Homeಮುಖಪುಟಮತ ನಂಬಿಕೆ, ಜಾತ್ಯತೀತತೆ-ಮರುಕಟ್ಟಿಕೊಳ್ಳಬೇಕಾದ್ದು ಯಾವ ಭಾಷೆಯನ್ನು? -ಭಾಗ 2

ಮತ ನಂಬಿಕೆ, ಜಾತ್ಯತೀತತೆ-ಮರುಕಟ್ಟಿಕೊಳ್ಳಬೇಕಾದ್ದು ಯಾವ ಭಾಷೆಯನ್ನು? -ಭಾಗ 2

ಸೋತು ಸುಣ್ಣವಾದ ಜಾತ್ಯತೀತೆಯ ಮರುಕಟ್ಟುವಿಕೆಯಲ್ಲೇ ಹೊಸ ‘ಲೌಕಿಕ ಸಮಾನತೆಯ ಹೊಸ ಮತ’ಕ್ಕೆ ದಾರಿಯೂ ಕಾಣಬಹುದು. ಆತ್ಮಕ್ಕೆ ಸಾವಿಲ್ಲ ಎಂಬುದು ‘ಹಿಂದು ಮತ ನಂಬಿಕೆ’ಯಲ್ಲವೇ!

- Advertisement -
- Advertisement -

ಜಾತ್ಯತೀತತೆಯ ಸೋಲಿಗೆ ಕಾರಣಗಳೇನು?-ಮೂರು ಊಹಾ ಪ್ರಮೇಯಗಳು

ಜಾತ್ಯತೀತತೆ ‘ಶವವಾಗಿದೆ’ ಎಂದು ಯೋಗೇಂದ್ರ ಅವರು ಹೇಳುವಾಗ, ಅದು ಅವರಲ್ಲಿರುವ ಆತಂಕ-ಕಸಿವಿಸಿಯನ್ನು ತೋರಿಸುತ್ತದೆಯೇ ವಿನಹ ಅದು ಕುಹಕದ ಮಾತಲ್ಲ; ಅಂತಹ ಕಸಿವಿಸಿಗೆ ಒಳಗಾಗದೇ ಹೋದರೆ, ನಮ್ಮ ಸ್ವವಿಮರ್ಶೆ ಮೊಂಡಾಗಿ, ದೇಶಾವರಿ ಆಶಾವಾದಕ್ಕೆ ಬೀಳುತ್ತೇವೆ. ಜಾತ್ಯತೀತತೆ ನಿರ್ಜೀವಗೊಂಡಿರುವುದಕ್ಕೆ ಯೋಗೇಂದ್ರ ಅವರು ನೀಡಿರುವ ಕಾರಣಗಳು ತಕ್ಷಣದ ಊಹಾ ಪ್ರಮೇಯಗಳು (ಹೈಪೋಥಿಸೀಸ್); ಸದ್ಯಕ್ಕೆ ನಮ್ಮ ಬೌದ್ಧಿಕ ಹುಡುಕಾಟವು ಇಂತಹ ಊಹಾ ಪ್ರಮೇಯಗಳ ಮೂಲಕವೇ ಶುರುವಾಗಬೇಕು.

ಭಾರತದ ಉಪಖಂಡದಲ್ಲಿ, ಮತ ಹಾಗು ಪ್ರಭುತ್ವ ಅಧಿಕಾರಗಳ ಮೈತ್ರಿಯ ಇತಿಹಾಸವು ಎರಡು ಸಾವಿರ ವರ್ಷಗಳಿಗಿಂತ ಹೆಚ್ಚಿನದು; ಈ ನೆಲದಲ್ಲೇ ಹುಟ್ಟಿದ ಎರಡು ಮತಗಳು, ಅಲ್ಲೇ ನೆಯುಳಿಸಿಕೊಳ್ಳಲಾಗದಂತಾಗಿದೆ; ಮೂರನೇ ಮತವನ್ನು ಎದುರಾಳಿಯಾಗಿಸಿಕೊಂಡು ಅಧಿಕಾರ ಗಟ್ಟಿಗೊಳಿಸುವ ರಾಜಕೀಯ ತಂತ್ರವು ವಸಾಹತುಶಾಹಿ ಆಗಮನದ ಮೂರು ಶತಮಾನಗಳ ಕಾಲದಿಂದಲೂ ನಡೆಯುತ್ತಿದೆ. ಈ ಬಗೆಯ ಚಾರಿತ್ರಿಕ ಮತಾಧಿಕಾರದ ಎದಿರು ಹುಟ್ಟಿ ಸೆಣಸಿರುವ ‘ಆಧುನಿಕ ಜಾತ್ಯತೀತತೆ’ಯ ಪರಿಕಲ್ಪನೆಯ ವಯಸ್ಸು 150 ವರ್ಷಗಳು ಮಾತ್ರ. ಚಾರಿತ್ರಿಕವಾಗಿ ಸಂಚಯಿತವಾದ ಮತ-ಪ್ರಭುತ್ವ ಮೈತ್ರಿಯ ಯಜಮಾನಿಕೆಯ ಶಕ್ತಿಯನ್ನು ಆಧುನಿಕ ಜಾತ್ಯತೀತ ಪ್ರತಿರೋಧವು ಸರಿಯಾಗಿ ಅಂದಾಜಿಸದೇ, ಒಂದು ಹಂತದ ಮೇಲ್ಪದರದಲ್ಲಿ ಮೈಮರೆತಿದೆಯೇ?

Photo Credit: Jagra Josh

‘ಹಿಂದು’ ಎನ್ನುವುದು ಒಂದು ಮತವಲ್ಲ; ಹಲವಾರು ಮತ ಸಂಪ್ರದಾಯಗಳು ಆಚರಣೆಯಲ್ಲಿರುವ ಭೌಗೋಳಿಕ ಪ್ರದೇಶವನ್ನು ಗುರುತಿಸುವ ಒಂದು ವಿಧಾನ; ಪಶ್ಚಿಮದಿಂದ ಬಂದ ವಸಾಹತುಶಾಹಿ ಆಳರಸರಿಗೆ, ಆಡಳಿತಕ್ಕೋಸ್ಕರ ಜನರನ್ನು ‘ಒಂದು ಮತ’ದ ಅಡಿ ಒತ್ತಟ್ಟಿಗೆ ಸೇರಿಸುವ ತುರ್ತಲ್ಲಿ ಹಚ್ಚಿದ ಸಾಮಾನ್ಯ ಹಣೆಪಟ್ಟಿ; 1884ರಲ್ಲಿ ಮೊದಲ ಜನಗಣತಿಯು ನಡೆದಾಗ, ಎಲ್ಲರೂ ತಮ್ಮ ಜಾತಿಗಳ ಗುರುತನ್ನು ಹೇಳಿಕೊಳ್ಳುತ್ತಿದ್ದರು, ಇಲ್ಲ ವಿವಿಧ ಮತ ಸಂಪ್ರದಾಯಗಳ ಹೆಸರು ಹೇಳಿಕೊಂಡಿದ್ದರು; ಎಷ್ಟರ ಮಟ್ಟಿಗೆ ಎಂದರೆ, ಇಸ್ಲಾಂ ಹಾಗು ‘ಹಿಂದು’ ಮತ ಸಂಪ್ರದಾಯಗಳ ಸಂಕರದ ಪಂಥಗಳಲ್ಲೇ ಕೋಟ್ಯಂತರ ಜನ ತಮ್ಮನ್ನು ಗುರುತಿಸಿಕೊಳ್ಳುವ ವೈವಿಧ್ಯತೆಗೆ ವಸಾಹತುಶಾಹಿ ಆಡಳಿತವೇ ಬೆಚ್ಚಿತ್ತು- ಇದು ತೀರ ಹಳೆಯ ಇತಿಹಾಸವೇನೂ ಅಲ್ಲ. ಇಂತಿಪ್ಪ ನಾಡಲ್ಲಿ, ಎರಡು ಸಾವಿರ ವರ್ಷಗಳ ಸಾಮಾನ್ಯವೆಂದು ಗುರುತಿಸಬಹುದಾದ ಒಂದು ಸಂಗತಿ ಎಂದರೆ, ವೈದಿಕ ಮತಾಚಾರದ ಯಜಮಾನಿಕೆಯ ವಿರುದ್ಧ ಹಲವು ಮತ ಸಂಪ್ರಾದಯಗಳ ಭಿನ್ನಮತ! ಪ್ರತಿ ಪ್ರತಿರೋಧವನ್ನು ಹಿಂಸಾತ್ಮಕವಾಗಿ ದಮನಿಸಿದ ಅಥವ ಸಾಧ್ಯವಾಗದಾದಾಗ ಆ ಮತಸಂಪ್ರದಾಯಗಳ ಒಳಗೆ ನುಸುಳಿ, ತನ್ನ ಕೈಯ್ಯಾಳು ಮಾಡಿಕೊಂಡಿರುವ ವೈದಿಕಮತವು ತನ್ನ ಆಧ್ಯಾತ್ಮಿಕ ಜ್ಞಾನದ ವಿಶಿಷ್ಟತೆಗಿಂತ, ರಾಜಕೀಯ-ಸಾಮಾಜಿಕ ಕಾರ್ಯಾಚರಣೆಯ ತಂತ್ರಗಳ ಕಾರಣಕ್ಕೆ ‘ವೈದಿಕಶಾಹಿ’ ಎಂದೇ ಕುಖ್ಯಾತವಾಗಿದೆ. ಇಂತಾಗಿ ನಮ್ಮ ಭೂಖಂಡದಲ್ಲಿ ‘ಜಾತ್ಯತೀತತೆ’ಯ ಮುಖ್ಯ ಲಕ್ಷಣ ಎಂದರೆ ‘ವೈದಿಕಶಾಹಿ’ಯ ವಿರುದ್ಧದ ಲೌಕಿಕ ಪ್ರತಿರೋಧ. ಇಂತಹ ಪ್ರತಿರೋಧದ ‘ನೆನಪುಗಳ ಸಂಚಿತ ಭಂಡಾರ’ವನ್ನು, ತನ್ನ ವಿಶಿಷ್ಟ ವೈಚಾರಿಕ ಗುರುತುಧಾರಣೆಯಾಗಿ ಮಾಡಿಕೊಳ್ಳಲು ವಿಫಲವಾಗಿರುವುದು ‘ಜಾತ್ಯತೀತತೆ’ಯ ಸೋಲಿಗೆ ಮುಖ್ಯ ಕಾರಣ ಎಂಬುದು ಮೊದಲ ಊಹಾ ಪ್ರಮೇಯ.

ಈ, ಮೊದಲನೇ ಪ್ರಮೇಯದ ಸೋಲಿನ ಮುಖ್ಯ ಸೂಚನೆಗಳನ್ನು, 1970ರ ಹೊತ್ತಿಗೆ, ಬಲಪಂಥೀಯರಲ್ಲದ, ಆದರೆ ಎಡಪಂಥದ ಸಂಘಟನಾ ವ್ಯವಸ್ಥೆಗಳಾಚೆ ಇರುವ, ಭೌದ್ಧಿಕ ಸಮಾಜಶಾಸ್ತ್ರಜ್ಞರು ನೀಡತೊಡಗಿದ್ದರು. ‘ಜಾತ್ಯತೀತತೆ’ಯ ವೈಚಾರಿಕತೆಯು ನೆಹರು ಮಾದರಿಯ ಅಭಿವೃದ್ಧಿಗೆ ಪೂರಕವಾದ ‘ಪಶ್ಚಿಮದ ವೈಜ್ಞಾನಿಕ ಜ್ಞಾನಯುಗದ’ [ಎನ್‍ಲೈಂಟನ್ಮೆಂಟ್] ಮಾದರಿಯ ದಾರಿ ಹಿಡಿದಿದೆ; ಅದು ದಕ್ಷಿಣ ಏಶಿಯಾ ಭೂಖಂಡದ ‘ಜನಸಾಮಾನ್ಯ ನಂಬಿಕೆ’ಗಳಿಗೆ ವಿರುದ್ಧವಾಗಿದ್ದು, ಅದು ‘ಹಿಂಸಾತ್ಮಕ’ವಾಗಿದೆ ಎಂದು ಅವರು ಪ್ರಕಟಿಸತೊಡಗಿದ್ದರು. ನೆಹರು ಅವರು ‘ನೈತಿಕವಾಗಿಯೇ ಪ್ರಗತಿ’ ಎಂದು ನಂಬಿ ಆಚರಣೆಗೆ ತೊಡಗಿದ್ದ ‘ದೊಡ್ಡ ಕೈಗಾರಿಕೆ, ದೊಡ್ಡ ಆಣೆಕಟ್ಟುಗಳು’-ಇವುಗಳ ನಿರ್ಮಾಣ ಕೆಲಸದಲ್ಲಿ ತಮ್ಮ ಜೀವಾನಾಧರವನ್ನು ಕಳೆದುಕೊಂಡ ಜನರು, ತಮ್ಮ ಜೀವನಾಧರಗಳನ್ನು ಕಳೆದುಕೊಂಡದ್ದನ್ನು ತಮ್ಮ ‘ಅವೈಧಿಕ’ಭಾಷೆಗಳಲ್ಲಿ ತೋಡಿಕೊಳ್ಳುತ್ತಿದ್ದರ ಬಗ್ಗೆ ಅವರುಗಳು ಸೂಚಿಸುತ್ತಿದ್ದರು. ವಿಪರ್ಯಾಸವೆಂದರೆ, ಈ ಬಗೆಯಲ್ಲಿ ಜೀವನಾಧಾರ ಕಳೆದುಕೊಂಡ ಜನರ ಲೌಕಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದವರು ‘ನೆಹರು ಯುಗದ ಪ್ರಗತಿ’ಯ ಪರಿಕಲ್ಪನೆಯು ‘ವೈದಿಕಶಾಹಿ’ಯ ಲೌಕಿಕ ಹಿಡಿತವನ್ನು ನಿಶಸ್ತ್ರಗೊಳಿಸುವುದು ಎಂದೇ ನಂಬಿದವರಾಗಿದ್ದರು; ಪ್ರಗತಿಯ ಧನಾತ್ಮಕ ಸಂಪನ್ಮೂಲ ಉತ್ಪಾದನೆಯಲ್ಲಿ ಸಂಚಿತವಾದ ಸಂಪನ್ಮೂಲದ ಅಸಮ ಹಂಚಿಕೆಗೆ ಕಾರಣವಾದ ಅಧಿಕಾರಶಾಹಿಯ ಬಗ್ಗೆ ಅವರು ಮಾತನಾಡುತ್ತಿದ್ದರು. ‘ವೈದಿಕಶಾಹಿ’ಯನ್ನು ಎತ್ತಿ ಹಿಡಿಯುವ ಬಲಪಂಥಕ್ಕೆ ಪ್ರತಿರೋಧದ ‘ಅವೈದಿಕ’ಭಾಷೆಯು ಪಥ್ಯವಾಗಿರಲಿಲ್ಲ; ‘ಪ್ರಗತಿ’ಯಿಂದ ಸಂಚಿತವಾದ ಸಂಪನ್ಮೂಲದ ಸಿಂಹಪಾಲು ‘ವೈದಿಕಶಾಹಿ’ಯನ್ನು ಜತನವಾಗಿಡುವ ಜನ ವರ್ಗಗಳಿಗೆ ತಲುಪುವಂತೆ ‘ಅಧಿಕಾರಶಾಹಿ’ಯು ನೋಡಿಕೊಳ್ಳಲು ಅವರು ಸಹಕರಿಸಿ ಕಾರ್ಯಾಚರಿಸುತ್ತಿದ್ದರು; ಹಾಗಾಗಿ ಈ ಕಾಲದಲ್ಲಿ ನಡೆಯುತ್ತಿದ್ದ ‘ಸಮಾನ ಸಂಪನ್ಮೂಲ, ಸಾಮಾಜಿಕ ಪ್ರತಿನಿಧಿಕರಣ ಹಂಚಿಕೆ’ಗಾಗಿ ನಡೆಯುತ್ತಿದ್ದ ಹೋರಾಟಗಳನ್ನು ನಿಶಸ್ತ್ರಗೊಳಿಸುವ ಹೋರಾಟಗಳ ಕಡೆಗೆ ತಮ್ಮ ಶಕ್ತಿ ಕೇಂದ್ರೀಕರಿಸತೊಡಗಿದರು.

ಇದನ್ನು ಓದಿ: ಮತ ನಂಬಿಕೆ, ಜಾತ್ಯತೀತತೆ : ಮರುಕಟ್ಟಿಕೊಳ್ಳಬೇಕಾದ್ದು ಯಾವ ಭಾಷೆಯನ್ನು? ಭಾಗ: 1 – ಕೆ.ಫಣಿರಾಜ್

‘ಭೂಸುಧಾರಣ ಹೋರಾಟ’ಗಳು, ‘ಮೀಸಲಾತಿ ಚಳುವಳಿ’ಗಳನ್ನು ‘ವೈದಿಕಾಶಾಹಿ’ ಶಕ್ತಿ ಕೇಂದ್ರಗಳು ಹ್ಯಾಗೆ ಪ್ರತಿರೋಧಿಸಿದವು ಎಂಬುದರ ಕುರಿತ ಅಧ್ಯಯನಗಳು ಭೌದ್ಧಿಕ ವಲಯದಲ್ಲಿ ನಡೆದಿವಯೋ ಇಲ್ಲವೋ, ನಡೆದಿದ್ದರೂ ಅವುಗಳ ಪಾಠವನ್ನು ತಳಮಟ್ಟದ ‘ಜಾತ್ಯತೀತ ಹೋರಾಟಗಾರರಿಗೆ’ ತಲುಪಿಸುವ ಸಾಂಸ್ಥಿಕ ವ್ಯವಸ್ಥೆಯಂತೂ ಭಾರತದಲ್ಲಿ ಗೈರು ಹಾಜರಾಗಿತ್ತು. ಯೋಗೇಂದ್ರ ಅವರು ‘ಜಾತ್ಯತೀತರು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವವರಾಗಿದ್ದಾರೆ’ ಎಂದಾಗ ಅವರು ಏನನು ಸೂಚಿಸುತ್ತಿದ್ದಾರೆ? ಅವರು ‘ನೆಹರು ಪ್ರಗತಿ’ಯ ಪರಿಕಲ್ಪನೆಯನ್ನು ತಳಮಟ್ಟದಲ್ಲಿ ಆ ಪ್ರಗತಿಯಿಂದ ಹೊರದೂಡಲ್ಪಟ್ಟ ಸಮುದಾಯಗಳ ಪರವಾಗಿ ಹೋರಾಟ ಮಾಡುತ್ತಿರುವವರಿಗೆ ದಾಟಿಸುತ್ತಿದ್ದ ಭೌದ್ಧಿಕತೆಯ ಬಗ್ಗೆ ಮಾತನಾಡುತ್ತಿದ್ದಾರೆ! ನೆಹರು ಅವರ ವೈಜ್ಞಾನಿಕ ಪ್ರಗತಿಯ ಕಲ್ಪನೆಯನ್ನೇ ‘ಜಾತ್ಯಾತೀತತೆ’ಯ ಗುರುತಾಗಿ ನಿರೂಪಿಸುವ ಭೌದ್ಧಿಕರು ಮತ್ತು ಅವರಿಗೆ ಭಿನ್ನಮತ ತೋರಿದ ಭೌದ್ಧಿಕರ ನಡುವಿನ ವಾಗ್ವಾದಗಳ ನೈಜತೆಯ ನ್ಯಾಯನಿರ್ಣಯವು, ‘ಪ್ರಗತಿ’ಯಿಂದ ನಿರಾಶ್ರಿತರಾದವರ ಪರವಾಗಿ ಹೋರಾಡುತ್ತಿರುವ ಹೋರಾಟಗಾರರು ಮಾಡಬೇಕಿತ್ತು; ತಾವು ಯಾವ ಜನರ ಪರವಾಗಿ ಹೋರಾಡುತ್ತಿದ್ದರೋ ಆ ಜನರಿಗೆ ಈ ವಾಗ್ವಾದಗಳು ನಿಮ್ಮ ಹೆಸರಲ್ಲಿ ನಡೆಯುತ್ತಿವೆ ಎಂಬ ವಾಸ್ತವವನ್ನು ತಿಳಿಸುವ ಒಂದು ಜೀವಂತ ಮಾಧ್ಯಮದ ಅವಶ್ಯಕತೆ ಇತ್ತು. ಆ ಮಾಧ್ಯಮವು- ಯಾವುದನ್ನು ಚಿಂತಕ ಮತ್ತು ಸಮಾಜವಾದಿ ಹೋರಾಟಗಾರ ಗ್ರಾಮ್ಷಿ – ಸಂಘಟಿತ ಭೌದ್ಧಿಕ ಭಿನ್ನಮತಗಳ ಚಿಂತನೆಯ ಸಂವಹನೆಗಳನ್ನು ಸಹಜವಾಗಿಸಿಕೊಂಡ ‘ಜನಾನುರಾಗಿ ಹೋರಾಟಗಳು’ [ನ್ಯಾಷನಲ್ ಪಾಪ್ಯುಲಾರ್] ಎಂದು ಕರೆದನೋ- ಅದು ಗೈರು ಹಾಜಾರಾಗಿರುವುದನ್ನು ನಾವು 1970-90ರ ನಡುವಿನ ಹೋರಾಟಗಳಲ್ಲಿ ಕಾಣಬಹುದು. ಇದು ‘ಜಾತ್ಯತೀತತೆಯ ಸೋಲಿಗೆ’ ಕಾರಣವಾದ ಎರಡನೇ ಊಹಾ ಪ್ರಮೇಯ.

ಸದರಿ ಬರಹಗಾರನ ಸೀಮಿತ ತಿಳುವಳಿಕೆಯಲ್ಲಿ, 1850-1950ರವರೆಗಿನ ಶತಮಾನದ ಕಾಲಾವಧಿಯಲ್ಲಿ, ಭಾರತದ ‘ಜಾತ್ಯತೀತತೆ’ಗೆ ಸಶಕ್ತವಾದ ಭೌದ್ಧಿಕತೆಯನ್ನು ಒದಗಿಸಿದ್ದು ಎರಡು ‘ಜ್ಞಾನ ವಿದ್ಯಮಾನ’ [ರಿನೈಸೆನ್ಸ್] ಗಳು: ಫುಲೇ ದಂಪತಿಗಳ ಚಿಂತನೆ-ಕಾರ್ಯಾಚರಣೆಗಳಿಂದ ಚೋದಿತವಾದ ‘ಮಹಾರಾಷ್ಟ್ರ ಜ್ಞಾನ ವಿದ್ಯಮಾನ’ ಹಾಗು ಈಶ್ವರಚಂದ್ರ ವಿದ್ಯಾಸಾಗರರಿಂದ ರವೀಂದ್ರನಾಥ ಟಾಕೂರರ ಚಿಂತನೆ ಮತ್ತು ಕಾರ್ಯಾಚರಣೆಗಳಿಂದ ಪ್ರೇರಿತವಾದ ‘ಬಂಗಾಳ ಭೌದ್ಧಿಕ ವಿದ್ಯಮಾನ’. ಎಂ.ಕೆ.ಗಾಂಧಿ-ಬಿ.ಆರ್.ಅಂಬೇಡ್ಕರ್ ಅವರ ನಡುವಿನ ಪ್ರಖರ ವಾಗ್ವಾದಗಳು ಈ ಎರಡು ಚಿಂತನೆ-ಆಚರಣೆಗಳ ಚೌಕಟ್ಟಲ್ಲಿ ನಡೆದವು. ಈ ಚಿಂತನೆಗಳು ಜೀವಂತವಾಗಿದ್ದ ಎರಡೂ ನಾಡುಗಳಿಂದ ಇವುಗಳಿಗೆ ‘ವೈದಿಕಶಾಹಿ’ ಪ್ರತಿಕ್ರಿಯೆಗಳೂ ಬಂದವು. ಅವುಗಳಲ್ಲಿ ಒಂದು ಮಹಾರಾಷ್ಟ್ರದಿಂದ ಹುಟ್ಟಿದ ’ಹಿಂದುತ್ವ ಬಹಸಂಖ್ಯಾತವಾದ’. 1920ರಲ್ಲೇ ಹುಟ್ಟಿಬಂದ ಈ ‘ವೈದಿಕಶಾಹಿ ಪ್ರತಿಕ್ರಾಂತಿ’ಯು ತಾನು 1950ರವರೆಗೆ ನಡೆಸಿದ ಕಾರ್ಯಾಚರಣೆಗಳಿಂದ ಸ್ವತಂತ್ರ ಭಾರತದ ಪ್ರಭುತ್ವದ ನೀತಿ ನಡಾವಳಿಗಳ ಮೇಲೆ ಹಿಡಿತ ಸಾಧಿಸಲು ವಿಫಲವಾದರೂ, ಸಮಾಜದಲ್ಲಿ ‘ಪ್ರತಿಕ್ರಾಂತಿಯ ಜ್ಞಾನ ಸಂವಹನೆ’ಯಲ್ಲಿ ಬಹು ಯಶಸ್ವ್ವಿಯಾಗಿದ್ದವು. ಸ್ವಾತಂತ್ರ್ಯೋತ್ತರ ಭಾರತದ ಜಾತ್ಯತೀತತೆಯ ವೈಚಾರಿಕತೆ ಹಾಗು ಕಾರ್ಯಾಚರಣೆಗಳಿಗೆ ‘ಮಹಾರಾಷ್ಟ್ರ –ಬಂಗಾಳ ಜ್ಞಾನ ವಿದ್ಯಮಾನ’ಗಳು ಬುನಾದಿಯಾಗಿ, ‘ಮಹಾರಾಷ್ಟ್ರ ವೈದಿಕಶಾಹಿ’ಯ ಕಾರ್ಯಾಚರಣಾ ತಂತ್ರಗಳು ಎಚ್ಚರಿಕೆಯಾಗಿ ಇರಬೇಕಾಗಿತ್ತು. ಇವರಡೂ ಬಗ್ಗಡವಾದ ಭೌದ್ಧಿಕತೆ ಹಾಗು ಕಾರ್ಯಾಚರಣೆಗಳಲ್ಲಿ ತೊಡಗಿದ ಜಾತ್ಯತೀತ ಚಳುವಳಿಗಳು ‘ವೈದೀಕಶಾಹಿ ಪ್ರತಿಕ್ರಾಂತಿ’ಯ ದಾಂಗುಡಿಯನ್ನು ಹಗುರದಲ್ಲಿ ಪರಿಗಣಿಸಿದವು. 100 ವರ್ಷಗಳಲ್ಲಿ ಹರಳುಗಟ್ಟಿದ ‘ವೈದಿಕಶಾಹಿ ವಿರೋಧಿ ಜಾತ್ಯತೀತತೆ’ಯ ಲೌಕಿಕ ಸಮಾನತೆಯ ಹೋರಾಟದಲ್ಲಿ ‘ಅವೈದಿಕಶಾಹಿ ಪ್ರತಿರೋಧ’ವು ತಾನೇ ತಾನಾಗಿ ಮಿಳಿತವಾಗಿತ್ತು. ಆ ಮಿಳಿತದ ಹೊರತಾಗಿ ಒಂದು ‘ವೈದಿಕಶಾಹಿ ವಿರೋಧಿ ಜಾತ್ಯತೀತ ಜನಾನುರಾಗಿ’ ಬೌದ್ಧಿಕ ನಿರೂಪಣೆಯು ಸಾಧ್ಯವಿಲ್ಲ ಎಂಬ ಅರಿವು ಜಾತ್ಯತೀತ ಬೌದ್ಧಿಕತೆ-ಕಾರ್ಯಾಚರಣೆಗಳಿಗೆ ಇಲ್ಲದ್ದೇಹೋಗಿದ್ದು ಆಧುನಿಕ ‘ಮಹಾರಾಷ್ಟ್ರ ವೈದಿಕಶಾಹಿ ಪ್ರತಿಕ್ರಾಂತಿ’ಯ ಪ್ರಗತಿಗೆ ವರವಾಯಿತು. ಇದು ಜಾತ್ಯತೀತ ಸೋಲಿಗೆ ಮೂರನೇ ಊಹಾ ಪ್ರಮೇಯ.

ಈ ಮೂರು ಊಹಾ ಪ್ರಮೇಯಗಳಿಗೆ ಉದಾಹರಣೆಯಾಗಿ ಹತ್ತು ಹಲವು ಕಾರ್ಯಾಚರಣೆಗಳನ್ನು, ಬದುಕಿನ ಕಥನಗಳನ್ನು ಮತ್ತು ಕಲಾ-ಸೃಜನಶೀಲ ಕೃತಿಗಳನ್ನು ನೀಡಬಹುದು. ಇಂದಿಗೂ ಪ್ರಸ್ತುತವಾದ ಉದಾಹರಣೆಗಳನ್ನು ನೀಡಬಹುದು. ಆ ಮೂಲಕ, ಯೋಗೇಂದ್ರ ಅವರು ಆಶಿಸುವ ‘ಮತ ಸಹಿಷ್ಣು ಜಾತ್ಯತೀತತೆ’ಯ ಹೊಸ ಕಾರ್ಯಸಾಧ್ಯ ಆದರ್ಶಗಳ ಬೀಜ ಕಾಣಬಹುದು. ಸೋತು ಸುಣ್ಣವಾದ ಜಾತ್ಯತೀತೆಯ ಮರುಕಟ್ಟುವಿಕೆಯಲ್ಲೇ ಹೊಸ ‘ಲೌಕಿಕ ಸಮಾನತೆಯ ಹೊಸ ಮತ’ಕ್ಕೆ ದಾರಿಯೂ ಕಾಣಬಹುದು. ಆತ್ಮಕ್ಕೆ ಸಾವಿಲ್ಲ ಎಂಬುದು ‘ಹಿಂದು ಮತ ನಂಬಿಕೆ’ಯಲ್ಲವೇ!

  • ಪ್ರೊ.ಕೆ.ಫಣಿರಾಜ್, (ಕೋಮು ಸೌಹಾರ್ದ ಚಳವಳಿಯಲ್ಲಿ ತಳಮಟ್ಟದ ಆಕ್ಟಿವಿಸ್ಟ್ ಥರಾ ಕೆಲಸ ಮಾಡುತ್ತಾ ಅದರ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕೆ.ಫಣಿರಾಜ್ ಅವರ ಆಸಕ್ತಿಯ ಮತ್ತು ಕಾಳಜಿಯ ಕ್ಷೇತ್ರಗಳು ಹಲವು. ನಮ್ಮ ಕಾಲದ (ಗ್ರಾಮ್ಶಿ ಹೇಳಿದ) ಆರ್ಗಾನಿಕ್ ಇಂಟಲೆಕ್ಚುವಲ್‌ಗಳಲ್ಲಿ ಅವರೊಬ್ಬರು ಎಂದರೆ, ಗ್ರಾಮ್ಶಿ ಬಗ್ಗೆ ಪುಸ್ತಕ ಬರೆದ ಫಣಿರಾಜ್ ಅವರು ಮುನಿಸು ತೋರಬಹುದು.)

ಇದನ್ನೂ ಓದಿ: ಮೋದಿ ಎರಡನೆಯ ಬಾರಿಗೆ ಅಧಿಕಾರಕ್ಕೆ ಬರಲು ಯಾರು ಕಾರಣರು? – ಎಚ್‌.ಎಸ್ ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...