Homeಕರ್ನಾಟಕಆಪರೇಷನ್ ಫೈನಲ್: ಸಿದ್ದರಾಮಯ್ಯನವರಿಗೇ ಬೇಡವಾಗಿದ್ದ ಸರ್ಕಾರ!

ಆಪರೇಷನ್ ಫೈನಲ್: ಸಿದ್ದರಾಮಯ್ಯನವರಿಗೇ ಬೇಡವಾಗಿದ್ದ ಸರ್ಕಾರ!

- Advertisement -
- Advertisement -

ಮೂರು ದಿನದ ಹಿಂದಷ್ಟೇ ಮಾಧ್ಯಮದವರು ಸಮನ್ವಯ ಸಮಿತಿ ಆಧ್ಯಕ್ಷ ಸಿದ್ದರಾಮಯ್ಯನವರಿಗೆ, ‘ಸರ್, ಅತೃಪ್ತರ ಜೊತೆ ಮಾತನಾಡಿ ಮನವೊಲಿಸುತ್ತಿದ್ದಾರಾ?’ ಎಂದು ಕೇಳಿದಾಗ, ಅವರು ಹೇಳಿದ್ದ ಈ ಮಾತೊಂದೇ ಅವರಿಗೆ ಈ ಸರ್ಕಾರದ ಬಗ್ಗೆ ಮೊದಲಿನಿಂದಲೂ ಇದ್ದ ಅಸಮಾಧಾನದ ಅಂತಿಮವಾದ ಬಹಿರಂಗ ಸ್ಫೋಟದಂತಿತ್ತು: ‘ರೀ, ಎಷ್ಟೂ ಅಂತ ಮಾತನಾಡೋದು? ಎಷ್ಟು ಅಂತ ಅವರ ಮನವೊಲಿಸೋದು? ಈ ಅತೃಪ್ತರ ಜೊತೆ ಮಾತಾಡಿ, ಮಾತಾಡಿ ಸಾಕಾಗಿ ಹೋಗಿದೆ. ಇನ್ನೇನೂ ಮಾತೂ ಇಲ್ಲ, ಕತೆಯೂ ಇಲ್ಲ…’

ಬಹುಷ: ಅಷ್ಟೊತ್ತಿಗೆ ಸಿದ್ದರಾಮಯ್ಯರ ಕಟ್ಟಾ ಬೆಂಬಲಿಗರು ಎನಿಸಿಕೊಂಡಿದ್ದ ಶಾಸಕರು ಅತೃಪ್ತರೊಂದಿಗೆ ‘ಸಮನ್ವಯ’ ಸಭೆ ನಡೆಸಿ ಅವರಿಗೆ ಸಾಥ್ ನೀಡಿಯಾಗಿತ್ತು. ಶನಿವಾರವಷ್ಟೇ ಅವರು ಬಹಿರಂಗವಾಗಿ ಕಾಣಿಸಿಕೊಂಡರು. ಅದು ದೊಡ್ಡ ಸುದ್ದಿಯಾಗುತ್ತಿದ್ದ ಸಮಯದಲ್ಲಿ ಡ್ಯಾಮೇಜ್ ಕಂಟ್ರೋಲ್ ಮಾಡಲು ಡಿ.ಕೆ. ಶಿವಕುಮಾರ್ ಧಾವಿಸಿದರಷ್ಟೇ. ಇಂತಹ ಸಂದರ್ಭಗಳಲ್ಲಿ ಎಂದಿನಂತೆ, ‘ಏನಾಗಿಲ್ಲ ಬಿಡ್ರಿ. ಸರ್ಕಾರ ಭದ್ರವಾಗಿದೆ’ ಎಂದು ಸುಮ್ಮನೇ ಆದರೂ ಹೇಳುತ್ತಿದ್ದ ಸಿದ್ದರಾಮಯ್ಯ ಶನಿವಾರ ಆಪರೇಷನ್ನಿನ ಟ್ರೈಲರ್ ‘ಟ್ರೆಂಡಿಂಗ್’ ಆಗುತ್ತಿದ್ದ ಪೀಕ್ ಅವರ್‍ಗಳಲ್ಲೂ ಮಾಧ್ಯಮಗಳ ಸಂಪರ್ಕಕಕ್ಕೆ ಸಿಗಲೇ ಇಲ್ಲ. ಅವರು ಟ್ರೈಲರ್ ಮುಗಿದು, ಬುಧವಾರದ ವೇಳೆಗೆ ಪಿಚ್ಚರ್ ರಿಲೀಸ್ ಆಗುವುದು ನಿಕ್ಕಿ ಆದ ಮೇಲಷ್ಟೇ ಕಾಣಿಸಿಕೊಂಡು, ‘ರೀ ಸ್ಪೀಕರ್ ರಾಜೀನಾಮೆ ಅಂಗೀಕರಿಸಿದ್ದಾರೇನ್ರಿ?’ ಎಂದು ಯಾವುದೇ ಮಹತ್ತರ ಬೆಳವಣಿಗೆ ನಡೆದೇ ಇಲ್ಲ ಎಂಬಂತೆ ಸಾಗಿಬಿಟ್ಟರು. ಟ್ರೈಲರ್‍ನಲ್ಲಿ ಅವರ ಆಪ್ತರ ಸೀನ್‍ಗಳೇ ಹೈಲಾಟಾಗಿದ್ದರೂ ಅವರಿಗೆ ಅದು ಆಶ್ಚರ್ಯದ ವಿಷಯವೇ ಆಗಿರಲಿಲ್ಲ.

ಕಳೆದ ವರ್ಷ ವಿಧಾನಸಭಾ ಚುನಾವಣೆ ಫಲಿತಾಂಶ ಕಣ್ಮುಂದೆ ಬಂದಾಗಲೇ ವಿರೋಧ ಪಕ್ಷದಲ್ಲಿ ಕೂಡುವುದೇ ಅವರ ನಿರ್ಧಾರವಾಗಿತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ ಕೋಮುವಾದಿ ಸರ್ಕಾರ ರಚನೆಗೆ ಅವಕಾಶ ನೀಡಬಾರದೆಂದು ತರಾತುರಿಯಲ್ಲಿ ಜೆಡಿಎಸ್‍ಗೆ ಬೇಷರತ್ ಬೆಂಬಲ ಕೊಡಲು ನಿರ್ಧರಿಸಿದಾಗ ಸಿದ್ದರಾಮಯ್ಯರಿಗೆ ಬೇರೆ ದಾರಿಯೇ ಇರಲಿಲ್ಲ. ಆರಂಭದಿಂದಲೂ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಬಹುಪಾಲು ನಿರ್ಧಾರಗಳ ಬಗ್ಗೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದ್ದರು. ಕುಮಾರಸ್ವಾಮಿ ತಮ್ಮ ಮೊದಲ ಬಜೆಟ್‍ನಲ್ಲಿ ಸಿದ್ದರಾಮಯ್ಯ ಸರ್ಕಾರದ ಕೆಲವು ಯೋಜನೆಗಳಲ್ಲಿ ಮಾರ್ಪಾಡು ಮಾಡಿದಾಗ ಸಿದ್ದರಾಮಯ್ಯ ಅದನ್ನು ಬಲವಾಗಿ ವಿರೋಧಿಸಿದ್ದರು.

ಅನ್ನಭಾಗ್ಯದಲ್ಲಿ ಪ್ರತಿ ತಿಂಗಳು ನೀಡುವ ಅಕ್ಕಿ ಪ್ರಮಾಣವನ್ನು 7 ರಿಂದ 5 ಕೆ.ಜಿ.ಗೆ ಇಳಿಸಿದ್ದು ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರಿಗೆ ಅಪಾರ ಸಿಟ್ಟು ತರಿಸಿತ್ತು. ಕುಮಾರಸ್ವಾಮಿ ತಮ್ಮ ಹಿಂದಿನ ಸರ್ಕಾರದ ಜನಪರ ಯೋಜನೆಗಳಿಗೆ ಧಕ್ಕೆ ಮಾಡುವ ಮೂಲಕ ಕಾಂಗ್ರೆಸ್‍ಗೆ ಹಿನ್ನಡೆ ಮಾಡಲು ಹೊರಟಿದ್ದಾರೆ ಎಂದು ವಿರೋಧ ಮಾಡಿದ್ದ ಸಿದ್ದರಾಮಯ್ಯ ಸಮನ್ವಯ ಸಮಿತಿಯಲ್ಲಿ ಈ ವಿಷಯ ಎತ್ತಿ ತಮ್ಮ ಸರ್ಕಾರದ ಯೋಜನೆಗಳು ಮೊದಲಿನಂತೆ ಸರಾಗವಾಗಿ ಜಾರಿಯಾಗುವಂತೆ ನೋಡಿಕೊಂಡರು. ಸಾಮಾಜಿಕ ಅಭಿವೃದ್ಧಿ ದೃಷ್ಟಿಯಿಂದ ಇದೂ ಅಗತ್ಯವೂ ಆಗಿತ್ತು. ಆಗಿಂದಲೇ ಕುಮಾರಸ್ವಾಮಿ ಕಾಂಗ್ರೆಸ್ ಅನ್ನು ಹಿನ್ನಡೆಗೆ ಸರಿಸಿ ಜೆಡಿಎಸ್ ಪ್ರಾಬಲ್ಯ ಬೆಳೆಯುವಂತೆ ಮಾಡಲು ಹೊರಟಿದ್ದಾರೆ ಎಂಬ ಅಸಮಾಧಾನ ಹೊಂದಿದ್ದ ಸಿದ್ದರಾಮಯ್ಯನವರಿಗೆ, ಈ ಸರ್ಕಾರದಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಎಂಬುದು ಖಾತ್ರಿಯಾಗಿತ್ತು.

ಅದು ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಕಾಣಿಸಿಕೊಂಡಿತು. ಕಾಂಂಗ್ರೆಸ್ ಹೀನಾಯವಾಗಿ ಸೋತು ಕೇವಲ ಒಂದು ಸ್ಥಾನ ಗಳಿಸಿದ ಮೇಲಂತೂ ಜೆಡಿಎಸ್ ಸಹವಾಸ ತೊರೆದು ವಿರೋಧ ಪಕ್ಷದಲ್ಲಿ ಕೂಡುವುದೇ ಕಾಂಗ್ರೆಸ್ ಮತ್ತು ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು ಎಂದು ಅವರು ನಿರ್ಧರಿಸಿಯಾಗಿತ್ತು. ದೆಹಲಿಯಲ್ಲಿ ನಡೆದ ಸಭೆಯಲ್ಲಿ ರಾಹುಲ್‍ಗಾಂಧಿಯವರಿಗೂ ಇದನ್ನು ಮನವರಿಕೆ ಮಾಡಿದ್ದರು. ಆದರೆ ಮತ್ತೆ ಮಿತ್ರಪಕ್ಷಗಳ ಸ್ನೇಹ ಉಳಿಸಿಕೊಳ್ಳುವ ದೃಷ್ಟಿಯಿಂದ ರಾಹುಲ್ ಗಾಂಧಿ ಸರ್ಕಾರಕ್ಕೆ ತೊದರೆಯಾಗದಂತೆ ಸೂಚಿಸಿದ್ದನ್ನು ಮನಸ್ಸಿಲ್ಲದೇ ಸಿದ್ದರಾಮಯ್ಯ ಒಪ್ಪಿಕೊಂಡು ಬಂದಿದ್ದರು.

ಲೋಕಸಭೆ ಚುನಾವಣಾ ಫಲಿತಾಂಶದ ನಂತರ ಬಿಜೆಪಿ ಆಪರೇಷನ್ ಕಮಲವನ್ನು ತೀವ್ರಗೊಳಿಸಿ ಸರ್ಕಾರವನ್ನು ಕೆಡವಲು ನಿರಂತರ ಯತ್ನ ನಡೆಸಿದ್ದು ಅವರಿಗೆ ಸಮಾಧಾನ ತಂದಿತ್ತೇನೋ? ಮೊದಲಿಂದಲೂ ಸಚಿವ ಪದವಿಗೆ ಯತ್ನಿಸಿ ನಿರಾಶರಾಗಿದ್ದ ಅವರ ಹಲವು ಪರಮಾಪ್ತ ಶಾಸಕರು ಬಿಜೆಪಿ ಸರ್ಕಾರದಲ್ಲಾದರೂ ಅಧಿಕಾರ ಪಡೆಯಲಿ ಎಂದು ಸಿದ್ದರಾಮಯ್ಯ ಯೋಚಿಸಿರಬಹುದು. ‘ಹೋಗಿ ಬಿಡಿ ಅತ್ಲಾಗೆ. ಮುಂದೆ ಎಲ್ಲ ನೋಡಿದರಾಯಿತು’ ಎಂದು ಅವರು ಆಶೀರ್ವಾದ ಮಾಡಿದ ಪರಿಣಾಮವಾಗಿಯೇ ಅವರ ನಿಷ್ಠ ಶಾಸಕರು, ಅವರ ಮಾತಿಗೆ ಗೌರವ ಕೊಡುತ್ತಿದ್ದ ಇನ್ನಷ್ಟು ಶಾಸಕರು ಈಗ ಬಿಜೆಪಿ ಪಾಳೆಯದತ್ತ ಮುಖ ಮಾಡಿದ್ದಾರೆ.

ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ, ಕೆ.ಆರ್. ಪುರ ಶಾಸಕ ಬೈರತಿ ಬಸವರಾಜ, ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನಂ, ಚಿಕ್ಕಬಳ್ಳಾಪುರ ಶಾಸಕ ಡಾ. ಕೆ. ಸುಧಾಕರ್ ಮತ್ತು ಸಿದ್ದರಾಮಯ್ಯನವರೇ ನಮ್ಮ ನಾಯಕರು ಎನ್ನುತ್ತಿದ್ದ ಚಿಕ್ಕೋಡಿ ಶಾಸಕ ಪ್ರಕಾಶ ಹುಕ್ಕೇರಿ, ಖಾನಾಪುರ ಶಾಸಕಿ ಅಂಜಲಿ ಹೆಬ್ಬಾಳ್ಕರ್ ಈಗ ಕಾಂಗ್ರೆಸ್ ತೊರೆಯುತ್ತಿರುವುದೇನೂ ಸಿದ್ದರಾಮಯ್ಯರಿಗೆ ಬೇಸರ ತಂದಿರಲಾರದು. ಈ ಪಟ್ಟಿ ನಾಳೆ ಬೆಳೆಯಲೂಬಹುದು.

ನಾಳೆ ಅವರ ಅತಿ ಪರಮಾಪ್ತ, ಹೊಸಕೋಟೆ ಶಾಸಕ, ಸಚಿವ ಎಂ.ಟಿ.ಬಿ. ನಾಗರಾಜ್ ಕೂಡ ರಾಜಿನಾಮೆ ನೀಡಲಿದ್ದಾರಂತೆ. ಇದೆಲ್ಲಕ್ಕೂ ಸಿದ್ದರಾಮಯ್ಯರ ಸಮ್ಮತಿ ಇದ್ದೇ ಇದೆ. ಕಳೆದ ಒಂದು ವರ್ಷದಿಂದ ಸಿದ್ದರಾಮಯ್ಯ ಈ ಸರ್ಕಾರದ ಕುರಿತು ಮನದಾಳದಿಂದ ಪ್ರೀತಿಯ ಮಾತನ್ನೇ ಆಡಿಲ್ಲ. ಲೋಕಸಭೆ ಸೀಟು ಮೈತ್ರಿಯ ಸಂದರ್ಭದಲ್ಲಿ ಜೆಡಿಎಸ್ ಮಾಡಿದ ಎಡವಟ್ಟಿನಿಂದ ಕಾಂಗ್ರೆಸ್‍ಗೆ ಮತ್ತು ತಮಗೆ ರಾಜಕೀಯವಾಗಿ ಆದ ಹಿನ್ನಡೆ ಇನ್ನಷ್ಟು ಮುಂದುವರಿಯಬಾರದು ಎಂದು ನಿರ್ಧರಿಸಿರುವ ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿ ಕುಳಿತು ರಚನಾತ್ಮಕವಾಗಿ ಜನಪರ ಹೋರಾಟ ಮಾಡುತ್ತ ಮತ್ತೆ ಕಾಂಗ್ರೆಸ್‍ ಗೆ ನವಶಕ್ತಿ ತುಂಬುವ ಯೋಚನೆಯಲ್ಲಂತೂ ಇದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...