Homeನೂರರ ನೋಟಮೋದಿ ಎರಡನೆಯ ಬಾರಿಗೆ ಅಧಿಕಾರಕ್ಕೆ ಬರಲು ಯಾರು ಕಾರಣರು? - ಎಚ್‌.ಎಸ್ ದೊರೆಸ್ವಾಮಿ

ಮೋದಿ ಎರಡನೆಯ ಬಾರಿಗೆ ಅಧಿಕಾರಕ್ಕೆ ಬರಲು ಯಾರು ಕಾರಣರು? – ಎಚ್‌.ಎಸ್ ದೊರೆಸ್ವಾಮಿ

- Advertisement -
- Advertisement -

ನಮ್ಮ ಸಂಸ್ಕೃತಿಗೆ ಪೂರಕವಾಗಿ ಪರಿಸರಕ್ಕೆ ಎರವಾಗದಂತೆ ನಮ್ಮ ಪೂರ್ವಿಕರು ಬದುಕಿದರು. ನೆಲ, ಜಲ, ವಾಯು ಎಲ್ಲ ಮಾನವರ ಉಪಯೋಗಕ್ಕೆ ಇದೆ ಎಂಬುದು ನಮ್ಮ ತಲೆಮಾರಿಗೆ ಗೊತ್ತೇ ಇಲ್ಲ. ಹಾಲಿಗೂ, ನೀರಿಗೂ ಒಂದೇ ಬೆಲೆ ಆಗುತ್ತಿದ್ದರೂ ಇದೇಕೆ ಹೀಗಾಯಿತು ಎಂದು ಯಾರು ಚಿಂತಿಸುತ್ತಿಲ್ಲ. ಶಬ್ದವಿಲ್ಲದ ನಿಶ್ಯಬ್ದ ಯುದ್ಧವನ್ನು ನಮ್ಮ ಬಂಡವಾಳಶಾಹಿಗಳು, ಕಾರ್ಪೊರೇಟರ್‌ಗಳು, ಬಹುರಾಷ್ಟ್ರೀಯ ಕಂಪನಿಗಳು ಜನಸಾಮಾನ್ಯರ ಮೇಲೆ ಪ್ರಾರಂಭಿಸಿದ್ದಾರೆ. ಇಂದು ನಾವು ಕೇಳುವ ಸಂಗೀತ, ನೋಡುವ ಸಿನಿಮಾ, ನಮ್ಮ ಉಡುಪು, ಚಿಂತನೆಯ ಮಾದರಿಗಳನ್ನು ಗಮನಿಸಿದರೆ ನಮ್ಮ ಅಭಿವೃದ್ಧಿ ಯಾವ ಜಾಡನ್ನು ಹಿಡಿಯುತ್ತಿದೆ ಎಂಬುದು ನಮಗೆ ಮನವರಿಕೆಯಾಗಬಹುದು.

ಡಿವಿಜಿಯವರು ಹೇಳುತ್ತಾರೆ ಈಗ ಧನಸಂಪತ್ತು ಹೆಚ್ಚಿದೆ. ಧಾನ್ಯಸಂಪತ್ತು ಕುಸಿದಿದೆ. ಸೋಪು, ಪೌಡರ್ ಹೆಚ್ಚಿದೆ. ಮನಸ್ಸಿನ ನಿರ್ಮಲತೆ ಕುಗ್ಗಿದೆ. ಭೋಗ ಹೆಚ್ಚಿದೆ ನೆಮ್ಮದಿ ಕುಗ್ಗಿದೆ ಎಂದು.

ಅನ್ನ ತಿನ್ನುವ ಬಾಯಿಗೆ ನೂಡಲ್ಸ್, ಪಿಜ್ಜಾಗಳನ್ನು ತುರುಕಲಾಗುತ್ತಿದೆ. ಎಳೆನೀರು, ಮಜ್ಜಿಗೆ ಕುಡಿಯುತ್ತಿದ್ದ ಬಾಯಿಗೆ ಕೋಕಕೋಲಾ ಸುರಿಯಲಾಗುತ್ತಿದೆ. ಚಕ್ಕುಲಿ, ಕೋಡ್‌ಬಳೆಯ ಬದಲು ಲೇಸ್, ಕುರ್ಕುರೆ, ಚಿಪ್ಸ್  ಪ್ಯಾಕೇಟ್, ಕೆಂಟಕಿ ಚಿಕನ್ ನೀಡಲಾಗುತ್ತಿದೆ. ಅರಿಶಿನ, ಶ್ರೀಗಂಧ ಬಳಿದುಕೊಳ್ಳುತ್ತಿದ್ದ ಮುಖಕ್ಕೆ ಹತ್ತಾರು ಕ್ರೀಮ್‌ಗಳನ್ನು ಬಳಿದುಕೊಳ್ಳಲಾಗುತ್ತಿದೆ. ಕರಿಯರನ್ನು 15 ದಿನಗಳಲ್ಲಿ ಬಿಳಿಯರನ್ನಾಗಿ ಮಾಡಲು, ಬೊಜ್ಜು ಬೆಳೆದವರನ್ನು 10 ದಿನಗಳಲ್ಲಿ ಸಪೂರರನ್ನಾಗಿ ಮಾಡಲು, ಬೋಳು ತಲೆಯವರಿಗೆ ಕೂದಲು ಚಿಗುರುವಂತೆ ಮಾಡುವ ಜಾಹಿರಾತುಗಳು ಹೊರಬೀಳುತ್ತಿವೆ. ಇಡೀ ರಾತ್ರಿ ಭೋಗಸುಖ ಅನುಭವಿಸುವಂತೆ ಮಾಡಲು ಮಾತ್ರೆಗಳನ್ನು ತಯಾರಿಸಲಾಗಿದೆ ಎಂಬ ಜಾಹಿರಾತು ಹೊರಬೀಳುತ್ತಿದೆ. ಮಧ್ಯಮ ವರ್ಗದ ಜನ ಇದಕ್ಕೆಲ್ಲ ಬಲಿಪಶುಗಳಾಗುತ್ತಿದ್ದಾರೆ.

ನಮ್ಮ ಮಾಧ್ಯಮಗಳು ಈ ಜಾಹಿರಾತುದಾರರ ಏಜೆಂಟರುಗಳಂತೆ ಕೆಲಸ ಮಾಡುತ್ತಿವೆ. ಉಳ್ಳವರ ಹಿಡಿ ಜನರ ನೆಮ್ಮದಿಯ ಬದುಕಿಗಾಗಿ ಲಕ್ಷಾಂತರ ಜನ ಬಡವರ ಬದುಕನ್ನು ಕಿತ್ತುಕೊಳ್ಳುವ ಸಾಧನೆ ಈ ಅಭಿವೃದ್ಧಿಯಂತ್ರವಾಗಿದೆ.

ಕೋಟ್ಯಂತರ ಜನಕ್ಕೆ ಬದುಕು ದುರ್ಭರವಾಗಿದೆ ಆದರೆ 120 ಕೋಟಿ ಜನರ ಕೈಗೆ ಮೊಬೈಲ್ ನೀಡಲಾಗಿದೆ. ಭಾರತದ ಅಭಿವೃದ್ಧಿಯನ್ನು ಮೊಬೈಲ್ ಸಂಖ್ಯೆಯ ಆಧಾರದ ಮೇಲೆ ಅಳೆಯೋಣವೇ? ಬಡತನ ಯಾರಿಂದ ಸೃಷ್ಟಿಯಾಗಿದೆ? ಜನ ಬಡವರಾಗಲು ಬಯಸಿ ಬಡತನ ಅನುಭವಿಸುತ್ತಿದ್ದಾರೆಯೆ? ಬಡತನ ಸರ್ಕಾರದಿಂದ ಸೃಷ್ಟಿಯಾಗುತ್ತದೆ. ಶ್ರೀಮಂತರನ್ನ ಓಲೈಸುವ ಸರ್ಕಾರದ ಧೋರಣೆಯಿಂದ ಬಡತನ ಸೃಷ್ಟಿಯಾಗುತ್ತದೆ. ಮಲತಾಯಿ ಧೋರಣೆಯಿಂದ ಬಡವರನ್ನು ಸರ್ಕಾರ ನೋಡುವುದರಿಂದ ಬಡತನ ಸೃಷ್ಟಿಯಾಗುತ್ತದೆ ಎಂಬ ಕಟುಸತ್ಯವನ್ನು ಮೋದಿ ಮಹಾಶಯ ಒಪ್ಪುವುದೇ ಇಲ್ಲ. ನಮ್ಮ ರಾಜ್ಯಾಂಗ ಸಮಾಜವಾದವನ್ನು ಪ್ರತಿಪಾದಿಸುತ್ತದೆ. ಆದರೆ ನಮ್ಮ ಸರ್ಕಾರಗಳು ಸಮಾಜವಾದದಿಂದ ದೂರ ಸರಿಯುತ್ತಿವೆ. ಬಂಡವಾಳಶಾಹಿ ಪದ್ಧತಿಗೆ ಜಾರುತ್ತಿವೆ.

ಕೆಲವರು ಹೇಳುತ್ತಾರೆ ಸರ್ಕಾರ ನಡೆಸುವವರು ರಿಲಾಯನ್ಸ್ ಕಂಪೆನಿಯವರು ಮತ್ತು ಅದಾನಿ ಎಂದು. ಅದೂ ನಿಜ ಇರಬಹುದು. ಈ ಕಳೆದ 25ವರ್ಷಗಳಲ್ಲಿ ಖಾಸಗಿ ಸೆಕ್ಟರಿನ ಪ್ರಭಾವ ತುಂಬ ಬೆಳೆದಿದೆ. ಸರ್ಕಾರ ಅವರು ಹೇಳಿದಂತೆ ಶಿರಸಾವಹಿಸಿ ಕೆಲಸ ಮಾಡುತ್ತದೆ.

ಸರ್ಕಾರ ಧರ್ಮಛತ್ರವಲ್ಲ. ಕಲ್ಲಿದ್ದಲು ಗಣಿ ಹರಾಜು ಹಾಕುವುದು, ಹಲವು ರೈಲ್ವೆ ಮಾರ್ಗಗಳನ್ನು ದೀರ್ಘಕಾಲದ ಗುತ್ತಿಗೆ ಆಧಾರದ ಮೇಲೆ ಖಾಸಗಿಗೆ ಬಿಟ್ಟುಕೊಡುವುದು, ಆ ಮೂಲಕ ತನ್ನ ಜವಾಬ್ದಾರಿಯಿಂದ ಕಳಚಿಕೊಳ್ಳುವುದು ಆಡಳಿತ ನಡೆಸುವವರ ಹೊಣೆಗೇಡಿತನವನ್ನು ಸೂಚಿಸುತ್ತದೆ. ಸಾರ್ವಜನಿಕ ಜೀವನದಲ್ಲಿ
hypocrisy ಬೆಳೆಸುವ ಹುನ್ನಾರ ಕಾಲಕ್ರಮದಲ್ಲಿ ತಿರುಗುಬಾಣವಾಗಿಬಿಡುವ ಸಾಧ್ಯತೆಗಳಿವೆ.


ಇದನ್ನೂ ಓದಿ: ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆ: ಹೊಸ ಬಾಟಲ್‌ನಲ್ಲಿ ಹಳೆ ಮದ್ಯ -ಎಚ್.ಎಸ್ ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...