Homeಕರ್ನಾಟಕಅವಕಾಶವಾದವನ್ನು ಸಿದ್ಧಾಂತವಾಗಿಸಿಕೊಂಡಾಗ ವಿಶ್ವಾಸ ಉಳಿಯುವ ಬಗೆ ಎಂತು?

ಅವಕಾಶವಾದವನ್ನು ಸಿದ್ಧಾಂತವಾಗಿಸಿಕೊಂಡಾಗ ವಿಶ್ವಾಸ ಉಳಿಯುವ ಬಗೆ ಎಂತು?

- Advertisement -
- Advertisement -

ಅವಕಾಶವಾದವು ನಮ್ಮ ಸಿದ್ಧಾಂತದ ಭಾಗ ಎಂದು ಬಹಿರಂಗವಾಗಿ ಘೋಷಿಸಿಕೊಂಡಿರುವ ಪಕ್ಷ ಬಹುಜನ ಸಮಾಜ ಪಕ್ಷ. ಆ ಪಕ್ಷದ ಸಿದ್ಧಾಂತದ ಕುರಿತು ಸಾವಿರಾರು ಯುವಜನರಿಗೆ ಪಾಠ ಹೇಳಿದವರು ಎನ್.ಮಹೇಶ್. ಇಂದು ನಡೆದ ವಿಶ್ವಾಸಮತ ಯಾಚನೆಯಲ್ಲಿ ತಮ್ಮ ಪಕ್ಷದ ಅಧಿನಾಯಕಿ ಮಾಯಾವತಿಯವರ ಸೂಚನೆಯನ್ನೂ ಧಿಕ್ಕರಿಸಿ ಗೈರು ಹಾಜರಾಗಿದ್ದಾರೆ. ಇದು ಹಲವರಿಗೆ ಶಾಕಿಂಗ್ ಇರಬಹುದು; ಆದರೆ ಆಶ್ಚರ್ಯಕರವಲ್ಲ. ಏಕೆಂದರೆ ಅವಕಾಶವಾದವು ಸಿದ್ಧಾಂತದ ಭಾಗ.

ಇನ್ನು ಕೆಲವರಿಗೆ ಶಾಕ್ ಅನಿಸಿರುವುದು ಎಚ್.ವಿಶ್ವನಾಥ್ ಅವರ ನಡವಳಿಕೆ. ಅವರು ಪುಸ್ತಕವೊಂದರಲ್ಲಿ ಬರೆದ ಕೆಲವು ಭಾಗಗಳನ್ನು ಡಿ.ಕೆ.ಶಿವಕುಮಾರ್ ಸದನದಲ್ಲಿ ಓದಿ ಹೇಳಿದರು. ಪಕ್ಷಾಂತರಿಗಳ ಯಾವುದೇ ವಾದವು ನಂಬಲರ್ಹವಲ್ಲ ಎಂದು ಸ್ವತಃ ವಿಶ್ವನಾಥ್ ಬರೆದಿರುವ ಮಾತುಗಳವು. ದೀರ್ಘಕಾಲದ ತಮ್ಮ ರಾಜಕೀಯ ವಿರೋಧಿ ಸಾ.ರಾ.ಮಹೇಶ್ ಸದನದಲ್ಲಿ ಹೇಳಿದ ನೈತಿಕತೆಯ ಪಾಠವನ್ನು ಮುಂಬೈನ ಹೋಟೆಲ್ ರೂಂನ ಟಿವಿಯಲ್ಲಿ ಎಚ್.ವಿಶ್ವನಾಥ್ ಕೇಳಿಸಿಕೊಂಡಿರುತ್ತಾರೆ. ‘ಇಂಥವರಿಂದ ತಾನು ಬುದ್ಧಿವಾದ ಕೇಳಬೇಕಾಯಿತು’ ಎಂದು ಪಕ್ಕದಲ್ಲಿದ್ದವರಿಗೆ ಹೇಳಿರದಿದ್ದರೆ ಅದು ಆಶ್ಚರ್ಯ. ಆದರೆ, ವಿಶ್ವನಾಥ್ ಇಂದು ಗಟಾರದ ರಾಜಕಾರಣದ ಭಾಗವಾಗಿರುವುದರಲ್ಲಿ ಸಂಶಯವೇ ಇಲ್ಲ.

ಸದನದಲ್ಲಿ ಶಿವಲಿಂಗೇಗೌಡ ಮತ್ತು ಬಿ.ನಾರಾಯಣರಾವ್‍ರ ಮಾತುಗಳು ಒಳಗಿನಿಂದ ಬಂದ ಮಾತುಗಳು ಎಂದು ಅನಿಸಿದ್ದರಿಂದ ಅವುಗಳು ಎಲ್ಲರ ಹೃದಯಕ್ಕೆ ತಟ್ಟಿದವು. ಕೃಷ್ಣಭೈರೇಗೌಡರ ಪ್ರಾಮಾಣಿಕತೆಯನ್ನು ಅನುಮಾನಿಸಲೂ ಕಾರಣಗಳಿಲ್ಲ.
ಆದರೆ, ಇಂಥದೇ ಮಾತನ್ನು ಸ್ವತಃ ಸ್ಪೀಕರ್ ರಮೇಶ್‍ಕುಮಾರ್‍ರ ಕುರಿತು ಹೇಳುವುದು ಸಾಧ್ಯವಿಲ್ಲ. ಅಪಾರ ಅನುಭವ, ಬುದ್ಧಿವಂತಿಕೆ ಮತ್ತು ಹಣಕಾಸಿನ ವಿಚಾರದಲ್ಲಿ ಎಂದೂ ಭ್ರಷ್ಟರಾಗದ ಮತ್ತು ಜಾತಿವಾದಿಯಾಗದ ರಮೇಶ್‍ಕುಮಾರ್ ಪಕ್ಷಾಂತರ ಮಾಡದೇ ತಮ್ಮ ಪಕ್ಷದ (ಸ್ಪೀಕರ್‍ಗೆ ಪಕ್ಷ ಇರುವುದಿಲ್ಲ ಎಂಬುದು ತಾಂತ್ರಿಕವಾದ ಸಂಗತಿಯಷ್ಟೇ) ಅಭ್ಯರ್ಥಿ ಸೋಲಲು ಮೊನ್ನೆಯ ಚುನಾವಣೆಯಲ್ಲಿ ತಮ್ಮ ಕೊಡುಗೆಯನ್ನೂ ಸಲ್ಲಿಸಿದ್ದರು. ಮಿಕ್ಕಂತೆ ಸ್ವಚ್ಛ ರಾಜಕಾರಣದ ಹಾಗೂ ತತ್ವನಿಷ್ಠೆಯ ಕುರಿತು ಅವರಾಡುವ ಮಾತುಗಳಲ್ಲಿ ಇಂತಹ ದ್ವಂದ್ವಗಳು ಇದ್ದೇ ಇವೆ.

ಮುಂದೊಂದು ದಿನ ತಾನು ಮುಖ್ಯಮಂತ್ರಿಯಾಗಲೇಬೇಕು, ಬಿಜೆಪಿಗೆ ಹೋದರೆ ಅದು ಸಾಧ್ಯವೇ ಇಲ್ಲ ಎಂದು ಖಚಿತವಾಗಿ ಗೊತ್ತಿರುವ ಡಿ.ಕೆ.ಶಿವಕುಮಾರ್ ಅದಕ್ಕಾಗಿ ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ಆದರೆ, ಇದೇ ಯಡಿಯೂರಪ್ಪನವರ ಜೊತೆಗಿನ ಅವರ ಸಖ್ಯ ಮತ್ತು ಇಂಧನ ಇಲಾಖೆಯ ಅವ್ಯವಹಾರದಲ್ಲಿ ಯಡಿಯೂರಪ್ಪನವರಿಗೆ ಮಾಡಿದ ಉಪಕಾರವನ್ನು ಪಕ್ಷಾಂತರ ಎಂದು ಕರೆಯಲಾಗದು. ಆದರೆ, ಪಕ್ಷ ಮೀರಿದ ಸಖ್ಯ ಕೇವಲ ಮನುಷ್ಯ ಸಂಬಂಧವಲ್ಲ. ಅದರಲ್ಲಿ ವ್ಯವಹಾರಿಕ ಮತ್ತು ಸ್ವಾರ್ಥದ ಲೆಕ್ಕಾಚಾರಗಳಿವೆ.

ದೇವೇಗೌಡರ ಕುಟುಂಬದ ಅವಕಾಶವಾದಕ್ಕೆ ಎಣೆಯೇ ಇಲ್ಲ. ಅವರಾಡುವ ಯಾವ ಮಾತುಗಳನ್ನೂ ನಂಬಬಹುದು ಎನಿಸುವುದಿಲ್ಲ. ನಿಖಿಲ್‍ನ್ನು ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿಸಿದ್ದೇಕೆ ಎಂಬ ಕುರಿತು ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್‍ನಲ್ಲಿ ದೇವೇಗೌಡರು ವಿವರಿಸಿದ್ದನ್ನು ಸ್ವತಃ ನಿಖಿಲ್ ನಂಬಿರುವುದಿಲ್ಲ.

ಪಕ್ಷ ಸಿದ್ಧಾಂತ, ಭಾರತೀಯ ಸಂಸ್ಕøತಿ, ಭ್ರಷ್ಟಾಚಾರಕ್ಕೆ ವಿರೋಧ, ಕಾಂಗ್ರೆಸ್ ಸಂಸ್ಕøತಿಗೆ ಪ್ರತಿರೋಧ, ಪಕ್ಷಕ್ಕೆ ಬದ್ಧರಾಗಿ ದುಡಿವ ಕಾರ್ಯಕರ್ತರಿಗೆ ಮನ್ನಣೆ ಇತ್ಯಾದಿಗಳನ್ನು ಹೇಳುತ್ತಾ ಬಂದಿರುವ ಬಿಜೆಪಿ ಈಗಲೂ ಆ ಮಾತುಗಳನ್ನು ಹೇಳಲು ಹಿಂಜರಿಯುವುದಿಲ್ಲ. ಅದೇ ಸೋಜಿಗದ ಸಂಗತಿ. ಆ ಹಿಂಜರಿಕೆಯೂ ಏಕಿಲ್ಲವೆಂದರೆ ಅದರಷ್ಟೇ ಅವಕಾಶವಾದಿಯಾದ ಮಾಧ್ಯಮ ಸಮೂಹ ಅಂತಹ ಪ್ರಶ್ನೆಗಳು ವಿರೋಧ ಪಕ್ಷಗಳಿಗೆ ಕೇಳಲು ಮಾತ್ರ ಇವೆಯೆಂದು ಭಾವಿಸಿವೆ. ಮಾಧ್ಯಮಗಳು ಮತ್ತು ಬಿಜೆಪಿ ಪಕ್ಷ ಎನ್ನುವುದು ಒಂದೇ ಪ್ಯಾಕೇಜ್‍ನ ಭಾಗ.
ಬಿಜೆಪಿ ಪಕ್ಷದಲ್ಲಿ ಸಜ್ಜನರೆಂದು ತೋರಿಸಿಕೊಳ್ಳಲು ಹಾತೊರೆಯುವ ಶಾಸಕರೊಬ್ಬರಿದ್ದಾರೆ. ರಾಜಾಜಿನಗರದ ಸುರೇಶ್‍ಕುಮಾರ್. ಅವರು ‘ವಿಶ್ವಾಸಮತ ಯಾಚನೆಗೆ ಮುಂದಾದ ಮೇಲೂ ವರ್ಗಾವಣೆಗಳನ್ನು ಮಾಡುತ್ತಿರುವ ಕುಮಾರಸ್ವಾಮಿ ಸರ್ಕಾರವನ್ನು’ ಸಕಾರಣವಾಗಿ ತರಾಟೆಗೆ ತೆಗೆದುಕೊಳ್ಳುತ್ತಾರೆ. ಆದರೆ, ತಮ್ಮ ಪಕ್ಷದಿಂದ ಮುಖ್ಯಮಂತ್ರಿ ಮಾಡಲು ಹೊರಟಿರುವ ಯಡಿಯೂರಪ್ಪನವರು ಈ ಹಿಂದೆ ಪ್ರಮಾಣವಚನ ಸ್ವೀಕರಿಸಿ ವಿಶ್ವಾಸಮತ ಯಾಚನೆ ಮಾಡುವುದಕ್ಕೆ ಮುಂಚೆಯೇ ವರ್ಗಾವಣೆ ಮಾಡಿದ್ದನ್ನು ಮರೆಯುತ್ತಾರೆ. ಇಂತಹವರ ಅವಕಾಶವಾದಕ್ಕೆ ಸಾವಿರಾರು ಉದಾಹರಣೆಗಳು ಸಿಗುತ್ತವೆ.

ಈಗಾಗಲೇ ಹೇಳಿರುವಂತೆ ಅವಕಾಶವಾದಕ್ಕೆ ಮತ್ತೊಂದು ಹೆಸರೇ ಮಾಧ್ಯಮವಾಗಿದೆ. ಒಂದೇ ಬಗೆಯ ಎರಡು ಪ್ರಕರಣಗಳಲ್ಲಿ ಬಿಜೆಪಿ ಅಥವಾ ವಿರೋಧ ಪಕ್ಷಗಳಲ್ಲಿ ಯಾರು ಇದ್ದಾರೆ ಎಂಬುದರ ಮೇಲೆ ಅವರ ನಿಲುವೇ ಬದಲಾಗುತ್ತದೆ. ಪಕ್ಷವೊಂದರ ಪರವಾಗಿ ಪ್ರಚಾರಕ್ಕೇ ನಿಂತಿರುವ ಉಪಕರಣ ಅದು.

ಈ ರೀತಿಯಾಗಿ ಅವಕಾಶವಾದವನ್ನೇ ಬಿತ್ತಿ ಬೆಳೆದಿರುವ ಇಂದಿನ ರಾಜಕಾರಣದಲ್ಲಿ ಯಾವ ವಿಶ್ವಾಸ ಉಳಿದಿದೆ. ಕೆಲವು ಅತ್ಯುತ್ತಮ ಭಾಷಣಗಳನ್ನೂ, ಸಾಂವಿಧಾನಿಕ ನಡಾವಳಿಗಳನ್ನೂ ಕಂಡ ವಿಶ್ವಾಸಮತ ಯಾಚನೆಯ ಅಧಿವೇಶನದಲ್ಲಿ ಒಂದೆರಡು ಉತ್ತಮ ಅಂಶಗಳು ಇದ್ದವು. ಆದರೆ, ಅದಕ್ಕಿಂತ ನೂರು ಪಟ್ಟು ಕೊಳಕು ಎದ್ದು ಕಾಣುತ್ತಿತ್ತು. ತಮ್ಮನ್ನು, ತಮ್ಮ ಪಕ್ಷವನ್ನು ವಾಚಾಮಗೋಚರವಾಗಿ ಬಯ್ಯುತ್ತಿದ್ದಾಗ ಅದಕ್ಕೆ ಪ್ರತ್ಯುತ್ತರವನ್ನು ಕೊಡದೇ ವಿರೋಧ ಪಕ್ಷ ಕೂತಿದ್ದು ಇತಿಹಾಸದಲ್ಲಿ ದಾಖಲಾಗಿ ನಿಲ್ಲುತ್ತದೆ. ಹಾಗಾಗಿ ರಾಜಕೀಯ ವ್ಯವಸ್ಥೆಯ ವಿರುದ್ಧವೇ ಅವಿಶ್ವಾಸವು ಮೂಡುವಂತಹ ವಾತಾವರಣ ಇಂದು ಮೇಲುಗೈ ಸಾಧಿಸಿದೆ.

ಅವಕಾಶವಾದ ಹಾಗೂ ಅನೈತಿಕ ರಾಜಕಾರಣದ ಮೂಲಕ್ಕೆ ಹೋಗಿ ಅದಕ್ಕೆ ಮದ್ದು ಕಂಡುಹಿಡಿದಾಗ ಮಾತ್ರ ವಿಶ್ವಾಸ ಹುಟ್ಟುತ್ತದೆ. ಆ ನಿಟ್ಟಿನಲ್ಲಿ ಮಾನ-ಮರ್ಯಾದೆ ಇರುವ ಎಲ್ಲರೂ ಪ್ರಯತ್ನಿಸುವ ಅಗತ್ಯ ಎದುರಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...