Homeಚಳವಳಿಸಹಜ ಕೃಷಿ ಬೇಕೋ, ರಾಸಾಯನಿಕ ಕೃಷಿ ಬೇಕೋ? : ಭಾಗ 2

ಸಹಜ ಕೃಷಿ ಬೇಕೋ, ರಾಸಾಯನಿಕ ಕೃಷಿ ಬೇಕೋ? : ಭಾಗ 2

- Advertisement -
- Advertisement -

ಭಾಗ 1: ಸರಿಯಾದ ಮಾನದಂಡಗಳ ಮುಖಾಂತರ ನಮಗೆ ಸಹಜ ಕೃಷಿ ಬೇಕೋ, ರಾಸಾಯನಿಕ ಕೃಷಿ ಬೇಕೋ ನಿರ್ಧರಿಸೋಣ

ಮರಗಿಡಸಹಿತ ಕೃಷಿ ಪದ್ಧತಿ (ಫುಡ್ ಫಾರೆಸ್ಟ್): ನಮ್ಮ ವ್ಯವಸಾಯ ಭೂಮಿಯನ್ನು ಆಹಾರೋತ್ಪಾದನೆಯ ಕಾಡನ್ನಾಗಿ ಬದಲಾಯಿಸುವುದರಿಂದ ಕೃಷಿ ಬಿಕ್ಕಟ್ಟಿಗೆ ಒಂದಷ್ಟು ಪರಿಹಾರ ಸಿಗುತ್ತದೆ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ಒಂದು ಎಕರೆಯಲ್ಲಿ ಕನಿಷ್ಟ 500 ರಿಂದ 800 ಮರಗಿಡಗಳು, 20ರಿಂದ 30 ಜಾತಿಯ ಗಿಡಮರಗಳು, ತರಕಾರಿ, ಧಾನ್ಯಗಳು, ಕಾಳುಗಳು, ಹೀಗೆ ಎಲ್ಲಾ ಪದಾರ್ಥಗಳನ್ನು ಒಂದು ಎಕರೆಯಲ್ಲಿ ಆಯೋಜಿಸುವುದು ಫುಡ್ ಫಾರೆಸ್ಟ್ ನ ಮುಖ್ಯ ಪರಿಕಲ್ಪನೆ.

ನಮ್ಮ ವ್ಯವಸಾಯ ಭೂಮಿಯನ್ನು ಫುಡ್ ಫಾರೆಸ್ಟ್ ಆಗಿ ಬದಲಾಯಿಸುವುದರಿಂದ ಅಂದರೆ ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸುವುದರಿಂದಾಗುವ ಅನುಕೂಲಗಳು ಅಥವಾ ಲಾಭಗಳನ್ನು ನೋಡುವುದಾದರೆ

  • ಹೆಚ್ಚು ಮಳೆ ಬರಲು ಸಹಕರಿಸುತ್ತವೆ – Tree makes their own Rain.
  • ಭೂಮಿಗೆ ನೆರಳನ್ನು ಒದಗಿಸುತ್ತವೆ
  • ಆಹಾರ ಪದಾರ್ಥದಲ್ಲಿ ಹೆಚ್ಚು ಪೌಷ್ಠಿಕಾಂಶಗಳನ್ನು ಪಡೆಯಲು ಸಹಕಾರಿಯಾಗುತ್ತದೆ
  • ಪ್ರತಿ ತಿಂಗಳು ಕನಿಷ್ಟ 7 ರಿಂದ 10 ಜಾತಿಯ ಹಣ್ಣುಗಳನ್ನು ಪಡೆಯಬಹುದಾಗಿದೆ
  • ಗಿಡಮರಗಳ ಬೇರುಗಳು ಜೀವಾಣುಗಳಿಗೆ ಆಹಾರವನ್ನು ಒದಗಿಸುತ್ತವೆ
  • ಬೆಳೆಗಳಿಗೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
  • ತಾಪಮಾನವನ್ನು ತಗ್ಗಿಸಲು ಸಹಕಾರಿಯಾಗುತ್ತವೆ
  • ಹೆಚ್ಚು ಆಮ್ಲಜನಕ, ಸಾರಜನಕವನ್ನು ಒದಗಿಸುತ್ತವೆ
  • ಪ್ರಾಣಿಪಕ್ಷಿಗಳಿಗಾಗಿ ಆಹಾರ ಒದಗಿಸುತ್ತಾ ಸಹಜೀವಿಗಳ ಸಂತತಿ ಹೆಚ್ಚಾಗಲು ಕಾರಣವಾಗುತ್ತದೆ.

ನಾಟಿ ತಳಿಗಳ ಬಳಕೆ: ಇತ್ತೀಚಿನ ದಿನಗಳಲ್ಲಿ ನಾಟಿಬೀಜಗಳ ಬಗ್ಗೆ ಒಂದು ಮಾತಿದೆ, ಇಳುವರಿ ನಾವು ನಿರೀಕ್ಷಿಸಿದ ಮಟ್ಟಕ್ಕಿಲ್ಲ ಎಂದು. ನಮ್ಮ ಭೂಮಿಯಲ್ಲಿ ಹ್ಯೂಮಸ್ ಮತ್ತು ಸಾವಯವ ಇಂಗಾಲವನ್ನು ವೃದ್ದಿಸಿದ್ದೆಯಾದಲ್ಲಿ ಬೇರೆ ಯಾವ ತಳಿಗಳಿಗೂ ಇಲ್ಲದ ಇಳುವರಿ, ರೋಗನಿರೋಧಕ ಶಕ್ತಿ, ಮಳೆ ಕಮ್ಮಿಯಾದರು ಬದುಕಬಲ್ಲ ಸಾಮಥ್ರ್ಯ ನಾಟಿತಳಿಗಳಿಗೆ ಇರುತ್ತದೆ. ಬಹುಮುಖ್ಯವಾಗಿ ನಮ್ಮ ಬಿತ್ತನೆ ಬೀಜಗಳನ್ನು ನಾವೆ ಆಯ್ಕೆ ಮಾಡಿಕೊಳ್ಳುವುದರಿಂದ ಒಂದಷ್ಟು ಖರ್ಚನ್ನು ಕಮ್ಮಿ ಮಾಡಿಕೊಳ್ಳಬಹುದಾಗಿದೆ.

ನಾಟಿ ಹಸುಗಳು: ನಾಟಿ ಹಸುವಿನ ಹಾಲು ಶ್ರೇಷ್ಠ ಎನ್ನುವುದು ವಾಸ್ತವ ಸತ್ಯ. ನಾಟಿತಳಿಗಳ ಸಗಣಿ ಮತ್ತು ಗಂಜಲ ಬೆಳೆಗಳಿಗೆ ಉತ್ಕೃಷ್ಟವಾದದ್ದು. ಸಸ್ಯಗಳ ಬೆಳವಣಿಗೆಗೆ ಕೋಟಿ ಕೋಟಿ ಜೀವಾಣುಗಳು ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿರುತ್ತವೆ. ಇದರಲ್ಲಿ ಬಹುಮುಖ್ಯವಾಗಿ ಅವಶ್ಯವಿರುವ 72 ಜೀವಾಣುಗಳ ಹುಟ್ಟು ದೇಸಿ ಹಸುವಿನ ಸಗಣಿ ಮತ್ತು ಗಂಜಲದಲ್ಲಿ ಎನ್ನುವುದು ಹಲವಾರು ಪ್ರಯೋಗಗಳ ಮೂಲಕ ದೃಢಪಟ್ಟಿದೆ. ನಾಟಿ ಹಸುವಿನ ಸಗಣಿ ಮತ್ತು ಗಂಜಲವನ್ನು ಬಳಸಿ ತಯಾರಿಸುವ ಜೀವಾಮೃತವನ್ನು ಪ್ರತಿ 10-15 ದಿನಕ್ಕೊಂದು ಬಾರಿ ಭೂಮಿಗೆ ಹಾಕುವುದರಿಂದ ಜೀವಾಣುಗಳ ಸಂತತಿ ಹೆಚ್ಚಾಗುತ್ತದೆ. ಎರೆಹುಳುಗಳು ಅಸಂಖ್ಯಾತ ಸಂಖ್ಯೆಯಲ್ಲಿ ಉತ್ಪತ್ತಿಯಾಗುತ್ತವೆ. ಈ ಜೀವಾಣುಗಳು ಮತ್ತು ಎರೆಹುಳುಗಳು ಭೂಮಿಯೊಳಗಿರುವ ಸಸ್ಯ ಪೋಷಕಾಂಶಗಳನ್ನು ನಿರಂತರವಾಗಿ ಗಿಡಮರಗಳಿಗೆ ಒದಗಿಸುತ್ತವೆ. ಮತ್ತು ಯಾವುದೇ ಹೊರ ಗೊಬ್ಬರದ ಅಗತ್ಯವಿರುವುದಿಲ್ಲ. ಇದರಿಂದ ಖರ್ಚು ಕಮ್ಮಿಯಾಗುತ್ತಾ ಬರುತ್ತದೆ. ಇದು ರೈತನ ನೆಮ್ಮದಿಯ ಬದುಕಿಗೆ ದಾರಿಯಾಗುತ್ತದೆ.

ರಾಸಾಯನಿಕ ಮುಕ್ತ, ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥ: ರಾಸಾಯನಿಕ ಕೃಷಿ ಪದ್ಧತಿಯಲ್ಲಿ ಬೆಳೆದ ಬೆಳೆಗಳ ಇಳುವರಿ ಸರಾಸರಿಗಿಂತ ಹೆಚ್ಚಿರಬಹುದು. ಆದರೆ ಆ ಬೆಳೆಗಳಲ್ಲಿ ಲಭ್ಯವಿರುವ ಪೋಷಕಾಂಶಗಳು, ವಿಟಮಿನ್ಸ್, ಕಾರ್ಬೋಹೈಡ್ರೇಟ್ಸ್, ಮಿನರಲ್ಸ್ ಗಳ ಕೊರತೆಯಿದೆ ಮತ್ತು ಅಂತಹ ಬೆಳೆಗಳಲ್ಲಿ ರಾಸಾಯನಿಕ ಅಂಶವಿರುತ್ತದೆ ಎನ್ನುವುದು ದೃಢಪಟ್ಟಿದೆ. ಇದನ್ನು ಉಪಯೋಗಿಸುವ ನಮಗೂ ಸಹ ವಿಷ ಸೇರುವುದರಿಂದ ಅನಾರೋಗ್ಯದ ಸಮಸ್ಯೆ ಕಾಡುತ್ತಿದೆ. ಕಳೆದ ವರ್ಷ ಭಾರತ ದೇಶದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ರಫ್ತಾದ ಭತ್ತವನ್ನು ಅತೀಹೆಚ್ಚು ರಾಸಾಯನಿಕಗಳ ಬಳಕೆಯಾಗಿರುವುದನ್ನು ದೃಢಪಡಿಸಿ ತಿರಸ್ಕರಿಸಿದ್ದಾರೆ. ಇದನ್ನು ಅರ್ಥಮಾಡಿಕೊಳ್ಳಬೇಕಾಗಿದೆ.

ಬೆಳೆಗಳ ಆಯ್ಕೆ: ಪ್ರಸ್ತುತ ದಿನಮಾನಗಳಲ್ಲಿ ಶೇ.70 ಮಂದಿ ರೈತರು ಏಕ ಬೆಳೆ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ರಾಸಾಯನಿಕ ಕೃಷಿ ಪದ್ಧತಿಯಾದರು ಅಥವಾ ರಾಸಾಯನಿಕ ಮುಕ್ತ ಕೃಷಿ ಪದ್ಧತಿ ಅನುಸರಿಸುತ್ತಿರುವ ರೈತರು, ಇಬ್ಬರೂ ಹಾಗೇ ಮಾಡುತ್ತಿದ್ದಾರೆ. ಆದ್ದರಿಂದ ನಾವು ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಅಥವಾ ಬೇರೆಯವರಿಗೆ ಬೆಳೆಗಳನ್ನು ಸೂಚಿಸುವಾಗ ಆಯಾ ವಾತಾವರಣಕ್ಕೆ, ಭೂಮಿಗೆ ಅನುಕೂಲವಾಗುವಂತಹ ಮರಗಿಡಗಳನ್ನು ಆಯ್ಕೆಮಾಡಿಕೊಳ್ಳಬೇಕು. ಇದಕ್ಕೊಂದು ಉದಾಹರಣೆ, ಅಡಿಕೆ, ತೆಂಗು ಮುಂತಾದ ಬೆಳೆಗಳು ಹೆಚ್ಚು ನೀರನ್ನು ಬೇಡುತ್ತವೆ. ಮಲೆನಾಡು, ಅರೆಮಲೆನಾಡು, ನದಿ ತೀರಲ್ಲಿ, ಸಮುದ್ರದ ದಡದಲ್ಲಿ ಈ ಜಾತಿಯ ಮರಗಳು ಹೆಚ್ಚು ಸದೃಢವಾಗಿ ಬೆಳೆಯುತ್ತವೆ. ಈ ತರಹದ ಬೆಳೆಗಳನ್ನು ಬಯಲುಸೀಮೆಯಲ್ಲಿ ಬೆಳೆಯುವ ಅಂಧಾನುಕರಣೆಯಿಂದಾಗಿ ನಮ್ಮ ಅಂತರ್ಜಲ ಮಟ್ಟ ಇನ್ನು ಇನ್ನು ಆಳಕ್ಕೆ ಕೊಂಡೊಯ್ದವು.

ರಾಸಾಯನಿಕಗಳ ಬಳಕೆ: ನಾನೊಮ್ಮೆ ರಾಸಾಯನಿಕಗಳನ್ನು ಮಾರುವ ಅಂಗಡಿಗೆ ಹೋಗಿದ್ದೆ. ಹತ್ತಾರು ರೈತರು ತಮ್ಮ ಬೆಳೆಗಳಿಗೆ ಅವಶ್ಯವಿರುವ ರಾಸಾಯನಿಕ ಗೊಬ್ಬರಗಳನ್ನು, ರೋಗಗಳನ್ನು ತಡೆಗಟ್ಟಲು ಔಷಧಿಗಳನ್ನು ತೆಗೆದುಕೊಂಡು ಹೋದರು. ನಾನು ಅಂಗಡಿಯ ಮಾಲೀಕನಿಗೆ ಕೇಳಿದೆ, ರೈತರು ಬಂದು ತಮಗೆ ಬೇಕಾದ್ದನ್ನು ಕೇಳುತ್ತಿದ್ದಾರೆ, ನೀವು ಯಾವ ರೀತಿ ಅವರಿಗಿರುವ ಸಮಸ್ಯೆಯನ್ನರಿತು ಗೊಬ್ಬರವನ್ನಾಗಲಿ, ಔಷಧಿಗಳನ್ನು ನೀಡುತ್ತಿರಿ ಎಂದು. ಅವರೆಂದರು, ಏನಿಲ್ಲಾ ಸಾರ್, ಕಮ್ಮಿಯೆಂದರೂ 3ರಿಂದ 5 ಔಷಧಿಯನ್ನು ನೀಡುತ್ತೇನೆ, ಅದರಲ್ಲಿ ಯಾವುದಕ್ಕಾದರೊಂದಕ್ಕೆ ರೋಗಗಳು ಸತ್ತು ಹೋಗುತ್ತವೆ ಅಂತ. ಎಂತಾ ದುರಂತ ಇದು. ಕೃಷಿಯ ಬಗ್ಗೆಯಾಗಲಿ, ರೋಗದ ಬಗ್ಗೆಯಾಗಲಿ ಯಾವುದೇ ಜ್ಞಾನವಿಲ್ಲದವರು ಬೆಳೆಗಳಿಗೆ ಔಷಧಿಯನ್ನು ನೀಡುತ್ತಾರೆ. ಈ ರೀತಿ ಔಷಧಿಗಳನ್ನು ಬಳಸಿದರೆ ಸಸ್ಯಗಳ ಬೆಳವಣಿಗೆಗೆ ಅವಶ್ಯವಿರುವ ಜೀವಾಣುಗಳು ಸಹ ಸಾಯುತ್ತವೆ. ಇದರ ನಷ್ಟವನ್ನು ತುಂಬುವವರು ಯಾರು? ಇಲ್ಲಿ ಯಾರು ಯಾವ ಮಾನದಂಡವನ್ನು ಅನುಸರಿಸುತ್ತಿದ್ದಾರೆ?

ಹತ್ತುಹದಿನೈದು ವರ್ಷಗಳ ಕೆಳಗೆ 1 ಬ್ಯಾಗ್ ಯೂರಿಯಾ ಉಪಯೋಗಿಸುತ್ತಿದ್ದವರು ಇಂದು 8ರಿಂದ 10 ಬ್ಯಾಗ್ ಉಪಯೋಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದುಕಡೆ ಹೆಚ್ಚು ಹೆಚ್ಚು ರಾಸಾಯನಿಕಗಳನ್ನು ಬಳಸಬೇಕಾದ ಪರಿಸ್ಥಿತಿ, ಇನ್ನೊಂದು ಕಡೆ ಖರ್ಚು ಕೂಡಾ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದೆ. ಹಾಗಾದರೆ ನಮ್ಮ ಕೃಷಿ ಪದ್ಧತಿ ಯಾವ ದಿಕ್ಕಿನ ಕಡೆ ಸಾಗುತ್ತಿದೆ?

ನಮಗರಿವಿರುವಂತೆ ರಾಸಾಯನಿಕಗಳ ಬಳಕೆಯಿಂದಾಗುತ್ತಿರುವ ದುಷ್ಪರಿಣಾಮ ಯಶಸ್ಸಿನ ಮಾಪನವಾಗಬೇಕೆ? ಜೀವಾಣುಗಳು ಕೊಲ್ಲಲ್ಪಡುತ್ತಿರುವುದು ಯಶಸ್ಸಿನ ಮಾಪನವಾಗಬೇಕೆ? ಅಂತರ್ಜಲಮಟ್ಟವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗದ ಕೃಷಿ ಪದ್ಧತಿ ಯಶಸ್ಸಿನ ಮಾಪನವಾಗಬೇಕೆ? ಹ್ಯೂಮಸ್ ಮತ್ತು ಸಾವಯವ ಇಂಗಾಲದ ವೃದ್ಧಿಗೆ ಕಾರಣವಾಗದ ಕೃಷಿ ಪದ್ಧತಿ ಯಶಸ್ಸಿನ ಮಾಪನವಾಗಬೇಕೆ? ಯಾವುದು ನಮ್ಮ ಮಾಪನವೆನ್ನುವುದನ್ನು ಮೊದಲು ನಿರ್ಧರಿಸಬೇಕಾಗಿದೆ.

ಹಸಿರು ಕ್ರಾಂತಿಯ ಆರಂಭದ ದಿನಗಳಲ್ಲಿ ನಮಗೆ, ಅಂದರೆ ಭಾರತದಲ್ಲಿ ಆಹಾರದ ಕೊರತೆಯಿತ್ತು. ಅಂದಾಜು ಶೇ.50ಕ್ಕಿಂತ ಹೆಚ್ಚಿನ ಆಹಾರ ಪದಾರ್ಥಗಳು ಹೊರದೇಶದಿಂದ ರಫ್ತಾಗುತ್ತಿತ್ತು. ನಮ್ಮ ಕೃಷಿ ವಿಜ್ಞಾನಿಗಳು, ಸರ್ಕಾರ, ಕೃಷಿ ಇಲಾಖೆಯ ಅವಿರತ ಪರಿಶ್ರಮದಿಂದ ಅಂದಿನ ಸಂಕಷ್ಟದಿಂದ ನಾವು ಹೊರಬಂದೆವು ಎನ್ನುವುದು ಎಷ್ಟು ಸತ್ಯವೊ, ಈ ದಿನ ನಾವು ಅನುಸರಿಸುತ್ತಿರುವ ಕೃಷಿ ಪದ್ಧತಿಯಿಂದ ಅಂದರೆ ಹೆಚ್ಚು ರಾಸಾಯನಿಕಗಳ ಬಳಕೆ, ಮರಗಿಡಗಳಿಂದ ಕೂಡಿದ ಮಿಶ್ರಬೆಳೆ ಪದ್ಧತಿಯನ್ನು ಕಡೆಗಣಿಸಿರುವುದು, ಭೂಮಿ ತನ್ನ ಬಲವನ್ನು ಕಳೆದುಕೊಂಡಿರುವುದು, ಒಂದು ಬೆಳೆ ತೆಗೆಯಲು ಅಗತ್ಯವಿರುವ ಒಟ್ಟು ಪದಾರ್ಥಗಳಲ್ಲಿ ಶೇ.50ರಿಂದ 70 ಭಾಗದಷ್ಟು ಮಾರುಕಟ್ಟೆಯಿಂದ ಕೊಂಡು ತರುತ್ತಿರುವುದರಿಂದ ಖರ್ಚು ಹೆಚ್ಚಾಗುತ್ತಿರುವುದು, ಜೀವಾಣುಗಳ ಸಂಖ್ಯೆ ನಶಿಸುತ್ತಿರುವುದು, ವಾತಾವರಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವುದು ಕೂಡ ಅಷ್ಟೇ ಸತ್ಯ.

ಹಾಗಾದರೆ ನಮ್ಮ ಅಲೋಚನಾ ವಿಧಾನ ಹೇಗಿರಬೇಕು? ಯಾವ ಕೃಷಿ ಪದ್ಧತಿಯು ಭೂಮಿಯ ಸಾವಯವ ಇಂಗಾಲದ ಪ್ರಮಾಣವನ್ನು ಮತ್ತೆ ಶೇ.8ಕ್ಕೆ ತಲುಪಿಸಿ, ನೆಲದ ಸತ್ವವನ್ನು ಮರುಪೂರಣ ಮಾಡುವುದೋ, ಅದು ಭೂಮಿಯ ಆರೋಗ್ಯಕ್ಕೂ, ಬೆಳೆಗಳ ಆರೋಗ್ಯಕ್ಕೂ, ಅದನ್ನು ಸೇವಿಸುವ ಜೀವಾಣುಗಳ ಆರೋಗ್ಯಕ್ಕೂ ಅಗತ್ಯ ಎನ್ನುವುದನ್ನು ಮೊದಲು ಮನದಟ್ಟು ಮಾಡಿಕೊಳ್ಳೋಣ. ನಾರಾಯಣರೆಡ್ಡಿಯವರ ಒಡಲ ಮಾತನ್ನು ಕೇಳಿಸಿಕೊಳ್ಳೋಣ… ಇದನ್ನು ಯಾವ ಕೃಷಿ ಪದ್ಧತಿ ಬೇಕು ಎನ್ನುವುದಕ್ಕೆ ಅಳತೆಗೋಲು ಮಾಡಿಕೊಳ್ಳೋಣ. ಇದರೊಡನೆ ಪ್ರೊ. ಶ್ರೀಪಾದ್ ಎ ದಾಭೋಲ್ಕರ್‍ರವರು ಪ್ರತಿಪಾದಿಸಿದ ಬೆಳಕಿನ ತೀವ್ರತೆಗೆ ಅನುಗುಣವಾಗಿ ವೈವಿಧ್ಯ ಬೆಳೆ ಪದ್ಧತಿ ಅನುಸರಿಸಿ ಕೃಷಿಯನ್ನು ಲಾಭದಾಯಕವಾಗಿಸಿ ರೈತರು ಉಸಿರಾಡುವಂತಹ ಕೃಷಿ ಪದ್ಧತಿ ನಮ್ಮದಾಗಲಿ.

ಮೊದಲು ಸಹಜ ಕೃಷಿ ಎಂದರೆ ಏನೆಂದು ಅರ್ಥ ಮಾಡಿಕೊಳ್ಳ ಬೇಕಿರುವುದರಿಂದ ಸದ್ಯಕ್ಕೆ ಇಷ್ಟು ಹೇಳಬೇಕೆನಿಸುತ್ತದೆ. ಮುಂದೆ ಈ ಕುರಿತು ಚರ್ಚೆಯನ್ನು ಮುಂದುವರೆಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...