Homeಕರ್ನಾಟಕಅವಕಾಶವಾದವನ್ನು ಸಿದ್ಧಾಂತವಾಗಿಸಿಕೊಂಡಾಗ ವಿಶ್ವಾಸ ಉಳಿಯುವ ಬಗೆ ಎಂತು?

ಅವಕಾಶವಾದವನ್ನು ಸಿದ್ಧಾಂತವಾಗಿಸಿಕೊಂಡಾಗ ವಿಶ್ವಾಸ ಉಳಿಯುವ ಬಗೆ ಎಂತು?

- Advertisement -
- Advertisement -

ಅವಕಾಶವಾದವು ನಮ್ಮ ಸಿದ್ಧಾಂತದ ಭಾಗ ಎಂದು ಬಹಿರಂಗವಾಗಿ ಘೋಷಿಸಿಕೊಂಡಿರುವ ಪಕ್ಷ ಬಹುಜನ ಸಮಾಜ ಪಕ್ಷ. ಆ ಪಕ್ಷದ ಸಿದ್ಧಾಂತದ ಕುರಿತು ಸಾವಿರಾರು ಯುವಜನರಿಗೆ ಪಾಠ ಹೇಳಿದವರು ಎನ್.ಮಹೇಶ್. ಇಂದು ನಡೆದ ವಿಶ್ವಾಸಮತ ಯಾಚನೆಯಲ್ಲಿ ತಮ್ಮ ಪಕ್ಷದ ಅಧಿನಾಯಕಿ ಮಾಯಾವತಿಯವರ ಸೂಚನೆಯನ್ನೂ ಧಿಕ್ಕರಿಸಿ ಗೈರು ಹಾಜರಾಗಿದ್ದಾರೆ. ಇದು ಹಲವರಿಗೆ ಶಾಕಿಂಗ್ ಇರಬಹುದು; ಆದರೆ ಆಶ್ಚರ್ಯಕರವಲ್ಲ. ಏಕೆಂದರೆ ಅವಕಾಶವಾದವು ಸಿದ್ಧಾಂತದ ಭಾಗ.

ಇನ್ನು ಕೆಲವರಿಗೆ ಶಾಕ್ ಅನಿಸಿರುವುದು ಎಚ್.ವಿಶ್ವನಾಥ್ ಅವರ ನಡವಳಿಕೆ. ಅವರು ಪುಸ್ತಕವೊಂದರಲ್ಲಿ ಬರೆದ ಕೆಲವು ಭಾಗಗಳನ್ನು ಡಿ.ಕೆ.ಶಿವಕುಮಾರ್ ಸದನದಲ್ಲಿ ಓದಿ ಹೇಳಿದರು. ಪಕ್ಷಾಂತರಿಗಳ ಯಾವುದೇ ವಾದವು ನಂಬಲರ್ಹವಲ್ಲ ಎಂದು ಸ್ವತಃ ವಿಶ್ವನಾಥ್ ಬರೆದಿರುವ ಮಾತುಗಳವು. ದೀರ್ಘಕಾಲದ ತಮ್ಮ ರಾಜಕೀಯ ವಿರೋಧಿ ಸಾ.ರಾ.ಮಹೇಶ್ ಸದನದಲ್ಲಿ ಹೇಳಿದ ನೈತಿಕತೆಯ ಪಾಠವನ್ನು ಮುಂಬೈನ ಹೋಟೆಲ್ ರೂಂನ ಟಿವಿಯಲ್ಲಿ ಎಚ್.ವಿಶ್ವನಾಥ್ ಕೇಳಿಸಿಕೊಂಡಿರುತ್ತಾರೆ. ‘ಇಂಥವರಿಂದ ತಾನು ಬುದ್ಧಿವಾದ ಕೇಳಬೇಕಾಯಿತು’ ಎಂದು ಪಕ್ಕದಲ್ಲಿದ್ದವರಿಗೆ ಹೇಳಿರದಿದ್ದರೆ ಅದು ಆಶ್ಚರ್ಯ. ಆದರೆ, ವಿಶ್ವನಾಥ್ ಇಂದು ಗಟಾರದ ರಾಜಕಾರಣದ ಭಾಗವಾಗಿರುವುದರಲ್ಲಿ ಸಂಶಯವೇ ಇಲ್ಲ.

ಸದನದಲ್ಲಿ ಶಿವಲಿಂಗೇಗೌಡ ಮತ್ತು ಬಿ.ನಾರಾಯಣರಾವ್‍ರ ಮಾತುಗಳು ಒಳಗಿನಿಂದ ಬಂದ ಮಾತುಗಳು ಎಂದು ಅನಿಸಿದ್ದರಿಂದ ಅವುಗಳು ಎಲ್ಲರ ಹೃದಯಕ್ಕೆ ತಟ್ಟಿದವು. ಕೃಷ್ಣಭೈರೇಗೌಡರ ಪ್ರಾಮಾಣಿಕತೆಯನ್ನು ಅನುಮಾನಿಸಲೂ ಕಾರಣಗಳಿಲ್ಲ.
ಆದರೆ, ಇಂಥದೇ ಮಾತನ್ನು ಸ್ವತಃ ಸ್ಪೀಕರ್ ರಮೇಶ್‍ಕುಮಾರ್‍ರ ಕುರಿತು ಹೇಳುವುದು ಸಾಧ್ಯವಿಲ್ಲ. ಅಪಾರ ಅನುಭವ, ಬುದ್ಧಿವಂತಿಕೆ ಮತ್ತು ಹಣಕಾಸಿನ ವಿಚಾರದಲ್ಲಿ ಎಂದೂ ಭ್ರಷ್ಟರಾಗದ ಮತ್ತು ಜಾತಿವಾದಿಯಾಗದ ರಮೇಶ್‍ಕುಮಾರ್ ಪಕ್ಷಾಂತರ ಮಾಡದೇ ತಮ್ಮ ಪಕ್ಷದ (ಸ್ಪೀಕರ್‍ಗೆ ಪಕ್ಷ ಇರುವುದಿಲ್ಲ ಎಂಬುದು ತಾಂತ್ರಿಕವಾದ ಸಂಗತಿಯಷ್ಟೇ) ಅಭ್ಯರ್ಥಿ ಸೋಲಲು ಮೊನ್ನೆಯ ಚುನಾವಣೆಯಲ್ಲಿ ತಮ್ಮ ಕೊಡುಗೆಯನ್ನೂ ಸಲ್ಲಿಸಿದ್ದರು. ಮಿಕ್ಕಂತೆ ಸ್ವಚ್ಛ ರಾಜಕಾರಣದ ಹಾಗೂ ತತ್ವನಿಷ್ಠೆಯ ಕುರಿತು ಅವರಾಡುವ ಮಾತುಗಳಲ್ಲಿ ಇಂತಹ ದ್ವಂದ್ವಗಳು ಇದ್ದೇ ಇವೆ.

ಮುಂದೊಂದು ದಿನ ತಾನು ಮುಖ್ಯಮಂತ್ರಿಯಾಗಲೇಬೇಕು, ಬಿಜೆಪಿಗೆ ಹೋದರೆ ಅದು ಸಾಧ್ಯವೇ ಇಲ್ಲ ಎಂದು ಖಚಿತವಾಗಿ ಗೊತ್ತಿರುವ ಡಿ.ಕೆ.ಶಿವಕುಮಾರ್ ಅದಕ್ಕಾಗಿ ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ಆದರೆ, ಇದೇ ಯಡಿಯೂರಪ್ಪನವರ ಜೊತೆಗಿನ ಅವರ ಸಖ್ಯ ಮತ್ತು ಇಂಧನ ಇಲಾಖೆಯ ಅವ್ಯವಹಾರದಲ್ಲಿ ಯಡಿಯೂರಪ್ಪನವರಿಗೆ ಮಾಡಿದ ಉಪಕಾರವನ್ನು ಪಕ್ಷಾಂತರ ಎಂದು ಕರೆಯಲಾಗದು. ಆದರೆ, ಪಕ್ಷ ಮೀರಿದ ಸಖ್ಯ ಕೇವಲ ಮನುಷ್ಯ ಸಂಬಂಧವಲ್ಲ. ಅದರಲ್ಲಿ ವ್ಯವಹಾರಿಕ ಮತ್ತು ಸ್ವಾರ್ಥದ ಲೆಕ್ಕಾಚಾರಗಳಿವೆ.

ದೇವೇಗೌಡರ ಕುಟುಂಬದ ಅವಕಾಶವಾದಕ್ಕೆ ಎಣೆಯೇ ಇಲ್ಲ. ಅವರಾಡುವ ಯಾವ ಮಾತುಗಳನ್ನೂ ನಂಬಬಹುದು ಎನಿಸುವುದಿಲ್ಲ. ನಿಖಿಲ್‍ನ್ನು ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿಸಿದ್ದೇಕೆ ಎಂಬ ಕುರಿತು ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್‍ನಲ್ಲಿ ದೇವೇಗೌಡರು ವಿವರಿಸಿದ್ದನ್ನು ಸ್ವತಃ ನಿಖಿಲ್ ನಂಬಿರುವುದಿಲ್ಲ.

ಪಕ್ಷ ಸಿದ್ಧಾಂತ, ಭಾರತೀಯ ಸಂಸ್ಕøತಿ, ಭ್ರಷ್ಟಾಚಾರಕ್ಕೆ ವಿರೋಧ, ಕಾಂಗ್ರೆಸ್ ಸಂಸ್ಕøತಿಗೆ ಪ್ರತಿರೋಧ, ಪಕ್ಷಕ್ಕೆ ಬದ್ಧರಾಗಿ ದುಡಿವ ಕಾರ್ಯಕರ್ತರಿಗೆ ಮನ್ನಣೆ ಇತ್ಯಾದಿಗಳನ್ನು ಹೇಳುತ್ತಾ ಬಂದಿರುವ ಬಿಜೆಪಿ ಈಗಲೂ ಆ ಮಾತುಗಳನ್ನು ಹೇಳಲು ಹಿಂಜರಿಯುವುದಿಲ್ಲ. ಅದೇ ಸೋಜಿಗದ ಸಂಗತಿ. ಆ ಹಿಂಜರಿಕೆಯೂ ಏಕಿಲ್ಲವೆಂದರೆ ಅದರಷ್ಟೇ ಅವಕಾಶವಾದಿಯಾದ ಮಾಧ್ಯಮ ಸಮೂಹ ಅಂತಹ ಪ್ರಶ್ನೆಗಳು ವಿರೋಧ ಪಕ್ಷಗಳಿಗೆ ಕೇಳಲು ಮಾತ್ರ ಇವೆಯೆಂದು ಭಾವಿಸಿವೆ. ಮಾಧ್ಯಮಗಳು ಮತ್ತು ಬಿಜೆಪಿ ಪಕ್ಷ ಎನ್ನುವುದು ಒಂದೇ ಪ್ಯಾಕೇಜ್‍ನ ಭಾಗ.
ಬಿಜೆಪಿ ಪಕ್ಷದಲ್ಲಿ ಸಜ್ಜನರೆಂದು ತೋರಿಸಿಕೊಳ್ಳಲು ಹಾತೊರೆಯುವ ಶಾಸಕರೊಬ್ಬರಿದ್ದಾರೆ. ರಾಜಾಜಿನಗರದ ಸುರೇಶ್‍ಕುಮಾರ್. ಅವರು ‘ವಿಶ್ವಾಸಮತ ಯಾಚನೆಗೆ ಮುಂದಾದ ಮೇಲೂ ವರ್ಗಾವಣೆಗಳನ್ನು ಮಾಡುತ್ತಿರುವ ಕುಮಾರಸ್ವಾಮಿ ಸರ್ಕಾರವನ್ನು’ ಸಕಾರಣವಾಗಿ ತರಾಟೆಗೆ ತೆಗೆದುಕೊಳ್ಳುತ್ತಾರೆ. ಆದರೆ, ತಮ್ಮ ಪಕ್ಷದಿಂದ ಮುಖ್ಯಮಂತ್ರಿ ಮಾಡಲು ಹೊರಟಿರುವ ಯಡಿಯೂರಪ್ಪನವರು ಈ ಹಿಂದೆ ಪ್ರಮಾಣವಚನ ಸ್ವೀಕರಿಸಿ ವಿಶ್ವಾಸಮತ ಯಾಚನೆ ಮಾಡುವುದಕ್ಕೆ ಮುಂಚೆಯೇ ವರ್ಗಾವಣೆ ಮಾಡಿದ್ದನ್ನು ಮರೆಯುತ್ತಾರೆ. ಇಂತಹವರ ಅವಕಾಶವಾದಕ್ಕೆ ಸಾವಿರಾರು ಉದಾಹರಣೆಗಳು ಸಿಗುತ್ತವೆ.

ಈಗಾಗಲೇ ಹೇಳಿರುವಂತೆ ಅವಕಾಶವಾದಕ್ಕೆ ಮತ್ತೊಂದು ಹೆಸರೇ ಮಾಧ್ಯಮವಾಗಿದೆ. ಒಂದೇ ಬಗೆಯ ಎರಡು ಪ್ರಕರಣಗಳಲ್ಲಿ ಬಿಜೆಪಿ ಅಥವಾ ವಿರೋಧ ಪಕ್ಷಗಳಲ್ಲಿ ಯಾರು ಇದ್ದಾರೆ ಎಂಬುದರ ಮೇಲೆ ಅವರ ನಿಲುವೇ ಬದಲಾಗುತ್ತದೆ. ಪಕ್ಷವೊಂದರ ಪರವಾಗಿ ಪ್ರಚಾರಕ್ಕೇ ನಿಂತಿರುವ ಉಪಕರಣ ಅದು.

ಈ ರೀತಿಯಾಗಿ ಅವಕಾಶವಾದವನ್ನೇ ಬಿತ್ತಿ ಬೆಳೆದಿರುವ ಇಂದಿನ ರಾಜಕಾರಣದಲ್ಲಿ ಯಾವ ವಿಶ್ವಾಸ ಉಳಿದಿದೆ. ಕೆಲವು ಅತ್ಯುತ್ತಮ ಭಾಷಣಗಳನ್ನೂ, ಸಾಂವಿಧಾನಿಕ ನಡಾವಳಿಗಳನ್ನೂ ಕಂಡ ವಿಶ್ವಾಸಮತ ಯಾಚನೆಯ ಅಧಿವೇಶನದಲ್ಲಿ ಒಂದೆರಡು ಉತ್ತಮ ಅಂಶಗಳು ಇದ್ದವು. ಆದರೆ, ಅದಕ್ಕಿಂತ ನೂರು ಪಟ್ಟು ಕೊಳಕು ಎದ್ದು ಕಾಣುತ್ತಿತ್ತು. ತಮ್ಮನ್ನು, ತಮ್ಮ ಪಕ್ಷವನ್ನು ವಾಚಾಮಗೋಚರವಾಗಿ ಬಯ್ಯುತ್ತಿದ್ದಾಗ ಅದಕ್ಕೆ ಪ್ರತ್ಯುತ್ತರವನ್ನು ಕೊಡದೇ ವಿರೋಧ ಪಕ್ಷ ಕೂತಿದ್ದು ಇತಿಹಾಸದಲ್ಲಿ ದಾಖಲಾಗಿ ನಿಲ್ಲುತ್ತದೆ. ಹಾಗಾಗಿ ರಾಜಕೀಯ ವ್ಯವಸ್ಥೆಯ ವಿರುದ್ಧವೇ ಅವಿಶ್ವಾಸವು ಮೂಡುವಂತಹ ವಾತಾವರಣ ಇಂದು ಮೇಲುಗೈ ಸಾಧಿಸಿದೆ.

ಅವಕಾಶವಾದ ಹಾಗೂ ಅನೈತಿಕ ರಾಜಕಾರಣದ ಮೂಲಕ್ಕೆ ಹೋಗಿ ಅದಕ್ಕೆ ಮದ್ದು ಕಂಡುಹಿಡಿದಾಗ ಮಾತ್ರ ವಿಶ್ವಾಸ ಹುಟ್ಟುತ್ತದೆ. ಆ ನಿಟ್ಟಿನಲ್ಲಿ ಮಾನ-ಮರ್ಯಾದೆ ಇರುವ ಎಲ್ಲರೂ ಪ್ರಯತ್ನಿಸುವ ಅಗತ್ಯ ಎದುರಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...