Homeಚಳವಳಿಭಾರತ ಜೋಡೋದ ಸಿದ್ಧಾಂತ: ಅವರು ಒಡೆಯುವರು, ನಾವು ಜೋಡಿಸುವೆವು

ಭಾರತ ಜೋಡೋದ ಸಿದ್ಧಾಂತ: ಅವರು ಒಡೆಯುವರು, ನಾವು ಜೋಡಿಸುವೆವು

- Advertisement -
- Advertisement -

“ಇದೇನು ಭಾರತ ಜೋಡೋ ಎಂಬುದನ್ನು ಶುರು ಹಚ್ಕೊಂಡಿದೀರಿ, ಆಂದೋಲನಜೀವಿಗಳೆ? ಯಾವ ಭಾರತವನ್ನು ಜೋಡಿಸುವಿರಿ ನೀವು? ನೋಡುತ್ತಿಲ್ಲವೇ, ದೇಶ ತನ್ನಿಂತಾನೇ ಒಂದುಗೂಡುತ್ತಿದೆ. ಈ ದೇಶ ಜೋಡಿಸುವುದು ನಿಮಗ್ಯಾಕೆ ಬೇಕಿದೆ?”

ಯಾವಾಗಿನಿಂದ ನಾನು ‘ಭಾರತ ಜೋಡೊ ಯಾತ್ರಾ’ದೊಂದಿಗೆ ಸೇರಿಕೊಳ್ಳುವುದಾಗಿ ಸಾರ್ವಜನಿಕ ಘೋಷಿಣೆ ಮಾಡಿದೆನೋ, ಆವಾಗಿನಿಂದ ಇಂತಹ ಪ್ರಶ್ನೆಗಳು ಬರುತ್ತಲೇ ಇವೆ. ಸಾಮಾಜಿಕ ಜಾಲತಾಣಗಳ ಮೂಲಕ ಬರುವ ಈ ಪ್ರಶ್ನೆಗಳು ಬಹುತೇಕವಾಗಿ ತೀಕ್ಷ್ಣವಾಗಿಯೂ ಹಾಗೂ ತಮಾಷೆಯಾಗಿಯೂ ಇರುತ್ತವೆ. ಈ ಯಾತ್ರೆಯ ಘೋಷಣೆಯನ್ನು ಕಾಂಗ್ರೆಸ್ ಪಕ್ಷ ಮಾಡಿದೆಯಾದರೂ, ಈ ದೇಶದ ಜನಾಂದೋಲನಗಳ ದೊಡ್ಡ ಭಾಗ, ಮುಂಚೂಣಿಯಲ್ಲಿರುವ ಚಿಂತಕರು ಹಾಗೂ ಗಣ್ಯ ವ್ಯಕ್ತಿಗಳೂ ಇದನ್ನು ಸ್ವಾಗತಿಸಿದ್ದಾರೆ ಮತ್ತು ಸಮರ್ಥನೆ ಮಾಡಿದ್ದಾರೆ. ಅತ್ತ ಅನೇಕ ಜನಾಂದೋಲನಗಳು ಹಾಗೂ ಜನರ ಸಂಘಟನೆಗಳು ಈ ಯಾತ್ರೆಯ ಸಮರ್ಥನೆ ಮಾಡುತ್ತ ಇದಕ್ಕೆ ಸಮಾನಾಂತರವಾಗಿ “ದ್ವೇಷ ಬಿಡಿ, ಭಾರತ ಜೋಡೊ” ಅಭಿಯಾನ ಘೋಷಣೆ ಮಾಡಿದ್ದಾರೆ. ವೈಚಾರಿಕವಾಗಿ ಬೇರೆಬೇರೆ ದಿಕ್ಕುಗಳಲ್ಲಿ ನಡೆಯುವ ಈ ಧ್ವನಿಗಳಲ್ಲಿ ‘ಭಾರತ ಜೋಡೊ’ದ ಮನವಿ ಕಾಣಿಸಿಕೊಂಡಿರುವುದು ಕೇವಲ ಸಂಯೋಗವಲ್ಲ. ಆದರೆ ಎಲ್ಲರೂ ಇದರ ಬೇರೆಬೇರೆ ಅರ್ಥಗಳನ್ನು ಹುಡುಕುತ್ತಿದ್ದಾರೆ.

“ಹಿಂದೂ ಮುಸ್ಲಿಂ ಏಕತೆಯ ಯಾತ್ರೆ ಮಾಡುತ್ತಿದ್ದೀರಲ್ಲವಾ ನೀವು? ಇದರ ಬಹಳ ಅವಶ್ಯಕತೆ ಇದೆ” ಈ ಸಂದೇಶವನ್ನು ಒಬ್ಬ ಹಿರಿಯ ಗಾಂಧಿವಾದಿ ನೀಡಿದರು. “ಇಲ್ಲ. ಅದು ಇದೆ, ಆದರೆ ಅದು ಮುಖ್ಯ ವಿಷಯವಲ್ಲ” ನಾನು ಅಳಕುತ್ತಲೇ ಉತ್ತರ ನೀಡಿದೆ. ನಿಸ್ಸಂದೇಹವಾಗಿಯೂ ಹಿಂದೂ ಮುಸ್ಲಿಂ ಏಕತೆಯನ್ನು ಗಟ್ಟಿಗೊಳಿಸುವುದು ಭಾರತಮಾತೆಯ ಕರೆಯಾಗಿದೆ. ಭಾರತದ ವಿಭಜನೆಯ ದುರಂತದ ನಂತರ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಇಷ್ಟೊಂದು ಅಸಮಧಾನ ಮತ್ತು ದ್ವೇಷ ಹರಡುತ್ತಿರುವ ಇಷ್ಟು ದೊಡ್ಡ ಮಟ್ಟದ, ಇಷ್ಟು ವ್ಯವಸ್ಥಿತವಾದ, ಇಷ್ಟು ಯೋಜಿತವಾದ ಹಾಗೂ ಸರಕಾರದ ಪೋಷಣೆಯುಳ್ಳ ಪ್ರಯತ್ನ ಮತ್ತೆಂದೂ ಆಗಿದ್ದಿಲ್ಲ. ನಿಸ್ಸಂದೇಹವಾಗಿಯೂ ಸಮುದಾಯಗಳನ್ನು ಪರಸ್ಪರ ಕಿತ್ತಾಡುವಂತೆ ಪ್ರಚೋದನೆ ನೀಡುವುದು ದೇಶದ್ರೋಹವಾಗಿದೆ ಹಾಗೂ ಅವುಗಳನ್ನು ಜೋಡಿಸುವುದು ದೇಶಭಕ್ತಿಯ ಮೊದಲ ಧರ್ಮವಾಗಿದೆ.

ಆದರೆ, ಇಂದು ಮೊದಲ ಸವಾಲು ಹಿಂದೂ ಹಾಗೂ ಮುಸ್ಲಿಂರನ್ನು ಜೋಡಿಸುವುದು ಆಗಿಲ್ಲ. ಎಲ್ಲಕ್ಕಿಂತ ದೊಡ್ಡ ಸವಾಲು, ಹಿಂದೂಗಳನ್ನು ಹಿಂದೂ ಧರ್ಮದ ಆತ್ಮದ ಜೊತೆಗೆ ಹಾಗೂ ಮುಸಲ್ಮಾನರನ್ನು ನಿಜವಾದ ಇಸ್ಲಾಂನೊಂದಿಗೆ ಜೋಡಿಸುವುದಾಗಿದೆ. ಸ್ವಾಮಿ ವಿವೇಕಾನಂದರ ಪ್ರಕಾರ, ಹಿಂದೂ ಧರ್ಮದ ಶ್ರೇಷ್ಠತೆಯು ಇತರ ಧರ್ಮಗಳಗಿಂತ ತನ್ನ ಮತವನ್ನು ಮೇಲೆ ನಿಲ್ಲಿಸುವುದರಲ್ಲಿ ಇಲ್ಲ, ಅದರ ಬದಲಿಗೆ ಹಿಂದೂ ಧರ್ಮದ ಶ್ರೇಷ್ಠತೆಯು ಜಗತ್ತಿನ ಎಲ್ಲಾ ಧರ್ಮಗಳ ಸತ್ಯವನ್ನು ಸ್ವೀಕರಿಸುವುದರಲ್ಲಿ ಅಡಗಿದೆ. ಕುರ್‌ಆನ್ ಶರೀಫ್‌ದ ಸಂದೇಶವು ಕಾಫಿರನ ರುಂಡವನ್ನು ಮುಂಡದೊಂದಿಗೆ ಬೇರ್ಪಡಿಸುವುದು ಆಗಿಲ್ಲದೇ, ಪ್ರತಿಯೊಬ್ಬ ವ್ಯಕ್ತಿಯ ಮನಸ್ಸನ್ನು ಜೋಡಿಸುವುದು ಆಗಿದೆ. ಎಲ್ಲಿಯವರೆಗೆ ಪ್ರತಿಯೊಂದು ಧರ್ಮದ ಅನುಯಾಯಿ ತನ್ನತನ್ನ ಧರ್ಮದ ಸಂಕೀರ್ಣವಾದ ವ್ಯಾಖ್ಯಾನವನ್ನು ಅರಿತು, ಧಾರ್ಮಿಕ ಗುತ್ತಿಗೆದಾರರು ಹಾಗೂ ಧರ್ಮದ ಹೆಸರಿನಲ್ಲಿ ದ್ವೇಷವನ್ನು ಬಿತ್ತುವ ವ್ಯಾಪಾರಿಗಳಿಂದ ಮುಕ್ತವಾಗುವುದಿಲ್ಲವೋ, ಅಲ್ಲಿಯವರೆಗೆ ದೇಶ ಒಂದಾಗಲು ಸಾಧ್ಯವಿಲ್ಲ. ಹಾಗಾಗಿಯೇ ಭಾರತ ಜೋಡೊದ ಮೊದಲ ಅರ್ಥ, ಧರ್ಮವನ್ನು ಅದರ ಮರ್ಮದೊಂದಿಗೆ ಜೋಡಿಸುವುದಾಗಿದೆ.

ಯಾವ ಮಾತು ಧರ್ಮಕ್ಕೆ ಅನ್ವಯವಾಗುತ್ತೋ, ಅದೇ ಜಾತಿ, ಕ್ಷೇತ್ರ, ಭಾಷೆ ಹಾಗೂ ಭೂಷಣಗಳ ಭೇದಗಳ ಬಗ್ಗೆಯೂ ನಿಜವಾಗಿರುತ್ತದೆ. ಭಾರತ ಜೋಡೊದ ಅರ್ಥವು, ಪ್ರದೇಶ ಮತ್ತು ಭಾಷೆಯ ಕಂದರವನ್ನು ಕಡಿಮೆ ಮಾಡುವುದು. ಆದರೆ ಇದಕ್ಕಾಗಿ ತನ್ನ ಪ್ರಾದೇಶಿಕ ಅಸ್ಮಿತೆಯನ್ನು ಮರೆತುಬಿಡುವ ಹಾಗೂ ಭಾಷಾ ಸಂಸ್ಕೃತಿಯನ್ನು ಬಿಟ್ಟುಬಿಡುವಂತೆ ಮನವಿ ಮಾಡುವುದು ಅಥವಾ ಒತ್ತಾಯ ಮಾಡುವುದು ಮಾರಕವಾಗಲಿದೆ. ಅದರಲ್ಲೂ ವಿಶೇಷವಾಗಿ ಉತ್ತರಭಾರತದ ಹಿಂದಿ ಭಾಷಿಕರು ಇತರ ದೇಶವಾಸಿಗಳಿಗೆ ಕ್ಷೇತ್ರೀಯತೆ (ಪ್ರಾದೇಶಿಕತೆ)ಯನ್ನು ಬಿಡುವ ಹಾಗೂ ಬಾಷೆಯ ಸಂಕೀರ್ಣತೆಯಿಂದ ಹೊರಬರುವ ಉಪದೇಶ ಮಾಡಿದರೆ ಅದು ಸರಿಯಾದ ಮಾರ್ಗವಲ್ಲ. ಭಾರತವನ್ನು ಜೋಡಿಸಲು ಎಲ್ಲಕ್ಕಿಂತ ಮೊದಲು ಹಿಂದಿ ಭಾಷಿಕರು ‘ತಾವು ದೇಶದ ಮಾಲೀಕರು ಹಾಗೂ ಇತರರೆಲ್ಲ ಬಾಡಿಗೆದಾರರು’ ಎಂಬ ಭಾವನೆಯಿಂದ ಹೊರಬರಬೇಕು. ಈ ನಿಟ್ಟಿನಲ್ಲಿ ನೋಡಿದರೆ, ಹಿಂದಿಗಿಂತ ತುಲನಾತ್ಮಕವಾಗಿ ಪ್ರಾಚೀನವಾದ ಮತ್ತು ಸಮೃದ್ಧವಾದ ತಮಿಳ ಭಾಷೆ ಮತ್ತು ಸಂಸ್ಕೃತಿಗೆ ನಮಿಸುತ್ತ ಕನ್ಯಾಕುಮಾರಿಯಿಂದ ಶುರುವಾಗುತ್ತಿರುವುದು ಒಂದು ಸುಂದರ ಸಂಯೋಗವೇ ಆಗಿದೆ.

ಅದೇ ರೀತಿಯಲ್ಲಿ ಜಾತಿ ಭೇದದ ಕಂದರವನ್ನು ಇಲ್ಲವಾಗಿಸುವ ಅರ್ಥ, ನಾವು ಜಾತಿ ಕಡೆಗೆ ಕಣ್ಣು ಮುಚ್ಚುವುದು ಅಥವಾ ನಮ್ಮ ಹೆಸರಿನಿಂದ ಜಾತಿಸೂಚಕ ಪದಗಳನ್ನು ಸೇರಿಸುವುದು ಯಾ ಬಿಡುವುದು ಅಲ್ಲ. ನಮ್ಮ ದೇಶದಲ್ಲಿ ತನ್ನ ಜಾತಿ ಗೊತ್ತಿಲ್ಲದೇ ಇರುವ ವಿಶೇಷಾಧಿಕಾರ ಮೇಲ್ಜಾತಿಯ ನಗರಗಳಲ್ಲಿರುವ ಜನರಿಗೆ ಮಾತ್ರ ಇರುತ್ತದೆ. ಜಾತಿ ಸೂಚಕ ಹೆಸರನ್ನು ಬಿಡುವುದರಿಂದ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಜಾತಿಯ ಕಂದರವನ್ನು ಇಲ್ಲವಾಗಿಸುವ ದಾರಿ, ಸಮಾಜದಲ್ಲಿ ಇಂದಿಗೂ ಜಾತಿಯ ಆಧಾರದ ಮೇಲೆ ನಿಷೇಧ, ವಂಚನೆ ಮತ್ತು ವಿಶೇಷಾಧಿಕಾರ ಮುಂತಾದವುಗಳ ಅವಶೇಷಗಳನ್ನು ಕೊನೆಗೊಳಿಸುವುದರಿಂದ ಮಾತ್ರ ಸಾಧ್ಯವಾಗಬಲ್ಲದು. ಅಂದರೆ ಜಾತಿ ವ್ಯವಸ್ಥೆಯ ಮೇಲುಕೀಳುಗಳನ್ನು ನಾಶಗೊಳಿಸಬೇಕು. ಭಾರತ ಜೋಡೊದ ಅರ್ಥ ಜಾತಿ ಒಡೆಯುವುದು ಆಗುವುದು.

ಭಾರತ ಜೋಡೊ ಎಂಬುದು ಕೇವಲ ಸಾಂಸ್ಕೃತಿಕ ಅಸ್ಮಿತೆಯ ಆಂದೋಲನವಾಗಲು ಸಾಧ್ಯವಿಲ್ಲ. ಎಲ್ಲಿಯವರೆಗೆ ದೇಶದ ಅಂತಿಮ ವ್ಯಕ್ತಿಯ ಜೀವನವನ್ನು ಸುಖಸಂತೋಷದ ಜೊತೆಗೆ ಜೋಡಿಸುವುದಿಲ್ಲವೋ ಅಲ್ಲಿಯವರೆಗೆ ಭಾರತ ಜೋಡೊ ಎಂಬುದು ಕೇವಲ ಘೋಷಣೆಯಾಗಿ ಉಳಿಯಲಿದೆ. ಭಾರತ ಜೋಡೊವನ್ನು ಸಾಕಾರಗೊಳಿಸಲು ನಾವುಗಳು ಒಂದು ಕಹಿ ಸತ್ಯವನ್ನು ಎದುರಿಸುವುದು ಅತ್ಯಗತ್ಯವಾಗಿದೆ. ಕಳೆದ 2 ವರ್ಷಗಳಲ್ಲಿ ದೇಶದ 97% ಜನರ ಆದಾಯ ಕಡಿಮೆಯಾಗಿದೆ, ಆದರೆ ಅದೇ ಸಮಯದಲ್ಲಿ ಮುಕೇಶ್ ಅಂಬಾನಿಯ ಸಂಪತ್ತು ಮೂರು ಪಟ್ಟು ಹೆಚ್ಚಾಗಿದೆ ಹಾಗೂ ಅದಾನಿಯ ಸಾಮ್ರಾಜ್ಯ 14 ಪಟ್ಟು ದೊಡ್ಡದಾಗಿದೆ. ಇತ್ತೀಚಿಗೆ ಬೆಳಕಿಗೆ ಬಂದಿದ್ದೇನೆಂದರೆ, ದೇಶದ ಶ್ರೀಮಂತ ವರ್ಗದಲ್ಲಿ ಭಾರತ ಛೋಡೋ (ಬಿಡುವ) ಆಂದೋಲನ ನಡೆಯುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಲಕ್ಷಾಂತರ ಭಾರತೀಯರು ದೇಶದ ನಾಗರಿಕತೆಯನ್ನು ಬಿಟ್ಟುಕೊಟ್ಟಿದ್ದಾರೆ. ಭಾರತದ ಎಲ್ಲಾ ಶ್ರೀಮಂತರು ದೇಶದ ಹೊರಗೆ ಹೂಡಿಕೆ ಮಾಡುತ್ತಿದ್ದಾರೆ. ಈ ಸರಕಾರದ ‘ನಾವಿಬ್ಬರು ನಮ್ಮ ಇಬ್ಬರು’ ಆರ್ಥಿಕ ನೀತಿಯಿಂದ ದೇಶವು ಎರಡು ಹೋಳಾಗುತ್ತಿದೆ. ಇದಕ್ಕೆ ಎದರು ನಿಂತು ಸವಾಲು ಒಡ್ಡದೇ ಭಾರತ ಜೋಡೊದ ಕನಸು ಕಾಣುವುದೂ ವ್ಯರ್ಥ. ಅಭೂತಪೂರ್ವ ನಿರುದ್ಯೋಗ, ಹೆಚ್ಚುತ್ತಿರುವ ಬೆಲೆ ಏರಿಕೆ ಹಾಗೂ ಸಾಮಾನ್ಯ ವ್ಯಕ್ತಿಯ ಅಸಾಹಯಕತೆಯ ಈ ಯುಗದಲ್ಲಿ ಭಾರತ ಜೋಡೊದ ಅರ್ಥ ಲೂಟಿಕೋರರ ಸ್ಥಾನದಲ್ಲಿ ಕಾರ್ಮಿಕರನ್ನು ಆರ್ಥಿಕ ನೀತಿಯ ಕೇಂದ್ರದಲ್ಲಿ ಇರಿಸುವುದು ಹಾಗೂ ಕರ್ಮವನ್ನು ಹೆಮ್ಮೆಯೊಂದಿಗೆ ಜೋಡಿಸುವುದೇ ಆಗಬೇಕಿದೆ.

ಭಾರತ ಜೋಡೊ ಸಂಕಲ್ಪವು ದೇಶದ ರಾಜಕೀಯ ವ್ಯವಸ್ಥೆಯನ್ನು ಮುಟ್ಟದೇ ಇರಲು ಸಾಧ್ಯವಿಲ್ಲ. ಈ ಯಾತ್ರೆಯ ಸಫಲತೆ ರಾಜಕೀಯ ಪಕ್ಷಗಳು ಹಾಗೂ ಜನಾಂದೋಲನಗಳನ್ನು ಜೋಡಿಸುವುದರ ಮೇಲೆ ಅವಲಂಬಿತವಾಗಿದೆ. ಆದರೆ, ಇದಕ್ಕೆ ನಮ್ಮ ಗಣರಾಜ್ಯದಲ್ಲಿ ಕೆಲವು ಮೂಲಭೂತವಾದ ಜೋಡಣೆಯನ್ನೂ ಮಾಡಬೇಕಾಗುತ್ತದೆ. ಭಾರತದ ಸ್ವಾತಂತ್ರದ ನಂತರದಿಂದ ನಮ್ಮ ಲೋಕತಂತ್ರ (ಪ್ರಜಾಪ್ರಭುತ್ವ) ಯಾವಾಗಲೂ ಬಗ್ಗಿ ನಿಂತಿದೆ, ಲೋಕದ (ಪ್ರಜೆಗಳ) ಮೇಲೆ ತಂತ್ರ (ಪ್ರಭುತ್ವ) ಯಾವಾಗಲೂ ಮೇಲುಗೈ ಸಾಧಿಸಿದೆ. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಲೋಕ (ಪ್ರಜೆ) ಎಂಬುದೇ ಕಣ್ಮರೆಯಾಗುತ್ತಿದೆ, ಅಥವಾ ಅದು ಒಂದು ಗುಂಪಾಗಿ ಬದಲಾಗುತ್ತಿದೆ ಎನ್ನಬಹುದು. ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳು ಕೇವಲ ಹಾಳೆಯ ತುಂಡಗಳಾಗಿ ಬದಲಾಗುತ್ತಿವೆ. ಸರಕಾರದ ವಿರುದ್ಧ ಧ್ವನಿ ಎತ್ತುವವರ ಸ್ಥಳ ಜೈಲು ಎಂದಾಗಿದೆ. ರಾಜಕೀಯ ವಿರೋಧಿಗಳನ್ನು ಬೆಂಬತ್ತಿ ಪೊಲೀಸ್ ವ್ಯವಸ್ಥೆಯ ಜೊತೆಗೆ ಈಗ ಸಿಬಿಐ, ಇಡಿ ಹಾಗೂ ಇನ್‌ಕಂ ಟ್ಯಾಕ್ಸ್ ಇಲಾಖೆ ಕೂಡ ಕೈಜೋಡಿಸಿವೆ. ಸಾಮಾನ್ಯ ವ್ಯಕ್ತಿಗಳನ್ನು ಬಿಟ್ಟುಬಿಡಿ, ಈಗ ಮುಖ್ಯಮಂತ್ರಿಗಳದ್ದೂ ಯಾವುದೇ ಸ್ಥಾನಮಾನ ಉಳಿದಿಲ್ಲ. ಯಾವ ರಾಜ್ಯದಲ್ಲಿ ಯಾರ ಸರಕಾರ ರಚಿಸಲಾಗುವುದು, ಯಾವುದು ಉಳಿಯುವುದು, ಯಾವುದು ಇಲ್ಲವಾಗುವುದು ಎಂಬುದರ ನಿರ್ಣಯ ದೆಹಲಿಯ ದರ್ಬಾರಿನಲ್ಲಿ ಆಗುತ್ತಿದೆ. ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಈಗ ನ್ಯಾಯಾಲಯದ ಬಾಗಿಲುಗಳೂ ಬಹುತೇಕ ಮುಚ್ಚಿವೆ. ಇಂತಹ ಪರಿಸ್ಥಿತಿಗಳಲ್ಲಿ ಭಾರತ ಜೋಡೊದ ಅರ್ಥ, ಲೋಕವನ್ನು ತಂತ್ರದೊಂದಿಗೆ ಜೋಡಿಸುವುದು ಹಾಗೂ ಗಣವನ್ನು ರಾಜ್ಯದೊಂದಿಗೆ ಜೋಡಿಸುವುದು ಆಗಲಿದೆ.

ಇಂದು ಭಾರತ ಜೋಡೊ ಯಾತ್ರೆಯ ಸಂಕಲ್ಪ ಒಂದೇ ಒಂದು ಆಗಲು ಸಾಧ್ಯ: ಅವರು ತುಂಡು ತುಂಡಾಗಿ ವಿಭಜಿಸುವರು, ನಾವು ಕಾಮನಬಿಲ್ಲು ಕಟ್ಟುವೆವು. ಈ ಆಂದೋಲನದ ಘೋಷಣೆ ಒಂದೇ ಒಂದು ಆಗಲು ಸಾಧ್ಯ: ಅವರು ಒಡೆಯುವರು, ನಾವು ಜೋಡಿಸುವೆವು. ಭಾರತದೊಂದಿಗೆ ಸುಂದರ ಭವಿಷ್ಯವನ್ನು ಜೋಡಿಸುವುದೇ ಭಾರತ ಜೋಡೊದ ಸಾರ್ಥಕ ಪರಿಣಾಮ ಆಗಬಹುದಾಗಿದೆ.

– ಯೋಗೇಂದ್ರ ಯಾದವ್

ಕನ್ನಡಕ್ಕೆ: ರಾಜಶೇಖರ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...