Homeಅಂಕಣಗಳು’ಕಲ್ಲು ಹೂವಿನ ನೆರಳು’: ತಾಜಾ ನಿರೂಪಣೆಯ ಮತ್ತು ಸಂವೇದನೆಯುಳ್ಳ ಗ್ರಹಿಕೆಯ ಕಥೆಗಳು

’ಕಲ್ಲು ಹೂವಿನ ನೆರಳು’: ತಾಜಾ ನಿರೂಪಣೆಯ ಮತ್ತು ಸಂವೇದನೆಯುಳ್ಳ ಗ್ರಹಿಕೆಯ ಕಥೆಗಳು

- Advertisement -
- Advertisement -

ಕಥಾ ರಚನೆಗೆ ಬೇಕಾದ ಸರಕು ಎಲ್ಲೆಡೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರೂ ಕೂಡ, ಅದನ್ನು ಕಥೆಯಾಗಿಸುವ ನಿರೂಪಣಾ ಕೌಶಲ್ಯಕ್ಕೆ ಸಿದ್ಧತೆ ಮತ್ತು ಕಾರ್ಯಕ್ಷಮತೆಯ ಅಗತ್ಯವಿದೆ. ಅನಿಲ್ ಗುನ್ನಾಪುರ ಅವರ ’ಕಲ್ಲು ಹೂವಿನ ನೆರಳು’ ಸಂಕಲನದಲ್ಲಿ ಅಂತಹ ಕೌಶಲ್ಯದ ಛಾಯೆ ನಮಗೆ ಕಥೆಗಳ ಒಳಗಿಳಿದಂತೆ ಕಾಣತೊಡಗುತ್ತದೆ. ಕಥೆಗಾರನ ತನ್ಮಯತೆ ಮತ್ತು ಅಂತರಾಳದ ತುಡಿತಗಳಿಗೆ ಅಕ್ಷರದ ಬಣ್ಣ ಬಳಿದಾಗ, ಅದು ಕಲ್ಲು ಹೂವಿನ ನೆರಳಾಗಿ ವಿಶಿಷ್ಟವಾದ ಕಲಾಕೃತಿಯಾಗಿ ರೂಪುಗೊಳ್ಳುತ್ತದೆ. ತನ್ನ ಸುತ್ತಲಿನವರು ತಮ್ಮ ಬದುಕನ್ನು ಹೆಣೆದುಕೊಳ್ಳುವಂತೆಯೇ, ಕಥೆಗಾರ ಕಥೆಗಳ ಹೆಣೆಯುತ್ತ, ತನ್ನೊಳಗಿನ ಭಾವ ಪ್ರಪಂಚವನ್ನು ಲೋಕದೃಷ್ಟಿಯಿಂದ ಕಾಣಬಯಸುತ್ತಾನೆ. ಇಲ್ಲಿನ ಬಹುತೇಕ ಕಥೆಗಳು ಕೆಂಡದಂತೆ ಕಂಡರೂ ಕೂಡ ಮಂಜಿನ ಹಾಗೆ ತಣ್ಣನೆಯ ನೋವು, ಹತಾಶೆ, ಮೌನ ಮತ್ತು ಕ್ರೌರ್ಯದ ನಿಲುಗನ್ನಡಿಯೇ ಆಗಿವೆ. ಸುತ್ತಲಿನ ಲೋಕ ಮೀಮಾಂಸೆ ಒಂದೆಡೆಯಾದರೆ, ಬದುಕಿನ ಸಣ್ಣಸಣ್ಣ ತಿರುವುಗಳು ಕೂಡ ನೋವಿನ ನಗಾರಿ ಬಾರಿಸಲು ನಿಂತಿರುವಂತೆ ಕಾಣುವುದು ಇಲ್ಲಿನ ಕಥೆಗಳ ವಿಶೇಷ!

ಪ್ರತಿ ಕಥೆಯ ಸ್ಥಾಯಿಭಾವ, ಮೌನ ಮತ್ತು ಮುಗ್ಧತೆಯೇ ಆಗಿದ್ದರೂ, ಅದಕ್ಕಿರುವ ಸಂಚಾರಿ ಭಾವ ಮನೋಸಂಬಂಧವೆ ಆಗಿಬಿಡುತ್ತದೆ. ಕೊಳದೊಳಗೆ ಸಣ್ಣ ಕಲ್ಲು ಬಿದ್ದು ತರಂಗ ಎಬ್ಬಿಸುವ ಹಾಗೆ, ಸಣ್ಣದೊಂದು ಮಾತು, ಘಟನೆ, ಸ್ವಕಲ್ಪಿತ ವಿಚಾರಗಳಿಂದ ಮನಸ್ಸಿನಲ್ಲಿ ಏಳಬಹುದಾದ ತರಂಗಗಳ ಒಟ್ಟು ಮೊತ್ತವೇ ಈ ಕಥಾಗುಚ್ಚ ಎನ್ನಬಹುದು!

ಇಲ್ಲಿನ ಪ್ರತಿ ಕಥೆಗೂ ಅಂತರ್ ಸಂಬಂಧೀಯ ಗುಣ ಇದ್ದಂತೆ ಕಾಣುತ್ತಿದ್ದಂತೆಯೇ, ಇಲ್ಲವೆನಿಸಿಯೂಬಿಡುತ್ತದೆ. ’ಪರಿಮಳ’ ಕಥೆಯ ಪಮ್ಮಿಯೂ, ’ಗುಲ್ ಮೊಹರ್ ಹುಡುಗ’ನಾದ ಅಪ್ಪುವಿಗೂ ಸಾಮ್ಯತೆಯ ಕಲ್ಪಿಸಬಹುದು. ಇಬ್ಬರಲ್ಲೂ ಮುಗ್ಧತೆ ಸಾಮಾನ್ಯವೆನಿಸಿದರೂ, ಪಮ್ಮಿಗೆ ಸಂಬಂಧದ ಕುರಿತಿರುವ ಗೊಂದಲ ಅಪ್ಪುವಿಗಿಲ್ಲ.

ಆದರೆ, ’ಗುಲ್ ಮೊಹರ್ ಹುಡುಗ’ ಕಥೆಯಲ್ಲಿರುವ ಅರವಿಂದನಿಗೆ ಇರುವ ಲೈಂಗಿಕ ಆಸಕ್ತಿ ಹೆಂಡತಿಯಾದ ನಳಿನಿಯಲ್ಲಿ ಹೆಚ್ಚು ಕಾಣಿಸದು, ಅಂತೆಯೇ ’ಶ್ಯಾರಿಯ ಗಲ್ಲಾ ಡೆಬ್ಬಿ’ಯ ಬಾಯಕ್ಕನಿಗೆ ಇರುವ ಲೈಂಗಿಕ ಆಸಕ್ತಿ ಗಂಡ ಹುಚ್ಚಯ್ಯನಿಗೆ ಇಲ್ಲದಿರುವುದು ಒಂದು ರೀತಿಯ ವೈರುಧ್ಯವನ್ನು ಎದುರಿಟ್ಟ ಹಾಗಿದೆ. ಇದರಿಂದ ಪರಸ್ಪರ ಸಂಬಂಧಗಳ ನಡುವೆ ಬಿಟ್ಟಿರಬಹುದಾದ ಬಿರುಕು ಕೂಡ ಪ್ರಮುಖ ಪಾತ್ರವಹಿಸಿದೆ ಎನಿಸಬಹುದು. ’ಹುಚ್ಚಯ್ಯನ ಲೀಲೆ’ ಕಥೆಯಲ್ಲಿ ಬರುವ ಚೆನ್ನಪ್ಪನಿಗೂ ’ಕಮಲಜ್ಜಿ’ಗೂ ಇರಬಹುದಾದ ಉದಾರತೆಯ ಗುಣವು ಒಂದೇ ಅನ್ನಿಸಿದರೂ, ಚೆನ್ನಪ್ಪನದು ಊರ ಜನರ ಕುರಿತ ತನಗರಿವಿಲ್ಲದೆಯೇ ಬಂದಿರುವ ಅಘೋಷಿತ ಕಾಳಜಿಯಾದರೆ, ಕಮಲಜ್ಜಿಯದ್ದು ಮಗನ, ಮೊಮ್ಮಕ್ಕಳ ಕುರಿತ ಕೌಟುಂಬಿಕ ಕಾಳಜಿ, ಚೆನ್ನಪ್ಪ ಹುಚ್ಚಯ್ಯನಂತೆಯೇ ಆಧ್ಯಾತ್ಮದಲ್ಲಿ ಐಕ್ಯವಾದರೆ, ಕಮಲಜ್ಜಿ ಸಂಬಂಧಗಳ ಸೆಳೆತದಲ್ಲೆ ಮುಳುಗುತ್ತಾಳೆ.

ಅನಿಲ್ ಗುನ್ನಾಪುರ

ಇನ್ನೂ ’ಶ್ಯಾರಿಯ ಗಲ್ಲಾ ಡೆಬ್ಬಿ’ ಕಥೆಯಂತು ಓದುಗರ ಕಣ್ಣಂಚಿನಲ್ಲಿ ನೀರು ಚಿಮ್ಮಿಸಬಲ್ಲ ಅನಿರೀಕ್ಷಿತ ದುರಂತದ ಕಥೆ. ಬದುಕ ಕಟ್ಟಿಕೊಳ್ಳಲು ಊರಿಂದ ಊರಿಗೆ ಅಲೆಯುವ ಬದುಕಿನ ಬವಣೆ ಇಲ್ಲಿನ ಕೇಂದ್ರ ವಸ್ತು. ಬಾಯಕ್ಕನ ಬದುಕಿನ ಹಸಿವಿನೊಂದಿಗೆ, ಮಿಲನದ ಹಸಿವು, ಗಂಡ ಹುಚ್ಚಪ್ಪನ ಕುಡಿತದ ಹಸಿವು, ಮಗಳು ಶ್ಯಾರಿಯ ಅಕ್ಷರದ ಹಸಿವು ಅಲ್ಲದೇ ಕೊನೆಯಲ್ಲಿ ಅಪರಿಚಿತ ಆಸಾಮಿಯ ಅತ್ಯಾಚಾರದ ಹಸಿವಿನಿಂದಾಗಿ ಇಡೀ ಕುಟುಂಬವೇ ನರಳುವ ಮತ್ತು ಓದುಗರನ್ನು ವಿಚಿತ್ರ ಯಾತನೆಗೆ ಒಳಗು ಮಾಡುವ ಕಥೆಯಿದು.
ಇಲ್ಲಿನ ಎಂಟು ಕಥೆಗಳ ಪೈಕಿ ’ಚಿನ್ಮಯ ನಿಲಯ’ ಕಥೆಯ ವಸ್ತು ಕನ್ನಡ ಕಥಾ ಲೋಕಕ್ಕೆ ತೀರ ಹೊಸತು ಅನ್ನಿಸಿತು. ಬುದ್ಧಿಮಾಂದ್ಯರ ಲೈಂಗಿಕತೆಯ ಕುರಿತು ಮಿಶಲ್ ಫುಕೋ ಹೇಳಿದ ನಿಯಮವನ್ನು, ಕಥೆಗಾರ ಅರಿವಿದ್ದೋ, ಅರಿವಿಲ್ಲದೆಯೋ ಬಳಸಿಕೊಂಡಿದ್ದಾನೆ ಮತ್ತು ಯಶಸ್ವಿ ಕೂಡ ಆಗಿದ್ದಾನೆ. ಆ ಕಥೆಯ ನಿರೂಪಣೆ
ಕುತೂಹಲ ಅನಿಸುತ್ತದೆ, ಚಂಪಾ ಆಂಟಿ ಮತ್ತು ಸುಭಾಷ್ ಅಂಕಲ್‌ನ ಮನೆಯ ಕಥೆಯನ್ನು ಯಾರು ನಿರೂಪಣೆ ಮಾಡುತ್ತಿದ್ದಾರೆ ಎಂಬುದೇ ಗೊತ್ತಾಗುವುದಿಲ್ಲ. ಈ ಕಥೆಯಲ್ಲಿ ಬರುವ ಸಂಬಂಧಗಳ ಬಂಧ ಕೆಲವು ಸಲ ಬಿಗಿಯಾಗಿ, ಮತ್ತೂ ಗಟ್ಟಿಯಾಗಿ ಏಕತಾನತೆಯನ್ನು ಇಲ್ಲವಾಗಿಸುತ್ತದೆ. ಮೂವತ್ತೊಂದು ವರ್ಷದ ಚಿನ್ಮಯನ ಅಂಗಾಂಗವು ಚಂದ್ರವ್ವನ ಸ್ಪರ್ಷದಿಂದ ಜಾಗೃತವಾಗುವ ಮತ್ತು ಪರಸ್ಪರರು ಬೆರೆಯುವುದು ಅವನ ಬದುಕಿನ ಚೈತನ್ಯಕ್ಕೆ ಕಾರಣವಾಯಿತೇ? ಅಥವಾ ಅವನಲ್ಲಾದ ಬದಲಾವಣೆ ಮನುಷ್ಯ ಸಹಜವಾದದ್ದೆ? ಎಂಬ ಹಲವು ವಿಚಾರವನ್ನು ವಿವೇಚಿಸುವಂತೆ ಮಾಡುತ್ತ ನಿರೂಪಕ ನಿರ್ಗಮಿಸುತ್ತಾನೆ.

’ಚುಕ್ಕಿ ಕೇಳಿದ ಕತೆ’ ವಿಶೇಷವಾಗಿ ನಿರೂಪಿಸಿದ ಒಂದು ಕಥಾವಸ್ತು. ಕಥೆಯೊಳಗೊಂದು ಕಥೆ ಹೆಣೆಯುವ ಕುಸುರಿ ಕೆಲಸದಲ್ಲಿ ಕಥೆಗಾರ ಗೆದ್ದಿದ್ದಾನೆ. ’ಅವನಿ’ ಕಥೆಯೂ ಕೂಡ ಸಹಜ ಕುತೂಹಲದಿಂದ ಏನನ್ನೋ ಹೇಳಲುಹೋಗಿ, ಕೊನೆಗೆ ಏನೂ ಹೇಳದೆ ದೃಶ್ಯಗಳನ್ನಷ್ಟೆ ಎದುರಿಟ್ಟು ಸುಂದರ ಚಿತ್ರಾಕೃತಿಯಾಗಿ ನಿಂತುಬಿಡುತ್ತದೆ.

ಹೀಗೆ ಕಥೆಗಳ ಚೌಕಟ್ಟಿನಲ್ಲಿ ತುಂಬಬಹುದಾದ ಚಿತ್ರಗಳನ್ನು ಕಥೆಗಾರ ತನ್ನ ಅನುಭವದ ಕುಂಚದಿಂದ ಚಿತ್ರಿಸಲು ಪ್ರಯತ್ನಪಟ್ಟಿದ್ದಾನೆ. ಕುತೂಹಲದ ನಿರೂಪಣೆ ಮತ್ತು ಭಾಷಾ ಸೊಗಡಿನ ವೈಶಿಷ್ಟ್ಯತೆ ಆಕರ್ಷಕವಾಗಿದೆ. ಕಥೆಯ ಕೊನೆಯನ್ನು ಕೊನೆಯಾಗುವಂತೆಯೂ ಮತ್ತು ಕೊನೆಗಾಣದಂತೆಯೂ ಎಲ್ಲವನ್ನೂ ತಾನೆ ಹೇಳಿ ಮುಗಿಸಬೇಕೆಂಬ ವಾಚಾಳಿತನ ಕಥೆಗಾರನಿಗಿಲ್ಲ. ಒಟ್ಟಿನಲ್ಲಿ ಹೊಸ ತಲೆಮಾರಿನ ಕಥೆಗಳಿಗೆ ವಿಶೇಷ ಆಯಾಮ ಇರುವುದಂತೂ ಸುಳ್ಳಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others

ಚಾಂದ್ ಪಾಷ ಎನ್ ಎಸ್

ಚಾಂದ್ ಪಾಷ ಎನ್ ಎಸ್
ಸಂಶೋಧನಾ ವಿದ್ಯಾರ್ಥಿ, ಕನ್ನಡ ಅಧ್ಯಯನ ಕೇಂದ್ರ. ಬೆಂಗಳೂರು ವಿ ವಿ


ಇದನ್ನೂ ಓದಿ: ನೀಲಕುರಿಂಜಿ: ಹೊಸ ಅಸ್ಮಿತೆಗಳ ಆತ್ಮ ನಿವೇದನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...