Homeಕರ್ನಾಟಕಸದಾಶಿವ ಆಯೋಗದ ವರದಿ ಬೇಡ, ಸಂಪುಟ ಉಪಸಮಿತಿ ಸ್ವಯಂ ಅಧ್ಯಯನ ಮಾಡಲಿ: ಅನಂತ್ ನಾಯ್ಕ್‌ ಹೇಳುವುದೇನು?

ಸದಾಶಿವ ಆಯೋಗದ ವರದಿ ಬೇಡ, ಸಂಪುಟ ಉಪಸಮಿತಿ ಸ್ವಯಂ ಅಧ್ಯಯನ ಮಾಡಲಿ: ಅನಂತ್ ನಾಯ್ಕ್‌ ಹೇಳುವುದೇನು?

ಸದಾಶಿವ ಆಯೋಗದ ವರದಿ ಅವೈಜ್ಞಾನಿಕ ಎಂದು ಲಂಬಾಣಿ, ಬೋವಿ ಮುಖಂಡರು ಮುಂಚೂಣಿಯಲ್ಲಿರುವ ‘ಕರ್ನಾಟಕ ಮೀಸಲಾತಿ ಸಂರಕ್ಷಣ ಒಕ್ಕೂಟ’ ವಿರೋಧಿಸಿದೆ.

- Advertisement -
- Advertisement -

“ಜಸ್ಟೀಸ್ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಒಪ್ಪಬಾರದು, ಒಳಮೀಸಲಾತಿ ವಿಚಾರವಾಗಿ ರಚಿತವಾಗಿರುವ ಸಚಿವ ಸಂಪುಟದ ಉಪಸಮಿತಿಯೇ ಸ್ವಯಂ ಅಧ್ಯಯನ ನಡೆಸಿ ಒಳಮೀಸಲಾತಿ ಜಾರಿಗೊಳಿಸಬೇಕು” ಎಂದು ಲಂಬಾಣಿ, ಬೋವಿ ಮುಖಂಡರು ಮುಂಚೂಣಿಯಲ್ಲಿರುವ ‘ಕರ್ನಾಟಕ ಮೀಸಲಾತಿ ಸಂರಕ್ಷಣ ಒಕ್ಕೂಟ’ ಆಗ್ರಹಿಸಿದೆ.

ಎ.ಜೆ.ಸದಾಶಿವ ಆಯೋಗದ ಕುರಿತು ವಿಚಾರವಾದಿಗಳಾದ ಅನಂತ ನಾಯ್ಕ್‌, ಬಿ.ಟಿ.ಲಲಿತಾ ನಾಯ್ಕ್‌ ಮತ್ತಿತರ ಮುಖಂಡರಿರುವ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ. ಅನೇಕ ಮುಖಂಡರ ಸಹಿ ಇರುವ ಒಕ್ಕೂಟದ ಪತ್ರವು, ಬಿಡುಗಡೆಯೇ ಆಗದಿರುವ ಸದಾಶಿವ ಆಯೋಗದ ವರದಿಯ ಕುರಿತು ಅನೇಕ ಟೀಕೆಗಳನ್ನು ಮಾಡಿದೆ.

“ಪರಿಶಿಷ್ಟ ಜಾತಿಗಳ ವರ್ಗೀಕರಣ ಕುರಿತು ಪರಿಶೀಲನೆ ಮತ್ತು ಶಿಫಾರಸ್ಸು ಮಾಡುವ ಸಲುವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಜೆ.ಸಿ. ಮಾಧುಸ್ವಾಮಿರವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪಸಮಿತಿಯನ್ನು ನೇಮಿಸಿರುವುದು ಸರಿಯಷ್ಟೇ. ಸಚಿವ ಸಂಪುಟದ ಉಪ ಸಮಿತಿಯು ಸ್ವಯಂ ಅಧ್ಯಯನ ನಡೆಸಿ ಪರಿಶಿಷ್ಟ ಜಾತಿಗಳ ವರ್ಗೀಕರಣ (ಒಳಮೀಸಲಾತಿ) ಮಾಡುವುದಾದರೆ ಅದಕ್ಕೆ ನಮ್ಮ ತಕರಾರು ಇರುವುದಿಲ್ಲ. ಆದರೆ ಒಳಮೀಸಲಾತಿಗೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಆಧಾರವಾಗಿಟ್ಟುಕೊಂಡು ಪರಿಶಿಷ್ಟ ಜಾತಿಗಳನ್ನು ವರ್ಗೀಕರಿಸುವುದಾದರೆ (ಒಳಮೀಸಲಾತಿ) ಅದಕ್ಕೆ, ನಮ್ಮ ಆಕ್ಷೇಪಣೆ ಇರುತ್ತದೆ” ಎಂದು ಒಕ್ಕೂಟ ಮುಖಂಡರು ತಿಳಿಸಿದ್ದಾರೆ.

“ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯು ನಾನಾ ಕಾರಣಗಳಿಗಾಗಿ ದೋಷಪೂರಿತವಾದ ವರದಿಯಾಗಿದೆ. ಸೋರಿಕೆ ಆಗಿರುವ ಈ ವರದಿಯಲ್ಲಿನ ಅಂಶಗಳನ್ನು ವಿರೋಧಿಸಿ ಪರಿಶಿಷ್ಟ ಜಾತಿಗೆ ಸೇರಿರುವ ಶೇ. 70ರಷ್ಟು ಸಮುದಾಯಗಳು ಹಿಂದಿನ 12 ವರ್ಷಗಳಿಂದ ಹೋರಾಟ, ಚಳವಳಿಗಳನ್ನು ನಡೆಸುತ್ತಾ ಬಂದಿವೆ. ಇಲ್ಲಿಯವರೆಗೆ ಸದರಿ ವರದಿಯ ಸತ್ಯಾಸತ್ಯತೆಯನ್ನು ಅರಿಯಲು ಸಾರ್ವಜನಿಕ ಚರ್ಚೆಗೆ ಒಳಪಡಿಸಿರುವುದಿಲ್ಲ. ಶಾಸನ ಸಭೆಗಳಲ್ಲೂ ಚರ್ಚೆ ಆಗಿರುವುದಿಲ್ಲ. ಹೀಗಾಗಿ ಪರಿಶಿಷ್ಟ ಜಾತಿಯ ಸಹೋದರೆ ವೈಮನಸ್ಸು ಉಂಟಾಗಲು ಕಾರಣವಾಗುತ್ತಿದೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳ ಆಕ್ಷೇಪಣೆಗಳನ್ನು ಪಡೆಯದೆ ಏಕಮುಖವಾಗಿ ಈ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಕ್ಕೆ, ನಮ್ಮ ಬಲವಾದ ವಿರೋಧವಿದೆ” ಎಂದು ಒಕ್ಕೂಟ ತಿಳಿಸಿದೆ.

“ಸೋರಿಕೆ ಆಗಿರುವ ವರದಿಯನ್ವಯ ನ್ಯಾಯಮೂರ್ತಿ ಸದಾಶಿವ ಆಯೋಗವು ಸ್ವತಃ ಆಯೋಗ ರಚನೆಯ ಮೂಲ ಉದ್ದೇಶಗಳಿಗೆ ತಿಲಾಂಜಲಿ ಕೊಟ್ಟು ಅದಕ್ಕೆ ವ್ಯತಿರಿಕ್ತವಾದ ವರದಿಯನ್ನು ತಯಾರಿಸಿ ಸಲ್ಲಿಸಿದೆ. ಪ್ರತಿ ಜಾತಿ ಜನಾಂಗಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಮೀಸಲಾತಿಯ ಪ್ರಾರಂಭದಿಂದ ಒದಗಿಸಲಾದ ಪ್ರಯೋಜನದ ಪ್ರಮಾಣ ಎಷ್ಟು? ಕಡಿಮೆ ಪ್ರಮಾಣದ ಪ್ರಯೋಜನ ಪಡೆದಿರುವ ಜಾತಿಗಳಿಗೆ ನ್ಯಾಯ ಒದಗಿಸಲು ಏನು ಕ್ರಮಗೊಳ್ಳಬೇಕು? ಎಂಬುದರ ಕುರಿತು ಅಧ್ಯಯನ ನಡೆಸಲು ಈ ಆಯೋಗವನ್ನು ರಚಿಸಲಾಗಿತ್ತು. ಆದರೆ ಈ ಆಯೋಗವು ಅಸ್ಪಷ್ಟ ಮಾಹಿತಿ, ನಿಖರವಲ್ಲದ ಅಂಕಿಅಂಶಗಳು, ಅಸಂವಿಧಾನಿಕ ಪ್ರಸ್ತಾವನೆಗಳನ್ನು ಒಳಗೊಂಡ ಶಿಫಾರಸ್ಸುಗಳನ್ನು ಮಾಡಿರುವುದು ಕಂಡುಬಂದಿದೆ” ಎಂದು ಟೀಕೆ ಮಾಡಿದೆ.

ಒಕ್ಕೂಟದ ಆಕ್ಷೇಪವೇನು?

* ಆಯೋಗವು ತನ್ನ ವರದಿಯನ್ನು ಸರ್ಕಾರಿ ದಾಖಲೆಗಳಲ್ಲಿರುವ ವಾಸ್ತವಾಂಶಗಳನ್ನು, ಸಂಗ್ರಹಿಸಿ ವರದಿ ರೂಪಿಸಿರುವುದಿಲ್ಲ. ಆಯಾ ಜಾತಿಗಳಿಗೆ ಹಿಂದಿನಿಂದಲೂ ಆಗಿರುವ ಅನ್ಯಾಯಗಳ ಕುರಿತ ಮಾಹಿತಿಯನ್ನು ಅದರಲ್ಲಿ ಸೇರಿಸಿಲ್ಲ. ಪರಿಶಿಷ್ಟ ಜಾತಿಗಳಲ್ಲಿರುವ ಸಮುದಾಯಗಳ ಜೀವನ ವಿಧಾನ, ಉದ್ಯೋಗ, ಆರ್ಥಿಕತೆ, ಶಿಕ್ಷಣ ಮುಂತಾದ ಅಂಶಗಳ ಕುರಿತು ಸತ್ಯಾಂಶಗಳನ್ನು ಮರೆಮಾಚಿದೆ.

ಇದನ್ನೂ ಓದಿರಿ: ಒಳಮೀಸಲಾತಿ ಜಾರಿಯಾಗಲೇಬೇಕು, ಸಂವಿಧಾನ ವಿರೋಧಿಗಳ ಬಗ್ಗೆ ಮಾದಿಗರಿಗೆ ಎಚ್ಚರವಿದೆ: ಹೋರಾಟಗಾರರ ಮನದ ಮಾತು

ಪರಿಶಿಷ್ಟ ಜಾತಿಯಲ್ಲಿ ಗುರುತಿಸಲ್ಪಟ್ಟಿರುವ ಅಲೆಮಾರಿ, ವಿಮುಕ್ತ ಅಲೆಮಾರಿ ಸಮುದಾಯಗಳು, ದೇವದಾಸಿ, ಸಫಾಯಿ ಕರ್ಮಾಚಾರಿ, ಇತ್ಯಾದಿ ಅವಕಾಶ ವಂಚಿತ(ನಿರ್ಲಕ್ಷಿತ) ಸಮುದಾಯಗಳನ್ನು ಪ್ರತ್ಯೇಕ ಗುಂಪು ಮಾಡಿ ಕಾರ್ಯಸಾಧುವಲ್ಲದ ರೀತಿಯ ವರ್ಗೀಕರಣ (ಒಳಮೀಸಲಾತಿ) ಭಾಗವನ್ನು ಈ ಸಮುದಾಯಗಳಿಗೆ ನಿಗದಿಪಡಿಸಿದೆ.

* ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ಕೆನೆಪದರದ (ಕ್ರಿಮಿ ಲೇಯರ್) ಪದ್ಧತಿಯನ್ನು ಜಾರಿಗೊಳಿಸಲು ಆಯೋಗವು ಶಿಫಾರಸ್ಸು ಮಾಡಿದೆ. ಈ ಜಾತಿಗಳ ಅಧಿಕಾರಿ / ನೌಕರರುಗಳ ಮಕ್ಕಳಿಗೆ ಮೀಸಲಾತಿಯಿಂದ ವಂಚಿಸುವ ಶಿಫಾರಸು ಈ ವರದಿಯಲ್ಲಿದೆ.

* ಜಾತಿಗಳ ವರ್ಗೀಕರಣ ಮಾಡುವಾಗಲೂ ಈ ಆಯೋಗವು ಯಾವುದೇ ಕುಲಶಾಸ್ತ್ರ ಅಥವಾ ಗೋಚರ ವಿವರಗಳನ್ನು ಪರಿಶೀಲಿಸಿರುವುದಿಲ್ಲ.ಯಾರೋ ಒಬ್ಬಿಬ್ಬರು ಹೇಳಿದ ಮಾತನ್ನೇ ಆಧರಿಸಿ ಒಂದು ಗುಂಪಿನ ಜಾತಿಯನ್ನು ಇನ್ನೊಂದು ಸೇರಿಸಿ ಜಾತಿ ಜಾತಿಗಳಲ್ಲಿ ವೈಮನಸ್ಸು ಉಂಟಾಗುವಂತೆ ಮಾಡಿದೆ.

* ಆಯಾ ಜಾತಿಗಳು ಹಿಂದುಳಿದಿರುವಿಕೆ ಮತ್ತು ಅವಕಾಶ ವಂಚಿತವಾಗಿರುವ ಬಗ್ಗೆ ಕಾರಣಗಳನ್ನು ಗಣನೆಗೆ ತೆಗೆದುಕೊಂಡಿರುವುದಿಲ್ಲ. ತಳ ಸಮುದಾಯಗಳು ಮುಂದೆಯೂ ಸರಿಯಾದಂಥಹ ಮೀಸಲಾತಿಯನ್ನು ಪಡೆಯಲು ಸಾಧ್ಯವಾಗದೆ ಇರುವ ರೀತಿಯಲ್ಲಿ ಗುಂಪುಗಳನ್ನು ರಚಿಸಲಾಗಿದೆ. ಜಾತಿಗಳ ವರ್ಗೀಕರಣ ಮಾಡುವಾಗಲೂ ಈ ಆಯೋಗವು ಎಡವಿದೆ.

* ಭಾರತ ಸರ್ಕಾರದ 2011ರ ಜನಗಣತಿಯಲ್ಲಿ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಒಟ್ಟು ಜನಸಂಖ್ಯೆ 104 ಲಕ್ಷಗಳಿದ್ದು, ಈ ವರದಿಯಲ್ಲಿನ ಜನಸಂಖ್ಯೆ 96.64 ಇದೆ. ಇದರಲ್ಲೂ 6 ಲಕ್ಷ ಜನರ ಜಾತಿಯ ಬಗ್ಗೆ, ಮಾಹಿತಿ ಇರುವುದಿಲ್ಲ. ಆ ಬಗ್ಗೆ ಮಾಹಿತಿ ಪಡೆಯುವ ಪ್ರಯತ್ನವೂ ಆಗಿಲ್ಲ. 14 ಲಕ್ಷ ಪರಿಶಿಷ್ಟ ಜಾತಿ ಜನರನ್ನು ಹೊರಗಿಟ್ಟು ಈ ಆಯೋಗವು ತನ್ನ ವರದಿಯನ್ನು ತಯಾರಿಸಿದೆ.

* ಪರಿಶಿಷ್ಟ ಜಾತಿಗಳಲ್ಲಿರುವ ವಿವಿಧ ಜಾತಿ ಜನಾಂಗಗಳಿಗೆ ಮೀಸಲಾತಿ ಪಾಲನ್ನು ಆಯಾ ಜಾತಿಗಳ ಜನಸಂಖ್ಯೆಯ ಅನುಪಾತಕ್ಕನುಗುಣವಾಗಿ ನಿಗದಿ ಮಾಡಿರುವುದಿಲ್ಲ. ಶಿಫಾರಸ್ಸಿಗೆ ಮಾನದಂಡಗಳು ಮತ್ತು ಸಕಾರಣಗಳನ್ನು ತಿಳಿಸಿರುವುದಿಲ್ಲ.

ಇದನ್ನೂ ಓದಿರಿ: ರಾಜ್ಯ ಸರ್ಕಾರದ ಅಸಡ್ಡೆಗೆ ಆಕ್ರೋಶಗೊಂಡ ಒಳಮೀಸಲಾತಿ ಕೂಗು

* ಸಂವಿಧಾನದ ವಿಧಿ 341(2)ನ್ನು ಅನುಷ್ಠಾನಗೊಳಿಸಿದ ತರುವಾಯ ಆಯೋಗದ ವರದಿಯನ್ನು ಜಾರಿ ಮಾಡಲು ಶಿಫಾರಸು ಮಾಡಿದೆ. ಈ ವಿಧಿಯು ಪರಿಶಿಷ್ಟ ಜಾತಿಯ ಪಟ್ಟಿಗೆ ಜಾತಿಗಳನ್ನು ಸೇರಿಸುವ / ತೆಗೆದುಹಾಕುವ ಅವಕಾಶ ಕಲ್ಪಿಸುವ ವಿಧಿ ಆಗಿದೆ. ಆಯೋಗದ ವರದಿಯಲ್ಲಿ ಕೆಲವು ಜಾತಿಗಳು ವಿಶೇಷವಾಗಿ ಭೋವಿ, ಬಂಜಾರ (ಲಂಬಾಣಿ), ಕೊರಚ, ಕೊರಮ ಮುಂತಾದ ಜಾತಿಗಳ ಕುರಿತು ಹೇಳಿರುವ ಕೆಲವು ಅಂಶಗಳು ಇವರನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ಕೈಬಿಡುವ ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಅನಗತ್ಯವಾಗಿ ಸಂವಿಧಾನದ 341(2) ವಿಧಿಯ ಪ್ರಸ್ತಾಪವನ್ನು ಮಾಡುವ ಮೂಲಕ ಆಯೋಗವು ತನ್ನ ಮೂಲ ಉದ್ದೇಶಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿದೆ.

ಒಳಮೀಸಲಾತಿ: ಅನಂತ ನಾಯ್ಕ್‌ ಹೇಳುವುದೇನು?

‘ಕರ್ನಾಟಕ ಮೀಸಲಾತಿ ಸಂರಕ್ಷಣ ಒಕ್ಕೂಟ’ದ ಮುಖಂಡರಾದ ಅನಂತ್‌ ನಾಯ್ಕ್‌ ಅವರು ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ್ದಾರೆ. ಒಕ್ಕೂಟದ ಪತ್ರದಲ್ಲಿರುವ ಕೆಲವು ಅಂಶಗಳಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡಿದರು.

No photo description available.
ಅನಂತ ನಾಯ್ಕ್‌

ಪ್ರಶ್ನೆ: “ನ್ಯಾಯಮೂರ್ತಿಯೊಬ್ಬರು ಕೊಟ್ಟಿರುವ ವರದಿಗಿಂತ ರಾಜಕಾರಣಿಗಳೇ ತುಂಬಿಕೊಂಡಿರುವ ಸಮಿತಿ ನೀಡುವ ವರದಿಯನ್ನು ಒಕ್ಕೂಟ ಒಪ್ಪಿಕೊಳ್ಳುತ್ತದೆ ಎಂಬ ಸಂದೇಶವನ್ನು ಹೊರಹೋಗುತ್ತಿದೆಯಲ್ಲವೇ?”

ಅನಂತ್‌ ನಾಯ್ಕ್‌: ಸೋರಿಕೆಯಾಗಿರುವ ವರದಿಯ ಪ್ರಕಾರ ಜಸ್ಟೀಸ್‌ ಎ.ಜೆ.ಸದಾಶಿವ ಆಯೋಗದ ವರದಿಯಲ್ಲಿ ಲೋಪದೋಷಗಳಿವೆ ಎಂದು ಹೇಳಿದ್ದೇನೆ. ಆ ಕಾರಣಕ್ಕೆ ವರದಿಯನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸಬೇಕು ಎಂದು ಹೇಳುತ್ತಿದ್ದೇನೆ. ಸದನ ಸಮಿತಿ ಅಧ್ಯಯನ ಮಾಡಬೇಕು. ಇದರ ಅರ್ಥವೇನೆಂದರೆ- ಅಗತ್ಯವಿದ್ದರೆ ಹೊಸ ಸಮಿತಿಯನ್ನು ಮಾಡಲಿ ಎಂಬುದಾಗಿದೆ. ಒಬ್ಬ ವ್ಯಕ್ತಿ ಕೊಟ್ಟ ತಕ್ಷಣ ಒಪ್ಪಿಕೊಳ್ಳಬೇಕೆಂದೂ ಇಲ್ಲ. ಪ್ರಕ್ರಿಯೆಗಳು ನಡೆಯಬೇಕು. ಮೀಸಲಾತಿಯನ್ನು ವರ್ಗೀಕರಿಸುವ ಮನಸ್ಥಿತಿ ಇದ್ದರೆ ಸಂಪುಟ ಸಮಿತಿ ತೀರ್ಮಾನ ಮಾಡಲಿ.

ಪ್ರಶ್ನೆ: ಹೊಸ ಸಮಿತಿ ರಚನೆ ಮಾಡಿ ಎಂಬುದು, ಈಗಾಗಲೇ ಮೂವತ್ತು ವರ್ಷಗಳಿಂದ ನಡೆಯುತ್ತಿರುವ ಹೋರಾಟವನ್ನು ಮುಂದಕ್ಕೆ ತಳ್ಳುವ ಮಾತುಗಳಾಗಿ ಕಾಣುತ್ತಿವೆಯಲ್ಲವೇ?

ಅನಂತ್ ನಾಯ್ಕ್‌: ಯಾವುದೇ ನ್ಯಾಯಮೂರ್ತಿಗಳು ಪ್ರಶ್ನಾತೀತರಲ್ಲ. ಎಲ್ಲರನ್ನೂ ಪ್ರಶ್ನೆ ಮಾಡುವ, ವಿಮರ್ಶೆ ಒಳಪಡಿಸುವ ಅವಕಾಶವನ್ನು ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ರಚಿಸಿರುವ ಸಂವಿಧಾನ ನೀಡಿದೆ. ವರದಿ ಸಂಪೂರ್ಣವಾಗಿ ಸರಿಯಾಗಿದೆ ಎಂಬ ಅಭಿಪ್ರಾಯಕ್ಕೆ ಬರಲು ಸಾಧ್ಯವಿಲ್ಲ. ಅದು ಸಾರ್ವಜನಿಕವಾಗಿ ಬಿಡುಗಡೆಯಾಗಿ ಸತ್ಯಾಸತ್ಯತೆಗಳು ತಿಳಿಯಬೇಕು. ವರದಿ ಬಿಡುಗಡೆಯಾದ ನಂತರದಲ್ಲಿ ನನ್ನ ಆರೋಪಗಳು ತಪ್ಪಿದ್ದರೆ ಅದನ್ನು ಹಿಂಪಡೆಯಬೇಕಾಗುತ್ತದೆ.

ಮಾದಿಗ ಸಮುದಾಯವನ್ನು ಉದ್ದೇಶಪೂರ್ವಕವಾಗಿ ಮೂವತ್ತು ವರ್ಷಗಳಿಂದ ಪ್ರಭುತ್ವಗಳು ಬೀದಿಯಲ್ಲಿ ನಿಲ್ಲಿಸಿವೆ. ಅವರ ಸಮಸ್ಯೆಗೆ ಪ್ರಾಮಾಣಿಕವಾದ ಉತ್ತರವನ್ನು ಕಂಡುಕೊಳ್ಳಲು ಪ್ರಭುತ್ವಕ್ಕೆ ಸಾಧ್ಯವಾಗದೆ, “ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯಿಂದ ಮಾತ್ರವೇ ನಿಮ್ಮ ಉದ್ಧಾರ” ಎಂದು ನಂಬಿಸಲಾಗುತ್ತಿದೆ. ಮಾದಿಗ ಸಮುದಾಯದ ಶ್ರೇಯೋಭಿವೃದ್ಧಿಗೆ ಯಾವುದೇ ಕಾರ್ಯಕ್ರಮಗಳನ್ನು ಪ್ರಭುತ್ವಗಳು ಹಾಕಿಕೊಂಡಿಲ್ಲ. ಮೀಸಲಾತಿ ವರ್ಗೀಕರಣಕ್ಕೆ, ಕಟ್ಟಕಡೆಯ ವ್ಯಕ್ತಿಗೂ ಪ್ರಾತಿನಿಧ್ಯವನ್ನು ನೀಡಬೇಕೆಂಬ ಆಗ್ರಹಕ್ಕೆ ನಾವೆಲ್ಲರೂ ಬೆಂಬಲವಾಗಿ ನಿಲ್ಲಬೇಕಾಗುತ್ತದೆ. ಒಳಮೀಸಲಾತಿಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ, ಹರಿಯಾಣ, ಪಂಜಾಜ್ ರಾಜ್ಯಗಳು ಈಗಾಗಲೇ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಿವೆ. ಸಂಘ ಪರಿವಾರದ ಈ ಸರ್ಕಾರಕ್ಕೆ ದಮನಿತ ಸಮುದಾಯಗಳ ಬಗ್ಗೆ ಕಾಳಜಿ ಇದ್ದರೆ ಕ್ರಮ ಜರುಗಿಸಬೇಕಾಲ್ಲವೇ? ಇಲ್ಲಿ ಸಹೋದರ ಜಾತಿಗಳು ಕಿತ್ತಾಡುವುದಕ್ಕೆ ಸದಾಶಿವ ಆಯೋಗದ ಮೂಲಕ ಅವಕಾಶ ನೀಡದೆ ಕೇಂದ್ರ ಸರ್ಕಾರವೇ ಒಂದು ಕಾನೂನುನನ್ನು ಮಾಡಬಹುದಲ್ಲವೇ? ಎಲ್ಲಾ ರಾಜ್ಯಗಳಿಗೂ ಅನ್ವಯವಾಗುವ ನೀತಿ ರೂಪಿಸಬಹುದಲ್ಲವೇ? ಸದಾಶಿವ ಆಯೋಗದ ವರದಿಯನ್ನು ಮುನ್ನೆಲೆಗೆ ತಂದರೆ ಒಂದಿಷ್ಟು ಸಮುದಾಯಗಳು ವಿರೋಧ ಮಾಡುತ್ತವೆ, ಒಂದಿಷ್ಟು ಸಮುದಾಯಗಳು ಪರವಾಗಿ ಮಾತನಾಡುತ್ತವೆ- ನಾವು ಆಟ ಆಡಿಕೊಂಡು ಇರಬಹುದು ಎಂಬುದು ಇವರ ಉದ್ದೇಶವಾಗಿದೆ.

ಪ್ರಶ್ನೆ: ಸಂವಿಧಾನದ ವಿಧಿ 341(2)ನ್ನು ಅನುಷ್ಠಾನಗೊಳಿಸಿದ ತರುವಾಯ ಆಯೋಗದ ವರದಿಯನ್ನು ಜಾರಿ ಮಾಡಲು ಶಿಫಾರಸು ಮಾಡಿದೆ. ಈ ವಿಧಿಯು ಪರಿಶಿಷ್ಟ ಜಾತಿಯ ಪಟ್ಟಿಗೆ ಜಾತಿಗಳನ್ನು ಸೇರಿಸುವ / ತೆಗೆದುಹಾಕುವ ಅವಕಾಶ ಕಲ್ಪಿಸುವ ವಿಧಿ ಆಗಿದೆ ಎಂದು ಹೇಳಿರುವ ಒಕ್ಕೂಟವು, ಪರಿಶಿಷ್ಟ ಜಾತಿಯೊಳಗಿನ ಸ್ಪಶ್ಯ ಜಾತಿಗಳ ವಿಚಾರವಾಗಿ ಮಾತನಾಡುತ್ತಿದೆ ಎಂಬುದು ಸ್ಪಷ್ಟ. ಸ್ಪೃಶ್ಯ ಜಾತಿಗಳನ್ನು ಎಸ್‌ಸಿ ಪಟ್ಟಿಯಿಂದ ಕೈಬಿಡಬೇಕೆಂಬ ಚರ್ಚೆಯನ್ನು ನೀವು ಒಪ್ಪುವುದಿಲ್ಲ ಎಂಬುದು ಇಲ್ಲಿ ವ್ಯಕ್ತವಾಗುತ್ತಿದೆಯಲ್ಲ?

ಇದನ್ನೂ ಓದಿರಿ: ಭೀಮಸೇನೆಯ ಬಲಪ್ರದರ್ಶನ: ಒಳಮೀಸಲಾತಿ ಹೋರಾಟದ ಚಿತ್ರಗಳನ್ನು ನೋಡಿರಿ

ಅನಂತ್: ಸ್ಪಶ್ಯ, ಅಸ್ಪಶ್ಯ ಎಂಬುದು ನಮಗೆ ಗೊತ್ತಿಲ್ಲ. ಯಾರು ಸ್ಪಶ್ಯರು, ಯಾರು ಅಸ್ಪಶ್ಯರು ಎಂಬುದಕ್ಕೆ ಕಾನೂನಾತ್ಮಕ ದಾಖಲೆಗಳು ನಿಮ್ಮ ಬಳಿ ಇವೆಯೇ? ಯಾರನ್ನಾದರೂ ಯಾಕೆ ಕೈಬಿಡಬೇಕು? ಪರಿಶಿಷ್ಟ ಜಾತಿಯಿಂದ ಯಾರನ್ನೇ ಆಗಲಿ ಕೈಬಿಡಬೇಕೆಂಬುದಕ್ಕೆ ನಮ್ಮ ಸಮ್ಮತಿ ಇಲ್ಲ.

ಪ್ರಶ್ನೆ: ಬೇರೆ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಇರದ ಸಮುದಾಯಗಳೆಲ್ಲ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳಲ್ಲಿವೆ ಎಂಬ ಆಕ್ಷೇಪಗಳಿವೆಯಲ್ಲ?

ಅನಂತ್‌: ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಕಾಲದಲ್ಲಿ ಮಿಲ್ಲರ್‌ ಆಯೋಗದ ವರದಿಯನ್ನು ಮಾಡಿದಾಗಲೇ ಇಲ್ಲಿನ ಹಲವು ಜಾತಿಗಳು ಪರಿಶಿಷ್ಟ ಜಾತಿಯೊಳಗೆ ಸೇರಿವೆ. ಪರಿಶಿಷ್ಟ ಜಾತಿಗಳ ಪಟ್ಟಿಯನ್ನು ಮಾಡಿದಾಗ- ಆದಿ ಕರ್ನಾಟಕ, ಆದಿ ದ್ರಾವಿಡ, ಲಂಬಾಣಿ, ಬೋವಿ, ಕೊರಚ, ಕೊರಮ- ಜಾತಿಗಳನ್ನು ಸೇರಿಸಲಾಯಿತು. ಏಕೀಕರಣದ ನಂತರದಲ್ಲಿ ಈ ಪಟ್ಟಿ 101ಕ್ಕೆ ಏರಿಕೆಯಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತ್ನಾದಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್: ಮಧ್ಯಪ್ರದೇಶ ಸರ್ಕಾರ ರಕ್ತ ನಿಧಿಯ ಮುಖ್ಯಸ್ಥ ಸೇರಿ ಮೂವರು ಅಮಾನತು

ಭೋಪಾಲ್: ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರ ಗುರುವಾರ ರಕ್ತ ನಿಧಿಯ ಉಸ್ತುವಾರಿ ಮತ್ತು ಇಬ್ಬರು ಪ್ರಯೋಗಾಲಯ...

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....