Homeಚಳವಳಿಹಂಸಲೇಖರ ಸಾಂಸ್ಕೃತಿಕ ಪ್ರತಿರೋಧಕ್ಕೆ ಸ್ವಾಗತಾರ್ಹ ಜನಸ್ಪಂದನೆ

ಹಂಸಲೇಖರ ಸಾಂಸ್ಕೃತಿಕ ಪ್ರತಿರೋಧಕ್ಕೆ ಸ್ವಾಗತಾರ್ಹ ಜನಸ್ಪಂದನೆ

ಹಿಂಸಾ ಪ್ರವೃತ್ತಿ, ಒಡೆದು ಆಳುವ ನೀತಿ ರಾರಾಜಿಸುತ್ತಿರುವ ಕಾಲಘಟ್ಟದಲ್ಲಿ ಹಂಸಲೇಖ ಅವರು, “ನೇಯುವ, ಬೆಸೆಯುವ” ಪರಿಭಾಷೆಯನ್ನು ಬಳಸುತ್ತಿದ್ದಾರೆ..

- Advertisement -
- Advertisement -

ಯುಗಧರ್ಮದ ಸಮಸ್ಯೆಗಳಿಗೆ ಸ್ಪಂದಿಸುವ, ಸಂವಾದಕ್ಕೆ ತೆರೆದುಕೊಂಡು, ಅದನ್ನು ಬೆಳೆಸಿ ತನ್ನ ಸಹನಾಗರಿಕರ ಜಾಗೃತಿಗಾಗಿ ತಮ್ಮ ಕಲೆಯನ್ನು ದುಡಿಸಿಕೊಳ್ಫ್ಳುವ ಕಲಾವಿದರು ವಿರಳವಾಗುತ್ತಿದ್ದರೂ ಅಂತವರು ನಮ್ಮ ನಡುವೆ ಉಳಿದಿರುವುದಕ್ಕೆ ಹಲವು ಉದಾಹಣೆಗಳಿವೆ. ಅಂತಹ ಕಲಾವಿದರ ಪ್ರತಿಭೆಯನ್ನು ಜನರು ಗೌರವಿಸುವ ಕಾರಣ್ಕಕ್ಕಾಗಿಯೂ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ, ಫ್ಯಾಸಿಸ್ಟ್ ಶಕ್ತಿಗಳು ಅಂತಹ ಕಲಾವಿದರಿಗೆ ನಿರ್ಬಂಧಗಳನ್ನು ಹೇರುವ ಮಾರ್ಗಗಳನ್ನು ಹುಡುಕುತ್ತಿರುತ್ತವೆ. ಹಾಸ್ಯ ಕಲಾವಿದರಾದ ಮನಾವರ್ ಫಾರೂಖಿ, ಕುನಾಲ್ ಕಾಮ್ರಾ ಅವರ ಕಾರ್ಯಕ್ರಮಗಳನ್ನು ರದ್ದು ಮಾಡುವುದರ ಹಿಂದೆ ಕಲಾವಿದನ ಮೇಲೆ ಪ್ರಭುತ್ವಕ್ಕಿರುವ ಭಯವನ್ನು ಕಾಣಬಹುದು. ಇಂತಹ ಸಂದರ್ಭಗಳಲ್ಲಿ ಬಹುಸಂಖ್ಯೆಯ ಜನರು ಕಲಾವಿದನ ಬೆನ್ನಿಗೆ ನಿಂತರೆ, ಆತನ ಪ್ರತಿರೋಧದ ನೆಲೆಗಳು ಮತ್ತಷ್ಟು ದಿಟ್ಟವಾಗಿ ಮೂಡಿಬರುತ್ತವೆ. ನಾಡಿನ ಪ್ರಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ವಿಚಾರದಲ್ಲಿ ಈ ಮಾತು ಅಕ್ಷರಶಃ ಸತ್ಯವಾಗಿದೆ.

ಹಂಸಲೇಖ ಅವರು ಮೈಸೂರಿನಲ್ಲಿ ಮಾತನಾಡುತ್ತಾ ಮಾಂಸಾಹಾರದ ಕುರಿತು, ಪೇಜಾವರ ಮಠದ ದಿವಂಗತ ವಿಶ್ವೇಶ ತೀರ್ಥ ಸ್ವಾಮೀಜಿಯವರ ಕುರಿತು ಆಡಿದ ಮಾತುಗಳು ವಿವಾದಕ್ಕೆ ಕಾರಣವಾದವು. “ಅಸ್ಪೃಶ್ಯತೆ ನಿವಾರಣೆ ಕಾರ್ಯಕ್ರಮವು ಮೇಲ್ಜಾತಿಗಳ ದೊಡ್ಡಸ್ತಿಕೆ ಪ್ರದರ್ಶನ ಆಗಬಾರದು” ಎಂಬುದು ಹಂಸಲೇಖ ಅವರ ಮಾತಿನ ಆಶಯವಾಗಿತ್ತು. “ದಲಿತರ ಮನೆಗೆ ಬಲಿತರು ಬರುವುದಲ್ಲ. ಬಲಿತರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಬೇಕು. ಅದು ನಿಜವಾದ ಸಮಾನತೆ” ಎಂದಿದ್ದ ಹಂಸಲೇಖರು ಪೇಜಾವರ ಶ್ರೀಗಳು ದಲಿತ ಕೇರಿಗಳಿಗೆ ಭೇಟಿ ನೀಡುತ್ತಿದ್ದನ್ನು ಉಲ್ಲೇಖಿಸಿದ್ದರು. ಈ ಕುರಿತು ಮಾತನಾಡುತ್ತಾ ಪ್ರಾಸಂಗಿಕವಾಗಿ, “ದಲಿತರು ಕೊಡುವ ಆಹಾರವನ್ನು ತಿನ್ನುತ್ತಾರಾ, ಕುರಿ ಕೋಳಿ ರಕ್ತವನ್ನು ಫ್ರೈ ಮಾಡಿಕೊಟ್ಟರೆ ತಿನ್ನುತ್ತಾರಾ?” ಎಂದು ಹೇಳಿಕೆ ನೀಡಿದರು. ಇದು ವಿವಾದಕ್ಕೆ ಕಾರಣವಾಯಿತು. ಸ್ವಾಮೀಜಿಯವರಿಗೆ ಅವಮಾನಿಸಲಾಗಿದೆ ಎಂದು ಬಿಂಬಿಸಲಾಯಿತು. ವಿವಾದ ಭುಗಿಲೆದ್ದ ಬಳಿಕ ಹಂಸಲೇಖ ಅವರು ಕ್ಷಮೆಯನ್ನೂ ಯಾಚಿಸಿದರು. ಈ ನಡುವೆ ಮಾಂಸಾಹಾರದ ಕುರಿತು ಮಹಿಳೆಯೊಬ್ಬರು ತೋರಿದ ಅಸಹನೆ, ‘ಮಾಂಸಾಹಾರ-ಸಸ್ಯಾಹಾರ’ದ ಚರ್ಚೆಗೆ ನಾಂದಿಯಾಯಿತು. ಹಂಸಲೇಖ ಅವರು ಕ್ಷಮೆಯಾಚಿಸಿದ ಬಳಿಕವೂ ಅವರನ್ನು ಪೀಡಿಸುವ ಕೆಲಸ ಮುಂದುವರಿಯಿತು. “ಬೃಂದಾವನಕ್ಕೆ ಬಂದು ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದ್ದು, ಬ್ರಾಹ್ಮಣ್ಯದ, ಒಂದು ವರ್ಗದ ಸವರ್ಣೀಯರ ಅಹಂಕಾರದ ಪ್ರತಿರೂಪದಂತೆ ನಾಡಿನ ಜನತೆಗೆ ಭಾಸವಾಯಿತು. ದೊಡ್ಡ ಮಟ್ಟದಲ್ಲಿ ಜನರು ಹಂಸಲೇಖರ ಪರ ನಿಂತರು. ಈ ನಡುವೆ ಪ್ರಕರಣವೂ ದಾಖಲಾಗಿ, ಹಂಸಲೇಖರು ಬಸವನಗುಡಿ ಪೊಲೀಸ್ ಠಾಣೆಗೆ ಭೇಟಿ ನೀಡಿ, ಹೇಳಿಕೆಯನ್ನು ನೀಡಿಬಂದರು. ನವೆಂಬರ್ 26ರ ಸಂವಿಧಾನ ದಿನದಂದು ಬೆಂಗಳೂರಿನ ಫ್ರೀಡಂ ಪಾರ್ಕ್‌‌ನಲ್ಲಿ ಸೇರಿದ ಜನರು ಹಂಸಲೇಖರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದರು. ಬಸವನಗುಡಿ ಪೊಲೀಸರ ವರ್ತನೆಯನ್ನು ಖಂಡಿಸಿದರು.

ಪ್ರಕರಣ ಇಷ್ಟು ಚರ್ಚೆಯಾದ ನಂತರದಲ್ಲಿ ಹಂಸಲೇಖ ಅವರು ನೀಡಿರುತ್ತಿರುವ ಪ್ರತಿಮಾತ್ಮಕ ಪ್ರತಿಕ್ರಿಯೆಗಳು ಕೋಮು ವಿಷಮತೆ ಬಿತ್ತುವ ರಾಜಕಾರಣವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿರುವುದು ಸುಳ್ಳಲ್ಲ. “ಸುಧಾರಣೆಯ ಸುಂದರ ಕಥೆಗಳನ್ನು ಓದಿಕೊಳ್ಳುತ್ತಿದ್ದೇನೆ” ಎಂದು ತಿಳಿಸಿದ ಅವರು ‘ಹಿಟ್ ರನ್ ಕೇಸ್’ ಆಗಲಿಲ್ಲ. ಸಂವಿಧಾನ ಆಶಯಗಳನ್ನು ಸ್ಮರಿಸಿದರು. “ಪೂಜ್ಯ ಕನ್ನಡಿಗರೇ, ನಿಮ್ಮ ಪ್ರೀತಿ ನನಗೆ ತಲುಪಿದೆ” ಎಂದು ಪತ್ರ ಬರೆದರು. ಪ್ರೀತಿ ಆವೇಶಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದರು. ತನ್ನ ಬೆನ್ನ ಹಿಂದೆ ನಿಂತ ಬಹುದೊಡ್ಡ ಜನಸಮೂಹವನ್ನು ನೆನೆದರು. ಮುಂದುವರಿದ ಹಂಸಲೇಖರು, ಸಂವಿಧಾನ ಗೀತೆಯನ್ನು ಹಂಚಿಕೊಂಡರು.

“ನಾನು, ನೀನು, ನಮಗಾಗಿರೋದೇ ಕಾನೂನು,
ನಾವೂನು, ನೀವೂನು ಕಾನೂನಡಿಯಲಿ ಬಾಳೋಣು”
ಬಾಳೋಣು, ಬೆಳೆಯೋಣು, ಬಾಂಧವ್ಯವನೇ ಕಣ್ಣೋಣು
ಜೀವನ ವಿಧಾನಯಾನ, ಸಮತಾ ಪ್ರಧಾನ ಗಾನ
ಬಹುತ್‌ ಭಾರತದ ಬೃಹತ್ ಸಂವಿಧಾನ
ಓ ಬಡವರ ಗೀತೆ, ಓ ಬಹುಜನ ಮಾತೆ
ಓ ಬಡವರ ಗೀತೆ, ಓ ಬಹುಜನ ಮಾತೆ
ಅಕ್ಷರ ರೂಪದ ಶಾಂತಿಯ ದನಿಯ
ಪ್ರಜಾಪ್ರಭುತ್ವದ ಇನ್‌ಸ್ಟಿಟ್ಯೂಷನ್‌
“ವಂದೇ ವಂದೇ ಇಂಡಿಯನ್ ಕಾನ್‌ಸ್ಟಿಟ್ಯೂಷನ್‌”
“ವಂದೇ ಇಂಡಿಯನ್ ಕಾನ್‌ಸ್ಟಿಟ್ಯೂಷನ್‌”
“ವಂದೇ ಇಂಡಿಯನ್‌ ಕಾನ್‌ಸ್ಟಿಟ್ಯೂಷನ್‌”
– ಎಂದು ಹಂಸಲೇಖರು ಬರೆದರು. ವಿವಾದದ ಬಳಿಕ ಸರಿಗಮಪ ಕಾರ್ಯಕ್ರಮಕ್ಕೆ ತೆರಳಿದ ಅವರು, ಶಾಂತಿ, ಸಹಬಾಳ್ವೆ, ಸಹೋದರತೆ, ಪ್ರೀತಿಯ ಸಂದೇಶಗಳನ್ನು ಸಾರಿದ ಬೌದ್ಧತ್ವವನ್ನು ತಮ್ಮ ವಸ್ತ್ರಾಲಂಕಾರದಲ್ಲಿ ಢಾಳಾಗಿ ತೋರಿಸಿಕೊಂಡರು.

ಲೇಖಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅವರ ಆತ್ಮ ಕಥನ ‘ಯರೆಬೇವು’ ಪುಸ್ತಕ ಬಿಡುಗಡೆ ಹಾಗೂ ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡುತ್ತಾ, “ಧರ್ಮೋಕ್ರಸಿಯನ್ನು ಬದಿಗೆ ಸರಿಸಿ ಡೆಮಾಕ್ರಸಿ ಉಳಿಸೋಣ” ಎಂದು ಪುನರುಚ್ಚರಿಸಿದರು. ಹಂಸಲೇಖರ ಜೊತೆ ನಾಡಿನ ಜನರು ನಿಂತು, ಒಬ್ಬ ಕಲಾವಿದನ ನೋವಿಗೆ ಸ್ಪಂದಿಸಿದ್ದೇ ಇದಕ್ಕೆಲ್ಲ ಕಾರಣ.

ಹಂಸಲೇಖರು ಬುದ್ಧ, ಬಸವ, ಅಂಬೇಡ್ಕರ್‌, ಗಾಂಧಿಯ ಬಗ್ಗೆ ಮಾತನಾಡುತ್ತಾರೆ. ಬುದ್ಧ, ಬಸವ, ಭೀಮ ಅನುಯಾಯಿಗಳ ಜೊತೆಯಲ್ಲಿ, ಬುದ್ಧ ಮತ್ತು ಅಂಬೇಡ್ಕರ್‌ ಪ್ರತಿಮೆಯ ಮುಂದೆ ಫೋಟೋ ತೆಗೆಸಿಕೊಳ್ಳುತ್ತಾರೆ. ಅವರ ರಚನಾತ್ಮಕ ಸಾಂಸ್ಕೃತಿಕ ಪ್ರತಿರೋಧವು ಆಪ್ತವಾಗುತ್ತದೆ. ಹಿಂಸೆಯನ್ನು ಎಂದಿಗೂ ಪ್ರಚೋದಿಸದ ಅವರು ‘ನೆಲದ ಪದ’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ, “ನಾವು ನೇಯುವ ಕೆಲಸ ಮಾಡೋಣ. ಹರಿಯುವುದು ಬೇಡ. ಮನಸ್ಸುಗಳನ್ನು, ಹೃದಯಗಳನ್ನು ಬೆಸೆಯೋಣ” ಎಂದು ನುಡಿದಿದ್ದಾರೆ. ರಾಷ್ಟ್ರಪಿತ ಗಾಂಧೀಜಿಯವರನ್ನು ‘ಹರಾಮಿ’ ಎನ್ನುವ, ಅಂತಹ ಹೇಳಿಕೆಗಳಿಗೆ ಶಿಳ್ಳೆ, ಚಪ್ಪಾಳೆ ಹೊಡೆದು ಪ್ರೋತ್ಸಾಹಿಸುವ ಹಿಂಸಾ ಪ್ರವೃತ್ತಿ, ಒಡೆದು ಆಳುವ ನೀತಿ ರಾರಾಜಿಸುತ್ತಿರುವ ಕಾಲಘಟ್ಟದಲ್ಲಿ ಹಂಸಲೇಖ ಅವರು, “ನೇಯುವ, ಬೆಸೆಯುವ” ಪರಿಭಾಷೆಯನ್ನು ಬಳಸುತ್ತಿದ್ದಾರೆ ಎಂಬುದು ಮುಖ್ಯ. ಸಂವಿಧಾನ ವಿರೋಧಿ ಕೃತ್ಯಗಳನ್ನು ಪ್ರಭುತ್ವವೇ ಸಮರ್ಥಿಸುವ ಕಾಲಘಟ್ಟದಲ್ಲಿ ಈ ಮಾತುಗಳನ್ನು ಹಂಸಲೇಖ ಅವರು ಆಡುತ್ತಿದ್ದಾರೆಂಬುದು ಮುಖ್ಯ.

ಹಿಂಸೆಯನ್ನು ಅಹಿಂಸೆಯಿಂದಷ್ಟೇ ಮಣಿಸಬಹುದು ಎಂಬ ಬಹುದೊಡ್ಡ ಸಂದೇಶವನ್ನು ಸಾರಿದ ಗಾಂಧಿ ಮಾರ್ಗವನ್ನು ತುಳಿದು ರೈತರು ಗೆದ್ದಂತೆ, ‘ನೇಯುವ’ ಕೆಲಸದಿಂದ ಜನಮಾನಸವನ್ನು ಹಂಸಲೇಖರು ಗೆಲ್ಲುತ್ತಿದ್ದಾರೆ. ಸಾಂಸ್ಕೃತಿಕ ಪ್ರತಿರೋಧವನ್ನು ಸೃಜನಾತ್ಮಕವಾಗಿ ದಾಖಸುತ್ತಿದ್ದಾರೆ. ಹಂಸಲೇಖ ಅವರು ಒಂದು ಮಾರ್ಗವನ್ನು ಹಾಕಿಕೊಟ್ಟಿದ್ದಾರೆ. ಅದೇ ಮಾರ್ಗದಲ್ಲಿ ಕನ್ನಡ ಚಿತ್ರರಂಗದ ಸಂವೇದನಾಶೀಲ ಮನಸ್ಸುಗಳೂ ಚಲಿಸುತ್ತಿರುವುದು ಆಶಾದಾಯಕ ಬೆಳವಣಿಗೆ.


ಇದನ್ನೂ ಓದಿರಿ: ಜೇನು ಕುರುಬರ ಕಲೆಯನ್ನು ಝೀ ವಾಹಿನಿಯಲ್ಲಿ ಪ್ರದರ್ಶಿಸೋಣ: ಹಂಸಲೇಖ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...