆ. ಮುಖ್ಯವಾಗಿ ಅಹಿಂದ ಜೊತೆಗೆ ಎಲ್ಲಾ ಸಮುದಾಯದ ಜನರ ಮೇಲೂ ಪ್ರಭಾವ ಬೀರಲು ಅವರು ಶುರುವಚ್ಚಿಕೊಂಡಿದ್ದಾರೆ. ಕೊಪ್ಪಳದಲ್ಲಿ ಕುರುಬ ಸಮುದಾಯದವರಿಗೆ ಟಿಕೆಟ್ ನೀಡಿ ಶತಯಗತಾಯ ಗೆಲ್ಲಿಸಲು ಶ್ರಮ ಹಾಕಿದ್ದಾರೆ. ಇನ್ನೊಂದು ಕಡೆ ಸಿದ್ದರಾಮಯ್ಯನವರ ಕ್ಯಾಂಡಿಡೇಟ್ ಬಾಗಲಕೋಟೆಯ ಆಕ್ಟಿವ್ ಹುಡುಗಿ ವೀಣಾ ಕಾಶೆಪ್ಪನವರ್ ಈಗಾಗಲೇ ಗೆದ್ದಾಗಿದೆ ಎಂದು ಹೇಳಲಾಗುತ್ತಿದೆ.
ಇದೆಲ್ಲಾ ಎಲ್ಲಿಗೆ ಹೋಗಿ ತಲುಪುತ್ತದೆ ಎಂಬುದಕ್ಕೆ ಕಾಲವೇ ಉತ್ತರ ನೀಡಬೇಕಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...