Homeಅಂಕಣಗಳುಪುಟಕ್ಕಿಟ್ಟ ಪುಟಗಳು: ಖರ್ಚು ಮಾಡಿಬಿಡು, ಇನ್ನೂ ಬಾಕಿಯೇಕುಳಿಸಿಕೊಂಡಿರುವೆ?

ಪುಟಕ್ಕಿಟ್ಟ ಪುಟಗಳು: ಖರ್ಚು ಮಾಡಿಬಿಡು, ಇನ್ನೂ ಬಾಕಿಯೇಕುಳಿಸಿಕೊಂಡಿರುವೆ?

- Advertisement -
- Advertisement -

ಉಮರನ ಕವನಗಳೆಂದರವು ಇಹದ ಅಮಲು, ಪರದ ಅನುಭಾವ, ಪ್ರೀತಿಯ ಗಮಲು, ಕಾವ್ಯದ ಹುಚ್ಚು; ಪರ್ಶಿಯಾ ಭಾಷೆಯಲ್ಲಿನ ಈ ನಾಲ್ಕು ಸಾಲಿನ ಕವನಗಳನ್ನು ಎಡ್ವರ್ಡ್ ತಮ್ಮದಾಗಿಸಿಕೊಂಡು ಮಾಡಿರುವ ಅನುವಾದಗಳಲ್ಲೆಲ್ಲೂ ಪರಕೀಯತೆಯನ್ನು ಹೊಂದಿರುವಂತೆ ಕಾಣುವುದಿಲ್ಲ. ಆದರೆ ಪರ್ಶಿಯಾ ಭಾಷೆ ಗೊತ್ತಿದ್ದವರು ಅದನ್ನು ಹೇಳಬೇಕು. ಅಮಲು, ಗಮಲು ಮತ್ತು ಹುಚ್ಚಿನಲ್ಲಿರುವ ಯಾವನೊಬ್ಬ ತನ್ನೆದೆಯ ಗೂಡಿನಲ್ಲಿ ಬೆಚ್ಚಗಿರುವ ತಲೆಯನ್ನು ಕಳೆದುಕೊಂಡಿರುತ್ತಾನೋ, ಅವನಿಗೆ ಎಡ್ವರ್ಡ್‌ನ ಅನುವಾದವೋ, ಉಮರನ ಮೂಲವೋ ಎಂಬುದು ವಿಷಯವಲ್ಲ. ಆ ಹೊತ್ತಿನ ಅವನೆದೆಯ ಸೊತ್ತಾಗುತ್ತದೆ ಅಷ್ಟೇ.

ಮೌನವೇ ಸೊಲ್ಲಾಗಿರುವಂಗೆ ದಾರಿಯಿಲ್ಲದ ಬಯಲು, ಎಲ್ಲೆಯಿಲ್ಲದ ಮುಗಿಲು ಕಣ್ಣಿಗಾಗಲಿ, ಕಾಲಿಗಾಗಲಿ ತೊಡರದು. ನಾನೂ ಇಲ್ಲ, ನೀನೂ ಇಲ್ಲ. ಅದೂ ಇಲ್ಲ, ಇದೂ ಇಲ್ಲ. ಎಲ್ಲವೂ ಇದೆ, ಯಾವುದೂ ಇಲ್ಲ.

ಕೀಲಿಯಿಲ್ಲದ ಕದವನು ಕಂಡೆ
ಕಾಣಲಾರದಂತಹ ಪರದೆಯಿದೆ
ನಮ್ಮ ನಡುವೆ ಸಣ್ಣ ಮಾತು ಅಲ್ಪ ಕಾಲದೆ
ಇಲ್ಲವಾಯ್ತಾಗ ನಾನು ನೀನೆಂಬುದೆ

ಕುಡಿತವೆಂಬುದು ಇಹವ ಮರೆಯುವ ಒಂದು ನೆಪ. ಲೌಕಿಕದ ಲೆಕ್ಕ್ಕಾಚಾರಗಳೆಲ್ಲಾ ಭ್ರಷ್ಟವಾಗಿರುವವು ಅಲೌಕಿಕ ಮುಕ್ತ ಬಯಲಿನಲ್ಲಿ. ಕಾಲವೇ ಜೀವನ. ಜೀವನವೇ ಕಾಲ. ಏಕೆಂದರೆ ಅರಿವಿಲ್ಲದಂತೆ ಆಯ್ತೆಮ್ಮ ಜನನ, ಅರಿತಿಲ್ಲ ನಾವು ಎಂದು ಬರುವುದೋ ಮರಣ. ಅವಧಿ ಎಂಬುವುದುಂಟು ಹುಟ್ಟುಸಾವಿನ ನಡುವೆ. ಆ ಕಾಲವಲ್ಲವೇ ನಮ್ಮೆಲ್ಲಾ ಜೀವನ? ಕಾಲ ಮತ್ತು ಜೀವನ ಸಮಾನಾರ್ಥಕ ಪದಗಳು. ಒಂದಕ್ಕೆ, ಒಬ್ಬರಿಗೆ ಸಮಯವನ್ನು ಕೊಡುತ್ತೇವೆಂದರೆ ಜೀವನವನ್ನೇ ಕೊಡುತ್ತೇವೆಂದು ಅರ್ಥ. ಆ ಜೀವನವನ್ನು ಲೌಕಿಕವು ಬಂಧಿಸದಿರಲು ಇಹವನ್ನು ಮರೆಯುವ ಅಮಲು ಬೇಕು.

ಕೋಳಿ ಕೂಗುತ್ತಿದ್ದಂತೆ ಮದಿರಾಲಯದ ಮುಂದೆ
ನಿಂತಾತ ಕೂಗಿದ – ಕೂಡಲೆ ಬಾಗಿಲನು ತೆರೆ
ನಾವೆಷ್ಟು ಅಲ್ಪ ಕಾಲ ಇರುವುದೆಂದು ನಿನಗೆ ಗೊತ್ತಿಲ್ಲ
ಒಮ್ಮೆ ಇಲ್ಲಿಂದ ಹೊರಟರೆ ಬರದಿರಬಹುದು ಹಿಂದೆ.

ಆ ಸಿದ್ಧಾಂತ, ಈ ಸಾಧನೆ, ಅದೆಂತದ್ದೋ ಘನತೆ, ಇಂತಹದ್ದೊಂದು ಅಧಿಕಾರ; ಎಂದೆಲ್ಲಾ ಪರಿಪಾಟಲು ಪಡುವಾಗ ಉಮರ ಮೆಲ್ಲನೆ ಕಿವಿಯಲ್ಲಿ ಉಲಿಯುವನು.

ಖರ್ಚು ಮಾಡಿಬಿಡು, ಇನ್ನೂ ಬಾಕಿಯೇಕುಳಿಸಿಕೊಂಡಿರುವೆ?
ನಾವೂ ಕೂಡಾ ಮಣ್ಣಿಗಿಳಿದು ಬಿಡುವ ಮುನ್ನವೇ.
ಮಣ್ಣು ಮಣ್ಣಾಗುವಾಗ, ಮಣ್ಣ ಕೆಳಗುರುಳಿರುವಾಗ,
ಮದ್ಯವಿಲ್ಲ, ಹಾಡಿಲ್ಲ, ಹಾಡುವನಿಲ್ಲ, ಕೊನೆಯೂ ಇಲ್ಲ.

ಬದುಕೆಂಬುದೇ ಮಧುಪಾತ್ರೆ. ಅದನ್ನು ಸಿಹಿ ಎನ್ನುವುದೇ, ಕಹಿ ಎನ್ನುವುದೇ? ಅದು ರುಚಿಗಳನ್ನು ಮೀರಿರುವುದು. ಆದರೆ ಅರುಚಿಯ ರೋಗವಲ್ಲವದು. ಅಭಿರುಚಿಯ ರಸಿಕತೆಯದು.

ನೈಶಾಪುರದಲ್ಲಾಗಲಿ, ಬ್ಯಾಬಿಲೋನಲ್ಲಾಗಲಿ
ಬಟ್ಟಲೊಸರುತ್ತಿರುವುದು ಸಿಹಿಯಿಂದಾಗಲಿ, ಕಹಿಯಿಂದಾಗಲಿ
ಬದುಕ ಮಧುಪಾತ್ರೆ ಸೋರುತ್ತಿರುವುದು ಹನಿಹನಿಯಾಗಿ
ಬಾಳ ಬಿಟ್ಟು ಹನಿಯುತ್ತಲಿರುವುದು ಒಂದೊಂದಾಗಿ.

ಉಮರ ಇಸ್ಲಾಮಿನ ಕರ್ಮಠರಿಗೆ ತನ್ನ ಅನೇಕ ಕವನಗಳಲ್ಲಿ ಸೃಷ್ಟಿಯ ಸೌಂದರ್ಯದ ಪಾಠವನ್ನು ಮಾಡುವನು. ಸಂಪ್ರದಾಯ ಮತ್ತು ಆಚರಣೆಗಳಿಂದಾಗಿ ತಮ್ಮ ಬದುಕಿನ ಆದ್ರತೆಯನ್ನು ಬರಡಾಗಿಸಿಕೊಳ್ಳದಿರುವಂತೆ ಪ್ರೇರೇಪಿಸಲು ಯತ್ನಿಸುತ್ತಾನೆ. ಅದಾದರೂ ತನ್ನ ಕಡೆಯಿಂದ ಅವರಿಗಾಗಿ ಮಾಡುವಂತ ಪ್ರಯತ್ನವೇನಲ್ಲ. ಆದರೂ ಅವು ಸಾಂಪ್ರದಾಯಿಕ ವಿಚಾರಗಳ ಮತ್ತು ಸೂಫಿ ಸಿದ್ಧಾಂತಗಳ ನಡುವೆ ಚರ್ಚೆಯನ್ನು ತಂದಿಡುತ್ತವೆ.

ಒಟ್ಟಿನಲ್ಲಿ ಎಡ್ವರ್ಡ್ ತಮ್ಮ ಒಲವಿನಂತೆ ಲೌಕಿಕತೆಯಲ್ಲಿ ಅಲೌಕಿಕತೆಯನ್ನು ಸಾಕ್ಷಾತ್ಕರಿಸಿಕೊಳ್ಳುವ ಅಮಲಿನ ಪದ್ಯಗಳನ್ನು ಆಯ್ದುಕೊಂಡಿದ್ದಾರೆ. ಮುಕ್ತವಾಗಿ ಭಾವಾನುವಾದ ಮಾಡುವಂತೆ ಮಾಡದೇ ಪರ್ಶಿಯಾ ಮೂಲದ ಕೃತಿಯ ಲಯವನ್ನು ಇಂಗ್ಲಿಷಿನಲ್ಲಿ ಕಾಯ್ದಿಟ್ಟುಕೊಳ್ಳಲು ಯತ್ನಿಸಿದ್ದಾರೆ. ಸಾಮಾನ್ಯವಾಗಿ ಇದು ಕಷ್ಟದ ಕೆಲಸವೇ. ಆದರೆ ಮಾಡಿರುವ ಉತ್ತಮ ಮತ್ತು ಪ್ರಾಮಾಣಿಕ ಪ್ರಯತ್ನದಿಂದಾಗಿ ಉಮರ ಗಮಲನ್ನು ಕೆಡಿಸದಿರಲು ಸಾಧ್ಯವಾಗಿದೆ ಎನಿಸುತ್ತದೆ. ಕನ್ನಡದಲ್ಲಿ ಡಿ ವಿ ಗುಂಡಪ್ಪನವರು ಉಮರನ ಒಸಗೆ ಎಂದು ಅನುವಾದಿಸಿರುವುದೂ ಕೂಡಾ ಇದೇ ಎಡ್ವರ್ಡ್ ಫಿಟ್ಜ್ ಜೆರಾಲ್ಡನ ಅನುವಾದವನ್ನೇ.

ಆಡುವವನೆಸೆವಂತೆ ಬೀಳ್ವ ಚೆಂದಿಗದೇಕೆ
ಎಡಬಲಗಳೆಣಿಕೆ, ಸೋಲ್ ಗೆಲವುಗಳ ಗೋಜು
ನಿನ್ನಾರಿತ್ತಲೆಸೆದಿಹನೊ ಬಲ್ಲವನಾತ
ನೆಲ್ಲ ಬಲ್ಲವನವನು – ಬಲ್ಲನೆಲ್ಲವನು.

ಆತ್ಮ ಮತ್ತು ಪರಮಾತ್ಮನು ಒಂದಾಗುವಂತಹ ಅದ್ವೈತ ಸಿದ್ಧಾಂತ ಇಸ್ಲಾಮಿನ ಸಾಂಪ್ರದಾಯಿಕ ನಂಬುಗೆಯಲ್ಲಿ ಇಲ್ಲ. ಆದರೆ, ಸೂಫಿ ಪರಂಪರೆಯಲ್ಲಿ ಇಂತಹ ಅನುಭಾವಗಳಿಗೆ ಕೊರತೆ ಇಲ್ಲ. ಉಪನಿಷತ್ತಿನ, ಬೌದ್ಧ ಮತ್ತು ಕ್ರೈಸ್ತಧರ್ಮಗಳ ಪ್ರಭಾವಗಳನ್ನೆಲ್ಲಾ ತನ್ನದಾಗಿಸಿಕೊಂಡು ಇಸ್ಲಾಮಿನ ತಾತ್ವಿಕ ವಿಚಾರಗಳನ್ನು ಮಥಿಸಿ ನವನೀತವನ್ನು ತೆಗೆದಿದ್ದಾರೆ. ನನ್ನ ಅಭಿಪ್ರಾಯದಲ್ಲಿ ಉಮರನೂ ಅದನ್ನು ಮಾಡಿದ್ದಾನೆ.

ಉಮರನು ತಾನೇ ತನ್ನ ಚರಮ ಗೀತೆಯನ್ನು ಬರೆದುಕೊಂಡು ಇಹವನ್ನು ತ್ಯಜಿಸಿದನೆಂದು ಹೇಳುತ್ತಾರೆ.

ಓ ದೇವ ನೀನರಿವೆ ನಿನ್ನನಾರಸುತ್ತೆ
ಪಟ್ಟೆಲ್ಲ ಪಾಡುಗಳನಾದನಿತು ಪಟ್ಟೆನ್
ಎನಗೆ ಬಂದರಿವಿನಾ ಕೊರೆಯ ನೀಂ ಮರೆತುಬಿಡು
ನಾನರಸಿದವನೆಂದು ಕನಿಕರಿಸಿ ನೋಡು

ಈ ಸಾಲುಗಳು ಗುಂಡಪ್ಪರವರ ಅನುವಾದ. ಈ ಮೊದಲು ಮೇಲೆ ಮಾಡಿರುವವು ನನ್ನವು.

ಒಟ್ಟಿನಲ್ಲಿ ಜೀವನದ ರಹಸ್ಯ, ದರ್ಶನ, ಅನುಭವ, ರುಚಿಯ ಆಸ್ವಾದನೆಗಳ ಉಮನ ಒಸಗೆಯಲ್ಲಿ ದಕ್ಕುವುದು.
ಹೆಂಡದ ಅಂಗಡಿ ಎಂದರೆ ಜಿಜ್ಞಾಸುಗಳ ಗೋಷ್ಠಿ. ಬಟ್ಟಲೆಂದರೆ ಹೃದಯವೆಂದೂ, ಮದ್ಯವನ್ನು ಬಟ್ಟಲಿಗೆ ಹುಯ್ಯುವ ಸಾಕಿಯೆಂದರೆ ತತ್ವಾಭ್ಯಾಸಿ ಎಂದೂ, ಮದ್ಯವೆಂದರೆ ದೈವಿಕ ಆನಂದವೆಂದೂ ಉಮರನ ಚೌಪದಿಗಳಲ್ಲಿ ಸಂಕೇತಿಸುವರು. ಅವನ ಚೌಪದಿಗಳನ್ನು ವಿವರಿಸಲು ಹೋದರೆ ವಾಚ್ಯವಾಗುವುದು. ಸೂಚಿತ ಸಂಕೇತಗಳನ್ನು ತಾನೇ ಬಿಡಿಸಿಕೊಳ್ಳುತ್ತಾ ತಾನೇ ಸವಿಯುತ್ತಿದ್ದರೆ ಆನಂದದ ರಸವೊಸರುವುದು. ಇಷ್ಟು ಹೇಳಿದ್ದೂ ಅತಿಯೇ.


ಇದನ್ನೂ ಓದಿ: ಪುಟಕ್ಕಿಟ್ಟ ಪುಟಗಳು: ಪುರುಷಾಧಿಪತ್ಯವನ್ನು ಪ್ರಶ್ನಿಸಿ ಆರೋಗ್ಯಕರ ಶೃಂಗಾರ ಪಾಠ ಹೇಳುವ ’ಪ್ರಾಚೀನ ಭಾರತದಲ್ಲಿ ಕಾಮಶಾಸ್ತ್ರ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...