HomeUncategorizedಬರದ ವಿರುದ್ಧ ಜನಾಂದೋಲನದ ವಾಟರ್‌ ಕಪ್: ಯಾರೂ ಸೋಲದ ಆಟ...

ಬರದ ವಿರುದ್ಧ ಜನಾಂದೋಲನದ ವಾಟರ್‌ ಕಪ್: ಯಾರೂ ಸೋಲದ ಆಟ…

25 ಜನರಿಂದ ಪ್ರಾರಂಭವಾದ ಈ ಸಂಸ್ಥೆಯಲ್ಲಿ ಈಗ 450ಕ್ಕೂ ಹೆಚ್ಚು ಸಿಬ್ಬಂದಿಗಳು, ಸಾವಿರಾರು ಕಾರ್ಯಕರ್ತರು ಹಾಗೂ ಸುಮಾರು 2 ಲಕ್ಷಕ್ಕೂ ಮೀರಿ ಸ್ವಯಂಸೇವಕರು ಕೆಲಸ ಮಾಡುತ್ತಿದ್ದಾರೆ. 2016 ರಲ್ಲಿ 3 ತಾಲ್ಲೂಕಿನ 116 ಹಳ್ಳಿಯಲ್ಲಿ ನಡೆದ ಈ ಪ್ರಯೋಗ ಈಗ ಊಹೆಗೆ ಮೀರಿ ಬೆಳೆದಿದೆ.

- Advertisement -
- Advertisement -

ಕರ್ನಾಟಕಕ್ಕೆ ಸತತವಾಗಿ ತಗುಲಿದ ಬರಗಾಲ ಹಾಗೂ ನೆರೆಯಿಂದಾಗಿ ಅಪಾರ ನಷ್ಟವಾಗಿದೆ. ರೈತರು ಜನಸಾಮಾನ್ಯರು ಕಷ್ಟದಲ್ಲಿರುವ ಈ ಹೊತ್ತಿನಲ್ಲಿ ಕರ್ನಾಟಕಕ್ಕೆ ಒಂದು ಲಕ್ಷ ಕೋಟಿ ಪರಿಹಾರ ಪ್ಯಾಕೇಜ್ ನೀಡಬೇಕು ಎಂಬ ನ್ಯಾಯಯುತವಾದ ಹಕ್ಕೊತ್ತಾಯವನ್ನು ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಕೇಂದ್ರ ಸರ್ಕಾರದ ಮುಂದಿಟ್ಟಿವೆ…

ಕರ್ನಾಟಕದಂತೆಯೇ ಹೆಚ್ಚು ಬರಗಾಲ ಹಾಗೂ ರೈತರ ಆತ್ಮಹತ್ಯೆಗೆ ಕುಖ್ಯಾತಿಯನ್ನು ಹೊಂದಿರುವ ರಾಜ್ಯ ಮಹಾರಾಷ್ಟ್ರ. 2015 ರಲ್ಲಿ ಮಹಾರಾಷ್ಟ್ರದ ಸರ್ಕಾರದ ಪ್ರಕಾರ ಶೇ. 60% ಹಳ್ಳಿಗಳು ಬರಕ್ಕೆ ತುತ್ತಾಗಿದ್ದವು. ಶೇ 50% ಇಳುವರಿ ಕಡಿಮೆಯಾಗಿತ್ತು. ಈ ಸಮಯದಲ್ಲಿ ಖಾಸಗಿ ವಾಹಿನಿಯೊಂದರಲ್ಲಿ ಸತ್ಯಮೇವ ಜಯತೆ ಎಂಬ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಅಮೀರ್ ಖಾನ್ ಮತ್ತು ಕಾರ್ಯಕ್ರಮದ ತಂಡ ಪಾನಿ ಫೌಂಡೇಷನ್ ಅನ್ನು ಶುರು ಮಾಡಿತ್ತು. 2016 ರಲ್ಲಿ ಪ್ರಾರಂಭವಾದ ಈ ಸಂಸ್ಥೆಗೆ ಸತ್ಯಮೇವ ಜಯತೆ ಕಾರ್ಯಕ್ರಮದ ಮುಖ್ಯಸ್ಥರಾದ ಸತ್ಯಜಿತ್ ಬಟ್ಕಳ್ ಅವರೇ ಪಾನಿ ಫೌಂಡೇಷನ್ ನ ಮುಖ್ಯಸ್ಥರಾದರು. ಅಮೀರ್ ಖಾನ್ ಹಾಗೂ ಸಿನೆಮಾ ಬರಹಗಾರರು, ನಿರ್ದೇಶಕರು ಆಗಿರುವ ಕಿರಣ್ ರಾವ್ (ಅಮೀರ್ ಖಾನ್‍ರ ಹೆಂಡತಿ) ಅವರುಗಳು ಇದರ ಸಂಸ್ಥಾಪಕರಾದರು. ಪಾನಿ ಫೌಂಡೇಷನ್ ನ ಮುಖ್ಯ ಉದ್ದೇಶ ಮಳೆ ಬಂದಾಗ ನೀರು ಹರಿದು ಪೋಲಾಗದಂತೆ ತಡೆದು ವೈಜ್ಞಾನಿಕ ವಿಧಾನದಲ್ಲಿ ಸಂಗ್ರಹಿಸಿ ಬಳಸುವುದಾಗಿದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ  ಪ್ರತಿ ವರ್ಷ “ಸತ್ಯಮೇವ ಜಯತೆ ವಾಟರ್ ಕಪ್ ಸ್ಫರ್ಧೆ”ಯನ್ನು ನಡೆಸುತ್ತಿದೆ.

ಸತ್ಯಮೇವ ಜಯತೆ ಕಾರ್ಯಕ್ರಮವನ್ನು ಮಾಡುವಾಗ ತಳಮಟ್ಟದಲ್ಲಿ ಬಹಳಷ್ಟು ಜನರು ಕೆಲಸ ಮಾಡುತ್ತಿದ್ದಾರೆ ಮತ್ತು ಅಂತಹ ಕೆಲಸಗಳು ಮತ್ತಷ್ಟು ಆಗಬೇಕಿದೆ ಎಂದು ನನಗೆ ಅನಿಸಿತು. ಬೇಕಾದಷ್ಟು ಬೋರ್‍ವೆಲ್‌ಗಳನ್ನು ಕೊರೆದು ನೀರನ್ನು ಹೀರುತ್ತಾ ಅಂತರ್ಜಲವನ್ನು ನಾವು ಸಾಕಷ್ಟು ಬಳಸಿಕೊಂಡಿದ್ದೇವೆ. ಮುಂದಿನ ಪೀಳಿಗೆಗೆ ನಾವು ನೀರು ಇಲ್ಲದಂತೆ ಮಾಡುತ್ತಿದ್ದೇವೆ. ಹಾಗಾಗಿ ನಾವು ನೀರು ಉಳಿಸುವ ಕೆಲಸವನ್ನು ಮಾಡಬೇಕಿದೆ ಎಂದು ಈ ಸಂಸ್ಥೆಯನ್ನು ಪ್ರಾರಂಭಿಸಿದೆವು ಎನ್ನುತ್ತಾರೆ ಅಮೀರ್ ಖಾನ್.

“ಸತ್ಯಮೇವ ಜಯತೆ ವಾಟರ್ ಕಪ್ ಸ್ಫರ್ಧೆ”

ಈ ಬಾರಿ ವಾಟರ್‌ಕಪ್‌ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲು ಅಮೀರ್‌ ಖಾನ್‌ ಹಾಜರಿರಲಿಲ್ಲ. ಜ್ವರದಿಂದ ಬಳಲುತ್ತಿದ್ದ ಅವರ ಬದಲಿಗೆ ಅವರ ಸ್ನೇಹಿತ ಬಾಲಿವುಡ್ ನಟ ಶಾರೂಕ್‌ ಖಾನ್‌ ಪ್ರಶಸ್ತಿ ವಿತರಿಸಿದರು. ಮಹಾರಾಷ್ಟ್ರ ಸರ್ಕಾರ ಪಾನಿ ಫೌಂಡೇಷನ್‌ಗೆ ಅಭಾರಿಯಾಯಿತು.

2016 ರಿಂದ ಶುರುವಾಗಿರುವ ಈ ಸ್ಫರ್ಧೆಯಲ್ಲಿ ವಿಜೇತವಾದ ಹಳ್ಳಿಗಳಿಗೆ ಮೊದಲ ಬಹುಮಾನ 50ಲಕ್ಷ, ದ್ವಿತೀಯ ಬಹುಮಾನ 30 ಲಕ್ಷ ಮತ್ತು ತೃತೀಯ ಬಹುಮಾನ 20 ಲಕ್ಷ ನೀಡಲಾಗುತ್ತದೆ. ಇದನ್ನು “ಬರದ ವಿರುದ್ಧ ಜನಾಂದೋಲನ” ಎಂದು ಕರೆಯಲಾಗುತ್ತದೆ. ಇದೊಂದು ‘ವಾಟರ್ ಗೇಮಿಂಗ್’ ಎನ್ನಬಹುದು. ಈ ಸ್ಫರ್ಧೆಯಲ್ಲಿ ಬೇರೆ ಬೇರೆ ಹಳ್ಳಿಗಳು ಭಾಗವಹಿಸಬಹುದು. ತಮ್ಮ ಹಳ್ಳಿಯಲ್ಲಿ ಅಂತರ್ಜಲ ಹೆಚ್ಚಿಸಲು ನೀರು ಸಂಗ್ರಹ ಮಾಡುವುದು ಈ ಆಟದ ನಿಯಮ. ಸುಸಜ್ಜಿತವಾಗಿ ಹೆಚ್ಚು ನೀರು ಸಂಗ್ರಹ ಮಾಡುವ ಹಳ್ಳಿಗೆ ಬಹುಮಾನ ನೀಡಲಾಗುತ್ತದೆ. ಈ ಸ್ಫರ್ಧೆ ಪ್ರತಿ ವರ್ಷ ಬೇಸಿಗೆಯ ಮಾರ್ಚ್ ಏಪ್ರಿಲ್ ನಿಂದ ಆರಂಭವಾಗಿ ಮಳೆಗಾಲ ಪ್ರಾರಂಭದ ಜೂನ್ ತಿಂಗಳಲ್ಲಿ ಮುಗಿಯುತ್ತದೆ.

ಸ್ಫರ್ಧೆಗೆ ಮುನ್ನ ತರಬೇತಿ: ಈ ಸ್ಫರ್ಧೆಯಲ್ಲಿ ಭಾಗವಹಿಸುವ ಗ್ರಾಮಸ್ಥರಿಗೆ ನೀರು ಶೇಖರಣ ವಲಯವನ್ನು ಹೇಗೆ ನಿರ್ಮಿಸಬೇಕು ಎನ್ನುವುದರ ಕುರಿತು ತಾಂತ್ರಿಕ ವಿಚಾರಗಳ ತರಬೇತಿ ಹಾಗೂ ಸಾಮಾಜಿಕ ನಾಯಕತ್ವದ ತರಬೇತಿಯನ್ನು ನೀಡಲಾಗುತ್ತದೆ. ಈ ತರಬೇತಿ ಪಡೆದವರನ್ನು ‘ಜಲಧೂತ’ ಎಂದು ಕರೆಯಲಾಗುತ್ತದೆ.

ಸ್ಫರ್ಧೆಯಲ್ಲಿ ಭಾಗವಹಿಸುವ ಗ್ರಾಮಸ್ಥರಲ್ಲಿ ತರಬೇತಿ ಪಡೆಯಲು ಬಂದಾಗ ಕನಿಷ್ಠ ಇಬ್ಬರು ಮಹಿಳೆಯರು ಇರಬೇಕು ಎಂಬ ನಿಯಮವೂ ಇದೆ. ತರಬೇತಿ ಪಡೆದವರು ವಾಪಸು ಹಳ್ಳಿಗಳಿಗೆ ತೆರಳಿ ಜನರನ್ನು ಸಂಘಟಿಸಿ ಸ್ಫರ್ಧೆಯಲ್ಲಿ ಭಾಗವಹಿಸುವಂತೆ ಉತ್ತೇಜನ ನೀಡಬೇಕಿರುತ್ತದೆ. ಈ ಕಾರ್ಯಕ್ಕೆ ಪಾನಿ ಫೌಂಡೇಷನ್ ನಿಂದ ತರಬೇತಿ ಮತ್ತು ಯಂತ್ರೋಪಕರಣಗಳಿಗೆ ಹಣ ನೀಡಲಾಗುತ್ತದೆ. ಇನ್ನುಳಿದಂತೆ ಯಂತ್ರಗಳ ನಿರ್ವಹಣೆ, ತೈಲ, ಇತ್ಯಾದಿಗಳಿಗೆ ಗ್ರಾಮಸ್ಥರೇ ಹಣ ಸಂಗ್ರಹ ಮಾಡಿಕೊಳ್ಳಬೇಕಿರುತ್ತದೆ. ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳಿಂದ ಸಹಾಯವನ್ನು ಗ್ರಾಮಸ್ಥರು ಪಡೆಯಬಹುದಾಗಿರುತ್ತದೆ. ಈ ಸ್ಫರ್ಧೆಯ ಮುಖ್ಯ ಒತ್ತು ಶ್ರಮಧಾನ ಆಗಿರುತ್ತದೆ.

ಹೆಮ್ಮರವಾಗಿ ಬೆಳೆಯುತ್ತಿರುವ ಬೀಜ: 25 ಜನರಿಂದ ಪ್ರಾರಂಭವಾದ ಈ ಸಂಸ್ಥೆಯಲ್ಲಿ ಈಗ 450ಕ್ಕೂ ಹೆಚ್ಚು ಸಿಬ್ಬಂದಿಗಳು, ಸಾವಿರಾರು ಕಾರ್ಯಕರ್ತರು ಹಾಗೂ ಸುಮಾರು 2 ಲಕ್ಷಕ್ಕೂ ಮೀರಿ ಸ್ವಯಂಸೇವಕರು ಕೆಲಸ ಮಾಡುತ್ತಿದ್ದಾರೆ. 2016 ರಲ್ಲಿ 3 ತಾಲ್ಲೂಕಿನ 116 ಹಳ್ಳಿಯಲ್ಲಿ ನಡೆದ ಈ ಪ್ರಯೋಗ ಈಗ ಊಹೆಗೆ ಮೀರಿ ಬೆಳೆದಿದೆ.

ಈ ಸ್ಪರ್ಧೆಯಲ್ಲಿ 2017 ರಲ್ಲಿ 30 ತಾಲ್ಲೂಕಿನ 1321 ಹಳ್ಳಿಗಳು ಭಾಗಿಯಾದರೆ, 2018 ರಲ್ಲಿ 75 ತಾಲ್ಲೂಕಿನ 4,025 ಹಳ್ಳಿಗಳನ್ನು ತಲುಪಿತ್ತು. 2019ರಲ್ಲಿ 9.15 ಕೋಟಿ ರೂಪಾಯಿಯ ಬಹುಮಾನದೊಂದಿಗೆ 24 ಜಿಲ್ಲೆಯ 76 ತಾಲ್ಲೂಕಿನ 4 ಸಾವಿರಕ್ಕೂ ಹೆಚ್ಚು ಹಳ್ಳಿಗಳನ್ನು ಪಾನಿ ಫೌಂಡೇಷನ್ ತಲುಪಿದೆ. 2016-17ರ ಒಂದು ವರ್ಷದ ಹೊತ್ತಿಗೆ ಸ್ಫರ್ಧೆಯಲ್ಲಿ ಭಾಗವಹಿಸಿದ ಹಳ್ಳಿಗಳಿಂದ 10 ಸಾವಿರ ಕೋಟಿ ಲೀಟರ್ ನೀರು ಸಂಗ್ರಹ ಪ್ರದೇಶವನ್ನು ಸೃಷ್ಟಿ ಮಾಡಿತ್ತು. ಅಂದಾಜು ಶೇ. 90% ರಷ್ಟು ಬರಪ್ರದೇಶಗಳನ್ನು ಪಾನಿ ಫೌಂಡೇಷನ್ ತಲುಪಿದೆ.

ನಗರ ನಿವಾಸಿಗಳು ಭಾಗಿ: 2017 ರಲ್ಲಿ ‘ಚಲಾ ಗಾವಿ’ (ಹಳ್ಳಿಗೆ ಹೋಗೋಣ) ಎಂಬ ಕರೆ ಕೊಟ್ಟು ಕಾರ್ಯಕ್ರಮ ರೂಪಿಸಿದಾಗ ಸುಮಾರು 25,000 ನಗರವಾಸಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಊಟದ ವ್ಯವಸ್ಥೆಯನ್ನು ಜನರೇ ಮಾಡಿಕೊಂಡಿದ್ದರು. ಮೇ 1 ಕಾರ್ಮಿಕ ದಿನದಂದು ಹಳ್ಳಿಗಳಿಗೆ ಹೋಗಿ ಸ್ವಯಂಸೇವಕರಾಗಿ ಕೆಲಸ ಮಾಡಲು ‘ಜಲ್ ಮಿತ್ರಾ’ (ನೀರಿನ ಸ್ನೇಹಿತ) ಎಂಬ ಕರೆ ನೀಡಿದಾಗ 1.3 ಲಕ್ಷ ಜನರು ಸ್ವಯಂಪ್ರೇರಿತರಾಗಿ ಶ್ರಮಧಾನದಲ್ಲಿ ಭಾಗಿಯಾಗಿದ್ದರು. ಇನ್ನೂ ಸಾವಿರಾರು ಜನರು ನಾವು ಕೇಳದೇ ಇದ್ದರೂ ಸ್ವಯಂಸೇವಕರಾಗಿ ದುಡಿಯುತ್ತಿದ್ದಾರೆ ಎನ್ನುತ್ತಾರೆ ಸಂಸ್ಥಾಪಕರು.

ಬಾಲಿವುಡ್‌ನ ಘಟಾನುಘಟಿ ಸ್ಟಾರ್‌ಗಳಲ್ಲಿ ಬಹುತೇಕರು ಪಾನಿ ಫೌಂಡೇಶನ್‌ ಚಟುವಟಿಕೆಗಳೊಂದಿಗೆ ಕೈ ಜೋಡಿಸಿದ್ದಾರೆ.

ಯಾರೂ ಸೋಲದ ಆಟ: ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ವರ್ಷಕ್ಕೆ ಸುಮಾರು 9 ಕೋಟಿಗೂ ಹೆಚ್ಚು ಹಣದ ಬಹುಮಾನವನ್ನು ಕೆಲವು ಹಳ್ಳಿಗಳಿಗೆ ನೀಡುತ್ತಿದೆ ಆದರೂ ಸ್ಫರ್ಧೆಯಲ್ಲಿ ಬಹುಮಾನ ಪಡೆಯದೇ ಇರುವವರು ಯಾರೂ ಸೋಲುವುದಿಲ್ಲ. ಯಾಕೆಂದರೆ ಆ ಹಳ್ಳಿಯಲ್ಲಿ ನೀರು ಶೇಖರಣೆ ಪ್ರದೇಶ ನಿರ್ಮಾಣವಾಗಿರುತ್ತದೆ. ಹಲವು ಹಳ್ಳಿಗಳು ಈಗಾಗಲೇ ಟ್ಯಾಂಕರ್ ಮುಕ್ತವಾಗಿದ್ದು, ಅಂತರ್ಜಲ ಹೆಚ್ಚು ಮಾಡಿಕೊಂಡಿವೆ. ಈ ರೀತಿ ನೀರು ಸಂಗ್ರಹಸಿದ್ದರಿಂದ ಹಲವು ಹಳ್ಳಿಗಳು ಇದೀಗ ವರ್ಷಕ್ಕೆ ಮೂರು ಬೆಳೆಗಳನ್ನೂ ತೆಗೆಯುತ್ತಿವೆ.

ಒಮ್ಮೆ ನೆರೆ ಮತ್ತೊಮ್ಮೆ ಬರಗಾಲಕ್ಕೆ ನೈಸರ್ಗಿಕ ಕಾರಣಗಳು ಹಾಗೂ ಮಾನವ ನಿರ್ಮಿತ ಕಾರಣಗಳು ಇರಡೂ ಇದ್ದೇಯಿದೆ. ಮಳೆಯ ಜೊತೆಗಿನ ರೈತರ ಜೂಜಿನಾಟದಲ್ಲಿ ರೈತರ ಸೋಲು ಸಾವಿನವರಗೂ ಕರೆದುಕೊಂಡು ಹೋಗುತ್ತಿದೆ. ಇದನ್ನು ಸುಧಾರಿಸುವ ಕೆಲಸದಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಬಹಳ ಮುಖ್ಯವಾಗಿರುತ್ತದೆ. ಅದೊಂದು ಸಂಘಟಿತ ಕೆಲಸವಾಗಿರಬೇಕು. ಸರ್ಕಾರಗಳು ಮಾಡಬೇಕಿರುವ ಕೆಲಸಗಳನ್ನು ಪಾನಿ ಫೌಂಡೇಷನ್ ನಂತಹ ಸಂಸ್ಥೆಗಳು ದೇಶದಾದ್ಯಂತ ಮಾಡಲು ಸಾಧ್ಯವಿಲ್ಲ. ರೈತರ ಸಾಲ ಮನ್ನಾ, ವೈಜ್ಞಾನಿಕ ಬೆಲೆ, ಸ್ವಾಮಿನಾಥನ್ ಆಯೋಗದ ಶೀಪಾರಸ್ಸಿನ ಜಾರಿ ಇತ್ಯಾದಿ ಪಾಲಿಸಿ ವಿಚಾರಗಳು ಸರ್ಕಾರಗಳೇ ಮಾಡಬೇಕಿರುತ್ತದೆ. ಮಹಾರಾಷ್ಟ್ರದಲ್ಲಿ ಪಾನಿ ಫೌಂಡೇಷನ್‍ನ ಕೆಲಸಗಳನ್ನು ಅಭಿನಂದಿಸುತ್ತಲೇ ಸರ್ಕಾರದ ಜವಾಬ್ದಾರಿಯನ್ನು ನೆನಪಿಸುವ ಕೆಲಸಗಳನ್ನು ಜನರು ಮಾಡಬೇಕಿರುತ್ತದೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಗಳ ವಿಚ್ಛೇದನ: ಸಿಹಿ ಹಂಚಿ, ಮೆರವಣಿಗೆಯಲ್ಲಿ ಆಕೆಯನ್ನು ಮನೆಗೆ ಕರೆತಂದ ನೀವೃತ್ತ ನ್ಯಾಯಾದೀಶ ಮತ್ತು ಕುಟುಂಬ

ಮೀರತ್: ಕೌಟುಂಬಿಕ ನ್ಯಾಯಾಲಯದಲ್ಲಿ ಮಗಳ ವಿಚ್ಛೇದನ ಅಂತಿಮವಾದ ನಂತರ ಆಕೆಯನ್ನು ಡೋಲು, ನೃತ್ಯಗಳ ಮೆರವಣಿಗೆಯಲ್ಲಿ ಸಂಭ್ರಮದಿಂದ ತಂದೆ ಮನೆಗೆ ಕರೆತಂದ ಘಟನೆ ಮೀರನ್ ನಲ್ಲಿ ನಡೆದಿದೆ.  ಪೋಷಕರ ಬೆಂಬಲದ ಅಪರೂಪದ ಮತ್ತು ಹೃದಯಸ್ಪರ್ಶಿ ಪ್ರದರ್ಶನದಲ್ಲಿ,...

“ನೀನು ನಿಜವಾಗಿಯೂ ಅಂಬೇಡ್ಕರ್ ಮಗಳಾ ಎಂದು ತಿಳಿಯಲು ನಾವು ನಿನ್ನ ಡಿಎನ್‌ಎ ಟೆಸ್ಟ್ ಮಾಡುತ್ತೇವೆ” ದೆಹಲಿ ಸಭೆಯಲ್ಲಿ ದಲಿತ ಟ್ರಾನ್ಸ್ ಹೋರಾಟಗಾರ್ತಿ ಗ್ರೇಸ್ ಬಾನುಗೆ ಜಾತಿ ನಿಂದನೆ ಆರೋಪ

ಕೇಂದ್ರ ಸರ್ಕಾರದ ವಿವಾದಾತ್ಮಕ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026ರ ವಿರುದ್ಧ ಕಳೆದ ಕೆಲ ವಾರಗಳಿಂದ ಇಡೀ ಟ್ರಾನ್ಸ್‌ಜೆಂಡರ್ ಮತ್ತು ಪ್ರಗತಿಪರ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ಶುಕ್ರವಾರ...

‘ಮೋದಿ ಕ್ರಿಶ್ಚಿಯನ್ ಸಂಸ್ಥೆಗಳಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ’: ಎಫ್‌ಸಿಆರ್‌ಎ ತಿದ್ದುಪಡಿ ಕುರಿತು ಮಲ್ಲಿಕಾರ್ಜುನ ಖರ್ಗೆ

ಇಡುಕ್ಕಿ (ಕೇರಳ): ಸಾರ್ವಜನಿಕ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಕ್ರಿಶ್ಚಿಯನ್ ಸಂಸ್ಥೆಗಳು, ಎನ್‌ಜಿಒಗಳು ಮತ್ತು ನಾಗರಿಕ ಸಮಾಜದ ಮೇಲೆ ದಾಳಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಎಫ್‌ಸಿಆರ್‌ಎ (ವಿದೇಶಿ ದೇಣಿಗೆ...

ವೈದ್ಯಕೀಯ, ತಾಂತ್ರಿಕ ಶಿಕ್ಷಣದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಿಸಿದ ಒಡಿಶಾ ಸರ್ಕಾರ, ಒಬಿಸಿ ವಿದ್ಯಾರ್ಥಿಗಳಿಗೆ ಹೊಸ ಕೋಟಾ

ಮಹತ್ವದ ನಿರ್ಧಾರ ಕೈಗೊಂಡಿರುವ ಒಡಿಶಾ ಸರ್ಕಾರ, ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಇತರ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಕೋರ್ಸ್‌ಗಳಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ), ಪರಿಶಿಷ್ಟ ಜಾತಿ (ಎಸ್‌ಸಿ) ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ಗಣನೀಯವಾಗಿ ಹೆಚ್ಚಿಸಿದೆ....

ಶಾಲಾ ವಾರ್ಷಿಕೋತ್ಸವದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದ 6 ಮಕ್ಕಳು, ತಡರಾತ್ರಿ ಹೊತ್ತಿಗೆ ಶವವಾದರು : ಮಹಾರಾಷ್ಟ್ರದಲ್ಲೊಂದು ಹೃದಯ ವಿದ್ರಾವಕ ಘಟನೆ

ಶಾಲಾ ವಾರ್ಷಿಕೋತ್ಸವದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದ್ದ ಆರು ಮಂದಿ ಮಕ್ಕಳು, ತಡ ರಾತ್ರಿ ಹೊತ್ತಿಗೆ ಶವವಾದ ಹೃದಯ ವಿದ್ರಾವಕ ಘಟನೆಯೊಂದು ಮಹಾರಾಷ್ಟ್ರದ ದಿಂಡೋರಿಯಲ್ಲಿ ಶುಕ್ರವಾರ (ಏ.3) ನಡೆದಿದೆ. ನಾಸಿಕ್‌ ನಗರದಿಂದ 20 ಕಿಲೋ...

ಕೇರಳ: ಕೊಲ್ಲಂನಲ್ಲಿ ಟಿವಿ ಚಾನೆಲ್ ಕಚೇರಿ ಮೇಲೆ ಸ್ಫೋಟಕ ವಸ್ತು ಎಸೆತ

ಕೊಲ್ಲಂ: ಇಲ್ಲಿನ ಟಿವಿ ಚಾನೆಲ್ ಒಂದರ ಕಚೇರಿಯ ಮೇಲೆ ಭಾನುವಾರ ಬೆಳಿಗ್ಗೆ ಸ್ಫೋಟಕ ವಸ್ತು ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆ ಪ್ರದೇಶ ಮತ್ತು ಚಾನೆಲ್ ಕಚೇರಿಯ ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು...

ಹತ್ಯೆಯಾದ ಇರಾನ್ ಕಮಾಂಡರ್ ಖಾಸಿಮ್ ಸುಲೈಮಾನಿ ಅವರ ಸೊಸೆ, ಮೊಮ್ಮಗಳನ್ನು ಬಂಧಿಸಿದ ಅಮೆರಿಕ

ನವದೆಹಲಿ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಶುಕ್ರವಾರ ತಮ್ಮ ಶಾಶ್ವತ ನಿವಾಸಿ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ನ ದಿವಂಗತ ನಾಯಕ ಖಾಸಿಮ್ ಸೊಲೈಮಾನಿ ಅವರ...

ಇರಾನ್ ಮೇಲೆ ಬೃಹತ್ ದಾಳಿ: ಹಲವು ಉನ್ನತ ನಾಯಕರನ್ನು ಕೊಲ್ಲಲಾಗಿದೆ ಎಂದು ವಿಡಿಯೋ ಹಂಚಿಕೊಂಡ ಟ್ರಂಪ್

ಟೆಹ್ರಾನ್ ಮೇಲೆ ನಡೆದ ದಾಳಿಯ ವೀಡಿಯೊವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದು, ಹಲವಾರು ಇರಾನ್ ಮಿಲಿಟರಿ ನಾಯಕರ ಸಾವಿಗೆ ಅದು ಕಾರಣ ಎಂದು ಹೇಳಿಕೊಂಡಿದ್ದಾರೆ. "ಟೆಹ್ರಾನ್‌ನಲ್ಲಿ ನಡೆದ ಈ ಬೃಹತ್ ದಾಳಿಯೊಂದಿಗೆ, ಇರಾನ್‌ನ...

ಅಸ್ಸಾಂ ಚುನಾವಣೆ : ನುಸುಳುಕೋರರಿಂದ ಯುವ ಕಲ್ಯಾಣಕ್ಕೆ ವರಸೆ ಬದಲಿಸಿದ ಬಿಜೆಪಿ

ಅಸ್ಸಾಂ ವಿಧಾನಸಭಾ ಚುನಾವಣೆಗೆ ನಾಲ್ಕು ದಿನಗಳು ಬಾಕಿ ಇರುವಾಗ ಬಿಜೆಪಿ ತನ್ನ ಪ್ರಚಾರದ ವರಸೆಯನ್ನು ಬದಲಿಸಿಕೊಂಡಿದೆ. ನುಸುಳುಕೋರರನ್ನು ಹೊರಹಾಕುತ್ತೇವೆ, ಅಕ್ರಮ ವಲಸೆಗೆ ಕಡಿವಾಣ ಹಾಕುತ್ತೇವೆಂದು ಅಬ್ಬರಿಸುತ್ತಿದ್ದ ಬಿಜೆಪಿಗರು, ಈಗ ನುಸುಳಕೋರರ ವಿಷಯವನ್ನು ಬದಿಗೊತ್ತಿದ್ದಾರೆ....

ಕುಡಿದ ಮತ್ತಿನಲ್ಲಿ ಕಾರು ಚಾಲನೆ: ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ 19ವರ್ಷದ ಯುವಕ ಸಾವು 

ಬೆಂಗಳೂರು: ಕುಡಿದ ಮತ್ತಿನಲ್ಲಿ ಹದಿಹರೆಯದ ಯುವಕನೊಬ್ಬ ಚಲಾಯಿಸುತ್ತಿದ್ದ ಕಾರು, 19 ವರ್ಷದ ಯುವಕನ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಮಲ್ಲೇಶಪಾಳ್ಯದ ಮಾರುತಿನಗರದ 10 ನೇ ಮುಖ್ಯ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ...