Homeಅಂಕಣಗಳುನಮ್ಮ ತೋಟದ ಸಾಲಿಗೆ ನೀವೂ ಬನ್ನಿನಮ್ಮ ತೋಟದ ಸಾಲಿಗೆ ನೀವೂ ಬನ್ನಿ-4: ಸಹಜ ಕೃಷಿ ಅಲ್ಲ, ಉಳುಮೆ ಇಲ್ಲದ ತೋಟ ನಮ್ಮದು

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-4: ಸಹಜ ಕೃಷಿ ಅಲ್ಲ, ಉಳುಮೆ ಇಲ್ಲದ ತೋಟ ನಮ್ಮದು

ಅಣ್ಣ ತಮ್ಮಂದಿರು, ಅಕ್ಕ ತಂಗಿಯರ ನಡುವೆ ಭೂಮಿ ಹಂಚಿಕೆಯಾಗಿ ಹಿಡುವಳಿಗಳು ಚಿಕ್ಕದಾಗುತ್ತಿರುವ ಮತ್ತು ನೆಲವೆಲ್ಲ ಸೈಟಾಗುತ್ತಿರುವ ಕಾಲದಲ್ಲಿ ಇದು ಅನಿವಾರ್ಯ.

- Advertisement -
- Advertisement -

ಮೊದಲೆ ಹೇಳಿಬಿಡುವುದು ಒಳ್ಳೆಯದು. ನಮ್ಮದು ಫುಕುವೋಕಾ ಮಾದರಿಯ ಸಹಜ ಕೃಷಿ ಅಲ್ಲ. ಅವನದು ಅಷ್ಟೆ, ಅದನ್ನೂ ಪೂರ್ಣ ಸಹಜ ಕೃಷಿಯೆಂದು ಒಪ್ಪಲಾಗದು, ಮನುಷ್ಯರು ಈಗ ಸಿಕ್ಕಾಪಟ್ಟೆ ಮನುಷ್ಯರಾಗಿ ಅಸಹಜಗೊಂಡಿರುವುದು ನಿಜ ತಾನೆ. ಫುಕುವೋಕಾ ಎಲ್ಲರಂತೆ ಮಾರುಕಟ್ಟೆ, ಬೆಲೆ, ಒಂದಿಷ್ಟು ಸಲಕರಣೆಗಳು, ಒಂದಿಷ್ಟು ಗೊಬ್ಬರ, ಬೂದಿ, ಕಳೆ ನಿಯಂತ್ರಣ, ಕೊಯ್ಲು, ಒಕ್ಕಣೆ ಹೀಗೆ ಅವನೂ ಈ ಮನುಷ್ಯ ಜಗತ್ತಿನ ಕೂಸೇ.

ಆದರೆ ಅವನ ಕೃಷಿ ವಿಧಾನಗಳು ಸರಳ, ಪ್ರಕೃತಿಗೆ ಹತ್ತಿರ ಹತ್ತಿರ. ಅವನ ಬದುಕಿನ ವಿಧಾನಗಳು  ಅಷ್ಟೆ. ನಾವೆಲ್ಲ ಅವನ ಹಾದಿಯಲ್ಲಿರುವವರಷ್ಟೆ, ಅವನ ಹತ್ತಿರವೂ ಹೋಗಲಾಗಿಲ್ಲ. ಆದರೆ ಕ್ರಮಿಸಿರುವಷ್ಟು ದೂರ ನಮಗೆ ಒಳ್ಳೆಯದನ್ನು ತೋರಿಸಿದೆ.

ಮೊದ ಮೊದಲು ಕೆಲವರು ನಮ್ಮ ತೋಟ ನೋಡಿ ಈ ಬಗೆಯ ಕೃಷಿಯನ್ನು ನಿಮ್ಮಂತ ನಿಗಧಿತ ಸಂಬಳ ಬರುವವರು ಮಾತ್ರ ಮಾಡಲು ಸಾಧ್ಯ ಎನ್ನುತ್ತಿದ್ದರು. ನಿಜಕ್ಕೂ ಇಂಥ ಕಡಿಮೆ ಖರ್ಚಿನ, ಮರಾಧಾರಿತ, ಮಿಶ್ರ ಬೆಳೆಗಳ ಸಾಂದ್ರ ಬೇಸಾಯ ಪದ್ದತಿಯನ್ನು ಅನುಸರಿಸಬೇಕಾದವರು ನಿಜ ರೈತರು. ಐವತ್ತು ವರ್ಷಗಳ ಹಿಂದೆ ಈ ಬಗೆಯ ಬೇಸಾಯ ಮಾಡುತ್ತಿದ್ದವರು ಅವರೆ. ಬೆಲೆ, ಮಾರುಕಟ್ಟೆ, ನೀರಿನ ಕೊರತೆ, ರೋಗ ರುಜಿನಗಳು, ಪ್ರಾಣಿಗಳ ಕಾಟ, ಪ್ರಕೃತಿ ವಿಕೋಪ ಇವೇ ಮುಂತಾದ ನೂರಾರು ಸಂಕಷ್ಟಗಳಿಂದ ನರಳುತ್ತಿರುವ, ಮಾರುಕಟ್ಟೆ ಚೋರರ ಗರಗಸಕ್ಕೆ, ಸರ್ಕಾರಗಳ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿರುವ ರೈತರು ಈ ಬಗೆಯ ಕೃಷಿ ಮಾಡಬೇಕಾಗಿರುವುದು.

PC : Expo 2015, (ಫುಕುವೋಕಾ)

ಇರುವಷ್ಟು ನೆಲವನ್ನು, ಲಭ್ಯವಿರುವ ನೀರನ್ನು, ನಮ್ಮ ಶ್ರಮವನ್ನು ಸಾರ್ಥಕವಾಗಿ ಬಳಸಿಕೊಂಡು ಕೃಷಿ ಮಾಡುವುದು ಇಂದಿನ ತುರ್ತು. ಅಣ್ಣ ತಮ್ಮಂದಿರು, ಅಕ್ಕ ತಂಗಿಯರ ನಡುವೆ ಭೂಮಿ ಹಂಚಿಕೆಯಾಗಿ ಹಿಡುವಳಿಗಳು ಚಿಕ್ಕದಾಗುತ್ತಿರುವ ಮತ್ತು ನೆಲವೆಲ್ಲ ಸೈಟಾಗುತ್ತಿರುವ ಕಾಲದಲ್ಲಿ ಇದು ಅನಿವಾರ್ಯ.

ಇದೆಲ್ಲಾ ಇರಲಿ ನಮ್ಮ ರೈತರು ದುಡಿದದ್ದೆಲ್ಲಾ ಅವರ ಬಡತನ್ನಕ್ಕೆ ಜಮಾ ಆಗುವುದಾದರೆ, ಎಷ್ಟು ಹೆಚ್ಚು ಉತ್ಪಾದನೆ ಮಾಡಿದರೂ ಅದರ ಉತ್ಪದನಾ ವೆಚ್ಚವೇ ಜಾಸ್ತಿಯಾಗುವುದಾದರೆ, ಹೆಚ್ಚು ಉತ್ಪಾದನೆ ಯಾಕೆ ಮಾಡಬೇಕು? ಇನ್ನೂ ಬಡವರಾಗಲೆಂದೇ, ಅಥವ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಲೆಂದೇ?

ಇಂಥ ಹೊತ್ತಲ್ಲಿ ರೈತರು ತಮ್ಮನ್ನು ರಕ್ಷಿಸಿಕೊಳ್ಳುವ ಹೊಸ ಕೃಷಿ ಮಂತ್ರಗಳನ್ನು ಕಲಿಯಲೇಬೇಕಿದೆ. ಆ ನಿಟ್ಟಿನಲ್ಲಿ ಯೋಚಿಸಿ ಕಾರ್ಯಕ್ಷೇತ್ರಕ್ಕೆ ಇಳಿದವರನ್ನಿಲ್ಲಿ ಸ್ಮರಿಸಲೇ ಬೇಕು, ಚೇರ್ಕಾಡಿ ರಾಮಚಂದ್ರ ರಾಯರು, ಭರಮಗೌಡರು, ಪುರಷೋತ್ತಮರಾಯರು, ಜಿ.ಎನ್‌.ಎಸ್‌ ರೆಡ್ಡಿ, ನಾರಾಯಣ ರೆಡ್ಡಿ, ಶಿವನಂಜಯ್ಯ ಬಾಳೆಕಾಯಿ, ಶಿವರಾಜ ಪಾಟೀಲ್‌, ಎ.ಪಿ ಚಂದ್ರಶೇಖರ್‌, ಕೈಲಾಸ ಮೂರ್ತಿ, ವಿಜಯ ಅಂಗಡಿ, ಬಸವರಾಜು, ಸದಾಶಿವಪ್ಪ, ಮಹಲಿಂಗಪ್ಪ ಈ ರೈತರಿಗೆ ಪೂರಕವಾಗಿ ನಿಂತು ಈ ಬಗೆಗೆ ಬರೆದ, ಕೃಷ್ಣ ಪ್ರಸಾದ್‌, ಶ್ರೀಪಡ್ರೆ, ಮಲ್ಲಿಕಾರ್ಜುನ ಹೊಸಪಾಳ್ಯ, ಆನಂದ ತೀರ್ಥ ಪ್ಯಾಟಿ, ಶಿವರಾಂ ಪೈಲೂರು, ಗಾಣಧಾಳು ಶ್ರೀಕಂಠ, ಅನಿತಾ, ಶಿವಾನಂದ ಕಳವೆ ಮುಂತಾದವರು, ಇವರಿಗೆ ಒತ್ತಾಸೆಯಾಗಿ ನಿಂತ ಸಿರಿಸಮೃದ್ಧಿ (ಬಳಗ) ಅಡಿಕೆ ಪತ್ರಿಕೆ, ಸುಜಾತ, ಲೀಸಾ ಇಂಡಿಯ, ಸಹಜ ಸಾಗುವಳಿ ಮುಂತಾದ ಪ್ರತ್ರಿಕೆಗಳು, ಸಂಘಟನೆಗಳು ಪರ್ಯಾಯ ಕೃಷಿ ವಿಧಾನಗಳ ಬಗೆಗೆ ಬಹುವಾಗಿ ತಲೆಕೆಡಿಸಿಕೊಂಡ ಪರಿಣಾಮ ಸಾವಿರಾರು ರೈತರ ಸ್ವಾವಲಂಬಿ ಬದುಕಿಗೆ ಕಾರಣವಾಗಿದೆ.

ಅದಕ್ಕೆ ಈ ಕಡಿಮೆ ಖರ್ಚಿನ, ಮಿಶ್ರ ಬೆಳೆಗಳ ಮರಾಧಾರಿತ, ಬಹುಮಹಡಿಯ ಕೃಷಿ ಪದ್ದತಿ ಹಬ್ಬಬೇಕು. ವೈಜ್ಞಾನಿಕೆ ಬೇಸಾಯದ ಹೆಸರಿನಲ್ಲಿ ಉಗ್ರ ಬೇಸಾಯ ಮಾಡಿ ಮಣ್ಣು ನೀರು ಜೀವಗಳನ್ನು ಕಳೆದುಕೊಳ್ಳುವುದಲ್ಲ.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-2: ಈ ಹಕ್ಕಿಗಳು ಎಲ್ಲಿರುತ್ತವೋ ಏನೋ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...