Homeಅಂಕಣಗಳುನೆಲದ ಜತೆ ಪಿಸು ಮಾತನಾಡುವ ಕವಿ ಚಂಸು ಪಾಟೀಲ

ನೆಲದ ಜತೆ ಪಿಸು ಮಾತನಾಡುವ ಕವಿ ಚಂಸು ಪಾಟೀಲ

- Advertisement -
- Advertisement -

ಎಲೆಮರೆ- 14

`ಐದು ಎಕರೆ ಬಳ್ಳಿ ಶೇಂಗಾ ಹಾಕಿದ್ದೆ ಕಾಯಿ ಚಲೋ ಹಿಡದಾತಿ, ಬೇರೆಯವ್ರು ಸರಕಾರಿ ಗೊಬ್ಬರ ಹಾಕಿ, ಕಳೆನಾಶಕ ಸಿಂಪಡಿಸಿದ್ರು. ನಾನು ಸೆಗಣಿಗೊಬ್ಬರ ಹಾಕಿ ಕಳೆ ತಗಸಿದ್ದೆ. ಅದಕ್ಕ ನಲ್ವತ್ ಸಾವ್ರ ಖರ್ಚಾಗಿತ್ತು. ಇದನ್ನ ನೋಡಿ ಊರವರೆಲ್ಲ ನಕ್ಕಿದ್ರು. ಈತಗ ಹುಚ್ ಹಿಡದಿರಬೇಕು, ಎರಡು ಸಾವ್ರ ಕಳೆನಾಶಕ ಹೊಡದಿದ್ರ ಸಾಕಿತ್ತು ಅಂದಿದ್ರು. ನನ್ನ ಲೆಕ್ಕ ಹೆಂಗಂದ್ರ ಕಳೆ ತಗಿಯೋರು ಬದುಕಬೇಕು ನಾನು ಬದುಕಬೇಕು ಅನ್ನೋದು. ಸೆಗಣಿ ಹಾಕಿ, ಕಳೆ ತಗಸಿದ್ದಕ್ಕ ನೆಲ ಮಿದುವು ಆಗಿ ಕಾಯಿ ಬಾಳ ಹಿಡದಾತಿ. 60-70 ಚೀಲ ಆಗಬಹುದು. ಬೇರೆಯವ್ರದ್ದು ಸರಕಾರಿ ಗೊಬ್ಬರ, ಕಳೆನಾಶಕ ಬಳಸಿದ್ದಕ್ಕ ಮಳಿನೂ ಬಾಳ ಆಗಿ ನೆಲ ಬಿಗುವು ಆಗಿ ಕಾಯಿ ಹಿಡದಿಲ್ಲ. ಅಂತ ರೈತರೆಲ್ಲಾ ಈ ಸಲ ಲಾಸ್ ಆದ್ರು. ನೀರಾವರಿಗೆ ಒಂದೆಕರೆ ಬಾಳೆ ಹಾಕೀನಿ. ಒಬ್ಬಂಟಿಗರಾಗಿ ಬಾಳ ಹೊಲ ಮಾಡಕಾಗಲ್ಲ’ ಹೀಗೆ ತಣ್ಣಗೆ ನೆಲದ ಜತೆಗಿನ ಪಿಸುಮಾತುಗಳನ್ನು ಆಡುವ ಕವಿ ಚಂಸು ಪಾಟೀಲ.

ಚಂದ್ರಶೇಖರ ಸುಭಾಶಗೌಡ ಪಾಟೀಲ ಅಂದ್ರೆ ಯಾರೀತ, ಯಾವುದೋ ರಾಜಕಾರಣೀದೋ, ದೊಡ್ ಮನ್ಷನ ಹೆಸರಿದ್ದಂಗೈತಿ ಅಂತ ಅನ್ನಿಸುತ್ತದೆ. ಇದೇ ಹೆಸರನ್ನು ಸಂಕ್ಷಿಪ್ತಗೊಳಿಸಿ ಚಂಸು ಪಾಟೀಲ ಅಂದರೆ ಸಾಹಿತ್ಯ ವಲಯದ ಹೊಸ ತಲೆಮಾರನ್ನು ಸೂಕ್ಷ್ಮವಾಗಿ ಗಮನಿಸುವ ಕೆಲವರಿಗಾದರೂ, ಅದರಲ್ಲೂ ಪೇಸ್‍ಬುಕ್‍ನ್ನು ಆಕ್ಟಿವ್ ಆಗಿ ಬಳಸುವವರಿಗೆ ಈ ಹೆಸರಿನ ಜತೆ ರೈತಾಪಿ ಮುಖದ ಚಿತ್ರವೊಂದು ಕಣ್ಮುಂದೆ ಬರಬಹುದು. ನನಗೋ ಕಾಸ್ಟವೆ ಸಿನೆಮಾದ ಕೊನೆಯಲ್ಲಿ ರೂಪಾಂತರ ಹೊಂದಿದ ನಟ ಟಾಮ್ ಹ್ಯಾಂಕ್ಸ್ ತರವೂ, ಮಲೆಗಳಲ್ಲಿ ಮದುಮಗಳು ಕಾದಂಬರಿಯ ಗುತ್ತಿಯ ಹಾಗೆಯೂ ಚಂಸು ಕಾಣಿಸುತ್ತಾನೆ.

ನನಗೆ ಕಳೆದ ಒಂದೂವರೆ ದಶಕದಿಂದ ಚಂಸು ಪಾಟೀಲ ಪರಿಚಯ. ಆತ ಸಾದಾಸೀದಾ ಜವಾರಿ ಮನ್ಷ. ಒಮ್ಮೆ ಸೊಂಡೂರು ಭೂ ಹೋರಾಟ ಪುಸ್ತಕ ಬರೆಯುವಾಗ ದಾಖಲೆಗಳನ್ನು ಹುಡುಕಿಕೊಂಡು ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ಕಚೇರಿಗೆ ಹೋಗಿದ್ದೆ. ಆಗ ಸಂಯುಕ್ತ ಕರ್ನಾಟಕ ಕಚೇರಿಯಲ್ಲಿ ಐವತ್ತು ದಾಟಿದ ತಲೆ ಬಿಳಿಯಾದ ಹಿರಿಯರೇ ತುಂಬಿರುವಾಗ ಕರಿಕೂದಲಿನ ಕಡ್ಡಿಯಂಥ ಹುಡುಗ ಒಂದು ಮೂಲೆಯ ಹಳೇ ಕಂಪ್ಯೂಟರಿನಲ್ಲಿ ಕಣ್ಣು ನೆಟ್ಟು ಕೂತಿದ್ದ. ನಾನು ನನ್ನ ಹೆಸರೇಳಿ ಪರಿಚಯಿಸಿಕೊಂಡೆ, `ಹೇಯ್ ಬರ್ರಿ ಅರುಣ್ ನೀವು ನಮಗ ಗೊತ್ತು ನಿಮ್ಮ ಬರಹ ಓದೇನಿ’ ಎಂದು ಸಹಜವಾದ ಪ್ರೀತಿ ತೋರಿದ್ದ’ ಈ ಹುಡುಗನೆ ಚಂಸು ಪಾಟೀಲ. ಬಹುಶಃ ನನಗೆ ನೆನಪಿರುವಂತೆ ಅದುವೆ ಮೊದಲ ಭೇಟಿ ಇರಬೇಕು.

2002 ರಲ್ಲಿ ಬೆಂಗಳೂರಿನ `ನೋಟ’ ವಾರಪತ್ರಿಕೆಯಲ್ಲಿಯೂ, 2003 ರಲ್ಲಿ ಗುಲ್ಬರ್ಗಾದ ಕ್ರಾಂತಿ ದೈನಿಕದಲ್ಲಿಯೂ, 2003 ರಿಂದ 2006 ರ ತನಕ ಹುಬ್ಬಳ್ಳಿ ಮತ್ತು ದಾವಣಗೆರೆಯಲ್ಲಿ ಸಂಯುಕ್ತ ಕರ್ನಾಟಕದಲ್ಲಿಯೂ ಚಂಸು ಪತ್ರಕರ್ತನಾಗಿ ಕೆಲಸ ಮಾಡಿದ. ಈತನ ವ್ಯಕ್ತಿ ಸ್ವಭಾವಕ್ಕೆ ಈ ಪತ್ರಕರ್ತ ಹುದ್ದೆ ಉಸಿರುಕಟ್ಟಿಸಿತು, ಮನೆಯ ಘಟನೆಗಳೂ ಪತ್ರಕರ್ತನಾಗಿ ಮುಂದುವರಿಯಲು ತೊಡಕಾದವು. ಈ ಎಲ್ಲದರ ಕಾರಣ ಹುಟ್ಟೂರಿಗೆ ಬಂದು, ತಾನು ಓದಿದ್ದೆಲ್ಲವನ್ನೂ ಮರೆತು 2007 ರಿಂದ ಕಮ್ತಕ್ಕೆ ನಿಂತ. ಆರಂಭಕ್ಕೆ ರೈತಾಪಿ ಕೆಲಸ ಸುಲಭವೇನಾಗಿರಲಿಲ್ಲ. ಹೊಲವೇ ಕಡುಕಷ್ಟಗಳನ್ನೊಡ್ಡಿ ಚಂಸುವನ್ನು ಪರೀಕ್ಷಿಸಿತು. ಈ ಎಲ್ಲಾ ಕಷ್ಟಗಳಿಗೆ ಬಂಡೆಯಂತಾಗಿ ನೆಲದ ಜತೆಗಿನ ಸಾಂಗತ್ಯವನ್ನು ಮುಂದುವರಿಸಿದ. ಬರುಬರುತ್ತಾ ನೆಲ ಚಂಸುವನ್ನು ಕೈಹಿಡಿಯತೊಡಗಿತು. ಅಹರ್ನಿಶಿ ಮತ್ತು ನಾವುನಮ್ಮಲ್ಲಿ ಬಳಗ 2018 ರಲ್ಲಿ ಪ್ರಕಟಿಸಿದ `ಬೇಸಾಯದ ಕತಿ’ ಪುಸ್ತಕದಲ್ಲಿ ಈ ಎಲ್ಲವನ್ನೂ ಅತ್ಯಂತ ಸೂಕ್ಷ್ಮವಾಗಿ ಚಂಸು ಕಟ್ಟಿಕೊಟ್ಟಿದ್ದಾರೆ. ಹಳ್ಳಿಗಳಿಗೆ ಮರಳಿ ಕೃಷಿಯಲ್ಲಿ ತೊಡಗಬೇಕು ಅಂದುಕೊಂಡ ಯುವಜನತೆಗೆ ಇದೊಂದು ಅತ್ಯಂತ ಪ್ರಾಯೋಗಿಕ ಮಾರ್ಗದರ್ಶಿ. ಈ ಕೃತಿಯನ್ನು ಹಿರಿಯ ರೈತ ಹೋರಾಟಗಾರರಾದ ಶಾಮಣ್ಣನವರು ಅಕ್ಷತಾ ಅವರಿಂದ ಪುಸ್ತಕ ಪಡೆದು ರೈತ ಸಮಾವೇಶಗಳು ನಡೆವಲ್ಲಿ ಹೋಗಿ ಸ್ವತಃ ತಾವೇ ರೈತರಿಗೆ ಮಾರಾಟ ಮಾಡಿದ್ದಾರೆ. ಬಹುಶಃ ಈ ಕೃತಿಯ ಮಹತ್ವವನ್ನು ಇದಕ್ಕಿಂತ ಬೇರೆ ರೂಪದಲ್ಲಿ ಹೇಳಲಾರೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕೂನಬೇವು ಗ್ರಾಮದ ಚಂಸು ನಮ್ಮ ಗ್ರಾಮೀಣ ಕೃಷಿಕರು ಮಾಡುತ್ತಿದ್ದ ಸಹಜ ಸಾವಯವ ಬೇಸಾಯ ಮಾಡುತ್ತ ಗಮನ ಸೆಳೆಯುತ್ತಿದ್ದಾರೆ. ಚಂಸು ಪಾಟೀಲರು ಮೂಲತಃ ಕವಿ. ಈ ತನಕ `ಗೆಳೆಯನಿಗೆ’ (1995), `ಕೆಂಪು ಕಂಗಳ ಹಕ್ಕಿ ಮತ್ತದರ ಹಾಡು’ (2005) `ಅದಕ್ಕೇ ಇರಬೇಕು’ (2009) ಮೂರು ಕವಿತಾ ಸಂಕಲನಗಳನ್ನು ಪ್ರಕಟಿಸಿದ್ದಾರೆ.
2007 ರ ನಂತರ ಕಮ್ತಕ್ಕೆ ಬಂದಾಗಿನಿಂದ ನೆಲದ ಜತೆಗಿನ ಪಿಸುಮಾತುಗಳ ಆಲಿಸಿಕೊಂಡು ರೈತರ ಕಣ್ಣೋಟದಲ್ಲಿ ಕವಿತೆ ಬರೆಯಲು ತೊಡಗಿದ್ದಾರೆ. ಈ ಕವಿತೆಗಳು ಚಂಸು ಅವರ ಮೊದಲ ಕವಿತೆಗಳಿಗಿಂತ ತೀರಾ ಭಿನ್ನವಾಗಿವೆ. ಈ ನೆಲದ ನಿಜದ ರೈತನ ನಾಡಿಮಿಡಿತದಂತೆ ಈ ಕವಿತೆಗಳು ಮಾತನಾಡುತ್ತವೆ. ಚಂಸು ಅವರಿಗಿರುವ ವಿಶಿಷ್ಟತೆ ಏನೆಂದರೆ ತನ್ನ ಹಳ್ಳಿ ಕೂನುಬೇವಿನ ಹೊಲದಲ್ಲಿ ಉಳುಮೆ ಮಾಡಿಕೊಂಡೇ ಪೇಸ್‍ಬುಕ್ ಮತ್ತು ಅಂತರ್ಜಾಲದಲ್ಲಿ ಲೋಕದ ವಿದ್ಯಮಾನಗಳನ್ನೂ ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ಅಷ್ಟೇ ಅಲ್ಲ ಇದಕ್ಕೆಲ್ಲಾ ಪ್ರಖರವಾದ ವ್ಯಂಗ್ಯ ವಿಷಾದ ಸಿಟ್ಟು ತಣ್ಣನೆಯ ಪ್ರತಿರೋಧದ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ. ಈ ಪ್ರತಿಕ್ರಿಯೆಯನ್ನು ದಾಟಿಸಲು ಚಂಸು ಕವಿತೆಯನ್ನು ಮಾಧ್ಯಮವನ್ನಾಗಿಸಿಕೊಂಡಿದ್ದಾರೆ.

ಟಿ.ಕೆ.ತ್ಯಾಗರಾಜ್ ಅವರು ಸಂಪಾದಕರಾಗಿರುವ `ದ ಡೆಕ್ಕನ್ ನ್ಯೂಸ್’ ಅಂತರ್ಜಾಲ ಪತ್ರಿಕೆಯಲ್ಲಿ ಚಂಸು `ಭಪ್ಪರೇ ಶವ್ವಾ’ ಎನ್ನುವ ಅಂಕಣ ಬರೆಯುತ್ತಾರೆ. ಬಯಲಾಟ ದೊಡ್ಡಾಟದಲ್ಲಿ ಪರಸ್ಪರ ಹೊಗಳುವ ಸಂದರ್ಭದಲ್ಲಿ ಅಲೆಲೆಲೆ ಭಪ್ಪರೇ ಶವ್ವಾ..! ಎನ್ನುವ ನುಡಿಗಟ್ಟನ್ನು ಬಳಸುತ್ತಾರೆ. ಹಾಗಾಗಿಯೇ ಚಂಸು ಸಾಮಾನ್ಯ ಜನರ ಬದುಕಿನ ಅಪರೂಪದ ಘಟನೆಗಳ ಕುರಿತು ಬರೆಯಲು `ಭಪ್ಪರೇ ಶವ್ವಾ..!’ ಎಂದು ಹೆಸರುಕೊಟ್ಟುಕೊಂಡಿದ್ದಾರೆ.

ಈ ಅಂಕಣವು ಲಘು ಹಾಸ್ಯಮಿಶ್ರಿತ ವ್ಯಂಗ್ಯ ನೋವು ಸಂಕಟ ಎಲ್ಲವನ್ನೂ ಬೆರೆಸಿದಂತಿದೆ. ಹೊಸ ತಲೆಮಾರು ಬರೆವ ಬರಹದಲ್ಲಿ ಇದು ವಿಶಿಷ್ಟವಾಗಿದೆ. ಗ್ರಾಮೀಣ ಚಿತ್ರಕಲಾವಿದ ಮುರಿಗೆಜ್ಜಪ್ಪ, ಅಪ್ಪಣ್ಣ, ಉಪ್ಪಾರ ಗುಡ್ಡಪ್ಪ, ಬಯಲಾಟದ ಅನುಭವ, ಶಿಶುನಾಳ ಶರೀಫರ ಹಾಡುಗಳು ನೆಲೆಗೊಂಡ ಬಗೆ, ರಂಗಭೂಮಿಯ ನಂಟು ಭಜನೆಯ ಒಡನಾಟ ಹೀಗೆ ಹಾವೇರಿ, ರಾಣೇಬೆನ್ನೂರು ಭಾಗದ ಸಾಂಸ್ಕøತಿಕ ಗುರುತುಗಳನ್ನು ಬೆರೆಸಿ ಅಲ್ಲಿಯದ್ದೇ ಆದ ಉಪಭಾಷೆಯ ನುಡಿಗಟ್ಟನ್ನು ಬಳಸಿ ವಿಶಿಷ್ಟ ಸಂಕಥನದಂತೆ ಈ ಅಂಕಣ ಬರೆಯುತ್ತಿದ್ದಾರೆ.

`ಪ್ರತಿದಿನವೂ/ವಲಸೆ ಬರುವ/ ಸೂರ್ಯ ಚಂದ್ರರಿಗೆ/ ಸಿಕ್ಕಬಹುದೇ? ಪೌರತ್ವದ ಕೊಡುಗೆ ! ಆದರೂ ನಿತ್ಯ/ ಈ ಅತಿಕ್ರಮಣವನ್ನು ಸಹಿಸುವುದು ಹೇಗೆ?/ ಕೊರಳುಪಟ್ಟಿ/ ಹಿಡಿದು ದಬ್ಬಿರವರನು/ಹೊರಗೆ’ ಎಂದು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಹೀಗೆ ಕವಿತೆ ಬರೆವ ಚಂಸು, ಸಾಸಿವೆ ಕಾಳಿನಷ್ಟು ಬರೆದು ಬೆಟ್ಟದಷ್ಟು ಪ್ರಚಾರ ಬಯಸುವ ಈ ಕಾಲದ ಹೊಸತಲೆಮಾರಿನ ಕವಯಿತ್ರಿ ಕವಿಗಳಿಗಿಂತ ನೂರುಪಾಲು ಎತ್ತರದಲ್ಲಿದ್ದಾರೆ. ರೈತರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕಾಯಕದಲ್ಲಿ ತೊಡಗಿ ಬೇಸಾಯದ ಕತಿ ಹೇಳುವ ಚಂಸುಗೆ ಒಳಿತಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...