Homeಮುಖಪುಟಅಮೇಜಾನ್, ನೆಟ್ ಫ್ಲಿಕ್ಸ್ ಥರ ಅಂಗೈಯಲ್ಲಿ ಸಿನೆಮಾ ತೋರಿಸುವುದು ಕೋಟಿ ವ್ಯವಹಾರ ಎಂಬುದು ನಿಮಗೆ ಗೊತ್ತಾ?

ಅಮೇಜಾನ್, ನೆಟ್ ಫ್ಲಿಕ್ಸ್ ಥರ ಅಂಗೈಯಲ್ಲಿ ಸಿನೆಮಾ ತೋರಿಸುವುದು ಕೋಟಿ ವ್ಯವಹಾರ ಎಂಬುದು ನಿಮಗೆ ಗೊತ್ತಾ?

- Advertisement -
- Advertisement -

ತಂತ್ರಜ್ಞಾನ ಬದಲಾದಂತೆ ಹೊಸ ಹೊಸ ಆವಿಷ್ಕಾರಗಳು ಆಗುತ್ತಿರುತ್ತವೆ .ಹಾಗೇಯೆ ಸಿನೆಮಾ ಮತ್ತು ದೃಶ್ಯ ಮಾಧ್ಯಮ ರಂಗದಲ್ಲಿಯೂ ಸಹ ಸಾಕಷ್ಟು ಬದಲಾವಣೆಗಳಾದವು. ಮೊದಲಿಗೆ ದೂರದರ್ಶನ ಬಂದಾಗ ಹಳ್ಳಿಗಳಲ್ಲಿ ಕೆಲವು ಶ್ರೀಮಂತರ ಮನೆಗಳಲ್ಲಿ ಮಾತ್ರ ಟಿವಿ ಇರುತ್ತಿತ್ತು. ಆಗ ಜನ ವಾರಕ್ಕೆ ಒಮ್ಮೆ ಬರುವ ಸಿನೆಮಾಗಾಗಿ ಕಾಯುತ್ತಿದ್ದರು. ಥೀಯೇಟರ್‍ ಗಳಿಗೆ ಹೋಗಲಾರದ ಜನ ವರ್ಷನು ಗಟ್ಟಲೇ ಹೊಸ ಸಿನೆಮಾ ಟಿವಿಯಲ್ಲಿ ಬರುವುದನ್ನು ಕಾಯುತ್ತಿದ್ದರು. ಈಗ ನಿರಂತರ 24/7 ಸುದ್ದಿವಾಹಿನಿಗಳ ಹಾಗೆ, ಸಿನೆಮಾ ಚಾನೆಲ್ ಗಳು ಸಹ ಬಂದಿದ್ದು ಸಾಕಷ್ಟು ಸಿನೆಮಾಗಳನ್ನು ನೋಡಬಹುದಾಗಿದೆ. ಆದರೆ ಈಗಲೂ ಬಿಡುಗಡೆಯಾದ ಹೊಸ ಸಿನೆಮಾ ಟಿವಿಯಲ್ಲಿ ಬರಲು ಸಾಕಷ್ಟು ತಿಂಗಳ ಸಮಯ ತೆಗೆದುಕೊಳ್ಳತ್ತಿದೆ. ಕೆಲವರು ತಮ್ಮ ನೆಚ್ಚಿನ ನಾಯಕರ ಸಿನೆಮಾಗಳನ್ನು ನೋಡಲೇಬೇಕೆಂದು ಪೈರೆಸಿ ಡಿವಿಡಿ, ಸಿಡಿ ನೋಡುತ್ತಿದ್ದರಾದರು ಅವು ಕ್ಯಾಮರ ಪ್ರಿಂಟ್ ಆಗಿದ್ದು ಗುಣಮಟ್ಟದ್ದಾಗಿರುತ್ತಿರಲಿಲ್ಲ.

ಅವರೆಲ್ಲರ ಸಮಸ್ಯೆ ನೀಗಿಸಿದ್ದೆ ನೆಟ್‍ಪ್ಲಿಕ್ಸ್, ಆಮೇಜಾನ್ ಪ್ರೈಮ್‍ನಂತಹ ಓವರ್ ದಿ ಟಾಪ್ (ಓಟಿಟಿ) ನಂತಹ ವೇದಿಕೆಗಳು. ಇವು ಚಿತ್ರಮಂದಿರದಲ್ಲಿ ಬಿಡುಗಡೆಯಾದ ಸಿನಿಮಾಗಳನ್ನು ಒಂದು ತಿಂಗಳ ಒಳಗೆ ಜನರಿಗೆ ತಲುಪಿಸುತ್ತಿವೆ. ರಾಷ್ಟ್ರೀಯ, ಅಂತರಾಷ್ಟ್ರೀಯ, ಮತ್ತು ಸ್ಥಳೀಯ ಸಿನೆಮಾಗಳೇ ಅಲ್ಲದೇ ವೆಬ್‍ಸೀರಿಸ್, ಕಿರುಚಿತ್ರ, ಡಾಕ್ಯುಮೆಂಟರಿ, ಧಾರವಾಹಿ ಇನ್ನೂ ವಿಭಿನ್ನವಾದ ಮನರಂಜನೆ, ಜ್ಞಾನ ಇವೆಲ್ಲವನ್ನು ಕೊಡುತ್ತಿವೆ. ಟಿವಿಯಲ್ಲಿ ಮತ್ತು ಮೋಬೈಲ್‍ನಲ್ಲೂ ಸಮಯವಿದ್ದಾಗ ನೋಡುವ ಅವಕಾಶವನ್ನು ಕಲ್ಪಿಸಿವೆ. ಆದರೆ ಒಂದೇ ಕಂಡಿಷನ್ ಏನಪ್ಪ ಅಂದ್ರೆ ಇವುಗಳಿಗೆ ಇಂತಿಷ್ಟು ಎಂದು ದುಡ್ಡು ಕೊಡಬೇಕು. ಇದಕ್ಕಿಂತ ಮುಂಚೆ ಯೂಟೂಬ್‍ನಲ್ಲಿ ಕೆಲವು ಸಿನೆಮಾಗಳು ಸಿಗುತ್ತಿದ್ದವು ಆದರೆ ಓಟಿಟಿ ವೇದಿಕೆಗಳು ಹೊಸತನಕ್ಕೆ ಹೆಚ್ಚು ಮಹತ್ವ ಕೊಟ್ಟಿರುವುದರಿಂದ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿವೆ.

ಒಟಿಟಿ ಅಂದರೆ ನೇರವಾಗಿ ಕಂಟೆಂಟ್ (ಮೀಡಿಯಾ)ಗಳನ್ನು ಇಂಟರ್ ನೆಟ್ ಮೂಲಕ ಕೇಬಲ್, ಟೆಲಿಕಮ್ಯೂನಿಕೇಶ್ ಇತರ ತಡೆಗಳಿಲ್ಲದೆ ನೇರವಾಗಿ ಗ್ರಾಹಕರಿಗೆ ತಲುಪಿಸುವುದಾಗಿದೆ. ಇವುಗಳಲ್ಲಿ ಅಮೇಜಾನ್ ಪ್ರೈಮ್ ಮತ್ತು ನೆಟ್ ಫ್ಲಿಕ್ಸ್ ಗಳು ಇಂದು ಹೆಚ್ಚು ಪ್ರಸಿದ್ದವಾಗಿವೆ. ನೀವು ಒಂದು ಚಂದಾದಾರರಾದರೆ 5 ಟಿವಿ ಅಥವಾ ಮೊಬೈಲ್ ಗಳಲ್ಲಿ ಸೇವೆಯನ್ನು ಪಡೆಯಬಹುದಾಗಿದೆ. ನೂತನ ಚಲನಚಿತ್ರಗಳು, ರಿಯಾಲಿಟಿ ಶೋ ಗಳು, ಕ್ರೀಡೆ, ಧಾರವಾಹಿ, ವೆಬ್ ಸೀರೀಸ್ ಎಲ್ಲವೂ ಸಿಗುತ್ತವೆ. ಕೆಲವೊಂದು ಜಾಗತಿಕ ಸಿನೆಮಾಗಳು ನಿಮ್ಮೂರಿನ ಚಿತ್ರಮಂದಿರಕ್ಕೆ ಬರದೇ ಹೋಗಬಹುದು. ಆಗ ನೀವು ಚಿಂತಿಸಬೇಕಿಲ್ಲ. ಈ ಒಟಿಟಿಗಳ ಮೂಲಕ ಮನೆಯಿಂದಲೇ ವೀಕ್ಷಿಸಬಹುದಾಗಿದೆ.

ಅಂತರ್ಜಾಲದ ಯುಗದಲ್ಲಿ ಡಿಜಿಟಲ್ ಸೇವೆಗಳ ಉಪಯುಕ್ತತೆಗಳು ಶರವೇಗವಾಗಿ ವೃದ್ಧಿಸುತ್ತಿವೆ. 4ಜಿ ಸೇವೆಯ ರಂಗಪ್ರವೇಶದ ಜೊತೆ ಭಾರತದಲ್ಲಿ ಓಟಿಟಿ ವೇದಿಕೆಗಳ ಮೇಲೆ ಆನ್ ಡಿಮಾಂಡ್ ವಿಡಿಯೋ ಸೇವೆಗಳ ಬೇಡಿಕೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಲಿದೆ ಎಂದು ಉದ್ಯಮಗಳು ಅಭಿಪ್ರಾಯಪಡುತ್ತಿವೆ. ಅಂತರಾಷ್ಟ್ರೀಯ ವೃತ್ತಿ ನೈಪುಣ್ಯ ಸೇವೆಗಳ ಕಂಪನಿ ಪ್ರೈಸ್ ವಾಟರ್‍ಹೌಸ್ ಕೂಪರ್ಸ್(ಪಿಡಬ್ಲೂಸಿ) ವರದಿಯ ಪ್ರಕಾರ 2018 ಮುಗಿಯುವ ವೇಳೆಗೆ ನಮ್ಮ ಭಾರತದಲ್ಲಿ ಓಟಿಟಿ ವಿಡಿಯೋ ಸೇವೆಗಳ ಮಾರುಕಟ್ಟೆ 63.8ಕೋಟಿ ಡಾಲರ್ (ಸುಮಾರು ರೂ 4,466 ಕೋಟಿ)ಗಳಿಗೆ ತಲುಪಿತ್ತು. 2023ರ ಹೊತ್ತಿಗೆ ವಾರ್ಷಿಕವಾಗಿ 21.8% ರಷ್ಟು ವೃದ್ದಿಯಿಂದ 170 ಕೋಟಿ ಡಾಲರ್ (ರೂ.11,900ಕೋಟಿಗಳಿಗೆ) ತಲುಪಲಿದೆ ಎಂದು ಪಿಡಬ್ಲೂಸಿ ಅಂದಾಜು ಮಾಡಿದೆ.

ವಿಡಿಯೋ ಆನ್ ಡಿಮಾಂಡ್‍ನ ಸಬ್‍ಸ್ಕ್ರಿಪ್ಶನ್ ಡಿಮಾಂಡ್ ವಾರ್ಷಿಕವಾಗಿ 23.3%ರಷ್ಟು ವೃದ್ದಿಯಾಗಿ 150 ಕೋಟಿ ಡಾಲರ್‍ಗಳಿಗೆ ತಲುಪಲಿದೆಯೆಂದು ಸಿಡಬ್ಲೂಸಿ ವರದಿಯಲ್ಲಿ ಹೇಳಿದೆ. ಅಂದರೆ 2023ರ ಹೊತ್ತಿಗೆ ಒಟಿಟಿ ಕಂಪನಿಗಳ ಒಟ್ಟು ಆದಾಯದಲ್ಲಿ ವಿಡಿಯೋಗಳ ಸಬ್‍ಸ್ಕ್ರಿಪ್ಶನ್ ನಿಂದ ಬರುವ ಪಾಲು 84%ರಷ್ಟಕ್ಕೆ ತಲುಪಲಿದೆ. ಈಗ ಜಾಹಿರಾತಿನಿಂದಲೇ ಹೆಚ್ಚು ಆದಾಯ ಬರುತ್ತಿದೆ. ಅಷ್ಟೇ ಅಲ್ಲದೇ ನಾಲ್ಕು ವರ್ಷಗಳಲ್ಲಿ ಭಾರತದ ಒಟಿಟಿ ಮಾರುಕಟ್ಟೆ ಕೋರಿಯಾ ದೇಶವನ್ನು ಮೀರಿಸಲಿದೆ. ಪ್ರಪಂಚದಲ್ಲೇ 8ನೇ ಅತಿದೊಡ್ಡ ಒಟಿಟಿ ಮಾರುಕಟ್ಟೆ ಆಗಲಿದೆಯೆಂದು ಸಿಡಬ್ಲೂಸಿ ವರದಿ ಹೇಳುತ್ತಿದೆ. 2023 ಕೊನೆಗೆ ಜಗತ್ತಿನ ಓಟಿಟಿ ಮಾರುಕಟ್ಟೆಯ ಪರಿಮಾಣ 7,280 ಕೋಟಿ ಡಾಲರ್‍ಗಳ ಮಟ್ಟಕ್ಕೆ ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ.

ಮನರಂಜನೆಯ ಕ್ಷೇತ್ರದಲ್ಲಿ ಅತ್ಯಧಿಕ ವೃದ್ಧಿ ಓಟಿಟಿಯದೇ…

ಭವಿಷ್ಯತ್ತಿನಲ್ಲಿ ಮಾಧ್ಯಮ , ಮನರಂಜನೆ ರಂಗದಲ್ಲಿ ಓಟಿಟಿ ಸೇವೆಗಳೆ ಹೆಚ್ಚಾಗುತ್ತಿವೆಯೆಂದು ವಿಶ್ಲೇಷಕರು ಹೇಳುತ್ತಿದ್ದಾರೆ. ನಾಲ್ಕು ವರ್ಷದಲ್ಲಿ ಒಟಿಟಿ, ಆನಲೈನ್ ಗೇಮಿಂಗ್, ಅಂತರ್ಜಾಲ ಧಾರವಾಹಿ ವಿಭಾಗದಲ್ಲಿ ಅತ್ಯಧಿಕ ವೃಧ್ದಿಯನ್ನು ನಮೂದಿಸಿವೆ ಎಂದು ಹೇಳುತ್ತಿದೆ. ಎರ್ನೆಸ್ಟ್ ಅಂಡ್ ಯಂಗ್ ವರದಿಯ ಪ್ರಕಾರ 2020ರ ಹೊತ್ತಿಗೆ ದೇಶದಲ್ಲಿ ಒಟಿಟಿ ಸೇವೆಯ ವಿನಿಯೋಗದಾರರ ಸಂಖ್ಯೆ 50ಕೋಟಿಗಳಿಗೆ ತಲಪುವ ಅವಕಾಶವಿದೆ. ಪ್ರಸ್ತುತ ದೇಶದಲ್ಲಿ ಹಿಂದಿ, ಇಂಗ್ಲೀಷ್ ಸಿನೆಮಾಗಳು, ವೆಬ್‍ಸೀರಿಸ್‍ಗಳು, ಇತರ ವಿಡಿಯೋ ಕಂಟೆಂಟ್‍ಗಳನ್ನು ಕಲ್ಪಿಸುವ ಒಟಿಟಿ ಪ್ಲೇಯರ್‍ಗಳೇ ಅಧಿಕ, ಭವಿಷ್ಯತ್ತಿನಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಆನ್ ಡಿಮಾಂಡ್ ವಿಡಿಯೋಗಳು ನೀಡುವ ಸಂಸ್ಥೆಗಳು ರಂಗಪ್ರವೇಶ ಮಾಡಲಿವೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಟಿವಿ ವಾಹಿನಿಗಳ ಹವಾ ಕಡಿಮೆಯಾಗಿಲ್ಲ

ಒಟಿಟಿ ಸೇವೆಗಳು ವೇಗವಾಗಿ ವೃದ್ಧಿ ಹೊಂದುತ್ತಿದ್ದರೂ ಸಹ ಕೇಬುಲ್, ಸೆಟಲೈಟ್ ಟಿವಿ ಚಾನೆಲ್ ಗಳ ಹವಾ ಮುಂದೆಯೂ ಸಹ ಇದೇ ರೀತಿ ಮುಂದುವರೆಯಲಿದೆ ಎಂದು ಮನರಂಜನೆಯ ಕ್ಷೇತ್ರದ ತಜ್ಞರ ಅಭಿಪ್ರಾಯವಾಗಿದೆ. ಕಳೆದ ವರ್ಷದ ಪೇ ಟಿವಿ ಸೇವೆಗಳ ಆದಾಯ 1000 ಕೋಟಿ ಡಾಲರ್ (70000ರೂ ಕೋಟಿ) ಗಳಿಗೆ ತಲುಪಲಿದೆ. 2023ಕ್ಕೆ ಭಾರತ ಜಗತ್ತಿನಲ್ಲೇ ಅತಿದೊಡ್ಡ ಟಿ.ವಿ ಜಾಹಿರಾತು ಮಾರುಕಟ್ಟೆಯಾಗಿ ಅವತರಿಸಲಿದೆ ಎಂದು ಸಿಡಬ್ಲೂಸಿ ಹೇಳುತ್ತಿದೆ. ಟಿವಿ ಜಾಹಿರಾತು ಮಾರುಕಟ್ಟೆ ವರ್ಷ ವರ್ಷ 10.7ರಷ್ಟು ವೃದ್ಧಿಸುತ್ತಿದ್ದು, ಬರುವ ನಾಲ್ಕು ವರ್ಷದಲ್ಲಿ 680 ಕೋಟಿ ಡಾಲರ್‍ಗಳಿಗೆ ತಲುಪಬಹುದೆಂದು ಅಂದಾಜು.

ಭಾರತದಲ್ಲಿ ಎಲ್ಲಾ ವರ್ಗದವರು ಸಿನೆಮಾಗಳನ್ನು ಇಷ್ಟಪಡುತ್ತಾರೆ. ಹಾಗಾಗಿ ಕಾಲಕಾಲಕ್ಕೆ ಹೊಚ್ಚಹೊಸ ಸಿನೆಮಾಗಳನ್ನು ಸಿಗುವಂತೆ ಮಾಡುವುದು ಕಷ್ಟ. ನಿರಂತರ ಅಧ್ಯಯನಗಳು, ಸಾಮಾಜಿಕ ಜಾಲತಾಣಗಳ ಮೂಲಕ ವಿನಿಯೋಗದಾರರು ಹಚ್ಚು ಇಷ್ಟಪಡುತ್ತಿರುವ ಸಿನೆಮಾಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಅಮೇಜಾನ್ ಪ್ರೈಮ್ ವಿಡಿಯೋ ಕಂಟೆಂಟ್ ವಿಭಾಗ ಅಧಿಪತಿ ವಿಜಯ್ ಸುಬ್ರಮಣ್ಯ ಹೇಳುತ್ತಾರೆ.

ಪ್ರಸ್ತುತ ದೇಶದಲ್ಲಿ ವಿಡಿಯೋ ಆನ್ ಡಿಮಾಂಡ್ ವ್ಯಾಪಾರಗಳಿಗೆ ಬಹುತೇಕ ಆದಾಯ ಜಾಹೀರಾತು ಮೂಲಕವೇ ಬರುತ್ತಿದೆ. ಭವಿಷ್ಯತ್ತಿನಲ್ಲಿ ಸಬ್‍ಸ್ಕ್ರಿಪಷನ್ ರೆವೆನ್ಯೂ ಭಾರಿ ಮೊತ್ತದಲ್ಲಿ ಬೆಳೆಯಲಿದೆ ಎಂದು ವೂಟ್ ವಿಡಿಯೋ ಆನ್ ಡಿಮಾಂಡ್ ವಿಭಾಗದ ಮುಖ್ಯಸ್ಥ ಆಕಾಶ್ ಬ್ಯಾನರ್ಜಿ ಅಭಿಪ್ರಾಯಪಡುತ್ತಾರೆ.

ನಮ್ಮ ದೇಶದಲ್ಲಿ ಸುಮಾರು 40 ಒಟಿಟಿ ಕಂಪೆನಿಗಳಿವೆ ಅವುಗಳಲ್ಲಿ ಪ್ರಮುಖವಾದವುಗಳೆಂದರೆ ನೆಟ್‍ಪ್ಲಿಕ್ಸ್, ಅಮೇಜಾನ್ ಪ್ರೈಮ್ ವಿಡಿಯೋ, ಹಾಟ್‍ಸ್ಟಾರ್, ಜೆಡ್‍ಈಈ5, ಹಿರೋಸ್ ನವ್, ವೋಟ್, ಸೋನಿ ಲೈವ್, ಏರಟೆಲ್ ಟಿವಿ, ವೊಡಾಫೋನ್ ಪ್ಲೇ, ಜೀಯೋ ಟಿವಿ, ವಯಾಕಾಮ್ 18 ಮುಂತಾದವು..

ಪ್ರಪಂಚಾದ್ಯಾಂತ ಸಿನಿಮಾಗಳನ್ನು ಎಲ್ಲರು ನೋಡತ್ತಾರೆ. ಕೆಲವರಿಗೆ ಆಕ್ಷನ್ ಇಷ್ಟ ಆಗಬಹುದು, ಕೆಲವರಿಗೆ ಯುದ್ದ ಆಧಾರಿತ, ಫಿಕ್ಷನ್, ಕಾಮಿಡಿ, ಹಾರರ್ ಈ ರೀತಿ ಇಷ್ಟ ಆಗಬಹುದು. ಮುಂಚೆ ಟಿವಿಗಳಲ್ಲಿ ಸಿನೆಮಾ ಮತ್ತು ಧಾರಾವಾಹಿ ಮಾತ್ರ ಇತ್ತು. ಈಗ ರಿಯಾಲಿಟಿ ಶೋಗಳು ಬಂದಿದಾವೆ ಆದರೆ ಅವೂ ಕೂಡ ಸತ್ವ ಕಳೆದುಕೊಳ್ಳುತ್ತಿರೋ ಸಮಯದಲ್ಲಿ ಈ ಒಟಿಟಿಗಳಲ್ಲಿ ಯಾವುದೇ ಜಾಹೀರಾತು ಇಲ್ಲದೇ ಕುಟುಂಬದ ಜೊತೆ ಕೂತು ನೋಡಬಹುದು. ತಿಂಗಳಿಗೆ 100 ರಿಂದ 200ರೂ ನಷ್ಟು ಖರ್ಚು ಬರುತ್ತದೆ ಅಷ್ಟೇ. ಅದೇ ನೀವು ಕುಟುಂಬದ ಜೊತೆ ಥೀಯೆಟರ್‍ಗೆ ಹೋದರೆ ಇನ್ನೂ ಜಾಸ್ತಿ ಖರ್ಚು ಆಗುತ್ತೆ. ಆನ್‍ಲೈನ್ ಸ್ಟ್ರೀಮಿಂಗ್ ನಲ್ಲಿರುವ ಪ್ರಯೋಜನ ಅಂದರೆ ನಾವು ಎಲ್ಲಿಯವರೆಗೂ ನೋಡಿ ನಿಲ್ಲಿಸಿರುತ್ತೇವೋ, ಮತ್ತೆ ಸಮಯ ಸಿಕ್ಕಾಗ ಮತ್ತೆ ಅಲ್ಲಿಂದಲೇ ನೋಡಬಹುದು. ಹಾಗೂ ಯಾವುದೇ ದೇಶದ ಭಾಷೆಯಾಗಲಿ ಡಬ್ಬಿಂಗ್ ಇಲ್ಲದಿದ್ದರೆ ಸಬ್‍ಟೈಟಲ್ ಹಾಕಿಕೊಂಡು ನೋಡಬಹುದು. ಸಿನೆಮಾಗಳು ಅಂದ್ರೆ ಬರೀ ಮನರಂಜನೆಯಲ್ಲ ಇದರಿಂದ ಇತಿಹಾಸ, ಜ್ಞಾನ ಎಲ್ಲವೂ ಸಿಗುತ್ತದೆ ಎನ್ನುತ್ತಾರೆ ಟ್ರಾವೆಲ್ ಅಡ್ವೈಸರ್, ಸಿನೆಮಾ ಪ್ರೇಮಿ ಮೋಹನ್ ಕುಮಾರ್ ರವರು. ಇವರು ಬೇರೆ ಬೇರೆ ಭಾಷೆಗಳ ಸಿನೆಮಾಗಳನ್ನು ನೋಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಅವುಗಳನ್ನು ಪರಿಚಯಿಸುವ ಹವ್ಯಾಸ ಇಟ್ಟುಕೊಂಡಿದ್ದಾರೆ.

ಸೌಜನ್ಯ: ಆಂಧ್ರಜ್ಯೋತಿ ಬಿಸೆನೆಸ್ ಡೆಸ್ಕ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...